Thursday, June 29, 2017

VRL ಸಂಕೇಶ್ವರ

Weekend with VRL : An inspiring story.

ಒಂದಿಷ್ಟು ನೆನಪು

ಇಂದು ಮತ್ತೊಂದು ಕುತೂಹಲಕರ ಸಾಧಕರ ಕಥೆ .
ಹೆಚ್ಚು ಆಪ್ತವೆನಿಸಲು ಕಾರಣ ನಾನು ಅವರನ್ನು ನಾನು ತೊಂಬತ್ತರ ದಶಕದಿಂದ ಹತ್ತಿರದಿಂದ ಬಲ್ಲೆ ಹಾಗಂತ he is very close to me ಅನ್ನಲು ಭಯವಾಗುವಂತ ವ್ಯಕ್ತಿತ್ವ.

ಶಿಸ್ತು , ಪರಿಶ್ರಮ, ಸಾತ್ವಿಕ ಹಟ , ಕೊಂಚ moody ಆದರೂ ಅದ್ಭುತ ಸಾಧಕ . ಕನ್ನಡ ನಾಡು ಪಕ್ಷದ ವಿಫಲತೆ ಬಿಟ್ಟರೆ ಮುಟ್ಟಿದ್ದೆಲ್ಲ ಚಿನ್ನ. ಉಳಿದ ಕಥೆ ನಿಮಗೆ ಗೊತ್ತೇ ಇದೆ.

ಆದರೆ ನನ್ನ ಅವರ ಬಾಂಧವ್ಯ ನೆನಪಿಸಿಕೊಳ್ಳಲು ಖುಷಿ.
ಮೊದಲ ಬಾರಿ ಲೋಕಸಭೆಗೆ ಸ್ಪರ್ಧಿಸಿದಾಗ ಒಂದು ಪತ್ರಿಕೆಯ ಪರವಾಗಿ ಒಂದು ತಾಸು ಚರ್ಚಿಸಿದ್ದನ್ನು ಅವರು ಇಂದಿಗೂ ಮರೆತಿಲ್ಲ.
ನಂತರ ಅನೇಕ ವೇದಿಕೆಗಳಲ್ಲಿ ಅವರನ್ನು ಕೆಣಕುತ್ತ ಹತ್ತಿರವಾದೆ.
ಆಗಾಗ ಭೇಟಿ, ಅಗತ್ಯಕ್ಕೆ ತಕ್ಕಷ್ಟು ಮಾತು.

ಕಳೆದ ವರ್ಷ ' ಒಂದು ಬಿರುಗಾಳಿಯ ಕಥೆ ' ಗೆ ಬರೆದ ಮುನ್ನುಡಿ , ಬಿಡುಗಡೆಗೆ ಬಂದದ್ದು , ವೇದಿಕೆ ಮೇಲೆ ಒಂದೆರಡು ತಾಸು ಕಳೆದದ್ದು ಅವಿಸ್ಮರಣೀಯ.
ಅಂದು ಯಾರೋ ನನ್ನನ್ನು ಪರಿಚಯಿಸಿದ ಕೂಡಲೇ ' ಅಯ್ಯೋ ಯಾಪಲಪರವಿ ನನ್ನ ಗುರುಗಳು ' ಅಂದು ಎಲ್ಲರನ್ನೂ ಹಾಗೆ ನನ್ನನ್ನು ಬೆರಗುಗೊಳಿಸಿದರು(ಇದನ್ನು ಹೇಳಲು ಸಂಕೋಚ ಹಾಗೂ ಸಂತೋಷ ).

ಒಮ್ಮೆ ನಾನು ಅವರನ್ನು ನೀವು ಬಲಪಂಥೀಯರು ಎಂದು ರೇಗಿಸಿದ್ದೆ. ನನ್ನನ್ನು ತಮ್ಮ ಹುಬ್ಬಳ್ಳಿ ಆಫೀಸಿಗೆ ಕರೆಸಿ ಜಾತ್ಯಾತೀತ ವೃತ್ತಿಪರತೆಯನ್ನು ಪರಿಚಯಿಸಿ ಬೆರಗು ಮೂಡಿಸಿದ್ದರು.

ನಿಮ್ಮ biography ಬರೆಯೋ ಆಸೆ ಅಂದೆ ನಕ್ಕು ಸುಮ್ಮನಾದರು.

ನಾನು ಉದ್ಯೋಗಕ್ಕೆ ಅಂಟಿಕೊಂಡು risk ತೆಗೆದುಕೊಳ್ಳಲು ಹಿಂದೇಟು ಹಾಕುವುದಕ್ಕೆ ಗದರಿದರು. ' You are wasting your time ' ಅನ್ನುತ್ತಲೇ ಇದ್ದಾರೆ.

He is expecting something from me , I too realised it of course !

I will fulfill your desire Vijjanna but waiting for right time.

ನನ್ನೊಳಗಿನ ನೂರಾರು ಕನಸುಗಳಿಗೆ ಇಂದು ಪ್ರೇರಣೆ ನೀಡಿದ ನಿಮಗೆ ಶರಣು ಶರಣಾರ್ಥಿ.

ಬೇಗ ನಿಮ್ಮ ಆಸೆ ಈಡೇರಿಸಿ ನಿಮ್ಮೆದುರು ಬಂದು ನಿಲ್ಲುತ್ತೇನೆ.

ನಿಮ್ಮ ಪ್ರೀತಿಯ

---ಸಿದ್ದು ಯಾಪಲಪರವಿ

No comments:

Post a Comment