Friday, May 7, 2010

ಸ್ವಚ್ಛ, ಸುಂದರ kovalam Beach


ಕೇರಳದ ಪ್ರಕೃತಿ ಸೌಂದರ್ಯದ ಬಗೆ. ಪ್ರತಿ ಸಲವೂ ಹೊಸತನ ಕಾಣುತ್ತದೆ. ರಾಜಧಾನಿ ತಿರುವನಂತಪುರದಿಂದ 12 ಕಿಲೋ ಮೀಟರ್ ದೂರದಲ್ಲಿರುವ ಕೋವಲಮ್ ಬೀಚ್ ಜಗತ್ತಿನ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ.
ಪೂರ್ವ ಹಾಗೂ ಉತ್ತರಾಭಿಮುಖವಾಗಿ ಸದಾ ಅಬ್ಬರಿಸುವ ಕೋವಲಮ್ ಕೇರಳದ ದೊಡ್ಡ ಪ್ರವಾಸೋದ್ಯಮವಾಗಿ ಬೆಳೆದಿದೆ. ಏಪ್ರಿಲ್ 30 ರಂದು ಕೇರಳ ತಲುಪಿದಾಗ ಬಸವ ಸಮಿತಿ ಪದಾಧಿಕಾರಿ, ಉದ್ಯಮಿ ಶಶಿಕುಮಾರ್ ವಸತಿ ವ್ಯವಸ್ಥೆಯನ್ನು ಇಲ್ಲಿನ ಸ್ವಾಮಿ ಗೆಸ್ಟಹೌಸ್ ನಲ್ಲಿ ಕಲ್ಪಿಸಿದರು. ಗದುಗಿನಿಂದ ಬೆಂಗಳೂರಿನ ಎಂಟು ತಾಸು ಹಾಗೂ ಬೆಂಗಳೂರಿನಿಂದ - ತಿರುವನಂತಪುರದ ಹದಿನಾರು ತಾಸುಗಳ ಬಸ್ ಪ್ರಯಾಣದ ದಣಿವನ್ನು ತಣಿಸಲು ಕೋವಲಂ ನೆರವಾಯಿತು. ಇಡೀ ಒಂದು ದಿನದ 24 ತಾಸುಗಳ ನನ್ನ ಧ್ಯಾನಸ್ಥ ಸ್ಥಿತಿಯ ಕುಳಿತಿರುವಿಕೆ ಶಿಕ್ಷೆಯಾಗದಿರುವುದೇ ಅಚ್ಚರಿ.
ಮಧ್ಯಾನ್ಹದ ಬೆವರಿಳಿಸುವ ಬೆಚ್ಚಗಿನ ವಾತಾವರಣದಲ್ಲಿ ವಿದೇಶಿ ಪ್ರವಾಸಿಗರು ಮುಕ್ತವಾಗಿ ಬೀಚ್ ನುದ್ದಕ್ಕೂ ತಿರುಗಾಡುತ್ತಿದ್ದರು.
ಈ ಬೀಚ್ ನುದ್ದಕ್ಕೂ ಸರಿಸುಮಾರು ನೂರಕ್ಕೂ ಹೆಚ್ಚು ಹೋಟೆಲ್ ಗಳಿವೆ. ವಿದೇಶಿ ವೆಚ್ಚಕ್ಕೆ ಸರಿಸಮಾನವೆನಿಸುವ 'ದುಬಾರಿ' ತನ ಎಲ್ಲೆಲ್ಲೂ ಕಾಣುತ್ತದೆ. ಇದನ್ನು ನಾವು richness ಅನ್ನಬಹುದು.
Like minded ಗೆಳೆಯರೊಂದಿಗೆ ಅಥವಾ family ಯೊಂದಿಗೆ ಇಲ್ಲಿಗೆ ಬರುವುದು ಸೂಕ್ತ, ಒಂಟಿಯಾಗಿದ್ದರೆ ತುಂಬಾ ಬೇಸರ. ಅಂತಹ ಒಂಟಿತನದ ಬೇಸರದ ಮಧ್ಯ ಬೀಚ್ ತುಂಬಾ ತಿರುಗಾಡಿದೆ.
