Friday, October 29, 2010

ವಿಚಲಿತಗೊಂಡ ಮನಸು - ಕೆರಳಿದ ಭಾವನೆಗಳು

ಮೈಸೂರು ದಾಟುವ ಹೊತ್ತಿಗೆ ನಾನು ಭಿನ್ನವಾಗಿ ಹೋಗಿದ್ದೆ. ಎಂದೂ ಇರದ ಕೋಪ ನನ್ನ ನಡೆ-ನುಡಿಯಲ್ಲಿ ಶುರುವಾಯಿತು.. ಅದನ್ನು ಗುರುತಿಸಲಿಲ್ಲ. ಶ್ರೀರಂಗ ಪಟ್ಟಣದ ಪಾರ್ಕಿನಲ್ಲಿ ಮರದ ಕೆಳಗೆ ನಿಂತು ನಿನ್ನನ್ನು ಕಾಯುವಾಗ ಸಿಟ್ಟು ಬರಬಾರದಿತ್ತು.
ಆದರೆ ನಾನು ಕೋಪಿಸಿಕೊಂಡಾಗ ನನ್ನಲ್ಲಾದ ಬದಲಾವಣೆಯನ್ನು ನೀನು ಗುರುತಿಸಲಿಲ್ಲ. ಈಗ ಕೇವಲ ಬಯಕೆ ಮಾತ್ರ ಉಳಿದು, ಉಳಿದ ಕುತೂಹಲವೆಲ್ಲ ನಿಧಾನ ಮಾಯವಾಯಿತು.

ಬೇಲೂರಿನಲ್ಲಿ halt ಮಾಡಿದಾಗ ಮತ್ತೊಮ್ಮೆ ಇಡೀ ರಾತ್ರಿ ಚರ್ಚಿಸುವ ಅವಕಾಶ. ಆದರೆ ನಾನು ಸುಂದರ ಸಮಯವನ್ನು ಹಾಳುಮಾಡಿಕೊಂಡೆ. ನಿನ್ನಿಂದ ಏನೆಲ್ಲ, ಅಪ್ರಿಯವಾದದ್ದನ್ನು ಬಯಸಿದ್ದು ನಿನಗೆ ಆತಂಕವನ್ನುಂಟುಮಾಡಿತ್ತು. ನಿಧಾನವಾಗಿ ನಿರಾಕರಣೆ ಮಾಡಿದಾಗ, ನಾನು ನನಗರಿವಿಲ್ಲದಂತೆ ಹಕ್ಕನ್ನು ಚಲಾಯಿಸಿದ್ದು ಆಘಾತವನ್ನುಂಟುಮಾಡಿತ್ತು.
ನಾನಾಗ ಬದಲಾಗಿದ್ದೆ. ಬಿಸಿ ಅಪ್ಪುಗೆಯ ರೋಮಾಂಚನ ಹಿತಕಾರಿಯಾಗದೇ ಶತ್ರುವಾಯಿತು. ನೀನು ದಾಳಿ ಮಾಡಿದಾಗ ಇದ್ದ ಮುಗ್ಧತೆ ನನ್ನಲ್ಲಿ ಉಳಿದಿರಲಿಲ್ಲ. ನಾನು ಒಂದರ್ಥದಲ್ಲಿ ವಿಕೃತವಾಗಿ ಹೋಗಿದ್ದೆ.
ನೀನು ನನ್ನಿಂದ ಬಯಸಿದ ಮುಗ್ಧ ಪ್ರೇಮದ ಜಾಗೆಯಲ್ಲಿ ಬಯಕೆ ಆವರಿಸಿತ್ತು. ಕೇವಲ ಎರಡೇ ದಿನಗಳಲ್ಲಿ ಆದ ಬದಲಾವಣೆ, ಯಾಕೆ ಹೀಗೆ ಎಂಬ ಜಿಜ್ಞಾಸೆ, ಅತಾರ್ಕಿಕ ಸಂಗತಿಯಾಯಿತು.
ಇಬ್ಬರೂ mood ಕಳೆದುಕೊಂಡು ಗಂಭೀರವಾದೆವು. ಪ್ರವಾಸದ ಆರಂಭದಲ್ಲಿದ್ದ ಖುಷಿ ನಿಧಾನವಾಗಿ ಕರಗಿ ಹೋಯಿತು.
please ನನ್ನನ್ನು ರೂಮಿಗೆ ಹೋಗಲು ಬಿಡು, ಯಾರಾದರೂ ತಪ್ಪು ತಿಳಿದುಕೊಂಡಾರು ಎಂದದ್ದು ನನಗಿಷ್ಟವಾಗಲಿಲ್ಲ.

ಎಲ್ಲವೂ track ತಪ್ಪಿದಾಗ ಆಗುವ ಅನಾಹುತವನ್ನು ನೀನು ನನಗಿಂತ ಚನ್ನಾಗಿ ಅರಿತವಳಾಗಿದ್ದೆ.
Engaged girl ಎಂಬ relaxation ಉಳಿಯುವುದಿಲ್ಲ ಎಂದು ನಿನಗೆ ಖಾತ್ರಿಯಾದಾಗ ನನ್ನನ್ನು ದೂರ ಮಾಡಲು ಪ್ರಯತ್ನಿಸಿದ ಸೂಕ್ಷ್ಮತೆ ನನಗೆ ಅರ್ಥವಾಗಲಿಲ್ಲ. You felt that I started disturbing you.
ನಿನ್ನ ಪ್ರೇಯಸಿಯಂತೆ ಪರಿಭಾವಿಸಲು ಪ್ರಾರಂಭಿಸಿದ್ದು ನಿನಗೆ ಹೊಸದೆನಿಸಿತು.
ಬಸ್ಸಿನಲ್ಲಿ ನಿಧಾನವಾಗಿ ತಿಳಿಹೇಳಿದರೂ ನನಗದು ಅರ್ಥವಾಗಲಿಲ್ಲ. ನೋಡು ಪುಟ್ಟಾ ನಾನು ಮದುವೆಯಾಗಿ ಹೋಗುವವಳು ನನಗೆ ನಿನ್ನಿಂದ ತೊಂದರೆಯಾಗಬಾರದು. ನಿನ್ನ ಮೇಲಿದ್ದ ನಿರ್ಮಲ ಪ್ರೇಮವನ್ನು ಹೇಳಿ-ಹಂಚಿಕೊಂಡಿದ್ದೆ ತಪ್ಪಾಯಿತು ಅನ್ನುವಂತೆ ನಡೆದುಕೊಳ್ಳಬೇಡ. ನಿನ್ನ ಪ್ರೀತಿಯ ನೆನಪನ್ನು ಕಟ್ಟಿಕೊಂಡು ಹೋಗಲು ಅವಕಾಶ ಮಾಡಿಕೊಡು. ನೆನಪು ಹಿತಕರವಾಗಿ ಉಳಿಯಬೇಕಾದರೆ ನೀನು ಮುಗ್ಧವಾಗಿದ್ದರೆ ಚಂದ, ಈ ರೀತಿ ಹೆಚ್ಚನದನ್ನು ಬಯಸಬೇಡ ಅಂದಾಗಲೂ, ಊಹೂಂ.....ನಾನು ಬದಲಾಗಿ ಹೋಗಿ ಆಕ್ರಮಣಕಾರಿಯಾಗಿದ್ದೆ.

No comments:

Post a Comment