Thursday, February 20, 2020

Resume

CURRICULUM  VITAE

A self evaluation:

Experiences from the journey from a backward village like Karatgi in Gangavathi Taluk of Hydearabad-Karnataka region to Bangalore have shaped  my personality. There were only two choices - accept a life of limited opportunities or strive to move forward, taking on the contemporary challenges of the 21st century knowledge society.
I have consciously opted for the latter and tried to achieve personal success without compromising relevance to society.  In addition to my resolve to succeed, studies in Literature have helped me to draw inspiration from the rich experiences captured in letters by the great minds. 
My travel within the country and abroad provided me valuable personal experiences  to evaluate the situation and relate it to the societal needs. I also discovered that I had some ability to write in Kannada; a series of articles in Vikranta Karnataka, collection of poems, a travelogue and a few editorials emerged out of this ability.  Although the above seem to be mutually exclusive of each other, I have tried to bind them together in a common thread of Human Resource Management and Training for enhanced efficiencies.
Besides my parents, many accomplished personalities with their  unique abilities of immense social value have influenced my thoughts: the humility of my learned Professors, insightful analytical abilities, encyclopedic knowledge of Karnataka’s current affairs combined with a concern for social justice and equity of Prof. R.M.Ranganath and the honesty, integrity, efficiency synergistically combined with compassion in the personality of various scholars– all have left an indelible print in my mind. I consider extremely lucky and blessed for the opportunities to associate myself with these great contemporary minds.

In sum, I have so far succeeded in combining  learning and training (hopefully in the right proportions) to perform as a socially responsible person, willing to swim in the challenging seas of 21st century opportunities, without of course forgetting  my obligations to contribute  meaningfully to the societal needs. 

                             ***
                   
Name:     Siddu B. Yapalaparvi s/o Shri Basavarajappa
Department of English, “Sharanarthi, #123, Vishweshwarayya Nagar, Kalasapur Road, GADAG-582 103.
siddu.yapal@gmail.com.
94483-58040.

Date and Place of Birth:     01-06-1964; Karatgi, Koppal District, Karnataka State, India.

Academic Qualifications:  1989;M.A. (English) 1986; MBA (Human Resource Management) 2006; Ph.D.: on the topic “Rabindranath Tagore and Kannada Poetry. ( Yet to be awarded )

Professional Experience: Lecturer in English, KVSRPU College, Gadag since 1993, Guest Faculty for MA (English) KSS College, Gadag; Human Resource Training since 2004 to various organizations.

Member of the Governing Council, Kannada University, Hampi (1999-2002)
Public Relation Officer, Bangalore University (on deputation in 2011-12)

Publications and other
Academic accomplishments: 1)Nelada Mareya Nidhana – a collection of poems
           in  Kannada (2007);

2)  Ettana Maamara, Ettana Kogile – a Travelogue in UK – in Kannada (2009)

3) Ondu Birugaliya Kathe ( Kannada translation of National Best Seller English novel Losing My Religion of Vishwas Mudagal in 2016)

4) Pisumathugal Jugal ( Poetry Jugal writing with Kavyashree Mahagaonkar in 2017 )

5) Asangatha Barahagalu ( Collection of Essays written in the blog in 2017)

5) Magalai Hudugana Paren Turu ( Revised Edition of England Travelogue in 2018 )

6) Invited columns in the Kannada Weekly “Vikranta
       Karnataka” (Editor- Ravindra V. Reshme) on topics
       Literature, Tourism,Fine        Arts and Current Affairs
7)   Delivered invited lecturers on “Vachana Sahithya” in
      Kannada as well as English; Personality Development
      Programmes  to students, Government officials,
      NGOs, College Teachers and other Professional
      Corporate Institutions
8)  Editor – of several Kannada Books by upcoming
      authors
9)Awarded a Silver Medal and National Award  in recognition of extending quality training to officilas, Survey of census during 2001

10) Travel abroad: Visited UK in 2009. Visits to the heritage homes of literary giants of all times – William Shakespere  and  William Wordsworth.

Social and Electronic Media

YouTube Talks- #Life_Guru video talks are regularly uploaded in Namma Kannada YouTube channel on life skill topics.

Basava TV - Vachana Marga discourse on Vachanas of Lord Basaveshwar and others in Renowned Kannada spiritual channel Basava TV.

DD- Chnandana- Special interview on the contribution of Education,literature and Life skill programs in Shubhodaya Karnataka which has won the hearts of million viewers.

Blog Writings

Regular updates on current topics through blog sidduyapalaparavi.blogspot. com.

Portal Media

Articles writing in Namma Kannada, Avadhi, The Deccan News and Bookbramha portal magazines.

Spiritual and Personality Development Camps are conducted regularly to empower youths and corporate employees.

Biography Byasarillada Jeeva

Over all contribution to various fields is penned in the biography of Siddu Yapalaparvi Byasarillada Jeeva ( Life Guruvina Life) by Kavyashree Mahagaonkar in the publication of Desi Prakashana Bengaluru in 2019.

