Monday, November 22, 2010
ಶಿಕ್ಷಕರ ಕಾಳಜಿ - ಸ್ನೇಹಿತರ ಪ್ರೀತಿ
Saturday, November 20, 2010
ಸಾಂಸ್ಕೃತಿಕ ಭಿನ್ನತೆಯ ವಿಚಿತ್ರಾನುಭವ
Wednesday, November 17, 2010
ಬೆಳೆದ ಬೆಳಗೆರೆಯ ರವಿ ಕಿರಣಗಳು
Monday, November 15, 2010
ಡಂಬಳಕೆ ಪಾದಯಾತ್ರೆ : ಪೂಜ್ಯರ ಸಂಪರ್ಕ
ತೋಂಟದಾರ್ಯ ಜಾತ್ರೆ ಗದುಗಿನ ಅಜ್ಜಾ ಅವರು
Friday, November 12, 2010
ನಗುಮೊಗದ ತ್ಯಾಗಮೂರ್ತಿ ಅಮರಮ್ಮ ಅಮ್ಮ
Thursday, November 11, 2010
ಶೌಚಾಲಯದ ಹಿಂಸೆ
ಒಬಾಮಾಗಳಿಗಾಗಿ ಇಲ್ಲಿ ಹುಡುಕಾಟ
Wednesday, November 10, 2010
ಹೈಸ್ಕೂಲು ವ್ಯಾಸಂಗದ ವಿವಿಧ ಮುಖಗಳು
Thursday, November 4, 2010
ಈಗ ನಿತ್ಯವೂ ದೀಪಾವಳಿ-ಒಮ್ಮೊಮ್ಮೆ ಹೋಳಿ
ಪ್ರತಿ ವರ್ಷ ದೀಪಾವಳಿ ಸಂದಂರ್ಭದಲ್ಲಿ ನಮ್ಮ ಎಲ್ಲ ವಾಹನಗಳನ್ನು ಒಟ್ಟಿಗೆ ನಿಲ್ಲಿಸಿ ಫೋಟೋ ತೆಗೆಯುತ್ತಿದ್ದರು. ಲಾರಿ, ಜೀಪು, ಸ್ಕೂಟರ್ ಹಾಗೂ ಸೈಕಲ್ಲು ಗಳನ್ನು ಸಾಲಾಗಿ ಜೋಡಿಸಿ ಪೂಜೆ ಮಾಡುತ್ತಿದ್ದರು.
ದೀಪಾವಳಿ ಎಲ್ಲಿಲ್ಲದ ಖುಷಿ ತರುತ್ತಿತ್ತು. ಟೇಲರ್ ರಾಮಣ್ಣ ಹೊಸ ಬಟ್ಟೆಗಳನ್ನು ಕೊಡುತ್ತಿದ್ದ, ಒಮ್ಮೊಮ್ಮೆ ಧೋತ್ರ ಉಟ್ಟು ಸಂಭ್ರಮಿಸಿದ್ದೇನೆ.
ಕಾರಟಗಿ ಈಗ ಅಂತರಾಷ್ಟ್ರೀಯ ಖ್ಯಾತಿ ಪಡೆದಿದೆ.
ಊರಲ್ಲಿನ ನಮ್ಮ ಧಣಿತನ ಮಾಯವಾದರೂ, ಪ್ರತಿ ದೀಪಾವಳಿ ಕಳೆದು ಹೋದ ಸಿರಿ-ಸಂಭ್ರಮವನ್ನು ನೆನಪಿಸುತ್ತದೆ.
ಈಗ ಹಬ್ಬಗಳು ನನ್ನ ಪಾಲಿಗೆ ವಿಶೇಷ ಎನಿಸುವುದಿಲ್ಲ. ಹೊಸ ಬಟ್ಟೆ ಖುಷಿ ಎನಿಸಿದಾಗ ಧರಿಸುತ್ತೇನೆ. ಊರಿಗೆ ಹೋದಾಗ ಹಬ್ಬದ ನೆಪಕ್ಕೆ ಹೊಸ ಬನಿಯನ್ ಲುಂಗಿ ಖರೀದಿಸುತ್ತೇನೆ.
ದೀಪಾವಳಿ ಹಬ್ಬದ ನೆಪದಲಿ ಮನಸು ದಶಕಗಳ ಹಿಂದೆ ಓಡಿತು. ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
ಅಮರಣ್ಣ ತಾತ - ಹಂಚಿಹೋದ ಶ್ರೀಮಂತಿಕೆ
Wednesday, November 3, 2010
ಲಿವಿಂಗ್ ಟುಗೆದರ್ ಕೇವಲ ಇಂದಿನ ಕತೆಯಲ್ಲ
ಮದುವೆಯಾದ ಸ್ತ್ರೀ - ಪುರುಷರೊಂದಿಗೆ ಸಂಬಂಧ ಹೊಂದಿದರೆ ಅನೈತಿಕವಾಗುತ್ತದೆ. ಈ ರೀತಿ extra affair ಗಳು ಅನೇಕ ಅವಘಡಗಳಿಗೆ ಕಾರಣವಾಗುತ್ತವೆ.
ಮದುವೆಯಾದ ಮೇಲೂ ಹೊಂದುವ ಇತರ ಸಂಬಂಧಗಳಿಗೆ ಭಿನ್ನ ಎನಿಸುವ living together ನ ಇನ್ನೊಂದು ಮುಖವನ್ನು ನಮ್ಮ ತಾತ ಹೊಂದಿದ್ದ ಸಂಬಂಧಗಳಲ್ಲಿ ಕಂಡಿದ್ದೇನೆ.
ಮದುವೆಯಾದ ನಮ್ಮ ತಾತನಿಗೆ ಅತ್ಯಂತ ಗೌರವಾನ್ವಿತ ಮಹಿಳೆಯೊಂದಿಗೆ ಸಂಬಂಧವಿತ್ತು. ಅದನ್ನು ಯಾರೂ ಅನೈತಿಕ, ಹಾದರ ಎಂದು ಕಿಳಾಗಿ ಕಾಣುತ್ತಿರಲಿಲ್ಲ.
ಆಕೆಯ ಮಕ್ಕಳು ತಾತನ ಹೆಸರನ್ನೇ ಹೇಳುತ್ತಿದ್ದರು. ಅವರನ್ನು ಸಮಾಜವೂ ಅಷ್ಟೇ ಗೌರವದಿಂದ ಕಾಣುತ್ತಿತ್ತು ಎಂಬುದು ಗಮನೀಯ ಸಂಗತಿ.
