Thursday, June 29, 2017

VRL ಸಂಕೇಶ್ವರ

Weekend with VRL : An inspiring story.

ಒಂದಿಷ್ಟು ನೆನಪು

ಇಂದು ಮತ್ತೊಂದು ಕುತೂಹಲಕರ ಸಾಧಕರ ಕಥೆ .
ಹೆಚ್ಚು ಆಪ್ತವೆನಿಸಲು ಕಾರಣ ನಾನು ಅವರನ್ನು ನಾನು ತೊಂಬತ್ತರ ದಶಕದಿಂದ ಹತ್ತಿರದಿಂದ ಬಲ್ಲೆ ಹಾಗಂತ he is very close to me ಅನ್ನಲು ಭಯವಾಗುವಂತ ವ್ಯಕ್ತಿತ್ವ.

ಶಿಸ್ತು , ಪರಿಶ್ರಮ, ಸಾತ್ವಿಕ ಹಟ , ಕೊಂಚ moody ಆದರೂ ಅದ್ಭುತ ಸಾಧಕ . ಕನ್ನಡ ನಾಡು ಪಕ್ಷದ ವಿಫಲತೆ ಬಿಟ್ಟರೆ ಮುಟ್ಟಿದ್ದೆಲ್ಲ ಚಿನ್ನ. ಉಳಿದ ಕಥೆ ನಿಮಗೆ ಗೊತ್ತೇ ಇದೆ.

ಆದರೆ ನನ್ನ ಅವರ ಬಾಂಧವ್ಯ ನೆನಪಿಸಿಕೊಳ್ಳಲು ಖುಷಿ.
ಮೊದಲ ಬಾರಿ ಲೋಕಸಭೆಗೆ ಸ್ಪರ್ಧಿಸಿದಾಗ ಒಂದು ಪತ್ರಿಕೆಯ ಪರವಾಗಿ ಒಂದು ತಾಸು ಚರ್ಚಿಸಿದ್ದನ್ನು ಅವರು ಇಂದಿಗೂ ಮರೆತಿಲ್ಲ.
ನಂತರ ಅನೇಕ ವೇದಿಕೆಗಳಲ್ಲಿ ಅವರನ್ನು ಕೆಣಕುತ್ತ ಹತ್ತಿರವಾದೆ.
ಆಗಾಗ ಭೇಟಿ, ಅಗತ್ಯಕ್ಕೆ ತಕ್ಕಷ್ಟು ಮಾತು.

ಕಳೆದ ವರ್ಷ ' ಒಂದು ಬಿರುಗಾಳಿಯ ಕಥೆ ' ಗೆ ಬರೆದ ಮುನ್ನುಡಿ , ಬಿಡುಗಡೆಗೆ ಬಂದದ್ದು , ವೇದಿಕೆ ಮೇಲೆ ಒಂದೆರಡು ತಾಸು ಕಳೆದದ್ದು ಅವಿಸ್ಮರಣೀಯ.
ಅಂದು ಯಾರೋ ನನ್ನನ್ನು ಪರಿಚಯಿಸಿದ ಕೂಡಲೇ ' ಅಯ್ಯೋ ಯಾಪಲಪರವಿ ನನ್ನ ಗುರುಗಳು ' ಅಂದು ಎಲ್ಲರನ್ನೂ ಹಾಗೆ ನನ್ನನ್ನು ಬೆರಗುಗೊಳಿಸಿದರು(ಇದನ್ನು ಹೇಳಲು ಸಂಕೋಚ ಹಾಗೂ ಸಂತೋಷ ).

ಒಮ್ಮೆ ನಾನು ಅವರನ್ನು ನೀವು ಬಲಪಂಥೀಯರು ಎಂದು ರೇಗಿಸಿದ್ದೆ. ನನ್ನನ್ನು ತಮ್ಮ ಹುಬ್ಬಳ್ಳಿ ಆಫೀಸಿಗೆ ಕರೆಸಿ ಜಾತ್ಯಾತೀತ ವೃತ್ತಿಪರತೆಯನ್ನು ಪರಿಚಯಿಸಿ ಬೆರಗು ಮೂಡಿಸಿದ್ದರು.

ನಿಮ್ಮ biography ಬರೆಯೋ ಆಸೆ ಅಂದೆ ನಕ್ಕು ಸುಮ್ಮನಾದರು.

