Monday, September 27, 2010

ಹಾಸ್ಯ ಪ್ರಜ್ಞೆ ಅರಿಯದವರೊಂದಿಗೆ ಮೌನ ಲೇಸು

Sense of Humour ನಮ್ಮ ಜೀವನೋತ್ಸಾಹಕ್ಕೆ ಅತ್ಯಗತ್ಯ. ಆದರೆ ಅದು ಯಾರೊಂದಿಗೆ ಎಂಬುದು ಅಷ್ಟೇ

ಮುಖ್ಯ. ಅಂತಹ ಅನೇಕ ಎಡಬಿಡಂಗಿ ಪ್ರಸಂಗಗಳನ್ನು ನನ್ನಂತೆ ಅನೇಕರು ಅನುಭವಿಸಿದ್ದಾರೆ.

ಸದಾ ನಗುತ್ತ, ನಗಿಸುತ್ತ ಇರಬೇಕು ಎಂಬ ಸಿದ್ಧಾಂತ ಎಲ್ಲ ಸಮಯದಲ್ಲೂ ಒಳ್ಳೆಯದಲ್ಲ. ಯಾವುದಾದರು ಒಂದು

'ಪ್ರಜ್ಞೆ' ಎಲ್ಲರಿಗೆ, ಎಲ್ಲ ಕಾಲಕ್ಕೂ ಸ್ವೀಕೃತ ಎಂದರ್ಥವಿಲ್ಲ.

ನಾವು ಸದಾ ನಗುತ್ತ, ನಗಿಸುತ್ತ ಜನ ನಮ್ಮೊಂದಿಗಿರುತ್ತಾರೆ. ಆದರೆ ಅದು ಅತೀಯಾದರೆ ನಾವೊಬ್ಬ ಬಫೂನ್

ಆಗುತ್ತೇವೆ.

ಹಾಸ್ಯದ ಅತಿರೇಕದಲ್ಲಿ ಒಮ್ಮೊಮ್ಮೆ ನಮ್ಮನ್ನು ಲೇವಡಿ ಮಾಡಿಕೊಳ್ಳುತ್ತಾ, ಬೇರೆಯವರನ್ನು ಲೇವಡಿ

ಮಾಡುವಾಗ ಸಮಸ್ಯ ಎದುರಾಗುತ್ತದೆ.

ಕೆಲವರು ಕೇವಲ ನಗಲು ಬಯಸುತ್ತಾರೆ. ಆದರೆ ತಾವು ಲೇವಡಿಗೊಳಗಾಗುವುದನ್ನು ಇಷ್ಟ ಪಡುವುದಿಲ್ಲ.

ಹಾಸ್ಯ, ವಿನೋದ ಪ್ರಜ್ಞೆ ಸದಾ ಸ್ವೀಕೃತವಲ್ಲ ಎಂಬ ಸತ್ಯ ಒಮ್ಮೊಮ್ಮೆ ಗೊತ್ತಾಗದಂತೆ ಅಪಾಯ

ತಂದೊಡ್ಡುತ್ತದೆ.

ಸಾವಿರಾರು ಜನ ಸ್ನೇಹಿತರಾಗುತ್ತಾರೆ. ನೂರಾರು ಜನ ಒಳಗೊಳಗೆ ನಸುನಗುತ್ತಲೇ ವೈರಿಗಳಾಗುತ್ತಾರೆ.

ಹಾಗಂತ ನಾವು ಹಾಸ್ಯ ಪ್ರಜ್ಞೆಯನ್ನು ಕೈಬಿಟ್ಟು ಮುಖ ಸಿಂಡರಿಸಿಕೊಂಡಿರಬೇಕೆಂದು ಅರ್ಥವಲ್ಲ.

ನನಗೊಬ್ಬ ಗೆಳೆಯರಿದ್ದರು. ನನ್ನ ವಿನೋದ ಪ್ರಜ್ಞೆ ಅವರಿಗೆ ಪ್ರಿಯವಾಗುತ್ತಿತ್ತು. ಆದರೆ ಅವರ So called

followers ಗೆ ಅದು ಇಷ್ಟವಾಗುತ್ತಿದ್ದಿಲ್ಲ. ಕಾರಣವಿಷ್ಟೇ ದೊಡ್ಡವರೆಂದು ಪರಿಗಣಿಸುವವರಿಗೆ (?) joke

ಮಾಡಬಾರದೆಂಬ ಸಣ್ಣ ಭ್ರಮೆ. ಅವರ ಅಭಿಮಾನಿಗಳ ಮಾತನ್ನು ಲೆಕ್ಕಿಸದಂತೆ ಹಾಗೆ ಇರುವುದು

ಅನಿವಾರ್ಯವಾಯಿತು.

ಯಾವುದೋ ಒಂದು ಲಾಟರಿ ಹೊಡೆದು ಅವರ ಸ್ಥಾನ ಮಾನ ಮೇಲ್ದರ್ಜೆಗೇರಿತು. ಆಗ ಅವರಿಗೆ ಅವರ

followers ಮಾತೇ ಪ್ರಿಯವೆನಿಸಿ ಗಂಭೀರರಾದರು.

