Tuesday, April 20, 2010

Affair ಗಳ ನಿರಾಕರಣೆ

* Affair ಗಳಿಲ್ಲದೆ ಬದುಕಲು ಸಾಧ್ಯವಿಲ್ಲವೆ?
ನಿಮ್ಮ ಹಿಂದಿನ ಲೇಖನದಲ್ಲಿ ನಿರ್ವಹಣೆ ಇದೆ ಆದರೆ ನಿರಾಕರಿಸುವುದಕ್ಕೆ ಸಲಹೆಗಳಿಲ್ಲ.
_______ Management is important than rejection ಎಂಬ ವಾದವಿದೆ. ನೀವು negative ಸಂಗತಿಗಳನ್ನು ಪೂರ್ಣವಾಗಿ ನಿರಾಕರಿಸಿದರೆ ಸಂತಸರಾಗುತ್ತೀರಿ. ಹಾಗೆ ಸಂತರಾಗುವ ಬಯಕೆ ನನಗೂ ಇದೆ. ಆದರೆ ಸಾಧ್ಯವಾಗಬೇಕಲ್ಲ. So always we have to choice less dangerous one.
ಮನದ ಮುಂದಣೆ ಆಸೆಯೇ affairಗಳಿಗೆ ಕಾರಣ, ಕೆಲವರು ಚಪಲಕ್ಕಾಗಿ, ನಿಜವಾದ ಅಗತ್ಯಕ್ಕಾಗಿ, ಮತ್ತೆ ಕೆಲವರು ಚಟವಾಗಿ affair ಗಳನ್ನು ರೂಪಿಸಿಕೊಂಡಿರುತ್ತಾರೆ. ಇದಕ್ಕಿಂತಲೂ ಅಪಾಯವೆಂದರೆ ಕೆಲವರು prestige ಗಾಗಿ ಹೇಳಿಕೊಳ್ಳುತ್ತಾ ತಿರುಗುತ್ತಾರೆ. ಅನಾದಿ ಕಾಲದಿಂದಲೂ ಈ ಕುರಿತು ಚರ್ಚೆ ನಡೆದು ಇದು ಪಾಪದ ಕೆಲಸ, ಅನೈತಿಕತೆ ಎಂದು ವಿವರಿಸಲಾಗಿದೆ.ಆದರಿದು ಎಂದೂ ನಿಲ್ಲದ ಮಾನವ ದೌರ್ಬಲ್ಯವಾಗಿದೆ.
ನಾವು ಯಾಕೆ ಈ ಆಮಿಷಕ್ಕೆ ಒಳಗಾಗುತ್ತೇವೆ ಎಂಬುದನ್ನು ನಾವೇ ಆಲೋಚಿಸಬೇಕು. ಇದರಲ್ಲಿ involve ಆದ ಇಬ್ಬರಿಗೂ ಇದು ಖಂಡಿತಾ ಹಿತಾನಿಭವ ನೀಡಿ ಸುಖ ಕೊಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಪರಿಣಾಮ ಮಾತ್ರ "ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದು:ಖ ನೋಡಾ" ಎಂಬಂತಾಗುತ್ತದೆ.
ಸಾಗರದಷ್ಟು ದು:ಖಕ್ಕಿಂತಲೂ, ಸಾಸಿವೇ ಮುಖ್ಯವೆಂದು ವಾದಿಸುವವರು ಈ ಹಿತಾನುಭವದ ಸುಳಿಗೆ ಸಿಲುಕುತ್ತಾರೆ. ಈ ರೀತಿ ಬಿದ್ದ ತೊಡಕು ತನ್ನಷ್ಟಕ್ಕೆ ತಾನೇ ತೆವಲು ತೀರಿದ ಮೇಲೆ, ಒಂದೆರಡು ಅಪಾಯದ ಸಂಗತಿಗಳು ಗೋಚರವಾದ ಮೇಲೆ ಸಡಿಲಗೊಳ್ಳುತ್ತದೆ. ಅದು ಸಡಿಲಗೊಳ್ಳುವುದರೊಳಗೆ expose ಆದರೆ ಅಪಾಯ ಗ್ಯಾರಂಟಿ. ಅದಕ್ಕೆ ಹಿರಿಯರು ಹೇಳುತ್ತಾರೆ ಕೆಮ್ಮು, ಹಾದರ ಮುಚ್ಚಿಡಲು ಬರುವುದಿಲ್ಲ ಎಂದು ಎಂದು ಕೆಮ್ಮು ಸಹಜ ಎನಿಸಿದೆ ಹಾಗಾಗಿ ಸಹಜವಾಗಿ ಕೆಮ್ಮುತ್ತೇವೆ. ಹಾದರ ಸಹಜವೆನಿಸಿದರೆ ಅದೂ ಸಾರ್ವತ್ರಿಕವಾಗುತ್ತದೆ. ಆದರೆ ನಮ್ಮ ಮಡಿವಂತ ದೇಶದಲ್ಲಿ ಹಾದರಗಳನ್ನು affair ಅನ್ನುವಷ್ಟು ಔದಾರ್ಯ ತೋರುವ ಸಾಧ್ಯತೆ ಕಡಿಮೆ. ನಾವೇ ಅದನ್ನು ಸಮಾಧಾನಕ್ಕಾಗಿ affair ಎಂದು ಸುಧಾರಿಸಿಕೊಂಡಿದ್ದೇವೆ. ಅನೈತಿಕ ಲೇಬಲ್ ಹಚ್ಚುವವರು ಕೂಡಾ ಖಾಸಗಿಯಾಗಿ ಅದನ್ನು ಮೀರಿ ಬೆಳೆಯಲು - ಬದುಕಲು ಸಾಧ್ಯವಾಗಲಿಲ್ಲ.
