Thursday, April 1, 2010

ಸಿರಾಜ ಬಿಸರಳ್ಳಿ




ಜನವರಿ ತಿಂಗಳ ಮೊದಲ ವಾರದಲ್ಲಿ ಕೊಪ್ಪಳ ತಾಲೂಕ ಸಾಹಿತ್ಯ ಸಮ್ಮೇಳನಕ್ಕೆ ಅತಿಥಿಯಾಗಿ ಹೋಗಿದ್ದೆ. ಸ್ವಂತ ಜಿಲ್ಲೆ ಎಂಬ ಅಭಿಮಾನಕ್ಕೆ, ಸ್ನೇಹಿತರ ಒತ್ತಾಯಕ್ಕೆ ಮಣಿದು ಭಾಗ್ಯನಗರದ ಸಮ್ಮೇಳನದಲ್ಲಿ ಪ಻ಲ್ಗೊಂಡು ನ್ನ ೆಂದಿನ ಶೈಲಿಯಲ್ಲಿ ವಾಸ್ತವದ ಸ್ಥಿತಿಗತಿಯನ್ನು ಬಿಚ್ಚಿಟ್ಟೆ. ಅದು ಅನೇಕರಿಗೆ ಆಪ್ತವೆನಿಸಿತು.
ಕಾರ್ಯಕ್ರಮ ಮುಗಿಸಿ ಸ್ನೇಹಿತ ಪ್ರಹ್ಲಾದ ಬೆಟಗೇರಿ ಮನೆಯಲ್ಲಿ ಊಟಮುಗಿಸಿ ಗದುಗಿಗೆ ಮರಳಿದೆ.
ಎರೆಡು ದಿನಗಳ ನಂತರ ತಲುಪಿದ SMS ನನ್ನ ಪರಿಚಯ ಪತ್ರವನ್ನು ಕಳಿಸಲು ಸೂಚಿಸಿತ್ತು.
ಕೊಪ್ಪಳದಲ್ಲಿ Studio ಇಟ್ಟುಕೊಂಡಿರುವ B.E. ಪದವೀಧರ ಸಿರಾಜ್ ಬಿಸರಳ್ಳಿ Kannada net.com ನಲ್ಲಿ ಕೊಪ್ಪಳ ಜಿಲ್ಲೆಯ 'ಇ' ಪತ್ರಿಕೆಯನ್ನು ಪ್ರಾರಂಭಿಸಿದ್ದು ಅದರಲ್ಲಿ ನನ್ನ ಪರಿಚಯ ಹಾಗೂ Photo ಹಾಕುವುದಾಗಿ ವಿವರಿಸಿದ್ದರು.
ಇರಲಿ ಎಂದು ಕಳಿಸಿದೆ. ನಂತರ net ವೀಕ್ಷಿಸಿದಾಗ ನನ್ನ ಪರಿಚಯ ಸುಂದರವಾಗಿ ಪ್ರಕಟವಾಗಿತ್ತು.
ಕುತೂಹಲಕ್ಕೆ ಸಿರಾಜ್ ಫೋನಾಯಿಸಿದೆ. ಇಲ್ಲ ಸರ್ ನಿಮ್ಮದೊಂದು ಬ್ಲಾಗ್ ಪ್ರಾರಂಭಿಸುವ ಆಸೆ ಇದೆ. ಆ ಮೂಲಕ ನೀವು ಬೇರೆ ಬೇರೆ ಕಡೆ ಹೆಚ್ಚು ತಲುಪಲು ಸಾಧ್ಯ ಎಂದರು. 'ಇ' ಜಗತ್ತಿನ ಪೂರ್ಣ ಸಂಪರ್ಕವಿರದ ನಾನು ಆಯಿತು ನೋಡೋಣ ಎಂದೆ.
ಮತ್ತೆ 2ನೇ, ಫ್ರೆಬ್ರುವರಿ 2010 ರಂದು ಕೊಪ್ಪಳದ ಇನ್ನೊಂದು ಕಾರ್ಯಕ್ರಮಕ್ಕೆ ಹೋದಾಗ ಅವಸರದಲ್ಲಿಯೇ ಸಿರಾಜರ ಸ್ಟುಡಿಯೋಗೆ ಹೋದೆ. ಕೇವಲ ಹತ್ತೇ ನಿಮಿಷದಲ್ಲಿ ಬ್ಲಾಗ್ ಖಾತೆ ಆರಂಭಿಸಿಯೇ ಬಿಟ್ಟರು. ಅವಸರದಲ್ಲಿ 'ಸಿದ್ದು ಕಾಲ' ಎಂದು ಹೆಸರಿಟ್ಟು, ನನ್ನ ಹೆಸರಿನ್ನೇ ID ಯಾಗಿ ಸೂಚಿಸಿದೆ. ಸಾಧ್ಯವಾದರೆ ಬರೆದು ನಿಮಗೆ ಕಳಿಸುವೆ ನೀವೇ update ಮಾಡಿರಿ ಎಂದೆ. ಆದರೆ ಕೇವಲ ಎರಡು ತಿಂಗಳಲ್ಲಿ ನನ್ನನ್ನು ನಾನೇ ಬ್ಲಾಗ್ ಗೆ ಅರ್ಪಿಸಿಕೊಂಡೆ. ಆಗಷ್ಟು ಈಗಿಷ್ಟು ಬರೆಯಲಾರಂಭಿಸಿದೆ. ಈ ಮಧ್ಯ 76 ನೇ ಸಾಹಿತ್ಯ ಸಮ್ಮೇಳನ ಬರೆಯಲು ಪ್ರೇರೆಪಿಸಿತು. ಕೇವಲ 2 ತಿಂಗಳಲ್ಲಿ 20 ಲೇಖನಗಳನ್ನು ಬರೆದೆ. ಅವುಗಳನ್ನು ಒಪ್ಪ ಓರಣವಾಗಿ ಜೋಡಿಸಿ upload ಮಾಡಿದ ಸಿರಾಜ್, ನನ್ನ ಕಾಲೇಜಿನ ಕಂಪ್ಯೂಟರ್ ಸಂಗಾತಿಗಳಾದ ವೀರೇಶ, ಜಾದವ್ ಹಾಗೂ ದೀಪಾರಿಗೆ ಹೇಗೆ upload ಮಾಡಬೇಕು ಎಂಬುದನ್ನು ಕಲಿಸಿಕೊಟ್ಟರು. ಈಗ 500 ಜನ ಭೇಟಿ ಕೊಟ್ಟಿದ್ದಾರೆ. ಬ್ಲಾಗ್ ದಿನದಿಂದ ದಿನಕ್ಕೆ popular ಆಗುತ್ತಲಿದೆ. ಇಂತಹ ಒಂದು ಅಪರೂಪದ ಜಗತ್ತಿಗೆ, ನನ್ನ ಭಾಷಣ ಕೇಳಿ ಅಭಿಮಾನದಿಂದ ಪರಿಚಯಿಸಿದ ಸಿರಾಜ್ ಬಿಸರಳ್ಳಿಗೆ thanks ಹೇಳಿದರೆ ಕೃತಕವಾದೀತು. ಹೇಳದೇ ಮರೆತರೂ ಅಪಚಾರವಾದೀತು. I am always grateful to you Mr. siraj.

No comments:

Post a Comment