Thursday, March 29, 2018

ಅಸಂಗತ ಬರಹಗಳು

*ಅನಿಸಿದ್ದು ಹೇಳಲಾಗದು ನೋಡಿದ್ದು ಸಹಿಸಲಾಗದು*

*ಅಸಂಗತ ಬರಹಗಳು*

ಅನಿಸದ್ದೆಲ್ಲ ಹೇಳಲೇಬೇಕೆಂಬ ನಿಯಮವೇನೂ ಇಲ್ಲ ಆದರೆ ಹೇಳಲೇಬೇಕು ಹೇಳುವ ಸಮಯ ಬಂದಾಗ.
ನೋಡಿದ್ದೆಲ್ಲ‌ ಸಹಿಸಲಾಗದು‌ ಅದರೂ ಸಹಿಸಿಕೊಳ್ಳಲೇಬೇಕು.

ಹೀಗೆ ಯಾರಾದರೊಬ್ಬರು ಅಂತಹ ರಿಸ್ಕ್ ತೆಗೆದುಕೊಂಡಾಗಲೇ ಬರಹ ರೂಪದಲಿ ದಾಖಲಾಗುವುದು. ಹಾಗೆ ದಾಖಲಾದದ್ದನ್ನು ಓದಿದಾಗ ' ಅಯ್ಯೋ ಇದು ನನ್ನ  ಅನುಭವ ' ಅನಿಸಿಬಿಟ್ಟರೆ ಬರಹ ಸಾರ್ಥಕ.

ಹೀಗೆ ಬರೆದಾಗ ಕಥೆ, ಕವನ,ಕಾದಂಬರಿ, ಸಿನೆಮಾ ರೂಪ ತಾಳಿ ಎದುರಿಗೆ ನಿಲ್ಲುವುದು.
ನಮ್ಮ ಬದುಕಿನಲ್ಲಿ ಬರುವ ಕೆಲವು ವ್ಯಕ್ತಿಗಳು ಅಂತಹ ಸ್ಪೂರ್ತಿಯಾಗುತ್ತಾರೆ. ಕಥೆಯಾಗಿ ಪಾತ್ರವಾಗಿ ಅರಳುತ್ತಾರೆ.

ಹೇಳಲಾಗದೇ ಒದ್ದಾಡಲು ಕಾರಣರಾಗುತ್ತಾರೆ. *ಪ್ರೀತಿ-ಪ್ರೇಮ-ಪ್ರಣಯ*,*ಊಟ-ನಿದ್ರೆ-ಕಾಮ* ತಡೆದುಕೊಳ್ಳಲಾಗದ ಅಗತ್ಯಗಳು.

ಅಗತ್ಯಗಳ ಅನುಭವಿಸಿ,ತಲ್ಲಣಿಸಿದ್ದನ್ನು ದಾಖಲಿಸಬೇಕು ಎಂಬ ತುಡಿತಕ್ಕೆ ಕಾಲ ಕೂಡಿ ಬರದಿರಲು ಸಾಮಾಜಿಕ ಭಯವೇ ಕಾರಣ.

*ಏನಾದರು ಅಂದುಕೊಂಡರೇ* ಎಂಬ ಭೀತಿಯಲಿ,
ಚರಿತ್ರೆ, ಚಾರಿತ್ರ್ಯದ ನೆಪದಲಿ ಸತ್ಯ ಸತ್ತು ಹೋಗುತ್ತದೆ.

ಆದರೆ...

ಮನಸು ಪಕ್ವವಾದ ಮೇಲೆ, ಕಾಲ ಕೂಡಿ ಬಂದಾಗ, ನಮ್ಮ ಭಾವನೆಗಳಿಗೆ, ಮರೆಯಲಾಗದ ಅನುಭವಗಳಿಗೆ ಜೀವ ತುಂಬಲೇಬೇಕು.

ಅಂತಹ ಹತ್ತಾರು ಘಟನೆಗಳ ಮೂರ್ತ ರೂಪವೇ ನನ್ನ ಹೊಸ ಪುಸ್ತಕ *ಅಸಂಗತ ಬರಹಗಳು*.
ಆಡಾಡ್ತಾ ಬರೆದದ್ದು 220 ಇಪ್ಪತ್ತು ಪುಟ ತಲುಪಿದೆ.

ಓದಲು ಒಂದೆರಡು ವಾರ ಕಾಯಬೇಕು ಅಷ್ಟೇ.

