Monday, July 31, 2017

ಮಾತಿನ ಮೆರವಣಿಗೆ

ಮಾತಿನ ಮೆರವಣಿಗೆ

ಮುಗಿಯದ ಮಾತುಗಳಲಿ
ನವರಸಗಳ ಸಡಗರ
ಪ್ರೀತಿಯ ಪಾಳೆಗಾರಿಕೆ
ಕೋಟಿ ಶಬ್ದಗಳಲಿ ಹೇಳಿದರೂ
ಕೊನೆಗೊಳದ ಮಾತು-ಕಥೆ

ಸಾಪೇಕ್ಷ ಸಿದ್ಧಾಂತದ ಸಮಾಗಮ
ಸಮಯದ ಪರಿವೇ ಇಲ್ಲ

ಬರೀ ಅಲ್ಪ ವಿರಾಮದ ವಾಕ್ಯಗಳು
ಪೂರ್ಣವಿರಾಮ ಬೇಡವೆಂಬ
ವಾಕ್ಯಗಳ ಹಟಕೆ ಸೋತ ಮನಸು

ಎಷ್ಟು ಆಡಿದರೂ ಮುಗಿಯದ ಮಾತುಗಳ
ಸಂಗವೇ ಹೀಗೆ
ಹೊತ್ತಿಲ್ಲದ ಹೊತ್ತಲಿ ಬೆದೆಗೆ ಬರುವ
ಭಾವನೆಗಳು

ರಮಿಸಲು ಇನ್ನಿಲ್ಲದ ಹೆಣಗಾಟ
ಇಲ್ಲಿ ಸೋಲು-ಗೆಲುವುಗಳ ಹಮ್ಮಿಲ್ಲ
ವಾದ-ವಿವಾದಗಳ ಹಂಗಿಲ್ಲ

ಯಾರು ಗೆಲ್ಲುತ್ತಾರೆ ಯಾರು ಸೋಲುತ್ತಾರೆ
ಎನ್ನಲು ಬಯಲ ಪಂದ್ಯವಲ್ಲ
ಒಲವ ಒಳ ಒಪ್ಪಂದ

ಇದು ಮುಗಿಯುವ ಮಾತಲ್ಲ ಬಿಡು
ಶಬ್ದಗಳ ಹೆರಿಗೆಗೆ ಬೆದರಿದ ಸೂಲಗಿತ್ತಿ
ದೂರ ಹೋದಾಳು ಸಾಕು ಬಿಡು

ಕೊಡೋಣ ಒಂದು ಸಣ್ಣ ವಿರಾಮ
ಪೂರ್ಣ ವಿರಾಮದ ಗೊಡವೆ ಮರೆತು
ಸಾಗಿಯೇ ಇರಲಿ ಮಾತಿನ ಮೆರವಣಿಗೆ.

---ಸಿದ್ದು ಯಾಪಲಪರವಿ

Sunday, July 30, 2017

ಹೀಗೊಂದು ದೇಹಯಾತ್ರೆ

ಹೀಗೊಂದು ದೇಹಯಾತ್ರೆ

ಗಂಡು-ಹೆಣ್ಣು ಒಲುಮೆಯ
ಸರಸದ ಸವಿಸುಖವ ಮೀರುವ
ಸುಖ ಬೇರೊಂದಿಲ್ಲ

ಸಖಿ ನಿನ್ನೊಲವ ಧಾರೆಯಲಿ
ಧರೆಯ ಮರೆವ  ಹುಮ್ಮಸ್ಸು
ನಿನ್ನ ಬೆತ್ತಲೆಯ ಬೆಳಕಲಿ
ಕತ್ತಲಿನ ಹಂಗೇಕೆ

ಹಾವಿನ ಹಾಗೆ ಮೈಯಲ್ಲ ಸರ ಸರ ಹರಿದಾಡಿ ಒಮ್ಮೆಲೇ ಗಕ್ಕನೇ ನಿಂತು ಕರಡಿಯ ಹಾಗೆ ಜೋರಾಗಿ ಬಿಗಿದಪ್ಪಿ
ವಿಲಿ ವಿಲಿ ಒದ್ದಾಟದಲಿ ಇನ್ನಿಲ್ಲದ ಕಚಗುಳಿ

ಎಲ್ಲಂದರಲಿ ಕಚ್ಚಿ ನಾಲಿಗೆಯ ಶೃತಿ ಮೀಟಿದನುರಾಗದಲೆಯಲಿ
ತೇಲುವಾಸೆ

ಎದೆಯ ಕುಣಿತದ ಮೆತ್ತನೆಯ ಹಾಸಿಗೆಯಲಿ ಮೂಗು ತೂರಿಸಿ ಸೀಳುಗಳ ಸೀಳುವಾಸೆ

ಎದೆತೊಟ್ಟುಗಳ ಕೆಣಕಿ ಕಂಗಳಲಿ ಸೆರೆಹಿಡಿದು ನಾಲಿಗೆಯ ಅಳತೆಯಲಿ ಸವಿಯುವಾಸೆ

ತೋಳನೆತ್ತರಿಸಿ ಕಂಕುಳಲಿ ಜಿನುಗುವ ಸುಗಂಧವ ಮೂಸಿ ಉದ್ರೇಕದಲಿ ನರಳುವಾಸೆ

ದೇಹದಂಗುಲಂಗುಲಲಿ ಹರಡಿ ಹರಿಯುತಿರುವ ಬಿಸಿನೆತ್ತರ ಬಿಸಿಗೆ ಕರಗುವಾಸೆ

ಮೈತುಂಬ ಉಕ್ಕಿ ಹರಿಯುವ ಚೈತನ್ಯ
ಎಲ್ಲಂದರಲಿ ಚಿಮ್ಮತಿದೆ ನವಚೈತನ್ಯ  ಕೈತುಂಬಾ  ಕೆಲಸ , ಬಾಯಿಗಿಲ್ಲ ಬಿಡುವು ಕಣ್ಣಿಗೂ ಸಡಗರದ ಸೊಬಗು

ಅಬ್ಬಾ ಸಾಕಪ್ಪ ಸಾಕು ಏನ ನೋಡಲಿ , ಏನ ಹಿಡಿಯಲಿ , ಏನ ಮಾಡಲಿ ಎನ್ನುತ ಹರಿದಾಡಿ ಸೀಳಿ ಒಳನುಸುಳುವ ರಭಸದಲಿ
ಮುಗಿಲು ಮುಟ್ಟಿದ ಚೀತ್ಕಾರ ಮುಲುಕಾಟ-ನರಳಾಟ

ಏರಿತದ ಲಯಕೆ ಭೈರವಿ ರಾಗ
ಮುಗಿಯದ ಹಾಡಿನ
ಕೊನೆಯ ಚರಣ ಕರಗಿ ನೀರಾಗುವ
ಸವಿಸಮಯ

ಒಲವಿನ ವಚನ

ಒಲವಿನ ವಚನ

ಸಂಶಯದ ಸುಳಿಯಲಿ ನೋವಿನ
ಬೇಗುದಿಯಲಿ ಬೆಂದ ಜೀವ ನೀ

ಏಕಾಂತದ ಅಳಲು ಕೇಳಿದ ದೇವ
ನಿನಗಾಗಿ ಕಳಿಸಿದ ಧೂತ ನಾ

ಕಂಗಳ ಬೆಳಕಾಗಿ ಕಣ್ಣೀರ
ಅಳಿಸುವ ಅರಸ

ಸಿರಿವಂತ ಮುಖವಾಡದ ಬಡವನ
ಒಡಲಾಗ್ನಿಯಲಿ ಬೆಂದ ಸಹನಶೀಲೆ

ನುಂಗಿದ ನೋವ ಕಕ್ಕಿ ಬಿಡು
ವಿಷವಾಗಿ ಕರಳು ಕತ್ತರಿಸುವ ಮುನ್ನ

ಪ್ರೀತಿಯೇ ನನ್ನ ಉಸಿರು ಪ್ರೇಮವೇ
ನನ್ನ ಕಡಲು ನಂಬಿಕೆಯ ನಂ
ಬಿಗಿಯಲಿ ದಡ ಸೇರೋಣ

ಅನುಮಾನಿಸುವ ಮಾತ
ಮರೆತಬಿಡು ಪುಟವಿಟ್ಟ ಚಿನ್ನದಲಿ
ಕೆತ್ತಿದ ಬೆಳದಿಂಗಳ ಬೊಗಸೆ
ಕಂಗಳ ದೇವತೆ ನೀ

ಅಳುವದ ಮರೆತು ಮೆರೆ
ಮಹಾರಾಣಿಯ ಹಾಗೆ ನನ್ನ
ಹೃದಯ ಸಿಂಹಾಸನದಿ

ಪೂಜಿಸುವೆ ಆರಾಧಿಸುವೆ ಎದೆಯ
ಒಳಗೆ ಯಾರೂ
ನೋಡದೇ ಕದಿಯದಂತೆ

ಭಾವನೆಗಳ ಅರಮನೆಯಲಿ
ಬಡತನದ ಹಂಗಿಲ್ಲ
ಸಂಶಯದ ನಂಜಿಲ್ಲ.

