Thursday, September 23, 2010

ಹೀಗೊಂದು ಸಿನೆಮಾ ಕತೆ

ಗದುಗಿನ ಉತ್ಸಾಹಿ ಯುವಕ ಅನಿಲ ಮೆಣಸಿನ ಕಾಯಿ ಅನೇಕ ಸಾಹಸಗಳನ್ನು ಪ್ರಯೋಗಿಸುತ್ತಾನೆ. ಹತ್ತಾರು

ವರ್ಷಗಳ ಪರಿಚಯದಲ್ಲಿ ಸಾಧ್ಯವಾದಷ್ಟು ಸಲಹೆ ನೀಡಿದ್ದೇವೆ ಎಂಬುದೊಂದು ನೆಪ.

ವೈಯಕ್ತಿಕ risk ಗಳೊಂದಿಗೆ ಏನನ್ನಾದರೂ ಸಾಧಿಸುವ ಅವನ ಸಾಹಸವನ್ನು ಬೆಂಬಲಿಸಬೇಕು ಎನಿಸುತ್ತದೆ.

ಈಗ ಅನಿಲ ಹೊಸ ಸಾಹಸಕ್ಕೆ ಕೈಹಾಕಿ ಸಿನೆಮಾ ನಿರ್ಮಿಸುತ್ತಿದ್ದಾನೆ. ಖ್ಯಾತ ಸಾಹಿತಿ - ಮಾಜಿ ಶಾಸಕ

ಮಹದೇವ ಬಣಕಾರ ಅವರ ಪುತ್ರ ಉಮೇಶ ಬಣಕಾರ ಸಹಯೋಗದೊಂದಿಗೆ ದಿನೇಶ್ ಬಾಬು ನಿರ್ದೇಶನದಲ್ಲಿ

'ಮತ್ತೊಂದ್ ಮದುವೇನಾ' ಚಿತ್ರವನ್ನು ತಯಾರಿಸುವ ಕಾರಣಕ್ಕೆ ಶೂಟಿಂಗ್ ನೋಡಲೆಂದೇ ಮೈಸೂರು ಪಯಣ.

ಅನಾರೋಗ್ಯದ ಮಧ್ಯೆ ಸುಧೀರ್ಘ ಪಯಣ ಅಸಮಂಜಸ ಆದರೂ ನೈತಿಕ ಬೆಂಬಲ ನೀಡಲು ಡಾ. ಜಿ.ಬಿ.

ಅವರೊಂದಿಗೆ ಒಲ್ಲದ ಪುಟ್ಟ ಯಾತ್ರೆ.

ಒಂದು ದಿನದ ಶೂಟಿಂಗ್ ವೀಕ್ಷಣೆ. ನೆಚ್ಚಿನ ನಟರಾದ ಅನಂತ್ ನಾಗ್. ಸುಹಾಸಿನಿ ಅವರ ಅಭಿನಯ ವೀಕ್ಷಿಸಿದ

ಖುಷಿ. ಅದೆಲ್ಲಕ್ಕಿಂತ ಮುಖ್ಯವಾಗಿ ಉತ್ತರ ಕರ್ನಾಟಕದ ಮೊಟೆ ಬೆನ್ನೂರ ಯುವಕ ಉಮೇಶ್ ಬಣಕಾರ

ಸಿನೆಮಾರಂಗ ಲೆಕ್ಕದಾಟದಲ್ಲಿ ಗೆದ್ದದ್ದು ಖುಷಿಯಾಯಿತು.

ರಂಗು ರಂಗಿನ ನಟಿಯರ ಓಡಾಟ, ದಿನೇಶ ಬಾಬು ಅವರ ಕ್ರಿಯಾಶೀಲತೆ, ಅನಂತ್ ನಾಗ್ ಅವರ ವಿಚಿತ್ರ

ಮೂಡ್, ಸುಹಾಸಿನಿಯ ದೊಡ್ಡ ನಗು, ಶರಣ್, ತಾರಾ, ಜೆನ್ನಿಫರ್, ಅವರ ಓಡಾಟ ಕಣ್ಣಿಗೆ ಹಬ್ಬದನುಭವ.

ಸಿನೆಮಾ ಒಂದು ವಿಚಿತ್ರ ಜಗತ್ತು, ಮೂರು ತಾಸಿನ ಬಂಧನಕ್ಕೆ ಸಾವಿರಾರು ತಾಸುಗಳ ಹೋರಾಟ. ಒಂದೊಂದು

ಶಾಟ್ ಗೆ ತಾಸುಗಟ್ಟಲೆ ಪರಿಶ್ರಮ. ಸಿನೆಮಾ ನೋಡುವಾಗ ತಯಾರಿಸಿದವರ ಪರಿಶ್ರಮ ಅರ್ಥವಾಗುವುದಿಲ್ಲ.

ಚನ್ನಾಗಿದೆ, ಚೆನ್ನಾಗಿಲ್ಲ ಎಂದು ಒಂದೇ ಮಾತಿನಲ್ಲಿ ತಿರಸ್ಕರಿಸುವ ಪ್ರೇಕ್ಷಕ ಪ್ರಭುವನ್ನು ಮೆಚ್ಚಿಸಲು ಅದೆಂತಹ

ಪರಿಶ್ರಮ. ಚಾನೆಲ್ ಹಾವಳಿಯಲ್ಲಿ ಸಿನೆಮಾ ಬಿದ್ದು ಹೋದರು ಸಿನೆಮಾಗಳು ಬಂದೇ ಬರುತ್ತವೆ. ಅಲ್ಲೊಂದು,

ಇಲ್ಲೊಂದು ಯಶಸ್ಸು ಗೆಳೆಯರು ನಿರ್ಮಿಸಿದ ಸಿನೆಮಾ ಯಶಸ್ಸಾಗುತ್ತೆ, ಯಶಸ್ಸಾಗಲೀ ಎಂದು ಹಾರೈಸಿ ಊರಿಗೆ

ಮರಳಿದೆ.

No comments:

Post a Comment