Tuesday, May 29, 2018

ಕನ್ನಡಕದ ಕಳವಳ

ಕನ್ನಡಕದ ಕಳವಳ

ತೆಗೆದು ಇಡು ಕಪ್ಪು ಕನ್ನಡಕ
ಅರಿಯುವುದು ಕಠಿಣ ಕಂಗಳಲಿ
ಕಂಗೊಳಿಸುವ ಕನಸುಗಳ
ಇಣುಕಿ ನೋಡುವೆ ಅಡಗಿ
ಕುಳಿತಿರುವ ನನ್ನ
ನಾ

***

ಅನಿರೀಕ್ಷಿತ ಬೆರಗಿನಿಂದ ನೋಡಿ
ಬೆಂಡಾಡೆ
ಗತಕಾಲದ ವೈಭವಗಳ ಸಿಹಿ-ಕಹಿ
ಮೆಲ್ಲುತ ಮೌನವಾದೆ

***

ನಗು ಮೊಗ ಚಿಮ್ಮುವ
ಜೀವನೋತ್ಸಾಹ
ಕಲಿಯುವ ಕನವರಿಕೆ
ಚಡಪಡಿಸುತಿದೆ ಮನ
ಏನೋ ಹೇಳಲು

***

ಅದುಮಿಡುವೆ ಅರಳುತಿರುವ
ನೂರಾರು ಭಾವನೆಗಳ
ಹೇಳಿದರೆ ಕಳೆದುಹೋಗುವ
ತಳಮಳ

---ಸಿದ್ದು ಯಾಪಲಪರವಿ

ಕರಾವಳಿ ನಂಟು


*ಒಳ್ಳೆಯ ಸಮಯ, ಜನ, ಸಾಮಿಪ್ಯ ಕಳೆದುಕೊಳ್ಳಬಾರದು*

ಕರಾವಳಿ ನಂಟು ಇದ್ದೇ ಇದೆ. ಕಾರಣ ನೂರೆಂಟು.

ಹಿರಿಯ ಸಾಹಿತಿ ಕಾಂತಾವರ ಕನ್ನಡ ಸಂಘ, ಅಲ್ಲಮಪ್ರಭು ಪೀಠದ ಸಂಸ್ಥಾಪಕರಾದ ಡಾ.ನಾ.ಮೊಗಸಾಲೆ, ಮಂಗಳೂರು ನಿಡ್ಡೋಡಿಯ ಯುವ ಉದ್ಯಮಿ, ಜ್ಞಾನರತ್ನ ಎಜ್ಯುಕೇಶನ್ ಟ್ರಸ್ಟಿನ ಸಂಸ್ಥಾಪಕ ಭಾಸ್ಕರಗೌಡ ದೇವಸ್ಯ ಹಾಗೂ ಅವರ ಹತ್ತಾರು ಗೆಳೆಯರು ನನ್ನ ಬರುವಿಕೆ ಹಾಗೂ ಇರುವಿಕೆಗೆ ತುಡಿಯುವ ಸಹೃದಯ ಮನಸುಗಳು.

ಮಂಗಳೂರಿನ humidity, ಧೋ ಎಂದು ಸುರಿಯುವ ಮಳೆ, ಗೋಲ್ಡನ್ ಸ್ಟ್ರೀಕ್ ಅಪಾರ್ಟ್ಮೆಂಟಿನ ಬೆಚ್ಚಗಿನ ವಾಸ, ಹರಟೆ, ಬಿಸಿ ಬಿಸಿ ಗಂಜಿ, ಒಂದಿಷ್ಟು ಓದು-ಬರಹ.

ಇದೆಲ್ಲ ಪುಣ್ಯದ ಪ್ರತಿಫಲ. *ದೂರದ ಬಿಸಿಲನಾಡ ಮಗಲಾಯಿಗೆ ಇದೆಲ್ಲ ಹೇಗೆ ಸಾಧ್ಯ* ಅಂದುಕೊಳ್ಳುವದ ನಿಲ್ಲಿಸಿ,  ಕೇವಲ ಅನುಭವಿಸುತ್ತೇನೆ.

ಇದೆಲ್ಲ ಋಣಾನುಬಂಧ. ಅಲ್ಲಮನ ವಚನದ ಹಾಗೆ.*ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿದೆತ್ತ ಸಂಬಂಧವಯ್ಯ* ಎಂಬಂತೆ ಕೋಗಿಲೆಗೆ ಮಾಮರ ಸಿಕ್ಕೇ ಸಿಗುತ್ತದೆ.

ನಿನ್ನೆ ರಾತ್ರಿ ಸಾಹಿತ್ಯಾಸಕ್ತ ಬ್ಯಾಂಕರ್ *ಶ್ರೀನಿವಾಸ ದೇಶಪಾಂಡೆಯವರ* ಪರಿಚಯವಾಯಿತು.
ಮೂಲತಃ ಮುದಗಲ್ಲಿನವರಾದ ದೇಶಪಾಂಡೆ ತುಂಬಾ ಓದಿಕೊಂಡ ಜೀವನೋತ್ಸಾಹಿ.

ರಾತ್ರಿಯ ಬೈಟಕ್ ನಲ್ಲಿ ಸಾಹಿತ್ಯ, ಬದುಕು, ಖುಷಿ ತೇಲಿಹೋಯಿತು. ಅದರೊಟ್ಟಿಗೆ‌ ಸುಂದರ ಪರಿಸರ ಸುರಿಯುವ ಮಳೆ ನೋಡಲೆಷ್ಟು ಛಂದ.

ಕರಾವಳಿ ಜನ ಬರೀ ಜಾಣರಲ್ಲ. ಭಾಸ್ಕರ ಅವರಂಥ ಸಹೃದಯಿಗಳೂ ಇರುತ್ತಾರೆ. ಹುಡುಕುವುದು ಬೇಡ‌ ಆದರೆ ಸಿಕ್ಕಾಗ ಕಳೆದುಕೊಳ್ಳಬಾರದು ಅಷ್ಟೇ !

ಸುರಿಮಳೆಯ ಬೆರಗಿನಲಿ ಹೊರ‌ ಹೋಗುವುದು‌ ಅಸಾಧ್ಯ. ಭಾಸ್ಕರ್ ಪ್ರೀತಿಯಿಂದ ತಯಾರಿಸಿದ ಅನ್ನ-ಸಾಂಬಾರಿನಲಿ ಬರೀ ಒಲವಿತ್ತು.ಪ್ರೀತಿಯ ಮಸಾಲೆ ಇತ್ತು.

ಬದುಕುವುದಕ್ಕಾಗಿ ತಿನ್ನುವ ಮನಸ್ಥಿತಿ ಹೊಂದಿದವರಿಗೆ ಇರುವುದೆಲ್ಲ ಮೃಷ್ಟಾನ್ನ.

ಬಿಸಿ ಊಟವಾದ ಮೇಲೆ ಒಳನೋಟಕಿಳಿದು ಯೋಚಿಸಿ, ಹೊರಗೆ ಸುರಿವ ಮಳೆ ನೋಡುತ್ತ, ನೋಡುತ್ತ ಕರಗಿಹೋದೆ.

     *ಸಿದ್ದು ಯಾಪಲಪರವಿ*

Monday, May 28, 2018

ನಿಲ್ಲದ ಕನಸುಗಳು

*ನಿಲ್ಲದ ಕನಸುಗಳು*

ಮೈತುಂಬ ತುಂಬಿ ತುಳುಕುವ ಕನಸುಗಳು
ಬರೀ ಬಣ್ಣ ತುಂಬಿ ಅಂದಗೊಳಿಸಿ
ನೋಡುತ ನೋಡುತ್ತ ನೋಡುತ್ತಾ
ನನಸಾಗಿಸಲು ಹಂಬಲಿಸುತಿದೆ ಜೀವ
ಅಹೋರಾತ್ರಿ

ಕಳೆದುಕೊಳ್ಳಬಾರದೆಂಬ ಸಾತ್ವಿಕ ಹಟ
ಅಗೋಚರ ಸುಪ್ತ ಮನಸಿನ
ಮಂಗನಾಟಕೆ ಕುಣಿಯುತ
ನಲಿಯುತಿದೆ ಜೀವ ಮರೆಯುತ ನೋವ

ಬಾ ಎಂದರೆ ಬರಲಾದೀತೆ ಬೇಡ ಎಂದರೆ
ದೂರಾದೀತೆ ದೂರಲಾದೀತೆ ?