Monday, January 27, 2020

ತಪ್ಪು ಬಿಗಿದಪ್ಪು

ತಪ್ಪು ಒಪ್ಪು ಬಿಗಿದಪ್ಪು 

ನೀನು ಹೇಳದೇ ಕೇಳದೇ ಬರಲಿಲ್ಲ

ಕರೆದಾಗ ಬಂದೆನೆಂಬುದೊಂದು ಮಿಥ್ 

ಮಿಥ್ಯವೂ ಅಲ್ಲ‌ ಸತ್ಯದ ಒಳಗಡಗಿರುವ 

ಮಿಥ್ಯ 

ಬಯಲ ಆಲಯದೊಳಗೆ ಸಾರಿ ಸಾರಿ 

ಹೇಳಲಾಗದು ನೀ ನನ್ನವಳು ನಾ

ನಿನ್ನವನೆಂಬ ನಿಗೂಢ ನಿಧಿ ನೀ 

ಹೇಳದಿದ್ದರೂ ಭ್ರಾಂತಿಯಲಿ ಅಗೆದು 

ಹುಡುಕಿ ತಡಬಡಿಸಿ ಕೆಬರಾಡುವ 

ಮನಸುಗಳ ಕಳವಳಕೆ ನಾವು 

ಸಿಗದ ನೆಲದ ಮರೆಯ ನಿಧಾನ 

ಹೊಣೆ ಅಲ್ಲ ಅವಾಸ್ತವದ ಸತ್ಯಕೆ 

ಯಾರೂ ಆದರೂ ಹೊಣೆ ನಾವು 

ನಮ್ಮ ನಮ್ಮ ಮೂಗಿನ ನೇರದ 

ಅನುಸಂಧಾನದ ಗುಂಗಲಿ ಸತ್ಯ 

ಕೇಳಲು ಇಲ್ಲ ಈಗ ಪುರುಸೊತ್ತು 

ನಡೆದದ್ದೇ ದಾರಿ ಹುಡುಕಿದ್ದೇ ಮಾರ್ಗ 

ಕಾಯುವವ ಕೊಲ್ಲಲಾರನೆಂಬ ನಂಬಿಗೆ

ಅದೇ ಬದುಕ ಬಾಳಾಗಿಸಿದೆ ತಲೆ ದಿಂಬಿಗೆ 

ದೇಹ ದೇವಾಲಯವಾದಾಗ ಮನಸು 

ದೇವತೆ ಮಿಲನ ಸಡಗರದಲಿ 

ಹಗಲು ರಾತ್ರಿ ಒಂದೇ ಬಿಗಿದ ಬಂಧನಕೆ 

ತಪ್ಪು ಯಾವುದು ಯಾರದು 

ಮನದ ಮುಂದಣ ಆಸೆ ಹೌದು

ಬೇಕಿತ್ತು ಬೇಕಾಗಿದೆ ಬೇಕಾಗುತ್ತೆ 

ಮುಂದೆಯೂ ಗೊತ್ತಿದ್ದು ಮಾಡಿದ 

ತಪ್ಪಿಗೆ ದೇವನೊಪ್ಪಿಗೆ ಮಾಡಿದ 

ತಪ್ಪಲೂ ತಪ್ಪದ ಸಡಗರದ ಅನು

ಸಂಧಾನದ ಸವಿಗಾನ 

ಮೈಮನಗಳ ಮಿಲನದಾಸೆಗೆ ಬರುವ

ಸಾವಿರದ ನೋವಲು ಮಧುರ ಸವಿ

ಜೇನು ಗೊತ್ತಿದ್ದೂ ಮಾಡುವ ತಪ್ಪಲೂ

ಜೇನು ತುಪ್ಪ 

ನಮಗೆ ನಾವೇ ಹೊಣೆಗಾರರು 

ನಮ್ಮ ಸಂಭ್ರಮದ ಸಂಕಟಕೆ 

ತಪ್ಪುಗಳ ಸರಮಾಲೆಯಲಿ ಸುಖದ

ಪರಿಮಳದ ಘಮಲು ಸವಿಯಲು 

ಯಾರಪ್ಪಣೆ ಬೇಡ ಹೊರಡೋಣ 

ನಡೆ ದೂರ ಬಹು ದೂರ...

Tuesday, January 14, 2020

ಮಠಗಳ ಮಿತಿ

ಮಠಗಳ ಮಿತಿ ಮತ್ತು ರಾಜಕಾರಣ

ಕಳೆದ ಕೆಲವು ವರ್ಷಗಳಿಂದ ರಾಜ್ಯದ ಗೌರವಾನ್ವಿತ ಮಠಾಧೀಶರು ತಮ್ಮ ಸಂಯಮ ಕಳೆದುಕೊಂಡವರಂತೆ ವರ್ತಿಸುತ್ತಿರುವುದು ಧಾರ್ಮಿಕ ವಿಪರ್ಯಾಸ.

ಮಠಗಳು ಅಧ್ಯಾತ್ಮ ಮತ್ತು ಶ್ರದ್ಧಾ ಕೇಂದ್ರಗಳಾಗಬೇಕು.

ಸಂಸಾರಗಳಿಗೆ,ಲೌಕಿಕರಿಗೆ ಮನಸಿಗೆ ಬೇಸರವಾದಾಗ ಕಾಲ ಕಳೆದು ನೆಮ್ಮದಿ ನೀಡುವ ಶಾಂತಿ ಧಾಮಗಳಾಗಬೇಕು.

ಸಮಾಜದ ಪ್ರತಿಯೊಂದು ಜಾತಿ,ಧರ್ಮದ ಪೀಠಾಧಿಪತಿಗಳು ತಮ್ಮ ಪೀಠಗಳ ಅಧಿಕಾರವನ್ನು ತಮ್ಮ ಸಮಾಜದ ರಾಜಕಾರಣಿಗಳಿಗೆ ಮೀಸಲಿಟ್ಟವರಂತೆ ಅಸೂಕ್ಷ್ಮವಾಗಿ ದಯವಿಟ್ಟು ವರ್ತಿಸಬಾರದು. 

ರಾಜಕೀಯ ವ್ಯವಸ್ಥೆಯಲ್ಲಿ ಪ್ರತಿಯೊಂದು ಪಕ್ಷಗಳು ತಮ್ಮ ಸಿದ್ಧಾಂತ ಮತ್ತು ಆಂತರಿಕ ಪರಸ್ಥಿತಿಗನುಗುಣವಾಗಿ ರಾಜಕೀಯ ನಿರ್ಧಾರ ತೆಗೆದುಕೊಳ್ಳುತ್ತವೆ.

