Thursday, May 13, 2010

'ರಾಜಿ' ಆಗದ ಹಟಮಾರಿ ಹುಡುಗಿ

ನಿನ್ನ ಹಟಮಾರಿತನ ಅದೆಷ್ಟು ಹಿತ. ಕಿರಿಕಿರಿ ಅಂದುಕೊಳ್ಳಬಹುದಾದ ನಿನ್ನ ಬಿಗಿ ಪಟ್ಟು ದಿನೇ - ದಿನೇ ಆಪ್ತವೆನಿಸಿತು. ನಿನ್ನ ಕಣ್ಣ ಕನಸುಗಳಲಿ ಅಲೆದಾಡುತ್ತಿದ್ದ ನನ್ನನ್ನು ಹಿಡಿದು ಕೊಟ್ಟಾಗ ನೀ ಬೆಚ್ಚಿಬೀಳಬಾರದಿತ್ತು. ಅಲ್ಲೇ ನೀ ಸೋತು ಹೋದೆ. ಹೌದು ತುಂಬಾ ಪ್ರೀತಿಸುತ್ತೇನೆ. ಆದರೆ ನಿನ್ನೊಂದಿಗೆ ಏಗುವ ತಾಕತ್ತಿಲ್ಲ ಎಂದಾಗ ಹೇಗಾಗಿರಬೇಡ?
ನನ್ನ ಹಟಮಾರಿತನಕೆ ಮಣಿಯದ ನೀ ಹತ್ತಾರು ಭೇಟಿಗಳಲ್ಲಿ ನೂರಾರು ಗಂಟೆಗಳ ಮೊಬೈಲ್ ಚರ್ಚೆಯಲಿ ಅದೇ ಮಾತು.
I love you but cannot accept you ಎಂದು ಹೇಳುತ್ತಲೇ ಜಾರಿಗೊಂಡಿದ್ದು. Love you but can't accept ಎಂಬ contradiction ನಲ್ಲಿಯೂ ಹೊಸತನ ತೋರಿದೆ.
ನಿನಗೆ ಪ್ರಿಯವಾದ ಸಿದ್ಧಾರೂಢ ಮಠಕ್ಕೆ ಕರೆದಾಗ ತಕ್ಷಣ ಒಪ್ಪಿಕೊಂಡು ಬಂದೆ ಜೊತೆಗೆ ಗೆಳತಿಯ ಸಾಂಗತ್ಯ ಬೇರೆ, ಅದೂ ಆತ್ಮವಿಶ್ವಾಸದ ಸಂಕೇತವೆ.
ಮುಂಜಾನೆ ಹೂಬಿಸಿಲಿನಲಿ ಕಂದು ಬಣ್ಣದ ಉಡುಗೆಯೊಂದಿಗೆ ಕಾರು ಹತ್ತಿದಾಗ ನನ್ನ ಕನಸು ನನಸಾಯಿತು ಅಂದುಕೊಂಡಿದ್ದೆ. ಫೆಬ್ರುವರಿ 14 ರ ನಿನ್ನ ಸಂದೇಶ ತಲುಪಿ ಸುಮಾರು ದಿನಗಳಾಗಿದ್ದವು. ಇಂದಿಗೂ ಮಾರ್ಚ 6ರ ಸಂರ್ಭಮ ಈಗಲೂ ನೆನಪಾಗುತ್ತದೆ. ಕೇವಲ ಮಂದಹಾಸದಿಂದ ಕಂಗೊಳಿಸಿದ ಮುಖ, ಮೌನದಲ್ಲಿಯೇ ನೂರೆಂಟು ಅರ್ಥ ಹುಟ್ಟಿಸುವ ತಾಕತ್ತು.
ಅಬ್ಬಾ! How beautiful it was!!
ಮುಂಜಾನೆ 10 ಗಂಟೆಗೆ ನನಗೆ ನಂಬಿಕೆ ಇಲ್ಲದ ದೇವರ ಗುಡಿಯಲಿ ನಿಲ್ಲಿಸಿದಾಗ ನನ್ನ ವೈಚಾರಿಕತೆಗೆ ಬೆಲೆ ಇರಲಿಲ್ಲ. ಪ್ರೀತಿ ವೈಚಾರಿಕತೆಯ ಗುಡಿಯನು ದಾಟಿ ಭಾವ ಪ್ರಪಂಚದಲಿ ತೇಲಾಡುತ್ತದೆ. ಎಂಬ ಅರಿವಾಯಿತು. ನಿನ್ನ ಪೂಜೆ, ಪ್ರದಕ್ಷಿಣೆ ಅರ್ಥವಾಗದಿದ್ದರೂ ನಿನ್ನನೇ ನೋಡುತ್ತ ಹುಚ್ಚನಾದೆ.
