Monday, January 15, 2018

ಪುಸ್ತಕ ಸಂಕ್ರಮಣ

*ಪುಸ್ತಕ ಸಂಕ್ರಮಣ*

ನನ್ನ ಹಬ್ಬಗಳೇ ಹೀಗೆ. ಎಲ್ಲಂದರಲ್ಲಿ. ಈ ವರ್ಷದ ಸಂಕ್ರಮಣ ಬೆಂಗಳೂರಿನ ಪುಸ್ತಕ ಸಡಗರ. ನಾಗರಾಜ ವಸ್ತಾರೆ ಹಾಗೂ ಅಪರ್ಣಾ ಅವರ ಸೌಜನ್ಯದ ಕರೆಗೆ ಬಂದದ್ದು ಸಾರ್ಥಕ.

ವೇದಿಕೆ ಮೇಲೆ, ಮುಂದೆ ಹಾಗೆ ಅಂಕಣದ ತುಂಬೆಲ್ಲ ಚಿರಪರಿಚಿತ ಮುಖಗಳ ಮಧ್ಯೆ ನಾನೇ ಲೋ ಪ್ರೊಫೈಲ್.

ಅದೇನೋ ವಿಚಿತ್ರ. ಮುಖಪುಸ್ತಕದ ಭಾರಿ ಗೊತ್ತಿರುವ ಗೆಳೆಯರೂ 'ಅಯ್ಯೊ ಗೊತ್ತೇ ಸಿಗಲಿಲ್ಲ' . ಅಂತಾರೆ.

ಎಂದಿನಂತೆ ಸಾಂಪ್ರದಾಯಿಕ ಮಾತುಗಳ ಸುರಿಮಳೆ. ನಾವು ಎಷ್ಟೇ ಹೊಸ ನಮೂನೆ ಬರೆದರೂ ಮಾತಿನ ಜಾಡು ಹೊಗಳಿಕೆ ಹಾದಿ ಹಿಡಿದುಬಿಡುತ್ತೆ. ನಮ್ಮ ನಿರೀಕ್ಷೆಯೂ ಹಾಗೆ ಅನ್ನಿ.

ಆದರೆ ಬರಹಗಾರ,ವಿಮರ್ಶೆ ಹಾಗೂ ಹೊಗಳಿಕೆಗಳ ಸೌಜನ್ಯಗಳ ಬದಿಗಿರಿಸಿ ತಮ್ಮ ಪಾಡಿಗೆ ತಾವು ಬರೆಯುತ್ತಿರಬೇಕು.

ಯಾರು ಏನೇ ಹೇಳಿದರೂ ಉಳಿಯುವುದು ಮಾತ್ರ ಉಳಿಯುತ್ತೆ.

ವಚನಕಾರರು ಹಾಗೂ ಶೇಕ್ಷಪಿಯರ್ ಹೊಗಳಿಕೆ ಹಾಗೂ ತೆಗಳಿಕೆಗಳ ಲೆಕ್ಕಿಸಿದ್ದರೇ ಅಂದೇ ಸಾಯುತ್ತಿದ್ದರು.
ಆದರೆ ಅವರು ಇಂದಿಗೂ ಇದ್ದಾರೆ ಮುಂದೆಯೂ ಇರುತ್ತಾರೆ.

ವಸ್ತಾರೆ ಹಾಗೂ ಅಪರ್ಣಾ ಇಬ್ಬರೂ ಸೆಲಿಬ್ರಿಟಿಗಳು, ಸೌಜನ್ಯ ಕಾಪಾಡಿಕೊಂಡು ಪ್ರೀತಿಯಿಂದ ಕರೆದ ಕೂಗಿಗೆ ಬಂದವರು ಖುಷಿಪಟ್ಟರು.

ಕಾರ್ಯಕ್ರಮ ಸೊಗಸಾಗಿತ್ತು. ಹೊಸ ವಿನ್ಯಾಸ, ಹೊಸ ಭಾಷೆಯ ಮೂಲಕ ವಸ್ತಾರೆ ಹೊಸ ಓದುಗರನ್ನು ಸೃಷ್ಟಿ ಮಾಡಿದ್ದಾರೆ. ಮಾರಾಟದ ಆತಂಕವೂ ಇರದ ಹಾಗೆ.

All the best and congratulations to Nagaraj Ramaswamy Vastarey.

---ಸಿದ್ದು ಯಾಪಲಪರವಿ.

No comments:

Post a Comment