ಪಕ್ಷದ ಶಾಸಕಾಂಗ ಸಭೆ ಮತ್ತು ಪದಾಧಿಕಾರಿಗಳು ತೆಗೆದುಕೊಳ್ಳಬಹುದಾದ ಆಂತರಿಕ ನಿರ್ಣಯಗಳ ಕುರಿತು ಧಾರ್ಮಿಕ ಮಠಗಳು ಬಹಿರಂಗ ಚರ್ಚೆ ಮಾಡುವುದು ಅಕ್ಷಮ್ಯ.

ಯಾವುದೇ ಧರ್ಮ ಮತ್ತು ಸಿದ್ಧಾಂತ ಈ ರೀತಿ ಆದೇಶ ಮಾಡುವ ಅಧಿಕಾರ ನೀಡಿಲ್ಲ ಎಂಬುದನ್ನು ಮಠಾಧೀಶರು ಅರಿತು ಮಾತನಾಡಬೇಕು.

ಈ ಎಲ್ಲ ಬೆಳವಣಿಗೆಯನ್ನು ಗಮನಿಸಿದರೆ ಸ್ವಾಮಿಗಳು ಸುಮ್ಮನಿರುವ ಹಾಗೆ ಕಾಣುವುದಿಲ್ಲ ಅವರನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಆಯಾ ಮಠಗಳ ಭಕ್ತರೇ ಹೊರಬೇಕು.

ಇಲ್ಲವೇ ರಾಜಕೀಯ ನಾಯಕರು ಮಠಗಳಿಗೆ ಹೋಗುವುದಕ್ಕೆ ಸ್ವಯಂ ನಿಯಂತ್ರಣ ಹೇರಿಕೊಂಡು ಎದುರಾಗುವ ಮುಜುಗರದಿಂದ ಪಾರಾಗಬೇಕು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಶಾಸಕ ಎಲ್ಲ ಧರ್ಮದವರಿಂದ ಚುನಾಯಿತರಾಗಿರುತ್ತಾರೆ. ಗೆದ್ದ ಮೇಲೆ ದಿಢೀರ್ ಎಂದು ಒಂದು ಕೋಮಿನ ಪ್ರತಿನಿಧಿಯಂತೆ ವರ್ತಿಸಿ ಮತದಾರರಿಗೆ ಅವಮಾನ ಮಾಡಬಾರದು.

ಮಠಾಧೀಶರು ಅಷ್ಟೇ, ಅವರು ಸರ್ವ ಧರ್ಮಗಳ ರಕ್ಷಕರಂತೆ ನಡೆದುಕೊಳ್ಳಬೇಕು.

ಮಾಧ್ಯಮಗಳ ಎದುರು ಮತ್ತು ಸಾರ್ವಜನಿಕ ಸಭೆಗಳಲ್ಲಿ "ನಮ್ಮ ಜನಾಂಗದವರಿಗೆ ಸಚಿವ ಸ್ಥಾನ ನೀಡದಿದ್ದರೆ ನೋಡಿ " ಎಂಬರ್ಥದ ಮಾತುಗಳನ್ನು ಆಡಬಾರದು.

ಸಾರ್ವಜನಿಕ ಸಮಾರಂಭದಲ್ಲಿ, ಮಾಧ್ಯಮಗಳ ಎದುರು, ಮತ್ತೆ ಕೆಲವರು ವಿಧಾನ ಸಭೆ ಪ್ರವೇಶಿಸಿ ಈ ರೀತಿ ಹಕ್ಕೊತ್ತಾಯ ಮಾಡುವುದು ಒಂದು ಸಾಮಾಜಿಕ ಮುಜುಗರ ಮತ್ತು ಅವಮಾನ.

ಈ ಕುರಿತು ಮಠಾಧೀಶರೊಂದಿಗೆ ಚರ್ಚೆ ಮಾಡುವುದು ಮುಖ್ಯಮಂತಿಗಳಿಗೆ ಸಾಧ್ಯವಾಗುವುದಿಲ್ಲ ಆದ್ದರಿಂದ ತಮ್ಮ ಪಕ್ಷದ ಶಾಸಕರಿಗೆ ಈ ರೀತಿ ಧಾರ್ಮಿಕ ಒತ್ತಾಯ ಹೇರದಂತೆ ತಾಕೀತು ಮಾಡಲೇಬೇಕು. ಇಲ್ಲದೇ ಹೋದರೆ ಅವರ ವೈಯಕ್ತಿಕ ನೆಮ್ಮದಿ ನಾಶವಾಗಿ, ಸಾಮಾಜಿಕ ಅರಾಜಕತೆಯೂ  ಉಂಟಾಗಬಹುದು.

ಅಲ್ಲದೆ ಸಾಧ್ಯವಾದಷ್ಟು ಮಠಗಳಿಗೆ ಹೋಗುವುದನ್ನು ನಿಲ್ಲಿಸಿ ಜನರ ಮೂಲಭೂತ ಸಮಸ್ಯೆಗಳನ್ನು ಆಲಿಸಲು ಜನರ ಬಳಿ ಹೋಗುವುದು ಒಳಿತು.

ಭಕ್ತರ ಮನಃಶಾಂತಿ ಕಾಪಾಡುವ ಧ್ಯಾನ, ಅಧ್ಯಾತ್ಮ ಮತ್ತು ಯೋಗ ಸೂತ್ರಗಳನ್ನು ಬೋಧನೆ ಮಾಡಬೇಕಾದ ಮಠಗಳು ನೇರ ರಾಜಕೀಯ ಅಖಾಡಕ್ಕೆ ಇಳಿದರೆ ಸಾಮಾನ್ಯ ಭಕ್ತರು ನೆಮ್ಮದಿಗಾಗಿ ಇನ್ನೆಲ್ಲಿಗೆ ಹೋಗಬೇಕು?

