Thursday, September 16, 2010

ನಿನ್ನೊಂದಿಗೆ ಸದಾ

ಸಣ್ಣಗೆ ರಿಂಗಣವಾಡಿದ ಸೆಲ್, ಅದರಲ್ಲಿ ಮೂಡಿಬಂದ ನಿನ್ನ photo ಮತ್ತೊಮ್ಮೆ ಇತಿಹಾಸವನ್ನು ನೆನಪಿಸಿತು.

ನಿನ್ನೊಂದಿಗಿನ ಬಂಧನವನ್ನು ಇತಿಹಾಸವೆಂದರೆ ಹೇಗೆ? ವರ್ತಮಾನದಲ್ಲಿ ಈಗ ಇರದಿದ್ದರೂ, ಭವಿಷ್ಯದಲ್ಲಿ

ಸಿಗುವುದಿಲ್ಲ ಎಂದಂತಾಗುತ್ತದೆ.

ಮಾಂಡೋವಿಯ ನಾಯಕ ಕಾಯಲಿಲ್ಲವೆ? ಹಾಗೆ ಕಾಯಬೇಕು ಎನಿಸಿದೆ ಕಾಯುತ್ತೇನೆ.

ಅಂದ ಹಾಗೆ ಈಗ ಯಾಕೆ ಮಾತನಾಡಿದೆ. ನಿನ್ನ ವರ್ತಮಾನವನ್ನು ಲೆಕ್ಕಿಸದೆ ಹಳೆಯ ಸಲುಗೆಯಿಂದ

ಮಾತನಾಡಿದ್ದು ಅಚ್ಚರಿ ಆಗಿರಬೇಕಲ್ಲವೆ?

ಅಂದು ------ ದಿನಕ್ಕೆ ನಾಲ್ಕೈದು ಬಾರಿ ಗಂಟೆ ಗಟ್ಟಲೆ ಹರಟೆ ಹೊಡೆಯುವಾಗ ನಾವಿಬ್ಬರು ದೂರಾಗುತ್ತೇವೆ

ಅಂದು ಕೊಂಡಿರಲಿಲ್ಲ. ಇನ್ನೇನು ಒಂದಾಗಿಬಿಡಬೇಕು ಎಂಬ ಸಂಭ್ರಮದಿಂದಲೇ ಅಲ್ಲವೆ ನಾಡೆಲ್ಲ, ಕಾಡೆಲ್ಲ

ಸುತ್ತಾಡಿದ್ದು.

ಇಬ್ಬರ ಜೇಬಿನಲ್ಲಿದ್ದ ಹಣವನ್ನು ಒಟ್ಟುಗೂಡಿಸಿ, ಲೆಕ್ಕ ಹಾಕಿ ಆಯೋಜಿಸುತ್ತಿದ್ದ ಪಯಣಗಳಲಿ ಎಂತಹ

ಮುದವಿತ್ತು. ನವಿಲು ತೀರ್ಥದ Guest House ನಲ್ಲಿ ಮೇಟಿ ನಮ್ಮನ್ನು ನೋಡಿ 'ಕಣ್ಣು ಮಿಟುಕಿಸಿದ್ದು ನೆನಪಾದರೆ

thrill ಅನಿಸುತ್ತದೆ.

ಆಗ ಅದೇ ನಮ್ಮ ಪಾಲಿನ ಸ್ವರ್ಗವಾಯಿತು. ಭಾವ ಬಂಧನದಲ್ಲಿ ಇದ್ದ ಸುಖದ ಮುಂದೆ ಇನ್ನೇನು ಬೇಕಿತ್ತು.

ಎರಡು ರಾತ್ರಿ ಕಳೆಯುವುದರ ಒಳಗೆ ಹಣ ಖಾಲಿ ಆಗುವ ಧಾವಂತ, ಇನ್ನೊಂದು ರಾತ್ರಿಯ ವಸತಿಗೆ ಮೇಟಿ

ಒಪ್ಪಿಕೊಂಡಾಗ ಆದ ಸಂತಸ ಈಗ ಕೋಟಿ ಕೊಟ್ಟರೂ ಸಿಗುವುದಿಲ್ಲ.

