tag:blogger.com,1999:blog-23072805241483514692024-02-20T18:58:12.871-08:00siddu kaala ಸಿದ್ದು ಕಾಲವಾಸ್ತವದಲೆಗಳ ಮೇಲೆ ಭಾವನೆಗಳ ಪಯಣSiddu Yapalaparavihttp://www.blogger.com/profile/03313770596372511100noreply@blogger.comBlogger723125tag:blogger.com,1999:blog-2307280524148351469.post-78383591885775398992020-02-20T22:01:00.001-08:002020-02-20T22:01:01.939-08:00Resume<p dir="ltr">CURRICULUM VITAE</p>
<p dir="ltr">A self evaluation: </p>
<p dir="ltr">Experiences from the journey from a backward village like Karatgi in Gangavathi Taluk of Hydearabad-Karnataka region to Bangalore have shaped my personality. There were only two choices - accept a life of limited opportunities or strive to move forward, taking on the contemporary challenges of the 21st century knowledge society. <br>
I have consciously opted for the latter and tried to achieve personal success without compromising relevance to society. In addition to my resolve to succeed, studies in Literature have helped me to draw inspiration from the rich experiences captured in letters by the great minds. <br>
My travel within the country and abroad provided me valuable personal experiences to evaluate the situation and relate it to the societal needs. I also discovered that I had some ability to write in Kannada; a series of articles in Vikranta Karnataka, collection of poems, a travelogue and a few editorials emerged out of this ability. Although the above seem to be mutually exclusive of each other, I have tried to bind them together in a common thread of Human Resource Management and Training for enhanced efficiencies. <br>
Besides my parents, many accomplished personalities with their unique abilities of immense social value have influenced my thoughts: the humility of my learned Professors, insightful analytical abilities, encyclopedic knowledge of Karnataka’s current affairs combined with a concern for social justice and equity of Prof. R.M.Ranganath and the honesty, integrity, efficiency synergistically combined with compassion in the personality of various scholars– all have left an indelible print in my mind. I consider extremely lucky and blessed for the opportunities to associate myself with these great contemporary minds.</p>
<p dir="ltr">In sum, I have so far succeeded in combining learning and training (hopefully in the right proportions) to perform as a socially responsible person, willing to swim in the challenging seas of 21st century opportunities, without of course forgetting my obligations to contribute meaningfully to the societal needs. </p>
<p dir="ltr"> ***<br>
<br>
Name: Siddu B. Yapalaparvi s/o Shri Basavarajappa<br>
Department of English, “Sharanarthi, #123, Vishweshwarayya Nagar, Kalasapur Road, GADAG-582 103.<br>
siddu.yapal@gmail.com.<br>
94483-58040.</p>
<p dir="ltr">Date and Place of Birth: 01-06-1964; Karatgi, Koppal District, Karnataka State, India.</p>
<p dir="ltr">Academic Qualifications: 1989;M.A. (English) 1986; MBA (Human Resource Management) 2006; Ph.D.: on the topic “Rabindranath Tagore and Kannada Poetry. ( Yet to be awarded )</p>
<p dir="ltr">Professional Experience: Lecturer in English, KVSRPU College, Gadag since 1993, Guest Faculty for MA (English) KSS College, Gadag; Human Resource Training since 2004 to various organizations.</p>
<p dir="ltr">Member of the Governing Council, Kannada University, Hampi (1999-2002)<br>
Public Relation Officer, Bangalore University (on deputation in 2011-12)</p>
<p dir="ltr">Publications and other<br>
Academic accomplishments: 1)Nelada Mareya Nidhana – a collection of poems <br>
in Kannada (2007);</p>
<p dir="ltr">2) Ettana Maamara, Ettana Kogile – a Travelogue in UK – in Kannada (2009)</p>
<p dir="ltr">3) Ondu Birugaliya Kathe ( Kannada translation of National Best Seller English novel Losing My Religion of Vishwas Mudagal in 2016)</p>
<p dir="ltr">4) Pisumathugal Jugal ( Poetry Jugal writing with Kavyashree Mahagaonkar in 2017 )</p>
<p dir="ltr">5) Asangatha Barahagalu ( Collection of Essays written in the blog in 2017)</p>
<p dir="ltr">5) Magalai Hudugana Paren Turu ( Revised Edition of England Travelogue in 2018 )</p>
<p dir="ltr"> 6) Invited columns in the Kannada Weekly “Vikranta <br>
Karnataka” (Editor- Ravindra V. Reshme) on topics <br>
Literature, Tourism,Fine Arts and Current Affairs<br>
7) Delivered invited lecturers on “Vachana Sahithya” in <br>
Kannada as well as English; Personality Development <br>
Programmes to students, Government officials, <br>
NGOs, College Teachers and other Professional <br>
Corporate Institutions<br>
8) Editor – of several Kannada Books by upcoming<br>
authors<br>
9)Awarded a Silver Medal and National Award in recognition of extending quality training to officilas, Survey of census during 2001 </p>
<p dir="ltr">10) Travel abroad: Visited UK in 2009. Visits to the heritage homes of literary giants of all times – William Shakespere and William Wordsworth.</p>
<p dir="ltr">Social and Electronic Media</p>
<p dir="ltr">YouTube Talks- #Life_Guru video talks are regularly uploaded in Namma Kannada YouTube channel on life skill topics.</p>
<p dir="ltr">Basava TV - Vachana Marga discourse on Vachanas of Lord Basaveshwar and others in Renowned Kannada spiritual channel Basava TV.</p>
<p dir="ltr">DD- Chnandana- Special interview on the contribution of Education,literature and Life skill programs in Shubhodaya Karnataka which has won the hearts of million viewers.</p>
<p dir="ltr">Blog Writings</p>
<p dir="ltr">Regular updates on current topics through blog sidduyapalaparavi.blogspot. com.</p>
<p dir="ltr">Portal Media</p>
<p dir="ltr">Articles writing in Namma Kannada, Avadhi, The Deccan News and Bookbramha portal magazines.</p>
<p dir="ltr">Spiritual and Personality Development Camps are conducted regularly to empower youths and corporate employees.</p>
<p dir="ltr">Biography Byasarillada Jeeva </p>
<p dir="ltr">Over all contribution to various fields is penned in the biography of Siddu Yapalaparvi Byasarillada Jeeva ( Life Guruvina Life) by Kavyashree Mahagaonkar in the publication of Desi Prakashana Bengaluru in 2019.</p>
Siddu Yapalaparavihttp://www.blogger.com/profile/03313770596372511100noreply@blogger.com0tag:blogger.com,1999:blog-2307280524148351469.post-33232524444738777742020-01-27T00:33:00.001-08:002020-01-27T00:33:51.061-08:00ತಪ್ಪು ಬಿಗಿದಪ್ಪು<p dir="ltr">ತಪ್ಪು ಒಪ್ಪು ಬಿಗಿದಪ್ಪು <br></p>
<p dir="ltr">ನೀನು ಹೇಳದೇ ಕೇಳದೇ ಬರಲಿಲ್ಲ</p>
<p dir="ltr">ಕರೆದಾಗ ಬಂದೆನೆಂಬುದೊಂದು ಮಿಥ್ </p>
<p dir="ltr">ಮಿಥ್ಯವೂ ಅಲ್ಲ‌ ಸತ್ಯದ ಒಳಗಡಗಿರುವ </p>
<p dir="ltr">ಮಿಥ್ಯ <br></p>
<p dir="ltr">ಬಯಲ ಆಲಯದೊಳಗೆ ಸಾರಿ ಸಾರಿ </p>
<p dir="ltr">ಹೇಳಲಾಗದು ನೀ ನನ್ನವಳು ನಾ</p>
<p dir="ltr">ನಿನ್ನವನೆಂಬ ನಿಗೂಢ ನಿಧಿ ನೀ <br></p>
<p dir="ltr">ಹೇಳದಿದ್ದರೂ ಭ್ರಾಂತಿಯಲಿ ಅಗೆದು </p>
<p dir="ltr">ಹುಡುಕಿ ತಡಬಡಿಸಿ ಕೆಬರಾಡುವ </p>
<p dir="ltr">ಮನಸುಗಳ ಕಳವಳಕೆ ನಾವು </p>
<p dir="ltr">ಸಿಗದ ನೆಲದ ಮರೆಯ ನಿಧಾನ <br></p>
<p dir="ltr">ಹೊಣೆ ಅಲ್ಲ ಅವಾಸ್ತವದ ಸತ್ಯಕೆ </p>
<p dir="ltr">ಯಾರೂ ಆದರೂ ಹೊಣೆ ನಾವು </p>
<p dir="ltr">ನಮ್ಮ ನಮ್ಮ ಮೂಗಿನ ನೇರದ </p>
<p dir="ltr">ಅನುಸಂಧಾನದ ಗುಂಗಲಿ ಸತ್ಯ </p>
<p dir="ltr">ಕೇಳಲು ಇಲ್ಲ ಈಗ ಪುರುಸೊತ್ತು <br></p>
<p dir="ltr">ನಡೆದದ್ದೇ ದಾರಿ ಹುಡುಕಿದ್ದೇ ಮಾರ್ಗ </p>
<p dir="ltr">ಕಾಯುವವ ಕೊಲ್ಲಲಾರನೆಂಬ ನಂಬಿಗೆ</p>
<p dir="ltr">ಅದೇ ಬದುಕ ಬಾಳಾಗಿಸಿದೆ ತಲೆ ದಿಂಬಿಗೆ <br></p>
<p dir="ltr">ದೇಹ ದೇವಾಲಯವಾದಾಗ ಮನಸು </p>
<p dir="ltr">ದೇವತೆ ಮಿಲನ ಸಡಗರದಲಿ </p>
<p dir="ltr">ಹಗಲು ರಾತ್ರಿ ಒಂದೇ ಬಿಗಿದ ಬಂಧನಕೆ <br></p>
<p dir="ltr">ತಪ್ಪು ಯಾವುದು ಯಾರದು </p>
<p dir="ltr">ಮನದ ಮುಂದಣ ಆಸೆ ಹೌದು</p>
<p dir="ltr">ಬೇಕಿತ್ತು ಬೇಕಾಗಿದೆ ಬೇಕಾಗುತ್ತೆ </p>
<p dir="ltr">ಮುಂದೆಯೂ ಗೊತ್ತಿದ್ದು ಮಾಡಿದ </p>
<p dir="ltr">ತಪ್ಪಿಗೆ ದೇವನೊಪ್ಪಿಗೆ ಮಾಡಿದ </p>
<p dir="ltr">ತಪ್ಪಲೂ ತಪ್ಪದ ಸಡಗರದ ಅನು</p>
<p dir="ltr">ಸಂಧಾನದ ಸವಿಗಾನ <br></p>
<p dir="ltr">ಮೈಮನಗಳ ಮಿಲನದಾಸೆಗೆ ಬರುವ</p>
<p dir="ltr">ಸಾವಿರದ ನೋವಲು ಮಧುರ ಸವಿ</p>
<p dir="ltr">ಜೇನು ಗೊತ್ತಿದ್ದೂ ಮಾಡುವ ತಪ್ಪಲೂ</p>
<p dir="ltr">ಜೇನು ತುಪ್ಪ <br><br></p>
<p dir="ltr">ನಮಗೆ ನಾವೇ ಹೊಣೆಗಾರರು </p>
<p dir="ltr">ನಮ್ಮ ಸಂಭ್ರಮದ ಸಂಕಟಕೆ <br></p>
<p dir="ltr">ತಪ್ಪುಗಳ ಸರಮಾಲೆಯಲಿ ಸುಖದ</p>
<p dir="ltr">ಪರಿಮಳದ ಘಮಲು ಸವಿಯಲು </p>
<p dir="ltr">ಯಾರಪ್ಪಣೆ ಬೇಡ ಹೊರಡೋಣ </p>
<p dir="ltr">ನಡೆ ದೂರ ಬಹು ದೂರ...<br><br></p>
Siddu Yapalaparavihttp://www.blogger.com/profile/03313770596372511100noreply@blogger.com0tag:blogger.com,1999:blog-2307280524148351469.post-66254478873299942322020-01-14T22:02:00.001-08:002020-01-14T22:02:56.435-08:00ಮಠಗಳ ಮಿತಿ<p dir="ltr">ಮಠಗಳ ಮಿತಿ ಮತ್ತು ರಾಜಕಾರಣ<br></p>
<p dir="ltr">ಕಳೆದ ಕೆಲವು ವರ್ಷಗಳಿಂದ ರಾಜ್ಯದ ಗೌರವಾನ್ವಿತ ಮಠಾಧೀಶರು ತಮ್ಮ ಸಂಯಮ ಕಳೆದುಕೊಂಡವರಂತೆ ವರ್ತಿಸುತ್ತಿರುವುದು ಧಾರ್ಮಿಕ ವಿಪರ್ಯಾಸ.<br></p>
<p dir="ltr">ಮಠಗಳು ಅಧ್ಯಾತ್ಮ ಮತ್ತು ಶ್ರದ್ಧಾ ಕೇಂದ್ರಗಳಾಗಬೇಕು.</p>
<p dir="ltr">ಸಂಸಾರಗಳಿಗೆ,ಲೌಕಿಕರಿಗೆ ಮನಸಿಗೆ ಬೇಸರವಾದಾಗ ಕಾಲ ಕಳೆದು ನೆಮ್ಮದಿ ನೀಡುವ ಶಾಂತಿ ಧಾಮಗಳಾಗಬೇಕು.<br></p>
<p dir="ltr">ಸಮಾಜದ ಪ್ರತಿಯೊಂದು ಜಾತಿ,ಧರ್ಮದ ಪೀಠಾಧಿಪತಿಗಳು ತಮ್ಮ ಪೀಠಗಳ ಅಧಿಕಾರವನ್ನು ತಮ್ಮ ಸಮಾಜದ ರಾಜಕಾರಣಿಗಳಿಗೆ ಮೀಸಲಿಟ್ಟವರಂತೆ ಅಸೂಕ್ಷ್ಮವಾಗಿ ದಯವಿಟ್ಟು ವರ್ತಿಸಬಾರದು. <br></p>
<p dir="ltr">ರಾಜಕೀಯ ವ್ಯವಸ್ಥೆಯಲ್ಲಿ ಪ್ರತಿಯೊಂದು ಪಕ್ಷಗಳು ತಮ್ಮ ಸಿದ್ಧಾಂತ ಮತ್ತು ಆಂತರಿಕ ಪರಸ್ಥಿತಿಗನುಗುಣವಾಗಿ ರಾಜಕೀಯ ನಿರ್ಧಾರ ತೆಗೆದುಕೊಳ್ಳುತ್ತವೆ.<br></p>
<p dir="ltr">ಪಕ್ಷದ ಶಾಸಕಾಂಗ ಸಭೆ ಮತ್ತು ಪದಾಧಿಕಾರಿಗಳು ತೆಗೆದುಕೊಳ್ಳಬಹುದಾದ ಆಂತರಿಕ ನಿರ್ಣಯಗಳ ಕುರಿತು ಧಾರ್ಮಿಕ ಮಠಗಳು ಬಹಿರಂಗ ಚರ್ಚೆ ಮಾಡುವುದು ಅಕ್ಷಮ್ಯ.<br></p>
<p dir="ltr">ಯಾವುದೇ ಧರ್ಮ ಮತ್ತು ಸಿದ್ಧಾಂತ ಈ ರೀತಿ ಆದೇಶ ಮಾಡುವ ಅಧಿಕಾರ ನೀಡಿಲ್ಲ ಎಂಬುದನ್ನು ಮಠಾಧೀಶರು ಅರಿತು ಮಾತನಾಡಬೇಕು.<br></p>
<p dir="ltr">ಈ ಎಲ್ಲ ಬೆಳವಣಿಗೆಯನ್ನು ಗಮನಿಸಿದರೆ ಸ್ವಾಮಿಗಳು ಸುಮ್ಮನಿರುವ ಹಾಗೆ ಕಾಣುವುದಿಲ್ಲ ಅವರನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಆಯಾ ಮಠಗಳ ಭಕ್ತರೇ ಹೊರಬೇಕು.<br></p>
<p dir="ltr">ಇಲ್ಲವೇ ರಾಜಕೀಯ ನಾಯಕರು ಮಠಗಳಿಗೆ ಹೋಗುವುದಕ್ಕೆ ಸ್ವಯಂ ನಿಯಂತ್ರಣ ಹೇರಿಕೊಂಡು ಎದುರಾಗುವ ಮುಜುಗರದಿಂದ ಪಾರಾಗಬೇಕು.<br></p>
<p dir="ltr">ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಶಾಸಕ ಎಲ್ಲ ಧರ್ಮದವರಿಂದ ಚುನಾಯಿತರಾಗಿರುತ್ತಾರೆ. ಗೆದ್ದ ಮೇಲೆ ದಿಢೀರ್ ಎಂದು ಒಂದು ಕೋಮಿನ ಪ್ರತಿನಿಧಿಯಂತೆ ವರ್ತಿಸಿ ಮತದಾರರಿಗೆ ಅವಮಾನ ಮಾಡಬಾರದು.<br></p>
<p dir="ltr">ಮಠಾಧೀಶರು ಅಷ್ಟೇ, ಅವರು ಸರ್ವ ಧರ್ಮಗಳ ರಕ್ಷಕರಂತೆ ನಡೆದುಕೊಳ್ಳಬೇಕು.</p>