ಹುಟ್ಟುತಿರುವ ಹತ್ತು ಹಲವು ಪ್ರಶ್ನೆಗಳಿಗೆ
ನಿರುತ್ತರವೇ ಉತ್ತರ

ಆದರೂ ದಿನಕೊಂದು ಹೊಸ ಕನಸಿನ
ಬೆನ್ನೇರಿ ಸಾಗುವುದೇ ಬದುಕಿನ ಬವಣೆ

ಉಸಿರು ನಿಲುವವರೆಗೆ ಹಸಿರು ಬಾಡುವವರೆಗೆ
ಬದುಕ ಒರೆಗೆ ಹಚ್ಚುತ ಕಿಚ್ಚು ಉಳಿಸುತ
ಹೊಸ ಕನಸುಗಳ ಕಟ್ಟಿ ಹಾಡುತ ಸಾಗುವುದೇ
ಜೀ

---ಸಿದ್ದು ಯಾಪಲಪರವಿ

ತುಂಟ ಮನಸಿಗೊಂದು ತಂಟೆ

*ತುಂಟ ಮನಸಿಗೊಂದು ತಂಟೆ*

ಅರೆ ನೀ ಇಲ್ಲಿರುವಾಗ ಅವಳಲ್ಲಿಯೂ
ಇರುವುದಾವ ನ್ಯಾಯ ಅಂದರೆ ಹೇಗೆ

ನೀ‌ ನನ್ನೊಡನೆ ಸುತ್ತಿ ಸುಳಿಯುತಲಿರುವಾಗ
ಅವಳದೇನು ಕಿರಿಕಿರಿ ಅಂದರೆ ಹೇಗೆ

ಮನಸಿನ ಚಂಚಲವಿದಲ್ಲ ಅಂದರೂ
ಮತ್ತೇನೋ ಚಡಪಡಿಕೆ ಇದೆಂದರೆ ಹೇಗೆ

ಏನಾದರೂ ಇರಲೇಬೇಕಲ್ಲ ವಿನಾ
ಕಾರಣ ಅದು ಹೇಗೆ ಎಂದರೆ ಹೇಗೆ

ಇದು ಹೀಗೆಯೇ ಆಗೋದು ಒಳಗೊಂದು ಹೊರಗೊಂದು ಅನಬಾರದೆಂದರೆ ಹೇಗೆ

ಅವಳು ಇರಲಿ ಬಿಡು ನಿನ್ನ ಒಡನೆ
ಅಂದರೆ ಸುಮ್ಮನಿರಲಾರೆನೆಂದರೆ ಹೇಗೆ

ಅಯ್ಯೋ ಇದೇನೋ ಇವಳೂ ಅವಳೂ
ಅದಕೋ ಇದಕೋ ಇರಲೆಂದರೆ ಹೇಗೆ

ಅವಳಿವಳ‌‌ ಗೊಂದಲದ ಸಂಗಗಳ ಅನು
ಸಂಧಾನದಲಿ ಅನುಮಾನ ಬೇಡವೆಂದರೆ ಹೇಗೆ

ಅನುಮಾನ ಅವಮಾನ ಅನ್ನದೇ ಸುಮ್ಮನೇ
ಗುಮ್ಮನ ಹಾಗಿದ್ದರೆ ಗುದ್ದುತೀನಿ ಅಂದರೆ ಹೇಗೆ

ಅವಳಿರುವುದು ಇವಳಿಗೆ ಇವಳಿರುವುದು
ಅವಳಿಗೆ ಬೇಡವೆಂಬುದ ಎಲ್ಲಿಯೂ ಹೇಳದೇ
ಇರು ಹೀಗೆ ಹಾಗೆ ಹೇಗೇಗೋ ತುಂಟ ಮನಸಿನ
ತುಡುಗು ತಂಟೆಯ ಲೆಕ್ಕಿಸಿದರೂ ಲೆಕ್ಕಿಸದ
ಹಾ
ಗೆ.

Saturday, May 26, 2018

ಹೊಸ ಪಯಣ: ಸಿನೆಮಾ

*ಕಲಿಯಲು ಸಾವಿರ ಸಂಗತಿಗಳು*
ಹೊಸ ಪ್ರಯಾಣ.

ಕೊನೆಯವರೆಗೆ ಕಲಿಯುತ್ತಲೇ ಇರಬೇಕು. ಏನಾದರೂ ತಿಳಿದುಕೊಳ್ಳುತ್ತಲೇ ಇರಬೇಕು. ಕಲಿಸುವವರು ಯಾರು ಎಂಬುದು ಅಮುಖ್ಯ.
ಈಗ ಬರೆಯಲು ಹಿಡಿತ ಸಿಕ್ಕಿದೆ, ಸಾಧ್ಯವಾದಷ್ಟು ಬರೆಯಬೇಕೆಂಬ ತುಡಿತ.

ಸಿನೆಮಾ ನನಗೆ ಬರಹದಷ್ಟೇ ಪ್ರೀತಿ ಮಾಧ್ಯಮ ಆದರೆ ಕೆಲಸ ಮಾಡುವ ಅವಕಾಶ ಸಿಗಲಿಲ್ಲ.

*ಒಂದು ಬಿರುಗಾಳಿಯ ಕಥೆ* ಬರೆದ ಮೇಲೆ ಗದ್ಯದ ಮೇಲೆ ಹಿಡಿತ ಬಂತು. ಪಟ್ಟು ಹಿಡಿದು ಕುಳಿತರೆ ನೂರಾರು ಪುಟ ಸರಾಗವಾಗಿ ಬರೆಯಬಲ್ಲೆನೆಂಬ ಭರವಸೆ.

ಇದನ್ನು ಗ್ರಹಿಸಿದ ಸಹೃದಯಿ ಸಿನಿತಂತ್ರಜ್ಞ ಮಂಜುನಾಥ ಪಾಂಡವಪುರ ನನಗೊಂದು ಹೊಸ ಅವಕಾಶ ಕೊಟ್ಟರು.

*ಶರೀಫನ ತಂಬೂರಿ* ಎಂಬ ಕಲಾತ್ಮಕ ಸಿನೆಮಾಕ್ಕೆ ಸ್ಕ್ರೀನ್ ಪ್ಲೇ ಮಾಡಿ ಸಂಭಾಷಣೆ ಬರೆಯಲು ಕೇಳಿದಾಗ ಸಾರಾಸಗಟ ನಿರಾಕರಿಸಿದೆ. ಅನುಭವ ಇಲ್ಲದ ಕ್ಷೇತ್ರದಲ್ಲಿ ಕೆಲಸ ಒಪ್ಪಿಕೊಳ್ಳುವುದು ಅಸಂಗತ.

ಕಂಪ್ಲಿಯ ಬರಹಗಾರ ಪತ್ರಕರ್ತ W.ಬಸವರಾಜ ಅವರ ಕಥೆ ಇದು. ಸಾಹಿತಿ, ಪ್ರಾಧ್ಯಾಪಕ ಡಾ.ರಾಜಶೇಖರ ಜಮದಂಡಿ ಸಂಭಾಷಣೆ ರೂಪಿಸುವಲ್ಲಿ ನೆರವಾಗುತ್ತಾರಂತೆ.

ಮುಂದೆ ಮಂಜು ಬಿಡಲೇ ಇಲ್ಲ. ' ನಿಮ್ಮ ಅನುವಾದ ಚಿತ್ರಕಥೆ ಇದ್ದಂಗೆ ಸರ್ ' ಎಂಬ ದುಂಬಾಲು.

ಕವಿಯಾಗಿ, ಲವ್ ಕಾಲ ಗದ್ಯದ ಮೂಲಕ ಒಂದು ಲಯಗಾರಿಕೆಯಲಿ ಹೊರಟ ನನಗೆ disturbance ಬೇಡವಾಗಿತ್ತು.

ನಿರ್ಮಾಪಕ ಡಾ.ನಾರಾಯಣ ವೃತ್ತಿಯಿಂದ ಅರ್ಥೋ ವೈದ್ಯರು, ಪ್ರವೃತ್ತಿ ಅದ್ಭುತ.
ಒಂದೆರಡು ಸುತ್ತಿನ ಚರ್ಚೆಯ ನಂತರ ಮೌನವಾದೆ.
ಆಧ್ಯಾತ್ಮದ ವಿಚಾರಗಳನ್ನು ಚರ್ಚಿಸುವಾಗ ನನ್ನ ಕೆಮಿಸ್ಟ್ರಿ ಮ್ಯಾಚ್ ಆಯಿತು.

ಕೆಮಿಸ್ಟ್ರಿ ಮ್ಯಾಚ್ ಆಗದೇ ಏನೂ ಮಾಡಬಾರದು. ಒಂದು ಹನಿ ನೀರು ಕುಡಿಯಲು ವಿಚಾರಿಸುವ ಸ್ಥಿತಿ ತಲುಪಿದ್ದೇನೆ. ಕಹಿ ಅನುಭವಗಳು ಚಿಂದಿ ಮಾಡಿವೆ.
ಮತ್ತದೇ ರಿಪೀಟ್ ಆದರೆ ನಾನೊಬ್ಬ ಶುದ್ಧ ಮುಠ್ಠಾಳ.

