Friday, September 14, 2012

ಚಿತ್ರದುರ್ಗ ಮಹಾರಾಣಿ, ಮಹಾರಾಜನ ನಂಟು


ಮಹಾರಾಣಿ ಪಿ.ಯು, ಮಹಾರಾಜ ಪದವಿ ಕಾಲೇಜುಗಳನ್ನು ಅಲ್ಲಿನ ಹಿಂದುಳಿದ ಜನಾಂಗದ ನಾಯಕ ಡಿ.ಬೋರಪ್ಪ ಆರಂಭಿಸಿದ್ದರು.  ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ್ದ ಕಾಲೇಜಿನಲ್ಲಿ ನನಗೆ ಕೈತುಂಬಾ ಸಂಬಳ ಸಿಗದಿದ್ದರೂ, ಮೈತುಂಬಾ ಕೆಲಸವಂತು ಇತ್ತು.

ಮೊದಲ ವರ್ಗಕ್ಕೆ ಹೋಗುವಾಗ ನನಗೆ ಅಷ್ಟೊಂದು ಆತಂಕವಿರಲಿಲ್ಲ.  ವಿದ್ಯಾರ್ಥಿ ದೆಸೆಯಿಂದಲೂ ಭಾಷಣ ಮಾಡಿ ರೂಢಿ ಇತ್ತು.  ಚರ್ಚಾಪಟುಗಳಿಗೆ ಉಪನ್ಯಾಸಕ ವೃತ್ತಿ ಕಠಿಣವೆನಿಸುವುದಿಲ್ಲ. ಆದರೂ ಮೊದಲ ದಿನ ಯಾವ ವಿಷಯ ಆಯ್ಧುಕೊಳ್ಳಬೇಕು ಎಂಬ  ಗೊಂದಲದ ಮಧ್ಯೆ Hhow to learn  English as a Kannada Student? ಎಂಬ ವಿಷಯ ಪಿ.ಯು. ವರ್ಗಕ್ಕೆ ವಿವರಿಸಿದೆ.  ಮೊದಲ ವರ್ಗದಲ್ಲಿಯೇ 250 ವಿದ್ಯಾರ್ಥಿಗಳು, Houseful ವಾತಾವರಣ, ವಿದ್ಯಾರ್ಥಿಗಳ ಮುಖದ ಮೇಲಿನ ಖುಷಿ, ನನ್ನನ್ನು ಗೆಲ್ಲಿಸಿದ ಭಾವನೆ.

ಅಂದೇ B.A. B.Com.B.Sc. ವಿದ್ಯಾರ್ಥಿಗಳನ್ನು ಒಟ್ಟಾಗಿ ಸೇರಿಸಿ ನನಗೆ ತುಂಬಾ ಇಷ್ಟವಾದ Shakespeareನ  True Love Poem ಆಯ್ದುಕೊಂಡೆ.  ಅದನ್ನು ರಸವತ್ತಾಗಿ ಪಾಠ ಮಾಡುತ್ತಿದ್ದ ನನ್ನ ಗುರುಗಳನ್ನು ನೆನಪಿಸಿಕೊಂಡು ಅದೇ ಪರಿಣಾಮದಲ್ಲಿ ಪಾಠ ಮಾಡಿ ಯಶಸ್ಸಿಯೂ ಆದೆ. 

ಕೆಲವೇ ದಿನಗಳಲ್ಲಿ ವಿದ್ಯಾರ್ಥಿಗಳ ಕಣ್ಮಣಿಯಾದೆ.  ಆದರೆ ಹೊಟ್ಟೆಪಾಡು ಕಠಿಣವಾಗಿತ್ತು.  Approval, Grant ಎಂಬ ಪದಗಳ ಪರಿಚಯವಿರಲಿಲ್ಲ.  ಅದೆಲ್ಲ ಮುಗಿದರೆ ನಿಯತ ಸಂಬಳ ಎಂಬ ಕಲ್ಪನೆಯೂ ಇರಲಿಲ್ಲ.  ಕೇವಲ ಪಾಠ ಮಾಡುವುದೊಂದೇ ಗೊತ್ತಿತ್ತು.

ಎಲ್ ಆರ್. ಮುನಿಪಾಟೀಲ ಮನೆಯಲ್ಲಿ ರಾತ್ರಿ ಪ್ರೀತಿಯಿಂದ ಊಟ ಹಾಕಿ, ಖರ್ಚಿಗೆ ಹಣ ಕೊಡುತ್ತಿದ್ದರು.  ಅವರ ಋಣ ನನಗೆ ಈಗಲೂ ಹಾಗೆಯೇ ಇದೆ.  ಕೆಲವೊಂದನ್ನು ಚುಕ್ತಾ ಮಾಡಲಾಗುವುದಿಲ್ಲ. ಸರಕಾರದಿಂದ ನನ್ನ ಹುದ್ದೆಗೆ ಬೇರೆಯವರು ಬಂದ ಮೇಲೆ ಅಲ್ಲಿಂದ ಬಿಡುವುದು ಅನಿವಾರ್ಯವಾಯಿತು.

ಅದು ಗೊತ್ತಿದ್ದರೂ ತುಂಬಾ ಲವಲವಿಕೆಯಿಂದ ಪಾಠ ಮಾಡಿದೆ.  ಚಿತ್ರದುರ್ಗ ಗ್ರಾಮೀಣ ವಿದ್ಯಾರ್ಥಿಗಳು ತುಂಬಾ ಮುಗ್ಧರು.  ಕೋಟೆಯೆದುರಿಗಿನ ಕಾಲೇಜು, ಆ ಕಾಲೇಜಿನ ತುಂಬೆಲ್ಲ ಹರಡಿರುವ ವಿದ್ಯಾರ್ಥಿಗಳು, ಮುಂಜಾನೆ  ನಾಯಿಗೆ ಬ್ರೆಡ್ ಹಾಕುತ್ತಾ ನಿಂತಿರುತ್ತಿದ್ದ  ಚೇರ್ ಮನ್ ಈಗಲೂ ನನ್ನ ಕಣ್ಣಮುಂದೆ ಹಾದು ಹೋಗುತ್ತಾರೆ.

Monday, September 10, 2012

ಎರಡು ದಶಕಗಳ ಶಿಕ್ಷಕ ವೃತ್ತಿಯ ನೆನಪುಗಳು.


          ಈ ಬಾರಿ ಶಿಕ್ಷಕ ದಿನಾಚರಣೆಯನ್ನು ಆಚರಿಸುವಾಗ ಶಿಕ್ಷಕನಾಗಿರಲಿಲ್ಲವೆ?  ಈ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.

          1989 ರಿಂದ 2010ರ ಜೂನ್ ತನಕ ನಿರಂತರ ಶಿಕ್ಷಕ ವೃತ್ತಿಯ ಪಯಣ ನಿಜವಾಗಲೂ ಸ್ಮರಣೀಯ.  2010 ಜೂನ್ 9ರಂದು ಆದ ಅಪಘಾತ,  ಮುರಿದ ಎಡಗೈ ಶಿಕ್ಷಕ ವೃತ್ತಿಗೆ ತಾತ್ಕಾಲಿಕ ತಡೆ ಒಡ್ಡಿತು.  ಹಲವಾರು ಕಾರಣಗಳಿಗೆ ಅವಕಾಶಗಳಿದ್ದರೂ ಮರಳಲು ಸಾಧ್ಯವಾಗಲಿಲ್ಲ.  ಆದರೆ, ವೃತ್ತಿಯ ಹಚ್ಚ ಹಸಿರು ನನ್ನಿಂದ ಮರೆಯಾಗಲು ಅಸಾಧ್ಯ.

