Thursday, September 9, 2010

ಸ್ವಯಂ ನಿವೃತ್ತಿಯ ಆಲೋಚನೆ

ಕಳೆದ 20 ವರ್ಷ ಪರಿಶ್ರಮದಿಂದ ಉಪನ್ಯಾಸಕನಾಗಿ ಕಾರ್ಯ ನಿರ್ವಹಿಸಿದ ಸಂತೃಪ್ತಿ. ಆದರೆ ಸಿಗಬೇಕಾದ

ಮಾನ್ಯತೆ ಸಿಗಲಿಲ್ಲ ಎಂಬ ವೇದನೆ. ಹಾಗಾದರೆ ನಾನು ಎಡವಿದ್ದಾದರೂ ಎಲ್ಲಿ?

ಯಾರದೋ ಕುಟಿಲತನದಿಂದ, ನಿರ್ದಯಿ ಧೋರಣೆಯಿಂದಾಗಿ ನನ್ನ ಪ್ರತಿಭೆಯನ್ನು ಒಪ್ಪಿಕೊಳ್ಳದೇ,

ಬೇಜವಾಬ್ದಾರಿ ಎಂಬಂತೆ ಚಿತ್ರಿಸಿದ ವಿಕೃತ ರೂಪ ಸತ್ಯವಾದ ಅಪಾಯವನ್ನು ಅನಿವಾರ್ಯವಾಗಿ ಎದುರಿಸಿದೆ.

ಸಹಿಸಿದೆ.

ಈಗ ಸಾಕು ಎನಿಸಿದೆ. ನಿರಂತರ ಭಯದ ನೆರಳಲಿ, ಸೆಕ್ಯೂರೆಟಿ ಎಂಬ ವಿಷವರ್ತುಲದಲಿ, ಸಿಂಬಳದಲಿ ಸಿಕ್ಕ

ನೊಣದಂತೆ ಒದ್ದಾಡಿದೆ.

ಕೇವಲ ಸೆಕ್ಯೂರೆಟಿ ಎಂಬ ಭ್ರಮೆಯಲ್ಲಿ. ಕಳೆದ ವರ್ಷದಿಂದ ಮನಸ್ಸು ಗಟ್ಟಿಯಾಗತೊಡಗಿತು. ಸಾಕಪ್ಪ ಈ

ಹೇಡಿಬದುಕು ಎನಿಸಿತು.

ನೌಕರಿಯ ಭಯದಲ್ಲಿ ಸಿಕ್ಕ ಅಪಾರ ಅವಕಾಶಗಳನ್ನು ಕಳೆದುಕೊಂಡೆ. ಸರಕಾರ, ಅಕ್ಯಾಡೆಮಿ, ಸಾಂಸ್ಕೃತಿಕ

ಲೋಕದ ಅವಕಾಶಗಳನ್ನು ನಿರಾಕರಿಸುತ್ತಲೇ ಬಂದೆ ನೌಕರಿ ಎಂಬ ಪೆಡಂಭೂತವನ್ನು ಮೈಮೇಲೆ

ಎಳೆದುಕೊಂಡು.

ಶೇಕ್ಸಪೀಯರ್ ಹೇಳಿದ ಮಾತುಗಳು ಮತ್ತೆ,ಮತ್ತೆ ನೆನಪಾದವು. ಮನುಷ್ಯನಿಗೆ sight, life and freedom

ಇಲ್ಲದೆ ಬಾಳುವದೆಂದರೆ ಅಸ್ತಿತ್ವವೇ ಇಲ್ಲದಂತೆ.

ಉಸಿರು, ದೃಷ್ಥಿ ಹಾಗೂ ಸ್ವಾತಂತ್ರ್ಯವಿಲ್ಲದ ಬದುಕು ನರಕಕ್ಕೆ ಸಮ --- ಎಂಬ ಮಾತುಗಳಲ್ಲಿನ ಸತ್ಯಾಂಶ

ಅರಿವಾಗತೊಡಗಿತು.

ಈ ವರ್ಷ ಜೂನ್ ನಿಂದ ಆ ವಿಚಾರ ಆಳವಾಗಿ ಕೊರೆಯತೊಡಗಿತು. ಪರ್ಯಾಯ ವ್ಯವಸ್ಥೆಯಿಲ್ಲದೆ ಇದ್ದ

ನೌಕರಿಯನ್ನು ಬಿಡುವುದಾದರೂ ಹೇಗೆ? ಎಂಬ ಆತಂಕ.

