Monday, January 27, 2014

ಚಿತ್ತ ಚಿತ್ತಾರ




ಯಾಕೆ ಹೀಗೆ ಎತ್ತೆತ್ತಲೋ
ಓಡುತಿದೆ ಚಿತ್ತ
ಕೀಲಿಯಿಲ್ಲದ ಬಂಡಿಯ ಹಾಗೆ
ದುಡುಕು, ಸಿಡುಕು ಎಲ್ಲ ಕೆಡುಕಾಗಿ
ಕಾಡುತಲಿವೆ ವ್ಯರ್ಥ ಅನುಮಾನದ
ನೋವ ಗ್ರಹಿಸುವ ಮನಕೆ
ನೋವಲು ಪ್ರೀತಿ ನಗೆ
ಬೀಸುವ ನಲ್ಲೆಗೂ ನೀಡುವುದು
ಬೇಡವೆ ಸವಿ-ಸುಖದ ಆತ್ಮೀಯ ಹೃದಯ
ಕೆಸರಾಗಿದೆ ಮನ ಅರಳಬಾರದೆ
ನಲುಮೆಯ ಕಮಲ,
ಸಾಕಾಗಿದೆ ಹಿಂಡುವ ಸಮಸ್ಯಗಳ
ಹಿಂಡುಗಳ ಮಧ್ಯ ದಂಡೆತ್ತಿ ಹೋಗುವದು.
ಎಲ್ಲಿ ಹೋಯಿತು ಸ್ಥೈರ್ಯ ಹೆಕ್ಕಿ ಓದಿದ
ಪುಸ್ತಕದ ಹಿತವೆಲ್ಲ ವ್ಯರ್ಥವಾಗಿ ಸೋರುತಲಿದೆ
ನನ್ನ ಮಾತಲಿ ನಗುಮುಖದ
ಹಸುಳೆಗಳೆದುರು ನೀಡುವ
ಉಪನ್ಯಾಸವೆಲ್ಲ

No comments:

Post a Comment