ಮುಂದೆ ಮತ್ತೊಂದು ಆಘಾತ. ನಿರ್ದೇಶಕ ಹೆಸರು ಕೇಳಿ ಬೆವತು ಹೋದೆ.

ಸಿನಿಯರ್ ಮೋಸ್ಟ್ ಕಂಪೋಜರ್,  ಹಿರಿಯ ನಿರ್ದೇಶಕ ವಿ.ಮನೋಹರ ಸಿನಿಮಾ ಡೈರೆಕ್ಟ್ ಮಾಡ್ತಾರೆ ಅಂದಾಗ ಸುಸ್ತಾದೆ.
ಇದರ ಸಹವಾಸವೇ ಬೇಡವೆನಿಸಿತು.

ಮನೋಹರ ಅವರ ಹಿರಿತನ, ಅನುಭವ ದೂರದಿಂದ ಗಮನಿಸಿದ್ದೆ. ಮಾತನಾಡುವ ಅವಕಾಶ ಸಿಕ್ಕಿರಲಿಲ್ಲ. ಕಾಶಿನಾಥ ಅವರ ಶಿಷ್ಯ, ಪತ್ರಿಕೋದ್ಯಮಿ, ಕವಿ, ಸಂಗೀತಗಾರ, ನಟ ಸಿನೆಮಾದ ಎಲ್ಲಾ ಆಯಾಮ ಅರಿತ ನಿಪುಣ.

' ನೀವು ಒಳ್ಳೆಯ ಚಿತ್ರಕಥೆ ಬರೆದರೆ ಮಾತ್ರ ಸಿನೆಮಾ ಗೆಲ್ಲುತ್ತೆ ಇಲ್ಲದಿದ್ದರೆ ಎಲ್ಲಾ ಮುಳುಗುತ್ತೆ,' ಅಂದಾಗ ಚಿತ್ರಕಥೆ ಮಹತ್ವ ಅರಿತೆ.

ಬದುಕಿನ ತಲ್ಲಣಗಳ‌‌ ಅನುಭವಿಸಿ ಎದುರಿಸಲು ನನ್ನಂಥವರಿಗೆ *ಲಂಕೇಶ್* ಆದರ್ಶ.

ಪರಿಪೂರ್ಣತೆಗೆ ಶ್ರೀಕಾರ. ಬರಹ, ಸಿನೆಮಾ, ಪತ್ರಿಕೋದ್ಯಮ ಎಲ್ಲದರಲ್ಲೂ ಸೈ ಅನಿಸಿಕೊಂಡ ಚೈತನ್ಯ.

ಅವರನ್ನೊಮ್ಮೆ ಸ್ಮರಿಸಿ ಜೈ ಅಂದೆ.

ಈಗ ಈ ಯೋಜನೆಯಲೂ ಪರಕಾಯ ಪ್ರವೇಶದ ಸಿದ್ಧಾಂತ ಹಿಡಿದು, ಬಿರುಗಾಳಿ ಹಾಗೂ ಜುಗಲ್ ಮಾದರಿ ಅನುಸರಿಸಿ ತಾರ್ಕಿಕ ಅಂತ್ಯ ಕಾಣಿಸುವೆ ಎಂಬ ಭರವಸೆಯ ಮಹಾಬೆಳಕು.

ಪ್ರೇರೆಪಿಸಿ ಹುರಿದುಂಬಿಸಲು *ಅವನಿದ್ದಾನೆ* , ಮೆಚ್ಚಿ ಹಾರೈಸಲು ನೀವಿದ್ದೀರಿ.

      *ಸಿದ್ದು ಯಾಪಲಪರವಿ*

Friday, May 25, 2018

ಧರ್ಮಾರ್ಥ ಕಾಮದೊಳು ಮೋಕ್ಷ

*ಧರ್ಮಾರ್ಥ ಕಾಮದೊಳು ಮೋಕ್ಷ*

ಬೇಕಾದುದರಲಿದೆ ಧರ್ಮ ಬೇಡವಾದುದೆಲ್ಲ
ಅಧರ್ಮ

ಮೋಕ್ಷದ ಹುಟುಕಾಟದ ಇಳಿ ಹೊತ್ತು
ನಿಲ್ಲದ ತಳಮಳ ಬರೀ ಪಾಪಪ್ರಜ್ಞೆ

                         ***

ಸಮಭೋಗದ ಸವಿಪಾಲಲಿ ಇರುವ
ಮೋಕ್ಷವನರಿಯದ ಮೂಢತೆ

ಅವಳ ತೋಳ ಸೆರೆಯಲಿ ಕಳೆದ ಇರುಳ 
ಬೆಳಕಲಿ ನೂರೆಂಟು ಮುದದ ಮುಲುಕಾಟ

ಕಾಮಾಲೆಯ ಕಣ್ಣ ಕಿತ್ತು‌ ಒಲವ ಬೆಳಕ
ಪ್ರೀತಿ-ಪ್ರೇಮ-ಪ್ರಣಯದಾಟದಲಿ ಇರುವ
ಧರ್ಮಕೆ ನೂರಾರು ಹೊಸ ಅರ್ಥ