----ಸಿದ್ದು ಯಾಪಲಪರವಿ.

Tuesday, March 27, 2018

ಈ ರಂಗಿನಾಟ

ಬೇಡ ಕೃಷ್ಣ ಈ ರಂಗಿನಾಟವ ಎನ್ನಲಾದೀತೆ ?

ಉದ್ದೀಪನಗೊಂಡ ಮೈಮನಗಳ ಪುಳಕಗೊಳಿಸಿ
ಅರಳಿ ನಿಂತ ಭಾವನೆಗಳ ರಮಿಸಿ ಸಂತೈಸಿ
ಕೆರಳಿದ ಕಾಮನೆಗಳ ದಹಿಸಲು ಸಾಕು ಈ
ರಂಗಿನಾಟ ಮುದ್ದು ಕೃಷ್ಣ

ಎಲ್ಲೆಲ್ಲೂ ಸಿಗದ ಪರಮ ಸುಖ ನಿನ್ನ ಒಪ್ಪಿಗೆಯ
ಬಿಸಿಯಪ್ಪುಗೆಯಲಿ
ಬಿಗಿದ ಹಿಡಿತ ಸಡಿಲು ಬೇಡ ತಾಳಲಾರೆ ನಾ
ಈ ದೇಹ ಕಂಪನ

ಹಿಂಡಿ ಹಿಪ್ಪೆ ಮಾಡು ರಂಗಿನಾಟದ ನೆಪದಲಿ
ಪ್ರತಿ ಅಂಗುಲದಲಿ ಹೊಳೆವ ಮಿಂಚು ಹಿಗ್ಗಿಸಿದೆ
ದೇಹ ದಾಹವ

ಬಿಡಬೇಡ ಎನ್ನ ಕೈ ನಲುಗಿ ನುಗ್ಗಾಗಲಿ ಎನ್ನ
ಮೈಮಾಟ ನಿನ್ನ ಜಗ್ಗಾಟದಲಿ

ಹಿತವಾದ ಮುಲುಕಾಟ ಬೆವರು ಹನಿಗಳ
ಅಲೆದಾಟ ಸಾಕಲ್ಲ ನಿನ್ನ ಹುರಿದುಂಬಿಸಲು

ಬೇಕು ಇನ್ನು ಏನು ನಿನಗೆ ಅರ್ಪಿಸಿ ಬಿಡುವೆ
ಎಲ್ಲ ನಿನಗೆ ತೊರೆಯಬೇಡ ಎನ್ನ ನೀ ಹಣ್ಣು ಮಾಡದೇ

ನೀ ಸುರಿದ ರಂಗು ಹಬ್ಬಿಸಿ ಎಬ್ಬಿಸಿದೆ ಮೂಡಿಸಿದೆ
ಕಾಮನ ಬಿಲ್ಲ

ಅಡಿಯಿಂದ ಮುಡಿಯವರೆಗೆ ಮುಂದುವರೆಯಲಿ
ಅದರ ದಾಳಿ ತುಂಬುವವರೆಗೆ ಎನ್ನ ಉದರ

ಮುಲುಗಿ ನಲುಗಿ ಮೆಲ್ಲಗೆ ಚೀರಿ ಹಂಗು ಹರಿದು
ಎದೆ ಬಿರಿದು ಒಡಲ ತುಂಬ ಹರಿದು ಬಿಡಲಿ
ನಿನ್ನೊಲವ ಧಾರೆ

---ಸಿದ್ದು ಯಾಪಲಪರವಿ

ನೀ ನಲುಗದಿರು

*ನೀ ನಲುಗದಿರು*

ಇಡೀ ಬದುಕಲನುಭವಿಸಿದ ಭಯ
ತಲ್ಲಣಕೀಗ ಬಿದ್ದ ತೆರೆ

ಕರಿಯ ದೇಹದಲಡಗಿದ ಅನುಮಾನದ
ಕರಿನೆರಳ ಬಿಸಿಗೆ ಬಾಡಿದ ಮನ

ಸಹಿಸಲಾಗದ ಗಂಡಸಿನ ಮನದ
ಕಪ್ಪುಅನುಮಾನದ ಹುತ್ತದಲಡಗಿದ 
ಹಾವ ಹೊರಗೆಳೆದು ಕಾಡಿಗಟ್ಟಿ
ನಿರ್ಭಯದಿ ನಸುನಗೆಯ ಬೆಳಕ
ಚಲ್ಲು

