Monday, January 27, 2014

ನನ್ನ ಅಜ್ಜಾ ಅವರು

ಕಾರ್ಗತ್ತಲಲ್ಲಿ ಕಣ್ ಕಟ್ಟಿಕೊಂಡು
ಅಂಡಲೆಯುವಾಗ ಕೈ ಹಿಡಿದು
ಬೆಳಕ ತೋರಿ ಕಡಲ ತೀರವ
ಸೇರಿಸಿ ಬೆಳಕ ತೋರಿದ
ಜಗದ ಗುರು ನೀ----
ಹತಾಶೆ - ನೋವುಗಳು ತಳ
ಮಳದಿ ತಾಳ ಹಾಕಿದಾಗ ದಿಕ್ಕು
ತಪ್ಪಿ ದಿಕ್ಕನರಸುವಾಗ ದಿಕ್ಸೂಚಿಯಾದ
ಗುರುವಿನ ಗುರು ನೀ---
ಮಾತಲಿ ಮಮತೆ, ಮನದಲಿ ತಾಯ್ತನ
ನಿತ್ಯ ನಾ ಪಡೆವೆ ಹೊಸ ಹಾದಿ
ನಿಮ್ಮ ಪ್ರೀತಿ-ಬೈಗುಳಲಿ. ಗದರಿದರೆ ತಾಯಿ
ಮುನಿಸಿಕೊಳುವದುಂಟೆ ಮಗು?
ಬಾಳಪಯಣದಿ ಹಚ್ಚಹಸುರಾಗಿ ಇರಲಿ ಸದಾ
ಗುರುವೆ ನಿಮ್ಮ ಕೃಪೆ

No comments:

Post a Comment