ಬಿಟ್ಟ ಮೇಲಲ್ಲವೆ ಹೊಸ ಅವಕಾಶಗಳು. ಅದಕ್ಕೆ ಅಲ್ಲವೆ ಗಾದೆ.

ಮದುವೆ ಆಗದೆ ಹುಚ್ಚು ಬಿಡುವದಿಲ್ಲ. ಹುಚ್ಚು ಬಿಡದೆ ಮದುವೆ ಆಗುವುದಿಲ್ಲ ಎಂಬಂತಾಯಿತು ನನ್ನ ಸ್ಥಿತಿ.

ಈಗ ಹುಚ್ಚು ಬಿಡಿಸಿಕೊಳ್ಳಲು ನಿರ್ಧರಿಸಿದ್ದೇನೆ.

ಗೌರವಾನ್ವಿತ ಆಡಳಿತ ಮಂಡಳಿಯವರಿಗೆ ನನ್ನ ನಿರ್ಣಯ ತಿಳಿಸಿದ್ದೇನೆ. ಅವರು ಹೇಗೆ ಸ್ವೀಕರಿಸುತ್ತಾರೆ

ಎನ್ನುವುದಕ್ಕಿಂತ, ನಾನು ಹೇಗೆ ಹಗುರಾಗಿದ್ದೇನೆ ಎಂಬ ಸಂಭ್ರಮದಲ್ಲಿದ್ದೇನೆ.

ಮೊದಲು ಆರ್ಥಿಕ ಸೆಕ್ಯೂರಿಟಿ ಎಂಬ comfort zone ನಿಂದ ಹೊರ ಬಂದು ಹೊಸ ಸವಾಲನ್ನು

ಸ್ವೀಕರಿಸುತ್ತೇನೆ.

ಹೊಸ risk ಇಲ್ಲದೆ ಬದುಕು ಬದಲಾಗಲು ಹೇಗೆ ಸಾಧ್ಯ? ಎತ್ತರಕ್ಕೆ ಏರಲೂಬಹುದು, ಪಾತಳಕ್ಕೆ ಇಳಿಯಲೂ

ಬಹುದು.ವಿಷಯ ಅದಲ್ಲ.

ಪ್ರಾಂಜಲ ಮನಸಿನಿಂದ, ಪ್ರಾಮಾಣಿಕವಾಗಿ ಐಕ್ಯತಾ ಭಾವ ರೂಪಿಸಿಕೊಂಡರೆ ಅವಕಾಶಗಳು ಕೈ ಮಾಡಿ

ಕರೆಯುತ್ತವೆ. ಹೆದರಿ ಕೊಳಕನ್ನ ತುಂಬಿಕೊಂಡು ನೋವು ಅನುಭವಿಸಿದರೆ ಕೆಸರಲಿ ಹೂತು ಹೋಗುತ್ತೇವೆ ಎಂಬ

ಸತ್ಯ ಸ್ಪಷ್ಟವಾಗಿದೆ.

ಆದರೆ ಈ ಸ್ಪಷ್ಟತೆ ಬರಲು ಹತ್ತು ವರ್ಷ ತೆಗೆದುಕೊಂಡೆನಲ್ಲ ಎಂಬ ಬೇಸರವೂ ಇದೆ.

ಆದರೆ ಎಲ್ಲದಕೂ 'ಕಾಲ' ಕೂಡಿ ಬರಬೇಕು. ಒಳಗೆ ಗಟ್ಟಿ ಆಗದ ಹೊರತು ಈ ರೀತಿ ಗೊಂದಲಗಳು ಸಹಜವೆ?

ಈಗ ಹಗುರಾಗಿದ್ದೇನೆ. ಮುಂದೇನು ಎಂಬುದನ್ನು ಕಾಲವೇ ನಿರ್ಣಯಿಸಲಿ. ಕಣ್ಣೆದುರಿಗಿರುವ ಅವಕಾಶಗಳನ್ನು

ಸಮರ್ಥವಾಗಿ ನಿಭಾಯಿಸುತ್ತೇನೆ. ಆ ಧೈರ್ಯ ಬಂದಿದೆ. ಅಷ್ಟೇ ಸಾಕು!

