Monday, September 27, 2010

ಇಂಗ್ಲಿಷ್ ಪರೀಕ್ಷೆ - ಆಪರೇಷನ್ ಡೈಮಂಡ್

ಮೊನ್ನೆ midterm exam ತಪ್ಪಿಸಿದ ವಿದ್ಯಾರ್ಥಿಗಳನ್ನು ತರಾಟೆಗೆ ತೆಗೆದುಕೊಂಡಾಗ ಬಾಲ್ಯದ ಘಟನೆಯೊಂದು

ಧುತ್ತೆಂದು ನೆನಪಾಯಿತು. ಪರೀಕ್ಷೆಯ ಗಂಭೀರತೆ ಬಗ್ಗೆ ವಿದ್ಯಾರ್ಥಿಗಳಿಗೆ ಕಟ್ಟು ನಿಟ್ಟಾಗಿ ಆದೇಶಿಸುವ ಈ

ಕಾಲದಲ್ಲಿ ನೆನಪಾದ ಬಾಲ್ಯಕ್ಕಾಗಿ ಅಚ್ಚರಿ.

ಆಗ ನಾವು 10th ಪರೀಕ್ಷೆ ಬರೆಯಲು ಗಂಗಾವತಿಗೆ ಹೋಗಬೇಕಿತ್ತು. ಹಿಂದೆ ಪ್ರಸ್ತಾಪಿಸಿದಂತೆ - ಶಿಕ್ಷಣದ ಬಗೆಗಿನ

ಅಸಡ್ಡೆ, ಪಾಲಕರ ನಿರಾಸಕ್ತಿ ಹೀಗೆ ಹತ್ತಾರು ಕಾರಣಗಳಿಂದ backward ಎಂಬ ಹಣೆಪಟ್ಟಿ.

ಆಗ ನಮಗೆ ಪ್ರತಿ - ವಿಷಯಕ್ಕೂ ಎರಡು ಪೇಪರ್ಸ. ಬೆಳಗಿನ paper ಚೆನ್ನಾಗಿ ಆದರೆ, ಮಧ್ಯಾಹ್ನದ paper

ಮೂಲಕ ಪಾಸಾಗುವ ಭರವಸೆ. ಹತ್ತನೇ ವಾರ್ಷಿಕ ಪರೀಕ್ಷೆಯ ಇಂಗ್ಲಿಷ್ ಮುಂಜಾನೆಯ paper ಸರಿಯಾಗಲಿಲ್ಲ.

ಮಧ್ಯಾಹ್ನದ ಪೇಪರ್ ಬಗ್ಗೆ ಇದ್ದ ಗಂಭೀರತೆಯೂ ಮಾಯವಾಯಿತು. ಅದು ವಾರ್ಷಿಕ ಪರೀಕ್ಷೆ fail ಆದರೆ ಒಂದು

ವರ್ಷ ಭವಿಷ್ಯ ಹಾಳು.

At least ಆ ಕಾರಣಕ್ಕಾದರೂ ನಾನು ಮಧ್ಯಾಹ್ನದ paper ಬಗ್ಗೆ Serious ಆಗ ಬೇಕಿತ್ತು. ಆದರೆ ದುರಾದೃಷ್ಟ.

ಆಲಕ್ಷಿಸಿದೆ. ನನಗಿಂತ ಎರಡು ವರ್ಷ ಮುಂದಿದ್ದ ಬಂಧು ಅರಳಿ ಅಪ್ಪಣ್ಣನಿಗೆ ಮಧ್ಯಾಹ್ನದ ಪೇಪರಿನ ನಿರಾಸಕ್ತಿ

ಹೇಳಿದೆ. ಮನಸ್ಸಿಲ್ಲಂದರೆ film ಗೆ ಹೋಗೋಣೇನು ಅಂದದ್ದೇ ತಡ yes ಎನ್ನಬೇಕೆ?

ಇಂಗ್ಲಿಷ್ paper ಗೆ ಬೈ, ಬೈ ಹೇಳಿ ನೋಡಲು ಆಯ್ದುಕೊಂಡ ಸಿನೆಮಾ ರಾಜ್ ನಟಿಸಿದ ಆಪರೇಷನ್

ಡೈಮಂಡ್ ರಾಕೆಟ್. ಮದ್ಯಾಹ್ನ ಉರಿಬಿಸಿಲಿನ ಸೆಕೆಯಲ್ಲಿ ಸಿನೆಮಾ ನೋಡಿ ಪರೀಕ್ಷೆಗೆ ನೀರು ಬಿಟ್ಟ ವಿಷಾದ

ಒಂಚೂರು ಮನಸ್ಸಿನಲ್ಲಿರಲಿಲ್ಲ. ಅಂತಹ ಅವಿವೇಕ ಮನಸು ನನ್ನದು.