          ಇಂಗ್ಲಿಷ್ ಎಂದರೆ ಭಯದ ವಾತಾವರಣದಲ್ಲಿದ್ದ ನನಗೆ 1981ರಲ್ಲಿ ಪ್ರವೇಶ ಪಡೆದ ಕರ್ನಾಟಕ ಕಾಲೇಜು ಧಾರವಾಡದ ವಾತಾವಣ ಹೊಸ ಭರವಸೆ ಮೂಡಿಸಿ ಭಯ ದೂರಾಗಿಸಿತು.  ಅಲ್ಲಿನ ಶಿಕ್ಷಕರು ಆದರ್ಶಪ್ರಾಯರಾದರು. ಡಾ: ಸಿದ್ಧಲಿಂಗ ಪಟ್ಟಣಶೆಟ್ಟಿ, ಇಂಗ್ಲಿಷ್ ವಿಭಾಗದ ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಇಂಗ್ಲಿಷ್  ಮೇಜರ್ ವಿಷಯವಾಗಿ ತೆಗೆದುಕೊಳ್ಳಲು ಪ್ರೇರೆಪಿಸಿದರು. 

          ಆದರೆ ಅದಕ್ಕೆ ಅಗತ್ಯವಿರುವಷ್ಟು ಆಳವಾಗಿ ಓದಲು ಸಾಧ್ಯವಾಗದಿರಲು ಭಾಷಾ ಸಮಸ್ಯೆಯೇ ಕಾರಣ.  ಅಂದು ಸ್ನೇಹಿತರಾಗಿದ್ದ ಅರುಣ ಹಾನಗಲ್ಲ್, ಅನಿತಾರಾವ್ ಇಂಗ್ಲಿಷ್  ಮಾತನಾಡವ ಆತ್ಮವಿಶ್ವಾಸ ತುಂಬಿದರು.  ಆಗ ನಾನು ಇಂಗ್ಲಿಷ್  ಶಿಕ್ಷಕ ಆಗಬಹುದು ಎಂಬ ಭರವಸೆ ಮೂಡಿರಲಿಲ್ಲ.

          ಬದುಕಿಗೆ ಅದರದೇ ಆದ ತಿರುವುಗಳು ಇರುತ್ತವೆ.  ನಾವು ಬದುಕು ಕರೆದುಕೊಂಡು ಹೋಗುತ್ತೇವೆ.  ಅಲ್ಲಿಗೆ ಯಾಕೆ ಹೋಗುತ್ತೇವೆ ಎಂಬುದು ನಮಗೂ ಗೊತ್ತಿರುವುದಿಲ್ಲ. ನನ್ನ ಪಾಡು ಅದೇ ಆಯಿತು.  ಮನೆತನದ  ಅನಿರೀಕ್ಷಿತ ಸಮಸ್ಯೆಗಳ ಕಾರಣದಿಂದ ನೌಕರಿ ಹಿಡಿಯಲೇಬೇಕಿತ್ತು. ಎಂ.ಎ. ಧಾರವಾಡದಲ್ಲಿ ಅಸಾಧ್ಯ ವೆನಿಸಿದಾಗ ಧಾರವಾಡದಲ್ಲಿ ಭೇಟಿಯಾದ ಪ್ರೊ: ಪಿ.ಎಸ್. ರೆಡ್ಡಿ ಸರ್ ಜಗತ್ತಿನಲ್ಲಿ ಬೇಕಾದಷ್ಟು ವಿಶ್ವವಿದ್ಯಾಲಯಗಳಿವೆ, ಕೇವಲ ಧಾರವಾಡ ಒಂದೇ ಅಲ್ಲ ಎಂಬ ಮಾತು ಮುಂದೆ ಹೋಗಲು ಪ್ರೇತೆಪಿಸಿತು.

          ಎಂದೂ ನೋಡದ, ಕೇಳರಿಯದ ಕೆಡಗೆ ನನ್ನ ಪಯಣ ಸಾಗಿತು.  ಡಾ: ಸಿದ್ಧಲಿಂಗ ಪಟ್ಟಣಶೆಟ್ಟಿ ಸರ್ ಕೊಟ್ಟ ಚೀಟಿ ಹಿಡಿದು ಕೊಲ್ಲಾಪುರಕ್ಕೆ ಹೋಗಿ ಡಾ: ಶಾಂತಿನಾಧ ದೇಸಾಯಿಯವರನ್ನು ಕಂಡೆ.  ಅವರ ಕಧೆ, ಕಾದಂಬರಿಗಳನ್ನು  ಆಗಲೇ ಓದಿದ್ದೆ.  ಅವರು ಸಾಂಗ್ಲಿಯ ವಿಲ್ಲಿಂಗ್ಡನ್ ಕಾಲೇಜು ಸೇರಲು ತಿಳಿಸಿದಾಗ ಬೆಚ್ಚಿ ಬಿದ್ದೆ.  ಆಗ ನನಗೆ ಮರಾಠಿ, ಹಿಂದಿ ಭಾಷೆಗಳು ಬರುತ್ತಿರಲಿಲ್ಲ.  ಭಯ ಭೀತರಾಗಿ ಒಂಟಿಯಾಗಿ ಚಿಂತಿಸಿದೆ, ಹೋಗುವ ಅನಿವಾರ್ಯವಿತ್ತು.

          ವಿಲ್ಲಿಂಗ್ಡನ್ ಕಾಲೇಜು ಸೇರಿದೆ.  ಹೊಚ್ಚ ಹೊಸ ವಾತಾವರಣ ತಿಳಿಯದ ಮರಾಠಿ, ಧಾರವಾಡ ಎಂ.ಎ. ಕಷ್ಟಪಟ್ಟು ಎರಡು ವರ್ಷ ಪೂರೈಸಿದೆ.  ಒಳ್ಳೇ ಫಲಿತಾಂಶ ಬರಲಿಲ್ಲ.  54.5%ಗೆ ಮೀಸಲಾದೆ.  55% ಆಗಿದ್ದರೆ, ಸರಕಾರಿ ನೌಕರಿ ಸಿಗುತ್ತಿತ್ತು.  ಅದೃಷ್ಟ ಆಡಿದಂತೆ ಆಡಿದೆ.  ಅಮೆರಿಕನ್ ಸಾಹಿತ್ಯದಲ್ಲಿ ಮರು ಪರೀಕ್ಷೆ ತೆಗೆದುಕೊಳ್ಳುವ ಮೊದಲು ಆತ್ಮ ವಿಶ್ವಾಸ ಮೂಡಿಸಿಕೊಂಡು ವೃತ್ತಿಗೆ ಧುಮುಕಲು ತೀರ್ಮಾನಿಸಿದೆ. 