ನಾ
ಅವನು ಕಳಿಸಿದ ಕೊಡುಗೆ
ತೊಟ್ಟು ಸಂಭ್ರಮಿಸು ಮೈ
ಛಳಿ ಬಿಟ್ಟು

ನೋಡಲಾಗದೇ ನಿನ್ನ ನೋವಾ
ದೇವ ಕಳಿಸಿಹನು ಎನ್ನ

ನಿನ್ನ ಬರಸೆಳೆದು ರಮಿಸಿ
ಮುದ್ದು ಮಾಡಿ ಒಲವ
ಮುಲಾಮು ಸವರಿ ಮನದ
ಗಾಯವಳಿಸಲು
ನಿನ್ನ ನಗೆಯ ಉಳಿಸಲು

ಸಾಕು ಸಾಕು ಸಂಶಯದ
ಸುಳಿಯ ತಿರುಗುಣಿಯಲಿ ತಿರುಗಿ
ತಿರುಗಿ ಬೀಳಬೇಡ

ಏಳು ಎದ್ದೇಳು ಯಾವ
ಪ್ರೀತಿಯೂ ಅನಾಚಾರವಲ್ಲ
ದೇಹಸೆಳೆತ
ಮೀರದನುರಾಗಕಿಲ್ಲ ರಾಗ
ದ್ವೇಷಾಸುಯೆಯ ಸೋಂಕು

ಈಗ ಇದು ಕೇವಲ
ಒಲವ ನಲಿವಾಟ ಮೈಮನಗಳ
ಮಿಡುಕಾಟ

ನಿಷ್ಟೆಯ ದುಡಿತ ನಿಯತ್ತಿನ
ಬದುಕನರಿಯದವರ ಸಂಗ
ನಿಸ್ಸಂಗವಾದ ಬಳಿಕ ನೀ
ನೀ ನಲ್ಲ ಬರೀ ಅವನೇ ಎಲ್ಲ

ತೋಳಿಗಾಸರೆಯಾದ ಒಲವ ಭಾರವ
ಹಿತವಾಗಿ ಮೈದಡವಿ ಜೋಪಾನ
ಮಾಡಿ ಲಾಲಿ ಹಾಡಿ ನಕ್ಕು ನಲಿದು

ನಿರ್ಮಲ ತೋಳ ಬಂಧಿಯಲಿ
ಬಂಧಿಸಿ ನಿಶ್ಚಿಂತಳಾಗಿ ಹಾಯಾಗಿ
ಮಲಗಿ ಮೈಮರೆತು ಬಿಡು
ವಾಸ್ತವದ ಭೂತ ನುಂಗಿ
ನುಗ್ಗುವ ಮುನ್ನ

ಮುನ್ನಡೆಯಲಿ ಈ ಹೊಸ
ಒಲವ ಪಯಣ...*ನೀ ನಲುಗದಿರು*

ಇಡೀ ಬದುಕಲನುಭವಿಸಿದ ಭಯ
ತಲ್ಲಣಕೀಗ ಬಿದ್ದ ತೆರೆ

ಕರಿಯ ದೇಹದಲಡಗಿದ ಅನುಮಾನದ
ಕರಿನೆರಳ ಬಿಸಿಗೆ ಬಾಡಿದ ಮನ

ಸಹಿಸಲಾಗದ ಗಂಡಸಿನ ಮನದ
ಕಪ್ಪುಅನುಮಾನದ ಹುತ್ತದಲಡಗಿದ 
ಹಾವ ಹೊರಗೆಳೆದು ಕಾಡಿಗಟ್ಟಿ
ನಿರ್ಭಯದಿ ನಸುನಗೆಯ ಬೆಳಕ
ಚಲ್ಲು