ತಣ್ಣನೆ ಹರಿಯುತ್ತಿದ್ದ ನದಿ, ಹಿತಕರವಾದ ತಂಗಾಳಿ ಈಗ ಯಾಕೆ ಸಿಗುತ್ತಿಲ್ಲ. ಯಾಕೆಂದರೆ ನೀನು ನನ್ನೊಂದಿಗೆ

ಇಲ್ಲವಲ್ಲ. ಎಂ.ಎ. ಮುಗಿದು ನಾನು ನೌಕರಿ ಹಾದಿ ಹಿಡಿದಾಗ, ನೀನು ಕೈಜೋಡಿಸುವ ಮಾತಾಡಿದ್ದೆ. ಆ

ವಿಶ್ವಾಸವೂ ನನಗಿತ್ತು.

ನಾನು first ಅಲ್ಲ ಎಂದು ಹೇಳುತ್ತಲೇ ಎಲ್ಲವನ್ನು ಒಪ್ಪಿಕೊಮಡು, ಒಪ್ಪಿಸಿಕೊಂಡಿದ್ದೆ. ದೇಹ - ಮನಸ್ಸುಗಳ

ಸುಖಾನುಭವ ಅರಿಯುವ ಮುನ್ನವೇ ಎಲ್ಲ ಪಾಠವನ್ನು ಮುಕ್ತವಾಗಿ ಕಲಿಸಿ ಕೊಟ್ಟಿದ್ದೆ. ನಾನೆಂತಹ ಅಮಾಯಕ

ಎಂದು ಈಗ ಅನಿಸುತ್ತದೆ. ವಾಸ್ತವದ ಬೆನ್ನು ಹತ್ತಿದ ನೀನು ಇದ್ದಕ್ಕಿದ್ದ ಹಾಗೆ ಭೇಟಿಯನ್ನು ನಿರಾಕರಿಸಿದೆ.

ಆಗ ನನಗಾದ ಹಿಂಸೆ ಅಷ್ಟಿಷ್ಟಲ್ಲ. ಹುಡುಕಿಕೊಂಡು ನೀನಿದ್ದ ಕಾಲೇಜಿಗೆ ಬಂದರೆ ಪರಿಚಯವಿಲ್ಲದಂತೆ ವರ್ತಿಸಿದ್ದು,

ಅಬ್ಬಾ! ಕೇವಲ ಹಾಯ್ ಹೇಳಿ ಯಾಕೋ ಸಹಪಾಠಿ ಜೊತೆ ಹೊರಟಿದ್ದು........

ಪುಟ್ಟ ಲಗೇಜ್ ಹಿಡಿದುಕೊಂಡು ನಿನ್ನೊಂದಿಗೆ ಒಂದೆರೆಡು ದಿನ ಇರುವ ಇರಾದೆಯನ್ನು ಲೆಕ್ಕಿಸದೇ Good bye

ಹೇಳಿದ್ದು. ಅಂದು ಕರಾಳ ರಾತ್ರಿಯನು ಅಲ್ಲೇ ಕಳೆದು ಮರುದಿನ ಭೇಟಿ ಆದಾಗ ಹಾಯ್ ಕೂಡ ಇರದ ಪೂರ್ಣ

ಅಪರಿಚಿತ ನಾನಾದೆ.

ಬದುಕೆಂದರೆ ಇಷ್ಟೊಂದು ಚಲ್ಲಾಟವೇ ಎನಿಸಿತು. ಇದ್ದಕ್ಕಿದ್ದ ಹಾಗೆ ಬದಲಾದ ನಿನ್ನ number........... ವಿಳಾಸ,

ಗೊತ್ತು ಗುರಿ ಎಲ್ಲವನ್ನು ಸಹಿಸಿಕೊಂಡು ಹುಡುಕುವ ಪ್ರಯತ್ನ ಮಾಡಲಿಲ್ಲ.

ಒಂದೆರೆಡು ವರ್ಷಗಳ ನಂತರ ಕವಿಗೋಷ್ಠಿಯಲಿ ಕಂಡ ನಿನ್ನಲಿ ಅದೇ ಕ್ರೂರ, ಅಲ್ಲಲ್ಲ ಹಾಗಂತ ನಾನು

ಭಾವಿಸಿದ್ದೆ. ನೋವಿನ ಕವಿತೆ ನಿನಗಾಗಿ ಎಂಬಂತೆ ಇದ್ದರೂ, ಪಕ್ಕದಲ್ಲಿ ಕುಳಿತಿದ್ದರೂ ಅದೇ ತಾತ್ಸಾರ.

