Saturday, May 8, 2010

ತ್ರಿಸ್ಸೂರ ಬಸವ ಸಮಿತಿ ಕಾರ್ಯಕ್ರಮ

ಕೇರಳ ಬಸವ ಸಮಿತಿಯ ಚೇತನದಂತಿರುವ ಪ್ರಸನ್ನ ಕುಮಾರ ವೃತ್ತಿಯಿಂದ ಉದ್ಯಮಿ 'Glow hot' ಎಂಬ ಗೃಹ ಬಳಕೆ ವಸ್ತುಗಳ ಉದ್ಯಮ ಇಟ್ಟುಕೊಂಡು ನೂರಾರು ಜನಯುವಕರಿಗೆ ಉದ್ಯೋಗ ನೀಡಿ, ತಾವು ತೃಪ್ತಿಯಿಂದ ಇದ್ದಾರೆ. ಕಾಯಕ-ದಾಸೋಹದಲ್ಲಿ ನಂಬಿಕೆ ಇಟ್ಟುಕೊಂಡಿರುವ ಪ್ರಸನ್ನ ಕುಮಾರ ತ್ರಿರುವಳ್ಳಿ ಹತ್ತಿರದ ತೆಂಗಿಲ್ ನವರು. ಬಿ.ಎ. ಪದವೀಧರ, 46 ವರ್ಷದ ಪ್ರಸನ್ನಕುಮಾರ ಬಸವ ಸಾಹಿತ್ಯವನ್ನು, ಲಿಂಗಾಯತ ಧರ್ಮವನ್ನು ವ್ಯಾಪಕವಾಗಿ ಕೇರಳದಲ್ಲಿ ಪರಿಚಯಿಸಿದ್ದಾರೆ. ವೀರಶೈವ ಮಹಾಸಭಾ ಪದಾಧಿಕಾರಿಗಳಿಗೆ ಲಿಂಗಾಯತ ಧರ್ಮದ ಬಗ್ಗೆ confusion ಗಳಿವೆ. ಇತ್ತೀಚಿಗೆ ಹಂತ ಹಂತವಾಗಿ ಕೇರಳದ ಲಿಂಗಾಯತರು ಬಸವಣ್ಣನ ಮೌಲ್ಯಗಳನ್ನು ಗ್ರಹಿಸುತ್ತಲಿದ್ದಾರೆ.
ಲಿಂಗಾಯತ ಧರ್ಮವನ್ನು ಅರಿಯುವ, ಆಚರಿಸುವ ವಿವಿಧ ಹಂತಗಳನ್ನು ವಿವರಿಸುವ ಜವಾಬ್ದಾರಿಯನ್ನು ನನಗೆ ಕೊಟ್ಟಿದ್ದರು. ಕಾಯಕ-ದಾಸೋಹ-ಏಕದೇವೋಪಾಸನೆ ನಮ್ಮ ಎದುರಿಗಿರುವ ಸವಾಲುಗಳು. ಹೇಗೋ ಕಷ್ಟ ಪಟ್ಟು ಕಾಯಕ-ದಾಸೋಹಗಳನ್ನು ರೂಢಿಸಿಕೊಳ್ಳಬಹುದು. ಆದರೆ ಏಕದೇವೋಪಾಸನೆ ಸುಲಭದ ಮಾತಲ್ಲ. ಭಯ-ಭಕ್ತಿ ಎಂತಲೇ ಹಲವು ದೇವರುಗಳ ಬೆನ್ನು ಹತ್ತಿರುವ ನಮ್ಮನ್ನು ಏಕದೇವೋಪಾಸನೆ ಇಷ್ಟಲಿಂಗ ಆರಾಧನೆಗೆಸುಲಭದ ಮಾತಲ್ಲ. ಅಂದು ಬಸವಾದಿ ಶರಣರು, ಅನುಭವ ಮಂಟಪದ ಮೂಲಕ ನಿರಂತರ ಜ್ಞಾನ ನೀಡಿ, ವಚನಗಳ ರಚನೆಯ ಮೂಲಕ ಜನರನ್ನು ಸಂಘಟಿಸಿದ್ದು ಸಾಮಾನ್ಯ ಸಂಗತಿಯಲ್ಲ.