ನಾ
ಅವನು ಕಳಿಸಿದ ಕೊಡುಗೆ
ತೊಟ್ಟು ಸಂಭ್ರಮಿಸು ಮೈ
ಛಳಿ ಬಿಟ್ಟು

ನೋಡಲಾಗದೇ ನಿನ್ನ ನೋವಾ
ದೇವ ಕಳಿಸಿಹನು ಎನ್ನ

ನಿನ್ನ ಬರಸೆಳೆದು ರಮಿಸಿ
ಮುದ್ದು ಮಾಡಿ ಒಲವ
ಮುಲಾಮು ಸವರಿ ಮನದ
ಗಾಯವಳಿಸಲು
ನಿನ್ನ ನಗೆಯ ಉಳಿಸಲು

ಸಾಕು ಸಾಕು ಸಂಶಯದ
ಸುಳಿಯ ತಿರುಗುಣಿಯಲಿ ತಿರುಗಿ
ತಿರುಗಿ ಬೀಳಬೇಡ

ಏಳು ಎದ್ದೇಳು ಯಾವ
ಪ್ರೀತಿಯೂ ಅನಾಚಾರವಲ್ಲ
ದೇಹಸೆಳೆತ
ಮೀರದನುರಾಗಕಿಲ್ಲ ರಾಗ
ದ್ವೇಷಾಸುಯೆಯ ಸೋಂಕು

ಈಗ ಇದು ಕೇವಲ
ಒಲವ ನಲಿವಾಟ ಮೈಮನಗಳ
ಮಿಡುಕಾಟ

ನಿಷ್ಟೆಯ ದುಡಿತ ನಿಯತ್ತಿನ
ಬದುಕನರಿಯದವರ ಸಂಗ
ನಿಸ್ಸಂಗವಾದ ಬಳಿಕ ನೀ
ನೀ ನಲ್ಲ ಬರೀ ಅವನೇ ಎಲ್ಲ

ತೋಳಿಗಾಸರೆಯಾದ ಒಲವ ಭಾರವ
ಹಿತವಾಗಿ ಮೈದಡವಿ ಜೋಪಾನ
ಮಾಡಿ ಲಾಲಿ ಹಾಡಿ ನಕ್ಕು ನಲಿದು

ನಿರ್ಮಲ ತೋಳ ಬಂಧಿಯಲಿ
ಬಂಧಿಸಿ ನಿಶ್ಚಿಂತಳಾಗಿ ಹಾಯಾಗಿ
ಮಲಗಿ ಮೈಮರೆತು ಬಿಡು
ವಾಸ್ತವದ ಭೂತ ನುಂಗಿ
ನುಗ್ಗುವ ಮುನ್ನ

ಮುನ್ನಡೆಯಲಿ ಈ ಹೊಸ
ಒಲವ ಪಯಣ...

-----ಸಿದ್ದು ಯಾಪಲಪರವಿ

Tuesday, March 13, 2018

ಪ್ರಕಾಶ್ ರೈ ಹಾಗೂ ಸತ್ಯಾನುಸಂಧಾನ


*ಪ್ರಕಾಶ್ ರೈ ಹಾಗೂ ಸತ್ಯಾನುಸಂಧಾನ*

ಪ್ರಕಾಶ್ ರಾಜ್ ಉರ್ಫ್ ರೈ ಅದ್ಭುತ ನಟ.
ಈಗ ಅಷ್ಟೇ ಚನ್ನಾಗಿ ಬರೆಯಲಾರಂಭಿಸಿದ್ದಾರೆ. ಸೆಲೆಬ್ರಿಟಿ ನಟರಿಗೂ ಏನಾದರೂ ಸಾಧಿಸಬೇಕು ಎಂಬ ಹುಚ್ಚಿರುತ್ತದೆ.

ನಮ್ಮಂಥ ಬರಹಗಾರರಿಗೆ ಕೇವಲ ಬರಹಗಳಿಂದ ಸೆಲೆಬ್ರಿಟಿ ಆಗಲ್ಲ ಇನ್ನೂ ಏನೇನೋ ಆಗಬೇಕು ಅನಿಸಿರುತ್ತೆ ಆದರೆ ಎಲ್ಲಾ ಸೆಲೆಬ್ರಿಟಿಗಳು ತಮಗರಿವಿಲ್ಲದಂತೆ ಮನದಾಳದಲ್ಲಿ ಬರಹ ಹಾಗೂ ಸಂಗೀತವನ್ನು ಆರಾಧಿಸುತ್ತಾರೆ.

ಅದಕ್ಕಾಗಿ ಒಂದು ಹಂತದಲ್ಲಿ ಅವರೂ ಬರಹಗಾರರಾಗಿ ಬೆಳೆದು, ಸಾರ್ವಜನಿಕ ಚಳುವಳಿಗಳಲ್ಲಿ ಭಾಗವಹಿಸಿ ಮುಖ್ಯವಾಹಿನಿಗೆ ಸೇರಲು ಚಡಪಡಿಸುತ್ತಾರೆ.

