Friday, May 21, 2010

ಮನದ ವಿಚಿತ್ರ ವ್ಯಾಪಾರಗಳು


"ತನ್ನಿಚ್ಛೆಯ ನುಡಿದಡೆ ಮೆಚ್ಚುವದೀ ಮನವು,
ಇದಿರಿಚ್ಛೆಯ ನುಡಿದಡೆ ಮೆಚ್ಚದೀ ಮನವು,
ಕೂಡಲ ಸಂಗನ ಶರಣರ ನಚ್ಚದ ಮಚ್ಚದ ಮನವ ಕಿಚ್ಚಿನೊಳಗಿಕ್ಕು".
ಬಸವಣ್ಣನವರ ಈ ವಚನವನ್ನು ಗಮನಿಸಿದಾಗ, ಬಸವಣ್ಣನಿಗೆ ಇದ್ದ ವ್ಯಕ್ತಿತ್ವ ವಿಕಸನದ ಆಸಕ್ತಿ ವ್ಯಕ್ತವಾಗುತ್ತದೆ.
ಮನಸಾಕ್ಷಿಯ ಕುರಿತು ವ್ಯಾಖ್ಯಾನಿಸುವಾಗ ಮೇಲಿನ ಸಾಲುಗಳ ಗಂಭೀರತೆಯನ್ನು ಗಮನಿಸಬೇಕು.
ನಮ್ಮ ಮನಸ್ಸು ಸದಾ ತನ್ನಿಚ್ಛೆಯಂತೆ ನಡೆಯಲು ಬಯಸುತ್ತದೆ. ಮನಸಿನ ಇಚ್ಛೆಗಳು ಯಾವುದು ಎಂಬುದನ್ನು ವಿವೇಚಿಸುವವರು ಯಾರು ಎಂಬುದು ಅಷ್ಟೇ ಕುತೂಹಲದ ಪ್ರಶ್ನೆ.
ಅಂದರೆ ಜಾಗೃತಾವಸ್ಥೆಯ ಮನಸು ಸದಾ negative ಆಲೋಚನೆಗಳ ಕಡೆಗೆ ಹರಿಯುತ್ತದೆ. ಈ ರೀತಿಯ ಹರಿದಾಟವನ್ನು ಮನವೆಂಬ ಮರ್ಕಟ ಎಂದು ನುಡಿಯುತ್ತಾರೆ. ಈ ಹರಿದಾಟವನ್ನು ನಿಲ್ಲಿಸುವುದೇ balance of mind ಎನ್ನುತ್ತಾರೆ.
ಮನ ಮೆಚ್ಚುವಂತೆ ನಡೆಯದೇ, ಜನ ಮೆಚ್ಚುವಂತೆ ನಡೆ ಎಂಬ ಹೇಳಿಕೆಯೂ ಇದೆ. ವ್ಯಕ್ತಿತ್ವ ವಿಕಸನದ ಸಂದರ್ಭದಲ್ಲಿ ಈ ರೀತಿಯ ಉಕ್ತಿಗಳನ್ನು confuse ಮಾಡಿಕೊಳ್ಳುವ ಅಗತ್ಯವಿಲ್ಲ.
ಇಲ್ಲಿ ಅಣ್ಣ ಹೇಳುವುದು ನಿಯಂತ್ರಣವಿಲ್ಲದ ನಿತ್ರಾಣ, ದುರ್ಬಲ conscious mind ಕುರಿತಾಗಿ. ಹೀಗಾಗಿ ಸದೃಢ ಮನಸಿನ ಪರಿಕಲ್ಪನೆ ನಮಗೆ ಸ್ಪಷ್ಟವಿರಬೇಕು.
ಜನ ಮೆಚ್ಚುವ, ಹುಚ್ಚು ಮನಮೆಚ್ಚುವ ಕೆಲಸ ಮಾಡುವುದಕ್ಕಿಂತ ವಿವೇಚನಾ ಪೂರ್ಣ ಮನಸು ಹೇಳುವ ಆತ್ಮಸಾಕ್ಷಿಗೆ ಬೇಸರ ಎನಿಸದ ಕೆಲಸಗಳನ್ನು ಮಾಡಬೇಕು.