ಆರಂಭದ ಯೌವನದಲ್ಲಿ ಈ ರೀತಿಯ ಸಂಬಂಧಗಳು ಲೈಂಗಿಕ. ಕಾಮನೆಗಳ ಈಡೇರಿಕೆಗಾಗಿ ಮೀಸಲಾಗಿ ಬರುಬರುತ್ತಾ ವಯಸ್ಸಾದಂತೆಲ್ಲ ಪ್ರೀತಿ-ಅನುರಾಗವಾಗಿ ಮಾರ್ಪಟ್ಟು ಗಟ್ಟಿ ಬಂಧನವಾಗಿ ಉಳಿಯುತ್ತಿತ್ತು.
ಎಲ್ಲ ಶಾಸ್ತ್ರಗಳಲ್ಲೂ ನಾವು ಮುಂದಿದ್ದೇವೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ!
ಡಾ|| ಸಿದ್ಧಲಿಂಗ ಪಟ್ಟಣಶೆಟ್ಟಿ ಸಾಹಿತ್ಯ ಪುರಸ್ಕಾರ ೨೦೧೦: ಕೆ. ಶರೀಫಾ, ಮಂಜುನಾಥ ಲತಾ ಇವರಿಗೆ
ಗದುಗಿನ ಸಾಹಿತ್ಯ ಪ್ರಕಾಶನ ಸಂಸ್ಥೆ ಸಾಂಗತ್ಯ ಪ್ರಕಾಶನ ಖ್ಯಾತ ಕವಿ, ಅನುವಾದಕ, ನಾಟಕಕಾರ, ವಿಮರ್ಷಕ ಡಾ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಸಾಹಿತ್ಯ ಪುರಸ್ಕಾರವನ್ನು ೨೦೧೦ ರಿಂದ ನೀಡುವುದಾಗಿ ತಿರ್ಮಾನಿಸಿತ್ತು. ಅದಕ್ಕಾಗಿ ೨೦೦೫ ರಿಂದ ೨೦೦೯ ರವರೆಗೆ ಪ್ರಕಟಗೊಂಡ ಕವನ ಸಂಕಲನಗಳನ್ನು ಆಹ್ವಾನಿಸಿತ್ತು. ಪ್ರಶಸ್ತಿಗೆ ಉತ್ತಮ ಪ್ರತಿಕ್ರಿಯೆ ದೊರಕಿ ನೂರಾ ಇಪ್ಪತ್ತೈದು ಕವಿಗಳು ಹಾಗೂ ಪ್ರಕಾಶಕರು ಸಂಕಲನಗಳನ್ನು ಸಾದರ ಪಡಿಸಿದ್ದರು. ಖ್ಯಾತ ಕವಿಗಳಾದ ಮೈಸೂರಿನ ಜಿ.ಕೆ.ರವೀಂದ್ರಕುಮಾರ, ಹಾವೇರಿಯ ಸತೀಷ ಕುಲಕರ್ಣಿ ಹಾಗೂ ಬೆಂಗಳೂರಿನ ಎಚ್. ಎಲ್. ಪುಷ್ಪಾ ಅವರನ್ನೊಳಗೊಂಡ ತೀರ್ಪುಗಾರರ ಸಮಿತಿ ಅಂತಿಮವಾಗಿ ಹರಿಹರದ ಖ್ಯಾತ ಬಂಡಾಯ ಕವಿಯತ್ರಿ ಕೆ.ಶರೀಫಾ ಅವರ ಬುರ್ಖಾ ಪ್ಯಾರಡೈಸ್ ಮೈಸೂರಿನ ಸೃಜನಶೀಲ ಕಲಾವಿದ, ಕವಿ ಮಂಜುನಾಥ ಲತಾ ಅವರ ಆಹಾ ಅನಿಮಿಷ ಕಾಲ ಕಾವ್ಯ ಸಂಕಲನಗಳನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಿತು. ಪ್ರಶಸ್ತಿಗೆ ಹತ್ತು ಸಾವಿರ ನಗದು ಪುರಸ್ಕಾರ ಹಾಗೂ ಸ್ಮರಣಿಕೆಗಳನ್ನು ನೀಡಲಾಗುವುದು. ಪ್ರಥಮ ವರ್ಷದ ಪುರಸ್ಕಾರವನ್ನು ಇಬ್ಬರೂ ಹಂಚಿಕೊಂಡಿದ್ದು ಪುರಸ್ಕೃತರಿಗೆ ತಲಾ ಐದು ಸಾವಿರ ನಗದು ಹಾಗೂ ಸ್ಮರಣೆಗಳನ್ನು ನೀಡಿ ಗೌರವಿಸಲಾಗುವುದೆಂದು ಸಾಂಗತ್ಯ ಪ್ರಕಾಶನದ ಸಂಚಾಲಕರಾದ ಡಾ ಜಿ. ಬಿ. ಪಾಟೀಲ ಹಾಗೂ ಸಿದ್ಧು ಯಾಪಲಪರವಿ ತಿಳಿಸಿದ್ದಾರೆ
ಕಾಲುವೆಯ ನೀರಾಟ - ಸಿದ್ದಣ್ಣನ ಸ್ನೇಹ
ಪ್ರಾಥಮಿಕ ಹಂತದಿಂದ ಕಾಲೇಜು ಶಿಕ್ಷಣ ಮುಗಿದರೂ ನನ್ನ + ಅವನ ಸ್ನೇಹ ನಿರಂತರವಾಗಿತ್ತು.
ನನಗಿಂತ 10 ವರ್ಷ ಹಿರಿಯನಾದ ಸಿದ್ದಣ್ಣ, ಸಮಕಾಲೀನ ಸೋದರ ಶರಣು, ಎರಡು ವರ್ಷ ದೊಡ್ಡವನಿದ್ದ ಅರಳಿ ಅಪ್ಪಣ್ಣ ತುಂಬಾ ಆಪ್ತರಾಗಿದ್ದೆವು. ಸ್ನೇಹಕ್ಕೆ ವಯಸ್ಸಿನ, ಅಂತಸ್ತಿನ ಅಂತರ ಅಡ್ಡಿಯಾಗದು ಎಂಬುದನ್ನು ನನ್ನ ಬಾಲ್ಯ ನೆನಪಿಸುತ್ತದೆ.
ಬೆನ್ನಿಗೆ ಈಜು ಗುಂಬಳಕಾಯಿ ಕಟ್ಟಿ ಜವಳಿಯವರ, ಅರಳಿಯವರ ಭಾವಿಯಲ್ಲಿ ಈಜು ಕಲಿಸಿದ. ನಂತರ ದೊಡ್ಡ ಕಾಲುವೆಯಲ್ಲಿ ತೇಲಾಡುವುದನ್ನು ಕಲಿಸಿದ ಹೆಗ್ಗಳಿಕೆ ಸಿದ್ದಣ್ಣನಿಗೆ ಸಲ್ಲುತ್ತದೆ.
