Monday, December 18, 2017

ಓಲೆ-17

ಕನಸಿಗೊಂದು ಓಲೆ

ಓಲೆ-17

ಹಲೋ ಚಿನ್ನು ,

ನಿನ್ನ ಆಧ್ಯಾತ್ಮದ ಕುರಿತು ಮಾತನಾಡಿದ ಗೆಳೆಯರು ಈಶ್ವರಿ ವಿಶ್ವವಿದ್ಯಾಲಯದ ಮೌಲ್ಯಗಳ ಬಗ್ಗೆ ವಿವರಿಸುವಾಗ detachment ಮಹತ್ವ ವಿವರಿಸಿ ಮನದ ಮಾತುಗಳ ಹೊಗಳಿದರು.

ಅವರ ಹೊಗಳಿಕೆಯಿಂದ ನಾನೇನು ಪುಳಕಗೊಳ್ಳಲಿಲ್ಲ. I'm detached towards appreciation.

''ನಾವು ನಮ್ಮ ಸಂಬಂಧಗಳು ಹಾಗೂ ಅವರಿಗೆ ಬರುವ ಕಷ್ಟಗಳ ಕುರಿತು ವೃಥಾ ಚಿಂತಿಸುವ ಅಗತ್ಯವಿಲ್ಲ ಅದೂ ಕರ್ಮ' ಎಂಬ ಅವರ ವಿವರಗಳನ್ನು ಆಲಿಸಿದೆ.

ಆದರೆ ಯಾವುದೇ ನೋವುಗಳು ವೈಯಕ್ತಿಕ ನೆಲೆಯಲ್ಲಿ ದಾಳಿ ಮಾಡಿದಾಗ ನಮ್ಮ ಎಲ್ಲ ಸಿದ್ಧಾಂತ ಹಾಗೂ ಮೌಲ್ಯಗಳು ಮಂಕಾಗಿ ಚಿಂತೆ ಮಾಡುವುದು ಮನುಷ್ಯನ ಮಿತಿ ಆದರೆ ನಾವು ಆ ಮಿತಿಯನ್ನು ಇಟ್ಟುಕೊಂಡೇ ಬಂದದ್ದುನ್ನು ಸಹನೆಯಿಂದ ಎದೆಗುಂದದೆ ಎದುರಿಸಲೇಬೇಕು.

ಆ ನೋವಿಗೆ ಪರೋಕ್ಷವಾಗಿ ನಮ್ಮ ಕೆಲವು ತಪ್ಪು ನಿರ್ಧಾರಗಳು ಕಾರಣವಾಗಿರುತ್ತವೆ ಎಂಬುದನ್ನು ನೆನಪಿಸಿಕೊಂಡು ನಮ್ಮನ್ನು ನಾವೇ ಸಂತೈಸಿಕೊಳ್ಳಬೇಕು.

Detachment ಎಲ್ಲ ಘಟನೆಗಳ ನೋವು ನಿವಾರಣೆಗೆ ಮೂಲ ಮಂತ್ರ ಆದರೆ ಕೇವಲ ಸಾಧನೆಯಿಂದ ಮಾತ್ರ ಈ ನಿರ್ಲಿಪ್ತತೆಯನ್ನು ರೂಢಿಸಿಕೊಳ್ಳಬಹುದು.

ನಾವು ಅಂದುಕೊಂಡಂತೆ ನಮಗೆ ಬೇಕಾದವರು ಇರಲಿ ಎಂದು ಬಯಸುವದೇ ವ್ಯಾಮೋಹ , ಆ ವ್ಯಾಮೋಹ ಹಾಗೂ ಭಿನ್ನಾಭಿಪ್ರಾಯ �ನಮ್ಮ ನೋವಿನ ಮೂಲ.

ಮೂಲ ಗೊತ್ತಾದ ಮೇಲಾದರೂ ಖುಷಿಯಾಗಿ ಇರಬೇಕು.

ಆ ಹಂತವನ್ನು ನಿಧಾನವಾಗಿ ತಲುಪೋಣ.

ನಿನ್ನೆ ಅಚಾನಕ್ ಆಗಿ ಒಬ್ಬರು ಹೋಗಿದ್ದರಿಂದ ಈ ಮಾತು ಹೆಚ್ಚು ಪೂರಕವೆನಿಸಿತು.

ನಿನ್ನ ಪ್ರೀತಿಯ

ಅಲೆಮಾರಿ

( ಸಿದ್ದು ಯಾಪಲಪರವಿ )

18-12-2017

No comments:

Post a Comment