Sunday, May 16, 2010

ಆತ್ಮಹತ್ಯೆ ಕೇವಲ ಮಹಾಪಾಪವಷ್ಟೇ ಅಲ್ಲ

ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಎಂಬ ಭೂತ ನಮ್ಮ ತಲೆಮಾರನ್ನು ಕಾಡುತ್ತಿದೆ. ಬದುಕಿನ ಏರಿಳಿತಗಳನ್ನು ಎದುರಿಸದೇ ಯಾವುದೇ ಒಂದು ರೀತಿಯ ಭಯದಿಂದ ಸಾವಿಗೆ ಶರಣಾಗುತ್ತಾರೆ. ಆತ್ಮಹತ್ಯೆ ಮಹಾಪಾಪ ಎಂದು ಧರ್ಮವೇನೋ ಹೇಳುತ್ತದೆ. ಇಂದು ದೇವರು ಮತ್ತು ಧರ್ಮದ ಮೂಲಕ ಜನರನ್ನು ಸರಿದಾರಿಗೆ ತರುವುದು ಅಸಾಧ್ಯವಾಗಿದೆ. ಯಾಕೆಂದರೆ ದೇವರು ಧರ್ಮದ ಹೆಸರಿನಲ್ಲಿ ಪ್ರವಚನ ಮಾಡುವವರು ತಮ್ಮ ವಿವಿಧ ಲೀಲೆಗಳಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಹಂತ ತಲುಪಿದ್ದಾರೆ. ಇಂದಿನ ಯುವಕರಿಗೆ ನಮ್ಮ ಪ್ರೀತಿಯ ಮಾತುಗಳ ಮೂಲಕ ಆತ್ಮವಿಶ್ವಾಸ ತುಂಬ ಬೇಕಾಗಿದೆ. ಪರಿಸರ, ಪಾಲಕರು, ಶೈಕ್ಷಣಿಕ ಕೆಂದ್ರಗಳು ಮಕ್ಕಳಮೇಲೆ ತೀವ್ರ ಪರಿಣಾಮ ಬೀರುವ ಅಂಶಗಳು ಬಾಲ್ಯದಲ್ಲಿ ಬೆಳೆದು ಬಂದ ಪರಿಸರ, ಪಾಲಕರ ಧೋರಣೆ ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
ಪ್ರತಿಯೊಬ್ಬ ಮನುಷ್ಯನ ಬದುಕಿನಲ್ಲಿ ಕನಿಷ್ಟ ಒಮ್ಮೆಯಾದರೂ, ಹತಾಶರಾದಾಗ ಆತ್ಮಹತ್ಯಾಭಾವ ಸುಳಿಯುತ್ತದೆಯೆಂತೆ. ಒಮ್ಮೊಮ್ಮೆ ತೀರಾ ಸಣ್ಣ ಕಾರಣಕ್ಕಾಗಿ ಕೂಡಾ. ಬಹಳ ಪ್ರೀತಿಸುವ ಪಾಲಕರು ಬೈದರೆ ಸಾಯಬೇಕು ಅನಿಸುತ್ತದೆ. ಅತೀಯಾಗಿ ಪ್ರೀತಿಸುವಾಗಲೂ ಒಮ್ಮೊಮ್ಮೆ ಬೈಯ್ಯುವ ಪ್ರಸಂಗ ಬರುತ್ತದೆ ಎಂಬ ತಿಳುವಳಿಕೆ ನೀಡಬೇಕು. ಉಡದಂತೆ, ಕರಡಿಯಂತೆ ತಬ್ಬಿ, ಮುದ್ದಾಡಿ ಪ್ರೀತಿಸುವ ನಾವು ಸಹನೆ ಕಳೆದುಕೊಂಡಾಗ ಹುಲಿಯಂತೆ ಅರಚುತ್ತೇವೆ. ಪ್ರೀತಿಯ ವಿಷಯದಲ್ಲಿ ಈ ರೀತಿಯ ವೈರುಧ್ಯ ಒಳ್ಳೆಯದಲ್ಲ. ಎಲ್ಲದರಲ್ಲೂ balance ಬೇಕು.