ಶಾಲಾ ಅಧ್ಯಯನದ ನಿರಾಸಕ್ತಿಯನ್ನು ಸಿದ್ದಣ್ಣನ ಒಡನಾಟ ಮರೆಸಿತ್ತು. ಗದುಗಿನಲ್ಲಿ ಓದುತ್ತಿದ್ದ ದೊಡ್ಡಪ್ಪನ ಮಗ ಶರಣು ಶಾಲೆಯಲ್ಲಿ rank student. ದುಂಡಾಗಿ ಅಕ್ಷರ ಬರೆಯುತ್ತಾ ಅಭ್ಯಾಸದಲ್ಲಿ ಜಾಣನಿದ್ದರೂ ನಮ್ಮ ಸ್ನೇಹಕ್ಕೆ ಮಾರುಹೋಗಿದ್ದ.
ಶರಣುನ ಆಕರ್ಷಣೆಯಿಂದಾಗ ಗದುಗಿಗೆ ಹೋಗುತ್ತಿದ್ದೆ. 1978 ರಿಂದ ಗದುಗಿನ ತೋಂಟದಾರ್ಯ ಅಜ್ಜಾ ಅವರ ಸಂಪರ್ಕ ಹೆಚ್ಚಾದಂತೆಲ್ಲ ಗದುಗು-ಶರಣುನ ನಂಟು ಹೆಚ್ಚಾಯಿತು. ಶರಣು-ಅಪ್ಪಣ್ಣ-ಸಿದ್ದಣ್ಣ-ನಾನು ಸದಾ ಚರ್ಚಿಸುತ್ತಾ ಹರಟೆ ಹೊಡೆಯುತ್ತಿದ್ದೆವು. ಸಿನೆಮಾ ಚಟ ಎಲ್ಲರಲ್ಲೂ ಇದ್ದ ಸಮಾನ ಹವ್ಯಾಸ.
ಹಣವಾಳ ಸಿದ್ದಣ್ಣ ಆರ್ಥಿಕವಾಗಿ ಕಷ್ಟದಲ್ಲಿದ್ದರೂ, ಸದಾ ಖುಷಿಯಲ್ಲಿರುತ್ತಿದ್ದ ಅವನ ಜೀವನೋತ್ಸಾಹ ಮಾದರಿ ಎನಿಸುತ್ತಿತ್ತು. ತುಂಡು ರೊಟ್ಟಿ-ಚಟ್ನಿ ತಿಂದರೂ ಸಂತಸದಿಂದ ಇರಬಹುದು ಎಂಬುದನ್ನು ಅವನ ಹಾಸ್ಯ ಪ್ರಜ್ಞೆ ಸಾಬೀತುಪಡಿಸಿತ್ತು.
ನಮ್ಮೂರಲ್ಲಿ ಸಣ್ಣವರಿದ್ದಾಗ ಹೋಟೆಲ್ಲಿಗೆ ಹೋಗುವುದನ್ನು ದುಶ್ಚಟ ಎಂದು ಪರಿಗಣಿಸುತ್ತಿದ್ದರು. ಹಿರಿಯರ ಕಣ್ಣು ತಪ್ಪಿಸಿ ಹೋಟೆಲ್ಲಿಗೆ ಹೋದರೆ ಅಂಗಡಿ ಮಾಲಕರೇ ಎಚ್ಚರಿಸುತ್ತಿದ್ದರು. ಧಣಿ ನಿಮ್ಮಂತವರು ಚಾದ ಅಂಗಡಿಗೆ ಬರಬಾರದಪ ಇಲ್ಲಿ ಸುಮಾರು ಜನ ಬರ್ತಾರ ಅಂತ ತಿಳಿ ಹೇಳುತ್ತಿದ್ದರು.
ನಮಗೆ ಕಾರಟಗಿ ಹೋಟೆಲ್ ಗಳಿಗೆ ನುಗ್ಗಿ ಮಂಡಾಳು-ಡಾಣಿ, ಮೆಣಸಿನಕಾಯಿ ಪುರಿ, ಚಪಾತಿ -ಚಟ್ನಿ ತಿನ್ನುವ ಆಸೆಯಾಗುತ್ತಿತ್ತು. ಊರ ಹೊರಗಿನ ಗುಡಿಸಲು ಚಹಾ ಅಂಗಡಿಗೆ ಸಿದ್ದಣ್ಣ ಕರೆದುಕೊಂಡು ಹೋಗಿ ನಮ್ಮ ಆಸೆ ತೀರಿಸುತ್ತಿದ್ದ. ಅಂಗಡಿಯ ಹಿಂದಿನ ಬಾಗಿಲಿನಿಂದ ಕರೆದುಕೊಂಡು ಹೋಗುತ್ತಿದ್ದ.
ನಮ್ಮದು ಲಿಂಗಾಯತ ಮಡಿವಂತ ಪರಿವಾರ ತತ್ತಿ ತಿನ್ನಲು ಅವಕಾಶವಿರುತ್ತಿರಲಿಲ್ಲ. ಆದರೆ ನನಗೆ ತಿನ್ನಬೇಕೆನ್ನಿಸಿತು.
ಈ ರೀತಿ ಮಾಂಸಹಾರ ತಿನ್ನುವುದನ್ನು ಕಪ್ಪು-ಕಡಿ ತಿನ್ನುವುದು ಎಂದು ಟೀಕಿಸುತ್ತಿದ್ದರು.
ಹೈಸ್ಕೂಲಿನಲ್ಲಿದ್ದಾಗ ಸಿದ್ದಣ್ಣ ಎರಡು ರೀತಿಯ ತತ್ತಿ ತಿನ್ನಿಸಿದ. ಹಸಿಹಾಲಿನಲ್ಲಿ ತತ್ತಿ . ನಂತರ ಕುದಿಸಿದ ತತ್ತಿಯನ್ನು ತಿನ್ನಿಸಿ ನಮ್ಮ ಜನ್ಮ ಸಾರ್ಥಕ ಮಾಡಿದ.
