Tuesday, March 21, 2017

ಆನೆ ಬಲ

ರಮ್ಯ ಪರಿಸರದ ಪಶ್ಚಿಮ ಘಟ್ಟದ ಮಡಿಲು

ಆನೆ ಬಲಕ್ಕಾಗಿ ಪ್ರಾರ್ಥಿಸೋಣ

ಮನಸ್ಸು ಪ್ರಫುಲ್ಲವಾಗಿದ್ದರೆ ಬದುಕು  ಅರ್ಥಪೂರ್ಣವೆನಿಸುತ್ತದೆ.

ನಮ್ಮ ಹಬ್ಬಗಳು , ಆಚರಣೆಗಳು  ಮನಸ್ಸು ಕಟ್ಟುವ ಕ್ರಿಯೆಯಾಗಬೇಕು.
ನಮ್ಮ ಪೂರ್ವಜರು ಆನೆ ಬಲ ಕೊಡು ಎಂದು ಪ್ರಾರ್ಥಿಸುತ್ತಿದ್ದರು.
ಹಾಗೆಂದರೇನು ?  ಯಾರಿಗೂ ಕೇಡು ಬಯಸದೇ ,
ಪಾಲಿಗೆ ಬಂದದ್ದು ಪಂಚಾಮೃತ ಎಂದು ನೆಮ್ಮದಿಯಿಂದ ಇರುತ್ತಿದ್ದರು.

ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಆತಂಕಗಳೂ ಹಂಚಿಹೋಗುತ್ತಿದ್ದವು.
ಈಗ ಒಂಟಿತನದ ಭಾರ ಹಾಗೂ generation gap ನಿಂದ  ತತ್ತರಿಸುತ್ತೇವೆ.

ಮತ್ತೆ ಹಿಂದಿನ ವ್ಯವಸ್ಥೆಗೆ ಮರಳುವ ಅನಿವಾರ್ಯತೆಯನ್ನು ನಮ್ಮ ಹಬ್ಬಗಳು , ಹಳ್ಳಿಗಳು  ನೆನಪಿಸುತ್ತವೆ.
ನನಗೀಗ ನನ್ನ ಬಾಲ್ಯವೇ ರಮ್ಯವೆನಿಸುತ್ತದೆ.

ಆದರೆ ಈಗ ಈ ಒಂಟಿ ಬದುಕಿನಲ್ಲಿ ಪರಿಸರವೇ ನಮ್ಮ ಸಂಗಾತಿ , ಏಕಾಂತದ ಧ್ಯಾನವೇ ನಮ್ಮ ಪ್ರಾಣ. ಬರಹವೇ ಸಂಗಾತಿ.
ಅವಕಾಶ ಸಿಕ್ಕಾಗ ಪರಿಸರದೊಂದಿಗೆ ಲೀನವಾಗಬೇಕು.

ಹಿರಿಯರ ಹಾಗೆ ಆ(ಆರೋಗ್ಯ)ನೆ(ನೆಮ್ಮದಿ) ಬಲಕ್ಕಾಗಿ ಪ್ರಾರ್ಥಿಸಬೇಕು .

---ಸಿದ್ದು ಯಾಪಲಪರವಿ.

No comments:

Post a Comment