ನಂಬಿ ಕೆಟ್ಟವರಿಲ್ಲ ನಂಬದಿರೆ
ನೆಮ್ಮದಿಯಿಲ್ಲ ನಂಬಿ ನಂಬುಗೆಯ
ಪಥದ ಮೇಲೆ ಹೊಸ ಪಯಣ
ಹೂಡೋಣ

ಇನ್ನೇನು ದಾರಿ ದೂರ ಸಾಗಿದೆ
ಉಳಿದ ನಾಲ್ಕು ಮಾರು ದಾರಿ
ಖುಷಿಯಿಂದ ಖುಷಿಗಾಗಿ ಸಾಗೋಣ
ನಸುನಗುತ ನೋವ ನುಂಗಿ

ಸವಿಯ ಸಮಪಾಲು ಒಲವ
ಸಮಭೋಗದ ಸಂಭ್ರಮದಲಿ
ಪಾಲುದಾರರಾಗಿ ಜೀವಯಾತ್ರೆಯ
ಜೀಕುತಲಿರೋಣ 

ಉಸಿರು ಉಸಿರಲಿ ಅಳಿಯದ
ಹೊಸ ಅನುಬಂಧದ
ಹೆಸರ ಹಸಿರಾಗಿಸೋಣ.

---ಸಿದ್ದು ಯಾಪಲಪರವಿ

ಹೂಮನೆ-ನಾನು-ಭಾವುಕತೆ

ಹೂಮನೆ-ನಾನು-ಭಾವುಕತೆ

ಬಯಲುಸಿಮೆಯ ಅಮಾಯಕ , ಅಸೂಕ್ಷ್ಮ ಪೆದ್ದು ಹುಡುಗ ಬಾಗಿಲು ತಟ್ಟಿದ್ದು ಮಹಾ ಮೇಧಾವಿಗಳ ಮನೆ ಬಾಗಿಲು  ಎಂದು ಗೊತ್ತಿಲ್ಲ.
ತುಂಬಾ ಕಷ್ಟಪಟ್ಟು ಹತ್ತನೇ ಕ್ಲಾಸ್ ಪಾಸಾಗಿ ಧಾರವಾಡ ಸೇರುವುದು ಎಂಬತ್ತರ ದಶಕದಲ್ಲಿ ಸಣ್ಣ ಸಂಗತಿಯಲ್ಲ.
ಹೊರಗೆ ಜಿಟಿ , ಜಿಟಿ ಮಳೆ ಸಂಜೆಗತ್ತಲು. ವಿದ್ಯಾಗಿರಿಯ ಶ್ರೀದೇವಿ ನಗರದ ಒಂಟಿ ಮನೆ ' ಹೂಮನೆ ' ಬಾಗಿಲು ಬಡಿದೆ. ಕೆಂಪು ದಿರುಸಿನ ಸಂತರು ಬಾಗಿಲು ತೆರೆದು ' ಬರ್ರಿ ' ಎಂದು  ಹಿರಿಯರೊಬ್ಬರು ಸಣ್ಣ ಹುಡುಗನಿಗೆ ಬಹುವಚನದಲಿ ಕರೆದದ್ದು ,  ಊ ಹೂಂ ಖಂಡಿತ ಅನಿರೀಕ್ಷಿತ !

ಮುದುಡಿಕೊಂಡು ಬಂದ ಕೆಲಸ ಹೇಳಿದೆ. ಸಕಾರಾತ್ಮಕವಾಗಿ ಸ್ಪಂದಿಸಿ ಅಲ್ಲೇ ಉಳಿಯಲು ಹೇಳಿದಾಗ ಮೌನವಾಗಿ ತಲೆಯಾಡಿಸಿದೆ.

ಮರುದಿನ ಧಾರವಾಡದ ಅತ್ಯಂತ ಪ್ರತಿಷ್ಠಿತ ಕರ್ನಾಟಕ ಕಾಲೇಜಿನಲ್ಲಿ ಪಿಯುಸಿ ಪ್ರವೇಶ. ಮುಂದಿನದು ಈಗ ಇತಿಹಾಸ.

ನಾನು ಹೇಳುವ ಘಟನೆಗೆ ಈಗ 36 ವರ್ಷ.
ಆ ಅಮಾಯಕ ನಾನೇ , ಆ ಮೇಧಾವಿಗಳೇ ಖ್ಯಾತ ಕವಿ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು.
ನಂತರ ಪ್ರತಿ ಹಂತದಲ್ಲಿ ಹೂಮನೆ ನನ್ನ ಪಾಲಿನ ಸಾಂಸ್ಕೃತಿಕ ಗರಡಿ ಮನೆಯಾಯಿತು.

ಹಂತ ಹಂತವಾಗಿ ಪ್ರತಿದಿನ ಅತ್ಯಂತ ಸಹನೆಯಿಂದ ನನ್ನ ಅಮಾಯಕ ಅಜ್ಞಾನ ಸಹಿಸಿಕೊಂಡು ನನ್ನನ್ನು ತಿದ್ದಿ ಬೆಳೆಸಿದರು.

ಹೇಮಾ ಅಂಟಿಯವರ ಬೌದ್ಧಿಕ ರಭಸಕೆ ಹೆದರಿ ಮುದ್ದೆಯಾದಾಗ ಸರ್ ನನ್ನನ್ನು ಸಮಾಧಾನಿಸಿ ಧೈರ್ಯ ತುಂಬುತ್ತಿದ್ದರು .

ಅವರ ಮೇಧಾವಿತನದ ಮುಂದೆ ಕುಬ್ಜನಾಗಿ ಕುಗ್ಗುತ್ತಲೇ ವ್ಯಕ್ತಿತ್ವ ರೂಪಿಸಿಕೊಂಡೇ  ತುಂಬಾ ಪ್ರಯಾಸದಿಂದ.
ಶ್ರೇಷ್ಠ , ಕ್ರಿಯಾಶೀಲ ಬರಹಗಾರರು ಇಷ್ಟೊಂದು ಭಾವುಕರು , ಸೂಕ್ಷ್ಮ ಜೀವಿಗಳಾಗಿರುತ್ತಾರೆ ಎಂದು ಕನಸಿನಲಿಯೂ ಊಹಿಸಿರಲಿಲ್ಲ.

ಪಟ್ಟಣಶೆಟ್ಟರು ವೈಯಕ್ತಿಕವಾಗಿ ವಿಪರೀತ ಭಾವುಕರು , ಅವರಷ್ಟು ಭಾವ ಜೀವಿಗಳನ್ನು ಇಲ್ಲಿಯವರೆಗೆ ನಾನು ನೋಡಲೇ ಇಲ್ಲ.

ಪ್ರತಿಯೊಂದು ಸಣ್ಣ ಸಂಗತಿಗಳನ್ನು ತುಂಬಾ keen ಆಗಿ ಅವಲೋಕಿಸುತ್ತಿದ್ದರು.
ಅವ್ವ ಅವರ ಭಾವನಾ ಲೋಕದ ದೇವರು.
ಮಗಳು ಹೂ , ಅವರ ಪ್ರೀತಿಯ ನಾಯಿ ಅಲ್ಲಲ್ಲ ಬೆಳ್ಳಿ , ಬಳಸುವ ಕಾಗದ , ಪೆನ್ನು ,  ಕರವಸ್ತ್ರ ಯಾವುದರಲ್ಲೂ ಹೆಚ್ಚು ಕಮ್ಮಿ ಆಗಬಾರದು.
ಅವರ ಪ್ರತಿ ಚಲನವಲನಗಳು , ಆಲೋಚನಾ ಲಹರಿ ಎಲ್ಲವನ್ನೂ ತುಂಬಾ ಸೂಕ್ಷ್ಮವಾಗಿ ಗಮನಿಸುತ್ತ ನಾನೂ ಬದಲಾಗಿ ವಿಪರೀತ ಭಾವುಕನಾಗಿ ಸಾಹಿತ್ಯ , ಭಾಷೆಯ ಮಹತ್ವ ಅರಿತುಕೊಂಡೆ.