ಇಂತಹ ವೈಜ್ಞಾನಿಕ ಯುಗದಲ್ಲಿಯೂ ಜನ ದೇವರು-ಧರ್ಮದ ಹೆಸರಿನಲ್ಲಿ ಹುಚ್ಚರಂತೆ ವರ್ತಿಸುವುದನ್ನು ಕಂಡರೆ ಅಚ್ಚರಿ ಎನಿಸುವುದು.
ನೂರಾರು ದೇವರ ಆರಾಧನೆಯಿಂದ - ಶಿವನ ಆರಾಧನೆಯೇ ಶ್ರೇಷ್ಠ, ಶಿವನೇ ಶ್ರೇಷ್ಠ ಎಂದು ಬಿಂಬಿಸುವ ಶಿವಪುರಾಣ ಲಿಂಗಾಯತರನ್ನು ಪ್ರಾಥಮಿಕ ಹಂತಕ್ಕೆ ತರುವ ಕೆಲಸ.
ಕಪೋಲ ಕಲ್ಪಿತ ಶಿವನಿಗಿಂತ ಶರಣರು ನೀಡಿದ ಇಷ್ಟಲಿಂಗ ಆರಾಧನೆಯನ್ನು ರೂಢಿಸಿಕೊಂಡು, ಗುಡಿ-ಗುಂಡಾರಗಳ ಹಂಗನ್ನು ತೊರೆದು ಆತ್ಮವಿಶ್ವಸವನ್ನು ಬೆಳೆಸಿಕೊಳ್ಳುವುದು ಲಿಂಗಾಯತ ಧರ್ಮದ ಪದವಿ ಪಡೆದ ಹಾಗೆ. ಈ ಪದವಿಯ ಹಂತದಲ್ಲಿರುವವರು, ಗುಡಿಗಳಿಗೂ ಹೋಗುತ್ತಾರೆ. ಲಿಂಗವನ್ನು ಧರಿಸಿ confusion ನಲ್ಲಿರುತ್ತಾರೆ. ಪೂರ್ಣ ಪ್ರಮಾಣದ ಲಿಂಗ ಆರಾಧನೆಯ ಮೂಲಕ ಏಕಾಗ್ರತೆ, ಮನೋನಿಗ್ರಹ, ಧ್ಯಾನದ ಮೂಲಗಳನ್ನು ಹಿಡಿಯುವುದು ವಿಕಸನದ ಸಂಕೇತವಾಗುತ್ತದೆ. ಇಷ್ಟಲಿಂಗದ ಆರಾಧನೆ ಪ್ರಭುತ್ವದ ಸಂಕೇತವಾಗಿ ಶುದ್ಧ ಲಿಂಗಾಯತರಾಗಲು ಸಾಧ್ಯ.
ಕೆಲವರು ಗುಡಿ - ಗುಂಡಾರಗಳನ್ನು ನಿರಾಕರಿಸಿ ಏಕದೇವೋಪಾಸಕರಾಗಿ ಲಿಂಗ ನಿಷ್ಠೆಯನ್ನು ರೂಪಿಸಿಕೊಂಡರೂ ಮನದ ಕೊಳೆಯನ್ನು ಪೂರ್ಣವಾಗಿ ತೊಳೆದುಕೊಳ್ಳದೇ ಅಹಂಕಾರಿಗಳಾಗಿರುತ್ತೇವೆ. ಮನದ ಮುಂದಣ ಆಸೆ, ಒಳಗಿನ ಮನದ ಕೊಳೆಯನ್ನು ನಿವಾರಿಸಿ ಪೂರ್ಣ ಪ್ರಮಾಣದ personality ಆಗಲು ಬಸವ ಪ್ರಜ್ಞೆ, ಬಸವಾದಿ ಶರಣರ ವಚನಗಳು ನೆರವಾಗುತ್ತವೆ ಎಂಬ ಸತ್ಯವನ್ನು ಲಿಂಗಾಯತರು ಅಥವಾ ಬಸವ ತತ್ವದಲ್ಲಿ ನಂಬಿಕೆ ಇಟ್ಟವರು ಆಳವಾಗಿ ಅರಿತು ಸ್ವೀಕರಿಸಬೇಕಿದೆ. ಈ ವಿಷಯದಲ್ಲಿ ಮಠಾಧೀಶರಿಗೆ ಅನೇಕ ಗೊಂದಲಗಳಿವೆ.