ಎಲ್. ಆರ್. ಮೂಲಿಪಾಟೀಲ್ ನಮಗೆ ಗೊತ್ತಿದ್ದ ಪೋಲಿಸ್  ಅಧಿಕಾರಿ ಅವರು ಚಿತ್ರದುರ್ಗದಲ್ಲಿ ಸಿ.ಪಿ.ಎ. ಆಗಿದ್ದರು.  ಅಲ್ಲಿನ ಡಿ. ಬೋರಪ್ಪನವರು ಸ್ಥಾಪಿಸಿದ  ಮಹಾರಾಜ ಹಾಗೂ ಮಹಾರಾಣಿ ಕಾಲೇಜುಗಳಲ್ಲಿ ಅರೆಕಾಲಿಕ ನೌಕರಿ ಕೊಡಿಸಿ ವಾಸ್ತವ, ಊಟಕ್ಕೆ ವ್ಯವಸ್ಥೆ ಮಾಡಿದರು.  ಚಿತ್ರದುರ್ಗದಲ್ಲಿ ಒಂದು ವರ್ಷ, ಗದುಗಿನ ಜೆ.ಡಿ.ಕಾಲೇಜಿನಲ್ಲಿ, ಮುಂಡರಗಿಯ ಕೆ.ಆರ್. ಬೆಲ್ಲದ ಕಾಲೇಜಿನಲ್ಲಿ,  ಅಂತಿಮವಾಗಿ ಫುಲ್ ಟೈಮ್ ಕೆ.ಎಲ್.ಇ. ಮಹಿಳಾ ಕಾಲೇಜಿನಲ್ಲಿ ಏಕಕಾಲಕ್ಕೆ ಕೆಲಸ ಮಾಡಿದೆ. 

          ಆಗಿದ್ದ ಛಲ, ಆತ್ಮವಿಶ್ವಾಸ, ಅನಿವಾರ್ಯತೆ ಹಾಗೂ ಪರಿಶ್ರಮವನ್ನು ನೆನಪಿಸಿಕೊಂಡರೆ ಬೆಳಗಾಗುತ್ತದೆ.  ಆಗ ನನಗೆ ಗದುಗಿನಲ್ಲಿ ಜನ ನನ್ನನ್ನು ಪ್ರೀತಿಯಿಂದ siddu yapalaparvi English lecturer of Gadag  Betageri. ಎನ್ನುತ್ತಿದ್ದರು.  ಅರೆಕಾಲಿಕ ವೃತ್ತಿ ನನ್ನ ಹೊಟ್ಟೆಯನ್ನು ತುಂಬಿ ಹೊಸ ಜಗತ್ತನ್ನು ತೋರಿಸಿತು.

           

 

 

Monday, September 3, 2012

ಸ್ನೇಹ ವೆಂಬ ಹೆಸರಿನ ಅಪಾಯಕಾರಿ ವಾಸ್ತವ


                                                             ದೃಶ್ಯ  __ 1

ಸ್ನೇಹದಲ್ಲಿ ಅಪಾರವಾದ ವಾಸ್ತವ ಸೇರಿದರೆ ಆಗುವ ಅಪಾಯಕ್ಕೆ ನೀನೇ ಸಾಕ್ಷಿ.  ಗುಡಿ ಗುಂಡಾರಗಳಲ್ಲಿ ನಂಬಿಕೆ ಇಲ್ಲದೆ, ದೇವರ ಸರ್ವವ್ಯಾಪಿ ಅಸ್ತಿತ್ವದಲ್ಲಿ ಭಕ್ತಿ ಕಾಣುವ ನನ್ನನ್ನು ದೇವರ ಗುಡಿಗೆ ಎಳೆದಾಗಲೇ ಅಚ್ಚರಿಯಾಯಿತು.

ಅಯ್ಯೊ ಪಾಪ! ಏನೋ ನಿನ್ನ ನಂಬಿಕೆ ಅಂದುಕೊಂಡೆ, ಸಂಕಷ್ಟಿಯ ದಿನದ ಸಂಜೆ ಗಣೇಶನ ಸನ್ನಿಧಾನದಲ್ಲಿ ನನ್ನ ಮೇಲಿನ ವ್ಯಾಮೋಹವನ್ನು ಸಾಕ್ಷೀಕರಿಸಿದ್ದನ್ನು ಅಮಾಯನಂತೆ ನಂಬಿದೆ.

ನಿನ್ನ ಸೌಂದರ್ಯ, ಅಪಾರ ಕಾಳಜಿ ನನಗೆ ಮುಖ್ಯವೆನಿಸದೆ ನಿನ್ನನ್ನು ಒಪ್ಪಿಕೊಂಡೆ, ದೇವಸ್ಥಾನದಿಂದ ಹೃದಯ ಸಿಂಹಾಸನದಲ್ಲಿ ಆಸೀನಳಾಗುವ ಅವಕಾಶ ನೀಡಿ ಹತ್ತಿರ ಪಡೆದುಕೊಂಡೆ.  ಒಂದೇ ರಿಂಗಿಗೆ ರಿಸೀವ್ ಆಗುವ ಫೋನ್ ಗಂಟೆಯಾದರೂ ಕೊನೆಗೊಳ್ಳುತ್ತಿರಲಿಲ್ಲ.
ಗೆಳೆಯ, ನಿನ್ನಲ್ಲಿರುವ ರಾಜಕಳೆ, ರಾಜ ಗಾಂಭೀರ್ಯ ಬಿಸಿ ಅಪ್ಪುಗೆಯಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ ಎಂಬ ಹಿತಕರ ಮಾತುಗಳನ್ನು ಆಪ್ತವಾಗಿ ನಂಬಿದೆ.ನಿನ್ನ ಕರೆ ಬಂದಾಗ ಜಿಂಕೆಯ ಹಾಗೆ ಓಡಿ ಬರೋಣ ಎನಿಸುತ್ತೆ ಅಂತ ಹೇಳಿದ್ದು….. ಹಾಗೆ ಬಂದದ್ದು ಕೂಡಾ ಅಷ್ಟೇ ಸತ್ಯ.
ಆಪ್ತ ನಗೆ, ಗುಪ್ತ ನರಳಾಟ  ಸುಖ ಹುಡುಕುವುದು ಮನುಷ್ಯ ಸಹಜ ದೌರ್ಬಲ್ಯ  ಅದಕ್ಕೆ ನಾನು ಹೊರತಾಗಲಿಲ್ಲ.  ಲಂಡನ್ ಬ್ರಿಡ್ಜ್ ಮೇಲೆ ಕಾರನ್ನು ವೇಗವಾಗಿ ಓಡಿಸುತ್ತಾ ಹಂಚಿಕೊಂಡ ಸಿಹಿ ನೆನಪುಗಳು.
ಮೈ-ಮನಸ್ಸನ್ನು ಹಗುರಾಗಿಸಲು ತೋರಿದ ಉತ್ಸಾಹ ನಾನು ಶಾಶ್ವತ ಅಂದುಕೊಂಡದ್ದು… ಹೀಗೆ ಬದುಕೊಂದು ಸುಂದರ ಸಂಜೆ.  ಪ್ರೀತಿಯ ಸೆಳೆತದಲ್ಲಿದ್ದಾಗ ಉರಿ ಬಿಸಿಲು ಮಟ ಮಟ ಮಧ್ಯಾನ್ಹ ಬರಬಹುದೆಂದು ನಾವ್ಯಾರು ಅಂದುಕೊಳ್ಳುವುದೇ ಇಲ್ಲ.

