Wednesday, May 19, 2010

ಮನಸೆಂಬ ಮಾಯೆಗೆ ಲಗಾಮು ಹಾಕೋಣ

ಮನಸು, mind ಇತ್ಯಾದಿ ಶಬ್ದಗಳಿಂದ ಕರೆಯುವ ಚೇತನ ಶಕ್ತಿ ಇಡೀ ನಮ್ಮ ಬದುಕನ್ನೇ ನಿಯಂತ್ರಿಸುತ್ತದೆ. ಅದೇ ಕಾರಣಕ್ಕೇ ಹೇಳುತ್ತಾರೆ ಮನಸ್ಸು ಮಾಡಬೇಕು ಎಂದು ಹಾಗಾದರೆ ಯಾವುದಕ್ಕೆ, ಹೇಗೆ ಮನಸ್ಸು ಮಾಡಬೇಕು ಎಂಬುದು ನಮ್ಮ ಕೈಯಲ್ಲಿರಬೇಕು.
ಇಂದು mind power ಬಗ್ಗೆ ತುಂಬಾ ಚರ್ಚೆ ನಡೆದಿದೆ. ವ್ಯಕ್ತಿಯ ವ್ಯಕ್ತಿತ್ವ ಬದಲಾವಣೆಗೆ mind, mentality, attitude ಆಡುವ ಆಟವನ್ನು ಜಗತ್ತು ಅರಿತಿದೆ.
ನಮ್ಮ ಮನೋಧರ್ಮ, ದೃಷ್ಠಿಕೋನ ಬದಲಿ ಆಗಲು 'ಮನಸು' ಮಾಡುವುದೇ ಮುಖ್ಯ ಎಂಬ ಕಾರಣಕ್ಕೆ ಮನಸು ಮಹತ್ವದ ಸ್ಥಾನ ಪಡೆದಿದೆ.
ಇದು ಕೇವಲ ಇಂದಿನ ಚರ್ಚೆಯಲ್ಲ, ಹಿಂದಿನಿಂದಲೂ ಸಾಗಿದೆ ಎನ್ನುವುದಕ್ಕೆ ನಮ್ಮ ಬಸವಾದಿ ಶರಣರ ವಚನಗಳೇ ಸಾಕ್ಷಿ. ನಮ್ಮ ಎಲ್ಲ ದು:ಖಗಳಿಗೆ ಮನದ ಮುಂದಿನ ಮಾಯೆಯೇ ಕಾರಣ ಎನ್ನುತ್ತಾರೆ. ಹೀಗಿರುವಾಗ ಆಧುನಿಕ ವೈಜ್ಞಾನಿಕ ಯುಗದಲ್ಲಿ ಮನದ ಮಾತಾಡುವುದು ಯಾವ ಲೆಕ್ಕ.
ಮನಸಿನ ಮೂರು ಹಂತಗಳನ್ನು ಚರ್ಚಿಸಲಾದಂತೆ subconscious mind ಗೆ ಪ್ರಾಧಾನ್ಯತೆ ಇರುವುದು ಸ್ಪಷ್ಟವಾಗುತ್ತದೆ.
ನಮ್ಮ ಬದುಕಿನಲ್ಲಿ ನಡೆದ ಹಲವಾರು ಘಟನೆಗಳಿಂದಾಗಿ ನಮ್ಮದೇ ಆದ ಒಂದು ಮನಸ್ಥಿತಿ ರೂಪಿತವಾಗಿರುತ್ತದೆ. ಆ ಮನಸ್ಥಿತಿಯಲ್ಲಿ ಅನೇಕ ಲೋಪದೋಷಗಳಿರುತ್ತವೆ. ಅವುಗಳನ್ನು ಶಾಸ್ತ್ರೋಕ್ತವಾಗಿ ಅರಿಷಡ್ ವರ್ಗಗಳು ಎಂದು ವಾಖ್ಯಾನಿಸುತ್ತಾರೆ. psychology ಯಲ್ಲಿ negative thoughts ಎನ್ನುತ್ತಾರೆ.
'ಇಲ್ಲ' ಎನ್ನುವ ಧೋರಣೆ 'ಹೌದು' ಎಂದಾಗಬೇಕಾದರೆ ಮನದ ಹಟಮಾರಿತನ ಕಡಿಮೆ ಆಗಬೇಕು. ಸಂಪೂರ್ಣ ನಿಲ್ಲಿಸಬೇಕು ಎಂದರೆ ಒಣ ಉಪದೇಶವಾಗುತ್ತದೆ. ಆದ್ದರಿಂದ ಎಲ್ಲ negative ಗುಣಗಳನ್ನು ಹಂತಹಂತವಾಗಿ ನಿಲ್ಲಿಸಲು ಸಾಧ್ಯ.
ಅದನ್ನೇ development ಎನ್ನುತ್ತೇವೆ. developing ಹಂತ ಮುಗಿದು ಪರಿಪೂರ್ಣವೆನಿಸಿದಾಗ transformation ಸಾಧ್ಯವಾಗುತ್ತದೆ.
ಇದನ್ನೇ ಸೂತ್ರವಾಗಿಟ್ಟುಕೊಂಡು ಬದುಕನ್ನು ರೂಪಿಸಿಕೊಳ್ಳಲು ಸ್ವಾಮಿ ವಿವೇಕಾನಂದ ಕರೆನೀಡಿದ್ದಾರೆ.
ನಮ್ಮ ಅತೀಯಾದ ವಿಮರ್ಶೆ, ಕ್ರಮಬದ್ಧ ಆಲೋಚನೆಗಳು ಯಶಸ್ಸನ್ನು ತಂದುಕೊಡುತ್ತವೆ ಎಂಬುದು ಕೂಡಾ ಅಷ್ಟೊಂದು ಸಮಂಜಸವಲ್ಲ. ಆದರೆ ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ಇದ್ದು positive ಗುಣ ಇದ್ದರೆ ಸಾಕು ಎನ್ನುತ್ತಾರೆ.