ತತ್ತಿ ತಿಂದರೆ ಹೊರಗಡೆ ನಿಲ್ಲಿಸಿ ನೀರು ಸುರುವಿ ಮಡಿ ಮಾಡಿ ಮನೆಯಲ್ಲಿ ಕರೆದುಕೊಳ್ಳುವ ಸಂಪ್ರದಾಯವಿತ್ತು. ಸ್ನಾನ ಮಾಡಿ ಮನೆಯಲ್ಲಿ ಹೋಗದಿದ್ದರೆ ಮನೆಯ ಜಂತಿಯಿಂದ ಚೇಳು ಬೀಳುತ್ತವೆ. ಮೈಲಿಗೆ ಆಗಿದೆ ಎಂದು ಮನೆ ಮೈಲಿಗೆಗೆ ಕಾರಣ ರಾದವರನ್ನು ಪತ್ತೆ ಹಚ್ಚುವಾಗ ನನಗೆ ಅಪರಾಧಿ ಭಾವನೆ ಕಾಡುತ್ತಿತ್ತು.
ಹೀಗಾಗಿ ಮುಂದೆ ಕದ್ದು - ಮುಚ್ಚಿ ತತ್ತಿ ತಿಂದಾಗಲೆಲ್ಲ ಕಾಲುವೆಯಲ್ಲಿ ಬೆತ್ತಲೆ ಸ್ನಾನ ಮಾಡಿ ಮಡಿಯಾಗಿ ಬಿಸಿಲಲ್ಲಿ ಮೈ ಒಣಗಿಸಿಕೊಂಡು ಮನೆಗೆ ಬರುತ್ತಿದ್ದೆ. ಇದಕ್ಕೆ ಅಲ್ಲವೇ ಭಕ್ತಿ- ಭಯ ಅನ್ನುವುದು.
ಪುರಿ,ಚಪಾತಿ ಆಸೆಗಾಗಿ ಹೋಟೆಲ್ ಗೆ ಅಲೆದು ಹೊಸ ಚಟ ರೂಪಿಸಿಕೊಂಡೆ. ಕಾಲುವೆ ದಾಟುವಾಗ ಹೆದರಿಕೆಯಾದರೆ ಸಿದ್ದಣ್ಣ ನನ್ನನ್ನು ಹೆಗಲ ಮೇಲೆ ಕೂಡಿಸಿಕೊಂಡು ದಾಟುತಿದ್ದ.
ಪ್ರತಿ ವರ್ಷ ಗದುಗಿನ ಜಾತ್ರೆಯಲ್ಲಿ ನಾನು, ಸಿದ್ದಣ್ಣ, ಶರಣು ಸಿನೆಮಾ ನೋಡುವ ಕಾರ್ಯಕ್ರಮ ಹಾಕಿಕೊಂಡು ಒಂದು ದಿನಕ್ಕೆ 3-4 ಸಿನೆಮಾ ನೋಡುತ್ತಿದ್ದೆವು. ಮುಂದೆ ಕೆಲ ವರ್ಷ ದುಡಿಯಲು ಆಂದ್ರ ಪ್ರದೇಶಕ್ಕೆ ಹೋದ. ರಜೆಗೆ ಬಂದಾಗಲೆಲ್ಲ ಒಟ್ಟಿಗೆ ಸೇರುತ್ತಿದ್ದೆವು.
ಕುಳ್ಳ ವ್ಯಕ್ತಿತ್ವದ ಹಸನ್ಮುಖಿ ಸಿದ್ದಣ್ಣ ಈಗ ಕೇವಲ ನೆನಪಾಗಿದ್ದಾನೆ. ಕೆಟ್ಟ ಕಾಯಿಲೆಗೆ ಸಿದ್ದಣ್ಣ ಬಲಿಯಾಗಿ ಏಳೆಂಟು ವರ್ಷಗಳ ಹಿಂದೆ ತೀರಿಕೊಂಡಾಗ ಎಲ್ಲಿಲ್ಲದ ವ್ಯಥೆ. ತೀವ್ರ ಅನಾರೋಗ್ಯದಲ್ಲಿದ್ದಾಗ ಗದುಗಿಗೆ ಚಿಕಿತ್ಸೆಗಾಗಿ ಬಂದಿದ್ದ. ಆಗ ಸ್ವಲ್ಪ ನೆರವು ನೀಡಿದ್ದೆ. 3 ಹೆಣ್ಣು ಮಕ್ಕಳು, ನಮ್ಮಂತಹ ಹತ್ತಾರು ಸ್ನೇಹಿತರನ್ನು ಅಕಾಲಿವಾಗಿ ಅಗಲಿದಾಗ ಯಾರಿಗೆ ತಾನೇ ವ್ಯಥೆಯಾಗುವುದಿಲ್ಲ.
ಇತ್ತೀಚಿಗೆ ಊರಿಗೆ ಹೋದಾಗ ಆತನ ಮಕ್ಕಳನ್ನು ಕಂಡಾಗ ಸಿದ್ದಣ್ಣನ ಬಾಲ್ಯದ ದಿನಗಳು ನೆನಪಾದವು.
ತಾನು ಅನೇಕ ಕೆಟ್ಟ ಚಟಗಳಿಗೆ ಬಲಿಯಾದರೂ, ನಮ್ಮನೆಂದು ಆ ಕೂಪಕ್ಕೆ ತಳ್ಳಲಿಲ್ಲ. ಅದೇ ಅವನ ದೊಡ್ಡತನ. ತನ್ನ ಅನಾಹುತಕಾರಿ ಕಾಯಿಲೆಯಲ್ಲೂ ಆತ ಜೀವನೋತ್ಸಾಹ ಕಳೆದುಕೊಂಡಿರಲಿಲ್ಲ.
ಆತನ ಕೊನೆಯ ದಿನಗಳನ್ನು ನಮ್ಮೊಂದಿಗೆ ಕಳೆಯಲು ಬಯಸಿದ. ನಾನು, ಅಪ್ಪಣ್ಣ, ಶರಣು ಸಾಧ್ಯವಾದಷ್ಟು ನೆರವು ನೀಡಿದೆವು ಎಂಬುದು ಕೇವಲ ನೆಪ. ಕೋಟಿಗಟ್ಟಲೆ ಹಣ ಸುರಿದರೂ ಕಳೆದು ಹೋದ ಇತಿಹಾಸವನ್ನು ಮರಳಿ ಕೊಳ್ಳವುದು ಅಸಾಧ್ಯ.
ಹಾಗೆ ಬಾಲ್ಯದ ನೆನಪುಗಳನ್ನು ದಿವ್ಯವಾಗಿಸಿ ಸಿದ್ದಣ್ಣ ನಮ್ಮೂರ ಮಧ್ಯೆ ಹರಿಯುವ ಕಾಲುವೆ ನೋಡಿದಾಗ, ಹಳೆ ಸಿನೆಮಾಗಳನ್ನು ನೋಡಿದಾಗ ನೆನಪಾಗುತ್ತಾನೆ.
ಬಾಲ್ಯದ ಕಾಲು ಭಾಗವನ್ನು ನಾನು ಆತನೊಂದಿಗೆ ಕಳೆದೆ. ಅಷ್ಟೇನು ವಿದ್ಯೆ ಕಲಿಯದಿದ್ದರೂ ಅವನ ಲೋಕಾನುಭವ ಚನ್ನಾಗಿತ್ತು. ಬಾಲ್ಯದ ಸ್ನೇಹದಷ್ಟು ಭಾವನಾತ್ಮಕತೆ ಈಗಿನ ಸ್ನೇಹದಲ್ಲಿ ಇರುವುದಿಲ್ಲ. ಎಲ್ಲರೂ ಅವರವರ ಪಾಡಿಗೆ busy ಅಗಿ ಬಿಡುತ್ತೇವೆ. ಅಪ್ಪಣ್ಣ ,ಶರಣು ಈಗ ಕೇವಲ mobile ಗೆಳೆಯರಿದ್ದಾರೆ ಅಷ್ಟೇ! ಈಗ ನಮಗೆ ಸಮಯವೂ ಇಲ್ಲ, ಭಾವನೆಗಳು ಇಲ್ಲ ಎನ್ನುವಂತಾಗಿದೆ.
ದೇವರ ಗುಡಿಯಲಿ, ಮರದ ನೆರಳಲಿ ನೀಡಿದ ಚಿರಕಾಣಿಕೆ
ನಿನ್ನ ಮುಂದೆ ನಾನು ಬಚ್ಚಾನ ಹಾಗೆ ಕಾಣಿಸಿದೆ. ನೀನಂದು ಮಾತು ಕೊಟ್ಟಂತೆ ಊರ ಹೊರಗಿನ ಭವ್ಯ ಆಲದ ಮರದ ಕೆಳಗೆ ಕುಳಿತು ಮಾತಿಗಿಳಿದದ್ದು, ಅಂದಿನ ನಿನ್ನ ಕಣ್ಣ ಹೊಳಪು. ನಳನಳಿಸಿದ ಆಭರಣಗಳು, ಕೊರಳಿಗೆ ಅಂಟಿಕೊಂಡಿದ್ದ ತಾಳಿ, ಹಸಿರು ಗಾಜಿನ ಬಳೆಗಳು, ಅರಿಷಿಣದ ಹೊಳಪು, ಹೊಳೆಯುವ ಮೈಕಾಂತಿಗೆ ಕರಗಿ ನೀರಾಗಿದ್ದೆ.
ಹಿಂದಿನ ಆಕ್ರೋಶ ಕಡಿಮೆ ಆಗಿತ್ತು. ಆಗಲೇಬೇಕಿತ್ತು. ವಾಸ್ತವದ ದುಸ್ಥಿತಿ ಗೊತ್ತಾಗಿ ಹೋಗಿತ್ತು. ಎಂದೂ ನೋಡದವನ ಹಾಗೆ ಮನ:ತೃಪ್ತಿಯಾಗುವವರೆಗೆ ದಿಟ್ಟಿಸಿ ನೋಡಿದೆ. ಹಕ್ಕಿಗಳ ಚಿಲಿ-ಪಿಲಿ ಕಲರವ ನಮ್ಮನ್ನು ಒಂಟಿಯಾಗಿಸಲಿಲ್ಲ.
ಕಾಣಿಕೆಯ ಗೊಂದಲ ನನ್ನಿಂದ ಮಾಯವಾಗಿತ್ತು.
ನೀನು ಅಷ್ಟೇ ಶಾಂತವಾಗಿ ಹೇಳಿದ ಒಂದೊಂದು ಮಾತುಗಳು ನನ್ನ ವ್ಯಕ್ತಿತ್ವವನ್ನೇ ಬದಲಿಸಿದವು. ನೋಡು ಈಗ ಬಂದಿದ್ದೇನೆ. ಇಂದು ಸಂಜೆಯವರೆಗೆ ನಿನ್ನೊಂದಿಗಿರುತ್ತೇನೆ. ನೀನು ಏನೇ ಬಯಸಿದರೂ ಕೊಡುವ ನಿರ್ಧಾರ ಮಾಡಿದ್ದೇನೆ. ಎಲ್ಲಿಗೆ ಮುಟ್ಟಬಹುದು ಎಂದು ಗೊತ್ತಿಲ್ಲ.
ನಾಳೆಯಿಂದ ನಿನ್ನ ಬದುಕಿನಲ್ಲಿ ನಾನು ಕೇವಲ ನೆನಪಾಗುತ್ತೇನೆ. ಕಣ್ಣು ತಿಕ್ಕಿಕೊಂಡು, ಕಣ್ಣು ಮುಚ್ಚಿ ತೆರೆದು ಹೊಸ ಬೆಳಕನನು ಕಂಡಂತೆ ಹೊಸ ಜಗತ್ತನ್ನು ನೋಡು. ಆ ಜಗದ ತುಂಬೆಲ್ಲ ನಾನಿದ್ದರೂ, ಅಲ್ಲಿ ನಾನಿರುವುದಿಲ್ಲ.
ಬಹುಶ: ನಿನಗೆ ನನ್ನ ಮಾತುಗಳು ಅರ್ಥವಾಗದೇ ಇರಬಹುದು, ಆದರೆ ಮುಂದೊಂದು ದಿನ ಅರ್ಥವಾಗುತ್ತವೆ ಎಂಬ ನಂಬಿಕೆ ನನಗಿದೆ. ಒಂದೇ ಉಸುರಿನಲ್ಲಿ ಮಾತನಾಡಿದಾಗ ಸುಮ್ಮನೆ ಕುಳಿತುಕೊಂಡೆ,
ಗದ್ದಕ್ಕೆ ಕೈಯೂರಿ ಅಸಹಾಯಕನಾಗಿ .ಕುಳಿತುಕೊಂಡೆ.
ನಿನ್ನ ದಿಟ್ಟತನ, ಪ್ರಾಮಾಣಿಕತೆ ನನಗೆ ಅರ್ಥವಾಗಿದ್ದರೆ ಎಷ್ಟೊಂದು ಚಂದಿರುತ್ತಿತ್ತು. ಆದರೆ ಹಾಗಾಗಲಿಲ್ಲ.
ನಿಧಾನವಾಗಿ ಇಬ್ಬರೂ ಎದುರಿಗಿದ್ದ ದೇವರ ಗುಡಿಯನ್ನು ಹೊಕ್ಕಾಗ ಕತ್ತಲು. ಬರೀ ಕತ್ತಲು ದೇವರ ಮುಂದೆ ಬೆಳಗುತ್ತಿದ್ದ ದೀಪದಂತೆ ನಿನ್ನ ಕಣ್ಣುಗಳು ಪ್ರಕಾಶಿಸುತ್ತಿದ್ದವು.