ಸಿನೆಮಾ ಮುಗಿಸಿ ವಾಸವಾಗಿದ್ದ ಅರಳಿಯವರ ಮನೆಯತ್ತ ಪಯಣ, ಅಪ್ಪಣ್ಣ ನ ಹಿರಿಯ ಅಣ್ಣ ನಾಗರಾಜ

ಮಾಮಾ ತುಂಬಾ ಕಟ್ಟು ನಿಟ್ಟಿನ ಮನುಷ್ಯ. ದಿನ ಮನೆಗೆ ಹೋದ ಕೂಡಲೆ ಪ್ರಶ್ನೋತ್ತರ ಕೇಳುತ್ತಿದ್ದರು. ಮನದಲ್ಲಿ

ಏನೋ ಉತ್ತರ ಹೆಣೆದುಕೊಂಡು ಹೋದೆ.

ಅನೀರಿಕ್ಷಿತವಾಗಿ ನಾಗರಾಜ ಮಾಮ ವರಾಂಡದಲ್ಲಿ ಕುಳಿತಿದ್ದರು. ಏನಲೇ ಇಂಗ್ಲಿಷ್ ಪೇಪರ್ ಹೆಂಗಾತು

ಎಂದರು. ಅಷ್ಟೇನು ಛಲೋ ಆಗಲಿಲ್ಲ ಎಂದೆ.

ಯಾಕ ಪೇಪರ್ ಕಠಿಣ ಇತ್ತಾ ಎಂದರು. ಉತ್ತರ ನೀಡಲು ತಪ್ಪಿಸಿಕೊಂಡು ಒಳಹೋಗಲು ಪ್ರಯತ್ನಿಸಿದೆ. ಅವರು

ಬಿಡುವ ಹಾಗೆ ಕಾಣಲಿಲ್ಲ. ಗೆಳೆಯ ಅಪ್ಪಣ್ಣ ಹಾಗೂ ನನ್ನನ್ನು ಎದುರಿಗೆ ಕೂಡಿಸಿಕೊಂಡು ಪ್ರಶ್ನೆಗಳ ಸುರಿಮಳೆ

ಆರಂಭಿಸಿದರು. ನನಗೆ ನಡುಕ ಶುರು ಆಯ್ತು. ಅವರ ಮನೆಯ ಆಳಿಗೆ ಬಡಿಗೆ ತರಲು ಹೇಳಿದರು.

ನಿಜ ಹೇಳಲೇ paper ಹೆಂಗಾತು ಅಂತ ಮತ್ತದೇ ಪ್ರಶ್ನೆ. ಇಲ್ಲ ಮಾಮಾ pass ಆಗೋ chance ಕಡಿಮೆ

paper tough ಇತ್ತು ಎಂದು ಹುಸು ಬಾಂಬ್ ಒಗೆದೆ. ಪ್ರಶ್ನೆ ಪತ್ರಿಕೆ ತಾ ಎಂದರು.

ಅದನ್ನು ಗೆಳೆಯ ಒಯ್ದಿದ್ದಾನೆ ಎಂದೆ. ಅವರ ಪಿತ್ತ ನೆತ್ತಿಗೇರಿತು.

ಕೈ ಮುಂದೆ ಚಾಚಲು ನಯವಾಗಿ ನಿರಾಕರಿಸಿದೆ. ನನ್ನ ತಪ್ಪಿನಿಂದಾಗಿ ಹೊಡೆತ ಅಪ್ಪಣ್ಣನಿಗೆ ಬಿತ್ತು.

ಬದ್ಮಾಶ ನನ್ನ ಮಕ್ಕಳ paper ಬರೆದು pass ಆಗ್ರಿ ಅಂದ್ರ ಏನ್ ನಡೆಸೀರಿ ಅಂದರು.