<p dir="ltr">ಮಾಧ್ಯಮಗಳ ಎದುರು ಮತ್ತು ಸಾರ್ವಜನಿಕ ಸಭೆಗಳಲ್ಲಿ "ನಮ್ಮ ಜನಾಂಗದವರಿಗೆ ಸಚಿವ ಸ್ಥಾನ ನೀಡದಿದ್ದರೆ ನೋಡಿ " ಎಂಬರ್ಥದ ಮಾತುಗಳನ್ನು ಆಡಬಾರದು.<br></p>
<p dir="ltr">ಸಾರ್ವಜನಿಕ ಸಮಾರಂಭದಲ್ಲಿ, ಮಾಧ್ಯಮಗಳ ಎದುರು, ಮತ್ತೆ ಕೆಲವರು ವಿಧಾನ ಸಭೆ ಪ್ರವೇಶಿಸಿ ಈ ರೀತಿ ಹಕ್ಕೊತ್ತಾಯ ಮಾಡುವುದು ಒಂದು ಸಾಮಾಜಿಕ ಮುಜುಗರ ಮತ್ತು ಅವಮಾನ.<br></p>
<p dir="ltr">ಈ ಕುರಿತು ಮಠಾಧೀಶರೊಂದಿಗೆ ಚರ್ಚೆ ಮಾಡುವುದು ಮುಖ್ಯಮಂತಿಗಳಿಗೆ ಸಾಧ್ಯವಾಗುವುದಿಲ್ಲ ಆದ್ದರಿಂದ ತಮ್ಮ ಪಕ್ಷದ ಶಾಸಕರಿಗೆ ಈ ರೀತಿ ಧಾರ್ಮಿಕ ಒತ್ತಾಯ ಹೇರದಂತೆ ತಾಕೀತು ಮಾಡಲೇಬೇಕು. ಇಲ್ಲದೇ ಹೋದರೆ ಅವರ ವೈಯಕ್ತಿಕ ನೆಮ್ಮದಿ ನಾಶವಾಗಿ, ಸಾಮಾಜಿಕ ಅರಾಜಕತೆಯೂ  ಉಂಟಾಗಬಹುದು.<br></p>
<p dir="ltr">ಅಲ್ಲದೆ ಸಾಧ್ಯವಾದಷ್ಟು ಮಠಗಳಿಗೆ ಹೋಗುವುದನ್ನು ನಿಲ್ಲಿಸಿ ಜನರ ಮೂಲಭೂತ ಸಮಸ್ಯೆಗಳನ್ನು ಆಲಿಸಲು ಜನರ ಬಳಿ ಹೋಗುವುದು ಒಳಿತು.<br></p>
<p dir="ltr">ಭಕ್ತರ ಮನಃಶಾಂತಿ ಕಾಪಾಡುವ ಧ್ಯಾನ, ಅಧ್ಯಾತ್ಮ ಮತ್ತು ಯೋಗ ಸೂತ್ರಗಳನ್ನು ಬೋಧನೆ ಮಾಡಬೇಕಾದ ಮಠಗಳು ನೇರ ರಾಜಕೀಯ ಅಖಾಡಕ್ಕೆ ಇಳಿದರೆ ಸಾಮಾನ್ಯ ಭಕ್ತರು ನೆಮ್ಮದಿಗಾಗಿ ಇನ್ನೆಲ್ಲಿಗೆ ಹೋಗಬೇಕು?<br></p>
<p dir="ltr">ಹಾಗಂತ ಮಠಾಧೀಶರು ರಾಜಕೀಯ ನಾಯಕರುಗಳಿಗೆ ಮಾರ್ಗದರ್ಶನ ಮಾಡಬಾರದು ಎಂದು ಅರ್ಥವಲ್ಲ ಅವರ ಮಾರ್ಗದರ್ಶನ ಒಟ್ಟು ಸಮುದಾಯದ ಅಭಿವೃದ್ಧಿ ಪರ ಇರಬೇಕು.<br></p>
<p dir="ltr">ಅದೂ ಈ ರೀತಿ ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಹೇಳದೇ ವೈಯಕ್ತಿಕ ನೆಲೆಯಲ್ಲಿ ಸಂಯಮದಿಂದ ಚರ್ಚೆ ಮಾಡಬೇಕು. <br></p>
<p dir="ltr">ಶಾಸಕರು ತಮ್ಮ ಸಮಾಜದ ಸ್ವಾಮಿಗಳ ಪ್ರಭಾವಕ್ಕಿಂತ, ವೈಯಕ್ತಿಕ ಸಾಧನೆ ಮೂಲಕ ಸ್ಥಾನಮಾನ ಪಡೆದುಕೊಂಡು ಪ್ರಜಾಪ್ರಭುತ್ವ ಮತ್ತು ನಾಡಿನ ಮತದಾರರ ಮಾನ ಕಾಪಾಡಲಿ ಎಂದು ಈ ರಾಜ್ಯದ ಸಾಮಾನ್ಯ ಪ್ರಜೆಯಾಗಿ ನಿವೇದಿಸುವೆ.<br></p>
<p dir="ltr">#ಸಿದ್ದು_ಯಾಪಲಪರವಿ.<br><br></p>
Siddu Yapalaparavihttp://www.blogger.com/profile/03313770596372511100noreply@blogger.com0tag:blogger.com,1999:blog-2307280524148351469.post-48657516444582696132020-01-05T06:34:00.001-08:002020-01-05T06:34:44.675-08:00ಸಂಬಂಧನಗಳ ಹುಡುಕಾಟ<p dir="ltr">*ಹೊಸ ವರ್ಷ ಆದರೂ ಹಳೆ ವರಸೆ: ಸಂಬಂಧನಗಳ ಹುಡುಕಾಟ*</p>
<p dir="ltr">ಹೊಸ ವರ್ಷ ಬಂತು ಆದರೆ ವರಸೆ ಮಾತ್ರ ಬದಲಾಗಲಿಲ್ಲ,ಮಾತುಕತೆ, ಆಲೋಚನಾ ಕ್ರಮ ಎಲ್ಲ ಹಾಗೆಯೇ ಮುಂದುವರೆದಿದೆ.<br>
ಇದು ಇಂಗ್ಲಿಷರ ಹೊಸ ವರ್ಷ ನಮ್ಮದಲ್ಲ ಎಂಬ ಮಾತುಗಳ ಮೂಲಕ ನಮ್ಮ ಸಣ್ಣತನದ ಪ್ರದರ್ಶನ.<br>
ಹಾಗೆ ಹೇಳುತ್ತಲೇ ಕಾಲ ಕಳೆಯುವ ಆಷಾಢಭೂತಿಗಳು ನಾವು.<br>
ಎಲ್ಲಾ ಬೇಕು ನಖರಾನೂ ಹಂಗೆ. </p>
<p dir="ltr">ನಿನ್ನೆ ಸಭೆಯೊಂದರಲ್ಲಿ ಮಾತನಾಡುವಾಗ 'ಟೆಕ್ನಾಲಜಿ ದಾಸರಾಗಿ ನಾವು ಮಾನವೀಯ ಸಂಬಂಧಗಳ ಕಳೆದುಕೊಂಡಿದ್ದೇವೆ.<br>
ಪಾರ್ಕಿನಲ್ಲಿ ಕುಳಿತ ಪ್ರೇಮಿಗಳು ಮಾತಾಡುವುದ ಮರೆತು ತಮ್ಮ ಮೊಬೈಲ್ ಜೊತೆ ಕಾಲ ಕಳೆಯುವುದು ದೊಡ್ಡ ದುರಂತ. ಸುಂದರವಾದ ಹುಡುಗಿ,ಪ್ರೀತಿಸುವ ಮಕ್ಕಳು, ಜವಾವ್ದಾರಿಯುತ ಗೆಳೆಯರು ಯಾರೂ ಬೇಡವಾಗಿದೆ' ಮಾತು ಕೇಳಿದವರಿಗೆ ಹೌದೆನಿಸಿತು.</p>
<p dir="ltr">ಈಗ ಮೊಬೈಲ್ ಫ್ರೀ ಆದರೆ ಮಾತುಗಳೇ ಮಾಯ!<br>
ಏನೋ ಧಾವಂತ,ವ್ಯಕ್ತಿ ಕೇಂದ್ರಿತ ಬದುಕು. ಕೆಲಸ ಇಲ್ಲದೇ ಭೇಟಿ, ಮಾತುಕತೆ, ಹರಟೆಗೆ ಜನ ಬೇಡವೇ ಬೇಡ. ಮಹತ್ವದ ಕೆಲಸ ಇದ್ದರೆ, ದೌಲತ್ತಿಗೆ ಅಧಿಕಾರ ಇದ್ದರೆ ಮಾತ್ರ ಜನ ಬರ್ತಾರೆ,ಮಾತಾಡಿಸ್ತಾರೆ ಇಲ್ಲ ಅಂದರೆ ಗೋವಿಂದ.<br>
ತಿಂಗಳುಗಟ್ಟಲೆ ಫೋನು ಇಲ್ಲ.</p>
<p dir="ltr">ಉದ್ಯೋಗ ಸ್ಥಳಗಳಲ್ಲಿ ಅದೇ ಪೈಪೋಟಿ, ಕೆಲಸದ ಒತ್ತಡ. ದುಡಿಯುವ ಮನಸುಗಳಿಗೆ ಒತ್ತಡ ನೀಗಿಸಲು ಆತ್ಮೀಯರ ನಿಷ್ಕಲ್ಮಶ ಮಾತು,ಪ್ರೀತಿ, ಸ್ನೇಹ ಬೇಡವಾಗಿ ಬಿಟ್ಟದೆ. <br>
ಏನಿದ್ದರೂ 'ಕಾಮಾ ಪೂರ್ತಿ ಮಾಮಾ' ಅನ್ನೋ ಮತಲಬ್ ಕಿ ದುನಿಯಾ.</p>
<p dir="ltr">ಕಾಡು ಹರಟೆ, ಆರೋಗ್ಯ ಪೂರ್ಣ ಚರ್ಚೆ ಸಿಗಬೇಕಾದರೆ ಒಂದಿಷ್ಟು ಹಿರಿಯರ ಬೆಳಗಿನ ವಾಕ್ ಸಮಯದಲ್ಲಿ, ಅವರು ಏಕತಾನತೆಯ ದೇಶಾವರಿ ಮಾತುಕತೆ, ಯಾವುದೇ ಆತ್ಮೀಯತೆಯಾಗಲಿ, ಪ್ರಾಮಾಣಿಕತೆಯಾಗಲಿ ಕಾಣುವುದಿಲ್ಲ.</p>
<p dir="ltr">ಎರಡು ದಶಕಗಳ ಹಿಂದೆ ಪ್ರೀತಿ, ಪ್ರೇಮ ಅಫೇರುಗಳ ನೆಪದಲ್ಲಿ ಜನ ಪರಸ್ಪರ ಸಾಂಗತ್ಯಕ್ಕಾಗಿ ಹಾತೊರೆಯುತ್ತಿದ್ದರು.<br>
ಈಗ ಹಾದರದ ಅನುಸಂಧಾನ ಮಾಯವಾಗಿ ಅಲ್ಲಿ ಕಾಮವೂ ಡೇಟಿಂಗ್ ವ್ಯವಹಾರದ ಸರಕಾಗಿ ಹೋಗಿರುವುದು ಮನುಷ್ಯ ಸಂಬಂಧಗಳ ದುರಂತ.<br>
ರಂಗು ರಂಗಿನ ಪ್ರೇಮ ಕಥೆಗಳ ಕಳಕೊಂಡ ಹಳವಂಡ.</p>
<p dir="ltr">ವೃತ್ತಿಯಿಂದ ನಿವೃತ್ತರಾದವರ ಪಾಡಂತು ಹೇಳತೀರದು.<br>
ಮೈಯಲ್ಲಿ ಕಸುವು ಮಾಯಾವಾಗಿ ಮನಸು ಮೃದುವಾಗಿ ದರ್ಪ ಕಳಕೊಂಡು ಬಿಟ್ಟಿರುತ್ತಾರೆ.<br>
ಹುಲಿಯಂತೆ ಉನ್ನತ ಹುದ್ದೆಗಳಲ್ಲಿ ಮೆರೆದವರು ಇಲಿಯಾಗಿ ಮೂಲೆ ಸೇರಿಕೊಂಡಾಗ ಯಾರೂ ಕೇರ್ ಮಾಡುವುದೇ ಇಲ್ಲ.</p>
<p dir="ltr">ದೇಹ ಮುಪ್ಪಾದರೂ ಒಳಗಿನ ಜೀವಚೈತನ್ಯಕೆ ಮುಪ್ಪು ಇರುವುದಿಲ್ಲ ಎಂಬುದನ್ನು ಕೆಲವರು ಮರೆತು ಬಿಡುತ್ತಾರೆ.<br>
ಓದು,ಬರಹ,ಸಂಗೀತ, ಸಿನೆಮಾ ಮತ್ತು ಸಂಸ್ಕೃತಿಗಳ ಒಡನಾಟ ಇಲ್ಲದವರು, ಕ್ರಿಯಾಶೀಲ ಚಟುವಟಿಗಳ ಹವ್ಯಾಸ ಇಲ್ಲದವರು ಒಂಟಿತನದಿಂದ ನರಳಿ ಬೇಗ ಇನ್ನೂ ಮುದುಕರಾಗಿ ಹೊಸ ತಲೆಮಾರಿನ ಹುಡುಗರ ಬೈಯುತ್ತ ಎಲ್ಲರಿಗೂ ಬೇಡವಾಗುತ್ತಾರೆ.</p>
<p dir="ltr">ಟಿವಿಯಲ್ಲಿ ಬರುವ ಧಾರಾವಾಹಿಗಳ ಕಥೆಯೂ ಅದೇ. <br>
ಅದೇ ಜಗಳ,ದ್ವೇಷ ಇಬ್ಬರು ನಟಿಯರಲ್ಲಿ ಒಬ್ಬಳು ವಿಲನ್… ಇಂತಹ ಕೆಲಸಕ್ಕೆ ಬಾರದ ಅವಾಸ್ತವ ಕತೆಗಳಲ್ಲಿ ಹೆಣ್ಣುಮಕ್ಕಳು ಕರಗಿ ಹೋಗಿದ್ದಾರೆ.</p>
<p dir="ltr">ಮನಸಿಗೆ ಮುದ ನೀಡುವ ಸಂಗೀತ ಆಲಿಸುವ, ಮಹತ್ವದ ಪುಸ್ತಕಗಳನ್ನು ಓದುವ, ಸರಿ ಕಂಡಂತೆ ಬರೆಯುವ ಹವ್ಯಾಸ ಇರದಿದ್ದರೆ ಬದುಕು ನೀರಸವಾಗಿ ಬಿಡುತ್ತದೆ.</p>
<p dir="ltr">ಕೆಲಸವಿಲ್ಲದಿದ್ದರೆ ಬರಲಾಗದ ಗೆಳೆಯರಿಗಾಗಿ ಕಾಯದೇ ನಿಮ್ಮ ಪಾಡಿಗೆ ವೈಯಕ್ತಿಕ ಸಾಂಸ್ಕೃತಿಕ ಲೋಕ ಸೃಷ್ಟಿ ಮಾಡಿಕೊಂಡು ಬದುಕಿದರೆ ಬದುಕು ಸಹನೀಯವಾದೀತು.</p>
<p dir="ltr">ಮುಪ್ಪಾದ ದೇಹವ ಶಪಿಸದೇ ಸಂಗಾತಿ ಜೊತೆ ಪ್ರೀತಿಯಿಂದ ಕಾಲ ಕಳೆಯುವ ಔದಾರ್ಯ ಈಗ ಅನಿವಾರ್ಯ.<br>
ದೇಹಕ್ಕಿಂತ ಮನಸು ದೊಡ್ಡದು, ಕಾಮಕ್ಕಿಂತ ಪ್ರೇಮ ಹಿತಕಾರಿ ಅಂದುಕೊಂಡಾಗ ಬದುಕು ಬಾಳಾಗುತ್ತದೆ.<br>
ಒಂಟಿತನ ಸುಂದರ ಏಕಾಂತವಾಗುತ್ತದೆ.<br>
ಕಾಮದ ಕಸುವು ಮಾಯವಾದಾಗ ಪ್ರೇಮ, ಬಿಸಿ ಅಪ್ಪುಗೆ, ಮುದವಾದ ಮುತ್ತಿಗೂ ಬಡತನ ಇರಬಾರದು.<br>
ಒಮ್ಮೆ ಅಲೋಚನೆ ಬದಲಿಸಿ ನೋಡಿ ಬದುಕು ಬಾಳಾಗಿ ಝಗಮಗ ಬೆಳಗಲು.</p>
Siddu Yapalaparavihttp://www.blogger.com/profile/03313770596372511100noreply@blogger.com0tag:blogger.com,1999:blog-2307280524148351469.post-13519809316806175542019-09-08T21:24:00.001-07:002019-09-08T21:24:00.514-07:00ಹೊಸ ಇತಿಹಾಸ<p dir="ltr">ಈಗ ಹೊಸ ಇತಿಹಾಸ </p>
<p dir="ltr">ಯಾರೂ ಊಹಿಸಲಾಗದ ಕೊಡಲಾಗದ ನೀಡಲಾಗದ <br>
ಯಾರಿಗೂ ಕೊಡಲು ಬಾರದ ಕೊಡಲು ನಿರಾಕರಿಸಿದ ಅನುರೂಪದ ಕಾಣಿಕೆಯ ಅಂಗೈಯಲಿ ಹಿಡಿದು ನಸು ನಕ್ಕಾಗ ಬೆಚ್ಚಿ ಬೆರಗಾದೆ.</p>
<p dir="ltr">ಬಿಡಲಾಗದೆ ಚಡಪಡಿಸಿ ಅಂಗಲಾಚಿ <br>
ಬೆಂಬಿಡದ ಭೂತ ನಾ ಎಂದರಿತ <br>
ನೀ ಕೊಂಚ ಅರಳಿದೆ ಕೆರಳದೆ </p>
<p dir="ltr">ನಿಧಾನದಿ ತೂರಿ ಬಂದ ಭಾವ <br>
ಬಂಧಗಳಲಿ ಬಂಧಿಯಾದೆ ಶಬ್ದಗಳ <br>
ದಿವ್ಯಾಲಂಕಾರದ ಹೊಳಪಿಗೆ </p>
<p dir="ltr">ನಿತ್ಯ ನಿನ್ನ ಧ್ಯಾನಿಸುತಿರೆ ಇನ್ನೇನು <br>
ನಿನ್ನ ಅಂತರಂಗದಿ ಅವಿತು ದುಃಖಿಸುವ ಗಾಯಗಳಿಗೆ ಮುಲಾಮು ಸಿಕ್ಕಾಗ <br>
ಕರಗಿ ನೀರಾಗಿ ನೀನಾಗಿ ನೀನೇ <br>
ಕೈಹಿಡಿದು ಮೇಲೆ ಬಂದೆ </p>
<p dir="ltr">ಮನದ ತಳಮಳ ಮಂಗಮಾಯ <br>
ಅಂತ್ಯಗೊಂಡ ದುಗುಡ </p>
<p dir="ltr">ಚಾರಿತ್ರ್ಯದ ಸೋಗಿನ ಮುಖವಾಡದ <br>
ಮುಸುಕ ಕಳಚಿ <br>
ಹಂಗ ಹರಿದು ಸಂಗ <br>
ಬೇಡಿ ಓಡೋಡಿ ಬಂದೆ </p>
<p dir="ltr">ತೋಳಬಂಧನದಿ ಕರಗಿ ಹೂತಾಗ ಸವಿಮುತ್ತುಗಳ ಸರಮಾಲೆ ತೊಡಿಸಿ</p>
<p dir="ltr">ಮೇಲೆಳೆದು ಅಡಿಯಿಂದ ಮುಡಿಯವರೆಗೆ ನಾಲಿಗೆಯ ನರ್ತನ </p>
<p dir="ltr">ಹಗಲು ರಾತ್ರಿಯಾಗಿ ಮೈಮನಗಂಟಿದ <br>
ಲಜ್ಜೆ ಸರ ಸರ ಜಾರಿ ಅರಳಿದ <br>
ಪರಿಗೆ ಇನ್ನಿಲ್ಲದ ತಲ್ಲಣ </p>
<p dir="ltr">ಮೈಮನಗಳ ಚಲ್ಲಾಟದಲಿ ಉಕ್ಕಿ ಹರಿದ ಉನ್ಮಾದಕೆ ಚಿಮ್ಮಿದ ರಸಧಾರೆ </p>
<p dir="ltr">ಕಳೆದು ಹೋದ ಇತಿಹಾಸದಲಿ <br>
ಒಲುಮೆಯ ಒಲವಿಲ್ಲದ ಮುಗಿದ ಅಧ್ಯಾಯದಲಿ ಸಂತಸಕಿರಲಿಲ್ಲ<br>
ಕೊಂಚವೂ ಜಾಗ </p>
<p dir="ltr">ಅನುಮಾನ , ಅಪಮಾನಗಳಲಿ ಬೆಂದು <br>
ಬಾಡಿ ಹೋದ ಭಾವನೆಗಳು ಕರಗಿ <br>
ಹೋದ ಕನಸುಗಳು </p>
<p dir="ltr">ಅಯ್ಯೋ ಈ ಹೇಸಿ ಬದುಕೇ ಎಂದು <br>
ಹಳಹಳಸಿ ಉನ್ಮಾದಗಳ ಅದುಮಿಟ್ಟ ಜೀವಕೀಗ ಇನ್ನಿಲ್ಲದ ಹೊಸ ಚೈತನ್ಯ </p>
<p dir="ltr">ಪ್ರೀತಿ-ಪ್ರೇಮ-ಪ್ರಣಯದಾಟದ ಗಮ್ಮತ್ತಿಗೆ <br>
ಹಾರಿ ಹಾಡಿ ಕುಣಿದು ಕುಪ್ಪಳಿಸುವ <br>
ಮನಕೀಗ <br>
ಎಲ್ಲವೂ ನೀನೇ ನಿನಗೆ ನಾನೇ <br>
ಎಂದು ಹಾಡುವ ಹಾಡಿಗೆ <br>
ಲಯ ರಾಗ ತಾಳ <br>
ಎಲ್ಲವೂ ನೀನೇ ನೀನೇ.</p>
<p dir="ltr">---ಸಿದ್ದು <u>ಯಾಪಲಪರವಿ</u></p>
Siddu Yapalaparavihttp://www.blogger.com/profile/03313770596372511100noreply@blogger.com0tag:blogger.com,1999:blog-2307280524148351469.post-18884681561625583992019-09-08T21:23:00.001-07:002019-09-08T21:23:18.347-07:00ಅಮರ ಪ್ರೇಮ<p dir="ltr">ಅಮರ ಪ್ರೇಮಕೆ ದೇವನೊಲುಮೆ </p>
<p dir="ltr">ಬಾನಲಿ ಹಾರಾಡುವ ಜೋಡಿ <br>
ಹಕ್ಕಿಗಳೇ ಎಷೊಂದು ಉಲ್ಲಸಿತ <br>
ಹಾರಾಟ ದಣಿವರಿಯದ ಸಂಚಲನ </p>
<p dir="ltr">ರೆಕ್ಕೆ ದಣಿದು ಹಾಡು ಮುಗಿದ <br>
ಮೇಲೆ <br>
ಒಂದಿಷ್ಟು ಕೊಂಬೆ ಮೇಲೆ<br>
ವಿರಮಿಸಿ ಗುಟಕುಗಳ <br>
ವಿನಿಮಯದ ಕಚಗುಳಿ <br>
ಮತ್ತದೇ ಹಾರಾಟ <br>
ಬಾನಂಗಳದಲಿ </p>
<p dir="ltr">ಬೇಟೇಗಾರರು ಬಂದಾರು <br>
ನಿಮ್ಮನು ಕೊಂದಾರು ಎಂದಿಲ್ಲದ <br>
ಭೀತಿ <br>
ನಿಮಗೆ ನಿಮದೇ ಆದ <br>
ಧಾಟಿ </p>
<p dir="ltr">ಜೋಡಿ ಸಿಕ್ಕ ಮೇಲೆ ಸಾವಿಗಿಲ್ಲ <br>
ಭೀತಿ <br>
ಒಮ್ಮೆ ಸಾಯುವುದು ಇದ್ದೇ ಇದೆ </p>
<p dir="ltr">ಬದುಕನನುಭವಿಸುವ ಪರಿಗೆ <br>
ಸಾವಿನ ಹಂಗಿಲ್ಲ ನೋವಿನ <br>
ಗುಂಗೂ ಇಲ್ಲ </p>
<p dir="ltr">ಭಿನ್ನ ಗೂಡುಗಳ ಸೇರಿ ಒಂಟಿಯಾಗಿ <br>
ನರಳುವ ಜಂಜಡವ ದೂಡಿ </p>
<p dir="ltr">ಮತ್ತೆ ಮತ್ತೆ ಮೇಲೇರುವ ಮೇಲೆ <br>
ಹಾರುತಲೇ ಇರುವ ನಿಲ್ಲದ ತವಕ </p>
<p dir="ltr">ತಥಾಸ್ತು ಎಂದಭಯವ ಕರುಣಿಸಿರುವೆ <br>
ಹಾರಿ ಹಾಡಿ ಕುಣಿದು ಜಗದ <br>
ಜಂಜಡವ ಮರೆತು ಮೆರೆಯಲು <br>
ಮನದ ನೋವ ಮರೆಯಲು.</p>
<p dir="ltr">---ಸಿದ್ದು ಯಾಪಲಪರವಿ</p>
Siddu Yapalaparavihttp://www.blogger.com/profile/03313770596372511100noreply@blogger.com0tag:blogger.com,1999:blog-2307280524148351469.post-52234255428465116862019-07-13T22:52:00.001-07:002019-07-13T22:52:33.093-07:00ಕಹಿ ಮತ್ತು ಸಹನೆ<p dir="ltr">ಕಹಿ ಮತ್ತು ಸಹನೆ </p>
<p dir="ltr">ಅನಿವಾರ್ಯತೆಯೋ,ಅಸಹಾಯಕತೆಯೋ ನಾ ಕಾಣೆ ಎಲ್ಲವನ್ನು ವಿಪರೀತ ಅನ್ನುವಷ್ಟು ಸಹಿಸಿಕೊಳ್ಳುತ್ತೇನೆ. ಪ್ರತಿಯೊಬ್ಬ ವ್ಯಕ್ತಿಯ ವರ್ತನೆಯ ಹಿಂದೆ ಅವನ ಬಾಲ್ಯದ ಘಟನೆಗಳ ಪ್ರಭಾವ ಅಡಗಿರುತ್ತದೆ. ಬಾಲ್ಯದ ಕಾಣದ ಸಂಗತಿಗಳು ಈಗಲೂ ನಮ್ಮನ್ನು ನಮಗೆ ಅರಿವಿಲ್ಲದಂತೆ ಆಳುತ್ತಿರುತ್ತವೆ.ಅಂತಹ ಆಳುವ ಒಂದು ಪ್ರಸಂಗವನ್ನು ಹಂಚಿಕೊಳ್ಳಬೇಕೆನಿಸಿದೆ.</p>
<p dir="ltr">'ಮಗು ಆರೋಗ್ಯವಾಗಿರಲು ನಿತ್ಯ ಮುಂಜಾನೆ ಒಂದು ಲೋಟ ಬೇವಿನ ರಸ ಕುಡಿಸಬೇಕು' ಎಂದು ಅವ್ವನಿಗೆ ಯಾರೋ ಹೇಳಿದ್ದರಂತೆ, ಅದರ ಪ್ರಯೋಗ ನನ್ನ ಮೇಲೆ ಮಾಡಲು ನಿರ್ಧರಿಸಿ, ಮನೆಕೆಲಸದ ಹಿರಿಯ‌ ಮುದುಕಪ್ಪನಿಗೆ ಜವಾಬ್ದಾರಿ ನೀಡಿದ ನೆನಪು.</p>
<p dir="ltr">ಮೊದಲ ದಿನ ವಿಷ ( ಕಹಿಗೆ ಬಳಸುವ ಸಾಮಾನ್ಯ ಪದ) ಕುಡಿಯುವ ಸರದಿ ನನ್ನದು. ವಿಪರೀತ ಕಹಿಯಾಗಿ ವಾಂತಿ ಮಾಡಿಕೊಂಡೆ. ಇಲ್ಲಿಗೆ ಈ ಪ್ರಹಸನ ಮುಗಿಯಬಹುದು ಅಂದುಕೊಂಡೆ. ಮುಗಿಯಲಿಲ್ಲ. <br>
ಮರುದಿನ ನಸುಕಿನಲ್ಲಿ ಎಬ್ಬಿಸಿದಾಗ ಭಯ ಭೀತನಾದೆ, ವಿಷ ಕುಡಿಯುವ ಶಿಕ್ಷೆ ನೆನೆದು. </p>
<p dir="ltr">ಅವ್ವ ಮತ್ತು ಮುದುಕಪ್ಪ ಸೇರಿ ಹೊಸ ಸಂಚು ಹೂಡಿದವರಂತೆ ನಾಲಿಗೆ ಮೇಲೆ ನಾಲಿಗೆ ಗಾತ್ರದ ಪ್ಲ್ಯಾಸ್ಟಿಕ್ ಹಾಕಿ ಮೂಗು ಮುಚ್ಚಿ ನೇರವಾಗಿ ಗಂಟಲಿನಲ್ಲಿ ಬೇವಿನ ರಸ ಸುರುವಿ ವಾಂತಿಯಿಂದ ಪಾರು ಮಾಡಿದರು. <br>
' ಅಯ್ಯೋ ವಾಂತಿಯಾದರೆ ಚನ್ನಾಗಿತ್ತು ಈ ವಿಷ ಕುಡಿಯುವ ಹಿಂಸೆ ತಪ್ಪುತ್ತಿತ್ತು' ಎಂದು ನೆನೆದು ಗಂಭೀರವಾಗಿ ಆಲೋಚನೆ ಮಾಡುತ್ತ ಹೊಟ್ಟೆಯೊಳಗೆ ವಿಷ ಹೇಗೆ ಕೆಲಸ ಮಾಡುತ್ತಿರಬಹುದೆಂದು ಕಲ್ಪಿಸಿಕೊಂಡೆ. </p>
<p dir="ltr">ಹೀಗೆ ಬೇವಿನ ರಸ ಕುಡಿದು ದಕ್ಕಿಸಿಕೊಂಡ ಮಗನಿಗೆ ರೋಗ ರುಜಿನಗಳು ಮಗನಿಗೆ ತಟ್ಟುವುದಿಲ್ಲ ಎಂಬ ಸಮಾಧಾನ ಅವ್ವನಿಗೆ. <br>
ನನಗೋ ಒಳಗೊಳಗೆ ಇನ್ನಿಲ್ಲದ ಆತಂಕ. ಈ ಪ್ರಕ್ರಿಯೆ ತಿಂಗಳುಗಟ್ಟಲೆ ನಡೆಯಿತು.</p>
<p dir="ltr">ನನಗೂ ಅನೇಕ ಕಲ್ಪನೆಗಳು ಆರಂಭವಾದವು. ನಾ ಬಹಳ ಗಟ್ಟಿಯಾದೆ. ಹಾವು ಕಡಿದರೂ ವಿಷ ಏರುವುದಿಲ್ಲ ಎಂಬ ದಂತಕತೆಗಳು ಕಿವಿಗೆ ಅಪ್ಪಳಿಸಲಾರಂಭಿಸಿ ಸಂಭ್ರಮಿಸಿದೆ. <br>
ಮುಂದೆ ಈ ರಹಸ್ಯ ಮಾಹಿತಿ ಅಪ್ಪನ ತಾಯಿ ಅಮರಮ್ಮ ಅಮ್ಮನಿಂದಾಗಿ ಸ್ಪೋಟಗೊಂಡಿತು. <br>
ಆಗ ಜನ ಭಿನ್ನ ವಿಭಿನ್ನ ಸುದ್ದಿ ಹಬ್ಬಿಸಲಾರಂಭಿಸಿದರು. <br>
"ಈ ರಸ ಕುಡಿದರೆ ಮುಂದೆ ಯಾವುದೇ ಔಷಧ ಹತ್ತುವುದಿಲ್ಲ…<br>
ರೋಗ ಬರದೇ ಇರಬಹುದು ಬಂದರೆ ಗುಣವಾಗುವುದೇ ಇಲ್ಲ…ನಾಲಿಗೆ ರುಚಿ ಹಾಳಾಗಿ ಹೋಗುತ್ತೆ..." ಇಂತಹ ಅನಾಹುತ ಸುದ್ದಿಗಳಿಗೆ ಅವ್ವ ಥಂಡಾ ಹೊಡೆದಿರಬೇಕು.</p>
<p dir="ltr">ಮುಂದೆ ಮುದುಕಪ್ಪನ ವಿಷಪ್ರಾಶನ ಪ್ರಸಂಗ ಇದ್ದಕಿದ್ದ ಹಾಗೆ ಬಂದ್ ಆಯಿತೆನ್ನಿ. <br>
ಪ್ರೀತಿ, ಕಾಳಜಿ,ಅನುಕಂಪ,ಅವಮಾನಗಳ ಪ್ರಯೋಗ ಶಾಲೆ ನನ್ನ ಬಾಲ್ಯ.</p>
<p dir="ltr">ದುಂಡು ದುಂಡಾದ ಗುಳಿ ಕೆನ್ನೆಯ‌ ಹುಡುಗನ ತಲ್ಲಣ, ಹುಡುಕಾಟದ ಕುತೂಹಲಗಳಿಗೆ ನನ್ನ ನಾ ಒಡ್ಡಿಕೊಂಡು ಎಲ್ಲ ಪ್ರಯೋಗಗಳಿಗೆ ತೆರೆದುಕೊಂಡು ಜೀವನಾನುಭವ ಹೆಚ್ಚಿಸಿಕೊಂಡೆ.</p>
<p dir="ltr">ಈಗ</p>
<p dir="ltr">ಯಾರು ಎಷ್ಟೇ ಅವಮಾನ ಮಾಡಿದರೂ ಪ್ರತಿಕ್ರಿಯಿಸಿದಿರುವಾಗ, ತಟ್ಟೆಯ ಆಹಾರಕೆ ಹೆಸರಿಡದೆ ಮೌನವಾಗಿ ಊಟ ಮಾಡುವಾಗ, ಮಾಟ ಮಂತ್ರಗಳಿಗೆ ಮನಸು ಹೆದರದೇ ಇದ್ದಾಗ ಈ ಬೇವಿನ ರಸ ಕುಡಿದ ಪ್ರಸಂಗ ನೆನಪಾಗಿ ಮನಸು ನಾಲ್ಕು ದಶಕಗಳ ಹಿಂದೆ ಓಡುತ್ತದೆ.</p>
<p dir="ltr">*ಸಿದ್ದು ಯಾಪಲಪರವಿ*</p>