ನಾನು ಉದ್ಯೋಗಕ್ಕೆ ಅಂಟಿಕೊಂಡು risk ತೆಗೆದುಕೊಳ್ಳಲು ಹಿಂದೇಟು ಹಾಕುವುದಕ್ಕೆ ಗದರಿದರು. ' You are wasting your time ' ಅನ್ನುತ್ತಲೇ ಇದ್ದಾರೆ.

He is expecting something from me , I too realised it of course !

I will fulfill your desire Vijjanna but waiting for right time.

ನನ್ನೊಳಗಿನ ನೂರಾರು ಕನಸುಗಳಿಗೆ ಇಂದು ಪ್ರೇರಣೆ ನೀಡಿದ ನಿಮಗೆ ಶರಣು ಶರಣಾರ್ಥಿ.

ಬೇಗ ನಿಮ್ಮ ಆಸೆ ಈಡೇರಿಸಿ ನಿಮ್ಮೆದುರು ಬಂದು ನಿಲ್ಲುತ್ತೇನೆ.

ನಿಮ್ಮ ಪ್ರೀತಿಯ

---ಸಿದ್ದು ಯಾಪಲಪರವಿ

Tuesday, June 27, 2017

ಸಾಕು ಅನಿಸುವದ್ಯಾಕೋ

ಒಮ್ಮೆ ಎಲ್ಲವೂ ಸಾಕು ಅನಿಸುವದ್ಯಾಕೋ ?

ಹಗಲಿರುಳು ದುಡಿಮೆ , ಓಡಾಟ ಲೆಕ್ಕವಿಲ್ಲದಷ್ಟು ಕನಸುಗಳು , ನೂರೆಂಟು ಯೋಜನೆಗಳು. ಹೆಸರು , ಹಣ , ಕೀರ್ತಿ , ಗೆಳೆಯರು , ಸಂಗಾತಿಗಳು , ಅಂತರಂಗ ಬಹಿರಂಗದ ರಹಸ್ಯಗಳು. ಕಣ್ಣಾ-ಮುಚ್ಚಾಲೆ ಆಟಗಳು. ಹೇಳಲಾಗದ ಬಯಕೆಗಳು.

ಏನೇನೋ ಗಿಮಿಕ್ಕುಗಳು, ಅನರ್ಥ ಪ್ರಯತ್ನಗಳು. ತುಂಬಾ ದೂರ ನಿರಂತರ ಕ್ರಮಿಸುವ ವಾಹನ ಗಕ್ಕನೇ ನಿಂತಾಗ...

ಏಕೆ ಹೀಗೆ ? ಯಾರಿಗಾಗಿ ಈ ಹಾರಾಟ ? ಎಂಬ ಪ್ರಶ್ನೆಗಳು ನಮ್ಮನ್ನು ಕಾಡಲಾರಂಭಿಸುತ್ತವೆ.
ಒಂದು ಕ್ಷಣ ಎಲ್ಲವೂ ಬೇಡವೆನಿಸಿಬಿಡಬೇಕಾ !
ಈ ಖಾಲಿತನವನ್ನು ಆಗಾಗ ಅನುಭವಿಸಿ ಮುಂದೆ ಸಾಗುವ ಅನಿವಾರ್ಯತೆ.
ಏನಾದ್ರೂ ಸಾಧಿಸಬೇಕು ಅನ್ನೋ ಕಾರಣಕ್ಕೆ ವಿಪರೀತ ಹೊಂದಾಣಿಕೆ. ಕಂಡವರೊಂದಿಗೆ ಶಾಮೀಲಾಗುವ ಮಾನಸಿಕ ಕಿರಿಕಿರಿ. ಸಾಕಪ್ಪ ಸಾಕು ಅನಿಸಿದರೂ ಅನಿವಾರ್ಯ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗದ ಒದ್ದಾಟ.
ಎಲ್ಲ ಒತ್ತಡಗಳನ್ನು ಸಹಿಸಿಕೊಂಡು ಓಡಾಡುವಾಗ ಏಕಾಂತದಿ ಈ ರೀತಿಯ ಖಾಲಿತನ ಹೆಚ್ಚಾಗಿ ಖಿನ್ನತೆಗೆ ಒಳಗಾಗಬಾರದೆಂಬ ಎಚ್ಚರಿಕೆಯಿಂದ ಮುಂದೆ ಸಾಗಬೇಕು ಕೊಂಚ ವಿರಮಿಸಿ.