ಬಿಗಿ ಹಿಡಿದ ಉಸಿರ ಧ್ಯಾನಕೆ ಕಾಮವೇ
ಸಾಕ್ಷಿ ಕಾಮದಾಟಕೂ ಮೀರಿದ ಧ್ಯಾನ
ಬೇರೊಂದಿಲ್ಲ

ದೇಹ ಸಂಚಲನದ ನರನಾಡಿಗಳಿಗೆ
ನಿಮಿರುವಿಕೆಯ ಏಕಾಗ್ರ

ನೆಲೆ ನಿಂತ ಬಿರುಸ ತಡೆ ಹಿಡಿಯಲು
ಬೇಕೇ ಬೇಕು ಮನದ ಹಿಡಿತ

ಹಿತಸ್ಪರ್ಷ ಪಿಸು ಮಾತು ಅಂಗಾಂಗಳ
ಹಿತಮರ್ಧನಗಳ ಮಿಡುಕಾಟ

ವೀಣೆಯ ನುಡಿಸುವ ನರನಾಡಿಗಳ
ಬೆರಳ ಮಿಡಿತ

ಅರಳುವ ಮನಸಿನ ನೋವಲೂ ಹಿತ
ಹಿಂಡಿ ಹಿಪ್ಪೆಯಾಗಲೆಂಬ ಉನ್ಮಾದ

ಸವಿಜೇನ ಸುರಿಸುವ ತುಟಿಗಳಿಗೆ
ಗುಟುಕಿಸುವ ಬಂಧನ

ತುಟಿಗೆ ತುಟಿ ತಾಗಿಸುವ ನೂಕಾಟ
ಅಂಗೈಯಲಿ ನರ್ತಿಸುವ ಎದೆಯೇರಿಳಿತ

ನಡುಗುವ ಕಿಬ್ಬೊಟ್ಟೆಗೆ ಬೆರಳ
ಉರುಳಾಟ ತಳ್ಳಾಟ

ನಿಷ್ಕಾಮ ಅಂಗಸಂಗದ ಕಾಮಕೆ ಹಗಲಲಿ ಹಬ್ಬದೂಟ ಇರಳಲೂ ಬೆಳಗ ಬೆರಗು

ರಸಿಕ ಹೃದಯಕೆ ಹಸಿದ ದೇಹಕೆ
ಮೈಥುನದಿ ಗಜಕಾಳಗದ ಘೀಳಾಟ

ರಕ್ತ ಧಾತುವಾಗಿ ಏದುಸಿರ ಕಾವಿಗೆ
ಮೈ ನೀರಾಗಿ ಬಸಿಯುವ ಹೊತ್ತು

ತಾನೇ ತಾನಾಗಿ ಅರಿವಿಲ್ಲದೇ ಅರಳುವ
ತೋಳ್ ತೊಡೆಗಳ ವಿಕಸನ

ಹೆಡೆಯತ್ತಿದ ಕಾಳಿಂಗಗೆ ಒಳ ನುಸುಳುವ
ಚಿತ್ತಕೆ ಹುತ್ತಲಿ ಚಿಮ್ಮವ ರಸಧಾರೆ

ದೇಹ ದೇಹ ಬಿಗಿದು ಬೆಸೆದಾಗ ತೂರಲು
ಗಾಳಿಗೂ ಇಲ್ಲ ಒಂದಿನಿತು ಜಾಗ

ಇದು ಬರೀ ಕಾಮದಾಟವಲ್ಲ ಇಲ್ಲಿ
ಅನುಮಾನ ಅಸಮಾನಕಿಲ್ಲ ಬಿಡುವು

ಇಳಿದು ಏರಿ ಒಳ ತೂರಿ ಮೇಲೆ
ಕೆಳಗೆ ಹಾರಿ ಜಾರಿ ಜಾರಿ ಹಾರಿ

ಕೆಲ ನಿಮಿಷಗಳ ಹಾರಾಟ ಚೀರಾಟದಲಿ
ಬಯಲ ಬೆರಗು ಒಲವ ಮೆರಗು

ಮೆಲ್ಲ ಮೆಲ್ಲಗೆ ಸ್ರವಿಸುವ ಜೇನ ಹನಿಗಳ
ರಭಸಕೆ ಕೆಳದುಟಿಯಲೂ ಎದೆಮಿಡಿತ

ಅಬ್ಬಾ ಅತ್ಯದ್ಭುತ ಈ ಮಿಲನ ಸವಿ
ಸುಖ ಇದು ಬರೀ ಕಾಮದಾಟವಲ್ಲ

ಅದರಾಚೆಗಿನ ಆಟ ಮೈಮಾಟ ಅರಿತು
ಬೆರೆತು ಸಮನಾಗಿ ಸುಖಿಸುವ ಸಮಭೋಗ

ಧರ್ಮಾರ್ಥ ಕಾಮದೊಳಿರುವ ಪರಮ
ಸುಖದಲೂ ಕಾಣುವ ಪರಮಾತ್ಮನ ದಿವ್ಯಾತ್ಮ.

     *ಸಿದ್ದು ಯಾಪಲಪರವಿ*

ಪ್ರೊ.ಆರ್.ಎಂ.ರಂಗನಾಥ

*ಹುಟ್ಟು ಹಬ್ಬದ ಶುಭಾಶಯಗಳು*

Many happy returns of the day to *Prof.R.M.Ranganath* ( Former Registrar, Bangalore University.and Syndicate member, Bangalore North University).

ಇಡೀ ಬದುಕನ್ನು ಸಂತರ ಹಾಗೆ ಸವೆಸುತ್ತ ಶಿಕ್ಷಣ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ನಿರಂತರ ತಮ್ಮನ್ನು ತೊಡಗಿಸಿಕೊಂಡಿರುವ, ಸಸ್ಯಶಾಸ್ತ್ರ ವಿಜ್ಞಾನಿ, ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಆರ್.ಎಂ.ರಂಗನಾಥ ಅವರದು ಆದರ್ಶ ಬದುಕು.

ಇಂದು 67ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ತಮ್ಮನ್ನು ಗೌರವಪೂರ್ವಕವಾಗಿ ಅಭಿನಂದಿಸುತ್ತೇನೆ.

ನಿಮ್ಮ ನಿಸ್ವಾರ್ಥ ಧೋರಣೆ ನಮಗೆಲ್ಲ ಅನುಕರಣೀಯ.

ವಿಶ್ವವಿದ್ಯಾಲಯದ ಕುಲಪತಿಯಾಗುವ ಅರ್ಹತೆ ಇದ್ದರೂ, ವಿಶ್ವವಿದ್ಯಾಲಯಗಳಿಗೆ ಆ ಸುಯೋಗ ಒದಗಿಬರಲಿಲ್ಲ.

ಇಡೀ ದೇಶ ಸುತ್ತಿ ಉನ್ನತ ಶಿಕ್ಷಣದ ಏಳ್ಗೆಗಾಗಿ ಮಾರ್ಗದರ್ಶನ ನೀಡುವ ನಿಮ್ಮ ಬತ್ತದ ಉತ್ಸಾಹ ಅಭಿನಂದನೀಯ.

ತಮ್ಮ ಕೃತಿಯನ್ನು ಅಧ್ಯಯನ ಮಾಡುತ್ತಿರುವ ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸುದೈವಿಗಳು.

ಇಂದಿಗೂ ಅನೇಕ ಶಿಕ್ಷಣ ಸಂಸ್ಥೆಗಳಿಗೆ ಯೋಜನಾ ವರದಿ ಬರೆಯುತ್ತ ಶಿಕ್ಷಣದ ಉನ್ನತೀಕರಣಕ್ಕಾಗಿ ದುಡಿಯುತ್ತಲಿದ್ದೀರಿ.

ವೈಯಕ್ತಿಕವಾಗಿ ನನ್ನ ಮಾರ್ಗದರ್ಶಕರು, ಹಿತೈಷಿಗಳಾಗಿ ನೀಡುತ್ತಿರುವ ನೆರವಿಗೆ ಬರೀ Thanks ಅಂದರೆ ಸಾಲದು.

*ನಿಸ್ವಾರ್ಥಕೆ ಉಪಮೇಯ. ಸಹನೆ ಉಪಮಾತೀತ*

ಮೇಲ್ನೋಟಕ್ಕೆ ಒಂಟಿಪಯಣ. ಆದರೆ ಹಾರೈಸಲು ಸಾವಿರ ಕಾಣದ ಕೈಗಳು. ಮೌನದ ಹಿಂದಿನ ಮಾತು.
ಶಬ್ದಗಳ ಹಿಂದಿನ ನಿಶಬ್ದ ಅರ್ಥಮಾಡಿಕೊಳ್ಳುವ ತಾಕತ್ತು ನಿಮ್ಮದು.

ಒಂಟಿತನವನು ಏಕಾಂತವಾಗಿಸಿ, ಬಯಸಿದ ಮನಸುಗಳಿಗೆ ಆತ್ಮಸಾಂಗತ್ಯ ನೀಡುವ ನೀವು ಈ *ಮತಲಬ್ ಕಿ ದುನಿಯಾದಲಿ* ಕಳೆದುಹೋಗುವುದಿಲ್ಲ.

ನೋಯಿಸಿದವರ, ಕಾಡಿದವರ ಅಲ್ಲಿಯೇ ಮರೆತು, ಮತ್ತೆ ನೆರವಾಗಬೇಕೆಂಬ ಬತ್ತದ ತುಡಿತವ ಯಾರೂ ಕಸಿಯಲಾಗದು.

ಬೆಂಗಳೂರು ಮತ್ತು ಕೋಶಿಸ್ ಚಿಂತಕರ ಚಾವಡಿಯ ವಿಸ್ಮಯ.

ರಾಜಕೀಯ, ಸಾಹಿತ್ಯ, ಶಿಕ್ಷಣ, ಸಿನಿಮಾ ಹಾಗೂ ಆಧ್ಯಾತ್ಮ ಚಿಂತನೆಗಳ ಸುತ್ತ ಹೊಸ ಹೊಳವು ಹುಡುಕುವ ಹುಮ್ಮಸ್ಸು.

ಹೆಗಲಿಗೊಂದು ಲ್ಯಾಪ್‌ಟಾಪ್, ಓಡಾಡಲು ಭೂಪಾಲನ್ ಆಟೋ, ಕೋಶಿಸ್ ಕಾಫಿ, ಗೂಗಲ್ ಸಂಚಾರವೇ ನಿಮ್ಮ ಸಂಸಾರ.

ಆಗೀಗ ತೊಂದರೆ ಕೊಡಲು ನನ್ನಂಥವರು.

ಹೀಗೆ ನಮ್ಮಂತವರನು ಸಹಿಸುತ ನೂರು ಕಾಲ ಆರೋಗ್ಯವಾಗಿ ಬಾಳುವ ಶಕ್ತಿಯನ್ನು ಭಗವಂತ ಕರುಣಿಸಲೆಂದು ಹಿತೈಷಿಗಳೆಲ್ಲರ ಪರವಾಗಿ ಬೇಡುವೆ.

       *ಸಿದ್ದು ಯಾಪಲಪರವಿ*

ಕಾವ್ಯಾಮೃತ

ಕಾವ್ಯಾಮೃತ

ನೀ ಕೊಟ್ಟದ್ದು ವಿಷ ಎಂದು
ಗೊತ್ತಿದ್ದರೂ ಗಟ ಗಟನೆ ಕುಡಿದೆ
ನನ್ನ ಮೈತುಂಬ ನಿನ್ನೊಲವ ಅಮೃತವಿತ್ತು.

***

ನೀ ನಿಲ್ಲದೇ ಓಡಿ ಹೋಗುವೆ
ಇಲ್ಲದ ನೆಪ ಹೇಳಿ ಎಂದು
ಗೊತ್ತಿದ್ದೂ ನಂಬಿದೆ
ನಾ ಓಡಿ ಹೋಗುವುದಿಲ್ಲ
ಎಂಬ ನಂಬಿಗೆಯಿಂದ.