ಶಿಕ್ಷಕ ವೃತ್ತಿಯನು ಖುಷಿಯಿಂದ ಕಳೆದೆ. ವಿದ್ಯಾರ್ಥಿಗಳ ಪ್ರೀತಿ ಸಂಪಾದಿಸಿದೆ. ಮೈಯಲ್ಲಿ ದೆವ್ವಹೊಕ್ಕಂಡವರ

ಹಾಗೆ ಪಾಠ ಮಾಡಿದೆ. class room ನ್ನು ಭವ್ಯ ವೇದಿಕೆಯಂತೆ ರೂಪಿಸಿಕೊಂಡು perform ಮಾಡಿದೆ.

ನವಿರು ಹಾಸ್ಯ, ಗಂಭೀರ ವಿವರಣೆಯಿಂದಾಗಿ teaching enjoy ಮಾಡಿದೆ.

ವಿದ್ಯಾರ್ಥಿಗಳು ಸಮಚಿತ್ತರಾಗಿ ನನ್ನನ್ನು ಸ್ವೀಕರಿಸಿದರು. ಅತೀಯಾದ cheap popularity ಯ ಬೆನ್ನು ಹತ್ತಲಿಲ್ಲ.

English tution ಹೇಳಿ ಹೇರಳ ಹಣ ಸಂಪಾದಿಸುವ ಮನಸು ಮಾಡಲಿಲ್ಲ.

ಹಾಗೆ ಮಾಡುವವರನ್ನು ಕಂಡು ಮರುಗಲಿಲ್ಲ.

P.U.C ಯಿಂದ P.G.ಯವರೆಗೆ ಪಾಠ ಮಾಡಿದೆ. ಎಲ್ಲ ಹಂತದ ವಿದ್ಯಾರ್ಥಿಗಳ ಮನಸ್ಸು ಗೆದ್ದೆ.

ಹೀಗೆ ಆಳೆತ್ತರಕ್ಕೆ ಏರುವ ಕ್ಷಣದಲಿ ದಿಢೀರ ವೃತ್ತಿ ಬಿಡುವ ನಿರ್ಣಯ ಮಾಡಿದ್ದೇನೆ. ಆದರೆ ಕಲಿಸುವಿಕೆಯನ್ನು ಖಂಡಿತಾ ಬಿಡುವುದಿಲ್ಲ.

ಬೇರೆ, ಬೇರೆ ಸ್ತರಗಳಲ್ಲಿ ಕಲಿಸುತ್ತ ಹೋಗುತ್ತೇನೆ. Teaching ನ್ನು ಆಧಾರವಾಗಿಟ್ಟುಕೊಂಡೆ ಹೊಸ ಜಗತ್ತನ್ನು ರೂಪಿಸಿಕೊಳ್ಳುತ್ತೇನೆ.

ಸಾಹಿತ್ಯ, ಸಂಸ್ಕೃತಿ ಹಾಗೂ ಶಿಕ್ಷಣವನ್ನು ಭಿನ್ನ ರೀತಿಯಿಂದ ಬಳಸಿಕೊಳ್ಳುತ್ತೇನೆ.

ಪ್ರತಿ ಕ್ಷಣವನ್ನು ಸಂತೋಷದಿಂದ, ಆತ್ಮವಿಶ್ವಾಸದಿಂದ ಕ್ರೀಯಾಶೀಲವಾಗಿ ಕಳೆಯುತ್ತೇನೆ. ನನ್ನ ನಿರ್ಣಯಕ್ಕಾಗಿ regret ಪಡದೆ ಹೊಸ ಜಗತ್ತಿಗೆ ಕಾಲಿಡುತ್ತೇನೆ.

1 comment:

  1. ಸಿದ್ದು ಸರ್,
    ಬೆಂಗಳೂರಿನ ಕಾಲೇಜುಗಳಲ್ಲಿ ಪಾಠ ಮಾಡುವಾಗ ನೀವು ಅನುಭವಿಸಿದ ನೋವುಗಳನ್ನೇ ನಾನು ಕೂಡ ಅನುಭವಿಸಿದ್ದೇನೆ. ಹಾಗೆಂದೇ ಅಲ್ಲಿಂದ ಬೇಸತ್ತು ನಾನು ಲಿಬಿಯಾಗೆ ಬಂದಿದ್ದು. ಈಗ ಆರ್ಥಿಕವಾಗಿ ಹಾಗು ಮಾನಸಿಕವಾಗಿ ಸ್ವಲ್ಪ ಬಲಗೊಂಡಿದ್ದೇನೆ. ನಿಮ್ಮ ನಿರ್ಧಾರ ಸರಿಯಾಗಿದೆ. Go ahead. All the best.

    ReplyDelete