ಹಾಗಂತ ಮಠಾಧೀಶರು ರಾಜಕೀಯ ನಾಯಕರುಗಳಿಗೆ ಮಾರ್ಗದರ್ಶನ ಮಾಡಬಾರದು ಎಂದು ಅರ್ಥವಲ್ಲ ಅವರ ಮಾರ್ಗದರ್ಶನ ಒಟ್ಟು ಸಮುದಾಯದ ಅಭಿವೃದ್ಧಿ ಪರ ಇರಬೇಕು.

ಅದೂ ಈ ರೀತಿ ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಹೇಳದೇ ವೈಯಕ್ತಿಕ ನೆಲೆಯಲ್ಲಿ ಸಂಯಮದಿಂದ ಚರ್ಚೆ ಮಾಡಬೇಕು. 

ಶಾಸಕರು ತಮ್ಮ ಸಮಾಜದ ಸ್ವಾಮಿಗಳ ಪ್ರಭಾವಕ್ಕಿಂತ, ವೈಯಕ್ತಿಕ ಸಾಧನೆ ಮೂಲಕ ಸ್ಥಾನಮಾನ ಪಡೆದುಕೊಂಡು ಪ್ರಜಾಪ್ರಭುತ್ವ ಮತ್ತು ನಾಡಿನ ಮತದಾರರ ಮಾನ ಕಾಪಾಡಲಿ ಎಂದು ಈ ರಾಜ್ಯದ ಸಾಮಾನ್ಯ ಪ್ರಜೆಯಾಗಿ ನಿವೇದಿಸುವೆ.

#ಸಿದ್ದು_ಯಾಪಲಪರವಿ.

Sunday, January 5, 2020

ಸಂಬಂಧನಗಳ ಹುಡುಕಾಟ

*ಹೊಸ ವರ್ಷ ಆದರೂ ಹಳೆ ವರಸೆ: ಸಂಬಂಧನಗಳ ಹುಡುಕಾಟ*

ಹೊಸ ವರ್ಷ ಬಂತು ಆದರೆ ವರಸೆ ಮಾತ್ರ ಬದಲಾಗಲಿಲ್ಲ,ಮಾತುಕತೆ, ಆಲೋಚನಾ ಕ್ರಮ ಎಲ್ಲ ಹಾಗೆಯೇ ಮುಂದುವರೆದಿದೆ.
ಇದು ಇಂಗ್ಲಿಷರ ಹೊಸ ವರ್ಷ ನಮ್ಮದಲ್ಲ ಎಂಬ ಮಾತುಗಳ ಮೂಲಕ ನಮ್ಮ ಸಣ್ಣತನದ ಪ್ರದರ್ಶನ.
ಹಾಗೆ ಹೇಳುತ್ತಲೇ ಕಾಲ ಕಳೆಯುವ ಆಷಾಢಭೂತಿಗಳು ನಾವು.
ಎಲ್ಲಾ ಬೇಕು ನಖರಾನೂ ಹಂಗೆ.

ನಿನ್ನೆ ಸಭೆಯೊಂದರಲ್ಲಿ ಮಾತನಾಡುವಾಗ 'ಟೆಕ್ನಾಲಜಿ ದಾಸರಾಗಿ ನಾವು ಮಾನವೀಯ ಸಂಬಂಧಗಳ ಕಳೆದುಕೊಂಡಿದ್ದೇವೆ.
ಪಾರ್ಕಿನಲ್ಲಿ ಕುಳಿತ ಪ್ರೇಮಿಗಳು ಮಾತಾಡುವುದ ಮರೆತು ತಮ್ಮ ಮೊಬೈಲ್ ಜೊತೆ ಕಾಲ ಕಳೆಯುವುದು ದೊಡ್ಡ ದುರಂತ. ಸುಂದರವಾದ ಹುಡುಗಿ,ಪ್ರೀತಿಸುವ ಮಕ್ಕಳು, ಜವಾವ್ದಾರಿಯುತ ಗೆಳೆಯರು ಯಾರೂ ಬೇಡವಾಗಿದೆ' ಮಾತು ಕೇಳಿದವರಿಗೆ ಹೌದೆನಿಸಿತು.

ಈಗ ಮೊಬೈಲ್ ಫ್ರೀ ಆದರೆ ಮಾತುಗಳೇ ಮಾಯ!
ಏನೋ ಧಾವಂತ,ವ್ಯಕ್ತಿ ಕೇಂದ್ರಿತ ಬದುಕು. ಕೆಲಸ ಇಲ್ಲದೇ ಭೇಟಿ, ಮಾತುಕತೆ, ಹರಟೆಗೆ ಜನ ಬೇಡವೇ ಬೇಡ. ಮಹತ್ವದ ಕೆಲಸ ಇದ್ದರೆ, ದೌಲತ್ತಿಗೆ ಅಧಿಕಾರ ಇದ್ದರೆ ಮಾತ್ರ ಜನ ಬರ್ತಾರೆ,ಮಾತಾಡಿಸ್ತಾರೆ ಇಲ್ಲ ಅಂದರೆ ಗೋವಿಂದ.
ತಿಂಗಳುಗಟ್ಟಲೆ ಫೋನು ಇಲ್ಲ.

ಉದ್ಯೋಗ ಸ್ಥಳಗಳಲ್ಲಿ ಅದೇ ಪೈಪೋಟಿ, ಕೆಲಸದ ಒತ್ತಡ. ದುಡಿಯುವ ಮನಸುಗಳಿಗೆ ಒತ್ತಡ ನೀಗಿಸಲು ಆತ್ಮೀಯರ ನಿಷ್ಕಲ್ಮಶ ಮಾತು,ಪ್ರೀತಿ, ಸ್ನೇಹ ಬೇಡವಾಗಿ ಬಿಟ್ಟದೆ.
ಏನಿದ್ದರೂ 'ಕಾಮಾ ಪೂರ್ತಿ ಮಾಮಾ' ಅನ್ನೋ ಮತಲಬ್ ಕಿ ದುನಿಯಾ.