*ಇದೆಲ್ಲ ತುಂಬ ಹಣ ಹಾಗೂ ಖ್ಯಾತಿ ಗಳಿಸಿದ ನಂತರವೇ*!

ಈ ಹಿಂದೆ ರೈ ಬಗ್ಗೆ Weekend with Ramesh ನೋಡಿದಾಗ ಬರೆದಿದ್ದೆ ಈಗ ಪ್ರಜಾವಾಣಿ ಅಂಕಣ ಓದಿದ ಮೇಲೆ‌ ಮತ್ತೆ ಬರೆಯಬೇಕೆನಿಸಿತು.

ಪ್ರಕಾಶ್ ಎಲ್ಲ ನಟರಂತೆ ಸೂಕ್ಷ್ಮಜೀವಿ. ಮಾತನಾಡುವ, ಬರೆಯುವ, ಆಲೋಚಿಸುವ ಶಕ್ತಿಯೂ ಇದೆ.

ಹೊರಗಡೆ ಹೋಗಿ ಹಣ-ಹೆಸರು ಮಾಡಿದ ಮೇಲೂ ಕನ್ನಡದಲ್ಲಿ ಬರೆಯುವಾಗ ರಾಜ್ ಆಗದೇ ರೈ ಆಗಿರುವುದೇ ಇದಕ್ಕೇ ಸಾಕ್ಷಿ. I congratulate him for  the same.

ಪ್ರಜಾವಾಣಿಯ  *ಅವರವರ ಭಾವಕ್ಕೆ...* ಅಂಕಣದಲ್ಲಿ ಬರೆದ *ಸತ್ಯ ನಗ್ನವಾಗಿ ನಿಂತಿದೆ...*
ಓದಿದ ಮೇಲೆ ಅರ್ಧಸತ್ಯ ಹೇಳಿದ್ದಾರೆ ಎಂಬ ಅನುಮಾನಕ್ಕೆ ಕ್ಷಮೆ ಇರಲಿ, ಅದೂ ನನ್ನ ಮಿತಿಯೂ ಇರಬಹುದು.

ರೈ ಹೆಚ್ಚು ಕಡಿಮೆ ನಮ್ಮ ವಾರಿಗೆಯವರು ಆದರೆ ಹೆಚ್ಚು ಹೆಸರು ಮಾಡಿದ್ದಾರೆ. ಆಲೋಚನಾ ಕ್ರಮದ ಹಾದಿಯಲ್ಲಿ ಸಮಕಾಲೀನತೆ ಇರುವುದೊಂದು ಖುಷಿ.

ಅಂಕಣದಲ್ಲಿ ಬರೆದಿರುವ ಸತ್ಯ ಸುಂದರವಾಗಿ ಓದಿಸಿಕೊಂಡು ಹೋಗುತ್ತೆ.
ಅನಿರೀಕ್ಷಿತ ಮದುವೆಯಾದ ಮೇಲೆ ಭೆಟಿಯಾದ ಹಳೆಯ ಗೆಳತಿ ಆಹ್ವಾನಿಸಿದಾಗ ಶೂಟಿಂಗ್ ನೆಪ ಹೇಳಿ ನಾನಾಗಿದ್ದರೆ ತಪ್ಪಿಸಿಕೊಳ್ಳುತ್ತಿರಲಿಲ್ಲ.

ಒಂದೇ ಮಂಚದ ಮೇಲೆ ಇನ್ನೂ ಸುಂದರವಾಗಿ ಕಾಣುತ್ತಿದ್ದ ಸಂಗಾತಿ ತಾನಾಗಿ ಆಹ್ವಾನಿಸಿದಾಗ ತಿರಸ್ಕಾರ ಮಾಡಿ ಅವಳ ಭಾವನಗಳ ಘಾಸಿಗೊಳಿಸುತ್ತಿದ್ದಿಲ್ಲ.

ಸಿಕ್ಕಷ್ಟು ಸಮಯವನ್ನು ಅರ್ಥಪೂರ್ಣವಾಗಿ ಬಳಸಿಕೊಂಡು ಇಬ್ಬರೂ ಸಂಭ್ರಮಿಸುತ್ತಿದ್ದೆವು.

You could have done the same thing Prakash.

ಒಂದು ವೇಳೆ ನೀವು ನನ್ನ ಹಾಗೆ ಆಲೋಚನೆ ಮಾಡಿ ಅನುಭವಿಸಿ ಅರ್ಧಸತ್ಯ ಹೇಳಿದ್ದರೂ ಸಂತೋಷ ಪಡುತ್ತೇನೆ.

