Thursday, September 23, 2010

ಸೌಂದರ್ಯದ ಹಿಂದಿನ ಕ್ರೌರ್ಯ

'Living Together' ಇದೊಂದು ಮದುವೆಗೆ ಇನ್ನೊಂದು ಪರಿಕಲ್ಪನೆ. ಇದು ಇಂಡಿಯಾದಲ್ಲಿ ಸಾಧ್ಯವಾ

ಅಂದುಕೊಂಡಾಗಲೇ ಇಲ್ಲಿ ಆರಂಭವಾಗಿದೆ.

ಆದರೆ ಹುಡುಗನಿಗೆ ಹುಡುಗಿ ಇಷ್ಟವಾಗಲಿಲ್ಲ ಎಂದು ಕೊಲೆ ಮಾಡಿದ ಘಟನೆಗಳನ್ನು ಟಿ.ವಿ.ಯಲ್ಲಿ ನೋಡಿದಾಗ

ವಿಷಾದವೆನಿಸುತ್ತದೆ.ಬೇಡವೆಂದರೆ ತಿರಸ್ಕರಿಸಲಿ ಅಮಾನವೀಯವಾಗಿ ಕೊಲ್ಲುವದು ಯಾವ ನ್ಯಾಯ?

ಸುಂದರ ಯುವತಿ 'ಶುಭಾ' ಸ್ಟಾಫ್ ವೇರ್ ಇಂಜನೀಯರ್ ಗೀರಿಶ್ ನನ್ನು ಕೊಂದು ರಾಜಾರೋಷವಾಗಿ ಏನೂ

ಮಾಡಿಲ್ಲ ಎಂಬ ಹಾಗೆ ದಿಟ್ಟವಾಗಿ ಪೋಸ್ ಕೊಡುವುದನ್ನು ನೋಡಿದರೆ ಅಯ್ಯೋ ಎನಿಸುತ್ತದೆ.

ಶುಭಾಗೆ ಗಿರೀಶ್ ಬೇಡವಾಗಿದ್ದರೆ ಹೇಳಿ ತಿರಸ್ಕರಿಸಬಹುದಿತ್ತು ಗೆಳೆಯರೊಂದಿಗೆ (?) ಕೂಡಿ ಕೊಲೆ ಮಾಡಿದ್ದನ್ನು

ನೆನಸಿಕೊಂಡರೆ ಅದೆಂತಹ ಹಿಂಸೆ. ಇಲ್ಲಿ ಪ್ರೀತಿ ಪ್ರೇಮಗಳ ವಾಖ್ಯಾನವಿಲ್ಲ. ಇದ್ದದ್ದು ಕೇವಲ ಕ್ರೌರ್ಯ. ಶುಭಳ

ಮುಖದ ಮೇಲೆ ಎಳ್ಳಷ್ಟು ಪಾಪ ಪ್ರಜ್ಞೆ, ಪಶ್ಚಾತಾಪ ಇಲ್ಲದನ್ನು ನೋಡಿದರೆ ಅಚ್ಚರಿ. ಬೇಡವಾದದ್ದನ್ನು

ತಿರಸ್ಕರಿಸುವಾಗ ಆಕೆ ತೋರಿದ ಕ್ರೂರತೆಯನ್ನು ವಿಶ್ಲೇಶಿಸುವುದಾದರೂ ಹೇಗೆ?

ಪ್ರೀತಿ - ಪ್ರೇಮಗಳ ವಿಷಯದಲ್ಲಿ ಮನುಷ್ಯನ ಮನಸ್ಸು ವಿಚಿತ್ರವಾಗಿ ವರ್ತಿಸುತ್ತದೆ ಎಂಬುದಕ್ಕೆ ಶುಭ

ಸಾಕ್ಷಿಯಾಗಿದ್ದಾಳೆ. ಗೆಲ್ಲಲು ಏನೇನೋ ತಂತ್ರ ಹೂಡುತ್ತಿದ್ದಾಳೆ. ನ್ಯಾಯ ಮೂರ್ತಿ ಶ್ರೀಧರರಾವ್ ಕೇಸನ್ನು

ನಡೆಸಲು ನಿರಾಕರಿಸಿದ್ದಾರೆ. ಮುದ್ದು ಮುಖದ ಶುಭಾಳ ಕ್ರೌರ್ಯಕ್ಕೆ ನ್ಯಾಯಾಲಯವೇ ಬೆಚ್ಚಿ ಬಿದ್ದಿದೆ.

ಸೌಂದರ್ಯ ಇರುವುದು, ಇರಬೇಕಾದುದು ದೇಹಕ್ಕೊ, ಮನಸ್ಸಿಗೋ ಎಂಬ ವ್ಯಾಖ್ಯಾನ ಈಕೆಯನ್ನು ನೋಡಿದರೆ

ಶುರು ಆಗುತ್ತದೆ.

ನ್ಯಾಯಾಲಯದಲ್ಲಿ ಗೆದ್ದು ಬರುವ ಈಕೆಯ ಹಟಕ್ಕೆ ನಿಯಂತ್ರಣವಿಲ್ಲದಂತಾಗಿದೆ. ಜೈಲಿನಲ್ಲಿ ವೈದ್ಯನೊಬ್ಬ

ಈಕೆಯನ್ನು ಕಂಡು ಬೆಚ್ಚಿ ಬಿದ್ದಿದ್ದಾನಂತೆ.

ಮುಖದ ಮೇಲೆ ನಗು, ದು:ಖ ಏನನ್ನೂ ತೋರಿಸದೇ, ಧೈರ್ಯದಿಂದ ಓಡಾಡುವ 'ಶುಭಾ' ಮನೋವಿಜ್ಞಾನಕ್ಕೆ

ಸವಾಲಾಗಿದ್ದಾಳೆ. ಈಕೆಯ ವರ್ತನೆಗೆ ಅರ್ಥ ಹುಡುಕಲು ಪ್ರಯತ್ನಿಸಿದಂತೆಲ್ಲ ವ್ಯಕ್ತಿತ್ವ ಅನಾವರಣಗೊಳ್ಳುತ್ತದೆ.

ಒಮ್ಮೊಮ್ಮೆ ಅಲ್ಲಿ ನಾವು, ನೀವು ಇದ್ದೇವೆ ಎಂಬಂತೆ ಭಾಸವಾಗಿ ಭಯವಾಗುತ್ತದೆ.

No comments:

Post a Comment