Monday, March 29, 2010


ಮತ್ತೆ ಆರಂಭವಾದ ಕಿರುತೆರೆ ನಂಟು

ಕಳೆದೆರೆಡು ದಶಕಗಳ ಉಪನ್ಯಾಸಕ ವೃತ್ತಿಯೊಂದಿಗೆ ಅನೇಕ ಊರು ಉಸಾಬರಿ ಯೋಜನೆಗಳಲ್ಲಿ ತೊಡಗಿರುವುದನ್ನು ನೀವು ನೋಡಿದ್ದೀರಿ.
1996 ರಲ್ಲಿ ಸ್ಥಾನಿಕ ಸಿಟಿ ಕೇಬಲ್ ಗೆಳೆಯರಾದ ಸುನಿಲ್ ತೆಂಬದಮನಿ, ಮಹಾದೇವ ಕಲಬುರ್ಗಿ, ಹಿರಿಯ ತಂತ್ರಜ್ಞ ಫಡ್ನೀಸ್ ಅವರ ನೆರವಿನೊಂದಿಗೆ ಇರುವ ಪರಿಮಿತಿಯ ತಂತ್ರಜ್ಞಾನ ಬಳಸಿಕೊಂಡು ಸಿಟಿ ಕೇಬಲ್ ವೀಕ್ಷಕರಿಗಾಗಿ ಅಕರ್ಷಕ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ.
ಅನೇಕ ರಾಜಕೀಯ ದಿಗ್ಗಜರ ನೇರ ಸಂದರ್ಶನ ಪ್ರಸಾರ ಮಾಡಿದ್ದು ಈಗ ಇತಿಹಾಸ.
ನನ್ನ ಸಂದರ್ಶನ ಕಾರ್ಯಕ್ರಮ yapal's show time ನಲ್ಲಿ ನಾಡಿನ ಎಲ್ಲರ ಸದರ್ಶನ ಮಾಡಿದ್ದೇನೆ. ಈಗ ಅವುಗಳ ದಾಖಲೆ ಉಳಿದಿಲ್ಲ ಎನ್ನುವುದು ಅಷ್ಟೇ ವಿಷಾದದ ಸಂಗತಿ. ಮಾಜಿ ಪ್ರಧಾನಿ ದೇವೆಗೌಡರು, ಕೇಂದ್ರ ಸಚಿವರಾಗಿದ್ದ ಎಂ.ವಿ. ರಾಜಶೇಖರನ್, ಎಂ.ಪಿ. ಪ್ರಕಾಶ್ ಅಲ್ಲದೆ ಅನೇಕ ಮಠಾಧೀಶರ ಸಂದರ್ಶನಗಳು ಪ್ರಸಾರಗೊಂಡು ನಾನು ಸ್ಥಾನಿಕ ಕೇಬಲ್ ನ ಶೋ ಮ್ಯಾನ್ ಅನಿಸಿಕೊಂಡೆ. ನಂತರ ಬೇರೆ ಬೇರೆ ಕಾರಣಗಳಿಂದ Ten TV ಸ್ಥಗಿತಗೊಂಡು ನನ್ನ ಕಾರ್ಯಕ್ರಮಗಳಿಗೂ ತಾತ್ಕಾಲಿಕ ತೆರೆಬಿತ್ತು. Yapal's show time ನ್ನು 1999 ರ ಸಾರ್ವಜನಿಕ ಚುನಾವಣೆಯಲ್ಲಿಯೂ ಸಮರ್ಥವಾಗಿ ಬಳಸಿಕೊಂಡ ಹೆಗ್ಗಳಿಕೆ ನಮ್ಮದು.
ನಂತರ ವಾರ್ತಾ ಇಲಾಖೆ ಹಾಗೂ ಬೆಂಗಳೂರು ದೂರದರ್ಶನಕ್ಕಾಗಿ ಮೂರು ಸಾಕ್ಷ್ಯ ಚಿತ್ರಗಳನ್ನು ನಿರ್ಧೇಶಿಸಿದ ಅನುಭವ ನನ್ನ ಮನದ ಮೂಲೆಯಲ್ಲಿ ಅಡಗಿ ಕುಳಿತಿದೆ.