ಜಿಂಕೆಯ ನಡಿಗೆ ನಿಧಾನವಾಗಿ ಆಮೆ ನಡಿಗೆಯಾಯಿತು.  ಮುಖದ ಮೇಲಿನ ನಗೆ ಮಾಯವಾಯಿತು. ಹತ್ತಾರು ರಿಂಗ್ ಆದರೂ ಫೋನ್ ರಿಸೀವ್ ಆಗಲೇ ಇಲ್ಲ.  ಲಂಡನ್ ಬ್ರಿಡ್ಜ್ ಮೇಲೆ ಕಾರು ವೇಗವಾಗಿ ಓಡಲೇ ಇಲ್ಲ.  ಹೈಡ್ ಪಾರ್ಕ್ ಸುತ್ತಾಟಕ್ಕಾಗಿ ಕಾಲು ಯಾಕೋ ಸುಸ್ತಾದವು.

ಮೈ-ಮನಸು ಹಗುರಾಗುವ ಕ್ರಿಯೆ ನಿಂತೇ ಹೋಯಿತು.

ದೃಶ್ಯ  __ 2


ಈಗ ದ್ವನಿಯು ಕರ್ಕಶವಾಗಿ ಕೋಮಲತೆ ಮಾಯವಾಗಿದೆ.  ಕರೆದಾಗಲೆಲ್ಲ ಓಡಿಬರೋಕೆ ನನಗೇನು ಬೇರೆ ಕೆಲಸ ಇಲ್ಲವೇ? ಇನ್ನೇನು ಒಂದರ್ಧ ಗಂಟೆಯಲ್ಲಿ ಬರುವೆ ಸಹನೆಯಿಂದ ಕಾಯಕಾಗಲ್ವ ಎಂಬ ಮಾತುಗಳಲ್ಲಿನ ಒರಟುತನ ಮೊದಲ ದೃಶ್ಯದಲ್ಲಿ ಕಾಣಿಸುತ್ತಿತಲಿಲ್ಲ.ಸಂಜೆ ರೆಡಿಯಾಗಿರು ಸಾಧ್ಯವಾದರೆ ಬಂದು ಹೋಗುವೆ.  ನನಗೆ ವಿಪರೀತ ಕೆಲಸ ಯಾರನ್ನೊ ನೋಡಬೇಕು, ಎಲ್ಲಿಗೋ ಹೋಗಬೇಕು.  ಜನ ಏನು ನಮ್ಮ ಸಲುವಾಗಿ ಕಾಯುತ್ತಾ ಕೂಡುತ್ತಾರೇನು?   
ಬೇಕೆಂದಾಗ ಸಿಗಲು ಆಗೊಲ್ಲ, ನೀವು ಸ್ವಲ್ಪ ನಮ್ಮ ಕಷ್ಟಾನು ಅರ್ಥಮಾಡಿಕೋಬೇಕು.  ನೂರೆಂಟು ವ್ಯವಹಾರಗಳು, ವ್ಯವಹಾರಕ್ಕಾಗಿ ಜನರನ್ನು ಭೇಟಿ ಆಗಲೇ ಬೇಕು.  ಬರೀ ರೊಮ್ಯಾನ್ಸ್ ನಿಂದ ಹೊಟ್ಟೆ ತುಂಬುತ್ತದೆಯೇ? ಎಂಬ ವಾಸ್ತವದ ಪ್ರಶ್ನೆಗಳು ಸಾಗರದಲೆಗಳಂತೆ ಅಪ್ಪಳಿಸಲು ಶುರು ಆದಾಗ ತಡೆದು ಕೊಳ್ಳಲೇ ಬೇಕಲ್ಲ.
ಹೆಚ್ಚು ವಾದಿಸಿದಾಗ ಬಂದ ಉತ್ತರವೂ ಅಷ್ಟೇ ಭಯಾನಕವಾಗಿತ್ತು.  ನೀವು ತುಂಬಾ possessive ನಿಮ್ಮ way of thinking ಬದಲಾಯಿಸಿಕೊಳ್ಳಬೇಕು ಎಂಬ ಉಪದೇಶ ಬೇರೆ.  ಹೀಗೆ ಉಪದೇಶ ಮಾಡುವಾಗ ನನ್ನ ಮುಖದ ಮೇಲಿನ ರಾಜಕಳೆ ಕಾಣಲಿಲ್ಲವೇನೋ?
ಹೀಗೆ ಪ್ರೀತಿಯೆಂಬ ಭ್ರಮಾಲೋಕದಲ್ಲಿ ಹತ್ತು ಹಲವಾರು ಅನುಭವಗಳು ಕಿರಿ ಕಿರಿಗಳು ನಿಮಗೆ ಬೇಕೆಂದರೆ ದೃಶ್ಯ ಒಂದರ ಮಾತುಗಳನ್ನು ನಂಬಿ ಕಷ್ಟ ಅನುಭವಿಸಲೇ ಬೇಕು.
ಚಾರಿತ್ರ್ಯ ಚರಿತ್ರೆ ಗೊತ್ತಿಲ್ಲದವರೊಂದಿಗೆ ಅತೀಯಾದ ಸಲಿಗೆ, ಮೈ-ಮನಸುಗಳ ಹಂಚಿಕೊಳ್ಳುವ ಮುನ್ನ ಅತಿಯಾದ ಎಚ್ಚರಿಕೆ ಇರಲಿ. ವಾಸ್ತವಾದ ಹೆಸರಿನಲ್ಲಿ ಯ
 
ಯಾರಾದರೂ ಗುಟ್ಟಾಗಿ ಒದ್ದು ಹೋದಾಗ ಬಿದ್ದ ಒದೆಯನ್ನು ಬೇರೆಯವರೊಂದಿಗೆ ಹೇಳಿಕೊಳ್ಳವುದು ಕಷ್ಟ!  ಬೇರೆಯವರ ಚಾರಿತ್ರ್ಯ ಹಾಗೂ ಚರಿತ್ರೆ   ಕಂಡು ಪ್ರೀತಿಸುವ ವ್ಯವಧಾನ ಹೃದಯಕ್ಕೆ ಇರುವುದಿಲ್ಲವಾದರೂ ಒಂದು ಕ್ಷಣದ ಈ ತರಹದ ಆತಂಕದ ಗುಮಾನಿ ನಿಮ್ಮನ್ನು ನೋವಿನಿಂದ ರಕ್ಷಿಸಬಹುದು ಎಂಬ ಸಣ್ಣ ನಂಬಿಕೆ ಅಷ್ಟೆ!!     

ಪ್ರೀತಿಯೊಂದೇ ಸಾಲದು……………………………


 
ನಿತ್ಯ ಬದುಕಿನಲ್ಲಿ ಪ್ರೀತಿ ಜೀವ ದ್ರವ್ಯವಾಗಿದೆ.  ಪ್ರೀತಿಯಿಲ್ಲದೆ ಏನನ್ನೂ ಮಾಡಲಾಗುವುದಿಲ್ಲ ಎಂಬುದು ಪರಮ ಸತ್ಯ.