ಹೂಮನೆ ಅಂದರೆ ಭಾಷೆ-ಭಾವನೆಗಳದೇ ಕಾರುಬಾರು.
ತುಂಬಾ ಹೆಸರು ಮಾಡಿದ ಸಾಹಿತಿಗಳೇ ದಂಡೇ ಅಲ್ಲಿರುತ್ತಿತ್ತು. ಅವರ ಸೇವೆ ಮಾಡುತ್ತ ಸಾಹಿತ್ಯದ ಸೂಕ್ಷ್ಮತೆಗಳನ್ನು ಪರೋಕ್ಷವಾಗಿ ಕೇಳಿಸಿಕೊಂಡು ಅರ್ಥಮಾಡಿಕೊಂಡೆ. ಯಾವುದೇ ಸಂಗತಿಗಳನ್ನು ನೇರವಾಗಿ ಕೇಳುವ ಧೈರ್ಯ ಮಾಡುತ್ತಿರಲಿಲ್ಲ.
ನಾನು ತುಂಬ ಬೆರಗಿನಿಂದ ಊಹಿಸುತ್ತಿದ್ದ ಶ್ರೇಷ್ಠ ಬರಹಗಾರರನ್ನು ಹತ್ತಿರದಿಂದ ನೋಡಿ ಮಾತನಾಡುವ ಅವಕಾಶ ಪಿಯುಸಿ ಹಂತದಲ್ಲಿ ನನಗೆ ಲಭಿಸಿದ್ದು ಹೂಮನೆಯ ಅಂಗಳದಲಿ.

ಎಂ.ಪಿ.ಪ್ರಕಾಶ , ನಜೀರ್ ಸಾಬ್ , ಗಿರೀಶ ಕಾರ್ನಾಡ ಹಾಗೂ ಬೆಂಗಳೂರಿನ ಅಸಂಖ್ಯರು ನನ್ನನ್ನು ಗುರುತಿಸಲಾರಂಭಿಸಿದ್ದು ಇಲ್ಲಿಂದಲೇ .

ಹೂಮನೆ ನನ್ನ ಪಾಲಿನ ವರವಾಯಿತು. ಸರ್ ವಿಷಯವಾಗಿ ನಾನೂ ಅಷ್ಟೇ ಎಚ್ಚರಿಕೆವಹಿಸುತ್ತಿದ್ದೆ. ಎಲ್ಲಿಯೂ ಲೋಪವಾಗದ ಹಾಗೆ ನಡೆದುಕೊಂಡೆ.
ಅವರು ಕಟು ವಿಮರ್ಶೆಗೆ ಹೆಸರುವಾಸಿ , ಕಾವ್ಯವನ್ನು ಸಾರ್ವತ್ರಿಕರಿಸುವ ಬಗೆಯನ್ನು ಅದ್ವೀತಿಯವಾಗಿ ವಿವರಿಸುತ್ತಿದ್ದರು. ವೈಯಕ್ತಿಕ ಅನುಭವಗಳನ್ನು ಸಾರ್ವತ್ರಿಕರಿಸುವ ವಿಧಾನ ಅನನ್ಯ ಅವರ ಅನನ್ಯ ಪ್ರಕಾಶನದ ಹಾಗೆ !
ಭಾವನಾತ್ಮಕ ಸಂಗತಿಗಳನ್ನು ವಿವರಿಸುವಾಗ ಮಗುವಿನ ಹಾಗೆ ಅತ್ತು ನಮ್ಮನ್ನು ಗಾಭರಿಗೊಳಿಸುತ್ತಿದ್ದರು. ನಾಲ್ಕೈದು ವರ್ಷ ಅವರೊಂದಿಗೆ ಅನ್ಯೋನ್ನವಾಗಿ ಇದ್ದು ಪ್ರಾಣ ಕಳೆದುಕೊಂಡ ನಾಯಿಯ ಅಂತ್ಯಕ್ರಿಯೆಯನ್ನು ತಮ್ಮ ಕಂಪೌಂಡಿನಲ್ಲಿ ನೆರವೇರಿಸಿದ್ದರು. ಎಂದಿಗೂ ಯಾರನ್ನೂ ನೋಯಿಸದ ಮಾನವೀಯ ಅಂತಃಕರಣ ಅವರದು.

  ಅವರು ಪ್ರೀತಿಯಿಂದ ಸಾಕಿದ ಬೆಳ್ಳಿ ಕಳೆದು ಹೋದಾಗ ಮಗು ಕಳೆದುಕೊಂಡ ತಾಯಿಯ ಹಾಗೆ ಊರೆಲ್ಲ ಹುಡುಕಿ ಸಿಗದೇ ಹೋದಾಗ ದುಃಖಿಸಿ ಮಗುವಿನ ಹಾಗೆ ಅತ್ತಿದ್ದು , ಅನೇಕರ ಮುಂದೆ ಬೆಳ್ಳಿ ಕಳೆದ ಕಥೆ ವಿವರಿಸುತ್ತಲೇ ಇದ್ದರು.

ನವಿರು ಹಾಸ್ಯ , ವ್ಯಂಗ್ಯ , ವಿಡಂಬನೆಯ ಮೂಲಕ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವ ಅವರ ಶೈಲಿ...
ಒಂದೇ ಎರಡೇ ಹೂಮನೆಯ ಸುವಾಸನೆಯ ಸವಿಗಾನ.

ಇಂದು ಸಂಜೆ ತುಂಬಾ ದಿನಗಳ ನಂತರ ಹೂಮನೆಗೆ ಹೋದಾಗ ಮತ್ತೊಂದು ಸಣ್ಣ ಆಘಾತ.
ಹನ್ನೊಂದು ವರ್ಷ ಸರ್ ಅವರ ಸಂಗಾತಿಯಾಗಿದ್ದ ಬೆಳ್ಳಿ ತೀರಿಕೊಂಡು ಮೂರು ದಿನ .
ಅದೇ ಸೂತಕದ ಮಾನವೀಯ ಮಿಡಿತ-ತುಡಿತ.
ಎಪ್ಪತ್ತೆಂಟರ ಪ್ರಾಯದ ಸರ್ ಮಗುವನ್ನು ಕಳೆದುಕೊಂಡ ಅವ್ವನ ಹಾಗೆ ಬೇಸರಲಿದ್ದರು.
  ತಾಯಿಯ ಹಾಗೆ ಬೆಳ್ಳಿಯ ಗುಣಗಾನ. ಕಂಪೌಂಡಿನಲ್ಲಿ ಚಿರನಿದ್ರೆಗೆ ಜಾರಿದ ಬೆಳ್ಳಿಯನ್ನು ನೆನಪಿಸಿಕೊಂಡೆ.
ಹೂಮನೆ ಎಂದರೆ ಭಾಷೆ-ಭಾವನೆ-ಭಾವುಕತೆ.
ಭಾರದ ಮನಸಿನಿಂದ ಹೊರ ಬಂದು ಮನೆ ಸೇರಿ ಮೂರು ದಶಕಗಳ ಹಿಂದೆ ಜಾರಿ ಹೋದೆ ನಾನೂ ಮಗುವಾಗಿ ಬೆಚ್ಚಗೆ ಮಲಗಿದೆ.

---ಸಿದ್ದು ಯಾಪಲಪರವಿ

Saturday, July 29, 2017

ಹೀಗೊಂದು ದೇಹಯಾತ್ರೆ

ಹೀಗೊಂದು ದೇಹಯಾತ್ರೆ

ಗಂಡು-ಹೆಣ್ಣು ಒಲುಮೆಯ
ಸರಸದ ಸವಿಸುಖವ ಮೀರುವ
ಸುಖ ಬೇರೊಂದಿಲ್ಲ

ಸಖಿ ನಿನ್ನೊಲವ ಧಾರೆಯಲಿ
ಧರೆಯ ಮರೆವ  ಹುಮ್ಮಸ್ಸು
ನಿನ್ನ ಬೆತ್ತಲೆಯ ಬೆಳಕಲಿ
ಕತ್ತಲಿನ ಹಂಗೇಕೆ

ಹಾವಿನ ಹಾಗೆ ಮೈಯಲ್ಲ ಸರ ಸರ ಹರಿದಾಡಿ ಒಮ್ಮೆಲೇ ಗಕ್ಕನೇ ನಿಂತು ಕರಡಿಯ ಹಾಗೆ ಜೋರಾಗಿ ಬಿಗಿದಪ್ಪಿ
ವಿಲಿ ವಿಲಿ ಒದ್ದಾಟದಲಿ ಇನ್ನಿಲ್ಲದ ಕಚಗುಳಿ