Siddu Yapalaparavihttp://www.blogger.com/profile/03313770596372511100noreply@blogger.com0tag:blogger.com,1999:blog-2307280524148351469.post-13419750763583745232019-05-03T00:29:00.001-07:002019-05-03T00:29:10.022-07:00ಪುಸ್ತಕ ದಿನ<p dir="ltr">*ಪುಸ್ತಕ ದಿನ ಮತ್ತು ವಿಲಿಯಂ ಶೇಕ್ಸ್‌ಪಿಯರ್*<br></p>
<p dir="ltr">ಮನುಷ್ಯನಿಗೆ ಪ್ರಾಣ,ಸ್ವಾತಂತ್ರ್ಯ ಹಾಗೂ ದೃಷ್ಟಿ ಕನಿಷ್ಠ ಅಗತ್ಯಗಳು ಎಂದು ಹೇಳಿದ ವಿಲಿಯಂ ಶೇಕ್ಸ್‌ಪಿಯರ್ ಹುಟ್ಟು ಮತ್ತು ಸಾವಿನ ದಿನ. ಪುಸ್ತಕ ದಿನವೂ ಹೌದು. <br></p>
<p dir="ltr">ಮನಷ್ಯನಿಗೆ ಹಸಿವು, ನಿದ್ರೆ ಮತ್ತು ಮೈಥುನ ದೈಹಿಕ ಬೇಕುಗಳು. </p>
<p dir="ltr">ಜ್ಞಾನಿಗಳು, ಸಂತರು ಇವುಗಳನ್ನು ನಿಗ್ರಹಿಸುತ್ತ ಅರ್ಥಪೂರ್ಣವಾಗಿ ಬದುಕಬಲ್ಲರು. <br></p>
<p dir="ltr">ನಾವು ಮನುಷ್ಯರು ನಮ್ಮ ಮನಸಿನ ವಿಕಾರಗಳಲಿ ಒದ್ದಾಡುತ್ತ ನರಳುತ್ತ ಕಾಲ ಕಳೆಯುತ್ತ ಕಾಲನ ಕರೆ ಬಂದಾಗ ಹೇಳದೇ ಕೇಳದೇ ಹೋಗಿಬಿಡುತ್ತೇವೆ, ಒಂದು ಸಣ್ಣ ಗುರುತನ್ನು ಬಿಡದೇ.<br></p>
<p dir="ltr">ಆದರೆ ಶೇಕ್ಸ್‌ಪಿಯರ್ ತನ್ನ ಮೂವತ್ತೇಳು ನಾಟಕಗಳ ಪಾತ್ರಗಳ ಮೂಲಕ ಇಂದಿಗೂ ನಮ್ಮೊಂದಿಗೆ ಜೀವಂತವಾಗಿದ್ದಾನೆ. </p>
<p dir="ltr">ಸಾಹಿತ್ಯದ ವಿದ್ಯಾರ್ಥಿಗಳು ಅವನ ಕುರಿತು ಹೇಳದೇ ಇರಲಾಗದು.<br></p>
<p dir="ltr">ನಾವೆಲ್ಲ ಉಪನ್ಯಾಸಕರಾದ ಹೊಸತರಲ್ಲಿ ಶೇಕ್ಸ್‌ಪಿಯರ್ ಬಿಟ್ಟು ಬೇರೇನೂ ಕಲಿಸಲಾಗುದಿಲ್ಲ ಎಂಬ ಸ್ಥಿತಿ ಇತ್ತು.</p>
<p dir="ltr">ಹತ್ತಾರು ವರ್ಷಗಳ ಪಯಣದ ನಂತರ ಶೇಕ್ಸ್‌ಪಿಯರ್ ಮೋಹದಿಂದ ಹೊರಬರಲು ಒದ್ದಾಡಬೇಕಾಯ್ತು.<br></p>
<p dir="ltr">*ಬದುಕಿನ ಪಾಠ ನೆನಪಿಸುವ ಅವನ ದುರಂತ ನಾಟಕಗಳು*</p>
<p dir="ltr">ಅಸಾಮಾನ್ಯ ಪಾತ್ರಗಳು ಮಾತ್ರ ನಮಗೆ ಆದರ್ಶವಾಗಬಲ್ಲವು ಎಂಬ ಸಿದ್ಧಾಂತ ಇಟ್ಟುಕೊಂಡು ದುರಂತ ನಾಯಕರುಗಳನ್ನು ಸೃಷ್ಟಿಸುತ್ತಾನೆ.‌<br></p>
<p dir="ltr">*ಒಥೆಲೋ, ಕಿಂಗ್ ಲಿಯರ್, ಹ್ಯಾಮ್ಲೆಟ್ ಹಾಗೂ ಮ್ಯಾಕ್ ಬೆತ್ ಪಾತ್ರಗಳ‌‌ tragic flaw ಹೇಗೆ ವ್ಯಕ್ತಿ ಹಾಗೂ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದನ್ನು ರಸವತ್ತಾಗಿ ನಿರೂಪಿಸಿದ್ದಾನೆ*.<br></p>
<p dir="ltr">ಓದುತ್ತ,ಕಲಿಯುತ್ತ,ಕಲಿಸುತ್ತ ಕಾಲ ಕಳೆಯುವ ನಮಗೆ ಅವನು ಈಗಲೂ ದಂತಕಥೆ.</p>
<p dir="ltr">ಹತ್ತು ವರ್ಷಗಳ ಹಿಂದೆ ಇಂಗ್ಲೆಂಡಿನ ಪ್ರವಾಸದಲ್ಲಿ ನಾನು ತುಂಬ ಇಷ್ಟಪಟ್ಟು ನೋಡಿದ ಅವನ ಊರು, ಮನೆ ಎಂದಿಗೂ ಮರೆಯಲಾಗದು. </p>
<p dir="ltr">ಅವನೊಬ್ಬ ಅದ್ಭುತ ಸಂತ. ಮನುಷ್ಯನ ಮನಸ್ಥಿತಿ ಅರ್ಥಮಾಡಿಕೊಳ್ಳುವ ಹತ್ತಾರು ಪಾತ್ರಗಳ‌ ಮೂಲಕ ಜೀವನ ಸಾರ ತಿಳಿಸುತ್ತಾನೆ.<br></p>
<p dir="ltr">*ಒಥೆಲೋನ ದುಡುಕು ಮತ್ತು ಸಂಶಯದಿಂದ ಪ್ರಾಣ ಕಳೆದುಕೊಳ್ಳುವ ಡೆಸ್ಡಿಮೋನಾ, ತನ್ನ ಮಂದಗತಿಯ ತೀರ್ಮಾನಗಳಿಂದ ಅಂತ್ಯ ಕಾಣುವ ಹ್ಯಾಮ್ಲೆಟ್, ಭ್ರಮೆ ಮತ್ತು ಅವಾಸ್ತವ ಪ್ರೀತಿಯ ನಿರೀಕ್ಷೆಗಳಿಂದ ಹುಚ್ಚನಾಗುವ ದೊರೆ ಲಿಯರ್ ಹಾಗೆ  ಅತಿಯಾದ ಮಹತ್ವಾಕಾಂಕ್ಷೆ‌ ಇಟ್ಟುಕೊಂಡು ನಂಬಿದ ರಾಜನನ್ನೇ ಕೊಲ್ಲುವ ಮ್ಯಾಕ್ಬೆತ್* ಪಾತ್ರಗಳು ನಮ್ಮ ಒಳಗೆ ನಮಗರಿವಿಲ್ಲದಂತೆ ಜೀವಂತವಾಗಿರುವ ಗುಣಗಳಾಗಿವೆ.</p>
<p dir="ltr">ನಾವು ಕೂಡ ನಾಲ್ಕು ಪಾತ್ರಗಳ ಸಮೀಕರಣದಂತಿದ್ದೇವೆ.‌<br></p>
<p dir="ltr">ಸಾಮಾನ್ಯ ಕುರಿ ಕಾಯುವ ಹಳ್ಳಿ ಹುಡುಗ, ತನ್ನ ಜೀವನಾನುಭವದ ಮೂಟೆ ಹೊತ್ತುಕೊಂಡು ಲಂಡನ್ ಸೇರುತ್ತಾನೆ. ತಲೆ ತುಂಬಾ ಬರೀ ಕನಸುಗಳು, ಕೈಯಲ್ಲಿ ಕಸುವಿರದಿದ್ದರೂ ನನಸು ಮಾಡುವ ಹುಮ್ಮಸ್ಸಿಗೇನೂ ಕೊರತೆ ಇರಲಿಲ್ಲ.</p>
<p dir="ltr">ಥಿಯೇಟರ್ ಹೊರಗೆ ಕುದುರೆ ಕಾಯುತ್ತ ನಾಟಕಗಳಲಿ ತನ್ಮಯನಾಗಿ ಮುಂದೆ ನಟನಾಗಿ, ನಾಟಕ ರಚಿಸಿ, ನಿರ್ದೇಶಿಸಿ ಕೊನೆಗೆ ಬಹು ದೊಡ್ಡ ಗ್ಲೋಬ್ ಥಿಯೇಟರ್ ಮಾಲೀಕನೂ ಆಗುವದೆಂದರೆ ಪವಾಡವೇ!<br></p>
<p dir="ltr">ಇಂಗ್ಲೆಂಡ್ ಎಂದರೆ ಶೇಕ್ಸ್‌ಪಿಯರ್ ನಾಟಕಗಳು ಎಂಬ ಪ್ರಸಿದ್ಧಿ ಅರಿತ ಎಲಿಜಾಬೆತ್ ರಾಣಿ ಅವನ ಪ್ರತಿಭೆಗೆ ಬೆರಗಾದದ್ದೀಗ ಮರೆಯಾಗದ, ಮರೆಯಲಾಗದ ಇತಿಹಾಸ.<br></p>
<p dir="ltr">ಅವನ ನಾಟಕಗಳ ಸೊಕ್ಕಡಗಿಸಲು ತಿಣುಕಾಡುವ university wits ಗಳು ಅವನೇರಿದ ಎತ್ತರಕೇರಲೇ ಇಲ್ಲ. ವಿಶ್ವವಿದ್ಯಾಲಯ ಪ್ರಾಧ್ಯಾಪಕರುಗಳಿಗೆ ಸೈದ್ಧಾಂತಿಕ ಸವಾಲೊಡ್ಡಿದರೂ ಆ ಅಹಮಿಕೆ ತಟ್ಟಿಸಿಕೊಳ್ಳದಿರಲು ಕಾರಣ ಅವನ ಆಧ್ಯಾತ್ಮಿಕ ಆಲೊಚನಾ ಕ್ರಮ. <br></p>
<p dir="ltr">ಅಲ್ಪರಿಗೆ ಅಹಮಿಕೆಯ ಸೋಂಕು ತಗುಲಿ ವಿನಾಶವಾಗುತ್ತಾರೆ ಎಂಬ ಸತ್ಯ ಅವನಿಗೆ ಗೊತ್ತಿದ್ದರಿಂದ ಅವನಿಗೆ ಅವನೇ ಸಾಟಿ.</p>
<p dir="ltr">ತಾವು ತುಂಬಾ ತಿಳಿದವರು ಎಂಬ ಅಹಮಿಕೆಯಲಿದ್ದ university wits ಗಳ ಯೋಗ್ಯತೆಯನ್ನು ಅರಿವು ಮಾಡಿಕೊಟ್ಟ ಧೀಮಂತ.<br></p>
<p dir="ltr">ಶೇಕ್ಸ್‌ಪಿಯರ್ ನಾಟಕದ ಜೀವಾಳವೆಂದರೆ‌ ಸಂಭಾಷಣೆ. ಕಾವ್ಯಮಯ ಹರಿತ ಮಾತುಗಳು ಮನುಷ್ಯನ ಎದೆ ಗೂಡು ಹೊಕ್ಕು ಬಿಡುತ್ತವೆ. ಮನುಷ್ಯನ ಇತಿಮಿತಿಗಳನ್ನು, ಮನದಾಳದ ಸ್ವಾರ್ಥ, ತಿಕ್ಕಲುತನ, ಅಸೂಯೆ, ಕಾಮ, ದ್ವೇಷ, ಭ್ರಮೆ ಹಾಗೂ ಅವನನ್ನು ನುಂಗಿ ಹಾಕುವ ದುರಂತಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಾನೆ.<br></p>
<p dir="ltr">ಇಡೀ ಜಗತ್ತು ಬೆಚ್ಚಿ ಬೀಳುವಂತೆ ನಿರಂತರವಾಗಿ ಬರೆದು ಸಿರಿವಂತಿಕೆಯ ಉತ್ತುಂಗ ತಲುಪಿ ಬದುಕಿನ ಸಂತೃಪ್ತಿಯನ್ನು ತನ್ನ ಜೀವನದಲ್ಲಿ ಅನುಭವಿಸುತ್ತಾನೆ.‌ <br></p>
<p dir="ltr">Way back to roots ಎಂಬಂತೆ ತನ್ನ ಕೊನೆ ದಿನಗಳನ್ನು ತಾನು ಹುಟ್ಟಿದ Stratford upon Avon ನಲ್ಲಿ ಕಳೆಯುತ್ತಾನೆ.</p>
<p dir="ltr">ಜಗತ್ತಿನ ಎಲ್ಲ ಭಾಷೆಗಳ ಮೂಲಕ ಅವನ ನಾಟಕಗಳು ಕೋಟ್ಯಾಂತರ ಪ್ರೇಕ್ಷಕರ ಮನಸು ಗೆದ್ದಿವೆ. <br></p>
<p dir="ltr">ಲಕ್ಷಾಂತರ ಸಾಹಿತ್ಯ ವಿದ್ಯಾರ್ಥಿಗಳು ಅವನ ನಾಟಕಗಳ ಮೇಲೆ ಇಂದಿಗೂ ಸಂಶೋಧನೆ ಮಾಡುತ್ತಲೇ ಇದ್ದಾರೆ. <br></p>
<p dir="ltr">ಪ್ರತಿ ಓದಿನಲ್ಲಿ ಅವನ ಪಾತ್ರಗಳು ಭಿನ್ನವಾಗಿ ಮೈದೆರೆಯುತ್ತವೆ.</p>
<p dir="ltr">ರೋಮಿಯೋ ಜೂಲಿಯೆಟ್‌, ಮರ್ಚೆಂಟ್ ಆಫ್ ವೆನಿಸ್, ಜೂಲಿಯಸ್ ಸೀಸರ್, ಮಿಡ್ ಸಮರ್ ನೈಟ್ ಡ್ರೀಮ್, ಕಾಮೆಡಿ ಆಫ್ ಎರರ್ಸ್ ಹೀಗೆ ಎಲ್ಲಾ ಜನಪ್ರಿಯ ಮತ್ತು ಜನಪ್ರಿಯವಲ್ಲದ ನಾಟಕಗಳಲ್ಲಿ ನಾವೆಲ್ಲ ಅಡಗಿ ಇಣುಕಿ ನೋಡುತ್ತಲಿದ್ದೇವೆ. <br></p>
<p dir="ltr">ಬದುಕಿನ ವಿವಿಧ ಘಟನೆಗಳು, ಪಾಠ ಕಲಿಸುವ ಭಿನ್ನ ವ್ಯಕ್ತಿಗಳು ಅವನ ನಾಟಕಗಳಲಿ ಕಣ್ಣಿಗೆ ಕಟ್ಟುವಂತೆ ಕುಣಿಯುತ್ತಾರೆ. </p>
<p dir="ltr">ನಾವು ಅಲ್ಪಮತಿಗಳು ಏನೇ ಓದಿದರು, ನೋಡಿದರು, ಕೇಳಿದರು ನಾವೇ ಕಟ್ಟಿಕೊಂಡ ಬಲೆಯಲ್ಲಿ ಸಿಕ್ಕು ಒದ್ದಾಡಿ ಸಾಯುತ್ತೇವೆ. </p>
<p dir="ltr">*ಶೇಕ್ಸ್‌ಪಿಯರ್ ಪಾತ್ರಗಳಿಗೆ ಸಿಕ್ಕ ಕೆಥಾರ್ಸಿಸ್ ಕೂಡ ನಮಗೆ ದಕ್ಕದೇ ಇರುವುದು ನಮ್ಮ ಮಿತಿ*.<br></p>
<p dir="ltr">ಆಧುನಿಕ ದಿನಗಳ behavioral science ಹೇಳುವ ಅನೇಕ ಸತ್ಯಗಳನ್ನು ಶೇಕ್ಸ್‌ಪಿಯರ್ ಎಂದೋ ಹೇಳಿದ್ದಾನೆ.</p>
<p dir="ltr">ಜೀವನಶೈಲಿ ನಿರ್ವಹಣೆ ಹಾಗೂ ಮನುಷ್ಯನ ಗುಣಸ್ವಭಾವ ಅರಿಯುವ ಉಪಕ್ರಮ ಅವನ ನಾಲ್ಕು tragic ಪಾತ್ರಗಳಲ್ಲಿ ಸಿಗುತ್ತದೆ. <br></p>
<p dir="ltr">ವರ್ತಮಾನದ ರಾಜಕಾರಣದ ಮಾತುಗಳನ್ನು ಕೇಳಿದಾಗ ಬ್ರೂಟಸ್ ನೆನಪಾಗುತ್ತಾನೆ.</p>
<p dir="ltr">ಬೆನ್ನಿಗೆ ಚೂರಿ ಹಾಕುವ ಮಾತುಗಳು ಸೀಸರ್ ಅಂತ್ಯದ ಮುಂದೆ ಯಾವ ಲೆಕ್ಕ!<br></p>
<p dir="ltr">ಹೀಗೆ ನನಗೆ ನಿತ್ಯವೂ ಹೊಸ ಮದುಮಗನಂತೆ ಕಂಗೊಳಿಸುವ ವಿಲಿಯಂ ಶೇಕ್ಸ್‌ಪಿಯರ್, ನಾನು ಸಂಕಷ್ಟದಲ್ಲಿದ್ದಾಗ ಕೈಹಿಡಿದು ನಡೆಸುತ್ತಾನೆ. ತಪ್ಪು ಮಾಡಿದಾಗ ಒಳಮನಸ ಎಚ್ಚರಿಸುತ್ತಾನೆ.</p>
<p dir="ltr">“ಒಂದರಗಳಗೆ ನನ್ನ ದುರಂತ ನಾಯಕರು ಮತ್ತವರ tragic flaw ನೆನಪಿಸಿಕೋ ದುರಂತ ಕಾಣಬೇಡ” ಎಂದು ಇರಿಯುತ್ತಾನೆ.<br></p>
<p dir="ltr">ನಮ್ಮ ಸಮಯ ಪ್ರಜ್ಞೆ ಮತ್ತು ಸಮೂಹ ಪ್ರಜ್ಞೆಯ ಸಂಕೇತವಾಗಿರುವ ಶೇಕ್ಸ್‌ಪಿಯರ್ ಹುಟ್ಟು ದಿನದ ನೆಪದಲ್ಲಿ ಅವನ ಕುರಿತು ಒಂದಿಷ್ಟು ಹಂಚಿಕೊಂಡೆ. </p>
<p dir="ltr">ಪುಸ್ತಕ ಓದುವ ಹುಚ್ಚು ಹಿಡಿಸಿದ ಶೇಕ್ಸ್‌ಪಿಯರ್ ಹಾಗೂ ಪುಸ್ತಕ ದಿನಾಚರಣೆಯ ಶುಭಾಶಯಗಳು.<br></p>
<p dir="ltr">*ಸಿದ್ದು ಯಾಪಲಪರವಿ*</p>
Siddu Yapalaparavihttp://www.blogger.com/profile/03313770596372511100noreply@blogger.com0tag:blogger.com,1999:blog-2307280524148351469.post-77146928948499628622019-05-02T23:42:00.001-07:002019-05-02T23:42:58.890-07:00ಆತ್ಮಹತ್ಯೆ ಬೇಡhttps://m.facebook.com/story.php?story_fbid=2639266509435769&id=100000573383491&sfnsn=moSiddu Yapalaparavihttp://www.blogger.com/profile/03313770596372511100noreply@blogger.com0tag:blogger.com,1999:blog-2307280524148351469.post-10882707684054866402019-03-18T19:07:00.001-07:002019-05-02T23:43:11.543-07:00ಸಿದ್ಧೇಶ್ವರ ಸ್ವಾಮೀಜಿ<p dir="ltr">*ಪೂಜ್ಯ ಸಿದ್ಧೇಶ್ವರ ಸ್ವಾಮಿಗಳೊಂದಿಗೆ ಒಂದಿಷ್ಟು ಆಲಿಸುವಿಕೆ*</p>
<p dir="ltr">ಈ ಯುಗದ ದಂತಕಥೆ, ಸರಳ ವ್ಯಕ್ತಿತ್ವದ ಮೇರು ಪರ್ವತ ಪೂಜ್ಯ ಸಿದ್ದೇಶ್ವರ ಅಪ್ಪಗಳು. . ಒಂದಾದ ಕಾರಣ ಇವರ ಪ್ರವಚನಗಳಿಗೆ ದಿವ್ಯ ಶಕ್ತಿಯಿದೆ. <br>
ಬಹಳಷ್ಟು ಜನ ಅದ್ಭುತವಾಗಿ ಮಾತನಾಡುತ್ತಾರೆ ಆದರೆ ಬದುಕುವುದಿಲ್ಲ. ನೂರಾರು ಅಪಕ್ವ ವರ್ತನೆ,ಸಣ್ಣತನ, ಸಿನಿಕತೆ. ಹೇಳುವುದು ವೇದಾಂತ ಆದರೆ ಖಾಸಗಿ ಬದುಕು ಅಯ್ಯೋ ಯಾರಿಗೂ ಬೇಡ. </p>
<p dir="ltr">ಆದರೆ ಸಿದ್ಧೇಶ್ವರ ಅಪ್ಪಗಳದು ಭಿನ್ನ ವ್ಯಕ್ತತ್ವದ ನಡೆನುಡಿ, ಅಪ್ಪಿ ತಪ್ಪಿ ನಕಾರಾತ್ಮಕ ಮಾತುಗಳ ಕಡೆ ಗಮನ ಹರಿಸದ ನಿಲುವು. ಸಂಪೂರ್ಣ ಜಾಗೃತಾವಸ್ಥೆ. ಮಾತಿನಲಿ ನಮ್ರ ವಿನಮ್ರತೆಯ ಹರವು.</p>
<p dir="ltr">ವೇದಾಂತ, ವಚನಗಳು, ಗೀತೆ,ಶಾಸ್ತ್ರ, ಬುದ್ಧ,ಝೆನ್,ಓಶೋ, ಭಾರತೀಯ ತತ್ತ್ವಶಾಸ್ತ್ರ ಹೀಗೆ ಆಳವಾದ ಅಧ್ಯಯನ, ಅದೂ ಕೇವಲ ಅಧ್ಯಯನವಲ್ಲ ಸಂಪೂರ್ಣ ಆಧ್ಯಾತ್ಮಿಕ ಬದುಕಿನ ಅದಮ್ಯ ಸಾಧನೆಯೂ ಎದ್ದು ಕಾಣುತ್ತದೆ. ಇಷ್ಟೊಂದು ಗೊಂದಲದ ಗೂಡಾಗಿರುವ ಸಮಾಜೋಧಾರ್ಮಿಕ ವ್ಯವಸ್ಥೆಯಲಿ ವಿವಾದಗಳಿಲ್ಲದೆ ಬದುಕುವುದು ಕಠಿಣ. </p>
<p dir="ltr">ಮೂಲಭೂತವಾದ ತಾಂಡವವಾಡುತ್ತಿರುವ ಕಾಲದಲ್ಲಿ ನಾವಿದ್ದೇವೆ. ಎಲ್ಲವೂ ಈಗ ಅತಿರೇಕದ ಪರಮಾವಧಿ. ಎಡಬಲಗಳ ಅಟ್ಟಹಾಸ, ಹೇಳಿದ್ದೇ ಸರಿ ಎಂಬ ಹಟಮಾರಿತನ. ಮಾತು ಕೇಳದಿದ್ದರೆ ಯಾಕೆ ಕೊಂದು ಬಿಡಬಾರದೆಂಬ ಅನರ್ಥ ಆಕ್ರೋಶ. <br>
ಸಿದ್ಧಾಂತಗಳ ಹೇರಿ ಪ್ರಭುತ್ವ ಸಾಧಿಸುವ ಹುನ್ನಾರ. ಧರ್ಮ, ಭಾಷೆ,ಸಿಧ್ಧಾಂತಗಳ ನೆಪದಲ್ಲಿ ನೆಪೋಟಿಸಂ.‌</p>
<p dir="ltr">ವಚನ ಶಾಸ್ತ್ರಗಳ ಅಧ್ಯಯನ ಸಂದರ್ಭದಲ್ಲಿ ಕೈಗೆ ಪೂಜ್ಯರ ಅಲ್ಲಮಪ್ರಭು ವಚನಗಳ ಎಂಬ ಬೃಹತ್ ಗ್ರಂಥ ನನಗೆ ಪೂಜ್ಯ ಕೈವಲ್ಯಾನಂದ ಸ್ವಾಮಿಗಳ ಮೂಲಕ ಸಿಕ್ಕಿತ್ತು.</p>
<p dir="ltr">ಈ ಕುರಿತು ಸಾಧ್ಯವಾದರೆ ಪೂಜ್ಯರೊಂದಿಗೆ ಮಾತನಾಡುವ ಮನಸ್ಸು ಇತ್ತು. ಆದರೆ ಪೂಜ್ಯರ ದರ್ಶನ, ಮಾತು ಈಗ ಸರಳವಲ್ಲ. ಜನ ಅನಗತ್ಯ ಕೆಣಕುವ ಪ್ರಶ್ನೆಗಳನ್ನು ಕೇಳುವುದನ್ನು ಗ್ರಹಿಸಿದ ಶ್ರೀಗಳು ಅಂತಹ ಮುಜುಗರದಿಂದ ಸದಾ ದೂರ ಸರಿಯುತ್ತಾರೆ.‌<br>
ನಾವು ಅಷ್ಟೇ ತುಂಬ ತಿಳಿದವರ ಹಾಗೆ ಮಾತನಾಡಿ ದಡ್ಡತನ ಪ್ರದರ್ಶಿಸಿಬಿಡುತ್ತೇವೆ. *ಎಲ್ಲ ಬಲ್ಲವರು ನಮ್ಮ ಅಜ್ಞಾನಕ್ಕೆ ನಕ್ಕು ಸುಮ್ಮನಾಗುತ್ತಾರೆ*.</p>
<p dir="ltr">ಅದರ ಪ್ರಜ್ಞೆ ಇಟ್ಟುಕೊಂಡ ನಾನು ಕೆಲವು ಪ್ರಶ್ನೆಗಳನ್ನು ಮಾತ್ರ ಕೇಳಿ ಅವರಿಂದ ಸುದೀರ್ಘ ವಿವರಣೆ ಬಯಸಿದ್ದೆ.<br>
ಇಂದು ಹಳಿಯಾಳದ ಸುಂದರ ಪರಿಸರ ಮಡಿಲಿನ ಕೋಟೆ ಪ್ರವಾಸಿ ಮಂದಿರದಲ್ಲಿ ದರ್ಶನವಾದಾಗ, ಕೈವಲ್ಯಾನಂದರ ಪರಿಣಾಮಕಾರಿ ಪರಿಚಯದ ಫಲವಾಗಿ ಉತ್ತರ ಲಭಿಸಿತು. </p>
<p dir="ltr">ಶಾಂತವಾಗಿ ಹರಿಯುವ ನದಿಯಂತೆ, ಪಕ್ಷಿಗಳ ಕಲವರದ ಸಂಗೀತದ ಮಧ್ಯ ಹೊರಟ ಪೂಜ್ಯರ ಮಾತುಗಳ ಗಂಭೀರವಾಗಿ ಆಲಿಸಿದೆ. ಅನೇಕ ಅನುಮಾನಗಳಿಗೆ ಮೋಕ್ಷ ಸಿಕ್ಕಿತು. ಏನೇನೋ ಭ್ರಮೆ ಇಟ್ಟುಕೊಂಡು ಬದುಕುವ,ಓದುವ,ಬರೆಯುವ,ಹೇಳುವ ನಮ್ಮ ಮಿತಿಗಳನ್ನು ತಮ್ಮದೇ ಶೈಲಿಯಲ್ಲಿ ಪೂಜ್ಯರು ತೆರೆದಿಟ್ಟರು.<br>
ಗೊತ್ತಿರುವ ಪರಮ ಸತ್ಯಗಳಿಗೆ ದೊಡ್ಡವರ ಅಂಕಿತ ಬಿದ್ದರೆ ಇನ್ನೂ ಹೆಚ್ಚು ಸಮಾಧಾನವಾಗುತ್ತದೆ. </p>
<p dir="ltr">ಅನುಭವ ಮಂಟಪದಲ್ಲಿ ಬಸವಾದಿ ಶರಣರ ಮಾತುಗಳಿಗೆ ಪ್ರಭುದೇವರ ಅಂಕಿತ ಬಿದ್ದ ಮೇಲೆ ಅದು ವಚನವಾಗಿ ದಾಖಲಾಗುತ್ತಿತ್ತು. </p>
<p dir="ltr">ಹಾಗೆ ನಮ್ಮ ಅನೇಕ ಅಭಿಪ್ರಾಯಗಳಿಗೆ ದೊಡ್ಡವರ ಅಂಕಿತ ಬೇಕಾಗುತ್ತದೆ. ಅದೂ ಸಿದ್ಧೇಶ್ವರ ಅಪ್ಪಗಳಂತವರ ಒಪ್ಪಿಗೆ. <br>
“ *ನಾವು ಬದುಕಿರುವ ಕಾಲಘಟ್ಟದಲ್ಲಿ ನಮ್ಮ ಖುಷಿಗಾಗಿ ಕೆಲಸ ಮಾಡಬೇಕು, ಬೇರೇಯವರನ್ನು ಬದಲಾಯಿಸಬಲ್ಲೆವು ಎಂಬ ಭ್ರಮೆಯಿಂದಲ್ಲ* ಕೋಟ್ಯಾಂತರ ಜನಸಂಖ್ಯೆ ಹೊಂದಿರುವ ನಮ್ಮ ದೇಶ ಎಲ್ಲವನ್ನೂ ಅರಗಿಸಿಕೊಳ್ಳುತ್ತದೆ, ಬೇಡವಾದದ್ದನ್ನು ಬೇಗ ತಿರಸ್ಕರಿಸಿಬಿಡುತ್ತದೆ. “ ಎಂಬ ಪೂಜ್ಯರ ಮಾತುಗಳು ವಾಸ್ತವವಾದ ಹಾಗೂ ವರ್ತಮಾನದಲ್ಲಿ ಬದುಕಬೇಕಂಬ ನನ್ನ ಆಲೋಚನಾ ಲಹರಿಗೆ ಮುದ್ರೆ ಒತ್ತಿದಂತಾಯಿತು.</p>
<p dir="ltr">ನಾವ್ಯಾರು ಪೂಜ್ಯರ ಹಾಗೆ ಸರಳವಾಗಿ ಬದುಕಲಾರೆವು ಆದರೆ ಅವರ ಹಾಗೆ ಆಲೋಚಿಸುವ ಮನೋಧರ್ಮ ರೂಪಿಸಿಕೊಳ್ಳುವ ಒಳೆಚ್ಚರ ಇಮ್ಮಡಿಸಿತು. <br>
ತುಕ್ಕು ಹಿಡಿದ ಮನಸಿಗೆ ಹೊಸ ಹೊಳಪು ಹೊಳೆಯಿತು. <br>
ಭ್ರಮೆಗಳಿಲ್ಲದೆ ಮಿತಿಯರಿತು ವರ್ತಮಾನವ ಅನುಭವಿಸಿ ಮುಂದೆ ಸಾಗಲು ಬೆಳಕು ದೊರೆಯಿತು.</p>
<p dir="ltr">*ಸಿದ್ದು ಯಾಪಲಪರವಿ*</p>
Siddu Yapalaparavihttp://www.blogger.com/profile/03313770596372511100noreply@blogger.com0tag:blogger.com,1999:blog-2307280524148351469.post-53758452049750826472019-03-18T19:06:00.001-07:002019-03-18T19:06:05.660-07:00ಪ್ರೇಮ ಬಿಕ್ಷೆ <p dir="ltr">*Begging is better than stealing*</p>
<p dir="ltr">ಪ್ರೇಮ ಬಿಕ್ಷೆ </p>
<p dir="ltr">ಬಿಕ್ಷೆ ಬೇಡುವುದು ಸಣ್ಣ ಸಂಗತಿಯೇನಲ್ಲ <br>
ಹಂಗು ಹರಿದು ಮಾನ ಬಿಟ್ಟು <br>
ಬೀದಿಗಿಳಿಯುವುದು ಎಲ್ಲಿಲ್ಲದ <br>
ಅವಮಾನ <br>
ಅಂಗೈಯಲಿ ಜೀವ ಹಿಡಿದು <br>
ಅರೆಬೆತ್ತಲೆಯಾಗಿ ತಿರುಬೋಕಿಯ <br>
ಹಾಗೆ ತಿರುಗುವುದು ನಡು <br>
ಬೀದಿಯಲಿ ಮಾನ ತೂರಿಕೊಂಡಂತೆ </p>
<p dir="ltr">ಕರುಳು ಹಿಂಡಿ ಹೊಟ್ಟೆ ತಳಮಳಿಸಿ <br>
ಉಸಿರು ಗಟ್ಟಿ ಹಪಾಹಪಿಸಿ ಸಾಯುವೆ <br>
ಎನಿಸಿದಾಗ ತಟ್ಟೆ ಕೈ ಸೇರಿ ಮೈ <br>
ಮನಗಳು ಅರೆಬೆತ್ತಲಾಗಿ ಕಣ್ಣು <br>
ಕತ್ತಲಾಗಿ ಬೀದಿಗೆ ದೂಡುತ್ತವೆ </p>
<p dir="ltr">ಆತ್ಮಗೌರವ ಮನಸಾಕ್ಷಿ ಮಂಗ <br>
ಮಾಯ ಈಗ ಬರೀ ಬದುಕು <br>
ಸಾವು ದೂರಾದರೆ ಸಾಕು </p>
<p dir="ltr">ಮನೆಯೊಡತಿ ಮುಂದೆ ಹೋಗೆಂದಾಳು <br>
ಎಂಬ ತಲ್ಲಣ <br>
ಅನ್ನಲಿ ಬಿಡಿ ಮಾನಕ್ಕಿಂತ ಪ್ರಾಣ <br>
ದೊಡ್ಡದು </p>
<p dir="ltr">ಎದೆ ಬಗೆದು ಕರುಳು ಕಿತ್ತಿ ಬರುವ ಹಾಗೆ <br>