ನಿಧಾನವಾಗಿ ಆಪ್ತವಾಗಿ ದೇವರ ಸನ್ನಿಧಿಯಲ್ಲಿ ಪವಿತ್ರವಾಗಿ ಮಗುವನ್ನು ಮುದ್ದಿಸಿದಂತೆ ಹಣೆ, ಕೆನ್ನೆ, ತುಟಿ ಮೇಲೆ ನರ್ತಿಸಿದ ನಿನ್ನ ತುಟಿಗಳ ಬಿಸಿಗೆ ಮತ್ತೇರಲಿಲ್ಲ.
ಮುತ್ತು ಕೇವಲ ಮತ್ತೇರಿಸುತ್ತದೆ ಅಂದುಕೊಂಡಿದ್ದೆ ಆದರೆ ಅಲ್ಲಿ ಮೌಲ್ಯವಿದೆ ಎಂಬುದನ್ನು ನೀನು ತೋರಿಸಿ ಹೊಸ ಭಾಷೆಗೆ ನಾಂದಿಹಾಡಿದೆ. ಕೇಳು ಏನು ಬೇಕು, ಕೊಡುತ್ತೇನೆ ಎಂದಾಗ ಗಳ-ಗಳ ಅಳಲು ಶುರು ಮಾಡಿದೆ. ಆಗ ಕೇಳಲು - ಹೇಳಲು ನನ್ನಬಳಿ ಏನೂ ಇರಲಿಲ್ಲ. ಸಂಪೂರ್ಣ ಖಾಲಿಯಾಗಿದ್ದೆ. ಆ ಖಾಲಿತನದ ತುಂಬೆಲ್ಲನಿನ್ನ ಪ್ರೀತಿ ಆವರಿಸಿತ್ತು.
ನಿನ್ನ ನಿರೀಕ್ಷೆಯನ್ನು ಮೀರಿಸಿದ ಕಾಣಿಕೆಯನ್ನು ನೀಡಲು ನಿರ್ಧರಿಸಿದೆ. ಪ್ರೀತಿ ಹೃದಯದಲಿ. ನರನಾಡಿಗಳಲಿ ಹರಿಯುತ್ತಿದೆ. ಆದರೆ ಪ್ರವಹಿಸುವ ಪ್ರೀತಿ ಕಣಗಳು ಯಾರಿಗೂ ಕಾಣುವುದಿಲ್ಲ. ಆದರೆ ಅವುಗಳನ್ನು ಸಾಂಕೇತಿಕವಾಗಿ ತೋರಿಸಲು ಹಪಹಪಿಸುತ್ತೇವೆ.
ತುಂಬಾ ಪ್ರಯಾಸಪಟ್ಟು ಹಣ ಹೊಂದಿಸಿ ತಂದಿದ್ದ ಕಾಣಿಕೆಯನ್ನು ಹೊರತಗೆದೆ. ಕಾಲುಂಗುರ, ಬೆಳ್ಳಿಗೆಜ್ಜೆಗಳನ್ನು ಅರಿಶಿಣ ಕೊಂಬಿನಲ್ಲಿ ಭದ್ರವಾಗಿ ಅಡಗಿಸಿಟ್ಟಿದ್ದೆ.
ನಿನ್ನ ಕಂಗಳ ಹೊಳಪನ್ನು ಮತ್ತೊಮ್ಮೆ ಅನುಭವಿಸಿದೆ.
ನೀನು ಅಷ್ಟೇ ಸಂಭ್ರಮದಿಂದ ಮದುವೆಯ ಸಂಕೇತವಾಗಿ ತೊಟ್ಟಿದ್ದ ಕಾಲುಂಗರ ತೆಗೆದು ಅಲ್ಲಿ ನಾನು ತಂದಿದ್ದ ಉಂಗುರವನ್ನು ತೊಡಿಸಲು ಹೇಳಿದಾಗ ಬೆಚ್ಚಿಬಿದ್ದೆ.
ಪ್ರೀತಿಯ ಯುದ್ಧದಲಿ ಎಲ್ಲವೂ ಸುಂದರ' ಎಂಬ ಮಾತು ಮತಿಸಿತು. ಮಾರ್ಧನಿಸಿತು.
ಅಲ್ಲ ಇವುಗಳನ್ನು ತಗೆದದ್ದು ಯಾರಿಗಾದರೂ ಗೊತ್ತಾದರೆ ಎಂದಾಗ, ನೀ ನಕ್ಕು ಸುಮ್ಮನಾದೆ.ಮದುವೆಯಲ್ಲಿ ತೊಟ್ಟಿದ್ದ ಕಾಲುಂಗುರ - ಗೆಜ್ಜೆಗಳನ್ನು ಸಂತಸದಿಂದ, ನಿರ್ಲಿಪ್ತ ಭಾವದಿಂದ ತಗೆದು ನನ್ನ ಕ್ಯಗಿಟ್ಟೆ.
ಸಾಧ್ಯವಾದರೆ ಇವುಗಳನ್ನು ಕಾಪಾಡು, ತುಂಬಾ ತೊಂದರೆ ಎನಿಸಿದರೆ ದೂರ-ಎಲ್ಲಿಗಾದರೂ ಸಾಗಿಸಿ ಬಿಡು ಎಂದಾಗ ಏನಾಗಿರಬೇಡ.
ದೇವರ ಸನ್ನಿಧಿಯಲ್ಲಿ ನಾನೇ ಕಾಲುಂಗುರ ಗೆಜ್ಜೆ ತೊಡಿಸಿ ಮನದ ಮದುವೆಯ ಮಲ್ಲಿಗೆ ಸುರಿದೆ. ಮತ್ತೊಮ್ಮೆ ಬಿಗಿದಪ್ಪಿ ಪ್ರೀತಿಯ ಮಳೆ ಸುರಿದೆ. ಅಲ್ಲಿನ ನಿಷ್ಕಾಮ ಪ್ರೀತಿ ಎಲ್ಲಿ ಹುಡುಕಿದರೂ, ಯಾವ ಮಾರುಕಟ್ಟೆಯಲ್ಲೂ ಈಗ ಸಿಗುವುದಿಲ್ಲ. ಈಗಲೂ ಸಿಗುತ್ತಿಲ್ಲ.
ಮೊನ್ನೆ ನಡೆದದ್ದು ಶಾಸ್ತ್ರದ ಮದುವೆ. ಇಂದು ನಡೆದದ್ದು ಆಚಾರಗಳನ್ನು ಮೀರಿದ ವಿಚಾರದ ಮದುವೆ ಎಂದ ನಿನ್ನ ಭಾಷೆ ಅರ್ಥವಾಗಲಿಲ್ಲ.