ಎಲ್ಲಂದರಲಿ ಕಚ್ಚಿ ನಾಲಿಗೆಯ ಶೃತಿ ಮೀಟಿದನುರಾಗದಲೆಯಲಿ
ತೇಲುವಾಸೆ

ಎದೆಯ ಕುಣಿತದ ಮೆತ್ತನೆಯ ಹಾಸಿಗೆಯಲಿ ಮೂಗು ತೂರಿಸಿ ಸೀಳುಗಳ ಸೀಳುವಾಸೆ

ಎದೆತೊಟ್ಟುಗಳ ಕೆಣಕಿ ಕಂಗಳಲಿ ಸೆರೆಹಿಡಿದು ನಾಲಿಗೆಯ ಅಳತೆಯಲಿ ಸವಿಯುವಾಸೆ

ತೋಳನೆತ್ತರಿಸಿ ಕಂಕುಳಲಿ ಜಿನುಗುವ ಸುಗಂಧವ ಮೂಸಿ ಉದ್ರೇಕದಲಿ ನರಳುವಾಸೆ

ದೇಹದಂಗುಲಂಗುಲಲಿ ಹರಡಿ ಹರಿಯುತಿರುವ ಬಿಸಿನೆತ್ತರ ಬಿಸಿಗೆ ಕರಗುವಾಸೆ

ಮೈತುಂಬ ಉಕ್ಕಿ ಹರಿಯುವ ಚೈತನ್ಯ
ಎಲ್ಲಂದರಲಿ ಚಿಮ್ಮತಿದೆ ನವಚೈತನ್ಯ  ಕೈತುಂಬಾ  ಕೆಲಸ , ಬಾಯಿಗಿಲ್ಲ ಬಿಡುವು ಕಣ್ಣಿಗೂ ಸಡಗರದ ಸೊಬಗು

ಅಬ್ಬಾ ಸಾಕಪ್ಪ ಸಾಕು ಏನ ನೋಡಲಿ , ಏನ ಹಿಡಿಯಲಿ , ಏನ ಮಾಡಲಿ ಎನ್ನುತ ಹರಿದಾಡಿ ಸೀಳಿ ಒಳನುಸುಳುವ ರಭಸದಲಿ
ಮುಗಿಲು ಮುಟ್ಟಿದ ಚೀತ್ಕಾರ ಮುಲುಕಾಟ-ನರಳಾಟ

ಏರಿತದ ಲಯಕೆ ಭೈರವಿ ರಾಗ
ಮುಗಿಯದ ಹಾಡಿನ
ಕೊನೆಯ ಚರಣ ಕರಗಿ ನೀರಾಗುವ
ಸವಿಸಮಯ

ಒಲವಿನ ವಚನ

ಒಲವಿನ ವಚನ

ಸಂಶಯದ ಸುಳಿಯಲಿ ನೋವಿನ
ಬೇಗುದಿಯಲಿ ಬೆಂದ ಜೀವ ನೀ

ಏಕಾಂತದ ಅಳಲು ಕೇಳಿದ ದೇವ
ನಿನಗಾಗಿ ಕಳಿಸಿದ ಧೂತ ನಾ

ಕಂಗಳ ಬೆಳಕಾಗಿ ಕಣ್ಣೀರ
ಅಳಿಸುವ ಅರಸ

ಸಿರಿವಂತ ಮುಖವಾಡದ ಬಡವನ
ಒಡಲಾಗ್ನಿಯಲಿ ಬೆಂದ ಸಹನಶೀಲೆ

ನುಂಗಿದ ನೋವ ಕಕ್ಕಿ ಬಿಡು
ವಿಷವಾಗಿ ಕರಳು ಕತ್ತರಿಸುವ ಮುನ್ನ

ಪ್ರೀತಿಯೇ ನನ್ನ ಉಸಿರು ಪ್ರೇಮವೇ
ನನ್ನ ಕಡಲು ನಂಬಿಕೆಯ ನಂ
ಬಿಗಿಯಲಿ ದಡ ಸೇರೋಣ

ಅನುಮಾನಿಸುವ ಮಾತ
ಮರೆತಬಿಡು ಪುಟವಿಟ್ಟ ಚಿನ್ನದಲಿ
ಕೆತ್ತಿದ ಬೆಳದಿಂಗಳ ಬೊಗಸೆ
ಕಂಗಳ ದೇವತೆ ನೀ

ಅಳುವದ ಮರೆತು ಮೆರೆ
ಮಹಾರಾಣಿಯ ಹಾಗೆ ನನ್ನ
ಹೃದಯ ಸಿಂಹಾಸನದಿ

ಪೂಜಿಸುವೆ ಆರಾಧಿಸುವೆ ಎದೆಯ
ಒಳಗೆ ಯಾರೂ
ನೋಡದೇ ಕದಿಯದಂತೆ

ಭಾವನೆಗಳ ಅರಮನೆಯಲಿ
ಬಡತನದ ಹಂಗಿಲ್ಲ
ಸಂಶಯದ ನಂಜಿಲ್ಲ.

ನಂಬಿ ಕೆಟ್ಟವರಿಲ್ಲ ನಂಬದಿರೆ
ನೆಮ್ಮದಿಯಿಲ್ಲ ನಂಬಿ ನಂಬುಗೆಯ
ಪಥದ ಮೇಲೆ ಹೊಸ ಪಯಣ
ಹೂಡೋಣ

ಇನ್ನೇನು ದಾರಿ ದೂರ ಸಾಗಿದೆ
ಉಳಿದ ನಾಲ್ಕು ಮಾರು ದಾರಿ
ಖುಷಿಯಿಂದ ಖುಷಿಗಾಗಿ ಸಾಗೋಣ
ನಸುನಗುತ ನೋವ ನುಂಗಿ

ಸವಿಯ ಸಮಪಾಲು ಒಲವ
ಸಮಭೋಗದ ಸಂಭ್ರಮದಲಿ
ಪಾಲುದಾರರಾಗಿ ಜೀವಯಾತ್ರೆಯ
ಜೀಕುತಲಿರೋಣ 

ಉಸಿರು ಉಸಿರಲಿ ಅಳಿಯದ
ಹೊಸ ಅನುಬಂಧದ
ಹೆಸರ ಹಸಿರಾಗಿಸೋಣ.

---ಸಿದ್ದು ಯಾಪಲಪರವಿ

Friday, July 28, 2017

ಕಾಯುವಿಕೆ-waiting=ಇಂತಜಾರ

ಕಾಯುವಿಕೆ-Waiting=ಇಂತಜಾರ

''Waiting for you , ತುಂಬಾ ಕಾಯ್ದೆ , ಇಂತಜಾರ ಮೇರೆ ಯಾರಕಿ '
ಈ ತರಹದ ಮಾತುಗಳು ಎಂತಹ ಅರಸಿಕರ ಬದುಕಿನಲ್ಲಿಯೂ ಬಂದು ಹೋಗುತ್ತವೆ. ನಾವು ನಮ್ಮ ಬದುಕಿನಲ್ಲಿ ಹಲವಾರು ಸಂದರ್ಭಗಳಲ್ಲಿ , ಹಲವರಿಗಾಗಿ , ಹಲವು ಕಾರಣಕ್ಕಾಗಿ ತುಂಬಾ ತೀವ್ರವಾಗಿ ಕಾದಿದ್ದೇವೆ , ಕಾಯುತ್ತೇವೆ ಹಾಗೆ ಮುಂದೆಯೂ ಕಾಯುತ್ತಲಿರುತ್ತೇವೆ.

ಪ್ರೀತಿಯ ಜಾಗಕ್ಕೆ ಹೋಗುವಾಗ ದಾರಿ ಸಾಗುವುದೇ ಇಲ್ಲ , ಬರಬೇಕಾದ ಊರಿಗೆ ಕಾಯುತ್ತೇವೆ. ತುಂಬಾ ಪ್ರೀತಿಸುವ ವ್ಯಕ್ತಿಗಳು ಬರುತ್ತಾರೆ ಎಂದಾಗ ಮತ್ತೆ ಮತ್ತೆ ಸಮಯ ನೋಡಿಕೊಂಡು ಅಸಹನೆಯಿಂದ ಕಾಯುತ್ತೇವೆ.

ಕಾಯುವು ದು ಸಣ್ಣ ಸಂಗತಿಯಲ್ಲ ಅದೊಂದು ಯಮಯಾತನೆ.

ನಿರ್ಭಾವುಕ , ವ್ಯವಹಾರಿಕ ವ್ಯಕ್ತಿಗಳು ಸಾಲ ಕೊಡುವ ಸಮಯ ಬಂದಾಗ ಇನ್ನಿಲ್ಲದಂತೆ ಕಾಯ್ದು ಜೀವ ಹಿಂಡಿ ಶಪಿಸುತ್ತಾರೆ.

ಇನ್ನೂ ಭಾವುಕರು ಈ ಸಾಲಗಾರರಿಗಿಂತಲೂ ಹೆಚ್ಚು ಅಪಾಯಕಾರಿ.

ತುಂಬ ಕಾಯಿಸಿದರೆ ತಮ್ಮೊಳಗೆ ಹೇಳಲಾಗದ possessiveness ನಿಂದ ಕಾಯ್ದು ಕಾಯ್ದು ಸುಸ್ತಾಗುತ್ತಾರೆ.
ರಾಮನಿಗಾಗಿ ಕಾಯ್ದ ಶಬರಿಯ ಹಾಗೆ . ಆಕೆ  ನಮಗೆಲ್ಲ ಮಾದರಿ.

