Friday, December 2, 2016

ಪುಟ್ಟರಾಜ ಪ್ರಭುವೆ

ವಿಧಿ ಕಣ್ಣು ಕಟ್ಟಿದಾಗ
ಒಳಗಣ್ಣು ತೆರೆಸಿದ ಕರುಣಾ
ಸಾಗರನೆ
ಹೆತ್ತೊಡಲ ಬರಸಿಡಿಲಿಗೆ
ಕಾರಣನಾಗಿ
ಬದುಕು ಶೂನ್ಯ
ವಾದಾಗ ಅಸಂಖ್ಯ
ಸಂಖ್ಯ ಬಳಸಿ ಬಾಳ
ಪಯಣದಿ ಜೀವಯಾನಕೆ
ಭಾವ ತುಂಬಿದ ಗುರುವಿನ
ಗುರುವೆ.

ನಾದ ಲೋಕದೊಳೊಂದು
ಹೊಸ ಲೋಕ ಸೃಷ್ಟಿಸಿ ದಿವ್ಯ
ಬೆಳಕ ತೋರಿ ಅಂಧತ್ವ
ದೂರಾಗಿಸಿದ ಜಗದಾದಿ ಗುರುವೆ.

ನೀನಿಲ್ಲದ ಜಗದ ಶೂನ್ಯವ
ತುಂಬುವ ಶಕ್ತಿ ಕರುಣಿಸು
ದಯಾಮಯಿ ಪ್ರಭುವೆ.

No comments:

Post a Comment