***

ಕನಸುಗಳಿಗೆ ಬಣ್ಣ ತುಂಬಿ
ಸುಂದರವಾದ ಚಿತ್ರ ಬಿಡಿಸಿ
ಹೆಸರು ಹಾಕದೆ ಮರೆಯಾದೆ
ಆಗಲೇ ಹೆಸರು ಅಚ್ಚೊತ್ತಿತ್ತು
ನನ್ನೆದೆಯ ಗೋಡೆಯಲಿ.

***

ಕಣ್ಣಲ್ಲಿ ಆಟ ಆಡಿದೆ ಮನದಲಿ
ತಳ ಹೂಡಿದೆ
ಶಬ್ದಗಳಲಿ ಮಾತು ಕೊಡದೆ
ನಿಶಬ್ದವಾದೆ
ಮಾತಿಗೆ ಮೀರಿದ ಮಮಕಾರದಿ
ಮರೆಯಾದೆ.

***

ಅಪರಿಚಿತಳಾಗಿ ಉಳಿಯುವ ಹುನ್ನಾರ
ಅರಿತೂ ನಿತಾಂತವಾಗಿ ಆಟವಾಡಿದೆ
ಮೊದಲೇ ಒಪ್ಪಿಕೊಂಡ ಸೋಲೆಂಬಂತೆ.

***

ಈ ಕಳ್ಳಾಟವೇ ಹೀಗೆ ತುಂಬಾ ರುಚಿ
ತಿನ್ನಲು ಬಾರದು ಬಿಡಲು ಬಾರದು
ತಿಂದುದ ಮೀರಿಸುವ ಅಪರಿಮಿತ ಸಿಹಿ.

***

ನೀ ಹೋದ ಮೇಲೆ ನಾ ಸುಖಿ
ಅಂದುಕೋ ಬೇಡ ಸಖಿ
ಚೂರಿದ ಗಾಯ ಮರೆಯಾಗದಿರಲಿ
ಎಂದು ನಿತ್ಯ ಕೆರೆಯುತಲಿರುವೆ.

***

ಹಗಲು ಕತ್ತಲೆ ಬೇಕೆನಿಸುತ್ತದೆ
ರಾತ್ರಿ ಹಗಲಾಗುತ್ತದೆ ನಿನ್ನ
ಬೆಳದಿಂಗಳ ಬೆಳಕಿನ ಹೊಳಪಲಿ
ಮರೆಯುವದಾದರೂ ಹೇಗೆ
ಈ ನೆಳಲು-ಬೆಳಕಿನಾಟದಲಿ.

***

---ಸಿದ್ದು ಯಾಪಲಪರವಿ

Tuesday, May 22, 2018

ನಿನ್ನಾಟ ಸಾಕು‌

ನಿನ್ನಾಟ ಸಾಕು

ಸುರ ಸುಂದರ ಚಿತ್ತಾರಗಳು
ಕಣ್ಣು ಕುಕ್ಕುವ ಸೌಂದರ್ಯ
ಗತಕಾಲದ ಬಣ್ಣದ ಬದುಕು
ಚಿಗುರು ಮೀಸೆಯ ಚಲುವನ ಸಾಮಿಪ್ಯ
ಅವನೊಡನೆ ಬಿಗಿದಪ್ಪಿ ಮುದ್ದಿಸಿದರೆ
ನನಗೇನು ?

ನಾ ನಾನು ನಾನೇ ನೀ
ನೀನೇ ಎಲ್ಲಿದ್ದರೇನು ಹೇಗಿದ್ದರೇನು
ಎನಗಿಲ್ಲದ ಎನದಲ್ಲದ ಸೊತ್ತು ನೀ
ಇರು ನಿನ್ನ ಪಾಡಿಗೆ ಎನ್ನ ಕೆಣಕದೇ

ನನಗೆ ಗೊತ್ತು ನನ್ನ ಮೇಲೆ ನೀ
ಹೊಂದಿರುವ ಅಪಾರ ಪ್ರೇಮ ಅದ
ಮುಚ್ಚಿ ಮರೆಮಾಚುವ ಹುಸಿ ತಂತ್ರಕೆ
ಬೆಚ್ಚಿ ಬೀಳಲಾರೆ ಅತ್ತು ದುಃಖಿಸಲಾರೆ
ನೋವನರಿಯದವರೊಡನೆಯ ಸಂಗ
ಸುಮ್ಮನೇ ಗರ್ವಭಂಗ

ಹೇಳಿದ್ದೇನೆ ತೋರಿದ್ದೇನೆ ಎದೆ ಬಗೆದು
ನನ್ನಾಸೆಯ ವ್ಯಾಮೋಹವ

ನಟ್ಟ ನಡು ರಸ್ತೆಯಲಿ ನಿರ್ದಯವಾಗಿ
ಬಿಟ್ಟು ಹೋದವರ ಆಳದರಿವು ಕಾಣಲಾಗದೆ ?

ನಿನ್ನ ಹುಚ್ಚಾಟಗಳ ಅರಿತೂ ಅರಿಯದಂತೆ
ಕಂಡೂ ಕಾಣದಂತೆ
ಮುಂದೆ ಸಾಗುವೆ
ವಾಸ್ತವದಲೆಗಳ ಮೇಲೆ ಭಾವನೆಗಳ
ಸವಾರಿ ಮಾಡುತ್ತ ಮಾಡುತ್ತ.

---ಸಿದ್ದು ಯಾಪಲಪರವಿ

Saturday, May 19, 2018

ಜಗದ ಸುಖ ತಾಯಿ-ಮಗು

*ಜಗದ ಸುಖ ತಾಯಿ-ಮಗು*

ವಿಸ್ಮಯದ ದಿವ್ಯಾಘಾತ ಅಂಗಾಂಗಳ
ಸಂಗದಲಿ ಅನನ್ಯ ಭಿನ್ನ ಭಾವ

ನೆಚ್ಚಿನ ಪುರುಷನಿಗೆ ಒಡ್ಡುವ
ಅಂಗಾಂಗಳಲಿ
ಇನ್ನಿಲ್ಲದ ಕಾಮೋದ್ರೇಕದ
ಪರಮ ಸುಖ

ಹಿಂಡಿ ಹಿಪ್ಪೆಯಾದ ಮೃದು ಎದೆ
ಮೇಲೆ
ಹಿತಕರ ಹಿಂಸೆ
ಆದರೂ
ಮೈಮನಗಳ ಕೆರಳಿ ಅರಳಿ ಅಗಲುವ
ತೊಡೆಗಳ ಸಂಚಲನ ಸೀಳಿ ನುಗ್ಗುವ
ಪುರುಷೇಂದ್ರಿಯ ರಭಸದ
ಸಂಘರ್ಷದ ಪ್ರತಿಫಲ

ತಾಯಿ ಭಾಗ್ಯ

ಮಗುವಿನ ಮಿಲನದ
ಸುಖವೇ
ಭಿನ್ನ ವಿಭಿನ್ನ

ಕಾಮದ ಸುಳಿವು ಮಾಯ

ಮಗುವಿನ ಮೊಲೆ ಉಣಿಸುವ
ಭರದಲಿ ಇಲ್ಲ
ಪುರುಷನ ಕಾಮ ಬಿಂಬ

ಅಂಗ ಅದೇ
ಸಂಗ ಬೇರೆ
ನಿಷ್ಕಾಮ ಮಮತೆ

ತೊಡೆಯಲರಳಿದ ಕಮಲವಾದರೂ ಕಾಮಿಯಲ್ಲ
ವಾತ್ಸಲ್ಯದ ಅರಗಿಣಿ

ಹೆಣ್ಣೊಂದು �ಮಹಾ ವಿಸ್ಮಯ
ಅದೇ ದೇಹದ ಅಂಗಾಂಗಳ
ಮೇಲೆ ಅಪರಿಮಿತ
ಹಿಡಿತ

*ನೆಚ್ಚಿನ ಪುರುಷನಪ್ಪುಗೆಯಲಿ ಕಾಮ
ಮುದ್ದು ಮಗುವಿನಪ್ಪುಗೆಯಲಿ ನಿಷ್ಕಾಮ*

ಶರಣು ತಾಯೇ ಶರಣು ನಿನ್ನ ಬೆತ್ತಲ
ಮಹಿಮೆಯ ಮಹಾಮಾಯೆಯ
ದಿವ್ಯ ಪಾದಕೆ.

---ಸಿದ್ದು ಯಾಪಲಪರವಿ.