ಹಿಂದಿನ ಪ್ರೇಮಿಗಳ ಕಾಯುವಿಕೆ ಹೇಳಲಸಾಧ್ಯ .
ಆದರೆ ಆಧುನಿಕ ಪ್ರೇಮಿಗಳಿಗೆ ಇದೆಲ್ಲ ತಮಾಷೆ ಎನಿಸಬಹುದು , ಈ ultra modern ಯುಗದಲ್ಲಿ ಭಾವುಕ ಪ್ರೀತಿಯೂ ಮಂಗಮಾಯ.ಈಗ ಅಂಗೈಯಲಿರುವ ಸೆಲ್ ನಮ್ಮನ್ನು ಬಂಧಿಯಾಗಲು ಬಿಡುವುದಿಲ್ಲ.

ಆ ಕಾಲದಲ್ಲಿ ಕೈಯಲಿದ್ದ ಪುಸ್ತಕದ ಹಾಗೆ !

ಈ ಕಾಯುವಿಕೆ ನಿರಂತರ . ಯೌವನದಲ್ಲಿ ಪ್ರೇಮಿಗೆ , ನಂತರ ಮಕ್ಕಳು-ಮೊಮ್ಮಕ್ಕಳು ಹೀಗೆ ಕಾಲಕ್ಕೆ ತಕ್ಕಂತೆ ಕಾಯುವ ಕರ್ಮ ಮನುಷ್ಯನನ್ನು ಸಾಯುವವರೆಗೆ ಬೆಂಬಿಡದ ಮಹಾ ಮಾಯೆ.

ನನಗೂ ಈ ಕಾಯುವಿಕೆ-waiting=ಇಂತಜಾರ ಇಂದಿಗೂ ಕಾಡುವ ಪರಮಾನಂದ. ಭಾವುಕ ಲೋಕದಲಿ  ಮನಸೋ ಇಚ್ಛಾ ಕಾಯುತ್ತಲೇ ಇರುತ್ತೇನೆ. ಒಮ್ಮೊಮ್ಮೆ ನನಗೇ ಅರ್ಥವಾಗದ ಹಾಗೆ ಕಾಯ್ದು , ದುಃಖಿಸಿ ಸಮಾಧಾನ ಮಾಡಿಕೊಳ್ಳುತ್ತೇನೆ ಆದರೆ ಯಾರಿಗೂ ನಿಮಗಾಗಿ ಕಾಯ್ದೆ ಎಂದು ಹೇಳುವುದನ್ನು ಬಿಟ್ಟಿದ್ದೇನೆ.

ಹಾಗೆ ನನ್ನನ್ನು ಕಾಯಿಸುವವರು ತಮ್ಮ ತಪ್ಪನ್ನು ತಿದ್ದಿಕೊಳ್ಳದಿದ್ದರೆ ಅದಕ್ಕೂ ನಾನೇ ಹೊಣೆಗಾರ.
ಅದಕ್ಕೆ ಕಾರಣವಿಲ್ಲದೆ ಕಾಯುತ್ತೇನೆ ಅರೆಹುಚ್ಚನ ಹಾಗೆ , ಯಾರಿಗೂ ಹೇಳದ ಹಾಗೆ !

ನಾನು ಊರಿಗೆ ಬರುತ್ತೇನೆ ಎಂದು ಗೊತ್ತಾದ ಕೂಡಲೇ ಅವ್ವ ಮನೆಯ ಮುಂದೆ ಕಾಯುತ್ತ ಕೂಡುತ್ತಿದ್ದ ದೃಶ್ಯ ಮೊನ್ನೆ ಊರಿಗೆ ಹೋದಾಗ ನೆನಪಾಯಿತು. ಮನೆಯ ಮುಂದೆ ನನಗಾಗಿ ಯಾರೂ ಕಾಯುವವರೇ ಇಲ್ಲವಲ್ಲ ಎಂಬ ನಿಟ್ಟುಸಿರು !

'I'm waiting for you ❤️' ಎಂಬ ಎಲ್ಲರ ಪ್ರೀತಿಯಕರೆಗೆ ಕಾಯಿಸದೇ ಮೊದಲೇ ಓಡಿ ಹೋಗುತ್ತೇನೆ.
ನನಗಾಗಿ ಬೇರೆಯವರು ಚಡಪಡಿಸುವದನ್ನು ಅನುಭೂತಿಯಿಂದ ಅನುಭವಿಸುತ್ತೇನೆ.
I don't disappoint others, even they disappoint me.
ನೀವು ಅಷ್ಟೇ ಕಾಯುವ ಹಿತಕಾರಿ ನೋವನ್ನು ಅನುಭವಿಸುತ್ತಾ ಇರುತ್ತೀರಿ ಅನಿಸಿ ಇಷ್ಟಲ್ಲಾ ಬರೆದೆ.
Thanks for your patient reading.

---ಸಿದ್ದು ಯಾಪಲಪರವಿ

Tuesday, July 25, 2017

ಅನುಬಂಧ

ಅನುಬಂಧ

ಈ ಬದುಕಿನಲ್ಲಿ ಎಲ್ಲವೂ
ಋಣಾನುಬಂಧ
ನೋಟ,ಮಾಟ,
ಕೂಟ,ಆಟ ಹೀಗೆ ಏನೆಲ್ಲಾ
ಆದರೆ ಎಲ್ಲವೂ ನಮ್ಮ ಕೈಯಲ್ಲಿ
ಇದೆ ಎಂಬಂತೆ
ಅನರ್ಥ ಪರಿತಪಿಸುತ್ತೇವೆ
ಅನಿರೀಕ್ಷಿತವಾಗಿ ಏನಾದರೂ
ನಡೆದಾಗ
ಅಂದುಕೊಂಡಂತೆ ಆಗದಿದ್ದಾಗ
ಅಯ್ಯೋ ಕೈ ತಪ್ಪಿತು ಎಂದು
ಕೊರಗುತ್ತೇವೆ.
ಬದುಕನ್ನು
ಬಂದಂತೆ ಎದುರಿಸಿ
ಅನುಭವಿಸಬೇಕು.

ಋಣಾನುಬಂಧದ ಬಂಧನದ
ಗಮ್ಮತ್ತು  ಗೊತ್ತಿದ್ದರೂ .....!

---ಸಿದ್ದು ಯಾಪಲಪರವಿ

ಕರುಳಬಂಧ

ಕರುಳಬಂಧ

ಕೂಗಳತೆಗೆ ಸಿಗದ ನಿನ್ನ
ಕಣ್ಣಳತೆಯಲಿ
ತೂಗುವುದಾದರೂ ಹೇಗೆ ?

ಮೊದಲ ನೋಟದ ಕೋಲ್ಮಿಂಚ
ಹೊಡೆತಕೆ ಮೂಡಿದ ಬೆರಗ
ಬೆಳಕಲಿ ಕರಗಿದೆ

ಅಪ್ರತಿಮ ಸೌಂದರ್ಯ
ಇರುವುದು ಬರೀ ದೇಹಸಿರಿಯಲಲ್ಲ
ಮಂಥನದ ಮಾತುಗಳಲಿ
ದೇವನೊಲುಮೆಯ ಅಕ್ಕರೆಯ
ಅಕ್ಷರಗಳ ಆಟದಲಿ
ಎಲ್ಲವೂ ಸರಸ್ವತಿಯ ಒಲುಮೆಯಾಟ

ಸಮಕಲ್ಪನೆ , ಸಮವಿಚಾರ , ಸಮರುಚಿ
ಸಮಗನಸು ನಮ್ಮೀ ಒಲುಮೆಗೆ ನಾಂದಿ

ಬಿಡಿಸಲಾಗದ , ಅಳಿಸಲಾಗದ
ಅನುಬಂಧವ ಅನುಗಾಲ ಒಡಲಲಿ
ಅಡಗಿಸಿ ಬಾಳಪಯಣದಿ ಸಾಗೋಣ

ಯಾರೂ ಅರಿಯದ , ಯಾರೂ ಕಾಣದ ,
ಯಾರೂ ಕಸಿಯದ ಈ ಕಸುವಿನ
ಕರುಳಬಳ್ಳಿಯ ಬಾನೆತ್ತರದಲಿ
ಹಬ್ಬಿಸಿ ಘಮಘಮಿಸೋಣ
ಕಳೆದು ಹೋದ ಹರೆ
ಮರಳಿ ಪಡೆಯೋಣ

