Saturday, October 30, 2010

ಪಾಸಾದ ಮೊದಲ ಪರೀಕ್ಷೆ - ನಿಟ್ಟುಸಿರು ಬಿಟ್ಟ ಶಿಕ್ಷಕರು

ನಿಧಾನವಾಗಿ ನಿರಾಶೆ ಪ್ರಾರಂಭ. ಉಳಿದ ವಿಷಯಗಳಲ್ಲಿ ಪರಿಪೂರ್ಣತೆ ಇಲ್ಲದೆ Highscool ಗೆ ಹೋಗುವದಾದರೂ ಹೇಗೆ ಎಂಬ tension ಶುರು ಆಯಿತು. ಸ್ವಲ್ಪ serious ಆಗಿ ಶಾಲೆಗೆ ಅಂಟಿಕೊಂಡಿದ್ದು ಏಳನೇ ವರ್ಗದಲ್ಲಿ.
ಆದರೆ ಆಗ ತುಂಬಾ ವಿಳಂಬವಾಗಿತ್ತು. Board exam ಎದುರಿಸುವ ಕಾರಣಕ್ಕಾಗಿ ಎಲ್ಲಿಯೂ ಹೋಗದಂತೆ ಅಭ್ಯಾಸ ಪ್ರಾರಂಭ ಮಾಡಿದೆ.
ಇಂಗ್ಲಿಷ್, ವಿಜ್ಞಾನ, ಗಣಿತ ವಿಷಯಗಳಲ್ಲಿ ಹೆಚ್ಚಿನ ಪರಿಪೂರ್ಣತೆ ಸಾಧ್ಯವಾಗಲಿಲ್ಲ.

ಅಡಿಪಾಯವಿಲ್ಲದ ಕಟ್ಟಿದ ಮನೆಯಂತಾದ ನನ್ನ ಶಿಕ್ಷಣದ ಕುರಿತು ಚಿಂತಿಸುವಂತಾಯಿತು. ನಾನು primary ಹಂತದಲ್ಲಿ ಶಿಕ್ಷಣ ಪಡೆಯಲು ವಂಚಿತನಾದದ್ದು ಮುಂದಿನ ಅಧ್ಯಯನಗಳಲ್ಲಿ ಶ್ರಮ ಪಡುವಂತಾಯಿತು.
ಇತ್ತೀಚಿನ ದಿನಗಳ ಶ್ಯಕ್ಷಣಿಕ ಕಾರ್ಯಗಳಲ್ಲಿ ನನ್ನ ಭಾಷಣ, ತರಬೇತಿಗಳು ಮುಗಿದ ಮೇಲೆ ಶಿಕ್ಷಣ ತಜ್ಞರು ನಾನು ಮೊದಲಿನಿಂದಲೂ ಪ್ರತಿಭಾ ಸಂಪನ್ನ rank ವಿದ್ಯಾರ್ಥಿಯೆಂದೇ ಭಾವಿಸುತ್ತಾರೆ. ಅತ್ಯಂತ ವಿಫಲ ವಿದ್ಯಾರ್ಥಿ ಎಂಬ ಸತ್ಯ ಬಹಳಷ್ಟು ಜನರಿಗೆ ಗೊತ್ತೇ ಇಲ್ಲ. ಅಂದಿನ ನನ್ನ ವಿಫಲತೆ, ಇಂದಿನ ಸಫಲತೆಗೆ ನಾಂದಿಯಾಗಿದ್ದು ಹಲವರಿಗೆ ಪ್ರಯೋಜನವಾಗಿದೆ.
ಇವರೊಬ್ಬ educational expert ಎಂದು ಪರಿಚಯಿಸಿದಾಗ ಒಳಗೊಳಗೆ ಸಂಕೋಚವಾಗಲು ನನ್ನ ಬಾಲ್ಯದ ವಿಫಲತೆ ಕಾರಣ. ಏಳನೇ ತರಗತಿಯಲ್ಲಿದ್ದಾಗ ಪೂರ್ವಭಾವಿ ಪರೀಕ್ಷೆಗಳಲ್ಲಿ ನನ್ನ ವಿಫಲತೆಯನ್ನು ಗುರುತಿಸಿದ ಮುಖ್ಯ ಗುರುಗಳು fail ಆಗುವ ಸೂಚನೆಯನ್ನು ನೀಡಿದರು. ಆದರೆ ಕಾಲ ಮಿಂಚಿತ್ತು. ಊರಲ್ಲಿನ ಪ್ರತಿಷ್ಟಿತರ ಮಕ್ಕಳು board exam ನಲ್ಲಿ fail ಆದರೆ ಶಿಕ್ಷಕರಿಗೆ, ಶಾಲೆಗೆ ಕೆಟ್ಟ ಹೆಸರು ಬೇರೆ.
ನನ್ನನ್ನು ಕರೆದು ಚನ್ನಾಗಿ ಅಭ್ಯಾಸ ಮಾಡಲು ಸೂಚಿಸಿದರೂ ನಾನು ಅಸಹಾಯಕ ಸ್ಥಿತಿ ತಲುಪಿದ್ದೆ.
ಸರಿ ವಾರ್ಷಿಕ ಪರೀಕ್ಷೆ ಹತ್ತಿವಾದಾಗ, ಜಾಣ ಗೆಳೆಯರ ನೆರವು ಕೇಳಿದೆ.ಅವರಿಗೂ ನಾನು pass ಆಗಲಿ ಎಂಬ ಸದಾಶಯವಿತ್ತು.
ಅಂದಿನ ಸರಕಾರಿ ಶಾಲೆಗಳಲ್ಲಿ ಸಮರ್ಪಕ seating ವ್ಯವಸ್ಥೆ ಇರಲಿಲ್ಲ. ನೆಲದ ಮೇಲೆ ಕುಳಿತು ಪರೀಕ್ಷೆ ಬರೆಯಬೇಕಿತ್ತು.
ದಡ್ಡ ವಿದ್ಯಾರ್ಥಿಗಳು, ನದಿಯಲ್ಲಿ ತೇಲಿ ಬರುವ ಹೆಣಕ್ಕೆ ಸಮ ಎಂದು ಶಿಕ್ಷಕರು ತಮಾಷೆ ಮಾಡುತ್ತಿದ್ದರು. ನದಿಯಲ್ಲಿ ತೇಲಿ ಬರುವ ಹೆಣವನ್ನು ನೋಡಿದವರು ಉದ್ದನೇ ಕೋಲಿನಿಂದ ಹೆಣವನ್ನು ಮುಂದಿನ ಊರಿಗೆ ಸಾಗಿಸುತ್ತಾರಂತೆ. ಹಾಗೆ ನನ್ನನ್ನು ಹೈಸ್ಕೂಲಿಗೆ ಸಾಗು ಹಾಕುವ ಯೋಚನೆ, ಜವಾಬ್ದಾರಿ ಶಿಕ್ಷಕರ ಪಾಲಿಗಿತ್ತು.