---ಸಿದ್ದು ಯಾಪಲಪರವಿ

ರಾಜಕಾರಣ

ರಾಜಕಾರಣ ಹಾಗೂ  ತಲ್ಲಣಗಳ nostalgia.

'ಈಗ ತತ್ವ ಸಿದ್ಧಾಂತ ಏನೂ ಬೇಡ ರಾಜಕೀಯ ಪರಿಜ್ಞಾನ ಇಲ್ಲ . ಏನೋ ಕೇಳಿದರೆ ಏನೋ ಹೇಳ್ತಾರೆ ಹೆಚ್ಚು ಕಮ್ಮಿ ಆದರೆ ಜಗಳಕ್ಕೆ ಬರ್ತಾರೆ '
ಇಂತಹ ಮಹನೀಯರು ಒಂದೆರಡು ಬಾರಿ ಶಾಸಕರು ಮಂತ್ರಿಗಳು ಆಗಿರ್ತಾರೆ.

ಪಕ್ಷದ ಸಿದ್ಧಾಂತ , ಗಾಂಧಿ,ಬಸವ ,  ಅಂಬೇಡ್ಕರ್ ಊಹೂಂ ಎಲ್ಲವೂ ಅಯೋಮಯ. ಜಾತಿ , ಹಣ , ತೋಳ್ಬಲ ಒಂದಿಷ್ಟು ಕುತಂತ್ರ , ಏನೋ ಒಂದಿಷ್ಟು ತಂತ್ರ ಸಾಕು ಶಾಸಕ ಆಗಲಿಕ್ಕೆ ಅನ್ನೋ ವಾತಾವರಣ. ಯಾರಾದರೂ ಯೋಗ್ಯರು ಬರ್ತಾರೆ ಅಂದ್ರೆ ' ಅಯ್ಯೋ ಅವರ ಹತ್ರ ಹಣ ಇಲ್ಲ ಬಿಡಿ ಗೆಲ್ಲಲ್ಲ ' ಎಂಬ immediate reply.
ಪ್ರತಿ ಮಾತು ನಡೆಯಲಿ political milage ಹುಡುಕುವ ಹುಚ್ಚು. ಮಾಧ್ಯಮಗಳ ಎದುರು ಅದೇ ಕಚ್ಚಾಟ.

ಬರೀ negative ಅನ್ಕೋಬೇಡಿ. ಕರ್ನಾಟಕ ಕಾಲೇಜಿನಲ್ಲಿ ನಮ್ಮ ಸಾಹಿತ್ಯದ ಪ್ರಾಧ್ಯಾಪಕರುಗಳಿಗೆ ಸಮಾಜವಾದ , ಲೋಹಿಯಾ ವಾದ  ಹಾಗೂ ಜೆ.ಪಿ.ಚಳುವಳಿ ನಂಟು. ಪಿಯುಸಿ ಇದ್ದಾಗ ಗೋಕಾಕ ಚಳುವಳಿ.
ಹುಚ್ಚು ಹಿಡಿಸಿಕೊಂಡು ಓದಲು ಲಂಕೇಶ್ ಪತ್ರಿಕೆ. ಅಬ್ಬಾ ಈಗ ನೆನಪಿಸಿಕೊಂಡರೆ ಹೊಟ್ಟೆಯಲ್ಲಿ ತಳಮಳ.
ಈಗ ಎಲ್ಲಾ ಮಾಯ ಬರೀ nostalgia. ಯೋಗ್ಯರೆಲ್ಲ ಮಂಗ ಮಾಯ .

ಆ ಎಲ್ಲ ಹೋರಾಟಗಳಲ್ಲಿದ್ದ ಪರಿವಾರದ ನಾಯಕರುಗಳಿಗೆ ವಯಸ್ಸಾಗಿದೆ , ಮತ್ತೆ ಕೆಲವರು ಕಣ್ಮರೆಯಾಗಿದ್ದಾರೆ ,ಬಹುಪಾಲು ನಮ್ಮ ಸಮಕಾಲೀನರು ಬೇರೆ ಬೇರೆ ಪಕ್ಷಗಳಲ್ಲಿದ್ದು ಸೈದ್ಧಾಂತಿಕ ಗೊಂದಲದಲ್ಲಿದ್ದಾರೆ.
Nostalgia ಬಿಟ್ಟರೆ ಇನ್ನೇನು ಮಾಡಲಾದೀತು ಎಂಬ confusion.