ಸ್ನೇಹಿತರು, ಗೆಳೆತಿಯರು, ಬಂಧುಗಳು, ಸಹೋದ್ಯೋಗಿಗಳು ಎಲ್ಲರನ್ನು ಪ್ರೀತಿಯಿಂದ ಗೆಲ್ಲಬೇಕೆಂದು ಬಯಸುತ್ತೇವೆ.  ನಮ್ಮ ಖುಷಿ ಅಲ್ಲಿಯೇ ಇರುತ್ತದೆ ಕೂಡಾ!  ಆದರೆ ನಿಮ್ಮ ಸುತ್ತಲಿನ ಜನರ ಬಂಧನ ಆಳವಾಗಿರಬೇಕಾದರೆ, ನಿಮ್ಮ ಬಾಂಧವ್ಯ ಕೊನೆತನಕ ಇರಬೇಕು ಎಂಬುದಾದರೆ ಕೇವಲ ಪ್ರೀತಿಯೊಂದೆ ಸಾಲದು, ಪ್ರೀತಿಯ ಗೊಡೆಯು ಕುಸಿಯಬಾರದೆಂದರೆ ಅದನ್ನು ವಿಶ್ವಾಸವೆಂಬ ಗಾರೆಹಾಕಿ ಪ್ಲಾಸ್ಟರ್ ಮಾಡಲೇಬೇಕು.
ನಮ್ಮ ಬಹುಪಾಲು ಸಂಬಂಧಗಳು ಬಹುಬೇಗ ಕುಸಿಯಲು ವಿಶ್ವಾಸದ ಕೊರತೆಯೇ ಕಾರಣ. ಪ್ರೀತಿ ವಿಶ್ವಾಸವೆಂಬ ಜೋಡಿ ಪದ ಸಂಯೋಜನವಾಗಿರುವ ಮೂಲ ಕಾರಣವೂ ಇದೆ.  ಆದರೆ ನೀವು ವಿಶ್ವಾಸದಿಂದ  ಪ್ರೀತಿಯನ್ನು ಬೇರ್ಪಡಿಸಿದಾಗಲೆಲ್ಲ, ಪ್ರೀತಿಯ ಗೋಡೆಯಲ್ಲಿ ಬಿರುಕು ಕಾಣಿಸುತ್ತದೆ.
ನಮ್ಮ ಬಂಧುಗಳು ಗೆಳೆಯರು, ಹೆತ್ತವರು ನಮ್ಮನ್ನು ತುಂಬಾ ಪ್ರೀತಿಸುತ್ತಾರೆ.  ಆದರೆ ಬರು ಬರುತ್ತಾ ಏನೋ ಸಣ್ಣ ಗುಮಾನಿಯಿಂದಾಗಿ ವಿಶ್ವಾಸದ ಕೊರತೆ ಉಂಟಾಗಿ ಬಿಡುತ್ತದೆ. ಪಾಲಕರು ಮಕ್ಕಳ ಮೇಲೆ ಎಷ್ಟೇ ಪ್ರೀತಿಯಿದ್ದರು ಹೆಂಡತಿ ಬಂದ ಮೇಲೆ ಮಕ್ಕಳ ಮೇಲೆ ಅನುಮಾನಿಸಲು ಶುರು ಮಾಡುತ್ತಾರೆ.  ಇದಕ್ಕೆ ಕಾರಣ ವಿಶ್ವಾಸದ ಕೊರತೆ, ಪ್ರೀತಿ ಕೊರತೆಯಿಂದಲ್ಲ ಎಂಬುದು ಅಷ್ಟೇ ಕುತುಹಲಕಾರಿ.
ವಿಶ್ವಾಸದ ಬಲದಿಂದ ಕೂಡಿದ ಪ್ರೀತಿ ಗಟ್ಟಿಯಾಗಿ ನೆಮ್ಮದಿ ಕೊಟ್ಟರೆ,  ವಿಶ್ವಾಸವಿಲ್ಲದ ಪ್ತೀತಿ ಕೇವಲ  possessiveness ಆಗಿಬಿಡುತ್ತದೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಎಂದು ಅಂಗಲಾಚಿ ಕಿರುಚಾಡುವವರಿಗೆಲ್ಲ ವಿಶ್ವಾಸದ ಕೊರತೆಯಿಂದಾಗಿ ಕೇವಲ INFATUATE ಆಗಿ, possessive ಆಗಿ ನೋವು, ಹಿಂಸೆ ಅನುಭವಿಸುತ್ತಾರೆ.ಕಿರಿ ಕಿರಿಯೆನಿಸುವ ಪ್ರೀತಿಯೆಂಬ ಹಾಲಿಗೆ ವಿಶ್ವಾಸವೆಂಬ ಜೇನ ಬೆರೆಸಿ ಬದುಕು ರುಚಿಯಾಗಿಸೋಣ.
     

Friday, August 31, 2012

The Cops dress knocked my mind


                Young man was walking in street with confidence.  He introduced himself as a cop once,   but left the job to protect his ideology of anticorruption.  The entered the politics to clean the  image  of society through the low making way.

                But unfortunately he did not.  Then I felt for him tried to give him better position.            I introduced him to senior politician and requested to fulfill his desire.

                I too felt that I did good job.  That is the  way  of fools to think so… ( Here I am that fool).

                Youngman grew by wing all methods,  got himself quite comfortable position.  His tongue became long and long.

                He has practiced to forget me, take a diseased person.  Sometimes he could not recognize me also.  Now I feel pity for myself.  I think I am the cause for his ill health.

                Now he is flying in sky like colourful kite.  I wish him all success in his future even without remembering   me . I wish him speedy recovery.

                But I am in confusion whether it is true or dream.

Thursday, August 30, 2012

ನಂಬಿ ಕೆಡೋಣ ಬನ್ನಿ


        ನಂಬಿ ಕಟ್ಟವರಿಲ್ಲ  ಎಂಬ ದಾಸರ ವಾಣಿ ವರ್ತಮಾನದಲ್ಲಿ ಹೇಗೆ ಮಾರಾಯರೇ ನಂಬುವುದು. ಏನನ್ನು,ಯಾರನ್ನು,ಯಾಕೆ ಎಂಬ ಪ್ರಶ್ನೆಗಳು ನಿತ್ಯ ಸುಳಿದಾಡುತ್ತಿರುವಾಗಲೇ ನಂಬುತ್ತಲೇ ಹೋಗುತ್ತೇವೆ.

          ಇದು ಯಾರೋ ನ್ನ ವಿಷಯಕ್ಕೆ ತುಂಬಾ ಎಡವಟ್ಟಾಗುತ್ತಲಿದೆ.  ನಾನಂತು ನಂಬಿ  ಕೆಡುತ್ತಲೇ  ಇದ್ದೇನೆ.  ನನ್ನ ಆಪ್ತರೊಬ್ಬರು ಪದೇ,  ಪದೇ  ಚುಡಾಯಿಸುತ್ತಾ ಇರುತ್ತಾರೆ.  ಮೊನ್ನೆ ಅವನನ್ನು ನಂಬಿ ಏನೋ ಮಾಡಿದ್ದಿರಲ್ಲ ಅವನು ಇನ್ನು ನಮಗೆ ‘ಗುನ್ನಾ’ ಇಟ್ಟಿಲ್ಲವಾ? ಎನ್ನುತ್ತಿರುವಾಗಲೇ ಅವರಿಂದ ಗುನ್ನಾ ಇಡಿಸಿಕೊಂಡಿರುವುದು ಹಳೆಯ ಮಾತಾಗಿರುತ್ತದೆ.

          ಯಾವುದೇ ವ್ಯವಸ್ಥೆಯಲ್ಲಿ ನಾವಿರಲಿ ಅಲ್ಲಿ ನಮ್ಮನ್ನು ನಂಬಿಸಿ ಮೋಸ ಮಾಡುವವರ ದಂಡೇ ಇರುತ್ತದೆ.  ಅವರು ಮೋಸ ಮಾಡಬಹುದು ಎಂಬ ಅನಗತ್ಯ ಗುಮಾನಿ ಇಟ್ಟುಕೊಡರೆ ಕೆಲಸ ಮಾಡುವುದಾದರೂ ಹೇಗೆ?   ಇದಕ್ಕೆ ಅಂತಿಮ ಉತ್ತರವಿರುವುದಿಲ್ಲ.  ಅನುಭವದಿಂದ  ಪಾಠ ಕಲಿಯಬೇಕು.  ಆದರೆ ಅಂತಹ ಕಹಿ ಎಷ್ಟು ಬಾರಿ ತಿನ್ನಬೇಕು, ಎಷ್ಟು ಪ್ರಮಾಣದಲ್ಲಿ  ತಿನ್ನಬೇಕು ಎಂಬುದನ್ನು ನಾವು ನಿರ್ಧರಿಸಬೇಕು. 

