Monday, January 27, 2014



ಏನು ಬರೆಯಲಿ
ಹೇಗೆ ಹಾಡಲಿ
ನಿನ್ನ ಅನುರೂಪ ಸೌಂದರ್ಯ
ರಾಶಿಯೆದುರು ನಿಂತ ಬಳಿಕ
ನಿನ್ನರಳಿದ ಕಂಗಳು
ಕಸಿದಿವೆ ಅಕ್ಷರಗಳ
ಮರೆಸಿವೆ ಭಾವನೆಗಳ
ಅವ್ಯಕ್ತ ಆಸೆ ಹುಡುಕುತಲಿದೆ
ಎಲ್ಲಿಯಾದರೂ ಸಿಗಬಹುದೆ ನೆಮ್ಮದಿ
ದಿನವು ಈ ದೇಶದ ನಾಗರಿಕರು
ಕಲೆದುಕೊಳ್ಳುತ್ತಿರುವ ಹಕ್ಕುಗಳು
ಹಗಲುಗಳ್ಳರು ಹುಟ್ಟಿಸುತಿರುವ
ಸಮಸ್ಯಗಳ ಸುಳಿಗೆ ಸಿಕ್ಕ ಮನುಷ್ಯರು
ಫೈಲು ಹೊತ್ತು ಅಲೆದಾಡುವ ಪದವೀಧರರಿಗೆ
ನೌಕರಿ ಎಲ್ಲಿ?
ಕಾಡುಗಳ್ಳರ ಬಂಧಿಸಲು ಯತ್ನಿಸುವ
ಪೋಲಿಸರು
ದೇಶ ರಕ್ಷಿಸಲು ಪರದಾಡುತಿರುವ
ರಾಜಕಾರಣಿ
ಇಲ್ಲ,ಇಲ್ಲ, ಇದೆಲ್ಲ ಶುದ್ಧ
ಭ್ರಮೆ, ಕನಸು
ಹೇಗೆ ಸಿಕ್ಕೀತು ತಿರುಗಿ ಬಾರದ
ಎಂದೋ ಕಳೆದುಹೋಗಿರುವ ಕುಸಿಯುತ್ತಿರುವ
ಮೌಲ್ಯ ಈ ಭ್ರಷ್ಟ ದೇಶದಲಿ
ಎಲ್ಲ ಆಸೆಗಳು ಮಣ್ಣು
ಗೂಡಿದರೂ ನಲ್ಲೆ
ನಿನ್ನ ಕಣ್ಣ ಸೆಳೆತ ಕೆಲ
ಕ್ಷಣಕಾದರೂ ಮರೆಸಿದೆ ಎಲ್ಲವ
ಅಸ್ಥಿರ ಬದುಕಿನ ದಿವಾಳಿತನವ

No comments:

Post a Comment