Tuesday, January 17, 2017

ನಮ್ಮ ರೈತ

ರೈತ ದ್ವಿಪದಿಗಳು

ಉಳುವ ಯೋಗಿಯ ದುಡಿವ
ಕೈಗಳಿಗೆ ಸಾವಿರದ ಶರಣು

ದಣಿವರಿಯದ  ಧಣಿ
ಭೂಮಿಯನಾಳುವ ಹೊನ್ನಿನ ಗಣಿ

ಜನರ ಹಸಿವು ಇಂಗಿಸುವ ದೇವ
ಭೂತಾಯಿಗಾಗಿ ದುಡಿಯುವ ಮಹದೇವ

ರೈತ ನೀನೆಂದರೆ ಈ ದೇಶ
ಜಗ ಮೆಚ್ಚುವ ಸರ್ವೇಶ

ಸಂಪೂರ್ಣ ಬಾಗಿದರೂ ಬೆನ್ನು
ಮಣ್ಣೇ ಇವನ ಪಾಲಿನ ಹೊನ್ನು

---ಸಿದ್ದು ಯಾಪಲಪರವಿ

No comments:

Post a Comment