ಹಂಗೇಕೆ
ಹೊಳೆಯುವ ಚಿನ್ನಾಭರಗಳು
ಅಸೂಯೆ ಪಡುತಿವೆ
ನಿನ್ನ ಮೈ ಕಾಂತಿಯ ಬೆರಗ ಕಂಡು
ವೃಕ್ಷ ಸ್ಥಳಗಳ ಮೇಲೆ ರಾರಾಜಿಸುತಿರುವ
ಕೇಶರಾಶಿಗೆ ಎಲ್ಲಿಲ್ಲದ ಗರ್ವ
ಹರಡಿ ಅಪ್ಪಿರುವ ಮಹಾದಾನಂದ
ಉಡುಗೆಯ ಹಂಗೇಕೆ
ಚಿನ್ನದ ಬೊಂಬೆಗೆ
ಬೆಳಕ ಸಿರಿ ಮರೆಮಾಚಲು
ಕಣ್ಣಂಚಿನ ಸೆಳೆತವಷ್ಟೇ ಸಾಕು
ಎದೆ ನಡುಗಿಸಿ ಬೆರಗಾಗಿ
ಕರಗಿ ಹೋಗಲು
ಸಾಕು ಸಖಿ ಈ ಬೆರಗಿನಾಟವ
ಸೋತು ಶರಣಾಗಿ ಕರಗಿ
ನೀರಾಗಿ ಪುಳಕಗೊಂಡು
ಮೈಮನಗಳು ನಲುಗಿವೆ
ನಿನ್ನ ಚಲುವ ಮಾಟವ ಕಂಡು
---ಸಿದ್ದು ಯಾಪಲಪರವಿ
No comments:
Post a Comment