ನಾನು ಪ್ರಶ್ನೆ ಕೇಳ್ತಿನಿ ತಪ್ಪದೆ ಉತ್ತರ ಕೊಡು ಅಂದರು. ಪ್ರಶ್ನೆ ಒಂದು ಆಪರೇಷನ್ ಡೈಮಂಡ್ ರಾಕೆಟ್

ಸಿನೆಮಾ ಗಂಗಾವತಿಯಲ್ಲಿ ಯಾವ ಟಾಕೀಸ್ ನಲ್ಲಿದೆ? ಗೊತ್ತಿಲ್ಲ ಎಂದೆ. ಪ್ರಶ್ನೆ ಎರಡು ಈ ಚಿತ್ರದ ಹೀರೋ

ಯಾರು ಅಂದ್ರು ಗೊತ್ತಿಲ್ಲ ಅಂದೆ. ನನ್ನ ಕೈಯಲ್ಲಿದ್ದ pad ತಗೆದುಕೊಂಡು ತಲೆಗೆ ಗುದ್ದಿದರು. ಅಳಲು ಶುರು

ಮಾಡಿದೆ. ಒದೀತಿನಿ ಮಗನೆ ಸುಳ್ಳು ಬೊಗಳಿದ್ರಾ. ಖರೆ ಹೇಳು ಮಧ್ಯಾಹ್ನ ಎಲ್ಲಿಗೆ ಹೋಗಿದ್ರಿ. ನಿರುತ್ತರರಾದೆವು.

ಪರೀಕ್ಷೆ ಬರಿರಲೆ ಮಕ್ಕಳಾ ಅಂದ್ರ ಸಿನೆಮಾ ನೋಡ್ತಾರ, ಸಿನೆಮಾ ಅದು ಇಂಗ್ಲಿಷ್ ಪೇಪರು ತಪ್ಪಿಸಿ. ಆಪರೇಷನ್

ಢೈಮಂಡ್ ಸಿನೆಮಾ ಅಂದು ಒದೆಕೊಟ್ಟರು.

ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದದ್ದನ್ನು ನೋಡಿದ್ದಾರೆ ಎಂಬ ಸತ್ಯ ಗೊತ್ತಾಯಿತು. ಮನೆಯಲ್ಲಿನ ಬಂಧುಗಳು,

ಆಳುಕಾಳುಗಳನ್ನು ಕೂಡಿಸಿಕೊಂಡು ನಮ್ಮ ಸಿನೆಮಾ ಪಯಣ ಅವರೇ ವಿವರಿಸಿದರು. ಟಾಕೀಸಿನಲ್ಲಿ ನಮ್ಮನ್ನು

ನೋಡಿದ್ದು. ಪರೀಕ್ಷೆ ತಪ್ಪಿಸಿ ಸಿನೆಮಾ ನೋಡಿದ ಬೇಜವಾಬ್ದಾರಿಯನ್ನು ಎಳೆಎಳೆಯಾಗಿ ಬಿಡಿಸುವಾಗ ಎಲ್ಲರೂ

ನಕ್ಕಿದ್ದೇ ನಕ್ಕಿದ್ದು.

ಇಲ್ಲ ಬಿಡು ಅಣ್ಣಾ ಇಂಗ್ಲಿಷ್ ನಲ್ಲಿ knowledge ಹೆಚ್ಚಾಗಲಿ ಅಂತ bond film ನೋಡಲು ಹೋಗಿದ್ದಾರೆ ಎಂದು

ಎಲ್ಲರೂ ತಮಾಷೆ ಮಾಡಿದಾಗ ಒದೆ ತಿಂದು ಅಳುತ್ತಾ ಒಳಗೆ ಹೋದೆವು. ಮುಂದೆ ಒಂದು ತಾಸು ಪರೀಕ್ಷೆಯ

ಗಂಭೀರತೆ ಬಗ್ಗೆ ತಿಳಿ ಹೇಳಿದರೂ, ಅದು ನನ್ನ ತಲೆಯಲ್ಲಿ ಹೋಗಲೇ ಇಲ್ಲ. ಪರೀಕ್ಷೆ ತಪ್ಪಿಸಿದರೆ ಏನು ಮಹಾ,

ಮತ್ತೆ October ನಲ್ಲಿ ಬರೆಯಬಹುದು ಎಂದು ಮನಸು ಲೆಕ್ಕ ಹಾಕಿತು. ಹೇಗೋ ಬೆಳಗಿನ paper ಸರಿ

ಆಗಿರಲಿಲ್ಲ. ಹೆಂಗೊ ಮಧ್ಯಾಹ್ನದ್ದು ಸರಿ ಆಗುತ್ತಿರಲಿಲ್ಲ. ಅದಕ್ಕೆ ಹೋದೆ. ಎಂಬ ಸಮರ್ಥನೆ ಮನಸ್ಸಿನಲ್ಲಿ

