Monday, January 27, 2014

ಕುಡಿದು ಸಾಯೋಣ




ಸಂತೋಷದ ವಿಷಯ
ಹೊಸ ವರುಷದಂದು ಶೆರೆ ಕುಡಿದು
ಸತ್ತವರಿಗೆ ಹತ್ತುಸಾವಿರ ಬಹುಮಾನ.
ಕುಡಿಯೋಣ ಎಲ್ಲರೂ
ಕುಡಿ,ಕುಡಿದು ಸಾಯೋಣ
ಅಯ್ಯೋ ಪಾಪ!
ಕುಡಿದು ಸತ್ತ
ಎಂದನುಕಂಪವ ತೋರಿ
ಘೋಷಿಸುವರು ಪರಿಹಾರ ಧನವ
ಹಗಲಿರುಳು ಬೆವರು ಸುರಿದ
ವರಿಗೆಲ್ಲ ಈ ದೇಶದ
ಬೊಕ್ಕಸದಿ ಹಣ
ಓದಿ, ಬರೆದು ಇಳಿವಯದಲ್ಲಿ
ಪಡೆಯುವ ಸಾಹಿತಿಗೆ ಬರೀ
ಸಾವಿರ ಪ್ರಶಸ್ತಿ ಹೆಸರಲಿ!
ಅದಕೆ ಕುಡಿಯೋಣ ಎಲ್ಲರೂ
ದುಡಿಯೋದ ಬಿಟ್ಟು ಖಾದಿಗಳು
ನೀಡುವ ಪರಿಹಾರಕೆ

No comments:

Post a Comment