Set your target and achieve it,
what ever it takes just do it.
Don't analyse too much.
Just do it. Problems only make you strong.
You are born to win ಎನ್ನುತ್ತಾರೆ. ಉದಾತ್ತ ಗುರಿ ಹಾಕಿಕೊಳ್ಳುವ ಮನಸು ಮಾಡಬೇಕು. ಕ್ರಮಿಸುವ ಹಾದಿಯಲಿ ಬರುವ ಎಲ್ಲ ತೊಂದರೆಗಳನ್ನು ಎದುರಿಸುವ ಮನೋಸ್ಥಿತಿ ನಿರ್ಮಾಣವಾದಾಗ ಯಶಸ್ಸಿನ ಅಹಂಕಾರವಾಗಲೀ, ಸೋಲಿನ ನೋವಾಗಲಿ ಕಾಡುವುದಿಲ್ಲ. ಎಲ್ಲವನ್ನು ಸಮಾನವಾಗಿ, ನಿರ್ಲಿಪ್ತವಾಗಿ ಸ್ವೀಕರಿಸುವ ಶಾಂತ ಸ್ವಭಾವ ನಮ್ಮದಾದಾಗ ನಮ್ಮ ನಡೆ ಸರಳವಾಗಿರುತ್ತದೆ.
ನಾವು ಶಾಂತಚಿತ್ತರಾಗಿ ಆಲೋಚಿಸಿ ನಮ್ಮ ಗುಣಧರ್ಮಗಳನ್ನು ವಿರಾಮರ್ಶೆಗೆ ಒಡ್ಡಬೇಕು. ಬೇರೆಯವರನ್ನು ಮೆಚ್ಚಿಸುವಂತೆ, ಒಪ್ಪಿಸುವಂತೆ ನಡೆದುಕೊಳ್ಳುವುದು ಬಹಳ ಸುಲಭ.
ಆದರೆ ಈ ಹಿಪೋಕ್ರಸಿ ಬೇಗ ಅಲ್ಲದಿದ್ದರೂ ಒಮ್ಮೆಯಾದರೂ expose ಆಗುತ್ತದೆ. ಒಮ್ಮೆ ಈ ಹಿಪೋಕ್ರಸಿ expose ಆದರೆ ನಮ್ಮ ವ್ಯಕ್ತಿತ್ವ ಶಿಥಿಲವಾಗುತ್ತದೆ.
ಈ ಕಾರಣದಿಂದಾಗಿಯೋ ನಾವು ಬೇರೆಯವರನ್ನು ಅತಿಯಾಗಿ ಹೊಗಳುವ, ತೆಗಳುವ ಕೆಲಸಕ್ಕೆ ಮುಂದಾಗುತ್ತೇವೆ. ನಮ್ಮ ಈ ಭಾವನೆಗಳು ಅವರಿಗಾಗಿ ಅಲ್ಲ ಕೇವಲ ನಮ್ಮ ಮನೋಧರ್ಮ ಸಾಬೀತಾಗಲು ಎಂಬುದನ್ನು ಅರಿಯಬೇಕಾಗುತ್ತದೆ. ಆದ್ದರಿಂದಲೇ ತುಂಬಾ ಜಾಣರು, ಪರಿಪೂರ್ಣ ವ್ಯಕ್ತಿತ್ವ ಹೊಂದಿದವರು ಹೊಗಳಿಕೆಗಾಗಲೀ, ತೆಗಳಿಕೆಗಾಗಲೀ ಬಗ್ಗುವುದಿಲ್ಲ. ಸುಮ್ಮನೆ ಮುಗುಳ್ನಗುತ್ತಾರೆ ಅಷ್ಟೇ!
ನಿಮ್ಮ ಹೊಗಳಿಕೆ, ತೆಗಳಿಕೆಯ ಹಿಂದಿನ ಉದ್ದೇಶ, agenda ಅವರಿಗೆ ಅರ್ಥವಾಗಿಬಿಡುತ್ತದೆ.
ಆದ್ದರಿಂದ ನಮ್ಮೊಳಗೆ ಅಡಗಿರುವ, ನಮ್ಮನ್ನು ಸದಾ ಕಾಯುತ್ತಿರುವ ಮನಸಾಕ್ಷಿಯನ್ನು ಮೆಚ್ಚಿಸುವ ಕೆಲಸ ಮಾಡೋಣ. ಆ ಮನಸಾಕ್ಷಿಯನ್ನು ಜಾಗೃತಿಗೊಳಿಸುವ ಕೆಲಸ ಮಾಡಲು ಮುಂದಾಗುವುದೇ ಮನಸು ಮಾಡುವುದು.
So let us mind to change ourselves.

1 comment:

  1. ಸದ್ಯದ ಅಗತ್ಯವನ್ನು ಸರಳವಾಗಿ ಅರಿವಿಗೆ ತರುವ, ಸುಪ್ತ ಮನಸ್ಸಿಗೆ ತಲುಪಿಸುವ ನಿಮ್ಮಬರಹ ನಿಜಕ್ಕೂ ಚೇತೋಹಾರಿಯಾಗಿದೆ.ಕ್ರಮಬದ್ಧ ರೀತಿಯಲ್ಲಿ ನಿರೂಪಿಸುವ ಬಗೆ ಹೊಸತನದಿಂದ ಕೂಡಿದೆ.

    ReplyDelete