ನಿಧಾನವಾಗಿ ಸುತ್ತಿಕೊಳ್ಳುತ್ತಾ, ಅಷ್ಟೇ ವೇಗವಾಗಿ ಅಪ್ಪಳಿಸುವ ಸಮುದ್ರದ ತೆರೆಗಳು ಬದುಕಿನ ಹೊರಾಟವನ್ನು ನೆನಪಿಸುತ್ತವೆ.
Sea level ಎಂದೇ ಗುರುತಿಸಲ್ಪಡುವ ಸಮುದ್ರ ಮಟ್ಟ ನಾವಿರುವ ನಿಜ ನೆಲದ ಸ್ಥಿತಿಯನ್ನು ಹೇಳುತ್ತದೆ. ನಾವು ಎಷ್ಟು ಎತ್ತರದಲ್ಲಿರುತ್ತೇವೆ ಎಂಬುದನ್ನು Sea level ಮಾಪನದ ಮೂಲಕವೇ ಗುರುತಿಸುವುದರಿಂದ ಅಲ್ಲಿ ನಿಂತಾಗ ಅನಿಸಿತು. I ವಾಸ್ at the bottom.
ನಮ್ಮ ಬದುಕಿನ ಸ್ಥಿತಿಯೂ ಹಾಗೆಯೇ ಒಮ್ಮೆ ಎತ್ತರಕೆ ಜಿಗಿದರೆ, ಮತ್ತೊಮ್ಮೆ ಕೆಳಗೆ ಅಂದರೆ ತೀರಾ ಕೆಳಗೆ ಇಳಿಯುತ್ತದೆ. ಈ ಏರಿಳಿತದಲ್ಲಿ ಒಂದು ರೀತಿಯ ಮಜವಾದ ಅನುಭವ.
ಸಮುದ್ರದ ಅಲೆಗಳು ಯಾರಿಗಾಗಿ ಕಾಯುವುದಿಲ್ಲ. ಯಾರಾದರೂ ತಡೆದರೆ ನಿಲ್ಲುವುದೂ ಇಲ್ಲ. ಅದಕ್ಕೇ ಹೇಳುವುದು Time and Tide wait for none! ಎಂದು.
ಸ್ವಚ್ಛತೆ, ಶುದ್ಧತತೆ ಹಾಗೂ ಶುಭ್ರತೆಯನ್ನು ಕಾಪಾಡಿಕೊಂಡಿರುವ ಕೋವಲಮ್ ಬೀಚ್ ನ ವ್ಯಾಪಾರಿಗಳು ಕೋಟಿಗಟ್ಟಲೆ ಗಳಿಸುತ್ತಾರೆ ಆದರೆ ವಿದೇಶಿಗರನ್ನು ಅನಗತ್ಯವಾಗಿ ವಂಚಿಸುವುದಿಲ್ಲವಂತೆ ಅದೇ ಕಾರಣಕ್ಕೆ ಬೀಚ್ ನ ಸೌಂದರ್ಯ ಅನುಭವಿಸಲು ವಿದೇಶಿಗರು ತಿಂಗಳುಗಟ್ಟಲೇ ಇಲ್ಲಿಯೇ ಠಳಾಮಿಸುತ್ತಾರೆ.
ಸದಾ ತಂಪಾದ cold countries ಗಳಲ್ಲಿರುವ ವಿದೇಶಿಗರಿಗೆ ಸಮುದ್ರ ತೀರ ಇಷ್ಟವಾಗಲು ವೈಜ್ಞಾನಿಕ ಕಾರಣಗಳಿವೆ. ದೇಹದಲ್ಲಿರುವ ಕೊಳೆಯನ್ನು ಕಿತ್ತೊಗೆಯಲು Sweat - ಬೆವರು ನೆರವಾಗುತ್ತದೆ.