ಪ್ರೀತಿ ಪರಮಾಪ್ತ ಆದರೆ ಭಕ್ತಿ ಪರಮಾತ್ಮ

*ಪ್ರೀತಿ ಪರಮಾಪ್ತ ಆದರೆ ಭಕ್ತಿ ಪರಮಾತ್ಮ*

ಪ್ರೀತಿ ನದಿಯಂತೆ ಕೆಳಮುಖವಾಗಿ ಶಾಂತವಾಗಿ ಹರಿದು ಸಮುದ್ರ ಸೇರಿ‌ ಮುಕ್ತಿ ಹೊಂದಿ ಲೀನವಾಗುತ್ತದೆ.

ಎಷ್ಟೇ ಕಷ್ಟ,ಅಡೆ ತಡೆ ಬಂದರೂ ಹರಿಯುವುದು ಮಾತ್ರ ನಿಲ್ಲುವುದಿಲ್ಲ.

ಕಲ್ಲು-ಮುಳ್ಳು,ಕಾಡು-ಬೆಟ್ಟ,ಮನುಷ್ಯ-ಪ್ರಾಣಿಗಳ ಸ್ಪರ್ಷಗಳನ್ನು ನಿರ್ಲಿಪ್ತವಾಗಿ ಸ್ವೀಕರಿಸುತ್ತ ಸಾಗಿಯೇ ಸಾಗುತ್ತದೆ. ಪ್ರೀತಿಯಿಂದ ಹರಿಯುವುದು ಮಾತ್ರ ನಿಲ್ಲುವುದಿಲ್ಲ.

ತನ್ನ ಮೂಲ ನೆಲೆಬಿಟ್ಟು, ದೂರ ಬಹುದೂರ ಹರಿಯುತ್ತಲೇ ಸಹನೆ ರೂಪಿಸಿಕೊಳ್ಳುತ್ತದೆ.
ಪ್ರೀತಿಯೂ ಹಾಗೇಯೇ ಎಲ್ಲ ಸಂಕಷ್ಟ ಎದುರಿಸಿ ಸುಖದ ಹಾದಿ ಹಿಡಿಯುತ್ತದೆ.

ನಿರ್ಮಲ ಪ್ರೀತಿಗೂ ನದಿಗಿರುವ ಸಹಿಸುವುಕೆ ಅನಿವಾರ್ಯ. ಏಕೆಂದರೆ ಅದೂ ದಡ ಸೇರಲೇಬೇಕು. ಹಾಗೆ ಸೇರುತ್ತದೆ ಕೂಡಾ!

ಪ್ರೀತಿಗೆ ಅನೇಕ ಬಗೆಯ ತಡೆಗಳು,ವಿಘ್ನಗಳು ಹಾಗಂತ ಪ್ರೀತಿಸುವುದನ್ನು ಬಿಡಲಾಗದು, ಹರಿಯುವ ನದಿಯಂತೆ.

                              ***

ಭಕ್ತಿಯೂ ನದಿಯಂತೆ ಆದರೆ ಅದು ಮೇಲ್ಮುಖವಾಗಿ ಹರಿದು ಸಮುದ್ರದಿಂದ ಮೂಲ ಸ್ಥಾನ ಸೇರುತ್ತದೆ. ಅದೇ ಪ್ರೀತಿಗೂ ಭಕ್ತಿಗೂ ಇರುವ ಬಹುದೊಡ್ಡ ಅಂತರ. ಉದ್ದೇಶ ಒಂದೇ. ರೀತಿ ಬೇರೆ,ಬೇರೆ.

*ಪ್ರೀತಿ ನದಿಯಂತೆ ಕೆಳಮುಖವಾಗಿ ಹರಿದು ಸಮುದ್ರ ಸೇರಿದರೆ,ಭಕ್ತಿ ಮೇಲ್ಮುಖವಾಗಿ ಹರಿದು ಮೂಲ ಸ್ಥಾನ ಅಂದರೆ ದೇವರ ಸನ್ನಿಧಿ ಸೇರುತ್ತದೆ*

ಮನುಷ್ಯನೂ ಅಷ್ಟೇ ತನ್ನ ಒಳ್ಳೆಯತನದಿಂದ ಪ್ರೀತಿಸುತ್ತಾನೆ.ಪ್ರೀತಿಸುವ ಹಾಗೂ ಪ್ರೀತಿಸುವ ವ್ಯಕ್ತಿಗಳಿಗೆ ಪರಮಾಪ್ತನಾಗುತ್ತಾನೆ.

ನಿಷ್ಕಾಮ‌ ಪ್ರೀತಿಯೂ ಭಕ್ತಿಯ ಮೂಲವೇ.ಆದರೆ ಭಕ್ತಿ ಮಾರ್ಗ ನೀಡುವ ಧನ್ಯತೆಗೆ ಮುಪ್ಪೇ ಇಲ್ಲ.

ಪ್ರೀತಿ ಕೆಲವೊಮ್ಮೆ ದೇಹ ಅವಲಂಬಿತವಾದರೆ ಭಕ್ತಿ ಆತ್ಮಾವಲಂಬಿತ.
ಎರಡಕ್ಕೂ ಮೈಮನಗಳ ನಿಷ್ಟೆ ಹಾಗೂ ಸದೃಢತೆ ಅಗತ್ಯ.

ನಿಸ್ವಾರ್ಥದಿಂದ ಪ್ರೀತಿಸಲಾಗದ ಮನಸು, ಶ್ರದ್ಧೆಯಿಂದ ಪೂಜಿಸಲೂ ಆಗದು.

ನಿಸ್ವಾರ್ಥ ಎರಡರಲ್ಲೂ ಬೇಕು ಹರಿಯುವ ಜೀವ ಜಲದಂತೆ.

ಪ್ರೀತಿಸಿ ವ್ಯಕ್ತಿಗಳ ಒಲವು ಅನುಭವಿಸಿದರೆ, ಭಕ್ತಿಯಿಂದ ಭಗವಂತನ ಸಾನಿಧ್ಯದ ಧನ್ಯತೆ ಅನುಭಾವಿಸುತ್ತೇವೆ.

ಪ್ರೀತಿಮಾರ್ಗದಿಂದ ಭಕ್ತಿಮಾರ್ಗದೆಡೆಗೆ ಸಾಗೋಣ.

ಬಸವಪ್ರಜ್ಞೆ-ಜೋಳಿಗೆಯ ಹರಿಕಾರ

*ಬಸವಪ್ರಜ್ಞೆ-ಜೋಳಿಗೆಯ ಹರಿಕಾರ: ಮಹಾಂತ ಅಪ್ಪಗಳು*

ಇಲಕಲ್ಲಿನ ಪೂಜ್ಯ ಮಹಾಂತ ಅಪ್ಪಗಳು ದೈಹಿಕವಾಗಿ ದೂರವಾದರಷ್ಟೇ.

ಬಾಲ್ಯದಿಂದ ಮನದ ಮೇಲೆ ಮರೆಯಲಾಗದ ಪ್ರಭಾವಳಿ. ಬಸವಪ್ರಜ್ಞೆ ಬಿತ್ತಿ ಬೆಳೆಸಿ, ಭಾಷಣ ಮಾಡಲು ಕರೆದು ವೇದಿಕೆಯನೇರಿಸಿ ಹರಸಿದವರು.

ಮೊದಲ ಸಾರ್ವತ್ರಿಕ ಕಾರ್ಯಕ್ರಮ 90 ರ ದಶಕದಲಿ.

ಈಗ ಸಾವಿರದ ಗಡಿ. ನನ್ನ ವಚನ ಚಳುವಳಿಯ ಮಾತು ಮಂಥನ ಚಿಂತನೆಗೆ.

ಪೂಜ್ಯರದು ಮುಖವಾಡವಿಲ್ಲದ ಬಸವ ನಿಷ್ಟೆ. ಅಂಜದ ಅಳುಕದ  ಚೇತನ.

ಉತ್ತರಾಧಿಕಾರಿ ವಿಷಯವಾಗಿ ತೆಗೆದುಕೊಂಡ ನಿರ್ಣಯ ಅವಿಸ್ಮರಣೀಯ.

ಪಂಪಿಗಳ ಕೆರಳಿಸಿದ ಮೊಟ್ಟ ಮೊದಲ ಘಟನೆ.
ಕಲ್ಲುಗಳ ತೂರಾಟದಂಥ ಹೀನ ಕೆಲಸ.
ಆಚಾರ-ವಿಚಾರಗಳಲಿ ಕಟ್ಟರ್ ನಿಲುವು. ಮಾತೂ ಹಾಗೆ.ಒಮ್ಮೊಮ್ಮೆ ನುಂಗಲಾಗದ ಬಿಸಿ ತುಪ್ಪ.

