Sunday, March 5, 2017

ಡಾ.ಬಿ.ಎಫ್.ದಂಡಿನ

ಶಿಕ್ಷಣ ಸಂತ ಕನಕದಾಸ ಶಿಕ್ಷಣ ಸಮಿತಿಯ ರೂವಾರಿ ಡಾ.ಬಿ.ಎಫ್.ದಂಡಿನ

ದಾರಿ ಇರದ ಊರಲಿ ಉದಯಿಸಿದರೂ ಸಾವಿರಾರು ಜನರಿಗೆ ಮಹಾ ಮಾರ್ಗ ನಿರ್ಮಿಸಿದ ಅಕ್ಷರ ಅರಿವಿನ ಸಂತ.

ಉನ್ನತ ವ್ಯಾಸಂಗ ಉದಾತ್ತ ವಿಚಾರ ಮಂಥನಗಳಲಿ ಬಿತ್ತಿದ    ' ಕನಕದಾಸ ಶಿಕ್ಷಣ ಸಂಸ್ಥೆ ' ಯನು ಹೆಮ್ಮರವಾಗಿ ಬೆಳೆಸಿದ ಕಾಯಕ ಯೋಗಿ.
ಪ್ರತಿಭಾ ಸಂಪನ್ನ ಸರಸ್ವತಿ ಪುತ್ರರ ತವರು.

ಸಾತ್ವಿಕ ಹಟ , ಅವಿರತ ಹೋರಾಟದ ಪ್ರತಿಫಲ , ಕನ್ನಡದ ದೇಸಿಯ ಕಂಪಿನ ಇಂಪಲಿ ಅರಳಿದ ಮನ.

ಕಡು-ಕಷ್ಟಗಳ ಉಂಡು ಬೆಂದು ಸುಖವ ಹಂಚಿದ ಧೀಮಂತ.
ಆರೋಗ್ಯ ಭಾಗ್ಯಶಾಲಿ , ಸರಸ್ವತಿಯ ಹಿರಿಯ ಪುತ್ರ , ಜ್ಞಾನದಾಗರ ಕನಸಿನ ಸಾಗರ.

ಹಳ್ಳಿ-ಹೈದರ , ದೀನ-ದಲಿತ-ಬಡ ಮಕ್ಕಳ ಆಶಾಕಿರಣ.
ಅರಸಿ ಬಂದ ಬಿರುದು ಬಾವಲಿಗಳ ಧರಿಸಿದರೂ ಮಾಯವಾಗದ ಸರಳ ಬದುಕು.

ಕಟ್ಟಿರಿ ನೂರಾರು ಸಂಸ್ಥೆಗಳ , ಜಗಕೆ ಸಾರಿರಿ ಕನಕ ಸಿರಿಯ ವಿಶ್ವ ವಿದ್ಯಾಲಯವ.

ನನಸಾಗಲಿ ಕಂಡ ಕನಸು ,ಈಡೇರಲಿ ಮನದ ನನಸು.

---ಸಿದ್ದು ಯಾಪಲಪರವಿ

No comments:

Post a Comment