ಏಳನೇ ಪರೀಕ್ಷೆಯಲ್ಲಿ ನಾನು ಬರೆದ ಉತ್ತರ ಪತ್ರಿಕೆಗಳನ್ನು ಒಮ್ಮೆ ಶಿಕ್ಷಕರೇ ಪರೀಕ್ಷಿಸುತ್ತಿದ್ದರು. pass ಆಗುವ ಅವಕಾಶ ಕಡಿಮೆ ಅನಿಸಿದರೇ ಒಂದೆರಡು ಉತ್ತರಗಳನ್ನು ಬರೆಸುವದು ಅನಿವಾರ್ಯ ವಾಯಿತು.
ಸತ್ಯ, ಪ್ರಾಮಾಣಿಕತೆಯನ್ನು ಬೋಧಿಸುವ ಶಿಕ್ಷಕರು ನಮ್ಮಂತಹ ಅವಿವೇಕಿಗಳಿಂದಾಗಿ ಎಂತಹ ತೊಂದರೆ ಅನುಭವಿಸಬೇಕಾಯಿತು ಎಂದು ನೆನಪಾದರೆ ಬೇಸರವಾಗುತ್ತದೆ.
ಹೀಗಾಗಿ ಅಂದು ನಮ್ಮ ಪ್ರವೇಶಗಳನ್ನು ಕಾಪಿ ಮಾಡಿಸುವದು ಅನಿವಾರ್ಯವಾಗಿತ್ತು. ಪರೀಕ್ಷಾ ನಕಲು ಪದ್ದತಿಯನ್ನು ನಿಯಂತ್ರಿಸಲು ಅಧಿಕಾರಿಗಳು ವಿಫಲರಾಗುತ್ತಿದ್ದರು.
ಹಿಂದುಳಿದ ಹೈದ್ರಾಬಾದ್ ಕರ್ನಾಟಕ ಪ್ರದೇಶಗಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವುದಕ್ಕಿಂತ, ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರುವುದೇ ಪ್ರಯಾಸಕರ ಕೆಲಸವಾಗಿತ್ತು. mass copy ಇರದಿದ್ದರೂ ಅಲ್ಲಲ್ಲಿ oxygen ತರಹ ಸಹಾಯ ಮಾಡಿ ಜೀವದಾನ ನೀಡುತ್ತಿದ್ದರು. ಊರಲ್ಲಿ ಇದ್ದ ಸರಕಾರಿ ಶಾಲೆಗಳ ಸ್ಥಿತಿ ಚಿಂತಾಜನಕವಾಗಿತ್ತು.
ಅದೇ ತಾನೇ ಊರಲ್ಲಿ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆ ಪ್ರಾರಂಭವಾಗಿತ್ತು.

