Sunday, October 31, 2010

ಉಳಿಯದ ಸ್ನೇಹ- ಮರೆಯಲಾಗದ ಕಾಣಿಕೆ

ಮುಂದಿನ ಪ್ರವಾಸದಲ್ಲಿ ಕೊಂಚ ಗಂಭೀರವಾಗಿದ್ದರೂ, ನಿನ್ನ ಸಾಮಿಪ್ಯ ಬೇಕೆನಿಸುತ್ತಿತ್ತು. ಮನಸ್ಸು ನಿಯಂತ್ರಣ ಕಳೆದುಕೊಂಡರೂ ನಿನ್ನಯ ಅಳು ನೆನಪಾಗಿ ಮೌನಿಯಾದೆ.
ನನ್ನ ಮೌನವು ನಿನಗೆ ಇಷ್ಟವಾಗಲಿಲ್ಲ. ನಾನು ಸಹಜವಾಗಿ ಮೊದಲಿನಂತೆ ಲವ ಲವಿಕೆಯಿಂದ ಇರಲಿ ಎಂಬ ನಿನ್ನ ನಿರೀಕ್ಷೆ ಸುಳ್ಳಾಯಿತು. ನಾನು ಅಂತರ್ಮುಖಿಯಾದೆ. ಏನನ್ನೋ ಕಳೆದುಕೊಂಡೆ ಜೀವನೋತ್ಸಾಹ ಇಲ್ಲದಾಯಿತು. ನಿನ್ನನ್ನು ಕಳೆದುಕೊಳ್ಳುವುದು ನೆನಪಾದರೆ ಸಾಕು ಕುಗ್ಗಿಹೋಗುತ್ತೇವೆ.
ನಾನೇನು ನಿನ್ನನ್ನು ಬಯಸಿಯೇ ಇರಲಿಲ್ಲ. ಆದರೆ ಪ್ರಾಮಾಣಿಕ ಸ್ನೇಹ ನನ್ನನ್ನು ಆಳಕ್ಕೆ ನೂಕಿತ್ತು. ಅಲ್ಲಿಂದ ಮೇಲೇರಲು ಸಾಧ್ಯವಾಗಲೇ ಇಲ್ಲ.
ಹೀಗೆ ಗಟ್ಟಿ ಧೈರ್ಯ ತಗೆದುಕೊಂಡು, ಭವಿಷ್ಯವನ್ನು ಕಲ್ಪಿಸಿಕೊಂಡಾಗ ಭಯವಾಯಿತು. Insecure ಭಾವನೆ ಹೆಚ್ಚಾಯಿತು. ನಾಳೆ ರಾತ್ರಿ ಊರು ತಲುಪುತ್ತೇವೆ. ಹೋದ ಮೇಲೆ ಪರೀಕ್ಷಾ ತಯಾರಿ ಆರಂಭ.
ಆ ಪ್ರಾಯದಲ್ಲಿ ಜಾಣರ ಗುಂಪೊಂದು, ಹೆಣ್ಣು-ಗಂಡು ಎಂಬ ಭೇದವಿಲ್ಲದೆ ಒಟ್ಟಾಗಿ study ಮಾಡುವ ಯೋಜನೆಯನ್ನು ಶಿಕ್ಷಕರು ರೂಪಿಸಿದದರು. ಹೇಗಿದ್ದರೂ ಅಲ್ಲಿ ಮತ್ತೆ ಒಟ್ಟಾಗಿ ಇರುತ್ತೇವಲ್ಲ ಎಂಬ ನಂಬಿಕೆ ಬೇರೆ.
ನನ್ನ ತುಂಟತನವನ್ನು ನಿಯಂತ್ರಿಸಿಕೊಂಡು ಗಂಬೀರವಾಗಿ ನಿನ್ನೊಂದಿಗೆ ವರ್ತಿಸಲಾರಂಸಿದೆ. ಆದರೆ ಮೊದಲಿನ ಸಹಜತೆ ಉಳಿಯಲಿಲ್ಲ. ಇಷ್ಟೊಂದು ಸಣ್ಣ ವಯಸ್ಸಿಗೆ, ಇಷ್ಟೊಂದು ದೊಡ್ಡ ಪ್ರಮಾದ ನಡೆಯಬಹುದು ಅಂದುಕೊಂಡಿರಲಿಲ್ಲ.
