Thursday, May 27, 2010

ಒಂದು ಸುಂದರ ಕ್ಯಾಪ್ಟರ್ ಹಾರಾಟ


ರಜೆಯ ಅಲೆದಾಟದಲಿ ಬರೆಯುವ ಪುರುಸೊತ್ತಾಗಿಲ್ಲ ಎಂಬ ಬೇಸರ.
ಈ ಮಧ್ಯೆ ಕೆಲಸದ ಮೇಲೆ ಬಳ್ಳಾರಿಗೆ ಹೋಗಿದ್ದೆ, ಅಚಾನಕಾಗಿ ಹೆಲಿಕ್ಯಾಪ್ಟರ್ ಹಾರಾಟದ ಅವಕಾಶ ದೊರೆಯಿತು. ವಿಮಾನಯಾನದ ಅನುಭವ ಹೊಂದಿದ್ದರೂ, ಹೆಲಿಕ್ಯಾಪ್ಟರ್ ನಲ್ಲಿ ಹಾರಾಡುವುದು ಭಿನ್ನವಾಗಿರುತ್ತದೆ.
ಪುಟ್ಟ ಹಕ್ಕಿಯ ಹೆಗಲೇರಿ ಕುಳಿತ ಅನುಭವ. ಸಚಿವರಾದ ಶ್ರೀರಾಮುಲು, ಆಪ್ತ ಸಹಾಯಕ ಸೋಮನಾಥರೊಂದಿಗೆ ಬಳ್ಳಾರಿಯಿಂದ ನರಗುಂದಕ್ಕೆ, ನರಗುಂದದಿಂದ ಕನಕಗಿರಿ, ಅಲ್ಲಿಂದ ಬಳ್ಳಾರಿ ಹೀಗೆ 4 ತಾಸಿನ ಹಾರಾಟ ಖುಷಿ ಎನಿಸಿತು.
ಮೋಡಗಳ ಮೇಲೆ ತೇಲುವ ವಿಮಾನದಿಂದ ಏನೂ ಕಾಣಿಸುವುದಿಲ್ಲ. ಆದರೆ ಕ್ಯಾಪ್ಟರ್ ನಿಂದ ಲ್ಯಾಂಡ್ ಸ್ಕೇಪ್ ಸುಂದರವಾಗಿ ಗೋಚರವಾಗುತ್ತದೆ. ನಾವು ನೆಲದಲ್ಲಿ ಓಡಾಡಿದ ಊರುಗಳು ಚಿತ್ರದಲಿ ಬಿಡಿಸಿದ ಲೇಜಾಟ್ ನಂತೆ ಕಾಣಿಸುತ್ತವೆ.
ಇಂದು ಬಾನ ಹಾರಾಟವನ್ನು ರಿಸ್ಕ್ ಎಂದು ಕರೆದರೂ ಅದು ಅನಿವಾರ್ಯವಾಗಿದೆ. ಮೊನ್ನಿನ ವಿಮಾನ ಅಪಘಾತ ಬಾನ ಹಾರಾಟವನ್ನು ಬೆಚ್ಚಿ ಬೀಳಿಸಿದೆ.
ಆದರೂ ನಿಲ್ಲಲು ಸಾಧ್ಯವೆ? ದಿನಾಲು ರಸ್ತೆ ಅಪಘಾತಗಳು, ರೈಲು ಅಪಘಾತಗಳು ಆದಂತೆ ವಿಮಾನ ಅಪಘಾತಗಳು ಸಂಭವಿಸುತ್ತವೆ. ಇಂತಹ ಭೀಕರ ದುರಂತದಲ್ಲೂ ಏಳು ಜನ ಬದುಕಿ ಪುನರ್ಜನ್ಮ ಪಡೆದಿದ್ದಾರಲ್ಲ?
ಹೀಗೆ ಸಾವಿನ ಸೂತಕ ಭಾವ ಮೆಲಕು ಹಾಕುತ್ತ, ಸಾವಿನ ಸುದ್ದಿಯ ಪುಟಗಳನ್ನು ತಿರುವಿ ಹಾಕುತ್ತಾ ಆಕಾಶದಲ್ಲಿ ಹಾರಾಡಿದ್ದು ವಿಸ್ಮಯ. ಪ್ರತಿ ಹಾರಾಟದಲ್ಲೂ 'ಬಾರದು ಬಪ್ಪದು' ಅಂದುಕೊಳ್ಳುತ್ತೇನೆ, ಏರುತ್ತೇನೆ, ಇಳಿಯುತ್ತೇನೆ. ಕಭಿ ಖುಷಿ, ಕಭಿಗಮ್ ಎನ್ನುವ ವಿಮಾನಯಾನ ಒಂದು ರೀತಿಯ trill ಕೊಡುತ್ತದೆ. ಈ ವೇಗದ ಬದುಕಿನಲ್ಲಿ ಎಲ್ಲವೂ ಅನಿವಾರ್ಯ. ಸಚಿವ ಮಿತ್ರರಾದ ಶ್ರೀರಾಮಲು ತೋರಿದ ಪ್ರೀತಿಯ ಸಲುಗೆ ಎಲ್ಲ ಆತಂಕಗಳನ್ನು ನಿವಾರಿಸಿತು. ಎಲ್ಲ ಹಂತಗಳಲ್ಲಿ ಸಿಗುವ ಬ್ರಹ್ಮಾನುಭವವನ್ನು ಅನುಭವಿಸಬೇಕು.
ನೆಲ, ಜಲ, ಬಾನ ಹಾರಾಟಗಳು ಹೊಸ ಅನುಭವ ನೀಡುತ್ತವೆ. ಹೀಗೊಂದು ಕ್ಷಣದ ಖುಷಿ ಹಂಚಿಕೊಂಡೆ.

No comments:

Post a Comment