ಕಾಲೇಜಿನ ಯುವಕರನ್ನು ಸಂದರ್ಶಿಸಿ counselling ಮಾಡುವಾಗ ಅವರಲ್ಲಿನ ಒತ್ತಡ ಗೊತ್ತಾಗುತ್ತದೆ. ತುಂಬಾ fees ಕೊಟ್ಟು ದೊಡ್ಡ college ಗೆ ಪ್ರವೇಶ ಕೊಡಿಸುತ್ತಾರೆ. ಓಡಾಡಲು bike, ಮಜ ಮಾಡಲು mobile ಕೊಟ್ಟು ಚೆನ್ನಾಗಿ ಅಂಕಗಳಿಸಲು ಒತ್ತಡ ಹೇರುತ್ತಾರೆ. ಈರೀತಿಯ ಒತ್ತಡ ಹೇರುವ ಪಾಲಕರು ಮಕ್ಕಳ ಶೈಕ್ಷಣಿಕ ಸಾಮರ್ಥ್ಯವನ್ನು ತಿಳಿದಿರುವುದಿಲ್ಲ. ಕೇವಲ ಅವರು ಗಳಿಸಿದ ಅಂಕಗಳ ಆಧಾರದ ಮೇಲೆ ಅವರು doctor ಆಗಲಿ engineer ಆಗಲಿ ಎಂದು ಬಯಸುತ್ತಾರೆಯೇ ಹೊರತು ಮಕ್ಕಳ ಆಸಕ್ತಿಯನ್ನು ಲೆಕ್ಕಿಸುವುದೇ ಇಲ್ಲ. ಕಾಲೇಜಿನಲ್ಲಿ classes regular ಆಗಿ ನಡೆಯುತ್ತಿದ್ದರೂ, ಹೆಚ್ಚು perfect ಆಗಲಿ ಎನ್ನುವ ಕಾರಣಕ್ಕೆ tution ಗೆ ಅಲೆದಾಡಿಸುತ್ತಾರೆ. ಹೀಗೆ ಹತ್ತು ಹಲವು ಕಾರಣಗಳನ್ನು ಯುವಕರು ತೋಡಿಕೊಳ್ಳುತ್ತಾರೆ.
ಇನ್ನು ದಡ್ಡ ವಿದ್ಯಾರ್ಥಿಗಳ ಕಥೆಯೇ ಬೇರೆ science, maths ಅರ್ಥವಾಗುತ್ತಿರುವುದಿಲ್ಲ. science ಹಚ್ಚಲು ಒತ್ತಾಯಿಸಿ, ನಂತರ ವಿಫಲರಾದಾಗ ಪಾಲಕರು ಕೇಳದಿದ್ದರೂ ಆತಂಕಕ್ಕೆ ಒಳಗಾಗುತ್ತಾರೆ. ಗ್ರಹಿಕೆಯ ವಿಫಲತೆ ಜಿಗುಪ್ಸೆಯನ್ನು ತರುತ್ತದೆ. ಈ pass,fail ಅನ್ನುವುದು ಬಾಲ್ಯದಲ್ಲಿ ಮಹತ್ವದ ಸಂಗತಿ ಎನಿಸುವುದಿಲ್ಲ. ಕಾಲೇಜು ಪ್ರವೇಶ ಪಡೆದಾಗ ಗಂಭೀರ ಎನಿಸುತ್ತದೆ. ನಾನು trainer. counseller ಆಗಿ ಬೆಳೆಯಲು ನನ್ನಿ ವೈಯಕ್ತಿಕ ಜೀವನದ ಕಹಿ ಅನುಭವಗಳೇ ಕಾರಣ. ಹಾಗೆಯೇ ವರ್ತಮಾನದ ಯಶಸ್ಸು ಕೂಡಾ ನನ್ನ ಹುಮ್ಮಸ್ಸನ್ನು ಹೆಚ್ಚಿಸಿದೆ. ನನ್ನ ಬದುಕಿನಲ್ಲಿ ಮುರುಬಾರಿ PUC ಫೇಲ್ ಆದಾಗ, ಒಂದು ಮಿಥ್ಯ ಆರೋಪ ಬಂದಾಗ, ಮೂರನೆಯದು ನೌಕರಿ ಸಿಕ್ಕಮೇಲೆ ಬೇಗ grant ಆಗದಿದ್ದಾಗ. ಮೂರುಬಾರಿ ನನ್ನ ಮನಸ್ಸಿನಲ್ಲಿ ಸುಳಿದ ದುರ್ಬಲ ಆಲೋಚನೆಗಳನ್ನು ನೆನೆದರೆ ಅಯ್ಯೋ ಎನಿಸುತ್ತದೆ. ಆಗ ನಮಗೆ ಧೈರ್ಯ ಹೇಳುವ ಜನರು ನಮ್ಮೊಂದಿಗಿರದಿದ್ದರೂ ಬದುಕಿನ ಆಶಾವಾದ ನನ್ನನ್ನು ಬದುಕಿಸಿತು. ಪರೀಕ್ಷೆ ಎಂದರೆ ಹೆದರುತ್ತಿದ್ದ ನಾನು ಎಷ್ಟೇ ಓದಿ perfect ಆದರೂ exam hallನಲ್ಲಿ ನೆನಪು ಹೆದರಿಕೆಯಿಂದಾಗಿ ಕೈಕೊಡುತ್ತಿತ್ತು. PUC ಫೇಲ ಆದಾಗ ಹಾಗೇಯೇ ಆಯಿತು. ಕಷ್ಟ ಪಟ್ಟು ಓದಿದ್ದೇ ನನಗೆ ಇಷ್ಟವಾದ psychology ವಿಷಯದಲ್ಲಿ exam fear ಕಾರಣದಿಂದ ಫೇಲ್ ಆದೆ. ಆಘಾತ ತಡೆದುಕೊಳ್ಳಲಾಗಲಿಲ್ಲ. ಸತ್ತೇ ಹೋಗಬೇಕು ಎನಿಸಿತು. ಗೆಳೆಯರು ಸಮಾಧಾನ ನೀಡಿದರೂ ತಡೆದುಕೊಳ್ಳಲಾಗಲಿಲ್ಲ. ಬಂಧುಗಳು ಹಾಸ್ಯ ಮಾಡಲು ಶುರು ಮಾಡಿದರು. ಮುಂದೆ ಅದನ್ನೇ ಸವಾಲಾಗಿ ಸ್ವೀಕರಿಸಿ ನನಗೆ ಅಸಾಧ್ಯವಾದ eglish, psychology ಓದಿ success ಆದೆ. ಒಮ್ಮೆ ಸಾಯುವ ಭ್ರಮೆಯಿಂದ ನೀವು ಹೊರಬಂದರೆ ಅನೇಕ ಸಂತಸದ ಸುಖದ ಕ್ಷಣಗಳು ನಿಮಗೆ ಸಿಗುತ್ತವೆ. ಯಾವುದಾದರೂ ಒಂದು ಕ್ಷೇತ್ರದ, ವೈಫಲ್ಯ ಇಡೀ ಬದುಕಿನ ವೈಫಲ್ಯವಲ್ಲ. ಸತ್ತವರ ಬಾಯಲ್ಲಿ ಮಣ್ಣು ಎಂದು ಹಳ್ಳಿಯಲ್ಲಿ ಬೈಯುತ್ತಾರೆ. ಅದು ಅರ್ಥಪೂರ್ಣವಾಗಿದೆ. ಸತ್ತವರು ಮಣ್ಣು ಸೇರಿದರೆ, ಇದ್ದವರು ಮಜಾ ಮಾಡುತ್ತಾರೆ. ಸತ್ತು ಬದುಕಿಗೆ fullstop ಇಡುವುದಕ್ಕಿಂತ, ಇದ್ದು ಬದುಕಿನ ಸುಂದರ ಕ್ಷಣಗಳನ್ನು ಅನುಭವಿಸಬೇಕು. ಇರುವ ಆಯುಷ್ಯವೇ ಅನುಭವಿಸಲು, ನೋಡಲು, ಆಲಿಸಲು, ಸಂಚರಿಸಲು ಸಾಲದು ಎನಿಸುವಾಗ ಸಾವು ಬರುವ ಮುಂಚೆಯೇ ಸತ್ತರೆ ಏನು ಲಾಭ? ಎಂಬ ಪ್ರಶ್ನೆಯನ್ನು ಸಾಯಬೇಕು ಅನಿಸಿದಾಗ ನಾವೇ ಕೇಳಿಕೊಳ್ಳಬೇಕು.
