Monday, January 27, 2014

ಬತ್ತಿ ಹೋಗಲಿ ಕಣ್ಣೀರು


ಬತ್ತಿ ಹೋಗಲಿ ಕಣ್ಣೀರು
ನಿತ್ಯ ಗೋಳನು ಕಂಡು
ಸುರಿಯದಂತೆ
ಯಾಕೆ ಅಳಬೇಕು ಹೃದಯ
ಸಿರಿಯಲಿ ಅಡಗಿದ್ದವರು
ತಿರುಗಿ ಬಾರದೆ ಹೋದರೆ
ಅತ್ತರೆ ಆತ್ಮ ಶಾಂತಿ
ಯಾರಿಗೆ?
ಅಳಿದವರಿಗೋ, ಉಳಿದವರಿಗೋ
ದು:ಖ-ದುಮ್ಮಾನ ನಿತ್ಯ ಕಾಡುತಲಿರಲು
ಅರ್ಥವೆಲ್ಲಿದೆ ಈ ಅಳುವಿಗೆ
ನರಳುವ ಜೀವಿಗಳ
ರಸ್ತೆ ಬದಿಯಲಿ ಛಳಿಯಲಿ
ಬೀಳುವವರ ಮೈನಡುಕವ ಕಂಡೋ
ದ್ಯಾಸದಲಿ ಕೊರಗುವ. ಅಕ್ಷರವ
ಅರಿಯದ ಅಮಾಯಕರ ದಂಡುಗಳ ಕಂಡೋ
ಅಳುವದು ಕೊರಗುವದು ಯಾರಿಗಾಗಿ
ಯಾರಿಗಾಗಿ?
ಅದಕೆ ಬೇಡವೇ ಬೇಡ
ಕಣ್ಣೀರು ಬತ್ತಿ ಹೋಗಲಿ
ಮತ್ತೆ ಚಿಮ್ಮದಂತೆ

No comments:

Post a Comment