Monday, January 27, 2014

ಕನ್ನಡಕ್ಕಾಗಿ ಚಂಪಾ ತೆಗೆದ ರಂಪಾ


ಗಾಬರಿಯಾಗಿದ್ದಾರೆ ಕನ್ನಡದ
ಕಣ್ ಮಣಿಗಳು ಜ್ಞಾನ
ಪೀಠದ ಮೇಲೆ ಕುಳಿತು
ಪಿಳಿ ಪಿಳಿ ಕಣ್ ಬಿಡುತ
ಯಾಕೆ ಬೇಕಿತ್ರಿ ಆಳುವವರ
ಉಸಾಬರಿ ಎಂದುಸುರುತ್ತಲೇ
ಕನ್ನಡಕ್ಕಾಗಿ ಚಂಪಾ ತೆಗೆದ ರಂಪವನು
ಅಣಕಿಸುತ್ತಾರೆ.
ಸಾಹಿತ್ಯ ಇರುವದೇ ಆಳುವ
ವರ ಹೊಗಳಲೆಂದೇ ಹೊಗಳಿಕೆಗೆ
ಮರುಳಾದ ರಾಜರುಗಳ ಕಿರೀಟಗಳು
ಹಾರಿದವು; ಸಿಂಹಾಸನದ ಕಾಲುಗಳು
ಕೀಲು ಕಳೆದುಕೊಂಡವು. ಹೊಗಳು
ಭಟರು ಕನ್ನಡ ಕನ್ನಡಕ ಬದಿಗಿರಿಸಿ
ಜುಬ್ಬಾ ಸರಿಯಾಗಿಸಿ, ಒಮ್ಮೆ ದಾಡಿ ನೀಟಾಗಿಸಿ
ಎಳೆಯುತ್ತಾರೆ ಆಳುವವರ ತೇರನು
ಕನ್ನಡಕೆ ಕನ್ನ ಹಾಕಿ. ಕುರ್ಚಿ ಕಬಳಿ
ಸಲು, ಸೈಟು ಹೊಡೆಯಲು ಜ್ಞಾನ - ಸು
ಜ್ಞಾನ ಪೀಠಗಳನೇರಲು ಬೇಕೇ ಬೇಕು
ಕನ್ನಡ-ಬೇಕಿಲ್ಲದವರಿಗೆ ಈ ಜಲ
-ನೆಲ-ಜನರ ರಕ್ಷಣೆ ಕನ್ನಡಿಗರಿಗೆ ಇವರು
ಕೊಟ್ಟದ್ದೇ ಕಟ್ಟಪ್ಪಣೆ!
ಸೆಟಗೊಂಡ ರಾಜ
ಕುಮಾರಣ್ಣಗಳು ಕೊಂಚ ವಿಷಣ್ಣರಾದರೂ
ತಪ್ಪಿಸಿಕೊಳ್ಳದೇ ಹಾಡಿದರು ಅದೇ ರಾಗವ
ಕನ್ನಡದ ತಾಳದಿ
ಕ್ಯಾತೆ ತೆಗೆದವರು ಖ್ಯಾತಿ ಪಡೆದವರು
ಸದ್ದಿಲ್ಲದೆ ಏರುತ್ತಾರೆ ನಿಧಾನ
ಸೌಧವ ರಮಿಸುತ್ತಾರೆ ಗದ್ದ ತುಟಿ ಹಿಡಿದು
ಸೆಟಗೊಂಡವರ
ಎಪ್ಪತ್ತರ ಹರೆಯದವರಿಗೆ
-ಆಟ ಹತ್ತಬಾರದು, ಚಂಪಾರ
ಬಾಯಿಗೆ ಭಂಡರು ಸಿಗಬಾರದು.
ಶಿವನ ಮೊಗ್ಗಿನಲಿ ಅರಳಿದ ಕನ್ನಡ
ಕಣ್ಣುಗಳು ಖುಷಿಯಲಿ ಹಾಡಿ
ಹರಸಿವೆ ಕನ್ನಡಕಾಗಿ ಚಂಪಾ
ತೆಗೆದ ರಂಪವನು.
ಬಿರುದು ಬಾವಲಿಗಳ ಹೊಡಕೊಂಡವರು
ಸೆಟಗೊಂಡು ನೇತಾಡುತಿಹರು ತೊಗಲು
ಬಾವಲಿಗಳ ಹಾಗೆ ಇಂಗ್ಲಿಷ್ ಟೊಂಗೆಯಲಿ
.

No comments:

Post a Comment