ಕೂಗಿದರೆ ಹೋಗೆನ್ನಲಾರಳೆಂಬ ಹುಚ್ಚು <br>
ನಂಬಿಗೆ </p>
<p dir="ltr">ಆದರೂ ಬದುಕಿಗೆ ಬೇಕಲ್ಲ ತಂ<br>
ಬಿಗೆ ಆ ಬಿಗಿಯಲಿ ಬಿಗುಮಾನ <br>
ಬಿಟ್ಟು ಕೇಳುವ ಕರ್ಮ </p>
<p dir="ltr">ಕಳುವು , ಮೋಸ , ಸುಳ್ಳು ಹಾಗೂ <br>
ಮಳ್ಳನ ಮುಖವಾಡವಿಲ್ಲದ <br>
ಈ ಬಿಕ್ಷೆಯ ಬದುಕು ಹೀನಾಯವಲ್ಲ <br>
ಎಂಬ ಸಂತೃಪ್ತಿ </p>
<p dir="ltr">ಕಡು-ಕಷ್ಟಗಳ ದೂರ ಮಾಡಿ ಮೈ<br>
ಮನಗಳ ಮಾನ ಕಾಪಾಡಲು <br>
ಬೇಡುವ ಬಿಕ್ಷೆಗೆ ಶಿಕ್ಷೆ ಬೇಡ </p>
<p dir="ltr">ಕಾಲನ ಮಹಿಮೆಯ ಕೂಸುಗಳು <br>
ಮಿಂಚಿ ಮಾಯವಾಗುವ <br>
ಸಂಚನು ಬಲ್ಲವರು ಯಾರು ?</p>
<p dir="ltr">ಮುಂದೆ ಹೋಗೆಂದರೆ ಹೋದಾನು <br>
ತಿರುಗಿ ನೀ ಬೇಕೆಂದಾಗ ಬರಲಾರ<br>
ಹಾಕಿಬಿಡು ಅನ್ನ ಹಳಸುವ ಮುನ್ನ <br>
ಬೇರೆಯವರು ಕನ್ನ ಹಾಕುವ ಮುನ್ನ.</p>
<p dir="ltr">---ಸಿದ್ದು ಯಾಪಲಪರವಿ</p>
Siddu Yapalaparavihttp://www.blogger.com/profile/03313770596372511100noreply@blogger.com0tag:blogger.com,1999:blog-2307280524148351469.post-19800048383104942322019-03-14T23:24:00.001-07:002019-03-14T23:24:37.656-07:00ಮಾತಾಜಿ<p dir="ltr">*ಮರೆಯಾಗದ ಮಹಾಬೆಳಗು: ಮಾತಾಜಿ*</p>
<p dir="ltr">ಇಡೀ ಜಗತ್ತಿಗೆ ಬಸವಧರ್ಮ ಪರಿಚಯಿಸಿದ ಪೂಜ್ಯ ಲಿಂಗಾನಂದರು ಹಾಗೂ ಪೂಜ್ಯ ಮಾತಾಜಿ ಅವರ ಕೊಡುಗೆಯನ್ನು ವರ್ಣಿಸಲಾಗದು. ಇಡೀ ಧರ್ಮ ಸಾರವನ್ನು ಅತ್ಯಂತ ವೈಜ್ಞಾನಿಕವಾಗಿ ನಿರೂಪಿಸಲು ಅಹೋರಾತ್ರಿ ಶ್ರಮಿಸಿದರು. <br>
ಅಸ್ಪಷ್ಟವಾಗಿದ್ದ ಇಡೀ ವಚನ ಚಳುವಳಿಯನ್ನು ಜಗತ್ತಿಗೆ ಪರಿಚಯಿಸಿದ ಮೊದಲ ಪೀಠಾಧಿಪತಿಗಳು.<br>
ರಾಜ್ಯದಲ್ಲಿ ಇದ್ದ ಸಾವಿರಾರು ಮಠಾಧೀಶರು ಮಾಡಲಾಗದ ಕೆಲಸವನ್ನು ಇವರೀರ್ವರು ಸಾಧಿಸಿದರು.‌</p>
<p dir="ltr">ರಾಜ್ಯ, ದೇಶ,ವಿದೇಶಗಳಲ್ಲಿ ಅಪ್ಪಟ ಬಸವಾಭಿಮಾನಿಗಳ ಪಡೆ ನಿರ್ಮಿಸಿದರು. ಕೇವಲ ಸೈದ್ಧಾಂತಿಕ ತಿಳುವಳಿಕೆ ನೀಡಿದರೆ ಸಾಲದು ಅದು ಸಂಘಟನೆಯ ಸ್ವರೂಪದಲ್ಲಿರಲಿ ಎಂಬ ಕಾರಣಕ್ಕಾಗಿ ರಾಷ್ಟ್ರೀಯ ಬಸವ ದಳ ಹುಟ್ಟು ಹಾಕಿದರು.‌ </p>
<p dir="ltr">ಹೆಚ್ಚು ಹೆಚ್ಚು ಹಣ ಸಂಗ್ರಹಣ ಮತ್ತದರ ಸದ್ಬಳಕೆಯ ಮಾರ್ಗ ಕಲ್ಪಿಸಿದರು. ಸ್ಥಾವರಕ್ಕಳಿವುಂಟು ಎಂದು ಸಾರಿದ ಬಸವಾದಿ ಶರಣರ ಸ್ಮಾರಕಗಳನ್ನು ನಿರ್ಮಿಸಿದ್ದು ಆರಂಭದ ದಿನಗಳಲ್ಲಿ ವಿರೋಧಾಭಾಸ ಅನಿಸುತ್ತಿದ್ದರೂ ಅವಗಳಿಗೆ ಐತಿಹಾಸಿಕ ಮೆರುಗು ಕೊಟ್ಟರು. <br>
ಕಲ್ಯಾಣದ ಬೀದರ ಜಿಲ್ಲೆಯ ತುಂಬ ಸಂಚರಿಸಿ ಜನರನ್ನು ಸಂಘಟಿಸಿದರು.<br>
ಗುರು-ವಿರಕ್ತ ಮಠೀಯ ವ್ಯವಸ್ಥೆಯ ಜೊತೆ ಸೆಣಸಾಡಿ ತಮ್ಮ ಅಸ್ಮಿತೆ ಉಳಿಸಿಕೊಂಡು ತಮ್ಮದೇ ಆದ ಪಡೆ ನಿರ್ಮಿಸಿಕೊಂಡರು. ಇಡೀ ಬಸವ ಚಳುವಳಿಯ ಆಳ,ಅಗಲ,ವಿಶಾಲತೆಗಳ ತಲಸ್ಪರ್ಷಿ ಅಧ್ಯಯನ ಮತ್ತದರ ಪ್ರತಿಪಾದನೆ ಅಪರೂಪ.</p>
<p dir="ltr">ನಾಡಿನ ಅನೇಕ ಮಠಾಧಿಶರು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿದ್ದ ಬಸವ ಸಂದೇಶದ ವೈಜ್ಞಾನಿಕ ಸಾರವನ್ನು ಜಗತ್ತಿಗೆ ತೋರಿಸಿಕೊಟ್ಟರು. ಅನಿವಾರ್ಯವಾಗಿ ವಿರಕ್ತ ಮಠಾಧೀಶರು ಇವರನ್ನು ಒಪ್ಪಿಕೊಳ್ಳುವ ವಾತಾವರಣ ಸೃಷ್ಟಿ ಮಾಡಿದರು. </p>
<p dir="ltr">ಕೂಡಲಸಂಗಮದ ಶರಣ ಮೇಳದ ಯಶಸ್ಸಿಗೆ ಇಲಕಲ್ಲ, ಗದಗ, ಚಿತ್ರದುರ್ಗ ಮಠಗಳ ಪೂಜ್ಯರುಗಳು ಬಹಿರಂಗ ಬೆಂಬಲ ನೀಡಿದರು. ಆದರೆ ಬಸವ ಸಿದ್ಧಾಂತದ ನಿಜ ವಾರಸುದಾರರೆನಿಸಿಕೊಂಡ ಮಾತಾಜಿ ಅವರಿಗೆ ಯಾಕೋ ಹೊಸ ಹೊಳಹುಗಳು ಕಾಡಲಾರಂಭಿಸಿದವು. <br>
ಅದು ಈ ಸಮಾಜದ ದೌರ್ಭಾಗ್ಯವೂ ಹೌದು. ಎಲ್ಲರೂ ಒಗ್ಗಟ್ಟಾಗಿ ಬೆಸೆದುಕೊಂಡಿರುವ ಸುವರ್ಣ ಕಾಲದಲ್ಲಿ ಲಿಂಗದೇವ ನಾಮಾಂಕಿತ ಬದಲಾವಣೆ ಅವರನ್ನು ಆವರಿಸಿಕೊಂಡಿತು.‌</p>
<p dir="ltr">ನೂರಾರು ಮಠಾಧೀಶರು, ಲಕ್ಷಾಂತರ ಬಸವ ಭಕ್ತರಿಗೆ ಸದರಿ ನಿಲುವು ನೋವುಂಟು ಮಾಡಿತು. ತಾವು ಮಾಡಿದ್ದು ತಪ್ಪು ಎಂದು ಗೊತ್ತಾದರೂ ಸುಮ್ಮನೇ ಹಟಕ್ಕೆ ಬಿದ್ದರು. ಅದನ್ನೇ ಮಹಾತ್ಮರ ಟ್ರ್ಯಾಜಿಕ್ ಫ್ಲಾ ( Tragic flaw ) ಎಂದು ಶೇಕ್ಸ್‌ಪಿಯರ್ ತನ್ನ ದುರಂತ ನಾಯಕರನ್ನು ವರ್ಣಿಸುತ್ತಾನೆ. </p>
<p dir="ltr">ಗಣ್ಯಾತಿಗಣ್ಯರ ಒಂದೇ ಒಂದು ಈ ದೌರ್ಬಲ್ಯ ಇಡೀ ವ್ಯವಸ್ಥೆಯನ್ನು ಕುಸಿದು ಹಾಕುತ್ತದೆ. ನಂತರ ದಿನಗಳಲ್ಲಿ ಕೇವಲ ತಮ್ಮ ವಿತಂಡ ವಾದವನ್ನು ಒಪ್ಪುವ ಭಕ್ತರನ್ನು ಮಾತ್ರ ಜೊತೆಗಿಟ್ಟುಕೊಂಡರು. <br>
ಇದನ್ನು ಪ್ರತಿಭಟಿಸಿ ಹೊರ ಬಂದ ಅವರ ಬಸವ ಗರಡಿಯಲ್ಲಿ ಬೆಳೆದ ಸಾಧಕರು ವೈಯಕ್ತಿಕ ನೆಲೆಯಲ್ಲಿ ಬಸವ ಸಾಮ್ರಾಜ್ಯ ವಿಸ್ತರಿಸಿದ್ದು ಸಮಾಜಕ್ಕೆ ಆದ ಇನ್ನೊಂದು ಲಾಭ. <br>
ಲಿಂಗಾನಂದ ಅಪ್ಪಗಳ ಗರಡಿಯಲ್ಲಿ ತಯಾರಾದ ಸಾಧಕರು ಇಂದಿಗೂ ಬಸವ ನಿಷ್ಠೆ ಮೆರೆಯುತ್ತಲಿದ್ದಾರೆ. </p>
<p dir="ltr">ಇಪ್ಪತ್ತು ವರ್ಷಗಳ ಹಿಂದೆ ಲಿಂಗದೇವ ವಚನಾಂಕಿತ ಪ್ರಕರಣದ ನಂತರ ಕೂಡಲ ಸಂಗಮದಲ್ಲಿ ಅವರೊಂದಿಗೆ ಎರಡು ತಾಸು ಚರ್ಚೆ ಮಾಡಿ ನಾಮಾಂಕಿತ ಹಿಂದೆ ಪಡೆದು ಬಸವ ಬಳಗದ ಸ್ವಾಸ್ಥ್ಯ ಕಾಪಾಡಲು ನಿವೇದಿಸಿಕೊಂಡಿದ್ದೆ. ಆದರೆ ಮಾತಾಜಿ ತಮ್ಮ ಪಟ್ಟು ಸಡಿಲಿಸದೇ ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದು ತುಂಬಾ ನೋವಾಯಿತು. <br>
ಮತ್ತೆಂದೂ ನಾನವರನ್ನು ವೈಯಕ್ತಿಕವಾಗಿ ಭೇಟಿಯಾಗಲಿಲ್ಲ, ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸಲೂ ಇಲ್ಲ. </p>
<p dir="ltr">ಸಾವಿರಕ್ಕೂ ಹೆಚ್ಚು ಬಸವಾದಿ ಶರಣರ ಕಾರ್ಯಕ್ರಮಗಳಲ್ಲಿ ಭಾಗಿಯಾದ ನನಗೆ ಮಾತಾಜಿಯವರಿಂದ ಮಾನಸಿಕವಾಗಿ ದೂರಾದ ನೋವು ಇಂದಿಗೂ ಕಾಡುತ್ತಿದೆ. ಮಾತಾಜಿ ಕೂಡಾ ತಮ್ಮ *ಟ್ರ್ಯಾಜಿಕ್ ಫ್ಲಾ* ಅರ್ಥವಾದರೂ ಒಪ್ಪಕೊಳ್ಳದೇ ಹಟಕ್ಕೆ ಬಿದ್ದರು.</p>
<p dir="ltr">ನಂತರದ ಲಿಂಗಾಯತ ಧರ್ಮದ ಚಳುವಳಿಯಲ್ಲಿ ಈ ಕಹಿ ಮರೆತು ಮಠಾಧೀಶರೆಲ್ಲ ಒಗ್ಗಟ್ಟಾಗಿ ಹೋರಾಟ ಮಾಡಲು ಬಸವ ಚೈತನ್ಯವೇ ಕಾರಣ. <br>
*ಇದೊಂದು ದೋಷ ಬಿಟ್ಟರೆ ಮಾತಾಜಿ ಅವರ ಸಾಧನೆ ಅನನ್ಯ, ಅಧ್ಬುತ,ಅಪರೂಪ*.<br>
ಬೇರೆಯವರ ಬಸವ ಸಾಧನೆಯೂ ಕೂಡ ಮಾತಾಜಿಯವರ ಮಹಾಮಾರ್ಗದಂತೆ ಗೋಚರಿಸುತ್ತದೆ. ಮಾತಾಜಿಯವರಿಗೆ ಮಾತಾಜಿಯವರೇ ಸರಿಸಾಟಿ. </p>
<p dir="ltr">ತಮ್ಮ ಆರೋಗ್ಯ ಲೆಕ್ಕಿಸದೇ ಇಡೀ ಪ್ರಪಂಚ ಸುತ್ತಿ *ಬಸವಪ್ರಜ್ಞೆ* ಬಿತ್ತಿ ಬೆಳೆಸಿದರು. <br>
ಇಂದು ಇಡೀ ಜಗತ್ತು ಬಸವಾದಿ ಶರಣರ ಸಾಹಿತ್ಯ ಅರ್ಥ ಮಾಡಿಕೊಳ್ಳಲು ಕಾರಣರಾದವರಲ್ಲಿ ಲಿಂಗಾನಂದರು ಹಾಗೂ ಮಾತಾಜಿಯವರು ಅಗ್ರಮಾನ್ಯರು. </p>
<p dir="ltr">ತಮ್ಮ ಗುರುಗಳ ಕಾಲ ನಂತರದಲ್ಲಿಯೂ ಬಸವ ಬಳಗವನ್ನು ಸಾಂಸ್ಥಿಕವಾಗಿ ಕಟ್ಟಿ ಬೆಳೆಸಿದರು. ಅವರ ಸಂಘಟನಾ ಶಕ್ತಿ ಅದ್ವಿತೀಯ.<br>
ಲಿಂಗದೇವ ವಚನಾಂಕಿತ ಪ್ರಕರಣವನ್ನು ಬದಿಗಿರಿಸಿ ನೋಡಿದಾಗ ಮಾತಾಜಿಯವರು ಮಾಡಿದ ಸಾಧನೆ ಬೆರಗು ಮೂಡಿಸುವಂತಹದು. </p>
<p dir="ltr">ಎಡಬಿಡದ ಕಾರ್ಯಚಟುಕೆಗಳಿಂದಾಗ ಆರೋಗ್ಯ ಹಾಳಾಯಿತಾದರೂ ಅದನ್ನವರು ಲೆಕ್ಕಿಸದೇ ದುಡಿದ ಅವರ ಜೀವನೋತ್ಸಾಹ ಅನುಕರಣೀಯ, ಅದಮ್ಯ,ಅಪ್ರತಿಮ.<br>
ನಿಮಗೆ ಸಾವಿರದ ಶರಣು ತಾಯೇ.<br>
ನೀವು ಸದಾ ನಮ್ಮ ಮನದಲ್ಲಿ ಮಹಾ ಬೆಳಗಿನ ಬೆರಗಾಗಿ ನೆಲೆಗೊಂಡಿದ್ದೀರಿ. </p>
<p dir="ltr">*ಸಿದ್ದು ಯಾಪಲಪರವಿ*</p>
Siddu Yapalaparavihttp://www.blogger.com/profile/03313770596372511100noreply@blogger.com0tag:blogger.com,1999:blog-2307280524148351469.post-90117966759442743722019-03-10T20:43:00.001-07:002019-03-10T20:43:01.420-07:00ಕನ್ನಡದ ಅಸ್ಮಿತೆ <p dir="ltr">*ಒಂದು ಪ್ರತಿಕ್ರಿಯೆ*</p>
<p dir="ltr">ಪದ್ಮರಾಜ ದಂಡಾವತಿ: ಕನ್ನಡ ಚುನಾವಣೆ ವಿಷಯ... ‌( ಪ್ರಜಾ ಮತ, ೨ ಮಾರ್ಚ್ , ೨೦೧೮)<br>
<br>
*ಕನ್ನಡದ ಅಸ್ಮಿತೆ ಚುನಾವಣಾ ದಾಳವಾಗದು*.</p>
<p dir="ltr">ದಂಡಾವತಿಯವರು ಕನ್ನಡ ಹೋರಾಟ ನಡೆದು ಬಂದ ಬಗೆಯನ್ನು ಅರ್ಥಪೂರ್ಣವಾಗಿ ವಿವರಿಸಿ ಎಚ್ಚರಿಸಿದ್ದಾರೆ. </p>
<p dir="ltr">ನೆರೆ ರಾಜ್ಯಗಳಾದ ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳ ಜನರಷ್ಟು ಭಾಷಾಭಿಮಾನ ಕನ್ನಡಿಗರದಲ್ಲ.</p>
<p dir="ltr">ಇಂಗ್ಲಿಷ್ ಮಾಧ್ಯಮ ಶಿಕ್ಷಣದ ದಾಸರಾದ ಮಧ್ಯಮ ವರ್ಗದ ಕನ್ನಡಿಗರು ಕನ್ನಡದಿಂದ ದೂರ ಸರಿದಿದ್ದಾರೆ. </p>
<p dir="ltr">ಮಾತೃಭಾಷೆಯ ಶಿಕ್ಷಣದ ಮಹತ್ವದ ಕುರಿತು ಕುವೆಂಪು ಆದಿಯಾಗಿ ಜಗತ್ತಿನ ಎಲ್ಲ ಶಿಕ್ಷಣ ತಜ್ಞರು ಗಂಟಲು ಹರಿದುಕೊಂಡರೂ ಗ್ರಹಿಸಲಾಗದ ಕಿವುಡರು ನಾವು.</p>
<p dir="ltr">ಮಾತೃ ಭಾಷಾ ಶಿಕ್ಷಣದ ಮಹತ್ವ ಒಂದು ಸಮೂಹ ಪ್ರಜ್ಞೆಯಾಗಿ ಉಳಿಯಬೇಕಾಗಿತ್ತು. ಆದರೆ ಹಾಗಾಗಲಿಲ್ಲ. ಕನ್ನಡ ನಾಶವಾಗಲು ಹೋರಾಟದ ಮುಂಚೂಣೆಯಲ್ಲಿರವವರ ನೈತಿಕ ಪ್ರಶ್ನೆಯೂ ಕಾರಣ.</p>
<p dir="ltr">ಕನ್ನಡ ಮಾಧ್ಯಮ ಶಿಕ್ಷಣದ ಬಗ್ಗೆ ವೇದಿಕೆ ಮೇಲೆ ಮಾತನಾಡುವ ಶಿಕ್ಷಣತಜ್ಞರು, ತಮ್ಮ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಕೊಡಿಸಿ ನೈತಿಕ ಮಟ್ಟ ಕಳೆದುಕೊಂಡಿರುವುದು ಕನ್ನಡದ ದೌರ್ಭಾಗ್ಯ.</p>
<p dir="ltr">ಸಾಹಿತ್ಯ ಕ್ಷೇತ್ರದಲ್ಲಿ ಕನ್ನಡ ಬಲಶಾಲಿಯಾಗಿ ಉಳಿದಿದೆ. ಪುಸ್ತಕ ಪ್ರೇಮದ ಅನನ್ಯತೆಯನ್ನು ಪ್ರಶ್ನಿಸಲಾಗದು.</p>
<p dir="ltr">ಆದರೆ ತಮ್ಮ ಮುಂದಿನ ಜನಾಂಗಕ್ಕೆ ಶಿಕ್ಷಣ ಕೊಡುವ ವಿಷಯ ಬಂದ ಕೂಡಲೇ ಎಲ್ಲ ಮಂಗಮಾಯ,ಅಯೋಮಯ. </p>
<p dir="ltr">ಮಾತೃಭಾಷಾ ಶಿಕ್ಷಣದ ಕುರಿತು ಮಾತನಾಡುವ ಧ್ವನಿಗಳು ಅಡಗಿ ಹೋಗಿವೆ. </p>
<p dir="ltr">ಸರಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವ ಇಚ್ಛಾಶಕ್ತಿ ಯಾರಲ್ಲೂ ಉಳಿದಿಲ್ಲ. </p>
<p dir="ltr">ರಾಜಕಾರಣಿಗಳು, ಶಿಕ್ಷಣತಜ್ಞರು, ಕನ್ನಡ ಪರ ಹೋರಾಟಗಾರರಿಗೆ ಕನ್ನಡ ಹೊಟ್ಟೆಪಾಡು ಆದರೆ ಕರುಳ ಸಂಬಂಧವಾಗಲೇ ಇಲ್ಲ. </p>
<p dir="ltr">ಭಾಷೆ,ನೆಲ,ಜಲ ನಮ್ಮ ರಾಜಕೀಯ ಹೋರಾಟದ ವಿಷಯವಾಗಿ ಈಗ ಉಳಿದಿಲ್ಲ. </p>
<p dir="ltr">ರಾಷ್ಟ್ರೀಯ ಪಕ್ಷಗಳ ಗುಲಾಮರಾಗಿರುವ ನಮ್ಮ ರಾಜಕೀಯ ನಾಯಕರುಗಳಿಗೆ ನಾಡು,ನುಡಿ ಮಹತ್ವವಾಗುವ ಪ್ರಶ್ನೆಯೇ ಅಲ್ಲ. </p>
<p dir="ltr">ಭಾಷೆಯನ್ನು ಮುಂದಿಟ್ಟುಕೊಂಡು ಗೆಲ್ಲುವ ವಾತಾವರಣವಿಲ್ಲ. ಹಾಗಾಗಿ ಕನ್ನಡ ಭಾಷೆ ತನ್ನ ಅಂತಃಸತ್ವ ಕಳೆದುಕೊಂಡಿದೆ. </p>
<p dir="ltr">ಒಂದೆಡೆ ಮಾತೃಭಾಷಾ ಶಿಕ್ಷಣವನ್ನು ಬೆಂಬಲಿಸುವ ಸರಕಾರ ನ್ಯಾಯಾಂಗದ ಮೂಲಕ ಪಾಲಕರ ಹಕ್ಕನ್ನು ಎತ್ತಿ ಹಿಡಿಯುವ ತೀರ್ಮಾನದ ನೆಪ ಒಡ್ಡುತ್ತದೆ. ಸರಕಾರಿ ಶಾಲೆಗಳನ್ನು ಸಂಖ್ಯೆಯ ಕೊರತೆಯ ನೆಪದ ಮೂಲಕ ಮುಚ್ಚುವ ಹುನ್ನಾರ. </p>
<p dir="ltr">ಸ್ವತಃ ರಾಜಕಾರಣಿಗಳು ನಡೆಸುವ ಇಂಗ್ಲಿಷ್ ಮಾಧ್ಯಮ ಶಾಲೆಗಳ ರಕ್ಷಣೆ ಮಾಡುವ ಹಿಡನ್ ಅಜೆಂಡಾ ಈಗ ಓಪನ್ ಸಕ್ರೆಟ್. </p>
<p dir="ltr">ಪಾಲಕರ ನಿರಾಸಕ್ತಿ, ರಾಜಕಾರಣಿಗಳ ಹಿಪೊಕ್ರೆಟಿಕ್ ನಿಲುವಿನಿಂದ ಭಾಷೆ ಈಗ ಉಳಿಯುವುದಿಲ್ಲ. </p>
<p dir="ltr">ಯುವಕರು, ವಿದೇಶದಲ್ಲಿ ಕೆಲಸ ಮಾಡುವ ಟೆಕ್ಕಿಗಳು ಮಾತೃಭಾಷೆಯ ಮಹತ್ವ ಅರ್ಥಮಾಡಿಕೊಂಡು ಭಾಷೆಯ ಉಳಿವಿಗಾಗಿ ಹೆಣಗಾಡುತ್ತಿರುವುದೂ ಹೊಸ ಭರವಸೆ. </p>
<p dir="ltr">ತಂತ್ರಜ್ಞಾನದ ವಿಪರೀತ ಬಳಕೆ, ಈಗಿನ ತಲೆಮಾರಿನ ಇಂಗ್ಲಿಷ್ ಮಾಧ್ಯಮ ಶಿಕ್ಷಣದಿಂದಾಗಿ ಮಕ್ಕಳು ಕನ್ನಡ ಭಾಷೆಯ ಗ್ರಹಿಕೆಯಿಂದ ವಂಚಿತರಾಗಲು ನಾವೇ ಕಾರಣ. </p>
<p dir="ltr">ಮುಂದೆ ಇದೇ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ನಮ್ಮ ಮೂರ್ಖತನವನ್ನು ಶಪಿಸುವದರಲ್ಲಿ ಸಂಶಯವಿಲ್ಲ. </p>
<p dir="ltr">ಆದ್ದರಿಂದ ಕನ್ನಡ ಭಾಷೆ ಈಗ ಚುನಾವಣಾ ವಿಷಯವಾಗುವುದಿಲ್ಲ. </p>
<p dir="ltr">----ಸಿದ್ದು ಯಾಪಲಪರವಿ.</p>
Siddu Yapalaparavihttp://www.blogger.com/profile/03313770596372511100noreply@blogger.com0tag:blogger.com,1999:blog-2307280524148351469.post-33088105161528983272019-03-05T20:57:00.001-08:002019-03-05T20:58:11.115-08:00ನೀನು ಧ್ಯಾನ <p dir="ltr">*ನೀನು, ಧ್ಯಾನ,ಕಾಮ‌‌ ಮತ್ತು ದೇವಸಮಯ*</p>
<p dir="ltr">ದೇವಸಮಯದಲಿ ನೀ ಸಿಕ್ಕದ್ದಷ್ಟೇ ನೆನಪು, ಮುಂದಿನದೆಲ್ಲ ಅನಿರೀಕ್ಷಿತ ತುಂಬ ತುಂಬಾ ಅನಿರೀಕ್ಷಿತ!<br>
ಬದುಕಿನ ಹುಡುಕಾಟಕೆ ನೂರಾರು ಉದ್ದೇಶವೋ, ದುರುದ್ದೇಶವೋ ನಾ ಕಾಣೆ.‌ ಒಟ್ಟು ಹುಡುಕಾಟವಿರುತ್ತದೆ. ಗಂಡಸಿನ ಮನಸು ಒಂದರ್ಥದಲ್ಲಿ ತುಡುಗ ದನ, ಅವಕಾಶಕ್ಕಾಗಿ ಕಾಯುವ ಅಷ್ಟಾವಂಕ ಅಥವಾ ಅಷ್ಟಾವಕ್ರನಂತೆ. ಅವಕಾಶ ಸಿಕ್ಕರೆ ಒಂದು ಕೈ ನೋಡಿಯೇ ಬಿಡುವ ಹೀನ ಚಪಲ. </p>
<p dir="ltr">*ಆದರೆ ನಾನು ಹೆಣ್ಣನ್ನು ಹೀಗೆ ವ್ಯಾಖ್ಯಾನಿಸುವಷ್ಟು ನೀಚನಾಗಲಾರೆ.ಅವಳಿಗಿರುವ ಸಂಯಮ ಅಪರೂಪ, ಅನುರೂಪ ಹಾಗೂ ಅನನ್ಯ*.</p>
<p dir="ltr">ಪ್ರತಿಯೊಬ್ಬ ಗಂಡಸಿನ ಮೊದಲ ಸೆಳೆತ ಹೆಣ್ಣು ಅಂತಾರೆ ನಂತರ ಹೊನ್ನು ಮತ್ತು ಮಣ್ಣು ,‌ ಆದರಿದು ಅವರವರ ಅಭಿರುಚಿ, ಆಸಕ್ತಿ ಮತ್ತು ವಯೋಮಾನಕ್ಕೆ ಸಂಬಂಧಿಸಿದ್ದು ಬಿಡಿ. ಈಗ ನಾ ನನ್ನ ಮಿತಿಯನಷ್ಟೇ ಮಾತಾನಾಡುವೆ.‌ ಮಾತನಾಡಬೇಕು ಕೂಡ!<br>
I have no right to speak on others.</p>
<p dir="ltr">ಒಟ್ಟಾರೆ ನಾ ಹುಡುಕಿದ್ದು ನಿಜ. ಒಮ್ಮೆಲೇ ಆ ಹುಡುಕಾಟ ನಿಲ್ಲಿಸುವ ಆಲೋಚನೆ ದಟ್ಟವಾಗಲು ನನ್ನ ವಯೋಮಾನ ಕಾರಣವಾಯಿತು. ಉಳಿದ ಆಧ್ಯತೆಗಳು ಆವರಿಸಲಾರಂಭಿಸಿದವು. ಅದೇ ಹೆಸರು, ಕೀರ್ತಿ, ಜವಾಬ್ದಾರಿ, ಹಣ, ಆಸ್ತಿ ಹೀಗೆ ಹೊಸ ಆಸೆಗಳ ಮಧ್ಯೆ ನೀ ಧುತ್ತೆಂದು ಕಾಣಿಸಿಕೊಂಡಾಗ ಎಲ್ಲ ಉಲ್ಟಾ ಪಲ್ಟಾ.</p>
<p dir="ltr">ಹಾಗೆ ಮಾತು ಕತೆ ಮುಂದುವರೆದಾಗ ನೀ ಕಳೆದು ಹೋದೆ, ಬದುಕಿನಲಿ‌ ಯಾವತ್ತೂ ಕಳೆದು ಹೋದವಳೇ ಅಲ್ಲ ಎಂದು ಗೊತ್ತಾದಾಗ ನಂಬಲಾಗಲೇ ಇಲ್ಲ ಆದರೀಗ ನಂಬಿದ್ದೇನೆ, ನಂಬುವುದು ಧರ್ಮ. </p>
<p dir="ltr">ಬಂಗಾರ ಪರೀಕ್ಷೆ ಮಾಡಲು ಅತಿಯಾಗಿ ತಿಕ್ಕಿದರೆ ಅಂದ ಕಳೆದುಕೊಳ್ಳುತ್ತದೆಯೋ ಹೊರತು ಅದು ಕಬ್ಬಿಣವಾಗುವುದಿಲ್ಲ. ಈಗ ತಿಕ್ಕುವ ತಿಕ್ಕಲುತನ ನಿಲ್ಲಿಸಿ ಹಗುರಾಗಿದ್ದೇನೆ. ನೀ ಅಂತವಳಲ್ಲ ಎಂಬ ಸತ್ಯ ಅಂದರೆ ಸತ್ಯ ಅಷ್ಟೇ. </p>
<p dir="ltr">ಹಲವು ಭೇಟಿ, ಚರ್ಚೆಗಳ ನಂತರ ಹೆಚ್ಚು ಹತ್ತಿರ ಆಗಿದ್ದು ದೈವ ಕೃಪೆ. ಆಧ್ಯಾತ್ಮಿಕ ಬದುಕ ಅನುಭವಿಸಿದ ಮೇಲೆ ಯಾಕೋ ಮೋಸ ಮಾಡಿಕೊಳ್ಳುವ ಮನಸಾಗಲಿಲ್ಲ. ಸಣ್ಣಗೆ ಪಾಪ ಪ್ರಜ್ಞೆ ಕಾಡಲಾರಂಭಿಸಿ “ಯಾಕೆ ಹೀಗಾಯ್ತು ? “ ನಂಬಿದ ದೇವರಿಗೆ ನಿರ್ಮಲವಾಗಿ ಪ್ರಶ್ನಿಸಿದೆ. ಉತ್ತರ ಸಿಕ್ಕಿತು.</p>
<p dir="ltr">ಇದು ಕೇವಲ ಯೋಗಾಯೋಗ ಅಂದುಕೊಂಡು ಪಯಣ ಮುಂದುವರೆಸಿದೆ. ದಕ್ಕಿಸಿಕೊಳ್ಳುವ ಕಾರಣದಿಂದಾಗಿ ಏನೇನೋ ಯೋಚನೆ,ಯೋಜನೆ, ಆಯೋಜನೆ ತಾನೇ ತಾನಾಗಿ ರೂಪಗೊಂಡವು. <br>
ನೀನು ಯಾವುದು ಅಸಾಧ್ಯ ಅಂದಿದ್ದೆ ಅದೆಲ್ಲ ಸಾಧ್ಯವಾಗುವ ವಾತಾವರಣ ಸೃಷ್ಟಿಯಾಯಿತು. <br>
ಹಳೆಯ ಸುದೀರ್ಘ ಬಂಧನ‌ ಅವರಾಗಿಯೇ ಕಡಿದಾಗ ನಿನ್ನಂತೆ ನನಗೂ ಆಶ್ಚರ್ಯ! </p>
<p dir="ltr">‘ ಅರೆ ಇದು ಹೇಗೆ ಪಕ್ಕದಲ್ಲಿ ಇದ್ದವರು ತಾವೇ ಹೇಗೆ, ಯಾಕೆ ದೂರಾದರು’ ಅದನ್ನು ನಾವಿಬ್ಬರೂ ಊಹಿಸಿರಲಿಲ್ಲ. </p>