ಜನರ ನಿರೀಕ್ಷೆಗೆ ತಕ್ಕಂತೆ ವರ್ತಿಸಬೇಕು ಎಂಬುದು ಕೂಡಾಸರಿಯಲ್ಲ. ಇಂಗ್ಲಿಷ್ ಸಾಹಿತಿ George orwel ತನ್ನ shooting An elephant ಎಂಬ ಲೇಖನದಲ್ಲಿ ಜನರ ನಿರೀಕ್ಷೆಗಳ ಕುರಿತು ರಸವತ್ತಾಗಿ ವಿವರಿಸುತ್ತಾನೆ.
ಇಂಗ್ಲಿಷ್ ಅಧಿಕಾರಿಯ ಕೈಯಲ್ಲಿ ರೈಫಲ್ ಇದ್ದುದನ್ನು ಕಂಡ ನೆರೆದ ಸಾವಿರಾರು ಜನರು, ಅಧಿಕಾರಿ ಆನೆಯನ್ನು ಕೊಲ್ಲಲಿ ಎಂದು ಬಯಸುತ್ತಾರೆ. ಆದರೆ ಮಾನವೀಯತೆಯ ದೃಷ್ಠಿ ಇಟ್ಟುಕೊಂಡ orwel ಆನೆಯನ್ನು ಕೊಲ್ಲುವ ಮನಸು ಮಾಡುವುದಿಲ್ಲ.
ತನ್ನಲ್ಲಿ ಉಂಟಾದ ತಲ್ಲಣಗಳನ್ನು ಲೇಖಕ ಹೃದ್ಯಂಗಮವಾಗಿ ವಿವರಿಸುತ್ತಾನೆ. ಅಂತಿಮವಾಗಿ ಜನರನ್ನು ಓಲೈಸಲೆಂದೇ ಆನೆಯನ್ನು ಕೊಲ್ಲುತ್ತಾನೆ.
ತನ್ನ ಮನಸಾಕ್ಷಿಗೆ ವಿರುದ್ಧವಾಗಿ ನಡೆದುಕೊಂಡಿದ್ದಕ್ಕೆ ವ್ಯಥೆ ಪಡುತ್ತಾನೆ. ಒಂದು ಸುಂದರ ಲೇಖನಕ್ಕೆ ಒಂದು ಹೃದ್ಯಂಗಮ ಘಟನೆ ಕಾರಣವಾಯಿತು. ಇಂತಹ ಸಂಬರ್ಭಗಳನ್ನು ನಾವು ಅನೇಕ ಬಾರಿ ಎದುರಿಸಿದಾಗ ಮನಸಾಕ್ಷಿಯ ಪರವಾಗಿ ನಡೆದುಕೊಳ್ಳಬೇಕು ಎಂಬುದೇ ಲೇಖಕನ ಆಶಯ!
ಸಮಯ, ಸಂದರ್ಭ, ಜನರನ್ನು ಮೆಚ್ಚಿಸಲು, ಸಾರ್ವತ್ರಿಕವಾಗಿ ಒಮ್ಮೊಮ್ಮೆ hero ಆಗಲು ಇಂತಹ ಪ್ರಸಂಗಗಳನ್ನು ಎದುರಿಸಬೇಕಾಗುತ್ತದೆ.
ಪ್ರತಿ ಕ್ಷಣದ ಆಲೋಚನೆಯಲ್ಲಿ ಎರಡು ರೀತಿಯ ವಿಚಾರಗಳು ನಮ್ಮ ಕಣ್ಮುಂದೆ ಬರುತ್ತವೆ. ಒಳ್ಳೆಯದು - ಕೆಟ್ಟದು, ಜನಪರ - ಜನವಿರೋಧಿ, ಜನಮೆಚ್ಚುವ-ಮನಮೆಚ್ಚುವ....... ಹೀಗೆ ಗೊಂದಲಗಳಲಿ ನಮ್ಮ ಆಲೋಚನಾ ಲಹರಿ ಮುಂದುವರೆಯುತ್ತದೆ. ನಮ್ಮ ನಿರ್ಧಾರಗಳು ಯಾವಾಗಲೂ sub conscious mind ನೀಡುವ ಪ್ರಿಯ ಸಲಹೆಗಳನ್ನು ಸ್ವೀಕರಿಸಿ ಬಿಡುವ weakness ಗೆ ಶರಣಾಗುತ್ತೇವೆ.
