Thursday, May 6, 2010

ಅಂತರದ ನಂತರ.............




ಏನೋ ಕಳೆದುಕೊಂಡ ಹಳವಂಡ. ವಾರದಿಂದ ಸಂಪೂರ್ಣ ಅಲೆದಾಟ. ಕೇರಳದ ಬಸವ ಸಮಿತಿ ಹಾಗೂ ವೀರಶೈವ ಮಹಾಸಭಾದ ಆಹ್ವಾನದ ಮೇರೆಗೆ ಕೇರಳದಲ್ಲಿ ರಾಜಧಾನಿ ತಿರುವನಂತಪುರದಲ್ಲಿ ಆಯೋಜಿಸಿದ್ದ may day ಕಾರ್ಮಿಕರ ದಿನಾಚರಣೆಯನ್ನು ಬಸವತತ್ವ ಅನುಯಾಯಿಗಳು 'ವಿಶ್ವ ಕಾಯಕ ದಿನ' ಎಂದು ಆಚರಿಸಿದ್ದು ಅರ್ಥಪೂರ್ಣ, ಅನುಕರಣೀಯ!
ಕೇರಳಿಗರು ಪ್ರತಿಭಾವಂತರು ಸಾಹಿತ್ಯ, ರಾಜಕೀಯ, ಉದ್ಯಮವನ್ನು ಚನ್ನಾಗಿ ಬಲ್ಲವರು ಕಳೆದ ಒಂದು ದಶಕದಿಂದ ಬಸವಣ್ಣನ ತತ್ವಗಳನ್ನು ಅರ್ಥಮಾಡಿಕೊಳ್ಳುತ್ತಲಿದ್ದಾರೆ. ಬಸವಾದಿ ಶರಣರ ವಚನಗಳನ್ನು ಬಸವ ಸಮಿತಿ ಮಲೆಯಾಳಿ ಭಾಷೆಗೆ ಅನುವಾದಿಸಿ ಕೊಟ್ಟಿದೆ. ನಾಲ್ಕಾರು ಶತಮಾನಗಳಿಂದ ವೀರಶ್ವೆವರು ಎಂದು ಗುರುತಿಸಿಕೊಂಡಿದ್ದ ಅಲ್ಲಿನ ಲಿಂಗಾಯತರಿಗೆ ಮಾನ್ಯ ಡಾ. ಜತ್ತಿಯವರು ಬಸವಣ್ಣನನ್ನು ಪರಿಚಯಿಸಿದರು. ವೀರಶೈವ ಮಹಾಸಭಾದ ಹೆಸರಿನ ಮೇಲೆ ಒಂದುಗೂಡಿದ್ದ ಲಿಂಗಾಯತ ಸಮಾಜ ತಾತ್ವಿಕವಾಗಿ ಬಸವಣ್ಣನನ್ನು ಅಷ್ಟಾಗಿ ತಿಳಿದುಕೊಂಡಿರಲಿಲ್ಲ. ಈಗ ಅರವಿಂದ ಜತ್ತಿಯವರ ಮಾರ್ಗದರ್ಶನದಲ್ಲಿ ಉತ್ಸಾಹಿ ಯುವಕ, ಬಸವ ತತ್ವ ರಾಯಭಾರಿಯಂತೆ ಕೇರಳದ ತುಂಬಾ ಓಡಾಡುತ್ತಲಿರುವ ಶ್ರೀ ಪ್ರಸನ್ನ ಕುಮಾರ ಪಿಳೈ ಅವರ ಸಂಘಟನೆಯಲ್ಲಿ ಹೊಸ ಸಂಚಲನ ಉಂಟಾಗಿದೆ.
ಇದು ನನ್ನ ಎರಡನೇ ಭೇಟಿ. ಈ ಹಿಂದೆ ಹೋದಾಗ ಪ್ರಸನ್ನ ಕುಮಾರ, ಹಾಗೂ ಪ್ರೊ.ಎ.ಆರ್. ಜ್ಯೋತಿ ಸಣ್ಣ ಕಾರ್ಯಕ್ರಮ ಆಯೋಜಿಸಿದ್ದರು. ಈ ಬಾರಿ ಕೇರಳದ ಸಚಿವರ ಸಮ್ಮುಖದಲ್ಲಿ ಬಸವಣ್ಣನ ಕಾಯಕ ಸಿದ್ಧಾಂತವನ್ನು ಸರಕಾರಿ ಕಾರ್ಯಕ್ರಮದಂತೆ ಆಯೋಜಿಸಿದ್ದು ಬಸವಣ್ಣ ನೆಲದ ಮಕ್ಕಳಾದ ನಾವು ಹೆಮ್ಮೆ ಪಡಬೇಕು. ಅರವಿಂದ ಜತ್ತಿ ಹಾಗೂ ಪ್ರಸನ್ನ ಕುಮಾರ ಅವರ ಅಪೇಕ್ಷೆಯಂತೆ ಮುಖ್ಯ ಮಾತುಗಾರನಾಗಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತು. ತುಂಬಾ ತಯಾರಿ ಮಾಡಿಕೊಂಡಿದ್ದೆ ಕಾಯಕ, ದಾಸೋಹ ಹಾಗೂ ತ್ರಿಸ್ಪೂರ ಸಭೆಗಳಲ್ಲಿ ಮಾತನಾಡಿದೆ. ಇಂಗ್ಲಿಷ್ ಭಾಷಣವನ್ನು ಪ್ರಸನ್ನ ಕುಮಾರ ವೇದಿಕೆ ಮೇಲೆ ಅನುವಾದಿಸಿದರು ಹೀಗೆ ಹಲವು ಸಂಗತಿಗಳು ಈಗ ನಿಮ್ಮೊಂದಿಗೆ.............

No comments:

Post a Comment