<p dir="ltr">ದೈವ ಕೃಪೆ ಹೊಸ ಅನುಬಂಧದ ಪರವಾಗಿರಲು ಕಾರಣ ತೀವ್ರ ತುಡಿತವಿರಬೇಕು ಅಂದುಕೊಂಡೆವು, ಆದರೆ ಬರೀ ತುಡಿತವಿದ್ದರೆ ನಾವು ಮೈ ಮರೆತು ಅನಾಹುತ ಮಾಡಿಕೊಂಡು ಸಿಕ್ಕು ಬೀಳುತ್ತಿದ್ದೆವು. </p>
<p dir="ltr">ನಾನಂತೂ ದೇವರನ್ನು ಗಟ್ಟಿಯಾಗಿ ಹಿಡಿದುಕೊಂಡೆ, ಬೇರೆ ದಾರಿಯೇ ಇರಲಿಲ್ಲ, ಹೆದರಿ ದೂರಾಗುವ ಮನಸು ಇರಲಿಲ್ಲ, ದಕ್ಕಿಸಿಕೊಳ್ಳಲು ನೂರಾರು ಕಾರಣಗಳು ಸಹಜವಾಗಿ ಹುಟ್ಟಿಕೊಂಡವು. <br>
ವಿಧಿ, ಋಣಾನುಬಂಧ ಹೀಗೆ ಏನೇನೋ ವ್ಯಾಖ್ಯಾನಿಸುತ್ತ ಹೋದೆವು. ಅದು ಅನಿವಾರ್ಯ ಇತ್ತು. ನಿನಗೆ ಒಮ್ಮೊಮ್ಮೆ ರೋಸಿ ಹೋಗಿ ಸಂಬಂಧ ಕಡಿದು ಕೊಳ್ಳುವಷ್ಟು ಕಿರಿಕಿರಿ ಆದರೂ ಸಹಿಸಿಕೊಂಡೆ ಕಾರಣ?</p>
<p dir="ltr">‘ಹಳೆಯ ಬಂಧನದಿಂದ ಸಂಪೂರ್ಣ ಹೊರ ಬಂದಿದ್ದೆ ನಾನು ದೂರಾದರೆ?’ ಇಂತಹ ಆತಂಕಕಾರಿ ಪ್ರಶ್ನೆಗಳು ನಿನ್ನನ್ನು ಕಟ್ಟಿ ಹಾಕಿ ನರಳುವಂತೆ ಮಾಡಿದವು.</p>
<p dir="ltr">ಸಮಾಜದ ಮುಖವಾಡಗಳ ಕಿತ್ತಿ ಬಿಸಾಕಿದೆ, ವ್ಯವಸ್ಥೆಗೆ ನೀ ಅನಿವಾರ್ಯ ಎಂಬ ಭ್ರಾಂತು ಬಿಡಿಸಲು ತುಂಬ ಸಮಯ ತೆಗೆದುಕೊಂಡೆ. ಏನೇ ಆಗಲಿ ಹಟಕ್ಕೆ ಬಿದ್ದು ದಕ್ಕಿಸಿಕೊಂಡೆವು, ಆ ಮಾತು ಬೇರೆ.</p>
<p dir="ltr"> ***</p>
<p dir="ltr">ಇದು ಪರಸ್ಪರ ದಕ್ಕಿಸಿಕೊಂಡ ಬಗೆಯಾದರೆ ಉಳಿದಿರುವ ಸಂಗತಿಗಳಿಲ್ಲಿ ನೆನಪಿಸಬೇಕು. <br>
ಗಂಡು ಹೆಣ್ಣಿನ ಲವ್ ಮೇಕಿಂಗ್ ಆಯಾಮಾಗಳನ್ನು ಮಿಲನ ಅಂತಾರೆ, ಮಿಲನೋತ್ಸವ ಅಂತಾರೆ ನಾ ತುಂಬ ಸಡಗರದಿ‌ಂದ *ಮಿಲನಮಹೋತ್ಸವ* ಎಂದು ಬರೆದು ಬಿಟ್ಟಿದ್ದೆ ಆದರದು ಕೇವಲ ಅಕ್ಷರದ ಸಂಭ್ರಮವಾಗಿತ್ತು. </p>
<p dir="ltr">ಮಾನವೀಯ ಸಂಬಂಧಗಳನ್ನು ಕಟು ವಾಸ್ತವದಲಿ ಓಶೋ ವಿವರಿಸುವದನ್ನು ಕೇಳಿದಾಗ *ಇಂಪಾಸಿಬಲ್* ಅನಿಸುತ್ತಿತ್ತು. ಒಬ್ಬ ಅಷ್ಟೊಂದು ಗಟ್ಟಿಯಾಗಿ ಹೇಳಲು ಅವನ ಜೀವನಾನುಭವವೇ ಕಾರಣ ಎಂಬ ಸತ್ಯ ಗೊತ್ತಿದ್ದರೂ ಗುಮಾನಿಸಿದ್ದೆ. ಅವನು ಮಿಲನದ ಕುರಿತು ಹೇಳಿದ್ದು ಪ್ರಯೋಗಿಸಬೇಕೆಂಬ ಬೇಗುದಿ ಸುಪ್ತಮನಸಲಿ ಸುಳಿದಾಡುತ್ತಿತ್ತು <br>
ಅಂತಹ ಪ್ರಯೋಗದ ಕುರಿತು ಅನಿವಾಸಿ ಸಂಗಾತಿಯೊಬ್ಬರೊಂದಿಗೆ ಮಾತಾಡಿದ್ದೆ. </p>
<p dir="ltr">ಗಂಡು ತನ್ನ ಸಂಗಾತಿಯ ಪರಮಸುಖ ಲೆಕ್ಕಿಸದೇ ವಿಸರ್ಜಿಸಿ ಹಗುರಾಗಿ ಮುಗಿಸುವ ಸಮಭೋಗ ವ್ಯವಹಾರದಲ್ಲಿ ಮಿಲನವೂ ಇಲ್ಲ ಮಹೋತ್ಸವವೂ ಇಲ್ಲ ಅದೊಂದು ಕೇವಲ ಕೆಲ ನಿಮಿಷಗಳ ಕ್ರಿಯೆ. ಮೊದಲಾಟದ ಪ್ರೇಮದ ಉತ್ತುಂಗಕೇರಲು ಇಬ್ಬರೂ ವಂಚಿತರಾಗಲು ಅವಸರವೇ ಕಾರಣ. <br>
ಮಿಲನ ಹೇಗಿರಬೇಕೆಂದು ಓಶೋ ವಾತ್ಸಾಯನನ್ನು ಮೀರಿಸುವಂತೆ ಹೇಳಿ ಎಚ್ಚರಿಸಿದರೂ ಇಂದಿಗೂ ಅದೊಂದು ಅತ್ಯವಸರದ ವಿಸರ್ಜನೆಯಾಗಿ ಉಳಿದಿದೆ ಮಹೋತ್ಸವದ ಸಡಗರ ವಿರಳಾತಿ ವಿರಳ. </p>
<p dir="ltr">ಓದು,ಬರಹ,ಧ್ಯಾನದ ಮಹತ್ವ ಅರಿತ ಮನಸು ಆ ರೀತಿಯ ಮಹೋತ್ಸವದ ಆಚರಣೆಗಾಗಿ ತುಡಿಯುತ್ತಿತ್ತು. <br>
‘ಆ ರೀತಿಯ ಸಂಗಾತಿಗಳು, ಶಿಷ್ಯರು, ಸ್ನೇಹಿತರು ದೇವಸಮಯದಲಿ ಮಾತ್ರ ಸಿಗುತ್ತಾರೆ’ ಎಂಬ ವೀಣಾ ಬನ್ನಂಜೆಯವರ ಮಾತನ್ನು ನೆನಪಿಸಿಕೊಂಡೆ. <br>
ಈ ಮಾತು ಲಂಪಟರಿಗೆ, ಫ್ಲರ್ಟ್ ಗಳಿಗೆ ಅನ್ವಯಿಸಲಾರದು ಕೂಡ.<br>
ನಾನು ಲಂಪಟನಲ್ಲವಾದರೂ ಚಂಚಲದ ಹುಡುಕಾಟ, ಕುತೂಹಲ ನಿಂತಿರಲಿಲ್ಲ. ಬಹುಶಃ ಸಿಕ್ಕವರು ದೇವಸಮಯದಲಿ ಸಿಕ್ಕಿರಲಿಲ್ಲವೇನೋ? </p>
<p dir="ltr">ನನ್ನ ಪೂರ್ವಾಪರ ಮುಕ್ತವಾಗಿ, ಪ್ರಾಮಾಣಿಕತೆ ಹೇಳಿಕೊಳ್ಳುವ ಧೈರ್ಯ ನನ್ನದು.<br>
ನೀ ತುಂಬ ಮುಜುಗರ ಪಟ್ಟುಕೊಂಡದ್ದು ಅಸಹಜವೇನಲ್ಲ. <br>
ಪ್ರೀತಿ, ಜೀವನೋತ್ಸಾಹ ಹಾಗೂ ಸಹನೆಯಿಂದ ನಿನ್ನನ್ನು ಸಂಪೂರ್ಣ ಆಕ್ರಮಿಸಲು ತೀರ್ಮಾನಿಸಿದೆ. ನೀನಿರುವ ವಾತಾವರಣದಲ್ಲಿ ಅದು ಅಸಾಧ್ಯ ಎಂದು ನೀ ಅಂದುಕೊಂಡಿದ್ದೆ, ನನಗೆ ಹಾಗನಿಸಿರಲಿಲ್ಲ. <br>
ನನದೊಂದು ರೀತಿಯ ಅವಾಸ್ತವದ ಸಾತ್ವಿಕ ಹಟ, ಅದರಲ್ಲಿ ಸ್ವಾರ್ಥ ಇರಬಹುದು ವಂಚನೆ, ಮೋಸ ಮಾತ್ರ ಇರಲಿಲ್ಲ. <br>
ನಂಬಿದ ದೇವರ ಪಾಲಿಗೆ ವಾಮ-ಕ್ಷೇಮ ಬಿಟ್ಟು ಭಂಡ ಧೈರ್ಯದಿಂದ ಮುನ್ನುಗ್ಗಿದೆ. </p>
<p dir="ltr">ವಾದ-ವಿವಾದ-ಜಗಳ-ಕಿರಿಕಿರಿಯಿಂದ ಮುಕ್ತರಾಗುವುದು ಯಾಕೋ ಇಂದಿಗೂ ಸಾಧ್ಯವಾಗುತ್ತಿಲ್ಲವಾದರೂ ಅನುಬಂಧ ಮಾತ್ರ ಗಟ್ಟಿಯಾಗಿ ಉಳಿದಿದೆ, ಉಳಿಯುತ್ತೆ. <br>
ಯಾಕೆಂದರೆ ಇಲ್ಲಿ ಬರೀ ವ್ಯಾಮೋಹ, ಕಾಮನೆಗಳಿಲ್ಲ. ಓದಿದೆ,ಬರಹವಿದೆ, ಚಿಂತನೆಯಿದೆ, ಸಾಹಿತ್ಯದ ಗುರಿಗಳೂ ಇವೆ. ಬರೀ ತೀಟೆ, ತೆವಲುಗಳಿದ್ದರೆ ಯಾವುದೂ ಉಳಿಯುವುದಿಲ್ಲ.<br>
<br>
***</p>
<p dir="ltr">ದೇಹದಾಚೆಗಿನ ಈ ಬಂಧನ ಇನ್ನೂ ಬೆಸೆದುಕೊಳ್ಳಲು ದೇಹಾದಾಟದ ಗಮ್ಮತ್ತು ಬಹುದೊಡ್ಡ ಕಾರಣ ಎಂಬುದ ನಿರಾಕರಿಸಲಾಗದು. <br>
“ದೇಹವೇ ದೇವಾಲಯ” ಬಸವಣ್ಣ ಹೇಳಿದ್ದು ಯಾವ ಕಾರಣಕ್ಕೆ?, “ಆಹಾರವ ಕಿರಿದು ಮಾಡಯ್ಯ” ಎಂದು ಅಕ್ಕ ಅದೇ ದೇಹದ ಆರೋಗ್ಯ ಕಾಪಾಡಲು, ಆದರೆ‌ ನಾವು ತಿಂದು ತೇಗಿ ದೇಹವ ದೇವಾಲಯ ಮಾಡದೇ ಕಸದ ಗುಂಡಿಯಾಗಿಸಿದ್ದೇವೆ. <br>
ಮನಸನ್ನು ಕೊಳೆತು ನಾರುವ ಹೆಣದ ಹಾಗೆ ಇಟ್ಟುಕೊಂಡಿದ್ದೇವೆ. ಆದರೆ ಬಾಯಿಂದ ಬರೀ ವೇದಾಂತ ಹೇಳುವ ಹುಳುಗಳು ನಾವೆಂಬುದ ಮರೆತುಬಿಟ್ಟಿದ್ದೇವೆ.</p>
<p dir="ltr">ಓಶೋ ಹೇಳಿದ ಮಹೋತ್ಸವಕೆ ಮನಸನು ಹದಗೊಳಿಸಿದೆ, ಆಹಾರವ ಕಿರಿದು ಮಾಡಿದೆ, ದೇಹವ ದೇವಾಲಯ ಎಂದು ನಂಬಿ ನನ್ನ ನಾ ಕನ್ನಡಿಯೊಳು ನೋಡಿಕೊಂಡೆ. ಹೊಸ ಹೊಳವೊಂದು ಮಿಂಚಿ ಮಾಯವಾಗದಂತೆ ಗಪ್ಪನೆ ಹಿಡಿದುಕೊಂಡೆ. </p>
<p dir="ltr">ಮನಸು ನೆಲೆಸುವ ದೇಹಕೂ ಅದರದೇ ಆದ ತಾಕತ್ತಿದೆ, ಕಂಪನಗಳಿವೆ, ಆ ವೈಬ್ರೇಶನ್ನುಗಳನ್ನು ನಾವು ಅನುಭವಿಸುವಷ್ಟು ಧ್ಯಾನಸ್ಥ ಸ್ಥಿತಿಗೇರುವುದೇ ಇಲ್ಲ. ನಮಗೆ ಆ ಸಹನೆಯೇ ಇಲ್ಲ *ಅವಸರ ಬರೀ ಅವಸರ ಗಡಿಬಿಡಿ*.</p>
<p dir="ltr">*ದೇಹದಾಟದ ಗಮ್ಮತ್ತಿನಲ್ಲೂ ಧ್ಯಾನವಿದೆ, ಆಲಿಸುವ ಸಂಗೀತದಲ್ಲಿಯೂ ಧ್ಯಾನವಿದೆ, ಓದುವ ಅಕ್ಷರಗಳಲೂ ಧ್ಯಾನವಿದೆ, ಬರೆಯುವ ಬೆರಳುಗಳಲೂ ಧ್ಯಾನವಿದೆ, ತಿನ್ನುವ ಕ್ರಮದಲೂ ಧ್ಯಾನವಿದೆ, ಹಾಕುವ ಹೆಜ್ಜೆಗಳಲೂ ಧ್ಯಾನವಿದೆ, ಆಡುವ ಮಾತಿನ ಪ್ರತಿ ಶಬ್ದಗಳಲೂ ಧ್ಯಾನವಿದೆ*.</p>
<p dir="ltr">ಧ್ಯಾನವೆಂದರೆ ಬರೀ ಕಣ್ಣು ಮುಚ್ಚಿ ಉಸಿರಾಡುವುದಲ್ಲ. ಮಲಗುವತನಕ ನಾವು ಕಳೆಯುವ ಪ್ರತಿ ಕ್ಷಣಗಳನ್ನು ನಾವೇ ಮೂರನೇ ವ್ಯಕ್ತಿಯಾಗಿ ಗಮನಿಸಿ ನಿಯಂತ್ರಿಸಿ ಸಮಾಧಾನದಿಂದ ನಡೆಯುವುದು. </p>
<p dir="ltr">ಮೊದಲು ಆ ಸಮಾಧಾನ ನಾವು ತುಂಬ ಬಯಸುವ ಕಾಮದಾಟದಿಂದ ಆರಂಭವಾಗಿ ಉಳಿದ ಕ್ರಿಯೆಗಳಿಗೆ ವ್ಯಾಪಿಸಬೇಕು. ಮುಪ್ಪಾದ ಮೇಲೆ ದೇಹ ತನ್ನ ಕಾಮಸತ್ವ ಕಳೆದುಕೊಳ್ಳುತ್ತದೆ ಆದರೆ ಮನಸು ಹಾಗಲ್ಲ. ಅದಕೆ ಮುಪ್ಪು ಇಲ್ಲ. <br>
ದೇಹದಲಿ ಕಸುವಿದ್ದಾಗ ಮಾತ್ರ ದೇಹದೊಂದಿಗೆ ಆಟ ಆಡಬಹುದು;ಅದನ್ನು ಸರಿಯಾಗಿ ವ್ಯವಧಾನದಿಂದ ಆಡಬೇಕು.</p>
<p dir="ltr"> ***</p>
<p dir="ltr">ಅದೇ ಗಾಢವಾದ ಧ್ಯಾನಸ್ಥ ಸ್ಥಿತಿಯಲ್ಲಿ ಮೊದಲ ಭೇಟಿಗೆ ಅಣಿಯಾದೆ…</p>
<p dir="ltr">ಪಯಣದುದ್ದಕ್ಕೂ ನಿರರ್ಗಳವಾಗಿ ಮಾತನಾಡಿ ಸಲಿಗೆ ವ್ಯಾಪಿಸಿಕೊಂಡೆ. ಮನದಾಳದ ಆಸೆ ಹೇಳುವಾಗ ನಿನ್ನ ಮುಖ ಅರಳಿ ಸಮ್ಮತಿಸುತ್ತಲೇ ಹೋಯಿತು.<br>
You looked more cheerful and gorgeous beyond your age and beauty because it was my deep love on you.</p>
<p dir="ltr">ಪ್ರೀತಿ ಇದ್ದ ಮೇಲೆ ಎಲ್ಲವೂ ಗೌಣ. ಪ್ರೀತಿ ಎಲ್ಲವನ್ನೂ ದಕ್ಕಿಸಿಕೊಳ್ಳುತ್ತದೆ, ಪ್ರೀತಿಗಾಗಿ ಮೈಮನ ಅರಳಿದ ಮುಸ್ಸಂಜೆ. <br>
ಅಪರಿಚಿತ ಮನಸುಗಳು ಅಪರಿಚಿತ ಜಾಗ ತಲುಪಿದಾಗ ನಡು ರಾತ್ರಿ. ನಳನಳಸುವ ದೀಪಗಳಲಿ ಓಡುವ ವೇಗದಲಿ ಇಬ್ಬರಲೂ ಕುತೂಹಲ.<br>
ಸುಸಜ್ಜಿತ, ಸುರಕ್ಷಿತ ಜಾಗ ತಲುಪಿದಾಗ ಸುದೀರ್ಘ ನಿಟ್ಟುಸಿರು. </p>
<p dir="ltr"> ***<br>
ಮಂದ ಬೆಳಕಲಿ ನಾ ಕಂಡ ಕನಸ ಸಾಕಾರಗೊಳಿಸುವ ತೀವ್ರತೆ. ಸ್ವಲ್ಪ ಸಹನೆ ಕಳೆದುಕೊಂಡರೆ ಎಲ್ಲ ಕೈ ಬಿಟ್ಟು ಹೋಗುತ್ತದೆ ಎಂಬ ಒಳೆಚ್ಚರ ಜಾಗೃತವಾಗಿತ್ತು.<br>
ಮಾತು ಮಾಯವಾಗಿ ಮೌನ ಬೆಳಗಲಾರಂಭಿಸಿದಾಗ ನೀ ಕೈಗೊಂಬೆಯಾದೆ. ನಿನಗೆ ಅದೆಲ್ಲ ಹೊಸದೆಂದು ನಾ ಊಹಿಸಿರಲಿಲ್ಲ. <br>
ಪೂಜೆಯಂತೆ, ಧ್ಯಾನದಂತೆ, ಸಂಗೀತದಂತೆ ಸಹನೆಯ ಲಹರಿ ರಿಂಗಣವಾಡಿತು ನಮ್ಮ ಮೈಮನಗಳ ತುಂಬ.</p>
<p dir="ltr">ಮೊದಲಾಲಿಂಗನಕೆ ಕರಗಿ ಕೈಸೆರೆಯಾದೆ, ವಶೀಕರಣಕೊಂಡವಳಂತೆ ಎಲ್ಲವನ್ನೂ ಪರಿಪಾಲಿಸಿದೆ. <br>
ಹೂಮಂಚದಲಿ ಅರಳಿದಾಗ ರಕ್ಕಸನಂತೆ ಭೋಗಿಯಾಗದೇ ಯೋಗಿಯಾದೆ, ಸಹನೆಯ ಅವಗಾಹನೆ ಮಾಡಿಕೊಂಡೆ.</p>
<p dir="ltr">*ನನ್ನ ಕೈಲಿರುವ ವೀಣೆಯ ತಂತಿಗಳ ನವಿರಾಗಿ ಮೀಟಿದೆ, ನಾದ ಉನ್ಮಾದ ಹೊರ ಹೊಮ್ಮಿತು*</p>
<p dir="ltr">ಸಂಗೀತ ವಾದ್ಯಗಳ ಮೇಲೆ ಕೈಯಾಡಿಸಿ ನಾದ ಹೊರಡಿಸಬೇಕೇ ಹೊರತು ಒರಟಾಗಿ ಅಲ್ಲ.<br>
ಎದುರಿಗೆ ಮೃಷ್ಟಾನ್ನ ಭೋಜನ ಗಬ ಗಬ ತಿನ್ನದೇ ಸವಿ ರುಚಿ ಅನುಭವಿಸಲು ನಿರ್ಧರಿಸಿದೆ.</p>
<p dir="ltr">ಹಾಲು-ಜೇನು, ಹಣ್ಣು-ಹಂಪಲು, ದ್ರಾಕ್ಷಾ ಗೊಂಚಲು, ಸಿಹಿ ತಿನಿಸುಗಳ ಒಂದೊಂದಾಗಿ ಸವಿಯುತ ತಟ್ಟೆ ತುಂಬ ಬೆರಳಾಡಿಸುವ ಅಭಿರುಚಿ ನೂರ್ಮಡಿಸಿದೆ. <br>
ಸರ ಸರ ಹರಿದಾಡುವಾಗ ಭಾರ ಹಾಕಿ ಹಿಂಸೆಮಾಡದೇ ಹಕ್ಕಿಯಂತೆ ಗರಿಬಿಚ್ಚಿ ಕೊಂಚ ಅಂತರದಲಿ ಹಗುರಾಗಿ ಹಾರಿದೆ.</p>
<p dir="ltr">ಸಹನೆ-ನಿಯಂತ್ರಣಗಳ ಉಸಿರ ಏರಿತದ ಅನುರಣನ ಆಲಿಸಿದೆ.<br>
ಇಡೀ ದೇಹದ ತುಂಬ ವ್ಯಾಪಿಸಿರುವ ಉನ್ಮಾದದ ಕಂಪ ಮೂಸಿದೆ.<br>
ನೀ ಅರಳಿದ ಪರಿ… *ಸೂರ್ಯನುದಯಕೆ ತಾವರೆಯೇ ಜೀವಾಳ*<br>
ಅರಳುತ್ತ ಅರಳುತ್ತ ಕೇಳಿದ್ದೆಲ್ಲ ಕೈಗಿತ್ತೆ. ಒಮ್ಮೆಲೇ ನುಗ್ಗಿದಾಗ ಸಂಭ್ರಮ ಮುಗಿಲು ಮುಟ್ಟಿತು. “ಹೊರ ಬರಲಾ” , “ಹೂಂ” ಮುಗುಳ ನಗುವಿನ ನಿವೇದನೆಗೆ ಅಷ್ಟೇ ಸಹನೆಯಿಂದ…<br>
ಹಗುರಾಗುವ ಧಾವಂತ ಕೈ ಬಿಟ್ಟು ಹೊರ ಬಂದ ಪರಿ ಅನಿರೀಕ್ಷಿತ ನಿನಗೂ, ನನಗೂ…</p>
<p dir="ltr">ಇದೆಲ್ಲ ನಿಂಗೆ ಹೊಸದೆಂದು ತಿಳಿದಾಗ ನನಗೆ ಹೇಗಾಗಿರಬೇಡ! <br>
ನನಗೂ ಹೊಸದೇ ನಾವು ಮದುಮಕ್ಕಳು ನಮಗಾಗಿ.<br>
ಮಿಲನ ಮಹೋತ್ಸವ ಮುಗಿಯುವ ಸೂರ್ಯ ಕಣ್ಣುಬಿಟ್ಟಿದ್ದ ನಾವು ಕೊಂಚ ವಿರಮಿಸಿದಾಗ…<br>
ಲೋಕದ ತುಂಬ ತೃಪ್ತಿ, ಸಂತೃಪ್ತಿ, ಮುಂದೆಂದೂ ಹಸಿವಾಗದಷ್ಟು ಉಂಡ ಮಹದಾನಂದ.<br>
ಹಾಗೆ ಉಂಡರೆ ನಾವು ನಮ್ಮೊಂದಿಗೆ ಮಾತ್ರ ಎಂಬ ಖಚಿತತೆ. </p>
<p dir="ltr">ಪ್ರತಿ ಮಿಲನದಲೂ ಅದೇ ಸಹನೆ, ಅದೇ ಏಕಾಂತ, ತಾದಾತ್ಮಕತೆ, ಹೊಸತನದ ಕಂಪನ, ಅದೇ ಒಲವ ವರತೆ, ಮೆಲ್ಲುಸಿರ ಸವಿಗಾನ.<br>
ದೇಹವೇ ದೇವಾಲಯ ಅದನು ಪೂಜಿಸಿ,ಆರಾಧಿಸಿ ಶುಚಿಯಾಗಿಡಬೇಕು‌. ಆ ಆರಾಧನೆಯಲಿ ನಿಯತ್ತು, ಪಾರದರ್ಶಕತೆ ವಿಜ್ರಂಭಿಸಬೇಕು. <br>
*ಒಲವ ಹೂ ಹರಡಿ, ವಿಶ್ವಾಸದ ಪತ್ರಿಯನೇರಿಸಿ, ಪಿಸುಮಾತುಗಳ ಜಾಗಟೆ ಬಾರಿಸಿ, ಪ್ರೇಮದ ಕ್ಷೀರಾಭಿಷೇಕದಲಿ ಪೂಜಿಸಿ ನಮಿಸಬೇಕು*.</p>
<p dir="ltr">ನಾನೀ ಬೇಧವನಳಿಸಿ ಬೆರೆಯಬೇಕು ಹಾಲ ಜೇನಾಗಿ, ಕಲ್ಲು ಸಕ್ಕರೆಯಂತೆ ಕರಗಿ ಸವಿ ಹರಿಸಬೇಕು.<br>
ದೇಹವಿದು ದೇವಾಲಯ ಅರಿತು ನಡೆದಾಗ, ಇಲ್ಲದಿರೆ ಮಾಂಸದ ಮಡಿಕೆ…<br>
ಜಗಳ,ವಾದ,ವಿವಾದ ಅಹಂಕಾರ ಹಾಗೂ ಅಜ್ಞಾನ ಎಲ್ಲವೂ ಗೌಣ, ಮಂಗಮಾಯ ಈ ಮಿಲನದ ಸವಿ ಸಡಗರ ನೆನೆದು ಓಡೋಡಿ ಬಳಿ ಬಂದು ಬಿಗಿದಪ್ಪಿದಾಗ…<br>
ನಿಲ್ಲಲಾಗದು ಮೆಲ್ಲುಸಿರ ಸವಿಗಾನ...ಮೆಲ್ಲುಸಿರ ಸವಿಗಾನ...</p>
Siddu Yapalaparavihttp://www.blogger.com/profile/03313770596372511100noreply@blogger.com0tag:blogger.com,1999:blog-2307280524148351469.post-50042682363501767742019-03-01T18:32:00.001-08:002019-03-01T18:32:45.710-08:00ಮಾಯದಾಟ<p dir="ltr">ಮಾಯದಾಟ </p>
<p dir="ltr">ಹೆಣ್ಣು-ಹೊನ್ನು-ಮಣ್ಣು ಮಾಯದಾಟದೊಳು <br>
ಆಡಿಸುವ ಬೊಂಬೆ ನೀನಲ್ಲ ಮನವೇ </p>
<p dir="ltr">ಹೆಣ್ಣಿನಾಸೆ ಬೆರಗ ನಂಬಿ <br>
ಶ್ವಾನ ತೆರದಿ ಬೆಂಬತ್ತಿ ಏದುಸಿರ ಬಿಡದಿರು </p>
<p dir="ltr">ಹೊನ್ನ ಸಿರಿಯ ಮೆರುಗ ಹೊಳಪ ನಂಬಿ <br>
ಬಣ್ಣಗೇಡಿ ಬವಣೆಗಳಲಿ ಬಸವಳಿಯದಿರು </p>
<p dir="ltr">ಮಣ್ಣಿಗಾಗಿ ಬಿಡದ ವ್ಯಾಜ್ಯ ವ್ಯಾಧಿ ಬೆಂಬಿಡದ<br>
ಶನಿ ಮಣ್ಣು ಮುಕ್ಕೀಸಿತು ಬೇಗ </p>
<p dir="ltr">ಬೇಕು ಬೇಡಗಳ ಸೀಮೆ ಎಳೆದು ಮನದ ಚಪಲವ <br>
ಕಟ್ಟಿ ಹಾಕಿ ಜಗದ ಲೀಲೆಯ ಸೊಗಸ ಹೀರು </p>
<p dir="ltr">ಬೇಕು ಬೇಕೆಂಬ ಮನದ ಹಟಕೆ ಆಸೆಯ ಚಪಲ<br>
ಬೇಡ ಇರುವದಷ್ಟೇ ಸಾಕು ಇಹದ ಬೆಳಕಲಿ </p>
<p dir="ltr">ಆಸೆ ತೋರಿ ಆಟ ಆಡಿ ಮೋಜು ಮಾಡಿ ಮನದ<br>
ಮಡಿಯ ಕೆಡಿಸುವ ಮಾಯೆ ಇರಲಿ ದೂರ</p>
<p dir="ltr">ಮನದ ಮುಂದಣ ಆಸೆ ನೆನಪಿಸಲಿ ಹಿಂದೆ <br>
ಕಳೆದು ಹೋದ ಕರಾಳ ಕಥೆಯ ವ್ಯಥೆಯ </p>
<p dir="ltr">ಇರಲಿ ಇರುವದ ಸ್ವೀಕರಿಸುವ ತೆರದಿ ಬಾಳು ಮುಂದೆ<br>
ನಾಳೆ ಎಂಬುವದಿದೆ ಎಂಬುದೊಂದು ಬರೀ ಭರವಸೆ.<br>
---ಸಿದ್ದು <u>ಯಾಪಲಪರವಿ</u></p>
Siddu Yapalaparavihttp://www.blogger.com/profile/03313770596372511100noreply@blogger.com0tag:blogger.com,1999:blog-2307280524148351469.post-42880712535648399802019-02-20T17:36:00.001-08:002019-02-20T17:36:37.014-08:00ಮನದಾಟ<p dir="ltr">ಮನದಾಟ </p>
<p dir="ltr">ಈ ಜಗದಲಿ ಮಿಲನವೆಂಬುದು <br>
ಬರೀ ದೇಹದಾಟವಲ್ಲ <br>
ಮನಸು ಮನಸು ಕೂಡಿದರೆ <br>
ಸಾಕು ಕೂಡುವಾಟ ಮುಗಿಯುವುದಿಲ್ಲಿ </p>
<p dir="ltr">ಚರಿತ್ರೆಯ ಬೆಂಬತ್ತಿ ಹೋದ <br>
ಚಾರಿತ್ರ್ಯ ಬೀಳುವುದು <br>
ಅಲ್ಲಿ ಇಲ್ಲಿ ಎಲ್ಲಿ ಮತ್ತೆಲ್ಲಿ</p>
<p dir="ltr">ಬೆನ್ನು ಬಾಗಿ ಗೂನು ಬಿದ್ದು <br>
ಸುಕ್ಕು ಗಟ್ಟಿ ಮುದಿಯಾಗಿ <br>
ಕೊಳೆತು ಹೆಣವಾಗಿ ನಾರುವ <br>
ದೇಹಕಿಲ್ಲ ಮೂರು <br>
ಕಾಸಿನ ಕಿಮ್ಮತ್ತು </p>
<p dir="ltr">ಬದುಕಿ ಬಾಳುವ <br>
ಸವಿ ಅಡಗಿರುವುದು <br>
ಮನದ ಮೂಲೆಯಲ್ಲಿ </p>
<p dir="ltr">ಮನಸ ಹಾರಲು ಬಿಟ್ಟು <br>
ಕನಸಲಿ ಕೆಟ್ಟರೂ ಸಾಕು <br>
ಮೈಗೆ ಚಾರಿತ್ರ್ಯ ಇನ್ನೆಲ್ಲಿ </p>
<p dir="ltr">ಚಾರಿತ್ರ್ಯ ಚರಿತ್ರೆಯ ಒಳಗುಟ್ಟು <br>
ಬಲ್ಲ ಕೇವಲ ಮನದ ಕಳ್ಳ <br>
ಮನಸ ಸಾಕ್ಷಿ ಸಾಕು <br>
ಬದುಕ ಬವಣೆ ಎಲ್ಲ </p>
<p dir="ltr">ಕಳ್ಳರು ನಾವು ಬಲುಗಳ್ಳರು <br>
ಹುಡುಕುತೇವೆ ಅವರಿವರ <br>
ದೇಹದಾಟದ ಮಾಟ </p>
<p dir="ltr">ಕಳೆದುಕೊಂಡ ಕಳ್ಳ <br>
ಮಳ್ಳರಾಗಿ ಮರೆಯಾಗುತೇವ <br>
ಒಂದು ದಿವಸ.</p>
<p dir="ltr">---ಸಿದ್ದು <u>ಯಾಪಲಪರವಿ</u></p>
Siddu Yapalaparavihttp://www.blogger.com/profile/03313770596372511100noreply@blogger.com0tag:blogger.com,1999:blog-2307280524148351469.post-61972596404496917922019-02-20T17:34:00.001-08:002019-02-20T17:34:48.511-08:00ವಿಶಾಲ ಎದೆ <p dir="ltr">ವಿಶಾಲ ಹರವಿದೆದೆಯ ಮೇಲೆ <br>
ನಿನ್ನ ಬೆರಳುಗಳ ಮೃದು <br>
ಮೀಟುವಿಕೆಯ ನರ್ತನ <br>
ಪುಳಕಗೊಳಿಸಿದೆ ಎನ್ನ ಮನವ</p>
<p dir="ltr">ಮಗುವಿನ ಹಾಗೆ ತೊಡೆಯ <br>
ಮೇಲೆ ಮಲಗಿದಾಗ ನಿನ್ನ <br>
ಕೋಮಲ ಬೆರಳುಗಳು ತಲೆ <br>
ನೇವರಿಸಿದಾಗ ಕಣ್ಣು ಮಂಜು </p>
<p dir="ltr">ತುಟಿಯ ಮಧುರತೆ ಹಣೆ <br>
ಕೆನ್ನೆ ಮೇಲೆ ನಲಿದಾಗ <br>
ಪುಳಕಗೊಂಡು ಮೃದುವಾಗಿ <br>
ಕಚ್ಚಿದ್ದು ನೋವಾಯಿತೆ ಸಖಿ</p>
<p dir="ltr">ಪ್ರೀತಿಯಲ್ಲದೆ ಇಲ್ಲಿ <br>
ಬೇರೇನೂ ಇಲ್ಲ <br>
ಕೊಟ್ಟು ಪಡೆಯಲು ಒಲವ <br>
ಮಿಲನವಷ್ಟೇ ಸಾಕು</p>