ಕಾಡು ಹರಟೆ, ಆರೋಗ್ಯ ಪೂರ್ಣ ಚರ್ಚೆ ಸಿಗಬೇಕಾದರೆ ಒಂದಿಷ್ಟು ಹಿರಿಯರ ಬೆಳಗಿನ ವಾಕ್ ಸಮಯದಲ್ಲಿ, ಅವರು ಏಕತಾನತೆಯ ದೇಶಾವರಿ ಮಾತುಕತೆ, ಯಾವುದೇ ಆತ್ಮೀಯತೆಯಾಗಲಿ, ಪ್ರಾಮಾಣಿಕತೆಯಾಗಲಿ ಕಾಣುವುದಿಲ್ಲ.

ಎರಡು ದಶಕಗಳ ಹಿಂದೆ ಪ್ರೀತಿ, ಪ್ರೇಮ ಅಫೇರುಗಳ ನೆಪದಲ್ಲಿ ಜನ ಪರಸ್ಪರ ಸಾಂಗತ್ಯಕ್ಕಾಗಿ ಹಾತೊರೆಯುತ್ತಿದ್ದರು.
ಈಗ ಹಾದರದ ಅನುಸಂಧಾನ ಮಾಯವಾಗಿ ಅಲ್ಲಿ ಕಾಮವೂ ಡೇಟಿಂಗ್ ವ್ಯವಹಾರದ ಸರಕಾಗಿ ಹೋಗಿರುವುದು ಮನುಷ್ಯ ಸಂಬಂಧಗಳ ದುರಂತ.
ರಂಗು ರಂಗಿನ ಪ್ರೇಮ ಕಥೆಗಳ ಕಳಕೊಂಡ ಹಳವಂಡ.

ವೃತ್ತಿಯಿಂದ ನಿವೃತ್ತರಾದವರ ಪಾಡಂತು ಹೇಳತೀರದು.
ಮೈಯಲ್ಲಿ ಕಸುವು ಮಾಯಾವಾಗಿ ಮನಸು ಮೃದುವಾಗಿ ದರ್ಪ ಕಳಕೊಂಡು ಬಿಟ್ಟಿರುತ್ತಾರೆ.
ಹುಲಿಯಂತೆ ಉನ್ನತ ಹುದ್ದೆಗಳಲ್ಲಿ ಮೆರೆದವರು ಇಲಿಯಾಗಿ ಮೂಲೆ ಸೇರಿಕೊಂಡಾಗ ಯಾರೂ ಕೇರ್ ಮಾಡುವುದೇ ಇಲ್ಲ.

ದೇಹ ಮುಪ್ಪಾದರೂ ಒಳಗಿನ ಜೀವಚೈತನ್ಯಕೆ ಮುಪ್ಪು ಇರುವುದಿಲ್ಲ ಎಂಬುದನ್ನು ಕೆಲವರು ಮರೆತು ಬಿಡುತ್ತಾರೆ.
ಓದು,ಬರಹ,ಸಂಗೀತ, ಸಿನೆಮಾ ಮತ್ತು ಸಂಸ್ಕೃತಿಗಳ ಒಡನಾಟ ಇಲ್ಲದವರು, ಕ್ರಿಯಾಶೀಲ ಚಟುವಟಿಗಳ ಹವ್ಯಾಸ ಇಲ್ಲದವರು ಒಂಟಿತನದಿಂದ ನರಳಿ ಬೇಗ ಇನ್ನೂ ಮುದುಕರಾಗಿ ಹೊಸ ತಲೆಮಾರಿನ ಹುಡುಗರ ಬೈಯುತ್ತ ಎಲ್ಲರಿಗೂ ಬೇಡವಾಗುತ್ತಾರೆ.

ಟಿವಿಯಲ್ಲಿ ಬರುವ ಧಾರಾವಾಹಿಗಳ ಕಥೆಯೂ ಅದೇ.
ಅದೇ ಜಗಳ,ದ್ವೇಷ ಇಬ್ಬರು ನಟಿಯರಲ್ಲಿ ಒಬ್ಬಳು ವಿಲನ್… ಇಂತಹ ಕೆಲಸಕ್ಕೆ ಬಾರದ ಅವಾಸ್ತವ ಕತೆಗಳಲ್ಲಿ ಹೆಣ್ಣುಮಕ್ಕಳು ಕರಗಿ ಹೋಗಿದ್ದಾರೆ.

ಮನಸಿಗೆ ಮುದ ನೀಡುವ ಸಂಗೀತ ಆಲಿಸುವ, ಮಹತ್ವದ ಪುಸ್ತಕಗಳನ್ನು ಓದುವ, ಸರಿ ಕಂಡಂತೆ ಬರೆಯುವ ಹವ್ಯಾಸ ಇರದಿದ್ದರೆ ಬದುಕು ನೀರಸವಾಗಿ ಬಿಡುತ್ತದೆ.

ಕೆಲಸವಿಲ್ಲದಿದ್ದರೆ ಬರಲಾಗದ ಗೆಳೆಯರಿಗಾಗಿ ಕಾಯದೇ ನಿಮ್ಮ ಪಾಡಿಗೆ ವೈಯಕ್ತಿಕ ಸಾಂಸ್ಕೃತಿಕ ಲೋಕ ಸೃಷ್ಟಿ ಮಾಡಿಕೊಂಡು ಬದುಕಿದರೆ ಬದುಕು ಸಹನೀಯವಾದೀತು.