          Once up on a time  ಎಂಬ ಪದ್ಯದಲ್ಲಿ ವಿವರಿಸಿದಂತೆ, glad to meet you  ಎಂದು ಪರಿಚಯವಾದವರು very bad ಆಗಿ ಚೆನ್ನಾಗಿ ಇರಿಯುತ್ತಾರೆ.     ಇದನ್ನು ಸಹಿಸಿಕೊಳ್ಳುವ ತಾಕತ್ತು ನಮಗಿದ್ದರೆ ಮೂರ್ಖರ ಹಾಗೆ ನಂಬಬೇಕು, ನಂಬಿ ಕಟ್ಟ ಮೇಲೆ ಹಾಕಿದ ಚೂರಿಯ ನೋವ ಸಹಿಸಬೇಕು.

          ಆತ್ಮಸಾಕ್ಷಿ, ಅಹಂಕಾರ, ಉದ್ವೇಗ, ವೈಯುಕ್ತಿಕ  ಅವಿವೇಕ ಈ ರೀತಿ ಅವಘಡಗಳಿಗೆ ಕಾರಣ ಎಂದು ಅಂದುಕೊಂಡು ನನ್ನನ್ನು ನಾನೇ ದೂಷಿಸಿಕೊಳ್ಳಲು ಆರಂಭಿಸಿ ಮೊದಲ ಪಾಠ ಕಲಿತಿದ್ದೇನೆ.

          ಕೇವಲ ವೈಯಕ್ತಿಕ ದೋಷಾರೋಪವು ಆತ್ನಹತ್ಯೆಯಾಗಬಾರದು ಎಂಬ ಪರಮ ಸತ್ಯವನ್ನು ಈಗೀಗ ನನ್ನ ನಿರ್ಲಿಪ್ತ ಸ್ವಭಾವದ ಗುರುಗಳಾದ ಡಾ: ಆರ್. ರಾಮಪ್ರಿಯಾ ಕಲಿಸುತ್ತಿದ್ದಾರೆ.  ಎರಡು ದಶಕಗಳ ಸಾಮಾಜಿಕ ಜೀವನ ಈ ಪಯಣದಲ್ಲಿ ಭೇಟಿಯಾದ ಸುಮಾರು ಜನ, ಕಳೆದು ಕೊಂಡ ಹಣ, ನಸುನಗುತ್ತಲೇ ಕೊಳ್ಳಿ ಇಟ್ಟವರು ನನ್ನನ್ನೊಮ್ಮೆ ಮೂರ್ಖನನ್ನಾಗಿಸಲು ಬಯಸಲಿಲ್ಲ.  ನನ್ನಷ್ಟಕ್ಕೆ ನಾನೇ ಮೂರ್ಖನಾದೆ.

          ಅವರು ನನಗೆ ತುಂಬಾ ಆತ್ಮೀಯರು, ತುಂಬಾ ಒಳ್ಳೆಯವರು ಎಂದು ಯಾರನ್ನಾದರೂ ಪರಿಚಯಿಸುವ ಮುನ್ನ, ಅದನ್ನು ಒಪ್ಪಿಕೊಳ್ಳವ ಮುನ್ನ ಸಾವಿರ ಬಾರಿ ಅಲೋಚಿಸಬೇಕು.

          ಅವರೇನು ನಮ್ಮನ್ನು ಗೆಳೆಯರು, ಆತ್ಮೀಯರು ಎಂದು ಘೋಷಿಸಿ ಕೊಂಡಿರುವುದಿಲ್ಲವಲ್ಲ.  ನಾವು ಅವರನ್ನು ಆತ್ಮೀಯರು ಅಂದುಕೊಂಡಂತೆ, ನಮ್ಮನ್ನು ಅವರು ಆತ್ಮೀಯರು ಎಂದು ಅಂದುಕೊಡಿರಬೇಕಲ್ಲ ಎಂಬ ಸಣ್ಣ  ಅಂತರದ ಅನುಮಾನ ನಮ್ಮಲ್ಲಿ ಮೂಡದ ಹೊರತು ಇದಕ್ಕೆ ಪರಿಹಾರವೆಂಬುದಿಲ್ಲ.

          ಬದುಕಿನ ಪಯಣ ಹತ್ತು – ಹಲವು ಅನುಭವಗಳನ್ನು ನೀಡಿ ಪಾಠ ಕಲಿಸುತ್ತದೆ.  ಹಾಗೆ ಹಾಗಂತ ಬರೀ ಪಾಠ ಕಲಿಯುತ್ತಾ ಪೆಟ್ಟು ತಿನ್ನುತ್ತಾ ಹೋಗುವುದರಲ್ಲಿ ನಮ್ಮ ಆಯುಷ್ಯವೇ ಮುಗಿದು ಹೋದರೆ? ಎಂಬ ಸಣ್ಣ ಎಚ್ಚರಿಕೆ ನಮ್ಮಲ್ಲಿರಲಿ ಎಂಬುದೇ ನನ್ನ ಅಂತಿಮ ನಿರ್ಣಯ.

          ಬಾಲ್ಯದಲ್ಲಿ ಕಾರಡಗಿಯಲ್ಲಿ, ಕಾಲೇಜು ದಿನಗಳಲ್ಲಿ ಧಾರವಾಡದಲ್ಲಿ ಉದ್ಯೋಗ ದಿನಗಳಲ್ಲಿ ಗದುಗಿನಲ್ಲಿ, ಈಗ ಬೆಂಗಳೂರಿನಲ್ಲಿ ನನಗೆ ಪರಿಚಯವಾದವರ ಸಂಖ್ಯೆ ಹತ್ತುಸಾವಿರ ಗಡಿಯನ್ನು ದಾಟಿರಬಹುದು.  ನನ್ನ ಮೊಬೈಲ್ ಫೋನ್ ಬುಕ್ ನಲ್ಲಿಯೇ ನಾಲ್ಕು ಸಾವಿರ ಜನರಿದ್ದಾರೆ.

          ಆದರೆ ಅದರಲ್ಲಿ ಎಷ್ಟು ಜನ ನನಗಾಗಿ ಮಾತನಾಡುತ್ತಾರೆ, ಅವರ ಕೆಲಸಕ್ಕಾಗಿ ಮಾಡುತ್ತಾರೆ ಎಂಬ ಕಟು ವಾಸ್ತವವನ್ನು ಅವಲೋಕಿಸಿದಾಗ ನೂರರ ಸಂಖ್ಯೆಯನ್ನು ನಾವು ತಲುಪುವುದಿಲ್ಲ. ಸಾಕಲ್ಲ ಇಷ್ಟು ಬದುಕಿನ ಪಯಣದ ಗೆಳೆಯರನ್ನು ಅಳೆದು ತೂಗಿ ಅರಿತುಕೊಳ್ಳಲು  ಇಷ್ಟೆಲ್ಲ ಸುಧೀರ್ಘ ಪಯಣದಲ್ಲಿ ಆತ್ಮೀಯರ ಪಟ್ಟಿ ಉಳಿಸಿಕೊಂಡವರ ಸಂಖ್ಯೆ ಹತ್ತನ್ನು ದಾಟುವುದಿಲ್ಲ.