*ಹೇಳು ಮಾರಾರ್ಯೆ ನಾ ಯಾರಿಗೂ ಹೇಳುವುದಿಲ್ಲ*.

ಇಂತಹ ಪ್ರಸಂಗ ನನ್ನ ಬದುಕಿಲ್ಲಿಯೂ ಬಂದಿತ್ತು. ಮದುವೆಯಾಗದೇ ಗಂಡ-ಹೆಂಡತಿ ಅನಿಸಿಕೊಳ್ಳದೇ ಕೇವಲ wanted to be friends without physical contact ಅಂದುಕೊಂಡಿದ್ದೆ.

ಹಾಗೆಂದುಕೊಂಡು ಜೇಬಿನಲ್ಲಿ ಹಣ ಇರದಿದ್ದರೂ Star hotel ನಲ್ಲಿ ಸಂಧಿಸಿದೆ. 
ಸುಮಾರು ದಿನಗಳ  ಗೆಳೆತನಕೊಂದು ತಾರ್ಕಿಕ ಅಂತ್ಯ ಹಾಡಬೇಕು ಅಂದುಕೊಂಡಿದ್ದೆ...

ಆದರೆ ಪ್ರಕಾಶ್ ಹಾಗಾಗಲಿಲ್ಲ. ಭಿನ್ನವಾಗಿ ನಡೆದುಹೋಯಿತು.
ಆದರೆ ಅದಕ್ಕೆ ಯಾವುದೋ ವಿಷಾದವಿಲ್ಲ. ಸತ್ಯದೊಂದಿಗೆ ನಾನೂ ನಗ್ನವಾದದ್ದು ಯಾರಿಗೂ ಹೇಳಿಲ್ಲ ಹೇಳಲಾಗಿಲ್ಲ.

ಹೇಳಿದರೇ ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದೂ ಇಲ್ಲ.
ಅದಕ್ಕೆ ನಾ ನಿಜ ಹೇಳಿರುವೆ...
*ಏಕೆಂದರೆ I'm not celebrity like you...*

----ಸಿದ್ದು ಯಾಪಲಪರವಿ.