ಮುಪ್ಪಾದ ದೇಹವ ಶಪಿಸದೇ ಸಂಗಾತಿ ಜೊತೆ ಪ್ರೀತಿಯಿಂದ ಕಾಲ ಕಳೆಯುವ ಔದಾರ್ಯ ಈಗ ಅನಿವಾರ್ಯ.
ದೇಹಕ್ಕಿಂತ ಮನಸು ದೊಡ್ಡದು, ಕಾಮಕ್ಕಿಂತ ಪ್ರೇಮ ಹಿತಕಾರಿ ಅಂದುಕೊಂಡಾಗ ಬದುಕು ಬಾಳಾಗುತ್ತದೆ.
ಒಂಟಿತನ ಸುಂದರ ಏಕಾಂತವಾಗುತ್ತದೆ.
ಕಾಮದ ಕಸುವು ಮಾಯವಾದಾಗ ಪ್ರೇಮ, ಬಿಸಿ ಅಪ್ಪುಗೆ, ಮುದವಾದ ಮುತ್ತಿಗೂ ಬಡತನ ಇರಬಾರದು.
ಒಮ್ಮೆ ಅಲೋಚನೆ ಬದಲಿಸಿ ನೋಡಿ ಬದುಕು ಬಾಳಾಗಿ ಝಗಮಗ ಬೆಳಗಲು.

Sunday, September 8, 2019

ಹೊಸ ಇತಿಹಾಸ

ಈಗ ಹೊಸ ಇತಿಹಾಸ

ಯಾರೂ ಊಹಿಸಲಾಗದ ಕೊಡಲಾಗದ  ನೀಡಲಾಗದ
ಯಾರಿಗೂ ಕೊಡಲು ಬಾರದ ಕೊಡಲು ನಿರಾಕರಿಸಿದ ಅನುರೂಪದ ಕಾಣಿಕೆಯ ಅಂಗೈಯಲಿ ಹಿಡಿದು ನಸು ನಕ್ಕಾಗ ಬೆಚ್ಚಿ ಬೆರಗಾದೆ.

ಬಿಡಲಾಗದೆ ಚಡಪಡಿಸಿ ಅಂಗಲಾಚಿ
ಬೆಂಬಿಡದ ಭೂತ ನಾ ಎಂದರಿತ
ನೀ ಕೊಂಚ ಅರಳಿದೆ ಕೆರಳದೆ

ನಿಧಾನದಿ ತೂರಿ ಬಂದ ಭಾವ
ಬಂಧಗಳಲಿ ಬಂಧಿಯಾದೆ ಶಬ್ದಗಳ
ದಿವ್ಯಾಲಂಕಾರದ ಹೊಳಪಿಗೆ

ನಿತ್ಯ ನಿನ್ನ ಧ್ಯಾನಿಸುತಿರೆ ಇನ್ನೇನು
ನಿನ್ನ ಅಂತರಂಗದಿ ಅವಿತು ದುಃಖಿಸುವ ಗಾಯಗಳಿಗೆ ಮುಲಾಮು ಸಿಕ್ಕಾಗ
ಕರಗಿ ನೀರಾಗಿ ನೀನಾಗಿ ನೀನೇ
ಕೈಹಿಡಿದು ಮೇಲೆ ಬಂದೆ

ಮನದ ತಳಮಳ ಮಂಗಮಾಯ
ಅಂತ್ಯಗೊಂಡ ದುಗುಡ

ಚಾರಿತ್ರ್ಯದ ಸೋಗಿನ ಮುಖವಾಡದ
ಮುಸುಕ ಕಳಚಿ
ಹಂಗ ಹರಿದು ಸಂಗ
ಬೇಡಿ ಓಡೋಡಿ ಬಂದೆ

ತೋಳಬಂಧನದಿ ಕರಗಿ ಹೂತಾಗ ಸವಿಮುತ್ತುಗಳ ಸರಮಾಲೆ ತೊಡಿಸಿ

ಮೇಲೆಳೆದು ಅಡಿಯಿಂದ ಮುಡಿಯವರೆಗೆ ನಾಲಿಗೆಯ ನರ್ತನ

ಹಗಲು ರಾತ್ರಿಯಾಗಿ ಮೈಮನಗಂಟಿದ
ಲಜ್ಜೆ ಸರ ಸರ ಜಾರಿ ಅರಳಿದ
ಪರಿಗೆ ಇನ್ನಿಲ್ಲದ ತಲ್ಲಣ

ಮೈಮನಗಳ ಚಲ್ಲಾಟದಲಿ ಉಕ್ಕಿ ಹರಿದ ಉನ್ಮಾದಕೆ ಚಿಮ್ಮಿದ ರಸಧಾರೆ

ಕಳೆದು ಹೋದ ಇತಿಹಾಸದಲಿ
ಒಲುಮೆಯ ಒಲವಿಲ್ಲದ ಮುಗಿದ ಅಧ್ಯಾಯದಲಿ ಸಂತಸಕಿರಲಿಲ್ಲ
ಕೊಂಚವೂ ಜಾಗ

ಅನುಮಾನ , ಅಪಮಾನಗಳಲಿ ಬೆಂದು
ಬಾಡಿ ಹೋದ ಭಾವನೆಗಳು ಕರಗಿ
ಹೋದ ಕನಸುಗಳು

ಅಯ್ಯೋ ಈ ಹೇಸಿ ಬದುಕೇ ಎಂದು
ಹಳಹಳಸಿ ಉನ್ಮಾದಗಳ ಅದುಮಿಟ್ಟ ಜೀವಕೀಗ ಇನ್ನಿಲ್ಲದ ಹೊಸ ಚೈತನ್ಯ

ಪ್ರೀತಿ-ಪ್ರೇಮ-ಪ್ರಣಯದಾಟದ ಗಮ್ಮತ್ತಿಗೆ
ಹಾರಿ ಹಾಡಿ ಕುಣಿದು ಕುಪ್ಪಳಿಸುವ
ಮನಕೀಗ
ಎಲ್ಲವೂ ನೀನೇ ನಿನಗೆ ನಾನೇ
ಎಂದು ಹಾಡುವ  ಹಾಡಿಗೆ
ಲಯ ರಾಗ ತಾಳ
ಎಲ್ಲವೂ ನೀನೇ ನೀನೇ.