ನಿನ್ನ ಸಿದ್ಧಾರೂಢನ ಸನ್ನಿಧಿಯಲ್ಲಿ ಒಪ್ಪಿಕೋ. ಇಲ್ಲದಿದ್ದರೆ ನಾಹೊರಗೆ ಬರುವುದಿಲ್ಲ ಎಂಬ ನನ್ನ ಸಾತ್ವಿಕ ಹಟವನ್ನು ನಸುನಗುತ್ತ ಸಹಿಸಿದೆ. I will not leave you ಎಂದಾಗಲೂ ಅದೇ ಸಹನೆ ಬಾ ಹೋಗೋಣ ಎಂದೆ ಅಷ್ಟೇ. ನಿರ್ಲಿಪ್ತವಾಗಿ ನಿನ್ನ ವರಸೆ ಅರ್ಥವಾಗಲೇ ಇಲ್ಲ ಅಲ್ಲಿಂದ ಕಾರು ಧಾರವಾಡಕ್ಕೆ ಓಡಿತು. ವಿಶ್ವವಿದ್ಯಾಲಯದ garden ನಲ್ಲಿ ಅದೇ ಮುಂದುವರೆರದ ಮೌನ.
ತಪೊವನಕ್ಕೆ ತಲುಪಿದಾಗ ಮಧ್ಯಾನ್ಹದ ಏರು ಹೊತ್ತು. ನಾಸ್ತಿಕ ಮನಸ್ಸಿಗೆ ಹಿತವೆನಿಸುವ spiritualism ನಿನಗೆ ಅರ್ಥವಾಯಿತು. ಆಯ್ತು ನಿನಗೆ ಆತ್ಮವಿಶ್ವಾಸವಿದ್ದರೆ ನನ್ನನ್ನು ಪಡೆದುಕೊ. ಎಂದೊಡ್ಡಿದ ಸವಾಲಿನಲಿ ನಾ ಸೋತು ಹೋದೆ. ಕಣ್ಣು ಮುಚ್ಚಿ ಧ್ಯಾನಸ್ಥ ಸ್ಥಿತಿಗೆ ಹೋದೆ. ಹಟಮಾರಿತನ ಬಿಡುವಂತೆ Sub conscious mind ಗೆ ಮೇಲಿಂದ ಮೇಲೆ ಸಂದೇಶ ನೀಡಿದೆ.
ತೊಡೆಯ ಮೇಲಿನ ನನ್ನ ತಲೆಯನು ನವಿರಾಗಿ ತಟ್ಟುತ್ತಾ convince ಮಾಡಿದ್ದು ಯಾಕೋ ಬೇಸರವಾಯಿತು. ತುಂಬಾ ನಿಶ್ಚಲವಾಗಿ ಹೇಲಿದೆ. ಇನ್ನು ಮುಂದೆ ಬೇಟಿ ಆಗುವುದು ಬೇಡ. ಯಾವುದೇ ಕಾರಣಕ್ಕೂ ನಿನ್ನ call receive ಮಾಡಲ್ಲ. ನೀನೆಷ್ಟೇ ಹಟ ಮಾಡಿದರೂ ನಾನು ನಿನಗೆ ಧಕ್ಕುವುದಿಲ್ಲ. Try understand me ಎಂದು ಒತ್ತಾಯಿಸಿದಾಗ ಮನದಲಿ ಉಂಟಾದ ತಲ್ಲಣಗಳನು ಸಹಿಸಿಕೊಂಡೆ. ಮುಂಗೈಗೆ, ಹಣೆಗೆ ಮುತ್ತಿಟ್ಟಾಗ ಪ್ರತಿಭಟಿಸಲಿಲ್ಲ. ಈ ಜನ್ಮಕ್ಕೆ ಇಷ್ಟೇ ಸಾಕು. ನನಗೆ ಬೇಕೆನಿಸಿದಾಗ ಕಾಲ ಕೂಡಿ ಬಂದಾಗ ನಾ ಕಂಡಿತಾ ನಿನ್ನನ್ನು ಸೇರುತ್ತೇನೆ ಎಂದು ನೀ ನೀಡಿದ ಸಮಜಾಯಿಸಿಯನ್ನು ಅನಿವಾರ್ಯವಾಗಿ ಸ್ವೀಕರಿಸಿದೆ. ಅಳುವದಾಗಿ, ಸಿಟ್ಟಿಗೇಳುವುದಾಗಲಿ ನನಗೆ ಸಾಧ್ಯವಾಗಲಿಲ್ಲ. ನಿನ್ನ ಮಾತುಗಳನು ತುಂಬಾ ವಾಸ್ತವದ ಹಿನ್ನಲೆಯಲಿ ಆಲಿಸಿದೆ. Don't call me from tomorrow ಎಂದಾಗ Yes ಎಂದೆ. ನಿನಗೆ ಪ್ರಿಯವಾದ ಸನ್ನಿಧಿಯಲಿ ಮಾತು ಕೊಟ್ಟಿದ್ದಿಯಾ ನನ್ನನ್ನು ದಯವಿಟ್ಟು ಹಿಂಸಿಸಬೇಡ ಎಂದದ್ದು ಕರಳು ಕತ್ತರಿಸಿದಂತಾಯಿತು. ಆಗಸದಲಿ ಸೂರ್ಯ ನಸುನಗುತ್ತ goodbye ಹೇಳಿದ. ಕತ್ತಲಾಗುವ ಮುಂಚೆ ಊರು ಸೇರಬೇಕಿತ್ತು.
ನಿನ್ನ ಹಟಮಾರಿತನಕ್ಕೆ ಸೋತು ಹೋದೆ. ಆದರೆ ನಾಳೆಯಿಂದ ಈ ನೋವನ್ನು ಹೇಗೆ ಸಹಿಸಿಕೊಳ್ಳುವೆ ಎಂದು ಅರ್ಥವಾಗಲಿಲ್ಲ. ಮಾಡೋವಿ ಕಾದಂಬರಿಯ ನಾಯಕ ನೆನಪಾದ. ಪ್ರೀತಿ ಖಂಡೀತಾ ಕಾಯುತ್ತದೆ. ಕಾಲ ಕೂಡಿಬರುವವರೆಗೆ ದೂರವಿರುವ ಒಪ್ಪಂದವಾಯಿತು. ಗಳಗಳನೆ ಅತ್ತು ಬಿಡುವಂತಾದರೂ ಸಹಿಸಿಕೊಂಡೆ. ಅಳುವುದು ಹೇಡಿತನವೂ ಅಲ್ಲ, ಅಭಿವೃದ್ಧಿಯೂ ಅಲ್ಲ ಅನಿಸಿತು. ಮತ್ತಷ್ಟು ಆತ್ಮವಿಶ್ವಾಸದಿಂದ ಹೇಳಿದೆ, ಈ ಭೂಮಿ ದುಂಡಗಿದೆ. ಮತ್ತೆ ಎಲ್ಲಿಯಾದರೂ ಸೇರೆ ಸೇರುತ್ತೇವೆ.
Please understand me I will be always with you ಅಂದಾಗ ಸುಮ್ಮನಾದೆ. ನಿಜವಾದ ಪಾಂಜಲ ಪವಿತ್ರ ಪ್ರೀತಿಗೆ ಎಲ್ಲವನ್ನು ಸಹಿಸುವ ಶಕ್ತಿ ಇದೆ. ನೀನು ಪಾಠಕಲಿಸಿದೆ. ಇಂದಿಗೂ ಅಷ್ಟೇ, ಅದೇ ಪ್ರೀತಿ, ಅದೇ ವಿಶ್ವಾಸ. Still I am waiting for you.

4 comments:

  1. is it a real life history of just a imagination sir?

    ReplyDelete
  2. ತುಂಬಾ ಚೆನ್ನಾಗಿದೆ ಸರ್ ಲೇಖನ. ವಾಸ್ತವ ಸ್ಥಿತಿಯನ್ನು ಹಿಡಿದಿಟ್ಟಿರುವ ನಿಮ್ಮ ಬರವಣಿಗೆ ಅದ್ಬುತ.

    ReplyDelete
  3. ತುಂಬಾ ಚೆನ್ನಾಗಿದೆ ಸರ್ ಲೇಖನ

    ReplyDelete