<p dir="ltr">ಖುಷಿಯಾಗಿರಲು<br>
ನಿನ್ನ ಬಿಸಿಯಪ್ಪುಗೆಯಷ್ಟೇ <br>
ಸಾಕು ಜಗದ ಜಂಜಡವ <br>
ಮರೆತು ಸುಖವಾಗಿರಲು ಸಖಿ</p>
<p dir="ltr">---ಸಿದ್ದು <u>ಯಾಪಲಪರವಿ</u></p>
Siddu Yapalaparavihttp://www.blogger.com/profile/03313770596372511100noreply@blogger.com0tag:blogger.com,1999:blog-2307280524148351469.post-6975372189722170822019-01-21T18:36:00.001-08:002019-01-21T18:36:31.740-08:00ಎದೆಯ ಗುಡಿ...<p dir="ltr">*ಎದೆಯ ಗುಡಿಯ ಗೂಡಲಿ*</p>
<p dir="ltr">ನೀ<br>
ಬರೀ ಮುದ್ದು ಮಾಡಲು‌ <br>
ಮಾತ್ರ ಸಾಕು</p>
<p dir="ltr">ಚರ್ಚೆ ಉಸಾಬರಿ ಸಾಕು</p>
<p dir="ltr">ಪಟ್ಟು ಹಿಡಿದು ಕುಳಿತು<br>
ಬರೆದರೆ ಪಾವನ ಸರಸ್ವತಿ</p>
<p dir="ltr">ಯಾವುದೋ ಋಣಾನುಬಂಧ<br>
ಬೆಸೆಯಿತು ನಮ್ಮ <br>
ಈ ಅನುಬಂಧ</p>
<p dir="ltr">ಅಗ್ನಿ ಪರೀಕ್ಷೆಯನು <br>
ನಿರ್ವಿಕಾರವಾಗಿ <br>
ಎದುರಿಸಿದ ಧೀರೆ</p>
<p dir="ltr">ಕ್ಷಮಿಸು ಸಖಿ ನಾ <br>
ತಿರುಚಿದ ಗಾಯಕೆ</p>
<p dir="ltr">ಹಚ್ಚುವೆ ಗುಟುಕಿನ ಸವಿ<br>
ಮುಲಾಮು</p>
<p dir="ltr">ನಿತ್ಯ ನಸುನಗುತ ಮುದ್ದು<br>
ಅಕ್ಷರಗಳಲಿ ಬಂಧಿಸು </p>
<p dir="ltr">ಹೃದಯ ಸಿಂಹಾಸನದಲಿ <br>
ಬೆಚ್ಚಗೆ ಮಲಗಿ </p>
<p dir="ltr">ಹಾಯಾಗಿ ಹೊಸಲೋಕದಿ <br>
ಹಾರಾಡುವೆ</p>
<p dir="ltr">ಎಂದೋ ಕಂಡ ಕನಸ<br>
ನನಸಾಗಿಸಿ ಬಣ್ಣ ತುಂಬಿ<br>
ಬಾಳ ರಂಗೇರಿಸಿದ ರಾಣಿ</p>
<p dir="ltr">ಈಗ ನೀ ಮಹಾರಾಣಿ<br>
ಮನದರಮನೆಯಲಿ </p>
<p dir="ltr">ಬರೆಯುತ ಬೆರೆಯುತ<br>
ಹಾಡುತ ನಲಿಯುತ<br>
ಕುಣಿದು ಕುಪ್ಪಳಿಸಿ <br>
ಧರೆಗಿಳಿಸು <br>
ಸ್ವರ್ಗ ಸಂಭ್ರಮ </p>
<p dir="ltr">ನೀ ನಿಲ್ಲದ ನೀ ಇಲ್ಲದ <br>
ಈ‌ ಒಲವಲೋಕದಲಿ<br>
ಇಲ್ಲ ನನಗೆ ಬೇರೇನೂ <br>
ಕೆಲಸ</p>
<p dir="ltr">ಬಾ ಅರಗಿಣಿ ನೀ <br>
ಬಂಧಿಯಾಗು ಮುಕ್ತವಾಗಿ <br>
ನನ್ನ ಎದೆಯ <br>
ಗುಡಿಯ ಗೂಡಲಿ</p>
<p dir="ltr">ದೊರಕಿದೆ ದೊರೆಯ ಅಪ್ಪಣೆ <br>
ಬೇಕಿಲ್ಲ ಬೇರೇನೂ <br>
ನಾ<br>
ನೀ <br>
ಸದಾ ಖುಷಿಯಾಗಿರಲು</p>
<p dir="ltr">ನೀ ನಕ್ಕರೆ ಅದೇ ಸಕ್ಕರೆ<br>
ನಾ ಹಾಲಾಗಿ‌ ಕರಗಿ <br>
ಲೀನವಾಗಿ </p>
<p dir="ltr">ಅವನ <br>
ಗಂಟಲ ಸವಿಯಾಗಿ <br>
ಆಳಕಿಳಿದು ಅಮರ</p>
<p dir="ltr">ಅಜರಾಮರ ನಿನ್ನ<br>
ನೆನಪ‌ ಹಸಿರ ಉಸಿರಲಿ...</p>
<p dir="ltr">---ಸಿದ್ದು ಯಾಪಲಪರವಿ.</p>
Siddu Yapalaparavihttp://www.blogger.com/profile/03313770596372511100noreply@blogger.com0tag:blogger.com,1999:blog-2307280524148351469.post-67004097456681021822019-01-21T01:47:00.001-08:002019-01-21T01:47:09.852-08:00ಸಿದ್ಧಗಂಗಾ ಪೂಜ್ಯರು<p dir="ltr">*ಪೂಜ್ಯ ಶಿವಕುಮಾರ ಮಹಾಸ್ವಾಮಿಗಳು ಸಿದ್ಧಗಂಗಾ ಮಠ*</p>
<p dir="ltr">ಗ್ರಾಮೀಣ ಕರ್ನಾಟಕದ ನೋವು ಅರಿತಿದ್ದ ಶ್ರೀಗಳು ಶಿಕ್ಷಣದ ಮೂಲಕ ಪರಿಹಾರ ನೀಡಲು ನಿರ್ಧರಿಸಿ ದಾಸೋಹ ಪ್ರಾರಂಭಿಸಿದರು. ಅನ್ನ,ಅರಿವೆ,ಅಕ್ಷರ ದಾಸೋಹ ಪಡೆದು ಲಕ್ಷಾಂತರ ಜನ ಧನ್ಯರಾದರು. <br>
ಕೇವಲ ಅಕ್ಷರ ಸಿದ್ಧಾಂತದ ಮೂಲಕ ನಿರಂತರ ಮಕ್ಕಳ ಏಳ್ಗೆಗಾಗಿ ದುಡಿದ ಏಕೈಕ ಸ್ವಾಮೀಜಿಯವರ ಲಿಂಗಪೂಜಾ ನಿಷ್ಠೆ ಕೂಡಾ ಅಪರೂಪ.<br>
ಶಿವಯೋಗದ ಮೂಲಕ ಚಾರಿತ್ರ್ಯ ರೂಪಿಸಿಕೊಂಡ ಶ್ರೀಗಳು ಹಂತ ಹಂತವಾಗಿ ಬೆಳಕಿಗೆ ಬಂದರು. ಅಷ್ಟೇನು ಸಿರಿವಂತಿಕೆ ಹೊಂದಿರದ ಮಠಕ್ಕೆ ಮಕ್ಕಳೇ ಆಸ್ತಿಯಾದರು. </p>
<p dir="ltr">ಮಠದಲ್ಲಿ ಶಿಕ್ಷಣ ಪಡೆದು ಉನ್ನತ ಸ್ಥಾನ ತಲುಪಿದ ಹಳೆಯ ವಿದ್ಯಾರ್ಥಿಗಳು ಶ್ರೀಗಳಿಗೆ ಪರೋಕ್ಷವಾಗಿ ಜೊತೆಯಾದರು. <br>
ಅನೇಕ ಲಿಂಗಾಯತ ಮಠಗಳಂತೆ ಯಾವುದೇ ಸಿದ್ಧಾಂತಕ್ಕೆ ಅಂಟಿಕೊಳ್ಳದ ಶ್ರೀಗಳ ನಿಲುವಿನಲ್ಲಿ ಸ್ಪಷ್ಟತೆ ಇತ್ತು.<br>
*ಶಿಕ್ಷಣ ಕೇವಲ ಶಿಕ್ಷಣ* ಅದೂ ಬಡ ಮಕ್ಕಳಿಗಾಗಿ ಮೂಲಭೂತ ಶಿಕ್ಷಣ.</p>
<p dir="ltr">ಇತ್ತೀಚೆಗೆ ಬಹುಪಾಲು ಮಠಗಳಿಗೆ ಸಿದ್ಧಗಂಗಾ ಮಠ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಬಿಸಲು ಪ್ರೇರಣೆಯಾಯಿತು. ಉಚಿತ ಶಿಕ್ಷಣಕೆ ಸಿದ್ಧಗಂಗಾ ಮಠದ ಬದ್ಧತೆ ಪ್ರಶ್ನಾತೀತ. </p>
<p dir="ltr">ಮಠ ಬೆಳೆದಂತೆ ಭಕ್ತರು ಹೆಚ್ಚಾಗುವುದು ಸಹಜ. ಅದರಲ್ಲೂ ರಾಜಕಾರಣಿಗಳು ಜಾಣರು. ಮಠಾಧೀಶರನ್ನು ಬೇಗ ಪವಾಡ ಪುರುಷರನ್ನಾಗಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಆಶೀರ್ವಾದ ಪಡೆಯುವ ನೆಪದಲ್ಲಿನ ಪೋಜುಗಳೇ ಮತವಾಗಿಸುವ ಹುನ್ನಾರ. </p>
<p dir="ltr">ಅವರ ಆರೋಗ್ಯ, ಚಾರಿತ್ರ್ಯ, ನಿರ್ವಿಕಾರ ಮನೋಧರ್ಮ,ಸಾಮಾಜಿಕ ಕಾಳಜಿ ಅನೇಕರ ಬಂಡವಾಳವಾಯಿತು.‌ ಆದರೆ ಅದಕ್ಕೆ ಶ್ರೀಗಳು ಹೊಣೆಗಾರರಲ್ಲ. ಅದೂ ಪರಸ್ಥಿತಿಯ ಉಪಯೋಗ ಅಷ್ಟೇ.</p>
<p dir="ltr">ಇಂದು ಇಡೀ ಜಗತ್ತು ಶ್ರೀಗಳ ಹಿರಿಮೆಯನ್ನು ಕೊಂಡಾಡುತ್ತದೆ. ಶತಾಯುಷಿ ಶ್ರೀಗಳು ತಮ್ಮ ಅನಾರೋಗ್ಯದ ಸಂದರ್ಭದಲ್ಲಿ ತೋರಿದ ಲಿಂಗ ನಿಷ್ಟೆಯನ್ನು ವೈಭವೀಕರಿಸಿದ್ದೂ ಸಹಜ.</p>
<p dir="ltr">ದೈಹಿಕವಾಗಿ ತುಂಬ ಆರೋಗ್ಯಪೂರ್ಣವಾಗಿರುವ ಅನೇಕ ಮಠಾಧೀಶರು ಆಧ್ಯಾತ್ಮ ಬಿಟ್ಟು ಬೇರೆಲ್ಲಾ ಮಾಡುತ್ತಾರೆ. <br>
ಹಾಗೆ ರಾಜಕಾರಣ ಮಾಡುವ ಸ್ವಾಮಿಗಳಿಗೆ ಸಣ್ಣ ಅಸಮಾಧಾನವಿತ್ತಾದರೂ ಹೇಳುವ ತಾಕತ್ತಿರಲಿಲ್ಲ. </p>
<p dir="ltr">ಪೂಜ್ಯರು ಶಿಕ್ಷಣ ದಾಸೋಹ ಹೊರತುಪಡಿಸಿ ಬೇರೇನು ಮಾಡುತ್ತಿರಲ್ಲ. ಕೊನೆ ಕ್ಷಣದವರೆಗೆ ಲಿಂಗಾಂಗ ಸಾಮರಸ್ಯ, ಶಿಕ್ಷಣ ದಾಸೋಹ ಅವರ ಉಸಿರಾಯಿತು. <br>
ಲಿಂಗಾಯತ ನಾಯಕರೊಬ್ಬರ ಮೇಲೆ ಮಮಕಾರವಿತ್ತಾದರೂ ಬಹಿರಂಗವಾಗಿ ಹೇಳಿಕೊಳ್ಳಲಿಲ್ಲ.</p>
<p dir="ltr"> *ಜನರ ನಂಬಿಕೆಗಳಿಗೆ ಅನುಗುಣವಾಗಿ ಕರಿದಾರ, ಭಸ್ಮದ ಚೀಟು ನೀಡುತ್ತಿದ್ದರು ಎಂಬ ಪ್ರಗತಿಪರರ ಸಣ್ಣ ಗೊಣಗಾಟವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಅವರಿಗೆ ಅದರ ಅಗತ್ಯವೂ ಇರಲಿಲ್ಲ*.</p>
<p dir="ltr">ಕೆಲವು ಪುಢಾರಿಗಳು ಪೂಜ್ಯರ ಹೆಸರನ್ನು ದುರುಪಯೋಗ ಪಡಿಸಿಕೊಂಡರೂ ಮೌನವಹಿಸಿದರು. ಅದು ಅವರವರ ಪಾಪ-ಪುಣ್ಯ ಎಂಬ ಧೋರಣೆಯ ತಟಸ್ಥ ನಿಲುವು. </p>
<p dir="ltr">*ಪೂಜ್ಯರೊಂದಿಗೆ ವೇದಿಕೆ ಹಂಚಿಕೊಂಡ ಪುಣ್ಯ*.</p>
<p dir="ltr">ಹದಿನೈದು ವರ್ಷಗಳ ಹಿಂದೆ ಹಿರಿಯ ನಟ, ಸಾಹಿತಿ ಪ್ರೊ.ಟಿ.ಎಸ್.ಲೋಹಿತಾಶ್ವ ಅವರ ತಂದೆಯವರ ನಿಧನದ ನಂತರ ಪುಣ್ಯಾರಾಧನೆಯ ಸಮಾರಂಭ ತುಮಕೂರು ಜಿಲ್ಲೆಯ ಕೊನೆ ಹಳ್ಳಿ ತೊಂಡಗೆರೆಯಲ್ಲಿ ಆಯೋಜಿಸಲಾಗಿತ್ತು. ಅನಿರೀಕ್ಷಿತವಾಗಿ ಪ್ರೊ.ಚಂಪಾ ಅವರೊಡನೆ ನಾನು ವೇದಿಕೆ ಹಂಚಿಕೊಂಡು *ಮರಣವೇ ಮಹಾನವಮಿ* ಎಂದು ಮಾತನಾಡಿದ್ದನ್ನು ಕೇಳಿ ಪೂಜ್ಯರು ನಗೆ ಚಲ್ಲಿದ್ದ‌ ನೆನಪು ಈಗಲೂ ಹಸಿರು.‌</p>
<p dir="ltr">*ಭಾರತರತ್ನ ಮತ್ತು ಶ್ರೀಗಳು*</p>
<p dir="ltr">ನಮ್ಮ ದೇಶದಲ್ಲಿ ಪ್ರಶಸ್ತಿಗಳು ಮೌಲ್ಯ ಕಳೆದುಕೊಂಡು ತುಂಬ ದಿನಗಳಾದವು. ಆದರೂ ಅನೇಕ ಮನಸುಗಳು ಪ್ರಶಸ್ತಿಗಳಿಗಾಗಿ ಹಾತೊರೆಯುತ್ತವೆ, *ಪಡೆಯಲು ಮತ್ತು ಕೊಡಿಸಲು*.</p>
<p dir="ltr">ಪ್ರಶಸ್ತಿಗಳಾಚೆ ಬ್ರಹದಾಕಾರವಾಗಿ ಬೆಳೆದರೂ ಪ್ರಶಸ್ತಿಗಳನ್ನು ಮಾನದಂಡವಾಗಿ ವಿಶೇಷಣಗಳನ್ನಾಗಿ ಬಳಸಿದಾಗಲೇ ಸಮಾಧಾನ.</p>
<p dir="ltr">ಕೇಂದ್ರ ಸರ್ಕಾರ ಯಾಕೆ ಕೊಡಲಿಲ್ಲ ಎಂಬುದು ಮುಖ್ಯವಲ್ಲ. ಕೊಡಲಿ ಎಂದು ಒತ್ತಾಯಿಸುವುದು ನಮ್ಮ ತಪ್ಪು. ಅದು ಪೂಜ್ಯರಿಗೆ ಮಾಡುವ ಅವಮಾನ.‌ ಪೂಜ್ಯರ ಮಠದಲ್ಲಿ ಬೆಳೆದ<br>
ಲಕ್ಷಾಂತರ ವಿದ್ಯಾರ್ಥಿಗಳು, ಕೋಟ್ಯಂತರ ಭಕ್ತರ ಭಕ್ತಿಗಿಂತ ದೊಡ್ಡ ಪುರಸ್ಕಾರ ಬೇರೆ ಯಾವುದೂ ಇಲ್ಲ.<br>
ಪ್ರಶಸ್ತಿ ಮಾನದಂಡ ಇಟ್ಟುಕೊಂಡು ರಾಜಕಾರಣ ಮಾಡಬಾರದು. ‌<br>
ತುಂಬು ಜೀವನ ಸಾಗಿಸಿ ಇತ್ತೀಚೆಗೆ ತೀವ್ರ ಅನಾರೋಗ್ಯದಿಂದ ಬಳಲಿ ದೈಹಿಕವಾಗಿ ಅಗಲಿದ್ದಾರೆ.<br>
ಉಳಿದ ಮಠಗಳು, ಸರಕಾರ ಅವರ ಶೈಕ್ಷಣಿಕ ಮೌಲ್ಯಗಳ ನಿರಂತರ ಉಳಿಸಿಕೊಳ್ಳಲಿ. </p>
<p dir="ltr"> *ಸಿದ್ದು ಯಾಪಲಪರವಿ*</p>
Siddu Yapalaparavihttp://www.blogger.com/profile/03313770596372511100noreply@blogger.com0tag:blogger.com,1999:blog-2307280524148351469.post-32062530035432086072019-01-07T01:53:00.001-08:002019-01-07T01:53:58.630-08:00ವಿವಾದ ವಿಷಾದ <p dir="ltr">*ವಿವಾದಕ್ಕಾಗಿ ವಿವಾದ: ಒಂದು ವಿಷಾದ*</p>
<p dir="ltr">ಕೆಲದಿನಗಳಿಂದ ಬರೀ ಅಬ್ಬರ, ಭೀಕರ ಸದ್ದು ಗದ್ದಲ. ವೈಚಾರಿಕತೆಯ ಹೆಸರಿನ ಚರ್ಚಾ ಭರಾಟೆಯಲಿ.<br>
ಪ್ರೊ.ಭಗವಾನ ಅವರು ಆಗಾಗ ರಾಮನ ಹೆಸರಿನಲ್ಲಿ ರಾಮಾಯಣ ಮಾಡಿಕೊಳ್ಳುತ್ತಾರೆ. </p>
<p dir="ltr">ಭಾರತ ಅನೇಕ ನಂಬಿಕೆಗಳ ತವರು, ಈ ನಂಬಿಕೆ ಅನೇಕರಿಗೆ ಮೌಢ್ಯದಂತೆ ಕಾಣಿಸುವುದು ಸಹಜ. ಅವೈಜ್ಞಾನಿಕ ನಂಬಿಕೆಗಳಿಗೆ ನಮ್ಮ ಸನಾತನ ಕತೆ, ಪುರಾಣಗಳೂ ಕಾರಣವಿರಬಹುದು ಅನ್ನಿ. ಸರಿಯೋ, ತಪ್ಪೋ ಒಟ್ನಲ್ಲಿ ಅದನ್ನು ಅನೇಕರು ಪ್ರಶ್ನೆ ಮಾಡದಂತೆ ಪಾಲಿಸುವುದು ಅವರಿಗೆ ಸಮಾಧಾನ ತಂದಿದೆ. </p>
<p dir="ltr">ಅದು ಬಹುಸಂಖ್ಯಾತರ ಭಾವನಾತ್ಮಕ ನಂಬಿಕೆಯಾದಾಗ ನಾವದನ್ನು ಸಿದ್ಧಾಂತಗಳ ಹೆಸರಿನಲ್ಲಿ ಕೆರಳಿಸುವುದು ಸರಿಯಲ್ಲ. <br>
ಹಾಗೆ ಟೀಕಿಸುವ ಭರದಲ್ಲಿ ಹತ್ತಾರು ಮಹಾಕಾವ್ಯದ ಪಾತ್ರಗಳನ್ನು ಮನಸೋ ಇಚ್ಛೆ ಈಗ ಜಾಡಿಸಲಾಗದು.‌<br>
ಒಂದು ಕಾಲದಲ್ಲಿ ಈ ತರಹದ ಒಳನೋಟ ಕುತೂಹಲ ಉಂಟು ಮಾಡಿ ಓದಿಸಿಕೊಂಡು ಹೊಗುತ್ತಿತ್ತು. </p>
<p dir="ltr">ಎಡ-ಬಲ ವಾದ ಈಗ ಕೇವಲ ಸೈದ್ದಾಂತಿಕ ಚರ್ಚೆಯಾಗಿ ಉಳಯದೇ ಹಿಂಸಾ ಸ್ವರೂಪ ಪಡೆದುಕೊಂಡಿದೆ. <br>
ಡಾ.ಎಂ.ಎಂ.ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಅವರ ಹತ್ಯೆ ನಂತರ ಕಾಲ ಸೂಕ್ಷ್ಮವಾಗಿದೆ‌. ಕೊಲೆಗಾರರು ಯಾರು ಎಂಬುದು ತನಿಖೆ ಮುಗಿಯದೇ ಹೇಳಲಾಗದು. </p>
<p dir="ltr">ಒಂದರ್ಥದಲ್ಲಿ ಎಲ್ಲವೂ ಓಪನ್ ಸೀಕ್ರೇಟ್ ನಂತೆ ಇರುವಾಗ ಭಗವಾನ್ ಅವರು ಮಾಧ್ಯಮಗಳಿಗೆ ಆಹಾರವಾಗಿ ಜನರನ್ನು ಕೆರಳಿಸುವುದು ಸರಿಯಲ್ಲ. <br>
ಅದರಲ್ಲೂ ಜನರ ನಂಬಿಕೆಗಳನ್ನು ಅಲುಗಾಡಿಸುವಾಗ ಬಳಸುವ ಪದಗಳ ಮೇಲೆ ಹಿಡಿತವಿರಬೇಕು.</p>
<p dir="ltr">ವೈಚಾರಿಕ ಸಂಘರ್ಷಕೆ ಡೆಮಾಕ್ರಸಿಯಲ್ಲಿ ಜಾಗವಿದೆಯಾದರೂ ವಾತಾವರಣ ಪೂರಕ ಇರದೇ ಇದ್ದಾಗ ಕಹಿಯಾದ ಸತ್ಯಗಳ ನಿರರ್ಗಳವಾಗಿ ಹಂಚಿಕೊಳ್ಳಲಾಗದ ಸಂದರ್ಭ ವಿಶಾದನೀಯ. </p>
<p dir="ltr">ಎಡ-ಬಲ ಚರ್ಚೆ ನಿಯತ್ತನ್ನು ಕಳೆದುಕೊಂಡಿದೆ. ಸಾಮಾಜಿಕ ಜಾಲತಾಣದ ವಿಪರೀತ ದುರ್ಬಳಕೆ, ದೃಶ್ಯ ವಾಹಿನಿಗಳ ಟಿ.ಅರ್.ಪಿ. ದಾಹಕ್ಕೆ ಜನಸಾಮಾನ್ಯರು ಬಲಿಯಾಗುತ್ತಿದ್ದಾರೆ. </p>
<p dir="ltr">ಭಗವಾನ ಅವರು ರಾಮಾಯಣ, ಮಹಾಭಾರತದ ವ್ಯಕ್ತಿಗಳನ್ನು ಕೇವಲ ಪಾತ್ರಗಳನ್ನಾಗಿ ನೋಡಿ ವಿಶ್ಲೆಷಿಸಬಹುದು. ಆದರೆ ಬಹುಪಾಲು ಜನರು ದೇವರೆಂದು ಆರಾಧಿಸುವ ಕಾರಣದಿಂದಾಗಿ ನಂಬಿಕೆಯ ಅಲುಗಾಟ ಶುರುವಾಗಿದೆ. </p>
<p dir="ltr">ಪೋಲಿಸರ ರಕ್ಷಣೆ ಪಡೆಯುವ ಅನಿವಾರ್ಯ ವಾತಾವರಣ ಸೃಷ್ಟಯಾದಾಗ ಸಹನೆ ಅನಿವಾರ್ಯವಾಗುತ್ತದೆ. </p>
<p dir="ltr">“ಲಿಂಗಾಯತರು ಸೈದ್ಧಾಂತಿಕವಾಗಿ ಹಿಂದುಗಳಲ್ಲ” ಎಂಬ ವಾಸ್ತವ ಸತ್ಯ ಹೇಳಿದ ಡಾ..ಕಲಬುರ್ಗಿ ಅವರನ್ನು ಸಹಿಸದ ವಾತಾವರಣದಲ್ಲಿ ಇಂತಹ ಕಠೋರ ಸಂಗತಿಗಳನ್ನು ಸಹಿಸಿಕೊಳ್ಳುತ್ತಾರೆಯೇ? <br>
ಸಹಿಸದೇ ಇರುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಅಗತ್ಯವಿಲ್ಲ. </p>
<p dir="ltr">ಎಡ-ಬಲಗಳ ಗೆರೆಯನ್ನು ತೀಕ್ಷ್ಣವಾಗಿ ಎಳೆಯಲಾಗಿದೆ. <br>
ಬಹುಸಂಖ್ಯಾತರೆಂದರೆ ದೇವರು ಎಂದು ನಂಬಿ ಆರಾಧಿಸುವ ಜನ. ಈ ಆರಾಧಕರಿಗೆ ಜಾತಿ, ಧರ್ಮ ಏನೇನೂ ಗೊತ್ತಿಲ್ಲ. ಬ್ಲೈಂಡ್ ಆಗಿ ನಂಬುತ್ತಾರೆ. ಹಾಗೆ ನಂಬದೇ ಇರುವವರಿಗೆ ವಾಸ್ತವ ಸಂಗತಿ ಗೊತ್ತಿದೆ ಎಂಬ ಭರದಲ್ಲಿ ಕಲ್ಲಿಗೆ ತಲೆ ಜಜ್ಜಿಕೊಳ್ಳಲಾಗದು. ಸಂಯಮದ ಅನಿವಾರ್ಯತೆ ಇದೆ. </p>
<p dir="ltr">ವೈಜ್ಞಾನಿಕ ಸಂಗತಿಗಳನ್ನು ಒಪ್ಪಲಾರದ ಜನರ ಸಂಖ್ಯೆ ಹೆಚ್ಚಿದ್ದಾಗ *ಬೆತ್ತಲೆ ಓಡಾಡುವವರು ಹೆಚ್ಚಾದಾಗ ಬಟ್ಟೆ ಹಾಕಿಕೊಂಡವರೇ ಅಸಹ್ಯವಾಗಿ ಕಾಣುತ್ತಾರೆ* ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. <br>
ಒಮ್ಮೆಲೇ ಬಟ್ಟೆಯ ಮಹತ್ವ ಹೇಳ ಹೋದರೆ ನಮ್ಮ ಬಟ್ಟೆ ಬಿಚ್ಚಿ ಒಗೆಯುತ್ತಾರೆ. </p>
<p dir="ltr">ಅತಿಯಾದ ಟೀಕೆಯಿಂದ ದಿಢೀರ್ ಸಾಮಾಜಿಕ ಬದಲಾವಣೆ ಅಸಾಧ್ಯ.<br>
ಬುದ್ಧ, ಬಸವ,ಗಾಂಧಿ, ಅಂಬೇಡ್ಕರ್ ಹಾಗೂ ಇತರೆ ಸಾಮಾಜಿಕ ಸುಧಾರಕರು ಸತ್ಯ ಹೇಳುವ ಭರದಲ್ಲಿ ಸಾಮಾಜಿಕ ಸ್ವ್ಯಾಸ್ಥ ಕದಡಲಿಲ್ಲ. <br>
ನಿಧಾನವಾಗಿ ಜನಜಾಗೃತಿ ಮೂಡಿಸಿದರು. <br>
ಅವರಿಗೆ *ಪರಿವರ್ತನೆ* ಮುಖ್ಯವಾಗಿತ್ತು *ಪ್ರಚಾರ* ಅಲ್ಲ. <br>
ಈಗಿನ ಇಸಂ ಗಳಿಗೆ ಬೇಕಾಗಿರುವುದು ಕೇವಲ ಪ್ರಚಾರ ಬದಲಾವಣೆ ಅಲ್ಲ.‌</p>
<p dir="ltr">ಅಬ್ಬರದ ಕೀಳು ಪ್ರಚಾರ ಬಿಟ್ಟು ಬದಲಾವಣೆಗಾಗಿ ಕೆಲಸ ಮಾಡೋಣ.</p>
<p dir="ltr"> *ಸಿದ್ದು ಯಾಪಲಪರವಿ*</p>
Siddu Yapalaparavihttp://www.blogger.com/profile/03313770596372511100noreply@blogger.com0tag:blogger.com,1999:blog-2307280524148351469.post-60298386367936443662019-01-01T00:36:00.001-08:002019-01-01T00:36:59.702-08:002018 ರ ಹಿನ್ನೋಟ<p dir="ltr">*2018 ರ ಅವಕಾಶ, ಅನುಕೂಲ- ಅವಲೋಕನ*</p>
<p dir="ltr">ಆತ್ಮಾನುಸಂಧಾನ ಪ್ರತಿವರ್ಷ ಅನಿವಾರ್ಯ.<br>
ಏನೇನೋ ಕನಸಿನ ಯೋಜನೆಗಳು, ಗಂಭೀರವಾದ ಪ್ರಯತ್ನ ಸಾಗಿದ್ದಂತೂ ನಿಜ. ಯಶಸ್ಸಿಗಾಗಿ ಕೊಂಚ ಸಮಾಧಾನ ಬೇಕು. ಕಾಯಬೇಕು ಭರವಸೆ ಕಳೆದುಕೊಳ್ಳದೇ. </p>
<p dir="ltr">*ಪಿಸುಮಾತುಗಳ ಜುಗಲ್*( ಜುಗಲ್ ಕವಿತೆಗಳು) ಹಾಗೂ *ಅಸಂಗತ ಬರಹಗಳು* (ಬಿಡಿ ಲೇಖನಗಳು) ಗಮನ‌ ಸೆಳೆದ ಕೃತಿಗಳು ಚಾಲ್ತಿಗೆ ಬಂದು ಚರ್ಚೆಗೆ ಒಳಪಟ್ಟವು.‌ </p>
<p dir="ltr">*ಪಿಸುಮಾತುಗಳ ಜುಗಲ್* ಬಿಡುಗಡೆ ಸ್ಮರಣೀಯ. </p>
<p dir="ltr">ವಿ.ಎಂ.ಮಂಜುನಾಥ ಹಾಗೂ ಅನೇಕ ಸಾಂಸ್ಕೃತಿಕ ಮನಸುಳ್ಳ ಗೆಳೆಯರು ಚಿತ್ರಕಲಾ ಪರಿಷತ್ ಆವರಣದಲ್ಲಿ ಬಿಡುಗಡೆ ಮಾಡಿದರು.‌<br>
ನಟ ರಾಮಕೃಷ್ಣ, ಜೋಗಿ, ನಿರ್ಮಲಾ ಎಲಿಗಾರ, ವನಮಾಲಾ ಸಂಪನ್ನಕುಮಾರ, ಕೃತಿ ಪರಿಚಯಿಸಿದ ಬೇಲೂರು ರಘುನಂದನ, ನಿರೂಪಕ ನಿನಿ ಲೋಕದ ಎಂ.ಜಿ.ವಿನಯಕುಮಾರ,ಕವಿತೆ ಓದಿದ ಹೊಸ ಕಲಾವಿದರು ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು. </p>
<p dir="ltr">ಬಹುಪಾಲು ಆತ್ಮೀಯರು ಖುದ್ದಾಗಿ ಬಂದು ಮನಸಾರೆ ಹಾರೈಸಿ ನನ್ನ ಹೊಸ ಪ್ರಯೋಗಕ್ಕೆ ಬೆನ್ನು ತಟ್ಟಿದರು.<br>
ಈ ತರಹದ ಪ್ರಯೋಗಗಳನ್ನು ಓದುಗರು ಸ್ವೀಕರಿಸುವ ಕುರಿತ ನಮ್ಮ ಆಲೋಚನೆಯ ಗೊಂದಲಕ್ಕೆ ಅರ್ಥವಿಲ್ಲ ಅನಿಸಿತು. ಸರಿ ಕಂಡದ್ದನ್ನು ಮಾಡುತ್ತ ಸಾಗಬೇಕು. ಬೇರೆಯವರ ಕುರಿತು ಆಲೋಚಿಸುವಷ್ಟು ಸಮಯ ಯಾರಿಗೂ ಉಳಿದಿಲ್ಲ.‌</p>
<p dir="ltr">*ಜುಗಲ್ ಚರ್ಚೆ*</p>
<p dir="ltr">ಬೀದರ, ಕಲಬುರ್ಗಿಯ ಸಂಗಾತಿಗಳು ಈ ಕೃತಿ ಕುರಿತ ಚರ್ಚೆ ಇಟ್ಟುಕೊಂಡಿದ್ದರು.</p>
<p dir="ltr">ಬೀದರಿನಲ್ಲಿ ರಜಿಯಾ ಬಳಬಟ್ಟಿ, ಕಲಬುರ್ಗಿಯಲ್ಲಿ ವಿಕ್ರಮ್ ವಿಸಾಜಿ ಛಂದ ಮಾತನಾಡಿದರು. ಹಲವು ಅನುಮಾನಗಳ ದೂರ ಮಾಡಿದರು. </p>