ಇದಕ್ಕೊಂದು ಉದಾಹರಣೆಯನ್ನು ಗಮನಿಸೋಣ. ತುಂಬಾ ಶ್ರೀಮಂತರೂ, ಉದಾರಿಗಳ ಹತ್ತಿರ ನೆರವು ಕೇಳಲು ಹೋಗುತ್ತೇವೆ. ನಮ್ಮ ನಿರೀಕ್ಷೆ ಒಂದು ಸಾವಿರ ರೂಪಾಯಿ ಇರುತ್ತದೆ ಎಂದು ಇಟ್ಟುಕೊಳ್ಳೋಣ. ಆದರೆ ಅವರು ಹತ್ತು ಸಾವಿರ ರೂಪಾಯಿ ನೀಡಿದರೆ, ನಾವು ಉಳಿದ ಒಂಬತ್ತು ಸಾವಿರ ರೂಪಾಯಿ ಮರಳಿ ನೀಡುತ್ತೇವೆಯೋ, ಹೇಗೋ, ಒಂದು ವೇಳೆ ನಾವು ಒಂಬತ್ತು ಸಾವಿರ ರೂಪಾಯಿ ಮರಳಿ ನೀಡಿದರೆ ಮಾತ್ರ ಮನಸಾಕ್ಷಿಗೆ ತಕ್ಕಂತೆ ನಡೆದುಕೊಂಡಂತೆ. ಆದರೆ ಹೀಗಾಗಲು ಸಾಧ್ಯವೆ?
ಇಂತಹ ನಿಲುವಿಗೆ ತುಂಬಾ ಆತ್ಮವಿಶ್ವಾಸ, integrety ಬೇಕು.
ಈ ಮನಸ್ಥಿತಿಯನ್ನು ಬಸವಣ್ಣ ಅರ್ಥಪೂರ್ಣವಾಗಿ ವಿವರಿಸುತ್ತಾನೆ. ಹೊನ್ನಿನೊಳಗೊಂದೊರೆಯ, ಸೀರೆಯೊಳಗೊಂದೆಳೆಯ ಇಂದಿಗೆ, ನಾಳಿಂಗೆ ಬೇಕೆಂದನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ ಎಂದು ಖಡಾ ಖಂಡಿತವಾಗಿ ದೃಢ ಸಂಕಲ್ಪದಿಂದ ಹೇಳುತ್ತಾನೆ.
ಬಸವಣ್ಣನಿಗಿರುವ ದೃಢ ಸಂಕಲ್ಪ ನಮಗಿದೆಯೇ? ಎಂದು ಕನಿಷ್ಠ ಆತ್ಮಾವಲೋಕನ ಮಾಡಿಕೊಳ್ಳೋಣ.
ಹೊನ್ನು, ಹೆಣ್ಣು, ಮಣ್ನು ಮಾಯೆ ಎನ್ನುತ್ತಲೇ, ಅದನ್ನು ಸುಂದರವಾಗಿ ನಿರಾಕರಿಸುತ್ತಲೇ, ಸದಾ ಬಯಸುವ, ಬಯಸಿದ್ದನ್ನು ಮುಚ್ಚಿಡುತ್ತಾ ಪಡೆಯಲು ಆಪೇಕ್ಷಿಸುವ ಗೊಂದಲ ಅದೆಂತಹ ಕಿರಿಕಿರಿ.
ಇಂತಹ ಅನೇಕ ಗೊಂದಲಗಳನ್ನು ಎದುರಿಸುತ್ತಲೇ ಬದುಕನ್ನು ನರಕ ಮಾಡಿಕೊಳ್ಳುತ್ತೇವೆ. ಮನಸು ಒಡ್ಡುವ ಐಹಿಕ ಆಸೆಗಳನ್ನು ಪೂರೈಸಲು, ಆಸೆಯೇ ದು:ಖಕ್ಕೆ ಮೂಲ ಎಂದು ದು:ಖಿಸುತ್ತಲೇ ಕಾಲಹರಣ ಮಾಡುವ ವಿಪರ್ಯಾಸಕ್ಕಿಂತ ಹಂತಹಂತವಾಗಿ ಸಾಧ್ಯವಾದಷ್ಟು ನಿರ್ಲಿಪ್ತತೆಯನ್ನು ರೂಪಿಸಿಕೊಳ್ಳೋಣ.

No comments:

Post a Comment