Monday, January 27, 2014

ಸಂಕ್ರಮಣ



ಮಿಂದೆವು ಹಬ್ಬದಂದು
ಮೈ ಹಗುರಾಗಿಸಲು
ತಿಂದೆವು ಎಳ್ಳು-ಸಕ್ಕರೆ
ಬಾಯಿ ಸಿಹಿಯಾಗಿಸಲು
ಆದರೂ-
ಮೈಭಾರ ಬಾಯೆಲ್ಲ ಕಹಿ-ಕಹಿ
ಹಿಂಸೆ ರಕ್ತ ಪಾತಕೆ
ಗುಡಿ-ಮಸೀದಿ ನೆವ ಬೇಕಿತ್ತೆ
ಅರಿಯದ ಹಸಿವಿನಿಂದ
ಕಂಗೆಟ್ಟ ಮುಗ್ಧ ಜೀವಿಗಳೊಂದಿಗಿನ
ಚೆಲ್ಲಾಟ.
ಭಾರತ ಮಾತೆಯ
ಮಡಿಲಲಿ ರಕ್ತದೋಕುಳಿಯೆದ್ದಿರೆ
ಹಾಹಾಕಾರ ನೋವ ಮಾರ್ದನಿ
ಮುಗಿಲು ಮುಟ್ಟಿರೆ
ಸಕ್ಕರೆ ಸಿಹಿ ಆದೀತು ಹೇಗೆ?
ಸಂಕ್ರಮಣ ಶುಭ ತಂದೀತು ಹೇಗೆ?

No comments:

Post a Comment