---ಸಿದ್ದು ಯಾಪಲಪರವಿ

ಅಮರ ಪ್ರೇಮ

ಅಮರ ಪ್ರೇಮಕೆ ದೇವನೊಲುಮೆ

ಬಾನಲಿ ಹಾರಾಡುವ ಜೋಡಿ
ಹಕ್ಕಿಗಳೇ ಎಷೊಂದು ಉಲ್ಲಸಿತ
ಹಾರಾಟ ದಣಿವರಿಯದ ಸಂಚಲನ

ರೆಕ್ಕೆ ದಣಿದು ಹಾಡು ಮುಗಿದ
ಮೇಲೆ
ಒಂದಿಷ್ಟು ಕೊಂಬೆ ಮೇಲೆ
ವಿರಮಿಸಿ ಗುಟಕುಗಳ
ವಿನಿಮಯದ ಕಚಗುಳಿ
ಮತ್ತದೇ ಹಾರಾಟ
ಬಾನಂಗಳದಲಿ

ಬೇಟೇಗಾರರು ಬಂದಾರು
ನಿಮ್ಮನು ಕೊಂದಾರು ಎಂದಿಲ್ಲದ
ಭೀತಿ
ನಿಮಗೆ ನಿಮದೇ ಆದ
ಧಾಟಿ

ಜೋಡಿ ಸಿಕ್ಕ ಮೇಲೆ ಸಾವಿಗಿಲ್ಲ
ಭೀತಿ
ಒಮ್ಮೆ ಸಾಯುವುದು ಇದ್ದೇ ಇದೆ

ಬದುಕನನುಭವಿಸುವ ಪರಿಗೆ
ಸಾವಿನ ಹಂಗಿಲ್ಲ ನೋವಿನ
ಗುಂಗೂ ಇಲ್ಲ

ಭಿನ್ನ ಗೂಡುಗಳ ಸೇರಿ ಒಂಟಿಯಾಗಿ
ನರಳುವ ಜಂಜಡವ ದೂಡಿ

ಮತ್ತೆ ಮತ್ತೆ ಮೇಲೇರುವ ಮೇಲೆ
ಹಾರುತಲೇ ಇರುವ ನಿಲ್ಲದ ತವಕ

ತಥಾಸ್ತು ಎಂದಭಯವ ಕರುಣಿಸಿರುವೆ
ಹಾರಿ ಹಾಡಿ ಕುಣಿದು ಜಗದ
ಜಂಜಡವ ಮರೆತು ಮೆರೆಯಲು
ಮನದ ನೋವ ಮರೆಯಲು.

---ಸಿದ್ದು ಯಾಪಲಪರವಿ

Saturday, July 13, 2019

ಕಹಿ ಮತ್ತು ಸಹನೆ

ಕಹಿ ಮತ್ತು ಸಹನೆ

ಅನಿವಾರ್ಯತೆಯೋ,ಅಸಹಾಯಕತೆಯೋ ನಾ ಕಾಣೆ ಎಲ್ಲವನ್ನು ವಿಪರೀತ ಅನ್ನುವಷ್ಟು ಸಹಿಸಿಕೊಳ್ಳುತ್ತೇನೆ. ಪ್ರತಿಯೊಬ್ಬ ವ್ಯಕ್ತಿಯ ವರ್ತನೆಯ ಹಿಂದೆ ಅವನ ಬಾಲ್ಯದ ಘಟನೆಗಳ ಪ್ರಭಾವ ಅಡಗಿರುತ್ತದೆ. ಬಾಲ್ಯದ ಕಾಣದ ಸಂಗತಿಗಳು ಈಗಲೂ ನಮ್ಮನ್ನು ನಮಗೆ ಅರಿವಿಲ್ಲದಂತೆ ಆಳುತ್ತಿರುತ್ತವೆ.ಅಂತಹ ಆಳುವ ಒಂದು ಪ್ರಸಂಗವನ್ನು ಹಂಚಿಕೊಳ್ಳಬೇಕೆನಿಸಿದೆ.

'ಮಗು ಆರೋಗ್ಯವಾಗಿರಲು ನಿತ್ಯ ಮುಂಜಾನೆ ಒಂದು ಲೋಟ ಬೇವಿನ ರಸ ಕುಡಿಸಬೇಕು' ಎಂದು ಅವ್ವನಿಗೆ ಯಾರೋ ಹೇಳಿದ್ದರಂತೆ, ಅದರ ಪ್ರಯೋಗ ನನ್ನ ಮೇಲೆ ಮಾಡಲು ನಿರ್ಧರಿಸಿ, ಮನೆಕೆಲಸದ ಹಿರಿಯ‌ ಮುದುಕಪ್ಪನಿಗೆ ಜವಾಬ್ದಾರಿ ನೀಡಿದ ನೆನಪು.

ಮೊದಲ ದಿನ ವಿಷ ( ಕಹಿಗೆ ಬಳಸುವ ಸಾಮಾನ್ಯ ಪದ) ಕುಡಿಯುವ ಸರದಿ ನನ್ನದು. ವಿಪರೀತ ಕಹಿಯಾಗಿ ವಾಂತಿ ಮಾಡಿಕೊಂಡೆ. ಇಲ್ಲಿಗೆ ಈ ಪ್ರಹಸನ ಮುಗಿಯಬಹುದು ಅಂದುಕೊಂಡೆ. ಮುಗಿಯಲಿಲ್ಲ.
ಮರುದಿನ ನಸುಕಿನಲ್ಲಿ ಎಬ್ಬಿಸಿದಾಗ ಭಯ ಭೀತನಾದೆ, ವಿಷ ಕುಡಿಯುವ ಶಿಕ್ಷೆ ನೆನೆದು.