                            ***

ನನ್ನ ಮದುವೆಯ ಘಟನೆ ನೆನಪಾಗುತ್ತದೆ.
ಸಂಪ್ರದಾಯವಾದಿಗಳು ಇಲಕಲ್ ಅಜ್ಜಾ ಅವರು ಬರುವದರೊಳಗೆ ಸುರಗಿ ಸುಡುಗಾಡು ಮಾಡಿ ತಮ್ಮ ಹಟ ತೀರಿಸಿಕೊಂಡರು.

ಅಜ್ಜಾ ಅವರು ಬಂದ ಮೇಲೆ ಎಂದಿನಂತೆ ಹೂ ಹಾಕಿ ಶರಣ ಪರಂಪರೆಯ ಕಲ್ಯಾಣದ ಸೋಗು.
ನಾನು ಅಸಹಾಯಕ. ಸಹಿಸಿಕೊಂಡೆ.

ಮದುವೆ ಮುಗಿದ ಒಂದೇ ವಾರದಲ್ಲಿ ಬಾಗಲಕೋಟೆಯ ಶಿರೂರಿನಲ್ಲಿ ಶಿವಾನುಭವ ತರಬೇತಿ ಶಿಬಿರ.
ನಾನು ಸಂಪನ್ಮೂಲ ವ್ಯಕ್ತಿ. ಒಳಗೊಳಗೆ ಇನ್ನಿಲ್ಲದ ಪಾಪಪ್ರಜ್ಞೆ.

*ಎನ್ನ ತಪ್ಪು ಅನಂತ ಕೋಟಿ ನಿಮ್ಮ ಸೈರಣೆಗೆ ಲೆಕ್ಕವಿಲ್ಲ* ಎನ್ನುತ್ತಲೇ ಮಾತನಾಡುತ್ತ ವಾರದ ಹಿಂದಿನ ನನ್ನ ಮದುವೆಯ ಅಪರಾಧ ಒಪ್ಪಿಕೊಂಡೆ.

*ಪೂಜ್ಯರ ಕಣ್ಣಾಲೆಯಲಿ ನೀರು*
'ಕ್ಷಮಿಸಿದೆ ಮಗನೇ' ಎಂಬಂತೆ.

ಅವರಿಗೂ ವಿಷಯ ಗೊತ್ತಿದ್ದರೂ ಹೇಳದೇ ಸಹಿಸಿಕೊಂಡು, ನಾನು ಒಪ್ಪಿಕೊಳ್ಳುತ್ತೀನೋ ಇಲ್ಲವೋ ಎಂಬ ಕುತೂಹಲ.
ಒಪ್ಪಿಕೊಂಡ ಕೂಡಲೇ ಭಾವುಕರಾದರು.

ನಿರಂತರ ಒಡನಾಟ. ಅನೇಕರು ನನ್ನ ಬಗ್ಗೆ ಪೂಜ್ಯರಿಗೆ ದೂರಿದರು.

*ನಾನು ಇಷ್ಟಲಿಂಗ ಪ್ರೇಮಿಯಲ್ಲ ಲಿಂಗ ಧಾರಣೆ,ಲಿಂಗ ಪೂಜಕನಲ್ಲ ಇತ್ಯಾದಿ ಇತ್ಯಾದಿ...*

ಹೌದು ಈಗಲೂ ಅಷ್ಟೇ ತೋರಿಕೆಯ ಬಸವ ನಿಲುವು ನನ್ನದಲ್ಲ.
ಅಪ್ಪಟ ಬಸವಪ್ರಜ್ಞೆ.

ಒಲವು, ನಿಲುವು, ಭಕ್ತಿ, ಭಾವ. ಎಲ್ಲದರಲ್ಲೂ.
ಅದಕೆ ಕಾರಣ ನೀವೇ. ನಿಮ್ಮ ಕ್ಷಮಾ ಗುಣ.*ತಾಯಿ ಪ್ರೀತಿ ಮರೆಯಲಾದೀತೇ?*

                            ***

ನಾಲ್ಕಾರು ತಿಂಗಳ ಹಿಂದೆ ಅನಾರೋಗ್ಯದ ಸ್ಥಿತಿಯಲ್ಲೂ ಅದೇ ವಾತ್ಸಲ್ಯ ತೋರಿ ಹೆಸರು ಉಂಡಿ ತಿನಿಸಿದರು.

                             ***

*ಗುರುಮಹಾಂತ ಅಪ್ಪಗಳ‌ ಸೇವೆಯೂ ಅನನ್ಯ*
ಪೂಜ್ಯರನ್ನು ಮಗುವಿನಂತೆ ಜೋಪಾನ ಮಾಡಿದರು.

ಅವರ ಶ್ರದ್ಧೆ ಅನುಪಮ. ಅವಿಸ್ಮರಣೀಯ.

ಶ್ರೀಗಳು ಹಾಕಿಕೊಟ್ಟ ಹಾದಿಯಲ್ಲಿ ಸಾಧ್ಯವಾದಷ್ಟು ನಡೆಯುವ ಶಕ್ತಿ, ತಾಕತ್ತು ಉಳಿದರೆ ಸಾಕು.

ನಿಮ್ಮ ಆಶಿರ್ವಾದ ನಮ್ಮ ಮೇಲೆ ಇದ್ದೇ ಇದೆ. ಅದಕ್ಕೆ ಇನ್ನೂ ಜೀವಂತವಾಗಿದ್ದೇವೆ. ಇರುತ್ತೇವೆ ಕೂಡಾ.

ನೀವು ಅಷ್ಠೇ.  ಈಗ ದೈಹಿಕ ನಿರ್ಗಮನ. ಮೌಲಿಕ ಚೈತನ್ಯವಾಗಿ ಸದಾ ನಮ್ಮ ಒಡಲೊಳಗೆ.

ಈಗಲೂ ನಾವು ಸ್ವಾರ್ಥಿಗಳು. ತಮ್ಮ ಕೃಪೆ ಸದಾ ನಮ್ಮ ಮೇಲಿರಲಿ ಎಂದೇ ಬೇಡುತ್ತೇವೆ.

*ಶರಣರಿಗೆ ಮರಣವೇ ಮಹಾನವಮಿ*
*ಭಕ್ತರಿಗೆ ನಿಮ್ಮ ನೆನಹೆ ಶಿವರಾತ್ರಿ*

        *ಸಿದ್ದು ಯಾಪಲಪರವಿ*

Wednesday, May 16, 2018

ಖಾಲಿತನ-ಧ್ಯಾನ ಮತ್ತು ಏಕಾಂತ


*ಖಾಲಿತನ-ಧ್ಯಾನ ಮತ್ತು ಏಕಾಂತ*

ತುಂಬಾ ಆತ್ಮೀಯರು, ಇನ್ನರ್ ಸರ್ಕಲ್ ನಲ್ಲಿ‌ ಇದ್ದವರೂ ಅರಿವಿಲ್ಲದಂತೆ ನೋಯಿಸಿಬಿಡುತ್ತಾರೆ ಯಾವುದೇ ದುರುದ್ದೇಶವಿಲ್ಲದೇ.

ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ನಮ್ಮನ್ನು ಕಿತ್ತು ತಿನ್ನುತ್ತವೆ. ಹತ್ತಿರವಿದ್ದವರು ಬೇಗನೇ ಆರೋಪಿಸಿಬಿಡುತ್ತಾರೆ.

ನಾವೇ ಸರಿ ಎಂಬ ಅಹಮಿಕೆಯಲಿ ಮನಸು ಮುರಿಯಬಾರದು. ಹಾಗೆ ಮುರಿಯುವ ಪ್ರಸಂಗ ಎದುರಾದಾಗ ಯಾರಾದರು ಒಬ್ಬರು ಮೌನವಹಿಸಬೇಕು‌‌.

ಆದರೆ ಕೆಲವೊಮ್ಮೆ ಮೌನ ಮುರಿಯುವ ಅನಿವಾರ್ಯತೆ. ಮುರಿಯುವ ಮನಸು ಮುರಿಯದಂತೆ ಎಚ್ಚರವಹಿಸಬೇಕು.

ಆ ತಲ್ಲಣ ಚಡಪಡಿಕೆ ಒಮ್ಮೆಲೇ ತಣ್ಣಗಾಗುವುದಿಲ್ಲ.
ತಣ್ಣಗಾಗಲಾರದು.

ಸರಿ, ತಕ್ಷಣದ ಶಮನಕೆ ಜಾಗ ಬದಲಿಸಬೇಕು.
ಆ ಜಾಗದಲಿ ನಮ್ಮ ವಾದವನು ಸಮರ್ಥಿಸುವ ಅಥವಾ ಅಲ್ಲಗಳೆಯುವ ಜನರ ಮಧ್ಯೆ ಇರಬಾರದು.‌

ನಾವೇ ಏಕಾಂತವಾಗಿದ್ದುಕೊಂಡು ಸರಿ ತಪ್ಪುಗಳ ಆತ್ಮಾವಲೋಕನಕಿಳಿಯಬೇಕು.

