Saturday, May 8, 2010

ಕೇರಳ ಲಿಂಗಾಯತ ಸಂಗಾತಿಗಳು


ಲಿಂಗಾಯತ ಎನ್ನುವುದು ಈಗ ಒಂದು ಜಾತಿಯಲ್ಲ. ಒಂದು ಧರ್ಮ - ಸಮೂಹ - ಪ್ರಜ್ಞೆ ಎನ್ನುವುದು ಸಾಬೀತಾಗಿದೆ. ಆದರೂ ಜಾತಿ ಲಿಂಗಾಯತರು, ಜಾತಿ ಮಠಾಧೀಶರು ಒಮ್ಮೊಮ್ಮೆ ಗುತ್ತಿಗೆ ಹಿಡಿದವರಂತೆ ಮಾತನಾಡುತ್ತಾರೆ.
ಎಡಪಂಥೀಯ ಸರಕಾರವಿರುವ ಕೇರಳದಲ್ಲಿ ಬಸವ ಪ್ರಜ್ಞೆಗೆ, ತತ್ವಕ್ಕೆ ಹೆಚ್ಚು ಮನ್ನಣೆಯಿದೆ. ಕಾಯಕ ಸಿದ್ದಾಂತದ ಮೇಲೆ ಆಡಳಿತ ನಡೆಸುತ್ತಿರುವ ಕೇರಳಿಗರು ನಿಜಾರ್ಥದ ಬಸವ ಧರ್ಮ ಪರಿಪಾಲಕರು. ಪೂರ್ಣಪ್ರಮಾಣದ ಸಾಕ್ಷರತೆ, ಕೇರಳವನ್ನು ಪ್ರವಾಸಿ ಕೇದ್ರವನ್ನಾಗಿ ಅಭಿವೃದ್ಧಿ. ರಾಷ್ಟ್ರೀಯ ಸ್ಪರ್ಧಾತ್ಮಕ ಪರಿಕ್ಷೆಗಳಲ್ಲಿ ಯಶಸ್ಸು. ಮನೆಗೊಬ್ಬ ಅನಿವಾಸಿ ಭಾರತೀಯ ಉದ್ಯೋಗಿ ಹೀಗೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಸೈದ್ಧಾಂತಿಕವಾಗಿ ಅಭಿವೃದ್ಧಿ ಹೊಂದಿದ್ದಾರೆ.
ಇಪ್ಪತ್ತು ಲಕ್ಷದಷ್ಟು ಜನ ಲಿಂಗಾಯತರಿದ್ದಾರೆ. ಆದರೆ ಅವರಿಗೆ ಸೈದ್ದಾಂತಿಕ ಗೊಂದಲಗಳಿವೆ. ಕೇವಲ ಲಿಂಗಾಯತರಲ್ಲಿ ಸಂಬಂಧ ಬೆಳೆಸುತ್ತಾರೆ. ಅಲ್ಲಿನ ಪರಿಸರದ ಪ್ರಧಾನ ಆಹಾರ ಮಾಂಸಹಾರವನ್ನು ಸ್ವೀಕರಿಸುತ್ತಾರೆ. ಕೇರಳದ ಎಲ್ಲ ದೇವರುಗಳ ಆರಾಧನೆಯಜೊತೆಗೆ ಇಷ್ಟಲಿಂಗಧಾರಿಗಳಾಗಿದ್ದಾರೆ. ಕಳೆದ ದಶಕದಿಂದ ಬಸವ ಸಮಿತಿಯ ಅರವಿಂದ ಜತ್ತಿ ಹಾಗೂ ವೀರಶೈವ ಮಹಾಸಭಾದ ಪದಾಧಿಕಾರಿಗಳು ಲಿಂಗಾಯತರನ್ನು ಒಗ್ಗೂಡಿಸಿದ್ದಾರೆ. ಹಿರಿಯರಾದ ಡಾ. ಕೆ. ಸದಾಶಿವನ್, ತ್ರಿಸ್ಪೂರದ ಗೋಪಾಲಕೃಷ್ಣ ಪಿಳೈ ,ಕುಂಜುಮನ್, ಪ್ರೊ.ಎ.ಆರ್ ಜ್ಯೋತಿ, ಕೆ.ಎನ್. ಪಿಳೈ, ಶಶಿಕುಮಾರ, ಮಹಿಳಾ ಘಟಕದ ಶೋಭಾಕುಮಾರಿ ಹೀಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಚಟುವಟಿಕೆಗಳು ಪ್ರಾರಂಭವಾಗಿವೆ. ಅವರೆಲ್ಲರಿಗೆ ಬಸವಧರ್ಮದ ಬೋಧನೆಯನ್ನು ಮಲೆಯಾಳಿನ ಬಸವ ಪಥಂ ಮೂಲಕ ಅದರ ಸಂಪಾದಕ ಪ್ರಸನ್ನಕುಮಾರ ನೀಡುತ್ತಿದ್ದಾರೆ. ಅಧ್ಯಯನದ ಶೀಲ ಪ್ರವೃತ್ತಿಯ ಪ್ರಸನ್ನಕುಮಾರ 2000 ಇಸವಿಯಲ್ಲಿ ಜರುಗಿದ ಕಾರು ಅಪಘಾತದಲ್ಲಿ ಬದುಕುಳಿದ ನಂತರ ಹೆಚ್ಚು ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಎಲ್ಲ ಜಿಲ್ಲೆಗಳಲ್ಲಿ ಬಸವ ಸಮಿತಿಗಳನ್ನು ಪ್ರಾರಂಭಿಸಿ 'ಬಸವ ಪಥಂ' ಓದುಗರನ್ನು ಹೆಚ್ಚಿಸಿದ್ದಾರೆ. ಕೇರಳದ ವೀರಶೈವರನ್ನು, ಲಿಂಗಾಯತರನ್ನಾಗಿ ಪರಿವರ್ತಿಸುವ ಸಕಾಲ ಇದಾಗಿದೆ ಎಂದು ನಂಬಿದ್ದಾರೆ. ಮಲೆಯಾಳದಲ್ಲಿ ಗಂಟೆಗಟ್ಟಲೆ ನಿರರ್ಗಳವಾಗಿ ಮಾತನಾಡುವ ಪ್ರಸನ್ನಕುಮಾರ, ವ್ಯಕ್ತಿತ್ವ ವಿಕಸನ ಕೋರ್ಸಗಳನ್ನು ನಡೆಸುತ್ತಾರೆ. ಅವರೊಂದಿಗಿನ ಚರ್ಚೆ ಸಂವಾದ ನನಗೆ ಹೆಚ್ಚು ಖುಷಿ ನೀಡಿತು. ದೂರದೂರಿನ ಬಂಧುಗಳನ್ನು ಭೇಟಿ ಆಗಿಬಂದ ಅನುಭವ ಈಗ ನನ್ನ ಪಾಲಿಗೆ.

No comments:

Post a Comment