English medium ಹುಚ್ಚು ಹಳ್ಳಿಗಳಲ್ಲಿ ಆರಂಭವಾಗಿತ್ತು. ಮನೆಯಲ್ಲಿ ತಮ್ಮ ಜಗದೀಶ, ತಂಗಿ ರಾಜೇಶ್ವರಿ ಇಂಗ್ಲಿಷ್ ಶಾಲೆಗೆ ಹೋಗುತ್ತಿದ್ದರು.
ನಾನು ಶಿಕ್ಷಣ ಪಡೆಯುವಲ್ಲಿ ಪೂರ್ವ ವಿಫಲನಾಗಿದ್ದು ನನಗೇನು ಅನಿಸಲೇ ಇಲ್ಲ. ಏಳನೇ ತರಗತಿಯ ಆರು paper ಚನ್ನಾಗಿ ಆದವು ಎಂಬ ಸಮಾಧಾನ ಶಿಕ್ಷಕರಿಗೆ, ಆದರೆ ನನಗೆ ಆ ರೀತಿಯ ಆತ್ಮವಿಶ್ವಾಸವಿರಲಿಲ್ಲ.
ಆತ್ಮಾವಲೋಕನ ಮಾಡಿಕೊಳ್ಳುವ ಸ್ಥಿತಿಯಲ್ಲಿ ನಾನಿರಲಿಲ್ಲ. ಏನಾದರೂ ಆಗಲಿ ಎಂಬ ಭಾವನೆಯಿತ್ತು.

ಮನೆತನದ ಶ್ರೀಮಂತಿಕೆ ಕಡಿಮೆ ಆಗಿ ವ್ಯಾಪಾರ ಇಳಿಮುಖವಾಗಿತ್ತು. ಮನೆತನದ ಶ್ರೀಮಂತ ಅಮರಣ್ಣ ತಾತ 1976 ರಲ್ಲಿ ನಿಧನರಾಗಿದ್ದರು.
ಮುಂದೆ ಶಿಕ್ಷಣದ ಮೂಲಕವೇ ಬದುಕನ್ನು ರೂಪಿಸಿಕೊಳ್ಳುವ ಅನಿವಾರ್ಯವಿತ್ತು. ವ್ಯಾಪಾರ ಊರಲ್ಲಿ ಭಿನ್ನವಾಗಿ ಬೆಳೆಯತೊಡಗಿತ್ತು.
ಅತ್ತಕಡೆ ವ್ಯಾಪಾರವೂ ಇರಲಿಲ್ಲ. ಪರಿಪೂರ್ಣ ಶಿಕ್ಷಣವೂ ಸಿಗಲಿಲ್ಲ ಎಂಬ ತ್ರಿಶಂಕು ಸ್ಥಿತಿ ನಮ್ಮದಾಗಿತ್ತು.
ಇನ್ನು ಮುಂದೆ ಗಂಭೀರವಾಗಿ ಅಭ್ಯಾಸ ಮಾಡಬೇಕು ಎಂಬ ನಿರ್ಧಾರ ಮಾಡಿದೆ.
ಸುದೈವ ವಶಾತ್ 7th pass ಆದೆ. ನನಗಿಂತಲೂ ಹೆಚ್ಚು ನಮ್ಮ ಶಿಕ್ಷಕರು ಖುಷಿ ಪಟ್ಟರು. ಅಂದು ನಾನು 7th pass ಆದ ಸಂಭ್ರಮ ನೆನಪಾದರೆ ಅಮಿತಾಬ ಬಚ್ಚನ್ ರ ಮಂಜ ಪಾಸ್ ಆದ ಎಂಬ ಜಾಹಿರಾತು ನೆನಪಾಗುತ್ತದೆ. ಅಂತೂ ಮಂಜ ಪಾಸ್ ಆದ.

No comments:

Post a Comment