ಏಕಾಂತದಲಿ ಮನಸನು ಪೊಸೆಟಿವ್ ಆಲೋಚನೆಯಲ್ಲಿ ತೊಡಗಿಸಬೇಕು.

' ನಮ್ಮ ಅಭಿಪ್ರಾಯಗಳನ್ನು ಪ್ರಶ್ನಿಸಿ ವಿರೋಧಿಸಿದವರನ್ನು ನೀಚರು, ಅಧಮರು' ಎಂದು ಬೈಯುತ್ತ ಹಲ್ಲು ಕಡಿಯಬಾರದು.

ಎಲ್ಲರೂ ಅವರವರ ನೆಲೆಯಲ್ಲಿ ತಪ್ಪಿದ್ದರೂ ಸರಿ ಎಂದೇ ಆಲೋಚಿಸಿ ತಪ್ಪು ಮಾಡುತ್ತಾರೆ.

ಆತ್ಮೀಯರ ಭಿನ್ನ ವಿಚಾರಧಾರೆಗಳ‌ ಸಹಿಸುವ ಮನಸ್ಥಿತಿ ರೂಪಿಸಿಕೊಳ್ಳಲು *ಏಕಾಂತ* ನೆರವಾಗುತ್ತದೆ.

                             ***

ಹಾಗಾದರೆ ಏಕಾಂತದಲಿ‌ ಏನು‌ ಮಾಡಬೇಕು. ಏಕಾಂತ ಒಂಟಿತನವೆನಿಸಿ ಇನ್ನೂ ಹಿಂಸೆಯಾದರೆ?

ಹಾಗಾಗಲು ಬಿಡಬಾರದು. ನಮಗಿಷ್ಟವಾದ ಮನೋಲ್ಲಾಸ ಹೆಚ್ಚಿಸುವ ಪುಸ್ತಕ ಓದಬೇಕು.
ಓದುವ ಹವ್ಯಾಸ ಇರದಿದ್ದರೆ ಸಂಗೀತ ಆಲಿಸಬೇಕು.
ಮನೋರಂಜನಾತ್ಮಕ ಸಿನೆಮಾ ನೋಡಬೇಕು.

ಧ್ಯಾನ ಮಾಡುವ ಪ್ರವೃತ್ತಿ ಇದ್ದರೆ ದೀರ್ಘಕಾಲದ ಧ್ಯಾನ ಮಾಡಬೇಕು. ಧ್ಯಾನಸ್ಥ ಸ್ಥಿತಿ ನಮ್ಮ ಆಲೋಚನಾ ದಿಕ್ಕನ್ನೇ ಬದಲಿಸಿ ಮನಸನ್ನು ಪ್ರಫುಲ್ಲಗೊಳಿಸುತ್ತದೆ.

ಏಕಾಂತದಷ್ಠೇ ಪ್ರಿಯವಾಗುವ ಸಂಗಾತಿಗಳ ಸಾಮಿಪ್ಯ ಸುಖ ಇನ್ನೂ ಉತ್ತಮ. ಆದರೆ ಆ ಸಂಗಾತಿಗಳು 'ನೀನು ಮಾಡಿದ್ದು ಸರಿಯಲ್ಲ' ಎಂಬ ಅಪ್ರಿಯ ಹಿತೋಪದೇಶ ಮಾಡುವ ಮನೋಭಾವ ಹೊಂದಿರದೇ ನಾವು ಮಾಡಿದ್ದೇ ಸರಿ ಎಂದು ಒಪ್ಪಿಕೊಳ್ಳುವ ಉದಾರಿಗಳಾಗರಬೇಕು.

ಮೈಮನಗಳಿಗೆ ಚೈತನ್ಯ ತುಂಬುವ ಪಾರ್ಟನರ್ ಆಗಿದ್ದರೆ ಇನ್ನೂ ಎಕ್ಸಲೆಂಟ್. ಮೈಮನಗಳ ಹಗುರಾಗಿಸುವ ಸಾಮಿಪ್ಯ ಇದಾಗಿರಬೇಕು.ಮತ್ತಿಷ್ಟು ಭಾರ ಹೆಚ್ಚಿಸಬಾರದು‌.

*ಗಾನ-ಧ್ಯಾನ-ಕಾಮ‌* ಸೂತ್ರ ಸೂಕ್ಷ್ಮಾತಿ ಸೂಕ್ಷ್ಮ. ಸಹ್ಯವಿರದಿದ್ದರೆ ಮಾತ್ರ ಹಿತಕರ. ಇಲ್ಲದಿರೆ ಇನ್ನೂ ಅಸಹ್ಯ.

*ಹಾಡಿದರೆ ಎನ್ನೊಡೆಯನ ಹಾಡುವೆ
ಬೇಡಿದರೆ ಎನ್ನೊಡೆಯನ ಬೇಡುವೆ
ಒಡೆಯಂಗೊಡಲ‌ ತೋರಿ ಬಡತನವ
ಬಿನ್ನಹಿಸುವೆ* ಎಂಬ ಅಣ್ಣನ ವಚನದ ಸಾಲುಗಳ ಧೇನಿಸುತ ಒಂದೆರಡು ದಿನ ಕಾಲ ಕಳೆದು ಮತ್ತೆ ಯಥಾಪ್ರಕಾರ ನಮ್ಮ ಗೂಡ ಸೇರೋಣ.

ಇನ್ನರ್ ಸರ್ಕಲ್ ನವರು ಹೊರಗೆ ಹೋಗಿದ್ದಾರೆ  ಅನಿಸಿದರೆ ಒಳಗೆಳೆದು ಕಟ್ಟಿ ಹಾಕೋಣ.‌

     *ಜಾಯ್ ಫುಲ್ ಲಿವಿಂಗ್‌*

          *ಸಿದ್ದು ಯಾಪಲಪರವಿ*

      

Tuesday, May 15, 2018

ಕಣ್ಣೋಟದ ಕಾವ್ಯಾರಾಧನೆ


*ಕಣ್ಣೋಟದ ಕಾವ್ಯಾರಾಧನೆ*

ನೋಡಬೇಕು ನೋಡದಂತೆ ಎನಲಾದೀತೇ
ಹೀಗೆ ನೋಡಿದ ಮೇಲೆ ನೋಡದಿರಲಾದೀತೇ

ಉತ್ತರಿಸಲಾಗದ ಪ್ರಶ್ನೆಗಳಿಗೆ ಮನ ಸೋಲದೇ
ಇರಲಾದೀತೇ
ಕೇಳುವ ಮಾಟದೊಳು ಮೈಮರೆತರೂ ಎಚ್ಚರ
ತಪ್ಪಲಾದೀತೇ

ಆಡುವ ಮಾತಿನ ಮಂಥನದಿ ಬರೆದ
ಮುನ್ನುಡಿ ನುಣುಚಿಕೊಳ್ಳಲಾದೀತೇ

ಬದುಕ ಬವಣೆಯಲಿ ಬೇಯದೇ ಒಳಗೊ
ಳಗೆ ಕುದಿಯಲಾದೀತೇ

ಬೇಕು ಬೇಕೆಂಬ ಹಟ ಮಾಡದೇ ಪಡೆಯುವ
ತವಕವ ದೂರ ದೂಡಲಾದೀತೇ

ನೋಡ ಬೇಡವೆನಲು ನಾ ಯಾರು ನನಗಿದರ
ಹಂಗಿಲ್ಲದೆ ಜಾರಲಾದೀತೇ

ಬದುಕೊಂದು ಅರ್ಥವಾಗದ ಗಪದ್ಯ
ಆದರೂ ಓದದೇ ಇರಲಾದೀತೇ

ಅರಿಯುವ ಬೆರೆಯುವ ಬರಯುವ
ಮರೆಯುವ ಮಾತ ಮರೆತು ಒಲಿದಂತೆ
ಹಾಡಿ ಕೂಡಿ ನಲಿದು ಅವನಣತಿಯ
ತಿರುಳನರಿತು ಒಳಗೊಳಗೆ ಕರಗಿದರೂ
ನೀರಾಗದೇ ನಿರಾಶೆಯ ದೂರ ದೂಡಿ

ಸಾಗುತಲೇ ಇರೋಣ ಮೆಲ್ಲ ಮೆಲ್ಲಗೆ
ಮೆಲ್ಲುಸಿರ ಕಾವ್ಯಸಿರಿಯ ಹೂದೋಟದ
ಕಂಪಿನ ಇಂಪಿನ ಸವಿಗಾನದಲಿ.

       *ಸಿದ್ದು ಯಾಪಲಪರವಿ*