ನಂತರ ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸಿ-ನಿರ್ದೇಶಿಸುವ ಅವಕಾಶ ಬಂದರೂ ಕಾಲೇಜು ಕೆಲಸದ ಒತ್ತಡದ ಮಧ್ಯ ಪೂರೈಸಲಾಗಲಿಲ್ಲ ಎಂಬ ಬೇಸರ.
Jack of all master of none ಆಗದಂತೆ ಎಚ್ಚರವಹಿಸಿಕೊಂಡು ಸುಮ್ಮನಿದ್ದೇನೆ. ಅರ್ಧದಶಕದ ನಂತರ ಜನಪ್ರಿಯ ವಾಹಿನಿ ಈ ಟಿವಿಯಲ್ಲಿ ಮಧ್ಯಾನ್ಹ ಪ್ರಸಾರವಾಗುವ 'ಸುಕನ್ಯಾ' ಧಾರಾವಾಹಿಯಲ್ಲಿ ಅಭಿನಯಿಸುವ ಅವಕಾಶವನ್ನು ಗೆಳೆಯ ಸಹ ನಿರ್ದೇಶಕ ಮಂಜುನಾಥ ಪಾಂಡವಪುರ ಒದಗಿಸಿಕೊಟ್ಟರು.
ಡಿಸೆಂಬರ 1 ರಂದು ಎರೆಡು ಸನ್ನಿವೇಶಗಳಿಗಾಗಿ ಅಭಿನಯಿಸಿ ಬಂದೆ. ನಿರ್ದೇಶಕರಾದ ರವಿಕಿರಣ, ಶಶಿಕಿರಣ ಅಭಿನಯವನ್ನು ಮೆಚ್ಚಿಕೊಂಡದ್ದು, ಹಿರಿಯ ಅನುಭವಿ ಕಲಾವಿದರಾದ ಅನಂತವೇಲು, ಶ್ವೇತಾ ಚಂಗಪ್ಪ, ನಿನಾಸಂ ಸಂದಿಪ್ ರೊಂದಿಗೆ ಅಭಿನಯಿಸಿದ್ದು ಅವಿಸ್ಮರಣೀಯ ಅಂದುಕೊಳ್ಳಬಹುದಲ್ಲ.
ಸದರಿ ದೃಶ್ಯಗಳು 27-12-2009 ರಂದು ಹಾಗೂ 7-1-2010 ರಂದು ಪ್ರಸಾರಗೊಂಡವು. ಅದಕ್ಕೆ ಬೇಕಾದಷ್ಟು ಪ್ರಚಾರ ನೀಡದೆ ಕೇವಲ ಸ್ನೇಹಿತರಿಗೆ ಮಾತ್ರ ವಿಷಯ ತಿಳಿಸಿದೆ.
ನನ್ನ ಮೊದಲ ಆದ್ಯತೆ ಓದು, ಬರಹ ಹಾಗೂ ಉಪನ್ಯಾಸವಾದ್ದರಿಂದ ಅವಕಾಶ ಸಿಕ್ಕಾಗ ಮಾತ್ರ ಕಿರುತೆರೆಯನ್ನು ಬಳಸಿಕೊಳ್ಳುವುದು ಒಳಿತು ಅನಿಸಿದೆ.
ನಮಗಿರುವ ಸೀಮಿತ ಕಾಲಮಿತಿಯನ್ನು ಎಲ್ಲ ಅವಕಾಶಗಳನ್ನು ಬಳಸಿಕೊಳ್ಳುವ ಇರಾದೆ ಇದೆ. ಆದರೆ ಅದಕ್ಕಾಗಿ ಹೆಚ್ಚು ದಣಿದುಕೊಳ್ಳಬೇಕು ಎಂಬುದು ಅಷ್ಟೇ ಸತ್ಯ!.

No comments:

Post a Comment