ಪರಸ್ಪರ ಕೈ ಹಿಡಿದು ಏಳಲ್ಲ ಹತ್ತಾರು ಸುತ್ತು ದೇವರಿಗೆ ಸುತ್ತು ಹಾಕಿದರೂ ಸುಸ್ತಾಗಲಿಲ್ಲ. ದೇವರಿಗೆ ನಮಿಸುವ ಭಕ್ತಿ. ಶ್ರದ್ಧೆ ಇರದಿದ್ದರೂ ಪ್ರೀತಿಗೊಂದು ಏಕಾಂತವನ್ನು ದೇವರು ದೇವಾಲಯ ಸೃಷ್ಟಿಸಿತ್ತು.
ಇರುವ ಒಂದು ವಾರ ದಿನಾ ಭೇಟಿ ಆಗೋಣ-ಮನಸ್ಸನ್ನು ತಿಳಿಗೋಳಿಸಿಕೋ, ಹೊಸ ಬದುಕಲಿ ಯಶಸ್ವಿ ಪಡೆದು ನನ್ನ ಪ್ರೀತಿಯ ನೆನಪನ್ನು ಚಿರಸ್ಥಾಯಿಗೊಳಿಸು ಒಂದು ವೇಳೆ ನೀನು ಬದುಕಲ್ಲಿ ವಿಫಲನಾದರೆ ನನ್ನನ್ನು ಕೊಂದಂತೆ ಎಂಬುದನ್ನು ಮರೆಯಬೇಡ ಎಂದಾಗ ಸುರಿದ ಕಣ್ಣೀರ ಧಾರೆ ಕೇವಲ ಮೂಕ ಸಾಕ್ಷಿಯಾದವು
Tuesday, November 2, 2010
ಹೊಸ ನೀರ ಸವಿಯುವ ಕನಸು
ಮೇ ಮೊದಲ ವಾರದ ಮದುವೆಗೆ ಸಿದ್ಧತೆಯಲ್ಲಿ ನೀನಿರುವ ಗೊಂದಲ ಅರ್ಥಮಾಡಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಹೊಸ ಸಮಸ್ಯಯನ್ನು ನಾವಿಬ್ಬರು ಎಳೆದುಕೊಂಡಿದ್ದೆವು.
ಪರೀಕ್ಷಾ ಪರಿಣಾಮ ಬೀರುವ ಮುನ್ನ ನಿನ್ನ ಮದುವೆ. ಒಬ್ಬ ಗೆಳೆಯನಾಗಿ, ಹಿತೈಷಿಯಾಗಿ ಉಳಿದಿದ್ದರೆ-ನನ್ನಲ್ಲಿಯೂ ಆ ಸಂಭ್ರಮವಿರುತ್ತಿತ್ತು.
ಆದರೆ ನಾನೀಗ ಕೇವಲ ಗೆಳೆಯನಾಗಿ ಉಳಿದಿರಲಿಲ್ಲ. ಅದೇ ನಮ್ಮಿಬ್ಬರ ದುರಂತ. ಪರೀಕ್ಷೆ ಮುಗಿದ ಒಂದೆರಡು ಸುಧೀರ್ಘ ಭೇಟಿಗಳಾದವು. ಏಕಾಂತ ನಮ್ಮ ಪಾಲಿಗೆ ಸುಲಭವಾಗಿ ದೊರಕುವ ಕಾರಣಕ್ಕೆ ನನ್ನ ಮನಸ್ಸು ಹೆಚ್ಚು ಚಂಚಲವಾಗುತ್ತಿತ್ತು. ಬೇಕಾದಾಗ, ಬೇಕಿದ್ದೆಲ್ಲ ಸಿಗುವ ವಾತಾವರಣವಿದ್ದರೆ ಮನುಷ್ಯ ಹೆಚ್ಚು ಚಂಚಲನಾಗುತ್ತಾನೆ.
ಮತ್ತದೇ ಹಟ. ನೀ ಕಾಲಾವಕಾಶ ಕೇಳಿದಾಗ ಎಲ್ಲಿಲ್ಲದ ಆಕ್ರೋಶ, ಕಳೆದು ಕೊಳ್ಳುವ ಭಯ. ನಾನಾಗಲೇ ಕುದ್ದು ಹೋಗಿದ್ದೆ. ಕಳೆದುಕೊಳ್ಳುವುದನ್ನು ನೆನಸಿಕೊಂಡರೆ ಸಾಕು ಜೀವಂತ ಹೆಣವಾಗುತ್ತಿದ್ದೆ.
ಕಾಣಿಕೆ ನೀಡಲು ಕಾಲಾವಕಾಶ ಕೇಳಿದ್ದರ ಕಾರಣ ಅರ್ಥವಾಗಲೇ ಇಲ್ಲ.
ನಿರಾಕರಿಸಿದಾಗ ಜೋರಾಗಿ ಕೆನ್ನೆಗೆ ಬಾರಿಸಿದೆ.
ಮೊಟ್ಟ ಮೊದಲ ಬಾರಿಗೆ ನಾನು ಕ್ರೂರಿಯಾಗಿದ್ದೆ. ನೀನೆಲ್ಲ ಇದನ್ನು ಊಹಿಸಿರಲಿಲ್ಲ. posessive ನ ಇನ್ನೊಂದು ಕರಾಳ ಮುಖದ ಪರಿಚಯ. ಚೇತರಿಸಿಕೊಳ್ಳುವ ಶಕ್ತಿ ನಿನ್ನಲ್ಲಿರಲಿಲ್ಲ. ನಡುಗಿ ಹೋದೆ. ಸುಂದರವಾದ ನಳನಳಿಸುವ ಕೆನ್ನೆಗಳ ಮೇಲೆ ಪೆಟ್ಟಿನ ರುದ್ರ ನರ್ತನವನ್ನು ನೀನು ನೀರಿಕ್ಷಿಸಿರಲಿಲ್ಲ. ಒಂದು ಕ್ಷಣ ಆಘಾತವಾಯಿತು. ನನ್ನನ್ನು ತೀವ್ರವಾಗಿ ನಿರಾಕರಿಸುವ ಎಲ್ಲ ಸಾಧ್ಯತೆಗಳಿದ್ದರೂ, ನೀನು ಅಂದು ಯಾಕೆ ಸಹಿಸಿಕೊಂಡೆಯೆಂಬುದೇ ಅರ್ಥವಾಗಲಿಲ್ಲ.