Sunday, March 11, 2018

ನೆಲೆ ನಿಂತ ಹುಡುಕಾಟ ಹುಡುಗಾಟ

*ನೆಲೆ ನಿಂತ ಹುಡುಕಾಟ ಹುಡುಗಾಟ*

ಹುಚ್ಚು ಮನಸಿಗೆ ಹತ್ತಲ್ಲ
ಸಾವಿರದ ಮುಖಗಳ ಹುಡುಕಾಟ

ತೀರದ ದಾಹ ತಣಿಸಲು
ನೂರೆಂಟು ಗೊಂದಲದ ಹುಡುಗಾಟ

ದೇಹದಾಟ ಮೈಮಾಟ ಸೊಬಗ
ಕೂಟ ಕಳ್ಳ ನೋಟ ಮಳ್ಳ ಹಟ

ಬಾಗಿದರೂ ಮೈ ಕುಗ್ಗಿದರೂ
ಕೈ ನಿಲ್ಲದ ಚಪಲದಾಟ

ಅಲ್ಲಿ ಇಲ್ಲಿ ಮತ್ತೆಲ್ಲಿ
ಹೇಗಂದರೆ ಹಾಗೆ ಹೀಗಂದು

ಹೀಗೆ ಏನಾದರೂ ಮಾಡಲು
ಒಳಹೊರಗೂ ನೊಂದು ಕೊಂದು

ಹಿಂದು ಮುಂದು ಮುಖಗಳ
ಮೇಲೆ ಮುಖವಾಡಗಳ‌ ಸರಮಾಲೆ

ಮುಗಿಯದ ಚಪಲಕೆ ತೀರದ
ದಾಹಕೆ ಬತ್ತದ ಜೀವಜಲ

ಮತ್ತೆ ಮತ್ತೆ ಮತ್ತದೇ ಗತ್ತು
ಒಳಗೊಳಗೆ ನಿಲ್ಲದ ಮತ್ತು

ಬರೀ ಗಮ್ಮತ್ತು ಮೋಜಿನ
ಮಂಜಿನಾಟದ ಬೆರಗ ಛಳಿ

ಬೆದರದ ಮನಕಿಲ್ಲ ನಾಚಿಗೆ
ಕರಗದ ಚಿಂತನೆಗಿಲ್ಲ ಚಿಂತೆ

ನೀ ಸಿಕ್ಕ ಮರುಕ್ಷಣ ಎಲ್ಲ
ಎಲ್ಲಾ ಮಂಗಮಾಯ ನಾ

ಈಗ ಬರೀ ನಾ
ನೀ ನೆಂಬ ನಂಬಿಗೆಯ ಬಿಗಿಬಂಧನದಿ

ನಿರಂತರ ಹರಿವ ಜೋಡ ನದಿ
ಬದುಕ ದಡ ಸೇರಿ ಆಳಕೇರಿ ಒಳಗಿಳಿಯಲು.

----ಸಿದ್ದು ಯಾಪಲಪರವಿ.

Tuesday, March 6, 2018

ಕೂಸು ಕಳೆದಿದೆ ಜಾತ್ರೆಯಲಿ

*ಕೂಸು ಕಳೆದಿದೆ ಜಾತ್ರೆಯಲಿ*

ಒಲವಿನಿಂದ ಒಂದರಗಳಿಗೆ ಬಿಟ್ಟಿರದೆ
ನಿತ್ಯ ಕಾವ್ಯ ಬರೆದು ಲಾಲಿ ಹಾಡಿ
ಮುದ್ದು ಮಾಡಿ ಬೆಳೆಸಿದ್ದ
ಕೂಸು ಕಳೆದು ಹೋಗಿದೆ

ಗಾಣದೆತ್ತಿನ ದುಡಿತದ ದಂಡಿನರಮನೆಯ
ಸಿಂಹಾಸನದಿ ಕುಳಿಸಿ ಮೆರೆಸುವ
ನಾಜೂಕು ಮಂದಿಯ ಸಂಗದ
ಮರಳು ಮಾತಿಗೊಲಿದು ಮುನಿಸ
ಮರೆತು ದುಡಿದೇ ದುಡಿಯುವ
ಅಸಹಾಯಕ ಮರುಳ
ಕೂಸು ಕಳೆದು ಹೋಗಿದೆ

ಸಂಸಾರ ಸಾಗರದ ಪ್ರೀತಿ ಅಲೆಯಲಿ
ವಾತ್ಸಲ್ಯದಮಲಿನಲಿ ಅಪ್ಪಳಿಸಿ ಬಿದ್ದ
ಹೊಡೆತವರಿಯದೆ ತನ್ನ ತಾ ಮರೆತ
ಕೂಸು ಕಳೆದು ಹೋಗಿದೆ

ನಿತ್ಯ ಜಂಜಡದ ಸ್ವಾರ್ಥಿಗಳ
ಮೃದು ಮಾತಿಗೆ ಕೇಳಿದ್ದ ಮಾಡಿ
ಕೊಟ್ಟು ತಲೆ ಮೇಲೆ ಹೊತ್ತು
ಕುಣಿದು ನಕ್ಕು ನಲಿದ ಮಕ್ಕಳ
ಮನಸಿನ ಹುಚ್ಚು ಪೆದ್ದ
ಕೂಸು ಕಳೆದು ಹೋಗಿದೆ

ಈಗ ಕಳೆದಿದ್ದ ಕೂಸು ಎಚ್ಚರಾಗಿ
ಮೈಮನಗಳ ನೋವಿಗೆ ಬೇಸತ್ತು
ಸಣ್ಣಗೆ ನರಳುತಿದೆ ದಿಕ್ಕು ತೋಚದ
ಕೂಸು ಕಳೆದು ಹೋಗಿದೆ

ಕಳಕೊಂಡ ಹಳವಂಡದಿ ಹಳಹಳಿಸಿ
ಅಂಗಲಾಚಿ ನಡುಗುತ
ಕಣ್ಣೀರ ಸುರಿಸುವ
ಕೂಸು ಕಳೆದು ಹೋಗಿದೆ

ಇಷ್ಟೆಲ್ಲ ಮಾಡಿದರೂ ದಕ್ಕುವುದು
ಬರೀ ಚೂರು ಚೂರೂ ಪಾರು
ಅದನೇ ಕಣ್ಣಿಗೊತ್ತಿ ಸಂಭ್ರಮಿಸುವ
ಕೂಸು ಕಳೆದು ಹೋಗಿದೆ

ಈಗ ಹಿಡಿದು ಕಟ್ಟಿ ಹಾಕಿ
ರಮಿಸಿ ಮತ್ತೆ ಮತ್ತೆ ಮತ್ತೆ
ಮುದ್ದು
ಮಾಡಿ ಮತ್ತ ಬರಿಸಿ

ಜೇನ ಸುರಿಸಿ ಜೀವರಸವ
ಹರಿಸಿ ಬೆಚ್ಚಗೆ ಎದೆಯ
ಗೂಡಲಿ ಜತನ ಮಾಡುವೆ
ಕಳೆದು ಹೋದ ನನ್ನ ಕೂಸ.