---ಸಿದ್ದು ಯಾಪಲಪರವಿ

Monday, July 24, 2017

ಒಲವ ಸಿರಿ

ಒಲವಸಿರಿಯ ಹಂಗಿಲ್ಲದ ಅರಮನೆ

ದೇಹಗಳ ಮಿಲನವನು ತೀಟೆಯನಲಾಗದು
ಎಲ್ಲವನೂ ಮೀರಿದ ಭಾವಸ್ಪಂದನೆಯ
ಪರಮಸುಖದ ಸಾಧನ
ಈ ಕಾಮದೋಕುಳಿ ತೃಪ್ತಿಯಿಂದ
ಅನುಭವಿಸುವ ಕಲೆಗಾರಿಕೆ
ಇರದಿರೆ ಎಲ್ಲವೂ ಶೂನ್ಯ

ದೇವರು  ಪರಮಸುಖದ ಪರಿಮಳವ
ಗಂಡಿಗೆ ಹೆಣ್ಣಲಿ ಹೆಣ್ಣಿಗೆ ಗಂಡಲಿ ಬೆಸದು
ಹೊಸೆದಿರುವ ಪರಿಯ ಅರಿಯಲು
ಶಾಸ್ತ್ರಗಳ ಹಂಗಿಲ್ಲ

ಪ್ರತಿ ಅಂಗುಲದಿ ಅಡಿಯಿಂದ ಮುಡಿಯವರೆಗೆ , ಕಣಕಣದಲಿ ಇನ್ನಿಲ್ಲದ ಮೃದು ಲಾಸ್ಯ
ಕೈಕಾಲು , ಮೈಯಿಗೆ ಮೈ , ತುಟಿಗೆ ತುಟಿ , ಬೆರಳುಗಳ ಮೀಟುವಿಕೆ , ಬಿಸಿಯಪ್ಪುಗೆಯ ಹಿಡಿತ ,
ನಾಲಿಗೆಯ ಸಂಚಾರದ ಹರಿದಾಟ

ಇಡೀ ರಾತ್ರಿ ನಿಲ್ಲದ ಚಲ್ಲಾಟ ಎಲ್ಲೇ ಮೀಟಿದರೂ
ಹಿತಕಾರಿ ಮಿಡಿತ ನವಿರು ನರಳಾಟ ,
ಚೀರಾಟ ಮಿಲನದಾಟ ಮೇರೆ
ಮುಟ್ಟುವತನಕ

ತುಟಿಯಲಿ ಜೇನು ಹಂಚಲು ಹೀರಲು
ಮೃದು ಎದೆಲಯಗಳ ಹಿಡಿದು
ಹಾಲ ಹೀರುವ ತಲ್ಲಣಕೆ ನಿಮಿರುವ
ತೊಟ್ಟುಗಳ ತಂಟೆ ಹಾಗೆ ಮುಂದುವರೆಸಲು

ಮರ್ಧನದ ಮರ್ಮಕೆ ಇನ್ನಿಲ್ಲದ ಬೆಡಗು
ಸಾಕೆನಿಸದ ಹಿಚುಕಾಟ ನೋವಿನಲೂ
ನಲಿವ ಹಬ್ಬದೂಟ
ಪ್ರತಿ ಕ್ಷಣದಲಿಯೂ ನೂರ್ಮಡಿಸುವ
ಉನ್ಮಾದ ಅರಳುವ ಮೈ ಕೆರಳುವ

ಮನಸೆಂಬ ಕುದುರೆಗೆ ಇಲ್ಲದ ಲಂಗು
ಲಗಾಮು ಜಿಗಿದಾಟಕೂ ಕೊನೆಯೆಂಬುದಿಲ್ಲ

ಬದುಕಲಿ ದೇಹಸುಖದ ತಂಗುದಾಣ
ಉಡುಗೆ-ತೊಡುಗೆಗಳಿಗೂ ಮೀರಿದ
ಸಿರಿಸಂಪತ್ತು ಈ ಬೆತ್ತಲೆಯ ಕತ್ತಲಗೆ

ಏಕಾಂತದ ಈ ಮುಲುಕಾಟದಲಿ ಸಪ್ತಸ್ವರಗಳ
ತಾಳಕೆ ನಲಿದು ಕುಣಿಯುವ ರತಿ-ಮನ್ಮಥರ
ಲಯಗಾರಿಕೆ ದೇವನೊಬ್ಬನೇ ಮನಃಸಾಕ್ಷಿ
ಅಲ್ಲಿ ಇಲ್ಲಿ ಎಲ್ಲಿಯೂ ಹುಡುಕಲಾಗದು
ಹುಡುಕಿದರೂ ಸಿಗಲಾರದ ಚರಮಸುಖ
ಎಲ್ಲ ಮುಗಿದ ಮೇಲೆ ನಾವು
ಒಬ್ಬರೇ ಇಬ್ಬರಲ್ಲವೇ ಅಲ್ಲ

ಅಬ್ಬರವಿಲ್ಲದ ಈ ಪರಮಸುಖ
ದೇಹವೆಂಬ ದೇವಾ
ಲಯದಲಿರುವಾಗ ಎಲ್ಲಿಯೂ
ಹುಡುಕುವದು ಬೇಡ ಸಖಿ

ಒಲವ ಬದುಕಲಿ ಬಡತನವೆಂಬುದಿಲ್ಲ
ಹಣದ ಹಂಗಿಲ್ಲದ ಖಾಲಿಯಾಗದ
ಯಾರೂ ಲೂಟಿ ಮಾಡದ ಖಜಾನೆಯ
ಕವಿ-ಸಿರಿಯ ಒಡೆಯರು
ನಾ
ನೀ
ನೀ
ನಾ

---ಸಿದ್ದು ಯಾಪಲಪರವಿ

Saturday, July 22, 2017

ಬೇರುಗಳತ್ತ ಜಾರುವೆ ಮನಸು

ಮನಸು ಒಮ್ಮೊಮ್ಮೆ ಬೇರುಗಳತ್ತ ಜಾರಿಬಿಡುತ್ತೆ

ಬಾಲ್ಯ ಅನನ್ಯ , ಸುಂದರ ಹಾಗೂ ರಮ್ಯ. ಅದನ್ನು ಮೆಲುಕು ಹಾಕುವುದು ಇನ್ನೂ ಗಮ್ಯ. ಅಂತಹ ದಿವ್ಯ ಬಾಲ್ಯದ ಸಡಗರಗಳನ್ನು ಮೇಲಿಂದ ಮೇಲೆ ನೆನಪಿಸಿಕೊಂಡು ಸಂಭ್ರಮಿಸುತ್ತ ದುಃಖಿಸುತ್ತೇನೆ.

' ಸಿದ್ದು ಕಾಲ ' ಎಂಬ ಬ್ಲಾಗಿನ ಮೂಲಕ ಮುಕ್ತವಾಗಿ ಬರೆಯುವ ಧೈರ್ಯ ಮಾಡಿದೆ . ಅಲ್ಲಿನ ' ಆಟೋಗ್ರಾಫ್ ' ಅಂಕಣ ಅಸಂಖ್ಯ ಓದುಗರನ್ನು ಸೃಷ್ಟಿಸಿತು.
ರಸವತ್ತಾದ ಬರಹಕ್ಕೆ ಪ್ರೇರೇಪಿಸಿ ಭಾವುಕ ಜಗತ್ತಿಗೆ ಕರೆದೊಯ್ದು ಆಟೋಗ್ರಾಫ್ ಸಿನೆಮಾಕ್ಕೆ ಚಿರಋಣಿ.

ನಿನ್ನೆ ಅವ್ವನ ತವರು ಕುಷ್ಟಗಿಯಲ್ಲಿ ಮತ್ತದೇ ಬಾಲ್ಯ ತೀವ್ರವಾಗಿ ಆವರಿಸಿತು.
ಕುಷ್ಟಗಿ ಅಜ್ಜನ attachment , ಅವರೊಂದಿಗೆ ಓಡಾಟ. ವಕೀಲರಾಗಿದ್ದ ಅವರು ಒಮ್ಮೊಮ್ಮೆ ಕೋರ್ಟ್ ಕಲಾಪಗಳನ್ನು ತೋರಿಸುತ್ತಿದ್ದ ಸನ್ನಿವೇಶ ನೆನಪಾಯಿತು . ನಾನು ಕಾಲೇಜು ಕಟ್ಟೆ ಹತ್ತುವುದರೊಳಗೆ ಕಣ್ಮರೆಯಾದರು.

ಆ ಎಲ್ಲ ನೆನಪುಗಳು ನಿನ್ನೆ ನನ್ನನ್ನು ಮತ್ತೆ ಕಾಡಿದವು. ನಾನು ಹುಟ್ಟಿದ ಮನೆ ನೋಡಲು ಹೋದೆ ಆದರದು ತನ್ನ ಸ್ವರೂಪವನ್ನೇ ಕಳೆದುಕೊಂಡಿದ್ದರಿಂದ ಫೋಟೋ ತೆಗೆಯುವ ಮನಸಾಗಲಿಲ್ಲ.
ಮನೆತನದ ಹಿರಿಯ ಶತಾಯುಷಿ ಅಜ್ಜಿ ಸಿಕ್ಕರು .
ಬೇಗನೇ ನಮ್ಮನ್ನು ಅಗಲಿದ ನಮ್ಮ ಪಾಲಕರ ನೆನಪು ತೆಗೆದಾಗ ಇನ್ನಿಲ್ಲದ ಯಾತನೆ.