ಬಸವ ಪ್ರಜ್ಞೆಯಿಲ್ಲದೇ ಕೇವಲ ಯಾವುದೋ ಒಂದು ಸೂತ್ರ ಹಿಡಿದು ಬಡಿದಾಡುತ್ತಾರೆ. 'Total Basava consciousness will develop our personality' ಎಂಬ ವಾದ ಈಗ ಜಗದ ತುಂಬೆಲ್ಲ ಸಾಬೀತಾಗಿದೆ.
ಈ ಹಿನ್ನಲೆಯಲ್ಲಿ ಗೆಳೆಯರಾದ ರಂಜನ್ ದರ್ಗಾ ಅವರ 'ಬಸವ ಪ್ರಜ್ಞೆ' ಹೆಚ್ಚು ಪ್ರಸ್ತುತ.
ಈ ಎಲ್ಲ ಹಂತಗಳನ್ನು ಅರ್ಥಪೂರ್ಣವಾಗಿ ಗ್ರಹಿಕೆ ಬಸವ ಪ್ರಜ್ಞೆಯನ್ನು ರೂಪಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಬೇಕು. ಅಂದಾಗ ನಾವು ನಿಜವಾದ ಬಸವ ತತ್ವ ಅನುಯಾಯಿಗಳು. ಇಂದು ಈ ಕೆಲಸ ಅಂತರಾಷ್ಟ್ರೀಯ ಮಟ್ಟದಲ್ಲಿ, ಹೊರರಾಜ್ಯಗಳಲ್ಲಿ ನಡೆದಿದೆ ಎನ್ನುವುದಕ್ಕೆ ಅದ್ಧೂರಿ ಬಸವ ಜಯಂತಿಯ ಆಚರಣೆಗಳೇ ಸಾಕ್ಷಿ! Now the globe realiged Basava consciousness.
ಕೇರಳದ ಗೆಳೆಯ ಪ್ರಸನ್ನ ಕುಮಾರ ಅಂತಹ ಸಾಹಸಕ್ಕೆ ಕೈ ಹಾಕಿ ನನ್ನಿಂದ ಬಸವ ಪ್ರಜ್ಞೆಯ ಕುರಿತು ಒಂದುತಾಸು ವಚನಗಳ ಉದಾಹರಣೆಗಳೊಂದಿಗೆ ಮಾತನಾಡಿಸಿ ತಾವೇ ಮಲೆಯಾಳಿಗೆ ತರ್ಜುಮೆ ಮಾಡಿದರು. ಸಭೆಯಲ್ಲಿ ಪಾಲ್ಗೊಂಡ ನೂರಾರು ಬಸವಾಭಿಮಾನಿಗಳು, ಬಸವ ತತ್ವ ಆಚರಣೆಯಲ್ಲಿ ತಾವು ಯಾವ ಹಂತದಲ್ಲಿದ್ದೇವೆ ಎಂದು ಒರೆಗಲ್ಲಿಗೆ ಹಚ್ಚಲು ಈ ಸಂವಾದ ನೆರವಾಯಿತು. ಬಸವ ಪ್ರಜ್ಞೆಯ ಪದವಿ ಸ್ನಾತಕೋತ್ತರ ಹಾಗೂ ಪಿ.ಎಚ್.ಡಿ. ಹಂತಗಳನ್ನು ನಾವು ತಲುಪುವ ಬಗೆಯನ್ನು ಅರ್ಥಪೂರ್ಣವಾಗಿ ಚರ್ಚಿಸಿದರು. ಈ ಹಂತವನ್ನು ತಲುಪುತ್ತೇವೆಯೋ, ಇಲ್ಲವೋ ಆ ಮಾತು ಬೇರೆ ಆದರೆ Self evaluation ಮೂಲಕ ನಾವು ಪಡೆದಿರುವ ಅಂಕಗಳನ್ನು ತಿಳಿಯುವುದು ಇಂದಿನ ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ನನ್ನ ಕೇರಳ ಭೇಟಿ ಸಾರ್ಥಕವಾಯಿತು. ಕಾರಣರಾದ ಅರವಿಂದ ಜತ್ತಿ ಹಾಗೂ ಪ್ರಸನ್ನಕುಮಾರ ಅವರಿಗೆ ಋಣಿಯಾಗಿದ್ದೇನೆ.

No comments:

Post a Comment