10th ಹಾಗೂ PUC ಯಲ್ಲಿ fail ಆದ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ ಪದವಿ ವಿದ್ಯಾರ್ಥಿಗಳು filure ನ್ನು sportive ಆಗಿ ತೆಗೆದುಕೊಳ್ಳುತ್ತಾರೆ. ಈ ಹಂತದಲ್ಲಿ ಪಾಲಕರು ತುಂಬಾ ಎಚ್ಚರಿಕೆಯಿಂದ, ಜವಾಬ್ದಾರಿಯಿಂದ ಮಕ್ಕಳನ್ನು handle ಮಾಡಬೇಕು.
ಪರೀಕ್ಷೆಗೆ ಮುನ್ನವೇ ಮಕ್ಕಳ performance ಅರಿತು fail ಆಗುವ ಲಕ್ಷಣ ಕಂಡು ಬಂದರೆ ಧೈರ್ಯ ಹೇಳಬೇಕು. Fail ಆಗಬೇಡ ಎಂಬ ಒತ್ತಡ ಹೇರಬಾರದು. ಮಕ್ಕಳ ಮುಂದೆ negative ಸಂಗತಿಗಳನ್ನು ವೈಭವಿಕರಿಸಿ, ಬೇರೆಯವರೊಂದಿಗೆ compare ಮಾಡಿ ಮಾತನಾಡಬಾರದು. Result ಬಂದಾಗ ಜೊತೆಯಲ್ಲಿರಬೇಕು. ಒಂಟಿಯಾಗಿ ಬಿಡಬಾರದು. ನೋವಿನ ಗಳಿಗೆಗಳಲ್ಲಿ ಒಂಟಿತನ ಹೆಚ್ಚು ಅಪಾಯಕಾರಿ. ಒಂಟಿಯಾಗಿ ನರಳುವುದಕ್ಕಿಂತ ಮುಕ್ತವಾಗಿ ಹೊರಬೀಳಬೇಕು. ಸೋಲಿಗೆ ಕಾರಣಗಳನ್ನು ಗೆಳೆಯರೊಂದಿಗೆ, ಸಮಾನ ಮನಸ್ಕರೊಂದಿಗೆ ಚರ್ಚಿಸಬೇಕು. ಸಿನೆಮಾ ನೋಡಿ, ಸಂಗೀತ ಕೇಳಿ, ಪ್ರವಾಸ ಹೋಗಿ, ಪ್ರೀತಿತೋರುವ ಬಂಧುಗಳ ಮನೆಗೆ ಹೋಗಿ ನೋವನ್ನು ಮರೆಯಬೇಕು.
conselling ಕೇಂದ್ರಗಳಿಗೆ ಭೇಟಿ ಕೊಟ್ಟು ಮನದ ನೋವನ್ನು ಹೇಳಿಕೊಳ್ಳಬೇಕು ಗಾಧೀಜಿ, ವಿವೇಕಾನಂದರ ಜೀವನ ಚರಿತ್ರೆಗಳನ್ನು ಓದಲೇಬೇಕು.
ಅದಕ್ಕಿಂತ ಮುಖ್ಯವಾಗಿ ನಮ್ಮ ಬದುಕು ನಮಗಾಗಿ ಎನ್ನುವ ಭಾವನೆ ಜಾಗೃತವಾಗಿ ನಾವು ನಮಗಾಗಿ ಬದುಕಲೇಬೇಕು. ಸಾವು ಕಣ್ಮುಂದೆ ಬಂದರೆ ದಯವಿಟ್ಟು ನನ್ನೊಂದಿಗೆ ಮಾತನಾಡಿ ಪರಿಹಾರ ಹೇಳುತ್ತೇನೆ.

2 comments:

  1. i liked last two paragraphs most. its real and direct message to the parents of all students. this blog should be special dedicated to the parents of average students.

    ReplyDelete
  2. ಪರೀಕ್ಷೆ ಪರಿಣಾಮ ತಿಳಿಯುವ ಸಂಸರ್ಭದಲ್ಲಿ ಇಂತಹ ಲೇಖನ ಬರೆದುದಕ್ಕೆ ಅಭಿನಂದನೆಗಳು, ಅಭಿವಂದನೆಗಳು!ಪಾಲಕರಿಗೂ ಇಲ್ಲಿಯ ಕಿವಿಮಾತುಗಳು ತಲುಪಿ ಮಕ್ಕಳ ನೈಜ ವ್ಯಕ್ತಿತ್ವ ಹೊರಹೊಮ್ಮುವ ದಿನಗಳು ಬರಲಿ!

    ReplyDelete