ಹೀಗೆ ಬದುಕು ನನಗೂ ಪಾಠ ಕಲಿಸಿ, ಬೆಳೆಸಿತು. ಈಗ ಬೆಳೆದಿದ್ದೇನೆ ಅಂದುಕೊಂಡಿರುವಾಗ ನಿನ್ನ phone call

ನನ್ನಲ್ಲಿ ಯಾವುದೇ ಬದಲಾವಣೆ ತಂದಿಲ್ಲ. ಹಳೇ ದಾಟಿಯಲ್ಲಿಯೇ ಮಾತನಾಡಿದ್ದೇನೆ. ನಿನ್ನ ಎರಡು ಕ್ರೂರ,

ತಾತ್ಸಾರದ ಭೇಟಿಗಳನ್ನು ಲೆಕ್ಕಿಸದೇ.

ನೀನು ಅಷ್ಟೇ, ನೋಟಕ್ಕೆ, ನೇರವಾಗಿ ಸಿಗದೇ, ಹಳೆ ಸಲುಗೆಯಲ್ಲಿ ನವಿಲು ತೀರ್ಥದ ಮಿಲನದ ನೆನಪುಗಳನ್ನಷ್ಟೇ

ಮೆಲಕು ಹಾಕಬೇಕಾದರೆ ಅದೆಂತಹ ಆತ್ಮವಿಶ್ವಾಸವಿರಬೇಕು.

ನಾನು ಅಷ್ಟೇ ನಿನ್ನ ವರ್ತಮಾನ ಕೇಳಿಲ್ಲ, ಕೇಳವುದು ಇಲ್ಲ. ನನಗದರ ಅಗತ್ಯವೂ ಇಲ್ಲ.

ಮಿಲನದ ನೆನಪುಗಳನ್ನು ಹೊತ್ತು ನೀನೆನಾದರೂ ಎದುರಿಗೆ ಬಂದರೆ ಹಾಗೆಯೇ ಸ್ವೀಕರಿಸುತ್ತೇನೆ.

ಆಗ............. ನನ್ನ ಮೇಲೆ ಯಾಕೆ ತಿರಸ್ಕಾರ ಉಂಟಾಯಿತು ಎಂದು ಕೇಳುವುದು ಇಲ್ಲ! ಕೇಳಿದರೆ ಯಾವ

ಪ್ರಯೋಜನವೂ ಇಲ್ಲ!!

ಅಂದ ಹಾಗೆ ಮುಂದೆ ಭೇಟಿ ಆಗುವ ಪ್ರಸ್ತಾಪ ಇಟ್ಟಿದ್ದೆಯಲ್ಲ, ಹಾಗಾದರೆ ಅದೇ ನವಿಲು ತೀರ್ಥದ Guest

House ನಲ್ಲಿಯೇ ಭೇಟಿ ಆಗೋಣ . ಮೊದಲಿನ ಹಾಗೆ ಅಸಾಧ್ಯವಾಗಬಹುದು. ನನಗೀಗ ಖಂಡೀತಾ

ವಯಸ್ಸಾಗಿಲ್ಲ. ಕೂದಲು ಅಲ್ಲಲ್ಲಿ ಬೆಳ್ಳಗಾಗಿ, ಅಲ್ಲ ಮೆಹಂದಿ ಆಕ್ರಮಿಸಿದೆ. ಮೊದಲಿನ ಹಾಗೆ slim ಆಗಿ ಉಳಿದಿಲ್ಲ.

ನಿನ್ನ ಪಾಡು ಇನ್ನೇನಾಗಿರಬೇಡ? ನೀನು ಹೇಗೆ ಇದ್ದರೂ, ಏನೇ ಆಗಿದ್ದರೂ ಮಾತು ಕೊಟ್ಟಂತೆ ಅದೇ

ಜೇವನೋತ್ಸಾಹದಲ್ಲಿ ನಿನ್ನನ್ನು ಸೇರುತ್ತೇನೆ. ವಯಸ್ಸಾಗಿರುವುದು ದೇಹಕ್ಕೆ ಹೊರತು ಮನಸ್ಸಿಗೆ ಅಲ್ಲವಲ್ಲ. see

you again.

No comments:

Post a Comment