          ಅದಕ್ಕೆ ನೀವು ನನ್ನಂತೆ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿರಿ ನನ್ನ ಹಾದಿ ನೀವು ತುಳಿಯದಿದ್ದರೆ ಮಾತ್ರ ನೀವು ಬುದ್ಧಿವಂತರು!.

Wednesday, August 29, 2012

Letters to Love


 

                It is an inevitable for me to express some of the real agony with you.

                We have many faces but always we try to hide them.  Why believed one face is un answering question.   But still we go on believing persons in a foolish way.

                That has happened with you.  No! It gives many meanings which I don’t want to understand.  If I try to understand your all faces, it goes to false attempt. Knowingly all your difficult faces I have to accept your lovely face, which appears So…..

                 Man has  that capacity to hide his real face,  when it applies to me,  why can’t it with you.?

                 I always try to echo the words of my favorite poet William Shakespeare “…….it signifies nothing full of sound and fury, sound and fury.     Everything sounds strongly but I  pretend nothing is heard and nothing is seen.

                 Once again I say  you that you also believe that I know nothing.  

Tuesday, August 28, 2012

ಕುಸಿದು ಬಿದ್ದ ಅಣ್ಣಾಕೋಟೆ



 2008 ರ ಡಿಸೆಂಬರ್ನಲ್ಲಿ ತುಂಬಾ ಉತ್ಸಾಹದಿಂದ ರಾಳೆಗಾಂವ್ ಸಿದ್ದಿಯಲ್ಲಿ ಅಣ್ಣಾ ಹಜಾರೆ ಅವರನ್ನು ಭೇಟಿ ಆಗಿ ಸುಧೀರ್ಘವಾಗಿ ಚರ್ಚಿಸಿದ್ದೆ. 2004ರಲ್ಲಿ ದೆಹಲಿಯಲ್ಲಿ ನಡೆದ ಗ್ರಾಮೀಣಾಭಿ ವೃಧ್ದಿ ಎ ಜಿ ಓ ಗಳ ಮಾವೇಶದಲ್ಲಿಅವರನ್ನು ಹತ್ತಿರದಿಂದ ನೋಡಿದ್ದೆ. ಅವರ ಭೇಟಿಯ ಕ್ಷಣಗಳಲ್ಲಿ ಅವರಲ್ಲಿದ್ದ ಆತ್ಮವಿಶ್ವಾಸ

ಅಂತ:ಸತ್ವವನ್ನು ಕಂಡು ಬೆರಗಾಗಿದ್ದೆ. ಇವರು ನಿಜವಾದ ಗಾಂಧಿವಾದಿ ಎಂಬ ನಂಬಿಕೆ ಅಚಲವಾಗಿತ್ತು. ಕಾಲನಂತರದಲ್ಲಿ 2011ರಲ್ಲಿ ದೇಶದಲ್ಲಿ ' ಅಣ್ಣಾ' ಮೆನಿಯಾ ಕಂಡಾಗ ಅತ್ಯಂತ ಹೆಮ್ಮೆ ಎನಿಸಿತು. ಸ್ವಾತಂತ್ರ್ಯ ಚಳುವಳಿಯ ನಂತರ ದೇಶ ಕಂಡ ಅತ್ಯಂತ ಯಶಸ್ವಿಯ 'ಲೋಕಪಾಲ ಮಸೂದೆ' ಜಾರಿ ಹೋರಾಟದಲ್ಲಿ ಭಾಗವಹಿಸಿದವರ ಆತ್ಮ ವಿಶ್ವಾಸ ಹೆಚ್ಚಿಸಿದೆ ಎಂಬ ಹೆಗ್ಗಳಿಕೆ 'ಅಣ್ಣಾ' ಅವರದು.
ಗಾಂಧಿಜಿಯವರ ಜಯಪ್ರಕಾಶ ನಾರಾಯಣರ ಹಾಗೆ 'ಅಣ್ಣಾ' ನಿಜವಾಗಲೂ ಅಪ್ಪಟ ಚಿನ್ನವೇ ಸರಿ. ಆದರೆ ಅಣ್ಣಾ ಸುತ್ತಲೂ ಇದ್ದವರ ಇತಿಹಾಸ, ವರ್ತಮಾನದ ಉದ್ದೇಶಗಳು ಸರಿ ಇರಲಿಲ್ಲ, ಎಂಬ ಸತ್ಯ 'ಅಣ್ಣಾ'ರ ಮುಗ್ಧತೆಗೆ ಅರಿವಾಗಲಿಲ್ಲ. 


ಅಣ್ಣಾ ಹಜಾರೆ ಗಾಂಧೀಜಿಯವರ ಹಾಗೆ , ಜೆ.ಪಿ.ಯವರ ಹಾಗೆ ಉನ್ನತ ಪದವಿಗಳನ್ನು, ಜಾಣತನವನ್ನು ದಕ್ಕಿಸಿಕೊಳ್ಳದ ಅಮಾಯಕರು. ಅವರ ಮಾಯಕತೆ, ಸಾಮರ್ಥ್ಯವನ್ನು ಬಳಸಿಕೊಂಡು 'ಹೀರೋ' ಗಳಾಗಲು ಹೋರಾಡಿದವರ ಮುಖವಾಡಗಳು ಬಹು ಬೇಗ ಕಳಚಿ ಬಿದ್ದವು.
ಹೋರಾಟದ ಇತಿಹಾಸಕ್ಕಿಂತ ತಮ್ಮ , ತಮ್ಮ ಕ್ಷೇತ್ರಗಳಲ್ಲಿ ಅಪಾರ ಖ್ಯಾತಿ, ಸಂಪತ್ತು ಗಳಿಸಿದ ಮಹನೀಯರುಗಳು. ಇವರು ಯಾರೂ 'ಅಣ್ಣಾ' ಸಮಾನ ನಿಲ್ಲುವ ಯೋಗ್ಯತೆ ಇದ್ದವರಲ್ಲ ಎಂಬುದು ಅಷ್ಟೇ ಸತ್ಯ.
Nature Justice ಗೆ ಬಹು ದೊಡ್ಡ ಶಕ್ತಿ ಇದೆ. ಅದನ್ನೆ ಕಾವ್ಯ ಭಾಷೆಯಲ್ಲಿ poetic justice ಎಂದು ಕರೆಯುತ್ತಾರೆ. ಪ್ರಕೃತಿ 'ಅಣ್ಣಾ' ಹಿಂಬಾಲಕರ ಬಂಡವಾಳವನ್ನು ಬೇಗನೇ ಬಯಲಿಗೆಳೆಯಿತು. ಹೋರಾಟದ ಮೂಲಕ ಈ ದೇಶಕ್ಕೆ ನ್ಯಾಯ ಒದಗಿಸಬೇಕು ಎಂಬುದಕ್ಕಿಂತ ಕಾಂಗ್ರೆಸ್ಗೆ, ಸಂಸತ್ತಿಗೆ ಸವಾಲು ಹಾಕುವ ಕೆಲಸದಲ್ಲಿ 'ಅಣ್ಣಾ' ಅನುಯಾಯಿಗಳು ನಿರತರಾದರು.
ಅವರ ಒಳಗಣ ಕಿಚ್ಚು ಬೇರೆಯೇ ಆಗಿತ್ತು ರಾಜಕಾರಣದ ನಂಜನ್ನು ನುಂಗಿ ಸಾರ್ವಜನಿಕ ಹೋರಾಟಕ್ಕಿಳಿದರೆ ಆಗುವುದು ಬೇರೆಯೇ. ಎಲ್ಲಾ ಹೋರಾಟಗಳು, ಹೋರಾಟಗಾರರು ಕೇವಲ ಹೋರಾಟಗಳಾಗಿರಲಿ ಎಂದು ಜನ ಬಯಸುತ್ತಾರೆ. ಅದೊಂದು ರೀತಿಯ ಸಾತ್ವಿಕ ವಿರೋಧ ಪಕ್ಷವಿದ್ದಂತೆ. ಹಾಗೆ ಇರಲಿ ಕೂಡಾ ಎಂಬುದು ಸಾರ್ವತ್ರಿಕ ಅಭಿಪ್ರಾಯವಿರುತ್ತದೆ.