ವ್ಯಕ್ತಿಗಳು ನಮ್ಮೊಂದಿಗಿದ್ದಾಗ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಂದ ಕೂಗಾಡಿ ಸಂಬಂಧಗಳನ್ನು ಜಟಿಲಗೊಳಿಸಿ ಅವರು ಹೋದ ಮೇಲೆ ವ್ಯಥೆ ಪಡುವ ಇತಿಹಾಸದ ಪುನರಾವರ್ತನೆ ನಿಲ್ಲುವುದು ಯಾವಾಗ ?

ಈಗ ಬೇಕೆಂದಾಗ ಅವರು ಜಗಳಾಡಲೂ ಸಿಗುವುದಿಲ್ಲ , ಸಂಬಂಧಗಳಲ್ಲಿ ಭಿನ್ನಾಭಿಪ್ರಾಯ ಇಟ್ಟುಕೊಂಡೇ ಖುಷಿಯಿಂದ ಬದುಕುವ ಕಲೆ ಕರಗತ ಮಾಡಿಕೊಳ್ಳಬೇಕೆನಿಸಿತು.

                    '                      ***  
1980 ರವರೆಗೆ ಹೈಸ್ಕೂಲಿನಲ್ಲಿ ಕನ್ನಡವನ್ನು ತಮ್ಮದೇ ಆದ ಶೈಲಿಯಲ್ಲಿ ಪಾಠ ಮಾಡುತ್ತಿದ್ದ ಕಾಡಬಸಪ್ಪ ಸರ್ ನಮ್ಮ ಪಾಲಿನ role model. ವ್ಯಂಗ್ಯ , ನವಿರು ಹಾಸ್ಯ , ವಿವರಿಸುವಾಗ ಅಬ್ಬರವಿಲ್ಲದ ಏರಿಳಿತ ಎಲ್ಲವೂ ಅದ್ಭುತ. ನಾವು ಕೆಲವು ಜನ ಸ್ನೇಹಿತರು ಶಿಕ್ಷಕರಾಗಲು ಅವರೇ ಪ್ರೇರಣೆ.

ಅವರು ನಮ್ಮೂರಿಂದ transfer ಆಗಿ ಕುಷ್ಟಗಿಯಲ್ಲಿ ನೆಲೆಸಿದ್ದಾರೆ ಎಂದು ಗೊತ್ತಿತ್ತು ಆದರೆ ನಂತರ ಭೇಟಿ ಆಗಲು ಸಾಧ್ಯವಾಗಿರಲಿಲ್ಲ.
ನಿನ್ನೆ ನನ್ನ ಭಾಷಣದ ನಂತರ ವೇದಿಕೆ ಏರಿ ಅಭಿನಂದಿಸಿದಾಗ ತಬ್ಬಿಬ್ಬು . ತಕ್ಷಣ ಗುರುತು ಹಿಡಿಯದೇ ತಡವರಿಸಿದೆ.
ನಂತರ ನಿಧಾನ ಗುರುತಿಸಿ ಅವರಿದ್ದಲ್ಲಿಗೆ ಹೋದೆ. ಅಪರಿಚಿರಂತೆ ಬಹುವಚನದಲಿ ಮಾತನಾಡಿದರು. ' ನೀವು ಓಶೋನನ್ನು ಓದಿಕೊಡಿದ್ದೀರಾ ?' ಎಂಬ ಪ್ರಶ್ನೆಗೆ ಉತ್ತರಿಸಲು ವಿಚಾರಿಸದೆ.
ಯಾಕೆಂದರೆ ತಮ್ಮ ಬದುಕಿನ 37 ವರ್ಷಗಳ ವೃತ್ತಿಯಲ್ಲಿ ಸಾವಿರಾರು ವಿಧ್ಯಾರ್ಥಿಗಳನ್ನು ರೂಪಿಸಿದ ಶಿಲ್ಪಿ , ನನ್ನಂತಹ ಸಾಧಾರಣ ವಿಧ್ಯಾರ್ಥಿಗೆ ಯಾಕೆ ಈ ಪ್ರಶ್ನೆ  ಹಾಕಿರಬಹುದು ಎಂದು ಕೆಲ ಕ್ಷಣ ಯೋಚಿಸಿದೆ. 'ಅಷ್ಟಿಷ್ಟು ಓದಿದೇನೆ ಸರ್ ' ಎಂದೆ .
ತಮ್ಮ ಬಳಿ ಇದ್ದ ನೋಟ್ಸ್ ತೆಗೆದು ನಾನು ಮಾತನಾಡುವಾಗ ಬಳಸಿದ ಪ್ರಮುಖ ಸಂಗತಿಗಳನ್ನು ತೋರಿಸಿದರು.
ಎಪ್ಪತ್ತೊಂದರ ಪ್ರಾಯದಲ್ಲಿ ತಮಗಿರುವ ಶಿಸ್ತನ್ನು ನಿರೂಪಿಸಿದರು. ' ಏನಾದರೂ ತಪ್ಪಾಯ್ತಾ ಸರ್ ' ಎಂದೆ .

ಇಲ್ಲ you have grown , ತುಂಬಾ ಓದಿಕೊಡಿದ್ದೀರಾ good ' ಎಂದಾಗ ಸಮಾಧಾನ.

ತಕ್ಷಣ ಸೆಲ್ಫಿ  fb ಯಲ್ಲಿ ಮೂಡಿದ ಕೂಡಲೇ ಗತಕಾಲದ ಗೆಳೆಯರ ಪ್ರತಿಕ್ರಿಯೆ ಮತ್ತೆ ಬೆಸೆದ ಬಾಂಧವ್ಯ .

ಅನೇಕಾನೇಕ ವಿಷಯಗಳ ಮೇಲೆ ಪ್ರೀತಿಯಿಂದ ಮಾತನಾಡಿದರು.
ನನ್ನ ಪುಸ್ತಕಗಳನ್ನು ಕಳಿಸಲು ಹೇಳಿ ಮನೆಗೆ ತೆರಳಿದಾಗ ಮನಸು ಭಾರವಾಯಿತು.
ನನ್ನ ಶಿಕ್ಷಕ ವೃತ್ತಿಗೆ ಈಗ 28 ರ ಪ್ರಾಯ , ಸಾಹಿತ್ಯ ಸಾಂಗತ್ಯಕೆ 20 .
ಆದರೆ ನನ್ನ ವಿದ್ಯಾ ಗುರುಗಳ ಶಿಸ್ತನ್ನು ನೋಡಿದಾಗ ಕಲಿಯೋದು ತುಂಬಾ ಇದೆ ಅನಿಸಿತು.

ಮೂವತ್ತೆಂಟು ವರ್ಷಗಳ ಹಿಂದೆ ಕಲಿಸಿದ ಗುರುಗಳು ಇವತ್ತಿಗೂ ಉಳಿಸಿಕೊಂಡಿರುವ ಬದ್ಧತೆಗೆ ಮೌನವಾದೆ. ನಮ್ಮನ್ನು ಅಗಲಿ ಹೋದ ಪಾಲಕರು , ಕಳೆದು ಹೋದ ಸಂಬಂಧಗಳು , ರೂಪಾಂತರಗೊಂಡ ಕಟ್ಟಡಗಳು , ನಶಿಸಿಹೋಗುತ್ತಿರುವ ಶೈಕ್ಷಣಿಕ ಗುಣಮಟ್ಟ ಹಾಗೂ ಇತರ ಸಂಗತಿಗಳು ಮನೋಪಟಲದಿಂದ ಮುಖಪುಸ್ತಕದ ಮೇಲೆ ಸಾಗಿ ಈಗ ನಿಮ್ಮೆದುರು.

---ಸಿದ್ದು ಯಾಪಲಪರವಿ

Monday, July 17, 2017

ಹಿತಕಾರಿ ಯಾತನೆ

ಹಿತಕಾರಿ ಯಾತನೆ

ಯಾಕೆ ಮಳ್ಳಿಯ ಹಾಗೆ ಕಳ್ಳ
ನೋಟ ಬೀರಿ ನನ್ನೆದೆಯ
ಗೂಡ ಸೇರಿದೆ
ಹೇಳದೇ ಕೇಳದೇ ಒಮ್ಮೆಲೇ
ಬಿಗಿದಪ್ಪಿ ಎದೆ ಮೇಲೆ
ತಲೆಯಿಟ್ಟು ರೋ�ಮಗಳಲಿ
ಬೆರಳಾಡಿಸಿ ಕಚಗುಳಿ ಇಟ್ಟು
ಕೆಣಕಿದೆ ಯಾಕೆ ಈ ಪೆದ್ದ ಕರಡಿಯ

ಏನೂ ಅರಿಯದ ನಿರುಮ್ಮಳಾಗಿದ್ದ
ಅಮಾಯಕ ಮನಸಿಗೆ
ಪ್ರೇಮದೋಕುಳಿ ರಂಗುರಂಗಿನ
ಕನಸುಗಳ ಸವಾರಿಯಲಿ
ಕಳೆದುಹೋದ ತಲ್ಲಣ.