ಒಂಚೂರು ಗಂಭೀರವಾಗಿ ಆಲೋಚಿಸಿದಾಗ ಭವಿಷ್ಯ ಕರಾಳವೆನಿಸಿತು. ಬದುಕಿನಲ್ಲಿ ಯಶಸ್ವಿಯಾಗದಿದ್ದರೆ ಹೇಗೆ? ಅದಕ್ಕೆ ಕಾರಣ ಯಾರು? ಎಂಬ ಆಲೋಚನೆಗಳು ಆರಂಭವಾದ ಕೂಡಲೇ ನಿನ್ನ ಮೇಲೆ ಬೇಸರ ಉಂಟಾಯಿತು. ನೀನು ಪ್ರೀತಿಯನ್ನು ತೋರಿಸದೇ ಇದ್ದರೆ, ಸಹಿಸಿಕೊಂಡಿದ್ದರೆ ನಾನು ಬಚಾವಾಗುತ್ತಿದ್ದೆ ಎಂಬ ಹುಸಿ ಆರೋಪಿಗಳು ಆರಂಭವಾದರೂ ಸುಮ್ಮನೆ ಸಹಿಸಿಕೊಂಡೆ. ಕೊನೆದಿನ, ಮೊದಲ ದಿನದಂತೆ ಅಪರಿಚಿತವಾಗಿಯೇ ಬಿಳ್ಕೋಟ್ಟಾಗ ತಳಮಳ.
ನಾಳೆಯಿಂದ study ಮಾಡಲು ಒಟ್ಟಾಗಿ ಸೇರೋಣ. ನಿನಗೆ difficult ಎನಿಸುವ ವಿಷಯಗಳನ್ನು ನಾನೇ ಚರ್ಚಿಸಿ ತಿಳಿಸುವೆ ಎಂದಾಗ ನಿನ್ನ maturity.ಅರ್ಥವಾಗಿ ಸಣ್ಣವನೆನಿಸಿ ಕುಬ್ಜನಾಗಿ ಹೋದೆ.
ಒಂದು ವಾರ ನಾನೇ ಒಂಟಿಯಾಗಿ ಕಳೆದು, ನಿನ್ನನ್ನು ಪೀಡಿಸದೆ. ವಿಶ್ವಾಸ ಹೆಚ್ಚಿಸಿಕೊಂಡೆ. ಅಲ್ಲಿ ಸಹಜತೆ ಇರದಿದ್ದರೂ ಆತ್ಮವಿಶ್ವಾಸವಿತ್ತು.
ಒಂದು ವಾರದಲ್ಲಿ ನಿಧಾನ ಬದಲಾಗುತ್ತ ಹೋದೆ. out of sight is out of mind ಎಂಬ ಮಾತು ದಿಟ ಎನಿಸಿತು.
ಆದರೆ ಮತ್ತೇನು combined study ನಮ್ಮನ್ನು ಒಂದು ಮಾಡಿದ್ದು ಎರಡನೇ ಅಪಾಯಕ್ಕೆ ನಾಂದಿಯಾಯಿತು. ವಿಶಾಲವಾದ ಮೈದಾನ ಹತ್ತಾರು ರೂಮುಗಳು combined study ಗೆ ಸುಂದರ ವಾತಾವರಣ ಕಲ್ಪಿಸಿತ್ತು ಆದರೆ ನಾನದರಲ್ಲಿ ಆಗಬೇಕಾದ ರೀತಿಯಲ್ಲಿ involve ಆಗಲಿಲ್ಲ.
ಒಂದೆರಡು like minded ಗೆಳೆಯರೊಂದಿಗೆ study ಚೆನ್ನಾಗಿ ಸಾಗಿತು. ಆದರೆ ಮನಸ್ಸು ಮತ್ತೆ ಹಿಂದೆ ತಿರುಗಿತು.