<p dir="ltr">ಕಾಂತಾವರದ ಕನ್ನಡ ಸಂಘದವರು ಬಿಡುಗಡೆ ಮಾಡಿ ಕರಾವಳಿಯ ಗಂಭೀರ ಓದುಗರಿಗೆ ಕೃತಿ ತಲುಪಿಸಿದ್ದು ವಿಶೇಷ.<br>
ಡಾ.ನಾ.ಮೊಗಸಾಲೆ ಅವರು ಜುಗಲ್ ಕುರಿತ ವಿಮರ್ಶಾ ಸಂಕಲನ ತರುವ ಸದುದ್ದೇಶ ಹೊಂದಿದ್ದಾರೆ.‌ <br>
ಒಂದಿಷ್ಟು ಗೆಳೆಯರು ಪ್ರತಿಕ್ರಿಯೆ ಬರೆದು ಕಳಿಸಿದ್ದಾರೆ ಕೂಡ. ಓದುಗರು ಬಹುವಾಗಿ ಮೆಚ್ಚಿದ್ದಾರೆ, ಅದೇ ಪ್ರಶಸ್ತಿ, ಪುರಸ್ಕಾರ ಏನೆಲ್ಲ.‌ <br>
ಕೆಲವು ಮಾಧ್ಯಮದ ಗೆಳೆಯರು ಮೌಖಿಕವಾಗಿ ಖುಷಿ ಹಂಚಿಕೊಂಡಿದ್ದಾರೆ. <br>
ಇಂತಹ ಪ್ರಯೋಗಕ್ಕೆ ಮನಸು ಮಾಡಿದ *ಸಿಕಾ* ಕಾವ್ಯನಾಮದ ಕಾವ್ಯಶ್ರೀ ಮಹಾಗಾಂವಕರ ಅವರಿಗೆ ಥ್ಯಾಂಕ್ಸ್ ಹೇಳಬೇಕು. </p>
<p dir="ltr"> ***</p>
<p dir="ltr">*ಅಸಂಗತ ಬರಹಗಳು*</p>
<p dir="ltr">ಅಸಂಗತವನ್ನು ಮೈಸೂರಿನ ರೂಪ ಪ್ರಕಾಶನ ಮಿತ್ರರಾದ ಯು.ಎಸ್.‌ಮಹೇಶ್ *ಅಸಂಗತ ಬರಹಗಳು* ಲೇಖನ ಸಂಗ್ರಹ ಹೊರತಂದರು. <br>
ಹೊಸ ಬಗೆಯ ಬರಹ ಎಂಬ ಶಬ್ಬಾಸಗಿರಿ ಪಡೆದುಕೊಂಡೆ. <br>
ಹುಬ್ಬಳ್ಳಿಯ ಗೆಳೆಯ ಪ್ರಾಚಾರ್ಯರಾದ ಸಂದೀಪ್ ಬೂದಿಹಾಳ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಗಣ್ಯರಿಗೆ ಪುಸ್ತಕಾರ್ಪಣೆಗಾಗಿ ಪ್ರತಿ ಕೊಂಡಿದ್ದಾರೆ. </p>
<p dir="ltr">*ನಮ್ಮ ಕನಕದಾಸ ಶಿಕ್ಷಣ ಸಮಿತಿಯ ಸಂಸ್ಥಾಪಕರಾದ ಡಾ.ಬಿ.ಎಫ್. ದಂಡಿನ ಅವರು ಹಾಗೂ ನನ್ನ ಮೆಂಟರ್ ಡಾ.ಆರ್.ಎಂ.ರಂಗನಾಥ ಅವರಿಗೆ ಕೃತಿ ಅರ್ಪಿತವಾಗಿದೆ*<br>
ಎರಡು ಕೃತಿಗಳು ತಾಂತ್ರಿಕವಾಗಿ 2017 ರ ಲೆಕ್ಕಕ್ಕೆ ಸೇರಿಕೊಂಡವು. ಈ ವರ್ಷ ಲೋಕಾರ್ಪಣೆ ಆಗಬೇಕಾಗಿದೆ. </p>
<p dir="ltr"> ***</p>
<p dir="ltr">*ಏಪ್ರಿಲ್‌ 11 ವಿಶೇಷ ದಿನ*</p>
<p dir="ltr">ಚಂದನ ವಾಹಿನಿಯಲ್ಲಿ ಪ್ರಸಾರವಾಗುವ *ಶುಭೋದಯ ಕರ್ನಾಟಕ* ಅತ್ಯಂತ ಜನಪ್ರಿಯ ನೇರ ಪ್ರಸಾರದ ಕಾರ್ಯಕ್ರಮ. ಅಧಿಕಾರಿ ನಿರ್ಮಲಾ ಎಲಿಗಾರ ಅವರ ಕಲ್ಪನೆಯ ಕೂಸು ಆರೋಗ್ಯಪೂರ್ಣವಾಗಿ ಬೆಳೆಯುತ್ತಿದೆ. <br>
ತುಂಬಾ ಸಣ್ಣವನಾದ ನನಗೆ103 ನೇ ಸಂಚಿಕೆಯಲ್ಲಿ ಭಾಗವಹಿಸಿ ಮುಕ್ತವಾಗಿ ಮಾತನಾಡುವ ಅವಕಾಶ. ಎರಡು ಗಂಟೆಯ ನೇರ ಪ್ರಸಾರದಲ್ಲಿ ಅರ್ಥಪೂರ್ಣವಾಗಿ ಮಾತನಾಡಲು ಕಾರಣರಾದವರು ನಿರೂಪಕರಾದ *ಕಲಾದೇಗುಲ ಶ್ರೀನಿವಾಸ್ ಹಾಗೂ ಮಂಗಲಾ ನಾಗರಾಜ ಜಮಖಂಡಿ*. <br>
ಅವರ ಶೈಲಿ ನನ್ನ ಉತ್ತೇಜಿಸಿತು.<br>
ಕಾರ್ಯಕ್ರಮದ ಪರಿಕಲ್ಪನೆ, ಸೆಟ್ಟಿಂಗ್, ತಂತ್ರಜ್ಞಾನದ ಗುಣಮಟ್ಟ ತುಂಬ ಎತ್ತರ.‌ ಹೀಗಾಗಿ ಈ ಪ್ರಸಾರ ನನ್ನ ನಾ ಅರಿಯಲು, ಜನ ಗಮನಿಸಲು ಕಾರಣವಾಯಿತು. <br>
ನಮ್ಮ ಸಾಧನೆ ಮುಖ್ಯ ಅಲ್ಲ, ಅದನ್ನು ಗುರುತಿಸುವ ಅವಕಾಶ ಕೂಡ ಅಷ್ಟೇ ಮುಖ್ಯ. ನನಗೆ ಆ ಅವಕಾಶ ಬೇಗ ಸಿಕ್ಕಿತೆಂಬ ಸಂತಸ.‌ <br>
YouTube ಚಾನಲ್ ತುಂಬ ಶುಭೋದಯ ಕರ್ನಾಟಕ ಹರಿದಾಡುತ್ತ ಇದೆ. ಕಾರಣರಾದ ಎಲ್ಲರಿಗೂ ಮತ್ತೊಮ್ಮೆ ಥ್ಯಾಂಕ್ಸ್.</p>
<p dir="ltr"> ***</p>
<p dir="ltr">*ಮೇ ತಿಂಗಳಲ್ಲಿ ದಾಂಪತ್ಯಕ್ಕೆ ಬೆಳ್ಳಿ ಸಡಗರ* </p>
<p dir="ltr">*ಮದುವೆ ಎಂಬುದು ನೆಪ ನೆಂಟರು ಬರುವುದೇ ಮುಖ್ಯ* ಕವಿ ಕುಮಾರವ್ಯಾಸನ ಸಾಲುಗಳ‌ ಮರುವ್ಯಾಖ್ಯಾನ. ನಾವು ಮಾಡುವ ಕೆಲಸಗಳಿಗೆ ಅನ್ವರ್ಥಕ.<br>
ಗೆಳೆಯರು, ಬಂಧುಗಳು ಕಾರ್ಯಕ್ರಮ ಸರಳವಾಗಿ ಆಚರಿಸಿ ಹಾರೈಸಿದರು. *ಸಹನೆಯ ದಾಂಪತ್ಯಕ್ಕೆ ರೇಖಾ* ಕಾರಣಳಾಗಿದ್ದಾಳೆ. ಏಳು-ಬೀಳು ನಿಂತೇ‌ ಇಲ್ಲ. ಏರಿಳಿತದ ಬದುಕ ಬಂಡಿ ಸಾಗಿಯೇ‌ ಇರುತ್ತದೆ. ಏನೇ ಬಂದರೂ ಸಮಚಿತ್ತದಿ, ಸಮರಸದಿ ಸಾಗಿರಬೇಕು. <br>
ಮಕ್ಕಳಾದ ಮುನ್ನುಡಿ, ಅಭಿವ್ಯಕ್ತಿ ಖುಷಿಯಿಂದ ಓಡಾಡಿ ಮದುವೆ ನೆನಪಿಸಿದರು.‌ </p>
<p dir="ltr">*ನಿಟ್ಟೆ ಇಂಜಿನಿಯರಿಂಗ್ ಕಾಲೇಜ್ ಹಾಗೂ ಆಥರ್ ಕ್ರಾಫ್ಟ್*</p>
<p dir="ltr">ಕರಾವಳಿ ಉಡುಪಿ ಜಿಲ್ಲೆಯ ನಿಟ್ಟೆ ಶಿಕ್ಷಣ ರಂಗದ ಬಹುದೊಡ್ಡ ಕೊಡುಗೆ. <br>
ಅಲ್ಲಿನ ಇಂಜಿನಿಯರಿಂಗ್ ಕೊನೇ ವರ್ಷದ ವಿದ್ಯಾರ್ಥಿಗಳು ಬರೆಯವ- ಓದುವ ಕಲೆಗಾರಿಕೆ ಬೆಳೆಸಿಕೊಳ್ಳಲು *Authorcraft* ಸಂಘಟನೆ ಮೂಲಕ ಸಾಹಿತ್ಯದ ಚಟುವಟಿಕೆ ಮಾಡುತ್ತಾರೆ. <br>
ಅಭಿಷೇಕ್ ಪಾವಸ್ಕರ್, ಜ್ಯೋತಿ ಪಾಟೀಲ್ ಹಾಗೂ ಗೆಳೆಯರು ವಿಡಿಯೋ ಸಂದರ್ಶನ ಆಯೋಜಿಸಿದ್ದರು. ಆ ಮಾಲಿಕೆಯೂ YouTube ಸೇರಿಕೊಂಡಿದೆ.‌</p>
<p dir="ltr">*Yourquote* App ಮೂಲಕ ಮನದ ಮಾತು ಬರೆಯಲು ಈ ಯುವಕರು ಕಾರಣರಾದರು.‌ </p>
<p dir="ltr">ಕರಾವಳಿಯ ಅಲ್ಲಮಪ್ರಭು ಪೀಠದ ಹೊಣೆಗಾರಿಕೆ ಹೆಗಲಿಗೇರಿದೆ, ಇನ್ನೂ ಕಾರ್ಯಪ್ರವೃತ್ತವಾಗಬೇಕಾಗಿದೆ. </p>
<p dir="ltr">*ಸಾಮಾಜಿಕ ಜಾಲತಾಣದ ಬರಹಗಳು*</p>
<p dir="ltr">ಕವನ, ಲೇಖನಗಳು, ಮನದ ಮಾತು, ಕತೆಗಳು, ಲವ್ ಕಾಲ, ಓಲೆಗಳು ಹೀಗೆ ಎಲ್ಲ ಬಗೆಯ ಬರಹಗಳ ತಾಣವೇ ಸೋಸಿಯಲ್ ಮಿಡಿಯಾ. ಒಳ್ಳೆಯದು ಕೆಟ್ಟದು ಎಲ್ಲ ಕಡೆ ಇರುವಂತೆ ಇಲ್ಲಿಯೂ ಇದೆ. ಸರಿಯಾಗಿ ಬಳಕೆಯಾಗಬೇಕು ಅಷ್ಟೇ. ಗಂಭೀರ ಓದುಗರನ್ನು ಇಲ್ಲಿ ನಾವೇ ಸೃಷ್ಟಿ ಮಾಡಿಕೊಳ್ಳಬೇಕು. ಇದೊಂದು ಸಂಗ್ರಹ ಯೋಗ್ಯ ನೆಲೆಯೂ ಹೌದು. ಯಾಕೋ ಇದರ ದಾಸರಾಗಿದ್ದೇವೆ ಅನಿಸಿದರೂ ಬರೆಯುವ ಕಸುವಂತೂ ಹೆಚ್ಚಾಗಿದೆ. ಬೆಂಕಿಯ ಸಹವಾಸ ಮೈ ಸುಡದಂತೆ ಎಚ್ಚರವಹಿಸಬೇಕು.</p>
<p dir="ltr"> ***</p>
<p dir="ltr">*ತೋಂಟದಾರ್ಯ ಪೂಜ್ಯರ ಅನಿರೀಕ್ಷಿತ ಅಗಲಿಕೆ* </p>
<p dir="ltr">ನನ್ನ ವೈಯಕ್ತಿಕ ಬದುಕಿನ ರೂವಾರಿಗಳು, ನಾಡಿನ ಪ್ರಖರ ಚಿಂತಕರು, ಅಪ್ಪಟ ಸನ್ಯಾಸಿಗಳಾದ ಗದುಗಿನ ತೋಂಟದಾರ್ಯ ಮಠದ ಡಾ.ಸಿದ್ಧಲಿಂಗ ಮಹಾಸ್ವಾಮಿಗಳು ಅತ್ಯಂತ ಅನಿರೀಕ್ಷಿತವಾಗಿ ಹೋಗಿಬಿಟ್ಟರು. ತುಂಬಲಾಗದ ನಷ್ಟ ಎಂದರೇನೆಂಬ ಅನುಭವವಾಯಿತು. ಬಹುದೊಡ್ಡ ಶೂನ್ಯ ಭಾವ. <br>
ಪೂಜ್ಯರ ಅಗಲಿಕೆ ಯಾರೂ ಊಹಿಸಿರಲಿಲ್ಲ.‌ ಸ್ವತಃ ಅವರಿಗೂ ಅನಿರೀಕ್ಷಿತ. ಅಗಲಿಕೆಯ ಸಂಕಷ್ಟ ನಿವೇದಿಸಲಾಗದ್ದು.‌ ಕೊನೆ <br>
ಎರಡು ಸಲದ ಭೇಟಿಯಲ್ಲಿ ಬರಹದ ಕುರಿತು ಮಾತಾಡಿ ಬೆನ್ನು ತಟ್ಟಿದ್ದರು. ಅಸಂಗತ ಬಿಡುಗಡೆಗೆ ಕೂಡ ಒಪ್ಪಿಕೊಂಡಿದ್ದರು. </p>
<p dir="ltr">*ಶ್ರೀ ಬಸವ ಟಿ.ವಿ*</p>
<p dir="ltr">ಈ. ಕೃಷ್ಣಪ್ಪನವರು ವೈಯಕ್ತಿಕ ಸಂಪತ್ತನ್ನು ವಿನಿಯೋಗಿಸಿ ಆರಂಭಿಸಿದ‌ ಬಸವ ಟಿ.ವಿ. ಬಗ್ಗೆ ಪೂಜ್ಯರಿಗೆ ಅಪಾರ ಅಭಿಮಾನವಿತ್ತು. ಅದೇ ಕಾರಣಕ್ಕೆ ಪೂಜ್ಯರ ಸಾಧನೆ ಕುರಿತು ಆರು ಕಂತುಗಳಲ್ಲಿ ನನ್ನ ಅನುಭವ ಹಂಚಿಕೊಂಡೆ. <br>
ವಚನ ವಿಶ್ಲೇಷಣೆಗೂ ಪೂಜ್ಯರ ಪ್ರೇರಣೆಯೇ ಕಾರಣ. <br>
ಸಾವಿರಾರು ಪುಟ ಬರೆಯಬೇಕು, ನೂರಾರು ತಾಸು ವಿಡಿಯೋ ಮೂಲಕ ಮಾತನಾಡಿ ದಾಖಲಿಸುವ ಮನೋಭೂಮಿಕೆಗೆ ಪೂಜ್ಯರ ಪ್ರೇರಣೆಯೇ ಕಾರಣ. </p>
<p dir="ltr"> ***</p>
<p dir="ltr">*ವರ್ಷದ ಕೊನೆಗಿನ ಮತ್ತೊಂದು ಬೇಸರ*</p>
<p dir="ltr">ಸಾಹಿತ್ಯ, ಸಂಸ್ಕೃತಿ ಹಾಗೂ ವೈಯಕ್ತಿಕ ಬದುಕಿನ ಸಂಗಾತಿಗಳು, ಹಿರಿಯರಾದ ಡಾ.ಜಿ.ಬಿ.ಪಾಟೀಲ್ ಸಿಂಗಪುರ್ ಪ್ರವಾಸಕ್ಕೆ ಹೋದಾಗ ಅನಾರೋಗ್ಯಕ್ಕೆ ಈಡಾದರು. ಅದು ಸಾವು ಬದುಕಿನ ಸೆಣಸಾಟ. ಆದರೆ ಸುದೈವ ಅವರು ಮರುಜನ್ಮ ಪಡೆದು ವಾಪಾಸಾಗಿದ್ದಾರೆ. ಏರಿತದ ಬದುಕಿನ ಹೊಡೆತದಲ್ಲಿ ಕೆಲವು ಆಘಾತಗಳನ್ನು ತಡೆದುಕೊಳ್ಳಲಾಗುವುದಿಲ್ಲ.‌</p>
<p dir="ltr">ನಾವೇ ಕಟ್ಟಿಕೊಂಡ ಪುಟ್ಟ ಕೋಟೆಯಲಿ ಸಾವಿರಾರು ಜನ ಇರುವುದಿಲ್ಲ. ಈ ಪುಟ್ಟ ಇನ್ನರ್ ಸರ್ಕಲ್ಲಿನಲ್ಲಿ ಇರುವ ಕೆಲವೇ ಕೆಲವರು ಕೆಲ ಕಾಲ ದೂರಾದರೂ ತಡೆದುಕೊಳ್ಳಲಾಗುವುದಿಲ್ಲ. <br>
ಈಗವರು ಮೊದಲಿನಂತಾಗಿ ಜೊತೆಗೆ ನಿಲ್ಲುತ್ತಾರೆಂಬ ಸಡಗರ ಮರುಕಳಿಸಿದೆ. <br>
*ಇನ್ನರ್ ಸರ್ಕಲ್* ಇನ್ನೂ ಗಟ್ಟಿಯಾಗಿ ಉಳಿದು ಸದಾ ಕಾಲ ಉಲಿಯುತಿರಲಿ ಎಂಬ ಸಣ್ಣ ಆಸೆ. </p>
<p dir="ltr"> ***</p>
<p dir="ltr">*ವಿಶ್ವಾಸ್ ಮುದಗಲ್ ಹಾಗೂ ದಿ ಲಾಸ್ಟ್ ಅವತಾರ್*</p>
<p dir="ltr">ಖ್ಯಾತ ಇಂಗ್ಲಿಷ್ ಕಾದಂಬರಿಕಾರ, ಉದ್ಯಮಿ ವಿಶ್ವಾಸ್ ಮುದಗಲ್ ಅವರ ಹೊಸ ಕಾದಂಬರಿ *ದಿ ಲಾಸ್ಟ್ ಅವತಾರ್* ಬಿಡುಗಡೆಯ ಹೊಣೆಗಾರಿಕೆ ನನ್ನ ಮೇಲೆ ಹಾಕಿದಾಗ ಖುಷಿಯಾಯಿತು. <br>
ಹುಬ್ಬಳ್ಳಿಯ ಸಪ್ನಾ ಬುಕ್ ಹೌಸ್ ಹಾಗೂ ಹಾರ್ಪರ್ ಕಾಲಿನ್ಸ್ ಸಹಯೋಗದ ಸಮಾರಂಭ ತೃಪ್ತಿ ಎನಿಸಿತು.<br>
ಈ ಕುರಿತ ಪತ್ರಿಕಾ ಗೋಷ್ಟಿ ವರ್ಷದ ಕೊನೆ ಕಾರ್ಯಕ್ರಮ. </p>
<p dir="ltr"> ***</p>
<p dir="ltr">ತೃಪ್ತಿಕರವಾಗಿ ಬರೆಯುವ ಕಲೆಗಾರಿಕೆ ಸಿದ್ಧಿಸಿದೆ ಎಂಬ ಸಮಾಧಾನ. ಇನ್ನೂ ಅರ್ಥಪೂರ್ಣವಾಗಿ ಬರೆಯುವ ಹಾದಿಯಲಿ ಕ್ರಮಿಸಬೇಕು.</p>
<p dir="ltr">ಭೂತ ಮಾಯವಾಗಿದೆ, ಭವಿಷ್ಯ ಗೊತ್ತಿಲ್ಲ, ವರ್ತಮಾನ ಮಾತ್ರ ನಮ್ಮೊಂದಿಗಿದೆ. ವರ್ತಮಾನದ ಸಮರ್ಥ ಬಳಕೆಯ ಧ್ಯಾನದೊಂದಿಗೆ ಕೊಂಚ ವಿರಮಿಸುವೆ. </p>
<p dir="ltr">*Good bye to 2018*</p>
<p dir="ltr"> *ಸಿದ್ದು ಯಾಪಲಪರವಿ*<br>
‌</p>
Siddu Yapalaparavihttp://www.blogger.com/profile/03313770596372511100noreply@blogger.com0tag:blogger.com,1999:blog-2307280524148351469.post-26436056521791770562018-12-30T23:12:00.001-08:002018-12-30T23:13:08.584-08:00೨೦೧೭ ನೋಟ<p dir="ltr">*ಕಳೆದು ಹೋದ ವರ್ಷ* -ಒಂದು ನೋಟ ( 2017 ) </p>
<p dir="ltr">ಹೊಸ ವರ್ಷ ಅಂದ್ರೆ ಯಾವುದು ಅಂತ ವಿಚಾರ ಮಾಡಬಾರದು. ಇಂಗ್ಲಿಷ್ ಕ್ಯಾಲೆಂಡರ್ ನಂಬಿಕೊಂಡು ಬಂದು ಒಪ್ಪಿಕೊಂಡಿದ್ದೇವೆ. ಅದನ್ನೇ ಒಪ್ಪಿಕೊಳ್ಳಬೇಕು ಅಷ್ಟೇ!</p>
<p dir="ltr">ಹೊತ್ತು ಹೋದದ್ದು ಗೊತ್ತಾಗುವುದಿಲ್ಲ ನೋಡಿ. ಕಾಲನ ವೇಗ ತಡೆಯಲಾಗದು. </p>
<p dir="ltr">ಒಮ್ಮೆ ನಡೆದದ್ದು ಮೆಲುಕು ಹಾಕಿ, ಸಣ್ಣ ಕ್ರಿಯಾಯೋಜನೆ ರೂಪಿಸಿಕೊಳ್ಳಬೇಕು, ಮುಂದಿನ ಕ್ಷಣ ಏನಾಗುತ್ತೆ ಎಂದು ಗೊತ್ತೆ ಇಲ್ಲ ಆದರೂ... </p>
<p dir="ltr">ನಾನೂ ತಪ್ಪು ಮಾಡುತ್ತೇನೆ ಆದರೆ ಅದು ಬೇರೆಯವರ ಬದುಕಿಗೆ ಕೊಳ್ಳಿಯಾಗದಿರಲಿ. </p>
<p dir="ltr">*ಹೆಣ್ಣು-ಹೊನ್ನು-ಮಣ್ಣು ಸಿಗುವುದಾದರೆ ನಾಲಿಗೆ-ಮನಸು ನಿಯಂತ್ರಣ ಕಳೆದುಕೊಳ್ಳಬಾರದು* ಎಂದು ನಿರಂತರ ಬೇಡಿಕೊಳ್ಳುವೆ. </p>
<p dir="ltr">ಆದರೂ ಜೋಲಿ ಹೋದರೆ ನಾನೇ ಸಂಭಾಳಿಸಿಕೊಳ್ಳಬೇಕು ಇದು ಮನಸಿನ ಮಾತು.</p>
<p dir="ltr"> ***</p>
<p dir="ltr">ವರ್ಷದ ಆರಂಭದಲ್ಲಿ ಎರಡು ಮಹತ್ವದ ಘಟನೆಗಳು. ಕನಕದಾಸ ಶಿಕ್ಷಣ ಸಮಿತಿಯ ಸುವರ್ಣ ಸಂಭ್ರಮ. ಕೊನೇ ಗಳಿಗೆಯಲ್ಲಿ ಪ್ರವೇಶ. ಹುಬ್ಬಳ್ಳಿಯ ಪ್ರಾಚಾರ್ಯ ಸಂದೀಪ ಬೂದಿಹಾಳ ಮನಸ್ಸು ಮಾಡಿ ಹೊಸ ಹುಮ್ಮಸ್ಸು ತುಂಬಿದರು.</p>
<p dir="ltr">ಚೇರಮನ್ ಡಾ.ಬಿ.ಎಫ್.ದಂಡಿನ ಸರ್, ಪದಾಧಿಕಾರಿಗಳಾದ ರವಿ ದಂಡಿನ ಹಾಗೂ ಡಾ.ಪುನೀತಕುಮಾರ ಅವರು ಕೊಟ್ಟ ಜವಾಬ್ದಾರಿಗಳನ್ನು ಸಮರ್ಥವಾಗಿ ಯಾವುದನ್ನೂ ಲೆಕ್ಕಿಸದೇ ನಿರ್ವಂಚನೆಯಿಂದ ಪೂರೈಸಿದೆ. </p>
<p dir="ltr">ಖ್ಯಾತ ನಿರ್ದೇಶಕ ಕಾಲೇಜ್ ಕುಮಾರ್ ಫೇಮಿನ ಸಂತು-ಸಂತೋಷ್ ನನ್ನ ಸಾಹಿತ್ಯ ಹಾಗೂ ಧ್ವನಿ ಬಳಸಿಕೊಂಡದ್ದು ನನ್ನ ಸೌಭಾಗ್ಯ. </p>
<p dir="ltr">*ಬರುವುದ ಬೇಡ ಎನಬಾರದು, ಬಾರದಿರುವುದರ ಬೆನ್ನು ಬೀಳಬಾರದು*. ಏನಾದರೂ ದಕ್ಕಲಿ ಎಂಬ ಹಪಾಹಪಿ ಬಿಟ್ಟು ಈಗ ಸುಖವಾಗಿದ್ದೇನೆ. </p>
<p dir="ltr">ಈಗ ಸಂಸ್ಥೆ ನೀಡಿದ ಇತರ ಜವಾಬ್ದಾರಿಗಳನ್ನು ಮುಂದುವರೆಸಲು ಸೇತುವೆ. </p>
<p dir="ltr">ನನ್ನ ಹಿತೈಷಿಗಳು, ಮಾರ್ಗದರ್ಶಕರು ಹಾಗೂ ಅಕ್ಯಾಡೆಮಶಿಯನ್ ಪ್ರೊಫೆಸರ್ ಡಾ.ಆರ್.ಎಂ.ರಂಗನಾಥ್ ಅವರ ನೆರವಿಗೆ ಥ್ಯಾಂಕ್ಸ್ ಹೇಳುವದು ತುಂಬಾ ಕೃತಕ. </p>
<p dir="ltr">ನೂರಾರು ತಾಸುಗಳಿಗಿಂತ ಹೆಚ್ಚು ಮಾತನಾಡಿದ್ದು,ಈ ವರ್ಷದ ಮಹಾನವಮಿ, ಉಗಾದಿ, ದೀಪಾವಳಿ... ಎಲ್ಲವೂ ಹೌದು. </p>
<p dir="ltr">ಆ ಕೆಲಸ ಸಕಾರಾತ್ಮಕವಾಗಿ ಮುಂದುವರೆದೇ ಇದೆ. ಅವರ ಸಾಮರ್ಥ್ಯವನ್ನು ಗ್ರಹಿಸಿದ ಎಲ್ಲರಿಗೂ ಚಿರಋಣಿ. *ಮೌಲ್ಯದ ಹೊಳಪಿಗೆ ಸಾವಿಲ್ಲ*.</p>
<p dir="ltr">ದೂರದರ್ಶನ ದಂಡಿನ ಸರ್ ಅವರ ಸಂದರ್ಶನ ಪ್ರಸಾರ ಮಾಡಿತು. ನಿರ್ಮಲ ಎಲಿಗಾರ ನಂತರ ನನ್ನ ಬರಹದ ಮೇಲೆ ಹೊಸ ಬೆಳಕನ್ನು *ಬೆಳಗು* ಮೂಲಕ ಎರಡು ಬಾರಿ ಬಿತ್ತರಿಸಿದರು. </p>
<p dir="ltr">ಮುಖ್ಯಮಂತ್ರಿಗಳ ಕಾರ್ಯಕ್ರಮ ಮಹತ್ವದ ತಿರುವು ನೀಡಿತು. </p>
<p dir="ltr"> ***</p>
<p dir="ltr">ಪ್ರೀತಿ-ಪ್ರೇಮ-ಪ್ರಣಯ-ಮಾನ-ಅವಮಾನ--ಹಿಂಸೆ-ಸಮಸ್ಯೆ-ಕಿರುಕಳ ಎಲ್ಲವನೂ ಸಮಾನವಾಗಿ ಅನುಭವಿಸಿ ಸ್ವೀಕರಿದ್ದೇನೆ.</p>
<p dir="ltr">ಅತೀ ಹೆಚ್ಚು ಬರೆದ ದಾಖಲೆ. ಕಾವ್ಯ ಪ್ರಧಾನ. ನಿಲ್ಲದ ಮನದ ಮಾತುಗಳು. ಪುಟ್ಟ ಪುಟ್ಟ ಸಕಾಲಿಕ ಬರಹಗಳು. <br>
ಸಾಮಾಜಿಕ ಜಾಲತಾಣಗಳ ಸಮರ್ಥ ಬಳಕೆ. ಓದಲಿ ಬಿಡಲಿ ಬರೆದು ತಲುಪಿಸುವ ವೇದಿಕೆ. </p>
<p dir="ltr"> ***</p>
<p dir="ltr">ಜನ ಎಲ್ಲದನ್ನೂ, ಎಲ್ಲರನ್ನೂ ಟೀಕೆ-ಟಿಪ್ಪಣೆ ಮಾಡುತ್ತಾರೆ. ಅವುಗಳನ್ನು ಲೆಕ್ಕಿಸದೇ, ಕೆಲವನ್ನು ಸ್ವೀಕರಿಸಿ ನಂಬಬೇಕು. <br>
ಹಾಗೆ ನಂಬಿದ ಆಧ್ಯಾತ್ಮಿಕ ಕೇಂದ್ರ ಬಂಗಾರಮಕ್ಕಿಯ ಪೂಜ್ಯ ಮಾರುತಿ ಗುರೂಜಿ ಹಾಗೂ ಅವರ ಸಮಾಜೋಸಾಂಸ್ಕೃತಿಕ ಕಾರ್ಯಕ್ರಮಗಳು. </p>
<p dir="ltr">ಮಲೆನಾಡು ಉತ್ಸವ ಹಾಗೂ ದರ್ಶನ ನನ್ನ ಖಾಸಗಿ ಸಂಗತಿಗಳು ಅವುಗಳಿಗೆ ತಾರ್ಕಿಕ ಹಾಗೂ ಪ್ರಗತಿಪರ ಮಾನದಂಡ ಬೇಡ. </p>
<p dir="ltr">ಅದು ನನ್ನ ನಂಬಿಕೆ. ತಾನುಂಬುವ ಊಟ, ತನ್ನಾಸೆಯ ರತಿಸುಖದಂತೆ ವೈಯಕ್ತಿಕ ಆಚರಣೆಗಳಿಗೆ ಸ್ಪೇಸ್ ಇಟ್ಟುಕೊಳ್ಳಬೇಕು ಯಾರೂ ಕೊಡುವುದಿಲ್ಲ. </p>
<p dir="ltr">*ಧ್ಯಾನ-ಬರಹ-ಕಾಮ-ಊಟ ನನ್ನ ಆಯ್ಕೆ*. ಸಾರ್ವತ್ರಿಕ ಚರ್ಚೆ ಸಲ್ಲದು. </p>
<p dir="ltr"> ***</p>
<p dir="ltr">ಸಾಹಿತ್ಯ ಸಂಭ್ರಮ ಖುಷಿ ಕೊಟ್ಟ ಕಾರ್ಯಕ್ರಮ. ಸಮ್ಮೇಳನಕ್ಕೆ ಹೋಗಲಿಲ್ಲ. ಕರೆಯಲೂ ಇಲ್ಲ. ಪ್ರೊ.ಚಂಪಾ ಅವರಿಗೆ ಸಂದ ಗೌರವ. ನಂತರದ ವಿವಾದ ಕೂಡ ಇಂಟರೆಸ್ಟಿಂಗ್. </p>
<p dir="ltr">ಈ ವರ್ಷ ಅತೀ ಹೆಚ್ಚು ವಿವಾದಗಳು. ವಿಷಾದಗಳು.</p>
<p dir="ltr">ಒಂದರ ಚರ್ಚೆ ಮುಗಿಯುವದರೊಳಗೆ ಮತ್ತೊಂದು ಅದನ್ನು ಮರೆಸುವಂತಹದು. <br>
ಆಗಿದ್ದು ಆಗಿ ಹೋಗುತ್ತೆ ಬಲಿಯಾದವರು ಬಲಿಯಾಗಿ ನಾಲ್ಕು ದಿನಗಳ ಸುದ್ದಿಯಾಗಿ ಮರೆಯಾಗಿ ಮಾಯವಾಗುತ್ತಾರೆ. ಯಾವುದೇ ಇತಿಹಾಸ ನಿರ್ಮಿಸದೆ. </p>
<p dir="ltr">ಆದರೆ ಇದ್ದವರು ದುರಾಸೆಗೆ ಬಿದ್ದು ಒಂದಿಷ್ಟು ಬಾಚಿಕೊಳ್ಳುತ್ತಾರೆ. </p>
<p dir="ltr"> ***</p>
<p dir="ltr">ಮರೆಯಾದ ಗೌರಿ, ದಾನಮ್ಮ ಇನ್ನೂ ನೂರಾರು ಜೀವಗಳು... ಒಮ್ಮೊಮ್ಮೆ ನಾವು-ನೀವೂ! </p>
<p dir="ltr">ಸಿದ್ಧಾಂತಗಳ ಕೂಗು ಕರ್ಕಶವಾಗಿ ಕೇಳುತ್ತಲಿದೆ, ಹೇಸಿಗೆ ಎನಿಸುವಷ್ಟು. ಎರಡರಲ್ಲೂ ಅತಿರೇಕದ ಅನಾಗರಿಕತೆ. ಆರೋಗ್ಯಪೂರ್ಣ ಚರ್ಚೆ ಬೇಡಾಗಿದೆ. ಬರೀ ಕತ್ತರಿಸೋ ಕೆಲಸ. </p>
<p dir="ltr">ವೀರಶೈವ-ಲಿಂಗಾಯತ ಒಂದು ತಾರ್ಕಿಕ ನಿಲುವು ಸಾಧ್ಯವಾಗಿದೆ. ಲಾಭ ಆಗಲಿ ಬಿಡಲಿ. ಬಣ್ಣ ಬಯಲಾಗಿದೆ. ಇನ್ನೂ ನಡೆದೇ ಇದೆ. ನಡೆಯಲಿ. </p>
<p dir="ltr">ಈಗ ಎಲ್ಲದರಲ್ಲೂ ರಾಜಕಾರಣದ ಲೆಕ್ಕ-ಆಚಾರ-ವಿಚಾರ. <br>
ಎಲ್ಲ ಕಡೆ ಎಡ-ಬಲ. ಎರಡೂ ಅಲ್ಲದವರ ದಿವ್ಯ ಮೌನ.<br>
ಅವರ ಸಂಖ್ಯೆಯೇ ಹೆಚ್ಚು. ಕಾಯ್ದು ನೋಡುವ ತಂತ್ರ. <br>
*ಹಿಂಸೆ ವೈಭವೀಕರಿಸಿ ನೆತ್ತರು ಹರಿಯುವುದು ಬೇಡ*. ಸಿದ್ಧಾಂತಗಳ ಹೆಸರಿನಲ್ಲಿ. </p>
<p dir="ltr">ರಾತ್ರೋ ರಾತ್ರಿ ಬೆಳಕಿಗೆ ಬರುವ ಅಬ್ಬರದಿ ನಾವೇ ಕಳೆದುಹೋಗುವುದು ಗೊತ್ತಾಗುತ್ತಿಲ್ಲ. </p>