ನಾನು ಅಷ್ಟೇ ಹೋಗೊ, ಎಂದು ಸುಮ್ಮನಾದೆ. ಸ್ನೇಹದ ಬೆಲೆ ಗೊತ್ತಿರದವರೊಂದಿಗೆ ಸ್ನೇಹ ಸಲ್ಲದು ಎಂಬ ಹೊಸ

ಪಾಠ ಕಲಿತೆ. ಅದೇ ರೀತಿ ಗೊತ್ತಿರುವ family friends ಪರಿವಾರದವರು ಸಲಿಗೆಯಿಂದಲೇ ಇದ್ದರು. ಒಂದು

ಗಳಿಗೆಯಲ್ಲಿ ಅವರ mood ಸರಿ ಇಲ್ಲದಾಗ ಅಯ್ಯೋ ಸರ್ ಗೆ joke ಮಾಡಬೇಡ ಎಂದು ಹೇಳಿ ಎಂದು

ಕುಟುಂಬದವರೊಂದಿಗೆ ಮುನಿಸಿಕೊಂಡರು. ನನ್ನ ಸಲುವಾಗಿ ಅವರ ಕುಟುಂಬದಲ್ಲಿ ಮುನಿಸು ಬೇಡ ಎಂಬ ಹೊಸ

ಪಾಠ ಕಲಿಯುವುದು ಅನಿವಾರ್ಯವಾಗಿದೆ.

ಹೀಗೆ ಬದುಕು ಅನೇಕ ಸರಣಿ ಪಾಠಗಳನ್ನು ಕಲಿಸುತ್ತದೆ. ಇದು ನಮ್ಮ ವ್ಯಕ್ತಿತ್ವ ಬೆಳವಣಿಗೆಗೆ ಪೂರಕವಾಗುತ್ತದೆ.

ಇದೇ ಕಾರಣವನ್ನು ಮಾನ್ಯ ಮುಖ್ಯಮಂತ್ರಿಗಳಾಗಿದ್ದ ಜೆ.ಎಚ್. ಪಟೇಲರು ಹೇಳಿದ್ದರು. ಅವರ ಹಾಸ್ಯ

ಪ್ರವೃತ್ತಿಯನ್ನು ಅವರ ಎಲ್ಲ ಸಮಕಾಲಿನರು ಒಪ್ಪಿಕೊಂಡಿದ್ದರು. ರಾಜಕೀಯವಾಗಿ ಬೇರೆ ಪಕ್ಷದಲ್ಲಿದ್ದವರಿಗೂ

ಪಟೇಲರ ಹಾಸ್ಯ ಪ್ರಜ್ಞೆ ತುಂಬಾ ಇಷ್ಟವಾಗುತ್ತಿತ್ತು.

ಇಂತಹ ಸಂದರ್ಭದಲ್ಲಿ ಅದೇ ತಾನೇ ಆಯ್ಕೆಯಾಗಿ ಮಂತ್ರಿಯಾಗಿದ್ದ ಎಳಸಲು ವ್ಯಕ್ತಿಯೊಬ್ಬನಿಗೆ ಪಟೇಲರು

ಜೋಕ್ ಮಾಡಿ ಪೇಟಗೆ ಸಿಕ್ಕರಂತೆ. ಗುಂಡು ಪಾರ್ಟಿಯಲ್ಲಿ ಪಟೇಲರ ಹಾಸ್ಯಪ್ರಜ್ಞೆಯನ್ನು ಅರಿಯದ ಅವಿವೇಕಿ,'ರೀ

ಪಟೇಲರೇ ನಾನು ಕ್ಯಾಬಿನೆಟ್ ಮಂತ್ರಿ, ನೋಡಿ ಮಾತಾಡ್ರಿ' ಎಂದು ಗುಡುಗಿದನಂತೆ. ಅದು ಪಟೇಲರ

ಬದುಕಿನಲ್ಲಾದ ಮೊದಲ ಘಟನೆ. ಹಾಗಂತ ಪಟೇಲರೇನು ತಮ್ಮ ಪ್ರಜ್ಞೆಯನ್ನು ಕಳೆದುಕೊಳ್ಳಲಿಲ್ಲ. ಇದನ್ನು

ಹೇಳಿವ ಉದ್ದೇಶವಿಷ್ಟೇ ಒಮ್ಮೊಮ್ಮೆ ದೊಡ್ಡವರು ಆತಂಕ ಎದುರಿಸುತ್ತಾರೆ ಎಂಬುದು.

ಅವರ ವಿನೋದ ಪ್ರಜ್ಷೆಯನ್ನು ಅಭಿನಂದಿಸಿದಾಗ ನನಗೆ ಪಟೇಲರು ಮೇಲಿನ ಘಟನೆಯನ್ನು ವಿವರಿಸಿ

ಎಚ್ಚರಿಸಿದ್ದರು.

ನಾನು ಕೆಲವು ಸ್ನೇಹಿತರನ್ನು (?) ಕಳೆದುಕೊಂಡಾಗ ಮೇಲಿನ ಮಾತುಗಳು ನೆನಪಾದವು ಅಷ್ಟೆ!

ಬದುಕೆಂಬ ರೈಲಿನಲ್ಲಿ ಹತ್ತುವವರು ಹತ್ತುತ್ತಾರೆ, ಇಳಿಯುವವರು ಇಳಿಯುತ್ತಾರೆ. ನಮ್ಮ ಗಾಡಿ ಓಡುತ್ತಲೇ

ಇರಬೇಕು. ಈ ನಿರ್ಲಿಪ್ತತೆ ರೂಪಿಸಿಕೊಳ್ಲಲು ಕಾಲ ಬೇಕಾಗುತ್ತದೆ.

ಅದಕ್ಕೆ ಹೇಳುತ್ತೇನೆ. ವಿನೋದ ಬಿಡಬೇಡಿ, ಆದರೆ ಎಲ್ಲರೊಂದಿಗೆ ಮಾಡಬೇಡಿ.


No comments:

Post a Comment