Monday, January 27, 2014

ಗಾಂಧಿ ಮಾರ್ಗ

ಅರೆಬಟ್ಟೆ ತೊಟ್ಟು
ಹಗಲಿರುಳು ಕಣ್ಣಲಿ ಕಣ್ಣಿಟ್ಟು
ಉಪವಾಸ ಸತ್ಯಾಗ್ರಹಗಳ ಪಟ್ಟನು ತೊಟ್ಟು
ನೀನಲೆದೆ ಈ ದೇಶದ ಮೂಲೆ
ಮೂಲೆಯಲಿ
ಕಟ್ಟಿದೆ ಮನಸು ಮನಸುಗಳ
ಬೆಳೆಸಿದೆ ಸ್ವಾಭಿಮಾನವ
ಕಂಡೆ ಹಗಲಿರುಳು ಸ್ವಾತಂತ್ರ್ಯದ ಕನಸು
ಅಳಿಸಿ ಹಾಕಿದೆ ಜಾತಿ ವಿಷಮತೆ
ಸ್ಥಾನಮಾನ ಕೊಟ್ಟು ಆತ್ಮಾಭಿಮಾನ
ಬೆಳೆಸಿದೆ ದೀನ ದಲಿತರಿಗೆ
ಒದ್ದೋಡಿಸಿದೆ ದಾಸ್ಯತೆ ಹಬ್ಬಿಸಿದ
ಬಿಳಿಯರನು ಶಾಂತಿಮಂತ್ರವ ಹಾಡಿ.
ಇದೆಲ್ಲ ನೀ ನಮಗೆ ಹಾಕಿಕೊಟ್ಟ
'ಶಾಂತಿಮಾರ್ಗ' 'ಗಾಂಧಿ ಮಾರ್ಗ'
ಆದರೆ ಈಗಲೂ ಬಿಟ್ಟಿಲ್ಲ
ನಿನ್ನ ಮಾರ್ಗ ಖಾದಿ ತೊಟ್ಟು
ದೇಶವಾಳುತಿರುವವರು.
ಬಾಯಲೆಲ್ಲ ನಿನ್ನ ಮಂತ್ರ
ಬಳಸುವರೆಲ್ಲ ತಮ್ಮದೇ ಹೊಲಸು ಕುತಂತ್ರ
ಇವರೆಲ್ಲ ನಡೆಯುತಲಿರುವದು
'ಗಾಂಧೀ ಮಾರ್ಗ'ದಲೇ
ಯಾಕೆಂದರೆ ದೊಡ್ಡ ನಗರದ ರಸ್ತೆಗಳೆಲ್ಲವೂ
'ಗಾಂಧೀ ಮಾರ್ಗ', 'ಶಾಂತಿ ಮಾರ್ಗ', 'ನೀತಿ ಮಾರ್ಗ'
ಖುಷಿಪಡು, ಸಮಾಧಾನ ಹೊದು
ಅಜ್ಜಾ! ಇನ್ನೂ ಇವರು ನೀ ಹಾಕಿಕೊಟ್ಟ
ಮಾರ್ಗದಲಿ ಕಾರು ಓಡಿಸಿ ಧೂಳು ಎಬ್ಬಿ
ಸಿರುವುದು ಕಂಡು.
Read more...

No comments:

Post a Comment