<p dir="ltr">ನಾಲಿಗೆ ಮನಸು ನಿಯಂತ್ರಣ ಕಳೆದುಕೊಂಡು ಹಾರಾಟ ನಡೆಸಿವೆ. </p>
<p dir="ltr">ನಮ್ಮ ಪಾಡಿಗೆ ನಾವು ಇರೋದು ಯಾರೀಗೂ ಬೇಡ. *ಏನಾದರೂ ಸದ್ದು-ಸುದ್ದಿ ಮಾಡಿ ಬದುಕಿದ್ದೇವೆ ಎಂದು ನಿರೂಪಿಸದಿದ್ದರೆ ನಮ್ಮ ಸಾವಿನ ಘೋಷಣೆ*. </p>
<p dir="ltr"> ***</p>
<p dir="ltr">ಎರಡು ಪುಸ್ತಕಗಳನ್ನು ಗೆಳೆಯರು, ಒಂದನ್ನು ನಾನು ತರುತ್ತಿರುವೆ. </p>
<p dir="ltr">ಬೆಂಗಳೂರಿನ ನಟ, ಕಲಾವಿದ, ಬರಹಗಾರ ಒನ್ ವ್ಹೀಲರ್ ಪ್ರಕಾಶನದ ಮಂಜುನಾಥ.ವಿ.ಎಂ. *ಪಿಸುಮಾತುಗಳ ಜುಗಲ್* ಅಂದವಾಗಿ ವಿನ್ಯಾಸಗೊಳಿಸಿ ಖುಷಿ, ಸಂತೃಪ್ತಿಗೆ ಕಾರಣರಾಗಿದ್ದಾರೆ. </p>
<p dir="ltr">ಲಂಕೇಶ್ ಪ್ರಭಾವವನ್ನೂ ಇನ್ನೂ ಕಾಪಿಟ್ಟುಕೊಂಡು ಬರೆಯುವ ಮಂಜುನಾಥ ಅವರ ಪುಸ್ತಕಪ್ರೀತಿ ಬೆರಗನ್ನುಂಟು ಮಾಡಿದೆ. </p>
<p dir="ltr">ಯುವ ಮಿತ್ರ ಆನಂದ ಕುಂಚನೂರ ನನ್ನ ಕನಸು ನನಸಾಗಲು ಜೊತೆಯಾದರು. </p>
<p dir="ltr">ಇಂತಹ ಒಂದು ಪ್ರಯತ್ನಕ್ಕೆ ಅಷ್ಟೇನು ಪರಿಚಿತರಲ್ಲದ ಹಿರಿಯ ಕಥೆಗಾರರಾದ ಕಲಬುರ್ಗಿಯ ಶ್ರೀಮತಿ ಕಾವ್ಯಶ್ರೀ ಮಹಾಗಾಂವಕರ್ ಉತ್ಸಾಹ ಹಾಗೂ ವಿಶ್ವಾಸದಿಂದ ಸಹಸ್ಪಂದಿಸಿ ಬರೆದದ್ದು ಒಂದು ಸುಂದರ ಕೃತಿ ಮೂಡಿ ಬರಲು ಕಾರಣವಾಯಿತು. </p>
<p dir="ltr">ಮಾನವೀಯ ಸಂಬಂಧಗಳು ತುಂಬ ಗೊಂದಲದಲ್ಲಿರುವಾಗ ಹೊಸ ಪ್ರಯೋಗಗಳು ಕಷ್ಟ ಆದರೂ ಸಕಾರಾತ್ಮ ಉದ್ದೇಶ ಇದ್ದರೆ ನಮ್ಮ ಆಸೆಗಳು ಈಡೇರುತ್ತವೆ. ಉದ್ದೇಶ ಸರಿ ಇರದಿದ್ದರೆ ಏನೂ ಆಗಲ್ಲ.</p>
<p dir="ltr">ಮೈಸೂರಿನ ಕವಿಮಿತ್ರ ಮಂಜುನಾಥ ಲತಾ ರೂಪ ಪ್ರಕಾಶನದ ಮೂಲಕ ಲೇಖನದ ಸಂಕಲನ<br>
*ಅಸಂಗತ ಬರಹಗಳು* ---- ಓದಿ ಯಾರಿಗೂ ಹೇಳಬೇಡಿ ಮುದ್ರಣದಲ್ಲಿದೆ. </p>
<p dir="ltr">ಮರುಬರಹ, ಮರುಮುದ್ರಣ ಹೊಸ ರೂಪ ಪಡೆದು ಇಂಗ್ಲೆಂಡ್ ಪ್ರವಾಸ ಕಥನ <br>
*ಕಲ್ಯಾಣದಿಂದ ಕೇಂಬ್ರಿಜ್ಜಿಗೆ* ---- ಮಗಲಾಯಿ ಹುಡುಗನ ಪಾರೆನ್ ಟೂರು. ಜಾಯಫುಲ್ ಲಿವಿಂಗ್ ಫೌಡೇಶನ್ ಮೂಲಕ ಹೊರ ಬರುತ್ತೆ. </p>
<p dir="ltr">*ಮೂರು ಪುಸ್ತಕಗಳು ನಿಮ್ಮ ಕೈಗೆ. ಖಂಡಿತವಾಗಿ*<br>
ಇದಿಷ್ಟು ಅತ್ಯಂತ ಖುಷಿ ಕೊಟ್ಟ ಪುಸ್ತಕ ಸಂಭ್ರಮ.</p>
<p dir="ltr"> ***</p>
<p dir="ltr">ಸಹಕಾರ, ಶಿಕ್ಷಣ, ಸೌಹಾರ್ದ, ಸಾಹಿತ್ಯ ಪರಿಷತ್ತು, ರಿಜನಲ್ ಇನ್ಸಟೂಟ್ ಫಾರ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ಆಯೋಜಿಸಿದ್ದ ನೂರಾರು ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಜಾಯಫುಲ್ ಲಿವಿಂಗ್ ಇನ್ ಪರ್ಸನಲ್ ಐಂಡ್ ಪ್ರೊಫೆಶನಲ್ ಲೈಫ್ ಕುರಿತು ದಣಿವರಿಯದೆ ಬೆರೆತಿದ್ದೇನೆ.</p>
<p dir="ltr"> ಆದರೆ 'ಈ ಸಾಮರ್ಥ್ಯವನ್ನು ಎನ್ ಕ್ಯಾಶ್ ಮಾಡಿಕೋ' ಅಂತಾರೆ ಆದರೆ ಬೇಡ ಅನಿಸಿದೆ. </p>
<p dir="ltr">ತುಂಬಾ ತನ್ಮಯನಾಗಿ ತರಬೇತಿ ನೀಡಿ ಕೇಳುಗರನ್ನು ಮೋಡಿ ಮಾಡುವ ಭರದಲ್ಲಿ ಒಳಗೊಳಗೆ ಕಳೆದುಹೋಗಿ ನಾನಾಗಿರುವುದೇ ಇಲ್ಲ.</p>
<p dir="ltr">ಬರೆಯುವಾಗ ಯಾವುದೇ *ಅವ್ಯಕ್ತ ಶಕ್ತಿ* ಕೈಹಿಡಿದು ಬರೆಸುತ್ತದೆ. ಮಾತಾಡುವಾಗ ಏನೋ ಪ್ರೇರಣೆ ಆದರೆ ಆವೇಶದಿಂದ ಮೈಮರೆತು ಮಾತನಾಡಿ ಹೈರಾಣಾಗಿರುತ್ತೇನೆ. </p>
<p dir="ltr">ಎಲ್ಲವನ್ನೂ ನಿಷ್ಟೆಯಿಂದ ಪೂರೈಸುವ ತುಡಿತ ತಾನಾಗಿ ಫಲ ನೀಡುವವರೆಗೆ ಕಾಯುವೆ. </p>
<p dir="ltr"> ***</p>
<p dir="ltr">ಒಂಬತ್ತು ತಿಂಗಳ ಹಿಂದೆ ಅನಿರೀಕ್ಷಿತವಾಗಿ ಕರಾವಳಿ ನಂಟು. ತರಬೇತಿಯೊಂದರಲ್ಲಿ ಭೇಟಿ ಆದ ಭಾಸ್ಕರ ದೇವಸ್ಯ ಮಂಗಳೂರು ಬಂಧನಕ್ಕೆ ನಾಂದಿ.</p>
<p dir="ltr">ಸುಪ್ತಮನಸಿನ ಹಲವು ಆಲೋಚನೆಗಳು ಗಟ್ಟಿಯಾಗಿರಬೇಕು, ಸುಪ್ತಮನಸು ಪ್ರಾಂಜಲವಾಗಿರಬೇಕು. ಆಸೆಗಳು ಈಡೇರುವುದರಲ್ಲಿ ಅನುಮಾನ ಬೇಡ.</p>
<p dir="ltr">ಹೊಸ ಸವಾಲುಗಳನ್ನು ಹುಂಬತನದಿಂದ ಸ್ವೀಕರಿಸಿ ಒದ್ದಾಡುವುದು ನನ್ನ ಜಾಯಮಾನ. ಆದರೆ ಶಕ್ತಿ ಮೀರಿ ಪ್ರಯತ್ನಿಸಿದಾಗ ಪ್ರಯಾಸದಿಂದ ಗುರಿ ತಲುಪುತ್ತೇನೆ. </p>
<p dir="ltr">ಮಂಗಳೂರು-ಕಟೀಲು-ನಿಡ್ಡೋಡಿ-ಕಾಂತಾವರ = ಜ್ಞಾನರತ್ನ ಅನಿಸಿದೆ ನೋಡೋಣ. </p>
<p dir="ltr">*ಎಲ್ಲದೂ ಅವನ ಮಹಿಮೆ*. <br>
ಗ್ರಾಮೋತ್ಸವ ಅರ್ಥಪೂರ್ಣ.<br>
ಭಾಸ್ಕರಗೌಡ ದೇವಸ್ಯ ಅವರ ಒಳ್ಳೆಯತನಕ್ಕೆ ಒಳ್ಳೆಯದಾಗಲಿ. </p>
<p dir="ltr">ಕಡೀ ದಿನ ಆನಂದ ಕುಂಚನೂರ ಕತೆಗಳ ಅನಾವರಣ. *ಮಹತ್ವದ ವ್ಯಕ್ತಿಗಳ ಮಿಲನ*.</p>
<p dir="ltr"> ***</p>
<p dir="ltr"> *ಸಂಕಲ್ಪ*</p>
<p dir="ltr">Joyful living ಸರಿಯಾಗಿ ಅರಿತಿದ್ದೇನೆ... ಆದರೆ ಪಾಲನೆ ?</p>
<p dir="ltr">Self evaluation ಬೇಕಲ್ಲ !</p>
<p dir="ltr">ಮುಖ್ಯವಾಗಿ ಬದುಕನ್ನು ಅಲುಗಾಡಿಸುವ *ಅರ್ಥವ್ಯವಸ್ಥೆ* ಸರಿದಾರಿಗೆ ಬಂದಾಗ ಅರ್ಧ ಗೆದ್ದಂತೆ. </p>
<p dir="ltr">ಕೆಲವು ಸಂಬಂಧಗಳನು ಎಚ್ಚರಿಕೆಯಿಂದ ನಿಭಾಯಿಸಬೇಕು. </p>
<p dir="ltr">ಬೇಕಾದವರನ್ನು ಬೇಕಾದ ರೀತಿಯಲ್ಲಿ ಪಡೆದುಕೊಳ್ಳುತ್ತೇವೆ ಆದರೆ ಉಳಿಸಿಕೊಳ್ಳುವುದೂ ಅಷ್ಟೇ ಮುಖ್ಯ. </p>
<p dir="ltr">ನಾನು ಹೆಚ್ಚು ಭಾವುಕನಾಗದೆ ಸಂಯಮದಿ ನಡೆದುಕೊಂಡು ಕಾಪಾಡುವ ಸೂಕ್ಷ್ಮ ಜವಾಬ್ದಾರಿ ಹೊರಬೇಕು. <br>
*ಜಗ್ಗಾಟದಲಿ ಹರಿಯಬಾರದು*.<br>
*ಕಾಲ, ಉತ್ತಮರ ಪ್ರೀತಿ ಕಳೆದ ಮೇಲೆ ಸಿಗುವುದೇ ಇಲ್ಲ*. </p>
<p dir="ltr">ಆರೋಗ್ಯದ ಕುರಿತು awareness ಇನ್ನೂ ಹೆಚ್ಚಾಗಬೇಕು. </p>
<p dir="ltr">*ತಿರುಗಾಟ-ಮಾತು-ಉಸಾಬರಿ ಕಡಿಮೆ ಆಗಿ <br>
ಓದು-ಬರಹ-ಧ್ಯಾನ ಹೆಚ್ಚಾಗಬೇಕು*.</p>
<p dir="ltr">*ಆನೆ ಬಲ*</p>
<p dir="ltr"> ಆರೋಗ್ಯ-ನೆಮ್ಮದಿಗಾಗಿ ಮಾತ್ರ ಪ್ರಾರ್ಥಿಸಬೇಕು. </p>
<p dir="ltr">ಎಲ್ಲರೂ ಹೆಚ್ಚು ಖುಷಿಯಾಗಿರಲಿ ಎಂದು ಬಯಸಿದಾಗ ಖುಷಿ ತಾನಾಗಿಯೇ ಸಿಗುತ್ತದೆ. </p>
<p dir="ltr">*ಶ್ರೀ.ಎಂ*. ಹಾಗೂ ಅವರು ದಯಪಾಲಿಸಿದ ಕರುಣೆಯನ್ನು ನಿರಾಯಾಸವಾಗಿ ಕಾಪಾಡಬೇಕು. </p>
<p dir="ltr">ಐದು ವರ್ಷಗಳಿಂದ ಹೊಸ ವರ್ಷವನ್ನು ನಶೆಯಿಲ್ಲದೆ ಸ್ವಾಗತಿಸಿದ್ದೇನೆ. ಸಣ್ಣಪುಟ್ಟ ಬದ್ಧತೆಗಳು ಕೂಡ ದೊಡ್ಡ ಖುಷಿ ನೀಡುತ್ತವೆ.</p>
<p dir="ltr">ಗುರು-ಹಿರಿಯರು-ಜನ್ಮದಾತರ ಕೃಪೆಯೊಂದಿಗೆ ನಿಮ್ಮ ಹಾರೈಕೆಯೂ ಇರಲಿ. </p>
<p dir="ltr">Wish you Happy New Year.</p>
<p dir="ltr">---ಸಿದ್ದು ಯಾಪಲಪರವಿ.</p>
<p dir="ltr">ಹೋದ ವರ್ಷ ಬರೆದದ್ದು....</p>
Siddu Yapalaparavihttp://www.blogger.com/profile/03313770596372511100noreply@blogger.com0tag:blogger.com,1999:blog-2307280524148351469.post-13595885470174769922018-12-30T01:45:00.001-08:002018-12-30T01:45:05.679-08:00ಖುಷಿಯಾಗಿರಲು...<p dir="ltr">*ಖುಷಿಯಾಗಿರಲು ಏಕಾಂತ ಸಾಕು*</p>
<p dir="ltr">ನಾವು ಎಲ್ಲ ಏನೆಲ್ಲ ಮಾಡುವುದು ಕೇವಲ ಖುಷಿಗಾಗಿ. ಖುಷಿಯನ್ನು ಎಲ್ಲಂದರಲ್ಲಿ ಹುಡುಕುತ್ತೇವೆ.‌ ಗೆಳೆಯರು, ಬಂಧುಗಳು, ಕುಟುಂಬದ ಸದಸ್ಯರು…<br>
ಊ ಹೂಂ ಯಾರೂ ಖುಷಿ ಕೊಡಲಾರರು, ನಾವು ನಿರೀಕ್ಷಿಸಲೂ ಬಾರದು.</p>
<p dir="ltr">ಎಲ್ಲರಿಗೂ ಅವರದೇ ಆದ ಆಯ್ಕೆಗಳಿರುತ್ತವೆ, ಆಸೆಗಳಿರುತ್ತವೆ, ಅವುಗಳ ಪೂರೈಸುವ ಸ್ವಾರ್ಥವೂ ಇರುವುದು ಸಹಜ. <br>
ನಮ್ಮ ನಿರೀಕ್ಷೆ ನಮ್ಮ ದುಃಖಕ್ಕೆ ಮೂಲ ಎಂದು ಗೊತ್ತಿದ್ದರೂ ಮತ್ತೆ ಮತ್ತೆ ನಿರೀಕ್ಷಿಸುತ್ತಲೇ ಸಾಗುತ್ತೇವೆ. </p>
<p dir="ltr">ಹೊಸ ವರ್ಷ, ಹುಟ್ಟು ಹಬ್ಬ ನಮ್ಮ ಸಡಗರವಾಗದೇ ಕಳೆದು ಹೋದ, ನಾವು ವಿನಾಕಾರಣ ಕಳೆದುಕೊಂಡ ಕಾಲದ ಪರಾಮರ್ಶೆಯಾಗಬೇಕು. </p>
<p dir="ltr">ಎಲ್ಲ ಬಿಟ್ಟು ದೂರ ಹೋಗಲು ನಾವು ಸನ್ಯಾಸಿಗಳೇನು ಅಲ್ಲವಾದರೂ ಕೊಂಚ ನಿರ್ಲಿಪ್ತತೆ ಅನಿವಾರ್ಯ.<br>
ಕಾಲನ ವೇಗದಲ್ಲಿ ಎಲ್ಲರಿಗೂ ಗಡಿಬಿಡಿ, ಧಾವಂತ. <br>
*ಒಂದು ಮುಗುಳು ನಗೆ, ಬಿಸಿಯಪ್ಪುಗೆ, ಸಿಹಿ ಮುತ್ತಿಗಾಗಿ ಪ್ರತಿ ಜೀವಗಳು ಹಾತೊರೆಯುತ್ತವೆ*. ಆದರೆ ಯಾರಿಂದ ನಾವು ನಿರೀಕ್ಷಿಸಬೇಕೆಂಬುದೇ ಗೊಂದಲ.</p>
<p dir="ltr">ಹರೆಯದಲ್ಲಿ ಹೆಂಡತಿ, ಕೊಂಚ ದೊಡ್ಡವರಾದ ಮೇಲೆ ಮಕ್ಕಳು, ಇನ್ನೂ ಮಾಗಿದ ಮೇಲೆ ಮೊಮ್ಮಕ್ಕಳು ಮುಂದೆ…<br>
ಎಲ್ಲವೂ ಎಲ್ಲರೂ ಖಾಲಿ ಖಾಲಿ. </p>
<p dir="ltr">ಹೆಂಡತಿ ಅಥವಾ ಗಂಡನಿಗೆ ಅದೇನೋ ಜವಾಬ್ದಾರಿಗಳ ನೆಪ, ಒತ್ತಾಯದ ಸನ್ಯಾಸ ಬದುಕು. ದೈಹಿಕವಾಗಿ ಜೊತೆಗಿದ್ದರೂ ಗೊತ್ತಾಗದಂತೆ ದೂರಾಗುವ ಪರಿಯೇ ವಿಚಿತ್ರ, </p>
<p dir="ltr">ಅದೇನೋ ಬಿಗುಮಾನ, ಸಂಕೋಚ ಬಿಗಿದಪ್ಪಿ ಮುದ್ದಿಸಲೂ.<br>
ಎಂತಹ ವಿಚಿತ್ರ ನೋಡಿ ಒಂದು ಕಾಲದ ಜೋಡಿ ಹಕ್ಕಿಗಳು ತಮಗೆ ವಯಸ್ಸಾಗಿ ಮುಪ್ಪು ಆವರಿಸಿತೇನೋ ಎಂಬ ಹುಚ್ಚು ಹಿಡಿಸಿಕೊಂಡ ಕೊರಗು.</p>
<p dir="ltr">ಅನುಸಂಧಾನ, ಅನುರಾಗ, ಅನ್ಯೋನ್ಯತೆಗೆ ವಯಸ್ಸು ಅಡ್ಡಿಯಾಗಬಾರದು, ಇಬ್ಬರಿಗೂ ಅಷ್ಟೇ ವಯಸ್ಸಾಗಿರುತ್ತೇ ಆದರೂ ಈ ಹಿಂಜರಿತ ಯಾಕೋ ಅರ್ಥವಾಗದು. <br>
ಇಂತಹ ಅರ್ಥವಾಗದ ಸಂಗತಿಗಳನ್ನು ಅರ್ಥ ಮಾಡಿಕೊಳ್ಳಲು ಮನಸು ಮಾಡಬೇಕು ಅಷ್ಟೇ.</p>
<p dir="ltr">ದೇಹಕ್ಕೆ ವಯಸ್ಸಾಗುತ್ತೆ, ಮನಸಿಗೆ ವಯಸ್ಸಾಗುವುದಿಲ್ಲ ಎಂಬುದು ನಮಗರ್ಥವಾಗುವುದೇ ಇಲ್ಲ. <br>
ಸರಿ ಹಾಗಾದರೆ ಒಂಟಿಯಾದರೇನಂತೆ ಧ್ಯಾನ, ಸಂಗೀತ ಆಲಿಸುವಿಕೆ, ಓದು,ಬರಹ, ಓಡಾಟ, ಹರಟೆ ಮೈಗೂಡಿಸಿಕೊಂಡರೆ ಸಾಕಲ್ಲ. </p>
<p dir="ltr">ಈ ಮಧ್ಯೆ ಸುಡುಗಾಡು ಸಣ್ಣಪುಟ್ಟ ಅನಾರೋಗ್ಯ ಬೇರೆ. ಅವುಗಳದೇ ಧ್ಯಾನ. ಅದು ಅನಗತ್ಯ ನಕಾರಾತ್ಮಕ ಧ್ಯಾನ. </p>
<p dir="ltr">“ನಿನ್ನ ಪಾಡಿಗೆ ನೀನೂ ಖುಷಿಯಿಂದ ಇರು ಓಡಾಡಿಕೊಂಡು, ಬೇಕಾದ ಕೆಲಸಗಳೊಂದಿಗೆ” ಎಂದು ಸಂಗಾತಿಗಳಿಗೆ ಹೇಳುವ, ಸ್ವಾತಂತ್ರ್ಯ ಕೊಡುವ ಮನಸ್ಥಿತಿ ನಮಗಿರುವುದಿಲ್ಲ. ಕೊನೆವರೆಗೂ ನಮ್ಮ ಸೇವೆ ಮಾಡಿಕೊಂಡು ಸಾಯಲೆಂಬ ಕೊಳಕು ಮನೋಧರ್ಮ ಬೇರೆ!<br>
ನಿರ್ಮಲ, ನಿರಾತಂಕ, ನಿಶ್ಚಲ, ನೆಮ್ನದಿಯ ಏಕಾಂತ ಜೀವನವನ್ನು ನಾವು ಅನುಭವಿಸಿ, ನಮ್ಮೊಂದಿಗಿರುವವರಿಗೂ ಅನುಭವಿಸುವ ಅವಕಾಶ ಕೊಡುವ ಸಂಕಲ್ಪ ಮಾಡೋಣ.<br>
ಏಕಾಂತ ಒಂಟಿತನ ಅಲ್ಲವೇ ಅಲ್ಲ. ಅದೊಂದು ಮನಸಿನ ಮುದ. ಆತ್ಮಾನುಸಂಧಾನದ ಮೆಲ್ಲುಸಿರ ಸವಿಗಾನ.<br>
ಬನ್ನಿ ಏಕಾಂತದ ಖುಷಿಯಲ್ಲಿ ಹೊಸ ಹಾದಿ ಹುಡುಕೋಣ. <br>
ನಾನು, ನಾವು, ನೀನು, ನೀವೂ…</p>
<p dir="ltr"> *ಸಿದ್ದು ಯಾಪಲಪರವಿ*</p>
Siddu Yapalaparavihttp://www.blogger.com/profile/03313770596372511100noreply@blogger.com0tag:blogger.com,1999:blog-2307280524148351469.post-75382416069619212122018-12-29T18:58:00.001-08:002018-12-29T18:58:08.522-08:00ಬೇಡಲಾರೆ <p dir="ltr">*ಬೇಡಲಾರೆ ಯಾರನೂ*</p>
<p dir="ltr">ಬೇಡಲಾರೆ ನಾನಿನ್ನು ಬೇಡಿದರೆ <br>
ವರವ ಯಾರೂ ಕೊಡುವುದಿಲ್ಲ </p>
<p dir="ltr">ಇವರು ನಮ್ಮವರು ಕೈ ಬಿಡ<br>
ಲಾರರು ಎಂಬ ಭ್ರಮೆಯ <br>
ಬದುಕಲಿ ನೂರೆಂಟು ಆಸೆ <br>
ಭರವಸೆಗಳ ಲೆಕ್ಕಾಚಾರ</p>
<p dir="ltr">ಯಾರೂ ನಮ್ಮವರಲ್ಲದಿರೆಯೂ <br>
ನಮ್ಮವರು ನಮಗೆ ಏನೆಲ್ಲ <br>
ಆಗುತ್ತಾರೆಂಬ ಗಾಳಿ ಗೋಪುರದ <br>
ಮೇಲೆ ಕಳಸವಿಟ್ಟು ಜಾತ್ರೆ <br>
ಮಾಡಿ ತೇರನೆಳೆಯುವ ಹುಚ್ಚು</p>
<p dir="ltr">ನಮ್ಮವರೆನಿಸಿಕೊಂಡವರು ಒಮ್ಮೆ <br>
ಮೇಲೆ ಹಾರಿದರೆ ಗಾಳಿಪಟ ಹಾರಿದ್ದೇ <br>
ಹಾರಿದ್ದು ಪಾಪ ಪಟಕ್ಕೇನು ಗೊತ್ತು </p>
<p dir="ltr">ಪಟ ಹಾರಿಸುವವನ ಕೈ ಸೋತರೆ <br>
ಎಳೆದಾನೆಂದು</p>
<p dir="ltr">ನಿನ್ಪಷ್ಟಕೆ ನೀ ನಡೆ ನಿನ್ನಿಷ್ಟದ ಹಾಗೆ <br>
ಯಾರೂ ಇಲ್ಲಿ ಇಲ್ಲ ನಿನಗೆ ನೆರವಾಗಿ <br>
ನೆರಳಾಗಿ ಕೈ ಹಿಡಿದು ಮುನ್ನಡೆಸಲು </p>
<p dir="ltr">ಏಳು ಎದ್ದೇಳು ಸಾಗು ನಿಧಾನದಿ ನಿನ್ನ <br>
ವೇಗವ ನೀ ಅರಿತು</p>
<p dir="ltr">ಅಲ್ಲಿರಲಿ ಒಂದು <br>
ಗುರಿ ಅದ ತಲುಪಲು ನೀ ತೆವಳುತ್ತ <br>
ಏಳುತ್ತ ಒಮ್ಮೊಮ್ಮೆ ಬೀಳುತ್ತಲಾದರೂ <br>
ನಡೆಯುವದ ಬಿಡಬೇಡ </p>
<p dir="ltr">ದಣಿವು ಹಸಿವು ಬಾಯಾರಿಕೆಯ <br>
ಸಂಕಷ್ಟದಲಿಯೂ ಮಾಸದ <br>
ನಗುವಿರಲಿ ಮೊಗದಲಿ </p>
<p dir="ltr">ಗಂಟು ಮುಖದ ಕಗ್ಗಂಟು ಕಳಚ<br>
ಬಹುದು ಸುತ್ತಲಿನವರ ನಂಟು </p>
<p dir="ltr">ಬೇರೆಯವರ ನಂಟಿನ ಗಂಟನು <br>
ನೆಚ್ಚದೆ ಬಿಚ್ಚದೆ ಬೆಚ್ಚದೆ ನಡೆ</p>
<p dir="ltr">ನಿನ್ನ <br>
ಕಾಲುಗಳ ಮೇಲೆ ನಿನ್ನದೇ ಕಾಲ <br>
ಕೂಡಿ ಬರುವವರೆಗೆ....</p>
<p dir="ltr">---ಸಿದ್ದು ಯಾಪಲಪರವಿ</p>
Siddu Yapalaparavihttp://www.blogger.com/profile/03313770596372511100noreply@blogger.com0tag:blogger.com,1999:blog-2307280524148351469.post-16992921480871689412018-12-24T00:24:00.001-08:002018-12-24T00:24:41.350-08:00ಕಳೆದ ಹೊತ್ತು<p dir="ltr">*ನಾನೀ ಕಳೆದ ಹೊತ್ತು*</p>
<p dir="ltr">ಬಾ ಎಂದು ಕರೆದ ಕೂಡಲೇ<br>
ಬಂದದ್ದೇಕೋ ನಾ ಕಾಣೆ</p>
<p dir="ltr">ಕೊರಳ ದನಿಗೆ ತಲೆ ತೂಗಿದ <br>
ಸರ್ಪ ತನ್ನ ತಾ ಮರೆತಂತೆ </p>
<p dir="ltr">ಜನುಮ ಜನುಮಾಂತರದ ಮಾತು<br>
ಬರೀ ಮಾತು ಕತೆಗೆ </p>
<p dir="ltr">ಪ್ರೀತಿಯ ಭ್ರಮೆಗೆ ಅಂದುಕೊಂಡ <br>
ಮಾಗಿಯ ಕಾಲದಲಿ </p>
<p dir="ltr">ಮನಸು ಅರಳಿದ ಹೊತ್ತಲಿ<br>
ದೇಹವೂ ಅರಳಿತ್ತು ಮಲ್ಲಿಗೆಯ <br>
ಮೊಗ್ಗಿನ ಹಿಗ್ಗಂತೆ ಸುಗ್ಗಿಯ <br>
ರಾಶಿಯಂತೆ </p>
<p dir="ltr">ಬಿಡು ಅಂದಾಗ ಬಿಡಲು <br>
ಬೇಕು ಎಂದಾಗ ಹಿಡಿಯಲು <br>
ಇದು ಮುಟ್ಟಾಟ ಅಲ್ಲ </p>
<p dir="ltr">ಖೋ ಖೋ ಎಂದು <br>
ಬೆನ್ನು ಚಪ್ಪರಿಸಿದರೆ ಓಡಲಾಗದು <br>
ಕುಂತ ನೆಲ ಬಿಟ್ಟು <br>
ಹಿಡಿದ ನೆಲೆ ಕೆಟ್ಟು </p>
<p dir="ltr">ನಂಬಿದ ಬಾಳಿಗೊಂದು ರೀತಿ<br>
ನೀತಿಯನೂ ಹೊಸೆದಾಗ ಹೊಸದ<br>
ಹೊಸೆದು ಬೆಸೆಯಲಾಗದು </p>
<p dir="ltr">ಬೆಸೆದ ಬಿಸಿ ಇನ್ನೂ ಬಿಗಿಯಾಗದು <br>
ಅಂದುಕೊಂಡದ್ದೀಗ <br>
ಬರೀ ಭ್ರಾಂತು ಎಲ್ಲ <br>
ತಿರುವು ಮುರುವು ಹೊಸದು <br>
ಬೆಸೆಯಿತು ಹಳೆಯದು <br>
ಪಿಸಿದು ಪಿಸಿದು ಚೂರಾಯಿತು</p>
<p dir="ltr">ಆದರೂ </p>
<p dir="ltr">ಇಲ್ಲ ವಿಶಾದ <br>
ವಿನಾಕಾರಣ ಏಕೆ ಹೀಗೆಂಬ <br>
ತಳಮಳವೂ ದೂರ ಬಹು <br>
ದೂರ </p>
<p dir="ltr">ಬೇಕಿದ್ದ ಹುಡುಕುತ್ತಿದ್ದ ಕಳ್ಳ<br>
ಮನಸಿಗೀಗ ಬರೀ ಸಡಗರ </p>
<p dir="ltr">ಬೇಕಿದ್ದು ದಕ್ಕಿದ ನಿರಾತಂಕದಲಿ <br>
ಎದೆಯರಳಿ ತೊಟ್ಟುಗಳು ತಡವರಿಸುವ <br>
ತವಕಕೆ ಮೈಯಲ್ಲ ಕಾಲು </p>
<p dir="ltr">ನಡಗುವ ತೊಡೆಗಳಲಿ ಶಕ್ತಿ <br>
ಸಂಚಲನ ಅರಳಿ ನಗುವ <br>
ಚಂದ್ರ ಬಿಂಬಕೆ ಉಕ್ಕೇರಿದ <br>
ತೆರೆಯ ಅಲೆಗಳ ಏರಿಳಿತ</p>
<p dir="ltr">ನಾ ಅರಳಿ ಕೆರಳಿದ್ದೀಗ <br>
ಪೂರ್ಣ ಪರಿಪೂರ್ಣ ಸಂಪೂರ್ಣ</p>
<p dir="ltr">ಸಾರ್ಥಕ ಸಮರ್ಥ ಸಮರ್ಪಕ<br>
ನಾ <br>
ನೀ<br>
ಕಳೆದು ಹೋದ ಹೊತ್ತಲಿ </p>
<p dir="ltr">ಬರೀ ಬೆಳಕು ಥಳ ಥಳ<br>
ಹೊಳೆಯುವ ಮಹಾಬೆಳಗು.</p>
<p dir="ltr"> *ಸಿದ್ದು ಯಾಪಲಪರವಿ*</p>
Siddu Yapalaparavihttp://www.blogger.com/profile/03313770596372511100noreply@blogger.com0