Tuesday, June 27, 2017

ರಾಜಕಾರಣ

ರಾಜಕಾರಣ ಹಾಗೂ  ತಲ್ಲಣಗಳ nostalgia.

'ಈಗ ತತ್ವ ಸಿದ್ಧಾಂತ ಏನೂ ಬೇಡ ರಾಜಕೀಯ ಪರಿಜ್ಞಾನ ಇಲ್ಲ . ಏನೋ ಕೇಳಿದರೆ ಏನೋ ಹೇಳ್ತಾರೆ ಹೆಚ್ಚು ಕಮ್ಮಿ ಆದರೆ ಜಗಳಕ್ಕೆ ಬರ್ತಾರೆ '
ಇಂತಹ ಮಹನೀಯರು ಒಂದೆರಡು ಬಾರಿ ಶಾಸಕರು ಮಂತ್ರಿಗಳು ಆಗಿರ್ತಾರೆ.

ಪಕ್ಷದ ಸಿದ್ಧಾಂತ , ಗಾಂಧಿ,ಬಸವ ,  ಅಂಬೇಡ್ಕರ್ ಊಹೂಂ ಎಲ್ಲವೂ ಅಯೋಮಯ. ಜಾತಿ , ಹಣ , ತೋಳ್ಬಲ ಒಂದಿಷ್ಟು ಕುತಂತ್ರ , ಏನೋ ಒಂದಿಷ್ಟು ತಂತ್ರ ಸಾಕು ಶಾಸಕ ಆಗಲಿಕ್ಕೆ ಅನ್ನೋ ವಾತಾವರಣ. ಯಾರಾದರೂ ಯೋಗ್ಯರು ಬರ್ತಾರೆ ಅಂದ್ರೆ ' ಅಯ್ಯೋ ಅವರ ಹತ್ರ ಹಣ ಇಲ್ಲ ಬಿಡಿ ಗೆಲ್ಲಲ್ಲ ' ಎಂಬ immediate reply.
ಪ್ರತಿ ಮಾತು ನಡೆಯಲಿ political milage ಹುಡುಕುವ ಹುಚ್ಚು. ಮಾಧ್ಯಮಗಳ ಎದುರು ಅದೇ ಕಚ್ಚಾಟ.

ಬರೀ negative ಅನ್ಕೋಬೇಡಿ. ಕರ್ನಾಟಕ ಕಾಲೇಜಿನಲ್ಲಿ ನಮ್ಮ ಸಾಹಿತ್ಯದ ಪ್ರಾಧ್ಯಾಪಕರುಗಳಿಗೆ ಸಮಾಜವಾದ , ಲೋಹಿಯಾ ವಾದ  ಹಾಗೂ ಜೆ.ಪಿ.ಚಳುವಳಿ ನಂಟು. ಪಿಯುಸಿ ಇದ್ದಾಗ ಗೋಕಾಕ ಚಳುವಳಿ.
ಹುಚ್ಚು ಹಿಡಿಸಿಕೊಂಡು ಓದಲು ಲಂಕೇಶ್ ಪತ್ರಿಕೆ. ಅಬ್ಬಾ ಈಗ ನೆನಪಿಸಿಕೊಂಡರೆ ಹೊಟ್ಟೆಯಲ್ಲಿ ತಳಮಳ.
ಈಗ ಎಲ್ಲಾ ಮಾಯ ಬರೀ nostalgia. ಯೋಗ್ಯರೆಲ್ಲ ಮಂಗ ಮಾಯ .

ಆ ಎಲ್ಲ ಹೋರಾಟಗಳಲ್ಲಿದ್ದ ಪರಿವಾರದ ನಾಯಕರುಗಳಿಗೆ ವಯಸ್ಸಾಗಿದೆ , ಮತ್ತೆ ಕೆಲವರು ಕಣ್ಮರೆಯಾಗಿದ್ದಾರೆ ,ಬಹುಪಾಲು ನಮ್ಮ ಸಮಕಾಲೀನರು ಬೇರೆ ಬೇರೆ ಪಕ್ಷಗಳಲ್ಲಿದ್ದು ಸೈದ್ಧಾಂತಿಕ ಗೊಂದಲದಲ್ಲಿದ್ದಾರೆ.
Nostalgia ಬಿಟ್ಟರೆ ಇನ್ನೇನು ಮಾಡಲಾದೀತು ಎಂಬ confusion.