ಈ ರೀತಿ ಬೆವರಿಳಿಸಿಕೊಳ್ಳಲು ನಾವು ಗಂಟೆಗಟ್ಟಲೆ walk ಮಾಡುತ್ತೇವೆ. ದೇಹ ದಂಡಿಸುತ್ತೇವೆ. ಆದರೆ ಇಲ್ಲಿ ಯಾವುದೇ ರೀತಿಯ physical exercise ಇಲ್ಲದೇ ಬೆವರಿಳಿಸಿಕೊಳ್ಳುವುದೇ ಉತ್ತಮ ಎಂದು, ಉರಿಯುವ ಸೂರ್ಯನ ಕಿರಣಗಳು ತಮ್ಮ ಮೈಮೇಲೆ ಮುಕ್ತವಾಗಿ ಹರಿದಾಡಲಿ ಎಂದು ವಿದೇಶಿಗರು ಸಮುದ್ರ ಸ್ನಾನ ಬಯಸುತ್ತಾರೆ. ಸದಾ ಉರಿಬಿಸಿಲಿನಲ್ಲಿ ಒದ್ದಾಡುವ ನಮಗೆ ಸಮುದ್ರ ಸ್ನಾನ ಸಖ್ಯವೆನಿಸದಿದ್ದರೂ ವಿದೇಶಿಗರ ಮೋಜು ನೋಡಲು ಖುಷಿ ಎನಿಸುತ್ತದೆ. ಮಧ್ಯಾನ್ಹ ಒಂಚೂರು ತಿಂದಿದ್ದಕ್ಕೆ ಕೇವಲ ಕೇವಲ ರೂ. 600/- ಎಂದಾಗ ಒಂಚೂರು ಕಸಿವಿಸಿಯಾಯಿತು. ಇದೇ ಊರ ಹೊರಗಡೆ ಕೇವಲ ನೂರು ರೂಪಾಯಿಗೆ ಸಿಗುತ್ತದೆ ಅನಿಸಿತ್ತು. ನನ್ನ ಹಳವಂಡವನ್ನು ಕಂಡ waiter ಒಳಗೊಳಗೆ ನಕ್ಕಿರಬೇಕು. ಯಾಕೆಂದರೆ ಇದು ಕೋವಲಮ್ ಅಲ್ಲವೇ? ವೀರಶೈವ ಮಹಾಸಭಾದ ಪದಾಧಿಕಾರಿ ಕೆ.ಎನ್. ಪಿಳೈ ಒಡೆತನದಲ್ಲಿ ಎರಡು Home stay ಗಳಿವೆ. ಅವರ swamy Guest Home ನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಿದ್ದರು. ನಿರ್ಜನ ರಾರ್ತಿಯ ಚಂದ್ರನ ಬೆಳಕಲ್ಲಿ ಅಬ್ಬರಿಸುವ ಅಲೆಗಳು ಬದುಕನ್ನು ಸಮರ್ಥವಾಗಿ ಎದುರಿಸುವ ಪಾಠ ಕಲಿಸುತ್ತವೆ. ಮರುದಿನ ನಸುಕಿನಲ್ಲಿ ಬೆಸ್ತರು ಮೀನು ಹಿಡಿಯಲು ಸಮುದ್ರಕ್ಕೆ ಇಳಿಯುವ ಸಾಹಸ ಮಾಡುತ್ತಿದ್ದರೆ, ಸುಂದರ ಯುವತಿಯರು ತಮ್ಮ ದೇಹ ಬೆಚ್ಚಗಿನ thrill ಅನುಭವಿಸಲು ನೀರಿಗಿಳಿಯುತ್ತಿದ್ದರು. ನೀರಿಗಿಳಿಯಲು ಇಬ್ಬರೂ ಅರೆಬೆತ್ತಲಾಗಿದ್ದಾರೆ ಆದರೆ ಉದ್ದೇಶ ಬೇರೆ, ಬೇರೆ. ಅರೆಬೆತ್ತಲೆಯ ಬೆಸ್ತರನ್ನು, ಯುವತಿಯರನ್ನು ಹೋಲಿಸುತ್ತ ನೀರಿಗಿಳಿದೆ.

No comments:

Post a Comment