Friday, May 14, 2010

ಪರಿಣಾಮಕಾರಿ ಕಾರ್ಯ ವಿಧಾನ

* ಬೇರೆಯವರಿಂದ ಕೆಲಸ ಮಾಡಿಸುವುದು ಕಠಿಣ ಎಂಬ ಮಾತಿದೆ. ಇದಕ್ಕೆ HRD ಯಲ್ಲಿ ಪರಿಹಾರಗಳೇನು?
______ "You get the best of others, only when you give the best of yourself." ಎಂಬ ಮಾತೊಂದಿದೆ. ಕೇವಲ ಬೇರೆಯವರಿಂದ ಕೆಲಸ ನಿರೀಕ್ಷಿಸುವುದು ಸೂಕ್ತವಲ್ಲ. ಬೇರೆಯವರು ಪರಿಣಾಮಕಾರಿಯಾಗಿ ನಾವು ವರ್ತಿಸಬೇಕಾಗುತ್ತದೆ.
ನಮ್ಮಿಂದ ಕೆಲಸ ಹೇಳಿಸಿಕೊಳ್ಳುವವರುನಾವು ಹೇಗೆ ಕಾರ್ಯ ನಿರತರಾಗಿದ್ದೇವೆ ಎಂಬುದನ್ನು ಆಳವಾಗಿ ಗಮನಿಸುತ್ತಾರೆ. ಅದೊಂದು ಅರಿವಿಗೆ ಬಾರದಂತೆ ನಡೆಯುವ communication.
ನಾವು ಸಮರ್ಪಕವಾಗಿ, ಅರ್ಪಣಾ ಮನೋಭಾವ ಇಟ್ಟುಕೊಂಡು ಕೆಲಸ ಮಾಡದೇ ಕೇವಲ ಬೇರೆಯವರು ಮಾತ್ರ ಮಾಡಲಿ ಎಂದು ಬಯಸಿದರೆ ವಿಫಲರಾಗುತ್ತೇವೆ.
ಅದನ್ನೇ ಬಸವಣ್ಣನವರು "ಮಾಡುವಂತಿರಬೇಕು, ಮಾಡದಂತಿರಬೇಕು, ಮಾಡುವ ಮಾಟದಲಿ ತಾನಿದ್ದು ಇರದಂತಿರಬೇಕು" ಎಂದು ಹೇಳಿದ್ದಾರೆ.
ನಾವು ಮಾಡುವ ಕೆಲಸ ಬೇರೆಯವರ ಗಮನ ಸೆಳೆಯಲಿ ಎಂಬ ಆತಂಕವಿರಬಹುದು. ಬೇರೆಯವರು ಗುರುತಿಸದಿದ್ದರೆ ಹೇಗೆ ಎಂಬ ಗುಮಾನಿಯೂ ಇರದೇ ನಮ್ಮ ಪಾಡಿಗೆ ನಾವು ಮಾಡುತ್ತಲೇ ಇರಬೇಕು. ಅದರ ಪ್ರತಿಫಲ ಸಿಗುವ ಸಮಯಕ್ಕೆ ಸಿಕ್ಕೇ ಸಿಗುತ್ತದೆ. ಆದರೆ ಎಷ್ಟೋ ಬಾರಿ ನಮ್ಮ ಹಪಾಹಪಿತನ ಪರಿಣಾಮವನ್ನು ಎಡವಟ್ಟು ಮಾಡುತ್ತದೆ.
ನಾವು ಮಾಡುವ ಕೆಲಸ ಎಲ್ಲ ರೀತಿಯಿಂದ ದಾಖಲಾಗಲೀ ಎಂಬ ಹಟಮಾರಿತನವು ಸಲ್ಲದು. ಆರೀತಿಯ ನಿರ್ಮೋಹವನ್ನು ರೂಪಿಸಿಕೊಳ್ಳಲು ಸಮಯ ಬೆಕಾಗುತ್ತದೆ. ಮನಸು ಮಾಡಿದರೆ ಸಾಧ್ಯ ಎಂಬುದು ನನ್ನ ವೈಯಕ್ತಿಕ ಅನುಭವ ಕೂಡಾ!
ನನ್ನ ಕಾರ್ಯಚಟುವಟಿಕೆಗಳ ಬಗ್ಗೆ ಈ ಹಿಂದೆ ಅನಗತ್ಯ ಪ್ರಚಾರ ಕೊಡುತ್ತಿದ್ದೆ, ಆ ಪ್ರಚಾರದಿಂದ ಅಂತಹ ಪರಿಣಾಮವಾಗಲಿಲ್ಲ. ನಂತರ ಬೇಸರದಿಂದ ಬಿಟ್ಟು ನಿರ್ಲಿಪ್ತನಾದೆ. ಆದರೆ ಆ ನಿರ್ಲಿಪ್ತತೆ ಇಂದು ಫಲ ನೀಡಿದೆ. ಯಾವ ಕ್ಷೇತ್ರದಲ್ಲಿ ನಾನು ನಿರ್ಲಿಪ್ತನಾಗಿ ಕಾರ್ಯ ಮಾಡಿದ್ದೇನೆ ಅದರ ಪ್ರತಿಪಲ ಈಗ ದೊರಕುತ್ತಲಿದೆ. ಯಶಸ್ಸಿಗಿಂತ, ಪರಿಪೂರ್ಣತೆ ಮುಖ್ಯ ಅದನ್ನೇ perfection ಎನ್ನುವದು. ನಾವು ಸದಾ ಪರಿಪೂರ್ಣತೆಗೆ ಹವಣಿಸಬೇಕು. ಹಾಗಂತ ಪ್ರತಿಫಲ ಅಪೇಕ್ಷಿಸದೇ ಕೆಲಸ ಮಾಡಿ ಎಂದು ನಾನು ಹೇಳುವುದಿಲ್ಲ. ಕೇವಲ ಆಪೇಕ್ಷೆ ಮಾತ್ರ ಸಾಲದು ಅದನ್ನು ಮೀರಿದ ಶ್ರಮದ ಅಗತ್ಯವಿದೆ.