----ಸಿದ್ದು ಯಾಪಲಪರವಿ.

Sunday, March 4, 2018

ಶರಣಸಿರಿ

*ಶರಣಸಿರಿ,ಸಿಂಧನೂರು,ಬಸವಕೇಂದ್ರಹಾಗೂ ಶರಣೇಗೌಡರು*

ಸಿಂಧನೂರು ಬಸವ ಕೇಂದ್ರದ ಹಿರಿಯರು,ನನ್ನ ಹತ್ತಿರದ ಬಂಧುಗಳೂ ಆದ ಕಾಕಾ ಚಿಂತಮಾನದೊಡ್ಡಿಯ ಶರಣೇಗೌಡ ಮಾಲಿಪಾಟೀಲ ಅವರು ಅಪ್ಪಟ ಅಲ್ಲಲ್ಲಾ *ಉಗ್ರ ಬಸವಾಭಿಮನಿ* ನನ್ನನ್ನು ಬಾಲ್ಯದಿಂದ ಬಲ್ಲವರು.

ನೂರಾರು ಉಪನ್ಯಾಸಗಳ ಮೂಲಕ ನನ್ನನ್ನು ಜನಮಾನಸದಲ್ಲಿ ಸ್ಥಾಯಿಯಾಗಿಸಿದವರು.

ಎಪ್ಪತ್ತರ ದಶಕದಲ್ಲಿ ಕಾನೂನು ವ್ಯಾಸಂಗ ಪೂರೈಸಿದರೂ ಕೃಷಿ ಕಾಯಕದಲ್ಲಿ ನಿರತರಾದವರು.

ಮಾತಾಜಿ ಹಾಗೂ ಲಿಂಗಾನಂದರ ಪ್ರಭಾವದಿಂದ ಬಸವಧರ್ಮದಲ್ಲಿ ಪ್ರಭಾವಿತರಾದರು.

ಸಿಂಧನೂರಿನ ಶರಣಸಿರಿಯ ಪ್ರತಿ ಭೇಟಿಯಲ್ಲೂ ನನ್ನೊಡನೇ ತಾತ್ವಕ ಜಗಳ ಇದ್ದೇ ಇರುತ್ತದೆ.
ಅದೂ ಬಸವಧರ್ಮದ ಸುತ್ತ.

ಇತ್ತೀಚೆಗೆ ಪುಸ್ತಕ ಪ್ರಾಧಿಕಾರ ಪ್ರಕಟಿಸಿದ ಸಮಗ್ರ ವಚನ ಸಂಪುಟದ ನೂತನ ಪ್ರತಿಗಳನ್ನು ನೀಡಿದರು.
೨೦೧೬ ರಲ್ಲಿ ಪುಸ್ತಕ ಪ್ರಾಧಿಕಾರದ ಬಂಜೆಗೆರೆ ಜಯಪ್ರಕಾಶ ತಂಡ ಅಭಿನಂದನೀಯ ಕೆಲಸ ಮಾಡಿದೆ.

ನನಗಂತೂ ಇನ್ನಿಲ್ಲದ ಸಂಭ್ರಮ. ಎರಡೇ ಸಂಪುಟಗಳಲ್ಲಿ ಸಮಗ್ರ ವಚನಗಳು!

ಈಗ ಹೊಸ ಹುಮ್ಮಸ್ಸು ವಚನ ವಿಶ್ಲೇಷಣೆ ಬರೆಯಲು.

ನಿತ್ಯ ಪಠಿಸಲು ಅನುಕೂಲವಾಗುವ ಈ ಸಂಪುಟಗಳನ್ನು ಕಾಪಿಟ್ಟುಕೊಳ್ಳುವೆ.

---ಸಿದ್ದು ಯಾಪಲಪರವಿ.