ಹಿರಿಯರು, ನನ್ನ ಹಿತೈಷಿಗಳೂ ಆಗಿದ್ದ ಎಂ.ಪಿ.ಪ್ರಕಾಶ ಸಣ್ಣ ವಯಸ್ಸಿನಲ್ಲಿ ಹಂಪಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯತ್ವ ನೀಡಿ ಸಾಂಸ್ಕೃತಿಕ ಲೋಕದ ವ್ಯಾಪ್ತಿ ವಿಸ್ತರಿಸಿದರು.
ಆಗಾಗ ಸಿಗುತ್ತಿದ್ದ ಗೋವಿಂದಗೌಡರು , ಪಟೇಲ್ ಅವರು ಪ್ರೀತಿಯಿಂದ ಮಾತನಾಡಿ ಬೆನ್ನು  ತಟ್ಟಿ ಪ್ರೇರೇಪಿಸುತ್ತಿದ್ದರು.

ಸಮಾಜವಾದಿ ಚಿಂತಕ ಬಾಪು ಹೆದ್ದೂರಶೆಟ್ಟಿ ಸದಾ ನೆರಳಾಗಿದ್ದಾರೆ. ನಿತ್ಯವೂ ಮಾತಿಗೆ ಸಿಗುವ ಪ್ರೊ.ರವೀಂದ್ರ ರೇಷ್ಮೆ , ಪ್ರೊ.ಆರ್.ಎಂ.ರಂಗನಾಥ್ ಸರ್ ಆ ದಿನಗಳ ನೆನಪಿಸುತ್ತಾರೆ.

ಅಪ್ಪಿ ತಪ್ಪಿ ಉತ್ತಮ ಅನಿಸಿದ ಬಿಜೆಪಿಯವರನ್ನು ಮಾತನಾಡಿಸಿದರೆ ಚಡ್ಡಿ ಅಂತಾರೆ. ಕಾಂಗ್ರೆಸ್ ಅವರ ಜೊತೆಗಿದ್ದರೆ leftist ಅಂತಾರೆ. ಎಲ್ಲಿಯೂ ಸಲ್ಲದ ಪ್ರೇತಾತ್ಮದ ಸ್ಥಿತಿ.
ಎಲ್ಲದಕೂ ನಕ್ಕು ಸುಮ್ಮನಾಗಿ ಮುಂದೆ ಸಾಗಬೇಕು.

ಈಗ ಅನಿಸಿದ್ದೆಲ್ಲ ಬರೆಯಲಿಕ್ಕೆ social media ಗಳಿವೆ ಅದೇ ಸಮಾಧಾನ !
ಜನ ಓದಲಿ ಬಿಡಲಿ ಬರೆದು ಹಗುರಾಗುವ ಅನಿವಾರ್ಯತೆ !!

ಜಾತ್ಯಾತೀತತೆ , ಸಾಮಾಜಿಕ ನ್ಯಾಯ , ಆರೋಗ್ಯಪೂರ್ಣ ಸಂವಾದ ಎಲ್ಲವೂ ಈಗ ಬರೀ text .
ರಾಜಕೀಯ ಅನಿವಾರ್ಯತೆಯ ನೆಪದಲಿ ಎಲ್ಲವೂ,
ಎಲ್ಲರೂ ಮಾಯ. ಆದರೆ ಹುಡುಕಾಟದ ತಲ್ಲಣ ಮಾತ್ರ ನಿಂತಿಲ್ಲ.
ನಿನ್ನೆ ಮುಖ್ಯ ಮಂತ್ರಿ ಸಿದ್ಧರಾಮಯ್ಯನವರ ಮಾತು ಕೇಳಿ ಇಷ್ಟೆಲ್ಲ ಹೇಳಬೇಕೆನಿಸಿತು.

---ಸಿದ್ದು ಯಾಪಲಪರವಿ

No comments:

Post a Comment