ತುಂಬಾ ಶ್ರದ್ಧೆಯಿಂದ ಕಡಿಮೆ ಹಣಕ್ಕೆ ಕೆಲಸ ಮಾಡುವ ನಿಷ್ಠೆ ತೋರಿದ ಮಹನೀಯರು ಯಾವುದೇ ಒಂದು fine morning ಪ್ರತಿಫಲ ಪಡೆದ ಘಟನೆಗಳನ್ನು ನೋಡಿದ್ದೇನೆ. ಒಬ್ಬ ಉದ್ದಿಮೆದಾರರೊಂದಿಗೆ ಕೇವಲ ಒಂದು ಸಾವಿರ ರೂಪಾಯಿಗೆ ಆಪ್ತ ಸಹಾಯಕರಾಗಿ ದುಡಿದ ವ್ಯಕ್ತಿ ಇಂದು ಅವರ ಒಂದು ಕಂಪನಿಗೆ CEO ಆಗಿ ಬಡ್ತಿ ಪಡೆದು ಲಕ್ಷಾಂತರ ರೂಪಾಯಿ ಸಂಬಳದೊಂದಿಗೆ, ಕೋಟ್ಯಾಂತರ ವ್ಯವಹಾರಕ್ಕೆ ಒಡೆಯರಾಗಿದ್ದಾರೆ. ಅನನ್ಯ ನಿಷ್ಠೆ, ಸಹನೆ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತವೆ. ಆದರೆ ನಮಗೆ ಅಷ್ಟೊಂದು ಸಹನೆಯ ಅಗತ್ಯವಿದೆ.
ಕೇವಲ ನಿಷ್ಠೆ ಪ್ರಾಮಾಣಿಕತೆಯಿಂದ ದುಡಿಸಿ ಮಾನ್ಯಶ್ರೀ ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಗಳಾದದ್ದು, ಮಾನ್ಯಶ್ರೀ ಮನಮೋಹನ್ ಸಿಂಗ್ ಅವರು ಪ್ರಧಾನಿ ಆದದ್ದು ಈ ತರಹದ ನಿಷ್ಠೆ ಹಾಗೂ ನಿರ್ಲಿಪ್ತತೆಯಿಂದ.
ಏನೂ ಪರಿಶ್ರಮವಿಲ್ಲದೇ ದಿಢೀರ್ ಮೇಲೇರಿದ್ದನ್ನು ನೋಡಿದ್ದೇವೆ ಅವರ sudden rise, ಅಷ್ಟೇ sudden fall ಆಗುತ್ತದೆ ಎನ್ನುವುದಕ್ಕೆ ನಮ್ಮ ಸುತ್ತಲೂ ಅನೇಕ ಉದಾಹರಣೆಗಳಿವೆ. Sudden ಆಗಿ ಏರಿದ್ದು ಅಷ್ಟೇsudden ಆಗಿ ಇಳಿದು ಮತ್ತೆ ಏರಲು ಕಾಲ ತಗೆದುಕೊಳ್ಳುತ್ತದೆ.
ಇದು ರಾಮಕೃಷ್ಣ ಪರಮಹಂಸರು ಹೇಳಿದ ಬೆಲ್ಲದ ಕಲೆ ಇದ್ದಹಾಗೆ. ನಾವು ಪರಿಪೂರ್ಣರಾಗದೇ ಕೇವಲ ಬೇರೆಯವರ ಮೇಲೆ ಹೇರಿ, ಹೇಳಿದರೆ ಪರಿಣಾಮ ದೊರಕುವುದಿಲ್ಲ. ನಮಗಿರುವ ಅಧಿಕಾರದ ಬಳಕೆ ಪರಿಣಾಮ ನೀಡಬೇಕಾದರೆ ನಮ್ಮ dedication ಎಷ್ಟಿದೆ ಎಂಬುದನ್ನು self evaluate ಮಾಡಿಕೊಳ್ಳಬೇಕು. ಅದಕ್ಕೆ ಬೇರೆಯವರ remarks ಬೇಕಾಗಿಲ್ಲ.
ಬೇರೆಯವರು ಕೊಡುವ remarks ಜನ ಮೆಚ್ಚಿಸಬಹುದು ಆದರೆ ಮನಮೆಚ್ಚಿಸುವುದಿಲ್ಲ. ನಮ್ಮ ಮನ ಮೆಚ್ಚಿದರೆ ಸಾಕು! ಇತರರೂ ಮೆಚ್ಚಲಿ ಎಂಬ ನಿರೀಕ್ಷೆ ಬೇಡ. ಈ ರೀತಿಯ ಮನೋಧರ್ಮ ಇಟ್ಟುಕೊಂಡು ಇಂದಿನಿಂದಲೇ ಕಾರ್ಯ ಪ್ರಾತಂಭಿಸಿ ನಾಳೆಯಿಂದ ನಿಮ್ಮ ಸುತ್ತಲೂ ಕೆಲಸ ಮಾಡುವವರನ್ನು ಗಮನಿಸಿದರೆ ಪರಿಣಾಮ ಗೊತ್ತಾಗುತ್ತದೆ.

No comments:

Post a Comment