ಕೊರೆಯುತ್ತಿತ್ತು. ಹೇಳಿದರೆ ಮತ್ತೆ ಒದೆ ಬೀಳುತ್ತಿದ್ದವು. ಉಳಿದ ಮೂರು paper ಸರಿಯಾಗಿ ಬರೆಯಲು

ಆದೇಶಿಸಿದರು.

ಅಬ್ಬಾ! ಅಚ್ಚರಿ ಅಲ್ಲವೆ. ಯಶಸ್ವಿಇಂಗ್ಲಿಷ್ ಉಪನ್ಯಾಸಕನಾಗಿ ಎರಡು ದಶಕಗಳ ಪಾಠ ಮಾಡಿದ ನನ್ನ ಇಂಗ್ಲಿಷ್ ಕತೆ

ನೆನಪಾದರೆ ನನಗೇ ಅಚ್ಚರಿ. ಅಂದುಕೊಂಡಂತೆ fail ಆಗಿ october ನಲ್ಲಿ ಪರೀಕ್ಷೆಯಲ್ಲಿ pass ಅದೆ.

ಮುಂದೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ English ಕಲಿಯಬೇಕೆಂಬ ಹಟದಿಂದ B.A. English

major ತಗೆದುಕೊಂಡೆ.

ಹತ್ತನೆ ವರ್ಗದ ಆಲಕ್ಷ ನನ್ನನ್ನು ತೀವ್ರವಾಗಿ ಕಾಡುತ್ತಿತ್ತು. ಆಪರೇಷನ್ ಡೈಮಂಡ್, ಅರಳಿ ನಾಗರಾಜ ಮಾಮಾ,

ಸಿನೆಮಾಕ್ಕೆ ಕರೆದದ್ದು ಅಪ್ಪಣ್ಣ ಇಂದಿಗೂ ನೆನೆಪಾಗುತ್ತಾರೆ.

ಆದರೆ ನನ್ನ ದಿಢೀರ್ ಬೆಳವಣಿಗೆಯನ್ನು, ಸಾಧನೆಯನ್ನು ಗಂಗಾವತಿ ಅರಳಿ ಪರಿವಾರದವರು ಪವಾಡವೆಂಬಂತೆ

ನೋಡುತ್ತಾರೆ.

ಅಂದ ಹಾಗೆ ಆಪರೇಷನ್ ಗೆಳೆಯ ಅಪ್ಪಣ್ಣ ಈಗ ಗಂಗಾವತಿಯಲ್ಲಿ ದೊಡ್ಡ ವ್ಯಾಪಾರಿ, ಔಷಧಿ ಅಂಗಡಿಯ ಮೂಲಕ

ಶ್ರೀಮಂತ ನಾಗಿ ಬೆಳೆದಿದ್ದಾನೆ.

ಒದೆ ಕೊಟ್ಟು ಬುದ್ದಿ ಕಲಿಸಿದ ನಾಗರಾಜ ಮಾಮಾ ಈಗ ಹೈಕೋರ್ಟನ ಗೌರವಾನ್ವಿತ ನ್ಯಾಯ ಮೂರ್ತಿ

ಗಳಾಗಿರುವ ಶ್ರೀ ಅರಳಿ ನಾಗರಾಜ ಅವರು.

ಕಾಲ ಬದಲಾಗಿದೆ. ಎಲ್ಲರೂ ಈ ಘಟನೆಯನ್ನು ತಮಾಷೆಯಿಂದ ನೆನಸಿಕೊಂಡರೂ ಒಂದು ಒಳಾರ್ಥವಿದೆ. ಈ

ಘಟನೆಯನ್ನು ಮರೆತಿದ್ದ ನ್ಯಾಯ ಮೂರ್ತಿಗಳಿಗೆ ನಾನೇ ನೆನಪಿಸಿದಾಗ ಹೇಗಿದ್ದವನು ಹೇಗಾದೆಲೇ ಎಂದು

ತಮಾಷೆಯಿಂದ ಹೊಟ್ಟೆ ತುಂಬಾ ನಕ್ಕರು.

No comments:

Post a Comment