ನಾವು ಯಾವ ಕಾರಣಕ್ಕೆ ಈ ರೀತಿ affair ಗಳನ್ನು ಬಯಸುತ್ತೇವೆ ಎಂಬುದರ ಬಗ್ಗೆ ನಮ್ಮೊಳಗೆ ಆಂತರಿಕ ಚರ್ಚೆಯಾಗಬೇಕು. ನಿಯಂತ್ರಣದ ಮಾರ್ಗಗಳನ್ನು ಖಾಸಗಿಯಾಗಿ affair ಹೊಂದಿದವರೊಂದಿಗೆ ಚರ್ಚಿಸಿ ಸಿಕ್ಕು ಬಿಡಿಸಿಕೊಳ್ಳಬೇಕು. ಪ್ರತಿಯೊಂದಕ್ಕೂ ಒಂದು ಎಲ್ಯಾಸ್ಟಿಕ್ limit ಇರುತ್ತದೆ. ಅದು ಹರಿಯದಂತೆ ನೋಡಿಕೊಳ್ಳಬೇಕು.
ನಿಮ್ಮ affair ಗಳನ್ನು ಜಗಜ್ಞಾಹೀರು ಮಾಡದ counselling centre ಗಳೊಂದಿಗೆ ಚರ್ಚಿಸಬೇಕು. ನಮ್ಮ ದೌರ್ಬಲ್ಯದಿಂದ ಹೊರ ಬರಬೇಕಾದರೆ Subcounscion mind ಗೆ auto suggestion ನೀಡಬೇಕು. ನಮ್ಮ ಚಟುವಟಿಕೆಗಳು shift ಆಗಿ ಯೋಗ, ಧ್ಯಾನದ ಕಡೆ ತಿರುಗಬೇಕು. ಕುಡಿತ, ಸಿಗರೇಟ್, ಏಕಾಂತ ಇನ್ನೂ ಹೆಚ್ಚು ಅಪಾಯಕಾರಿ.
ಇಂತಹ ಒಂದು ಘಟನೆಯಲ್ಲಿ ಹೆಚ್ಚು ತೊಡಕಾದ ಮೂವರನ್ನು ಕೂಡಿಸಿಕೊಂಡು ಮಾತನಾಡಿದ ಅನುಭವ ನನ್ನ ಪಾಲಿನದು. ಮಾನಸಿಕವಾಗಿ ಪೂರ್ಣ ಒಪ್ಪಿಸಿ ಸಂಬಂಧವನ್ನು detach ಮಾಡಲು success ಆದೆ. counselling ಮುಗಿಸಿ ಹೊರಟ ಮಹಿಳೆ ನನ್ನನ್ನು ಕೇಳಿದರು . ಸರ್ ನೀವು ಇಷ್ಟೆಲ್ಲ ತಿಳಿಸಿಹೇಳುತ್ತಿರಲ್ಲ, ನಿಮಗೆ ಈ ಅನುಭವ ಬಹಳ ಇದೆಯೊ ಸರ್ ಎಂದು ಕೇಳಬೇಕೆ? ಕೇವಲ ನಕ್ಕು ಸುಮ್ಮನಾದೆ. ಮತ್ತೆ ಆಕೆಯೇ ಅಂದಳು ಇದ್ರೂ manage ಮಾಡೋ ಜಾಣತನ ಇದೆ ಅನಿಸುತ್ತದೆ ಬಿಡಿ ಸರ್ ಅನ್ನಬೇಕೆ.
ಈ ರೀತಿ ಪ್ರಕರಣಗಳನ್ನು ಗಂಭೀರವಾಗಿ ಆಲಿಸುವಾಗ ಯಾವುದೇ ಕಾರಣಕ್ಕೂ biased ಆಗಿರಬಾರದು, encourage ಕೂಡಾ ಮಾಡಬಾರದು. ಹಾಗಂತ ಮಹಾನ ಪಾಪ ನೀವು ನರಕಕ್ಕೆ ಹೋಗತ್ತೀರಾ ಎಂಬ ಭಯವನ್ನು ಬಿತ್ತದೆ ನಿರಾಕರಣಾ ಭಾವ ಬೆಳೆಸಬೇಕು. ನಿಮ್ಮ ಬದುಕು - ಭಾವನೆ ಹಾಳಗದಂತೆ ಜಾಗರೂಕತೆಯಿಂದ ಮುಳ್ಳಿನ ಬೇಲಿಯ ಮೇಲಿನ ಬಟ್ಟೆ ತಗೆಯುವ ಹಾಗೆ ತಗೆಯಬೇಕು. ಇಂತಹ ಒಂದು ಸಣ್ಣ ಗುಮಾನಿಯಿಂದ ನಾಶವಾದ ಒಂದು ದೊಡ್ಡ educated family ಯ ದುರಂತ ಕಥೆ ನಮ್ಮ ಮುಂದೆ ನಡೆದು ಇಡೀ ವಂಶವೇ ಮೃತ್ಯುವಿನ ಪಾಲಾದದ್ದನ್ನು ನೋಡಿದ ವ್ಯಥೆಯೂ ನನ್ನ ಪಾಲಿಗಿದೆ. ಆದ್ದರಿಂದ please be careful, accept-it in positive way & avoid it in diplomatic way also.

No comments:

Post a Comment