Tuesday, December 3, 2013

ವಿರೇಶ್ವರ ಪುಣ್ಯಾಶ್ರಮ




ಇಲ್ಲಿ ಎಲ್ಲಂದರಲ್ಲಿ ನಾದ
ನಿನಾದಗಳ ಕಂಪು
ಅಂಧರ ಬೆಳಕಲಿ ಅನಾಥರ ಖುಷಿಯಲಿ
ಸಂಭ್ರಮಿಸುವ ತಂಪು.
ಪುಣ್ಯಾಶ್ರಮದ ಪ್ರತಿ ಕಲ್ಲಲಿ
ಸರಿಗಮಗಳ ಸರಪಳಿ.
ಅಂಗುಲಂಗುಲದ ನಡೆಯಲಿ
ಅಂತಕರಣದ ಹೊಳಪು.
ಪಂಚಾಕ್ಷರ ಗವಾಯಿಗಳವರ
ಉಭಯ ಗಾನ ವಿಶಾರದೆ
ಇಲ್ಲಿ ಅಲುಗದೆ ನೆಲೆಯೂರಿ
ತನ್ಮಯಗಳಾಗಿ ಮೈ ಮರೆತು
ನಲಿಯುತ ಸಂಚರಿಸುವ
ಪರಿಯನು ಅರಿಯದವರು ಯಾರು?
ಪುಟ್ಟರಾಜರ ಶ್ರಮದ ಬೆವರ
ಹನಿಯಲೂ ಸೂಸುತಿದೆ ಗಾನ ಸುಗಂಧ
ಸರಿಗಮಗಳ ಜಪದಲಿ.
ಇಲ್ಲೊಮ್ಮೆ ಜಪಿಸಿದರೆ ಮೈ
ಮನಗಳಲಿ ಕಂಪನ.
ಮಲಿನವಾದ ಮನಸನು
ಬದಿಗಿಟ್ಟು ಒಮ್ಮೆ ಕೈಮುಗಿದು
ಒಳಗೆ ಬಾ ನಾದ ಪ್ರಿಯನೆ
ಎಲ್ಲಂದರಲಿ ಬೀಸುವ ಗಾನ
ಗಂಧದ ಕಂಪನು
ನಿನ್ನದಾಗಿಸಲು