Thursday, September 9, 2010

ಜೀವನೋತ್ಸಾಹದ ಹೊಸ ಆಯಾಮ

ನಾನೆಂದು ಜೀವನೋತ್ಸಾಹ ಕಳೆದುಕೊಂಡಿಲ್ಲ.

ಹಲವಾರು ಆತಂಕಗಳನ್ನು ಕಠಿಣ ಸವಾಲುಗಳನ್ನು ವಿಷಾದದಿಂದ

ಎದುರಿಸಿದ್ದೇನೆ. ಧೈರ್ಯದಿಂದ ಎಂದರೆ ಅಪಚಾರವಾದೀತು.

ಅಪಘಾತದಲ್ಲಿ ಎಡಗೈ ಮುರಿದಾಗ ಆಘಾತವಾಗಿತ್ತು. ಅನೇಕ ಸಕಾರಾತ್ಮಕ ಆಲೋಚನೆಗಳ ಮೂಲಕ

ಸಮಾಧಾನಿಸಿಕೊಂಡೆ.

ಅಚೀಚೆ ಓಡಾಟ. ಎಡಗೈಯಲಿ ಮಗು ಎತ್ತಿಕೊಂಡ ಹಾಗೆ. ಐದು ಕೆ.ಜಿ. ಭಾರದ plaster

ಅಸಹಾಯಕನನ್ನಾಗಿಸಿತ್ತು.

ಈಗ ಆ ಭಾರದಿಂದ ಮುಕ್ತನಾಗಿದ್ದೇನೆ. ಆಗೀಗ ಕಾಣಿಸಿಕೊಳ್ಳುವ ನೋವು, ಆ ನೋವಿನ ಕಾರಣದಿಂದಾಗಿ

ಸಣ್ಣನೆಯ ಜ್ವರ

ಬೇಸರವನ್ನುಂಟುಮಾಡಿತ್ತು.

ಈಗ ------- ಎಲ್ಲದರಿಂದ ಹೊರ ಬಂದಿದ್ದೇನೆ. ಒಂಟಿಯಾಗಿ ಬೆಂಗಳೂರಿಗೆ ಹೋಗಿ ಬಂದೆ. ದೆಹಲಿ ಭೇಟಿಯೂ ಆಯಿತು.

ತಿರುಗಾಡಿದಂತೆಲ್ಲ ಆತ್ಮ ವಿಶ್ವಾಸ ಹೆಚ್ಚಾಗಿದೆ.

ಅದೇ ವೇಗದಲ್ಲಿ ಕಾಲೇಜಿಗೂ ಹೋಗುವ ಮನಸ್ಸಾಗಿತ್ತು. ಆದರೆ bike ನಡೆಸಲು ಬರುವದಿಲ್ಲ ಎಂಬ ಕಾರಣಕ್ಕೆ

drop ಮಾಡಿದ್ದೆ.

ಆದರೆ ಈಗ ನಿರ್ಣಯ ಬದಲಾಗಿದೆ.

VRS ಆಲೋಚನೆ ಗಟ್ಟಿಯಾಗಿದೆ. 45 ರ ಪ್ರಾಯದಲ್ಲಿ ನೌಕರಿಯ ಹಂಗು ತೊರೆದು ಪತ್ರಿಕೆ ಆರಂಭಿಸಿದ

ಲಂಕೇಶರ ಆದರ್ಶ

ನಮ್ಮೊಂದಿಗೆ ಜೀವಂತವಾಗಿದೆ.

ಅದೇ ರೀತಿ ಹೊಸ ಸವಾಲುಗಳನ್ನು ಹೊತ್ತು ಬೆಂಗಳೂರು ಸೇರಿ ಬಾನೆತ್ತರಕೆ ಹಾರಿದ ಹಾಯ್ ರವಿ ಇದ್ದಾನೆ.

ಬದಲಾಗುವ

ಅವಕಾಶ ಬಂದಾಗ ಬದಲಾಗಬೇಕು. ಈಗ ಅನೇಕ ಕನಸುಗಳು ಗರಿಗೆದರಿವೆ. ನೌಕರಿ ಬಿಡುವ risk ಅನೇಕರನ್ನು

ನನ್ನಂತೆ

ಕೆಲಕಾಲ ದಿಗಿಲುಗೊಳಿಸಿದೆ.

ಈಗ ಗಟ್ಟಿಯಾಗಿದ್ದೇನೆ. ಆಗಲೇಬೇಕು. ಮಾಧ್ಯಮ ,HRD ಹೀಗೆ ಹಲವು ಅವಕಾಶಗಳಿವೆ. ಎಲ್ಲೇ ಹೋಗಲಿ

ತೊಂದರೆ

ಅನುಭವಿಸುತ್ತಲೇ professional success ಗಿಟ್ಟಿಸಿಕೊಳ್ಳುತ್ತೇನೆ. ಅದು ಅನಿವಾರ್ಯ ಕೂಡಾ.

'ಅರಸು ಮುನಿದರೆ ನಾಡೊಳು ಇರಬಾರದು' ಎಂದು ಶರಣರು ಹೇಳಿದ್ದಾರೆ. ನನ್ನನ್ನು ದುಡಿಸಿಕೊಳ್ಳುತ್ತಿದ್ದ ಧಣಿಗೆ

ನಾನೀಗ

ಬೇಡವಾಗಿದ್ದೇನೆ. ಈಗ ನಾನು ಅಂಗಲಾಚಿ ವೃತ್ತಿಗೆ ಮರಳಿದರೆ ಆತ್ಮಗೌರವಕ್ಕೆ ಪೆಟ್ಟು ಬಿದ್ದು ನಾಶವಾಗಿ

ಹೋಗುತ್ತೇನೆ.

ಇಲ್ಲೇ ಇದ್ದು ನಾಶವಾಗುವ ಬದಲು ಹೊಸ ವಾತಾವರಣದಲ್ಲಿನ ಸವಾಲುಗಳನ್ನು ಎದುರಿಸುವುದು ಸೂಕ್ತ

ಅನಿಸಿದೆ.

ಗಟ್ಟಿಯಾಗಿ ನನ್ನೊಂದಿಗೆ ಉಳಿದವರು, ಉಳಿಯುವವರು ಧೈರ್ಯ ನೀಡಿದ್ದಾರೆ. ನನ್ನ ಮೇಲಿನ ಭರವಸೆಯಿಂದ

ಹೊಸ ಸವಾಲು

ಎದುರಿಸುತ್ತೇನೆ. ನಿಮ್ಮ ಹಾರೈಕೆ ಸದಾ ಇರಲಿ ಅಷ್ಟೆ!

No comments:

Post a Comment