ಜೋರಾಗಿ ಅಳಲು ಶುರು ಮಾಡಿದೆ. ನನ್ನ ತಪ್ಪಿನ ಅರಿವಾಯಿತು. ನೀನು ನನ್ನ ಆತಂಕವನ್ನು ಅರ್ಥಮಾಡಿಕೊಂಡಿದ್ದರಿಂದ, ಅಗಲುವಿಕೆಯ ಹಿಂಸೆಯನ್ನು ಗ್ರಹಿಸಿದ್ದರಿಂದ, ಕೆನ್ನೆಯ ಪೆಟ್ಟು ಯಾವ ಲೆಕ್ಕ ಅನಿಸಿರಬೇಕಲ್ಲವೆ?
ಒಂದೆರಡು ತಾಸು ಪರಸ್ಪರ ಅಳು-ಸಮಾಧಾನ. ಆದರೂ ಸಮಸ್ಯಗೆ ಉತ್ತರ ಸಿಗಲಿಲ್ಲ. ಹುಡುಕುವ ಸಾಮರ್ಥ್ಯ ನನ್ನಲ್ಲಿ ಇರದ ಪ್ರಾಯವದು.
But you were quite matured to accept the situation. ನನ್ನನ್ನು ಸಮಾಧಾನಿಸಿ ಒಂದು ಒಪ್ಪಂದಕ್ಕೆ ಬಂದೆ. ಅದನ್ನು ನಾನು ಸಹನೆಯಿಂದ ಒಪ್ಪಿಕೊಂಡೆ.
ಮದುವೆ ಮುಗಿಸಿ ಊರಿಗೆ ವಾಪಾಸಾಗುತ್ತೇನೆ, ನಿನಗೆ ಸಹನೀಯ ಅನಿಸಿದರೆ ಮದುವೆಗೆ ಬಾ ಇಲ್ಲದಿದ್ದರೆ ಬೇಡ ಎಂದ ನಿನ್ನ ವಾಸ್ತವದ ಮಾತುಗಳಲ್ಲಿ ಎಂತಹ ಅರ್ಥವಿತ್ತು.
ನಿನ್ನನ್ನು ನೋಯಿಸಿದ್ದಕ್ಕೆ ಕ್ಷಮೆ ಕೋರಿ ಅಪರಿಮಿತ ವಿಶ್ವಾಸದಿಂದ ನಿರ್ಗಮಿಸಿದೆ. ಮದುವೆಯಾಗಿ ವಾಪಾಸು ಬರುತ್ತೇನೆ. ಒಂದು ವಾರ ನಾನು ಗಂಡನ ಮನೆಗೆ ಹೋಗಲು ಕಾಲಾವಕಾಶವಿರುತ್ತದೆ. ಆ gap ನಲ್ಲಿ ನಿನ್ನನ್ನು ಖಂಡೀತಾ ಭೇಟಿ ಆಗುವೆ.
ನಿನ್ನ ಆಸೆ ಈಡೇರಿಸುವೆ. ಆ ಕಾಣಿಕೆ ನನ್ನ ಆಯ್ಕೆ ಅಲ್ಲ. ಅದು ನಿನ್ನ ಆಯ್ಕೆಯಾಗಿರುತ್ತದೆ. ಆದದ್ದಾಗಲೀ ಬಂದದ್ದನ್ನು ಎದುರಿಸುತ್ತೇನೆ. ಆದರೆ ಕೊಟ್ಟ ಮಾತಿಗೆ ತಪ್ಪುವುದಿಲ್ಲ. ಎಂದಾಗ ದಿವ್ಯಮೌನಿಯಾದೆ.
ಹಾಗಾದರೆ ನಾನು ಬಯಸಿದ ಕಾಣಿಕೆಯಾದರೂ ಏನು ಎಂಬುದು ನನಗಂತೂ ಗೊತ್ತಿರಲಿಲ್ಲ. ನೀನು ಏನು ಕೊಡಲು ಬಯಸುತ್ತಿಯಾ ಎಂಬುದನ್ನು ಊಹಿಸಿರಲಿಲ್ಲ. ಮದುವೆಗೆ ಬರುವ ನಿರ್ಧಾರವನ್ನು ನನ್ನ ಕೊರಳಿಗೆ ಹಾಕಿದ್ದು ಕಠೀಣವೆನಿಸಿತು. ಅರೆ ಹುಚ್ಚನಂತಾಗಿ, ಅರೆ ಪ್ರಜ್ಞಾವಸ್ಥೆಯಲ್ಲಿದ್ದ ನನಗೆ ಮದುವೆ ಮಂಟಪದಲ್ಲಿ ಕಾಣಿಸಿಕೊಳ್ಳುವ ಮನಸ್ಸಿರಲಿಲ್ಲ.
ಆ ಶಕ್ತಿಯೂ ಉಳಿದಿರಲಿಲ್ಲ.
ಕಳೆದುಕೊಳ್ಳುವ ವಾಸ್ತವದೆದುರು ಬೇರೊಂದು ದುರಂತವಿರಲಿಲ್ಲ. ಮುಂದಿನ ದಿನಗಳನ್ನು ಕಳೆಯುವದಾದರೂ ಹೇಗೆ? ಕಾಲೇಜು ವ್ಯಾಸಂಗ ಹೊಸ ಹಾದಿ ಸಿಗಬಹುದೆಂದು ನೀ ಅಂದುಕೊಂಡಿದ್ದೆ.
ಮದುವೆ ಅದ್ಧೂರಿಯಾಗಿ ನಡೆಯಿತು. ಗಂಡ ಸುಂದರವಾಗಿದ್ದಾನೆ ಎಂಬ ಗೆಳೆಯರ ವಾರ್ತೆ ನನ್ನನ್ನು ಇನ್ನೂ ವಿಚಲಿತನಾಗಿಸಿತು.
ಮದುವೆ ಮುಗಿದು ವಾರದ ಅವಧಿಯಲಿ ನಿನ್ನ ಭೇಟಿಗಾಗಿ ಕಾಯುತ್ತಿದ್ದೆ. ನೀನು ಈಗ ಹೊಸ ರೂಪದಲ್ಲಿ ಬರುತ್ತಿ ಎಂಬುದನ್ನು ನೆನೆದಾಗ ಹೇಗಾಗಿರಬೇಡ? ಕೊರಳಲ್ಲಿ ತಾಳಿ, ಮೈತುಂಬಾ ಸೀರೆ, ಝಗಮಗಿಸುವ ನಿನ್ನ ಭಿನ್ನ ರೂಪ ನೋಡುವ ಕುತೂಹಲವಿತ್ತು.
ಹೊಸ ನೀರ ಸಿಹಿಯ ಸವಿಯುವ ಕಾತರವಿರಬಹುದಲ್ಲವೆ?