ಅವ್ವ ಮತ್ತು ಮುದುಕಪ್ಪ ಸೇರಿ ಹೊಸ ಸಂಚು ಹೂಡಿದವರಂತೆ ನಾಲಿಗೆ ಮೇಲೆ ನಾಲಿಗೆ ಗಾತ್ರದ ಪ್ಲ್ಯಾಸ್ಟಿಕ್ ಹಾಕಿ ಮೂಗು ಮುಚ್ಚಿ ನೇರವಾಗಿ ಗಂಟಲಿನಲ್ಲಿ ಬೇವಿನ ರಸ ಸುರುವಿ ವಾಂತಿಯಿಂದ ಪಾರು ಮಾಡಿದರು.
' ಅಯ್ಯೋ ವಾಂತಿಯಾದರೆ ಚನ್ನಾಗಿತ್ತು ಈ ವಿಷ ಕುಡಿಯುವ ಹಿಂಸೆ ತಪ್ಪುತ್ತಿತ್ತು' ಎಂದು ನೆನೆದು ಗಂಭೀರವಾಗಿ ಆಲೋಚನೆ ಮಾಡುತ್ತ ಹೊಟ್ಟೆಯೊಳಗೆ ವಿಷ ಹೇಗೆ ಕೆಲಸ ಮಾಡುತ್ತಿರಬಹುದೆಂದು ಕಲ್ಪಿಸಿಕೊಂಡೆ.

ಹೀಗೆ ಬೇವಿನ ರಸ ಕುಡಿದು ದಕ್ಕಿಸಿಕೊಂಡ ಮಗನಿಗೆ ರೋಗ ರುಜಿನಗಳು ಮಗನಿಗೆ ತಟ್ಟುವುದಿಲ್ಲ ಎಂಬ ಸಮಾಧಾನ ಅವ್ವನಿಗೆ.
ನನಗೋ ಒಳಗೊಳಗೆ ಇನ್ನಿಲ್ಲದ ಆತಂಕ. ಈ ಪ್ರಕ್ರಿಯೆ ತಿಂಗಳುಗಟ್ಟಲೆ ನಡೆಯಿತು.

ನನಗೂ ಅನೇಕ ಕಲ್ಪನೆಗಳು ಆರಂಭವಾದವು. ನಾ ಬಹಳ ಗಟ್ಟಿಯಾದೆ. ಹಾವು ಕಡಿದರೂ ವಿಷ ಏರುವುದಿಲ್ಲ ಎಂಬ ದಂತಕತೆಗಳು ಕಿವಿಗೆ ಅಪ್ಪಳಿಸಲಾರಂಭಿಸಿ ಸಂಭ್ರಮಿಸಿದೆ.
ಮುಂದೆ ಈ ರಹಸ್ಯ ಮಾಹಿತಿ ಅಪ್ಪನ ತಾಯಿ ಅಮರಮ್ಮ ಅಮ್ಮನಿಂದಾಗಿ ಸ್ಪೋಟಗೊಂಡಿತು.
ಆಗ ಜನ ಭಿನ್ನ ವಿಭಿನ್ನ ಸುದ್ದಿ ಹಬ್ಬಿಸಲಾರಂಭಿಸಿದರು.
"ಈ ರಸ ಕುಡಿದರೆ ಮುಂದೆ ಯಾವುದೇ ಔಷಧ ಹತ್ತುವುದಿಲ್ಲ…
ರೋಗ ಬರದೇ ಇರಬಹುದು ಬಂದರೆ ಗುಣವಾಗುವುದೇ ಇಲ್ಲ…ನಾಲಿಗೆ ರುಚಿ ಹಾಳಾಗಿ ಹೋಗುತ್ತೆ..." ಇಂತಹ ಅನಾಹುತ ಸುದ್ದಿಗಳಿಗೆ ಅವ್ವ ಥಂಡಾ ಹೊಡೆದಿರಬೇಕು.

ಮುಂದೆ ಮುದುಕಪ್ಪನ ವಿಷಪ್ರಾಶನ ಪ್ರಸಂಗ ಇದ್ದಕಿದ್ದ ಹಾಗೆ ಬಂದ್ ಆಯಿತೆನ್ನಿ.
ಪ್ರೀತಿ, ಕಾಳಜಿ,ಅನುಕಂಪ,ಅವಮಾನಗಳ ಪ್ರಯೋಗ ಶಾಲೆ ನನ್ನ ಬಾಲ್ಯ.

ದುಂಡು ದುಂಡಾದ ಗುಳಿ ಕೆನ್ನೆಯ‌ ಹುಡುಗನ ತಲ್ಲಣ, ಹುಡುಕಾಟದ ಕುತೂಹಲಗಳಿಗೆ ನನ್ನ ನಾ ಒಡ್ಡಿಕೊಂಡು ಎಲ್ಲ ಪ್ರಯೋಗಗಳಿಗೆ ತೆರೆದುಕೊಂಡು ಜೀವನಾನುಭವ ಹೆಚ್ಚಿಸಿಕೊಂಡೆ.

ಈಗ

ಯಾರು ಎಷ್ಟೇ ಅವಮಾನ ಮಾಡಿದರೂ ಪ್ರತಿಕ್ರಿಯಿಸಿದಿರುವಾಗ, ತಟ್ಟೆಯ ಆಹಾರಕೆ ಹೆಸರಿಡದೆ ಮೌನವಾಗಿ ಊಟ ಮಾಡುವಾಗ, ಮಾಟ ಮಂತ್ರಗಳಿಗೆ ಮನಸು ಹೆದರದೇ ಇದ್ದಾಗ ಈ ಬೇವಿನ ರಸ ಕುಡಿದ ಪ್ರಸಂಗ ನೆನಪಾಗಿ ಮನಸು ನಾಲ್ಕು ದಶಕಗಳ ಹಿಂದೆ ಓಡುತ್ತದೆ.

*ಸಿದ್ದು ಯಾಪಲಪರವಿ*