ಆದರೆ ಅಣ್ಣಾ ತಂಡದ ನತಂತರ ಏಕಪಕ್ಷೀಯ ದಾಳಿ ಅವರ ತಾಳಕ್ಕೆ ತಕ್ಕಂತೆ ಕುಣಿದ ಕೇಸರಿ ಪಡೆ ಹತ್ತಾರು ಅನುಮಾನಗಳಿಗೆ ಕಾರಣವಾದವು . ರಾಜಕೀಯ ಪಕ್ಷ ಕಟ್ಟುವ ಇರಾದೆಯಿಂದಾಗಿ ಅಣ್ಣಾ ಮಂಕಾದರು. ಇತಿಹಾಸ ಪುರುಷರಾಗಬೇಕಾಗಿದ್ದ ಅಣ್ಣಾ ವರ್ತಮಾನಕಲ್ಲಿಯೇ ಕರಗಿ ಹೋಗುವಂತಾಗಿರುವುದು ವಿಷಾದನೀಯ.
ಮುಂದಿನ ಹೋರಾಟಗಳು ರಾಜಕೀಯ ರಹಿತವಿದ್ದರೆ
hidden ogendaಇರದಿದ್ದರೆ ಜನ ನಮ್ಮೊಂದಿಗೆ ಇರುತ್ತಾರೆ ಎಂಬ ಸತ್ಯವನ್ನು 'ಅಣ್ಣಾ' ಹೋರಾಟದ ಅಂತ್ಯ ಸಾಬೀತುಪಡಿಸಿದೆ.

Sunday, August 26, 2012

ಜಾತಿ ವ್ಯವಸ್ಥೆಯ ಸಾರ್ವತ್ರೀಕರಣದ ಅಪಾಯ


       ಇತ್ತೀಚಿನ ದಿನಗಳಲ್ಲಿ ಸಂವಿಧಾನಕ್ಕೆ ಅಪಚಾರವೆನಿಸುವ ರೀತಿಯಲ್ಲಿ ಜಾತಿಯ ವಿಚಾರಗಳು ಬಹಿರಂಗವಾಗಿ ಚರ್ಚೆಯಾಗುತ್ತಲಿವೆ.

       ಾತಿಗೊಂದರಂತೆ ಹುಟ್ಟಿಕೊಂಡಿರುವ ಮಠಗಳು, ರಾಜಕಾರಣಿಗಳು ಬಯಸುತ್ತಿರುವ ಮತಗಳು ಸ್ಥಿತಿಗೆ ಕಾರಣವೇನೋ? ಎಂಬ ಅನುಮಾನ ಶುರುವಾಗಿದೆ. ಇದು ಯಾರಿಂದ ಪ್ರಾರಂಭವಾಯಿತು.  ಯಾಕೆಪ್ರಾರಂಭವಾಯಿತು ಎಂಬುದಕ್ಕಿಂತ ಇದರ ಅವಶ್ಯಕತೆ ಇದೆಯಾ? ಎಂಬ ಚಿಂತನೆ ನಡೆಯಬೇಕಿದೆ.

       12ನೇ ಶತಮಾನದ ಅಣ್ಣ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪವೆಂಬ ಮೊದಲ ಪಾರ್ಲಿಮೆಂಟಿನ ಮೂಲಕ ಜಾತಿ ವ್ಯವಸ್ಥೆಯನ್ನು ಅಳಿಸಿ ಹಾಕುವ ಮೊದಲ ಯಶಸ್ವಿ ಪ್ರಯತ್ನ ನಡೆಯಿತು.

       ನಂತರ 20ನೇ ಶತಮಾನದಲ್ಲಿ ಸ್ಥಾಪಿತವಾದ ಭಾರತದ ಪಾರ್ಲಿಮೆಂಟಿನ ಡಾ: ಅಂಬೇಡ್ಕರ್ ರವರು ರಚಿಸಿದ ಸಂವಿಧಾನವೂ ಜಾತಿ ವ್ಯವಸ್ಥೆಯನ್ನು ಅಳಿಸಿ ಹಾಕಲು ಸೂಚಿಸಿತು.

       ಹೀಗೆ ಎರಡು ಸಂಸತ್ತುಗಳ ವಿಚಾರಧಾರೆಗಳನ್ನು ಮೆಲುಕು ಹಾಕುತ್ತಾ, ಸಂದರ್ಭ ಬಂದಾಗ ಭಾಷಣ ಮಾಡುತ್ತಾ ಜಾತಿ ವ್ಯವಸ್ಥೆಯನ್ನು ಪುನರ್ ಸ್ಥಾಪಿಸುತ್ತಾ ಸಾಗಿರುವುದು ಎಂತಹ ವಿಪರ್ಯಾಸ.

       ಆಧುನಿಕತೆ, ಜಾಗತೀಕರಣ, ಶಿಕ್ಷಣ ವ್ಯವಸ್ಥೆ, ಮಾಹಿತಿ ತಂತ್ರಜ್ಞಾನದ ಪ್ರತಿಫಲ ಜಾತಿ ವ್ಯವಸ್ಥೆಯನ್ನು ನಾಶಪಡಿಸುತ್ತೆ ಎಂಬ ಭಾವನೆ ಬಿಸಿರಕ್ತದ ಯುವಕರಲ್ಲಿದೆ.  ಆದರೆ ಮತ್ತೊಂದೆಡೆ ಪ್ರತಿಷ್ಠಿತ ವ್ಯವಸ್ಥೆಯಾಗಿರುವ ರಾಜಕಾರಣ ಜಾತಿ ದುರ್ಬಳಿಕೆ ಆರಂಭಿಸಿದೆ.
       ಅಳಿಸಿ ಹಾಕುವ - ಪುನರ್ ಸ್ಥಾಪಿಸುವ ಹಗ್ಗ - ಜಗ್ಗಾಟ ನಿರಂತರವಾಗಿ ನಡೆದಿದೆ.  ಒಂದು ಕ್ಷಣ ನಮ್ಮ ಮನ:ಸಾಕ್ಷಿಗೆ ಅನುಗುಣವಾಗಿ ಆಲೋಚಿಸಿದಾಗ ಜಾತಿ ವ್ಯವಸ್ಥೆ ಅಳಿಸಿ ಹೋಗಲಿ ಅನಿಸಲೇಬೇಕಲ್ಲ.