ಏಕಾಂತದಿ ಕತ್ತಲೆಯಳು
ಬೆತ್ತಲಾಗಿ ಬೆಚ್ಚಗೆ ಕನವರಿಸುವ
ಹೊತ್ತು
ಇನ್ನಿಲ್ಲದ ನೆನಪದಾಳಿಯಲಿ
ರೋಮಾಂಚನ

ಪುಳಕದಲಿ ಗರಿಗೆದರಿದ
ಆಸೆಗಳು ಸಣ್ಣಗೆ ನಡುಕ
ಕೆರಳುವ ಹೆಡೆಯ
ಹೆಡಮುರಿಗೆ ಕಟ್ಟಲಾರೆ

ಕಾಮ-ಪ್ರೇಮದಾಟವಲ್ಲ
ಭಾಷೆಗೂ ಮೀರಿದ ಬಯಕೆಗಳ
ಮೊಂಡಾಟಕೆ ಹಾಕಲಾದೀತೆ
ಕಡಿವಾಣ

ನನ್ನ ನಾ ರಮಿಸಿ ಮೇಲೆದ್ದು 
ಹರಿದ ಬೆಳಕಲಿ
ಕಾಣದ ನಕ್ಷತ್ರದ ಹುಡುಕಾಟದ
ಹಳವಂಡ

ಬದುಕ ಬಂಡಿಯನೋಡಿಸುವ
ಹೊಣೆಯಲಿ ಮರೆಯಾದ ಬಾನ
ಚಂದಿರ

ಮತ್ತೆ ಮತ್ತೆ ಕತ್ತಲೊಳು ನೀ ಮಾಡುವ
ದಾಳಿಗೆ ಬೆದರಿ ರಾತ್ರಿ ಬರುವುದು
ಬೇಡವೇ ಬೇಡ ಎಂಬ ಸಾತ್ವಿಕ ಆಸೆಗೆ
ಚಂದ್ರನ ಬೆಳದಿಂಗಳ ಸೆಳೆತ

ಕಾವ್ಯ ಸಿರಿಯ ನೆನಪಿನಾಳದಲಿ
ಕಳೆದು ಸಂಭ್ರಮಿಸುವ ತುಡಿತ
ಹಗಲಿರುಳು ಹಗುರಾಗುವ ಮನಕೆ
ಇರಲಿ ನಿಲ್ಲದ ಮುದ ನೀಡುವ
ಮುಲುಕಾಟ.

---ಸಿದ್ದು ಯಾಪಲಪರವಿ

Saturday, July 15, 2017

ಹೀಗೊಂದು ರಾಧೆಯ ಸ್ವಗತ

ಹೀಗೊಂದು ರಾಧೆಯ ಸ್ವಗತ

ಈ ನಿನ್ನ ಮನದನ್ನೆಗೆ ಲೆಕ್ಕವಿಲ್ಲದಷ್ಟು
ಆಸೆಗಳು ಹೇಳಲಾಗದ ಬಿಗುಮಾನ
ಹೇಳಿದರೆ ಬಿಡಲಾರದ ಮೊಂಡು
ತುಂಟ ತುಡುಗ ಕೃಷ್ಣ ನೀ

ಎಲ್ಲಿ ಅಡಗಿದ್ದೆ ಇಷ್ಟು ದಿನ ನನ್ನ
ಮದವೇರಿದ ಮನದರಸ

ಮನಸಿಲ್ಲದೆ ಮನಸಿಂದ ಮೈಮಾಟವ
ನಲುಗಿಸಿದೆ ಒಲ್ಲದ ಒಲವಿಲ್ಲದ ಗಂಡಂಗೆ

ನೂರೆಂಟು ಕಳ್ಳ ಕಾಕರ ಕೆಂಗೆಣ್ಣಿಂದ
ತಪ್ಪಿಸಿಕೊಂಡು ಕಾಪಾಡಿರುವೆ ಪುಟಿದೇಳುವ
ಬಯಕೆಗಳ ಯಾರಿಗೂ ಬಲಿಯಾಗದೆ

ಎಲ್ಲಿಂದಲೋ ಸುರಿದ  ನಿನ್ನ ಪದಪುಂಜಗಳ
ಹೂಮಳೆಯಲಿ ತೊಯ್ದು
ನಡುಗಿ ನಲುಗಿ ಹೋದೆ

ಮೈಮುಟ್ಟದೆ ಆಳದೊಳು ಇಳಿದುಬಿಟ್ಟೆ
ಶಬ್ದ ಬಾಣಗಳ ಬಿಟ್ಟು
ಸೋತಿರದವಳ ಹಾಗೆ ಹುಸಿ ಮುನಿಸಿಂದ
ದೂರದೂಡಲು ಹೋಗಿ ನಾ ಜಾರಿಬಿದ್ದೆ

ಮಹಾ ಚತುರ ನೀ ಹೇಗೋ ಅರಿವಿಲ್ಲದೆ 
ಮೊಂಡಾಟದ ದಾಳಿಯಲಿ ಸೋಲಿಸಿಬಿಟ್ಟೆ

ಆದರೆ ಸೋತನೆನ್ನಲು ಇನ್ನಿಲ್ಲದ ಭೀತಿ
ಸಾವಿರ ಕಂಗಳ ಬಿಗಿ ಕೋಟೆಯ
ಹಾರಿಬಂದು ಸೇರಲಾದೀತೆ ?

ಸಂಸಾರ ಸಾಗರದಲಿ ಎಲ್ಲ ನೋವುಗಳ
ನಸುನಗುತ ನುಂಗಿ ನಲುಗಿರುವ
ಈ ಜೀವಕೆ ಬೇಕು ನಿನ್ನೊಲವಿನಾಸರೆ

ಬಿಟ್ಟು ಬರಲಾರೆ ಈ ಅನರ್ಥ ಬಂಧನಗಳ
ಜಂಜಡವ ಈ ಜನುಮದ ಕರ್ಮ
ಬೇಡವಾದರೂ ಅನುಭವಿಸಿ
ಒಳಗೊಳಗೇ ಬೇಯುವೆ
ನಗುವಿನ ಮುಖವಾಡವ ಹೊತ್ತು

ನನ್ನ ಮಾನ ಪ್ರಾಣದ ಹಂಗು ಹರಿದು
ಬಿಚ್ಚಿ ಬಯಲಲಿ ಕೇವಲ ಶಬ್ದಗಳ
ಭಾವಲೋಕದಲಿ ಬಯಲಾಗಿ
ಅರ್ಪಿಸಿಕೊಂಡಿರುವೆ ನಿನಗೆ

ಆದರೆ ಹೇಳಲಾಗದ ಅಸಹಾಯಕ
ಪರಿಗೆ ಇರಲಿ ಅನುಕಂಪ
ಹೇಳಿದರೆ ಬೆಂಬಿಡದು ನಿನ್ನ
ಕರಡಿಯ ಹಿಡಿತ

ನಿನ್ನ ನೆನಪಲಿ ಶಬ್ದಗಳು ನಿಶಬ್ದವಾಗಿ
ಮಾತುಗಳು ಗಂಟಲೊಳು ಬಿಗಿಯಾಗಿ
ಅವಿತು ಜೋರಾಗಿ ಕೂಗುತಿವೆ

ಪ್ರೀತಿಯ ಮಾತುಗಳಿಗೆ ಸೋತು
ಶರಣಾಗಿ ಹೇಳಲಾಗದ ಬೇಗುದಿಯಲಿ
ಬೆಂದು ನೊಂದು ಕುಂದದೇ
ಒಂಟಿಯಾಗಿ ಕನವರಿಸುವೆ ನನ್ನ
ಇನಿಯನ ಕೂಡಲು ಕೂಡದಂತೆ

ಮಾಡಿದರೂ ಮಾಡದಂತೆ
ಕೊಡಲಾಗದೆ ಕೊಡುವಂತೆ

ಕೇವಲ ಪಡೆದುಕೊಳುವ
ಕೇಡಿಲ್ಲದ ಈ ಇನಿಯಳ
ಎದೆಯಾಳದಿ ಬಚ್ಚಿಟ್ಟುಕೋ
ಯಾರಿಗೂ ಕಾಣದ ಹಾಗೆ.

---ಸಿದ್ದು ಯಾಪಲಪರವಿ