ಹಿರಿಯರು, ನನ್ನ ಹಿತೈಷಿಗಳೂ ಆಗಿದ್ದ ಎಂ.ಪಿ.ಪ್ರಕಾಶ ಸಣ್ಣ ವಯಸ್ಸಿನಲ್ಲಿ ಹಂಪಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯತ್ವ ನೀಡಿ ಸಾಂಸ್ಕೃತಿಕ ಲೋಕದ ವ್ಯಾಪ್ತಿ ವಿಸ್ತರಿಸಿದರು.
ಆಗಾಗ ಸಿಗುತ್ತಿದ್ದ ಗೋವಿಂದಗೌಡರು , ಪಟೇಲ್ ಅವರು ಪ್ರೀತಿಯಿಂದ ಮಾತನಾಡಿ ಬೆನ್ನು  ತಟ್ಟಿ ಪ್ರೇರೇಪಿಸುತ್ತಿದ್ದರು.

ಸಮಾಜವಾದಿ ಚಿಂತಕ ಬಾಪು ಹೆದ್ದೂರಶೆಟ್ಟಿ ಸದಾ ನೆರಳಾಗಿದ್ದಾರೆ. ನಿತ್ಯವೂ ಮಾತಿಗೆ ಸಿಗುವ ಪ್ರೊ.ರವೀಂದ್ರ ರೇಷ್ಮೆ , ಪ್ರೊ.ಆರ್.ಎಂ.ರಂಗನಾಥ್ ಸರ್ ಆ ದಿನಗಳ ನೆನಪಿಸುತ್ತಾರೆ.

ಅಪ್ಪಿ ತಪ್ಪಿ ಉತ್ತಮ ಅನಿಸಿದ ಬಿಜೆಪಿಯವರನ್ನು ಮಾತನಾಡಿಸಿದರೆ ಚಡ್ಡಿ ಅಂತಾರೆ. ಕಾಂಗ್ರೆಸ್ ಅವರ ಜೊತೆಗಿದ್ದರೆ leftist ಅಂತಾರೆ. ಎಲ್ಲಿಯೂ ಸಲ್ಲದ ಪ್ರೇತಾತ್ಮದ ಸ್ಥಿತಿ.
ಎಲ್ಲದಕೂ ನಕ್ಕು ಸುಮ್ಮನಾಗಿ ಮುಂದೆ ಸಾಗಬೇಕು.

ಈಗ ಅನಿಸಿದ್ದೆಲ್ಲ ಬರೆಯಲಿಕ್ಕೆ social media ಗಳಿವೆ ಅದೇ ಸಮಾಧಾನ !
ಜನ ಓದಲಿ ಬಿಡಲಿ ಬರೆದು ಹಗುರಾಗುವ ಅನಿವಾರ್ಯತೆ !!

ಜಾತ್ಯಾತೀತತೆ , ಸಾಮಾಜಿಕ ನ್ಯಾಯ , ಆರೋಗ್ಯಪೂರ್ಣ ಸಂವಾದ ಎಲ್ಲವೂ ಈಗ ಬರೀ text .
ರಾಜಕೀಯ ಅನಿವಾರ್ಯತೆಯ ನೆಪದಲಿ ಎಲ್ಲವೂ,
ಎಲ್ಲರೂ ಮಾಯ. ಆದರೆ ಹುಡುಕಾಟದ ತಲ್ಲಣ ಮಾತ್ರ ನಿಂತಿಲ್ಲ.
ನಿನ್ನೆ ಮುಖ್ಯ ಮಂತ್ರಿ ಸಿದ್ಧರಾಮಯ್ಯನವರ ಮಾತು ಕೇಳಿ ಇಷ್ಟೆಲ್ಲ ಹೇಳಬೇಕೆನಿಸಿತು.

---ಸಿದ್ದು ಯಾಪಲಪರವಿ