Thursday, October 28, 2010

ಕೆಟ್ಟು ಹೋದ ರಾಜಕೀಯ ಸಂಸ್ಕೃತಿ


ರಾಜ್ಯದ ಉನ್ನತ ಸ್ಥಾನದಲ್ಲಿರುವ ಮುಖ್ಯ ಮಂತ್ರಿಗಳು ನಿಮಗೆ ಗಂಡಸುತನ ಇದ್ದರೆ ಬರುವ ಚುನಾವಣೆಯಲ್ಲಿ ಗೆದ್ದು ತೋರಿಸಿ' ಎನ್ನುತ್ತಾರೆ.
ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಗೌರವಾನ್ವಿತ ಸ್ಪೀಕರ್ ಅವರಿಗೆ ಅವನಿದ್ದಾನಲ್ಲ ನಿಮ್ಮ ಸ್ಪೀಕರ್, ಅವನಿಗೆ ಈ ವಿಷಯ ಕೇಳಿ' ಎಂಬ ಅಗೌರವ ಭಾಷೆ ಬಳಸುತ್ತಾರೆ.
ಕೈ, ನಾಲಿಗೆ, ಹೀಗೆ ದೇಹದ ವಿವಿಧ ಅಂಗಾಂಗಗಳನ್ನು ಕತ್ತರಿಸುವುದಾಗಿ ಇನ್ನೊಬ್ಬರು ಅಬ್ಬರಿಸುತ್ತಾರೆ.
ಸುಸಂಸ್ಕೃತ ಸಭ್ಯ ಎನಿಸಿಕೊಂಡ ಕನ್ನಡ ಸಂಸ್ಕೃತಿಯ ಪ್ರತಿನಿಧಿಗಳಾಗಿರುವ ನಮ್ಮ ರಾಜಕೀಯ ನಾಯಕರುಗಳು ಹದ್ದು ಮೀರಿ ವರ್ತಿಸುತ್ತಿದ್ದಾರೆ.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸೋಲು-ಗೆಲವು ಇದ್ದದ್ದೇ. ಅಧಿಕಾರದಲ್ಲಿದ್ದವರನ್ನು ಬೀಳಿಸುವ ಪ್ರಕ್ರೀಯೆಯಿಂದಾಗಿ ಎಲ್ಲ ಗೊಂದಲ ಸೃಷ್ಟಿಯಾಗಿ ಶಾಸಕರ ಬೆಲೆ, ಭೂಮಿಯ ಬೆಲೆಯಂತೆ ಆಕಾಶಕ್ಕೇರಿದೆ. 25 ಕೋಟಿ ಬೆಲೆಬಾಳುತ್ತಾರೆಂದರೆ ಏನರ್ಥ?
ಕವಡೆ ಕಿಮ್ಮತ್ತಿಗೆ ಬೆಲೆ ಇಲ್ಲದಂತೆ ವರ್ತಿಸುವ ಜನಪ್ರತಿನಿಧಿಗಳ ಬೆಲೆ ರಾಜಕೀಯ ಜಂಜಾಟದಿಂದಾಗಿ ಕೋಟಿಗೇರಿದೆ.
ಸ್ವತ: ಶಾಸಕರೇ ತಮ್ಮ (ಇಲ್ಲದ) ಬೆಲೆಗಾಗಿ ಅಚ್ಚರಿಗೊಂಡಿದ್ದಾರೆ. ಯಾವ ಮಾರುಕಟ್ಟೆಯಲ್ಲಿ ಮಾರಾಟಗೊಳ್ಳಬೇಕೆಂದು ಗೊಂದಲಕ್ಕೆ ಬಿದ್ದಿದ್ದಾರೆ. ಪಕ್ಷ, ಸಿದ್ದಾಂತ, ಆರಿಸಿದ ಮತದಾರರ ಮೌಲ್ಯಗಳನ್ನು ಮರೆತು, ತಮ್ಮ ಮೌಲ್ಯ ಹೆಚ್ಚಳಕ್ಕೆ ಪರದಾಡುತ್ತಿದ್ದಾರೆ.
ಕರ್ನಾಟಕ ಶಾಸಕ ಸಭೆಯ ಇತಿಹಾಸದಲ್ಲಿಯೇ Best (?) Batch ಎನ್ನಬಹುದು.
ಅಧಿಕಾರ ಸಿಗದಿದ್ದರೂ ಚಿಂತೆಯಿಲ್ಲ, ಸಿಕ್ಕ ಹಣ ಬಾಚಿಕೊಂಡರೆ ಸಾಕು ಎಂದು busy ಆಗಿದ್ದಾರೆ.
ಅವರ ಹಣ ಹೂಡಿಕೆಗಾಗಿ ತಲೆಹಿಡುಕರು, ಭೂಮಿ ಹಿಡುಕರು ಅವರಿಗಿಂತಲೂ busy ಆಗಿದ್ದಾರೆ.
ಈ ಸ್ಥಿತಿ ಇನ್ನು ಮುಂದೆ ನಿಲ್ಲುವಂತೆ ಕಾಣುವುದಿಲ್ಲ. ಎಲ್ಲ ರಾಜಕೀಯ ಪಕ್ಷಗಳು ಇನ್ನೂ ಆಪರೇಷನ್ ಗಳಿಗೆ ಸಿದ್ಧವಾಗುತ್ತವೆ ಅಧಿಕಾರ ಇರುವ ಪಕ್ಷಗಳ ಜೊತೆಗೆ ಕೈಜೋಡಿಸುವಾಗ ಕ್ಷೇತ್ರದ ಅಭಿವೃದ್ಧಿ ಎಂದರೆ ಏನು ಎಂಬುದನ್ನು ಅರ್ಥ ಶಾಸ್ತ್ರ ಬಲ್ಲವರು ಇವರನ್ನು ನೋಡಿ ಆದಷ್ಟು ಬೇಗ ಹೊಸ ವ್ಯಾಖ್ಯಾನ ರೂಪಿಸಲಿ.

No comments:

Post a Comment