ಎಲ್ಲರೂ ಅವರವರ ಪಾಡಿಗೆ ಇರುತ್ತಿದ್ದರು. ನೀನು ಗಣಿತ ಹೇಳಿಕೊಡುವಾಗ ನನ್ನ ಲೆಕ್ಕಾಚಾರವೇ ಬೇರೆಯಿರುತ್ತಿತ್ತು. Study ಬಿಟ್ಟು ಉಳಿದ ವಿಷಯ ಆರಂಭಿಸಿದೆ.
ನಡುರಾತ್ರಿ ಎರಡು ಗಂಟೆಯವರೆಗೆ ನನ್ನ ಮಾತುಗಳನ್ನು ಸಹನೆಯಿಂದ ಕೇಳಿಕೊಂಡ ನಿನ್ನ ತಾಳ್ಮೆ ಗಾಂಭೀರತೆ ಬದುಕಿನ ಬಗೆಗೆರುವ ಜವಾಬ್ದಾರಿ ನನ್ನ ಮೇಲೆ ಇರುವ ಪ್ರೀತಿ ಹೀಗೆ ಯಾವುದನ್ನು ನೆನಪಿಸಿಕೊಳ್ಳಲಿ.
ನಾನೇ ಒಂದಿನ ಕೇಳಿದೆ. ಆಯಿತು, ನಿನ್ನನ್ನು ನಾನೆಂದು ಮುಂದೆ ಭೇಟಿ ಆಗುವುದಿಲ್ಲ. ನನ್ನ ಜೀವನದ ಕೊನೆಕ್ಷಣದ ವರೆಗೆ ನೆನಪಿನ ಆಳದಲ್ಲಿ ಉಳಿಯುವ ಕಾಣಿಕೆ ನೀಡು ಎಂಬ ಬೇಡಿಕೆಗೆ ನೀನು ವಿಚಳಿತಳಾದೆ.
ಇಲ್ಲ ನನಗೆ ನಿನ್ನ ಮರೆಯೋಕೆ ಸಾಧ್ಯವಿಲ್ಲ. ಪರಸ್ಪರ ಸ್ನೇಹಿತರಾಗಿ ಉಳಿದರೆ ಖಂಡಿತ ಭೇಟಿ ಆಗುತ್ತ ಇರೋಣ. ಅದಕ್ಕೆ ಕಾಣಿಕೆ ಇತ್ಯಾದಿ ಬೇಡ. ನಿರ್ಮಲ ಸ್ನೇಹ ನಿಷ್ಟೆಯ ಮನಸ್ಥಿತಿ ಸಾಕು ಎಂದ ನಿನ್ನ ವಾದ ಅರ್ಥವಾಗಿದ್ದರೆ ನನಗಿಂದು ಈ ಸ್ಥಿತಿ ಅಂದರೆ ನಿನ್ನನ್ನು ಅಗಲುವ ಸ್ಥಿತಿ ಬರುತ್ತಿರಲಿಲ್ಲ.
ನನ್ನ ಮನದಾಳದ ಅಳಲನ್ನು ಕಡ್ಡಾಯವಾಗಿ ಬೇಕಿರುವ ಕಾಣಿಕೆಯ ಸುಳಿವನ್ನು ನೀಡಿ ನಿನ್ನನ್ನು ತೀವ್ರವಾಗಿ ಚಿಂತಿಸುವಂತೆ ಮಾಡಿದೆ. ನನಗೆ ಗೊತ್ತಿತ್ತು ಪರೀಕ್ಷೆ ಮುಗಿದ ಮೇಲೆ ನೀನು ಸಿಗುವುದಿಲ್ಲ ವೆಂದು ಅದಕ್ಕೆ ಕಾಣಿಕೆಗಾಗಿ ಪದೇ ಪದೇ ಒತ್ತಾಯಿಸಿದಾಗಲೂ ನೀನು ಜಾರಿಕೊಳ್ಳುತ್ತಿದೆ. ಆದರೆ ನಾನು ಬಿಡಬೇಕಲ್ಲ.

1 comment:

  1. ಸರ್ ದಯವಿಟ್ಟು ಬರಹದಲ್ಲಿ ಕಡಿಮೆ ಇಂಗ್ಲಿಷ್ ಶಬ್ದಗಳನ್ನು ಬಳಸಿ, ಓದಿಗೆ ಅವು ಅಡ್ಡಿಯಾಗುತ್ತವೆ
    -ಸಿರಾಜ್

    ReplyDelete